Asianet Suvarna News Asianet Suvarna News

ಇಂದು ಈ ರಾಶಿಯವರಿಗೆ ಅತಿಯಾದ ಧೈರ್ಯ ಒಳ್ಳೆಯದಲ್ಲ

ಡಿಸೆಂಬರ್ 20 ಶುಕ್ರವಾರ, ಶುಭ ಶುಕ್ರವಾರ ನಿಮ್ಮ ದಿನವು ಹೇಗಿದೆ? ಇಂದಿನ ರಾಶಿಗಳ ಫಲಾ ಫಲ.

Daily Astrology in Kannada 20  Dec 2019 Horoscope
Author
Bengaluru, First Published Dec 20, 2019, 7:12 AM IST

ಮೇಷ: ಲಾಭದ ಹಿಂದೆ ಓಡುತ್ತಾ ನೈತಿಕತೆ ಕಳೆದುಕೊಳ್ಳುವುದು ಬೇಡ. ನಿಮ್ಮದಲ್ಲದ ವಸ್ತುವಿನಿಂದ ದೂರು ಇರುವುದು ಲೇಸು.

ವೃಷಭ: ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡುವುದು ಬೇಡ. ಬೇಡದ ರಾಜಕಾರಣಕ್ಕೆ ತಲೆ ಕೆಡಿಸಿಕೊಳ್ಳಬೇಡಿ.

ಮಿಥುನ: ಆಹಾರದಲ್ಲಿ ಮಿತಿ ಇರಲಿ. ಮಾತು ಅತಿಯಾಗದಿರಲಿ. ಎಲ್ಲರಿಗೂ ಒಳ್ಳೆಯದ್ದು ಮಾಡುವ ಹಂಬಲವಿದೆ. ಆದರೆ ಶಕ್ತಿ ಕಡಿಮೆ.

ಕಟಕ: ಗೊತ್ತಿಲ್ಲದೇ ಇರುವ ಸ್ಥಳ, ವ್ಯಕ್ತಿಗಳ ಪರಿಚಯವಾಗಲಿದೆ. ನಿಮ್ಮ ಆಸಕ್ತಿಯ ವಿಷಯದಲ್ಲಿ ಬದಲಾವಣೆಯಾಗಲಿದೆ.

ಸಿಂಹ: ಹಿಡಿದ ಕಾರ್ಯವನ್ನು ಬಿಡದೇ ಮಾಡುವುದೇ ಯಶಸ್ಸಿನ ಮೊದಲ ಮೆಟ್ಟಿಲು. ಇದನ್ನು ತಿಳಿದುಕೊಂಡು ಮುಂದೆ ಸಾಗಿ. ಶುಭ ಫಲ.

ಕನ್ಯಾ: ಕ್ಷಣಿಕ ಸುಖಕ್ಕೆ ಸೋಲದೇ ಇದ್ದರೆ ಮುಂದೆ ದುಃಖ ಕಟ್ಟಿಟ್ಟ ಬುತ್ತಿ. ಹಿಂದೆ ಆದದ್ದಕ್ಕೆ ತಲೆ ಕೆಡಿಸಿಕೊಳ್ಳದೇ ಮುಂದಿನ ದಾರಿ ನೋಡಿ.

ವಾರ ಭವಿಷ್ಯ: ಈ ಒಂದು ರಾಶಿಯವರ ಮನಸ್ಸಿಗೆ ಕಿರಿಕಿರಿ ಹೆಚ್ಚಿರುತ್ತೆ

ತುಲಾ: ಒಂದು ವಿಚಾರದ ಆಳ ಅಂತರಗಳನ್ನು ಸರಿ ಯಾಗಿ ತಿಳಿದುಕೊಳ್ಳದೇ ಮಾತನಾಡುವುದು ಸರಿಯಲ್ಲ. ಕೆಲಸದಲ್ಲಿ ಪ್ರಗತಿ ಕಾಣುವಿರಿ.

ವೃಶ್ಚಿಕ: ಧೈರ್ಯ ಒಳ್ಳೆಯದ್ದು. ಆದರೆ ಅತಿಯಾದ ಧೈರ್ಯ ಒಳ್ಳೆಯದ್ದಲ್ಲ. ಭಯ ಭಕ್ತಿಯಿಂದ ನಡೆದುಕೊಳ್ಳಿ. ಕಲಾವಿದರಿಗೆ ಶುಭ ಸುದ್ದಿ.

ಧನಸ್ಸು: ಚಿನ್ನ ಗಳಿಸುತ್ತೇನೆ ಎಂದು ಹೋಗಿ ಬೆಳ್ಳಿಗೆ ತೃಪ್ತಿಪಡುವ ಸಂದರ್ಭ ಬರುತ್ತದೆ. ಆರೋಗ್ಯದಲ್ಲಿ ತುಸು ಏರುಪೇರು ಆಗಲಿದೆ.

ಮಕರ: ಬರುವ ಕಷ್ಟ ನಿಮ್ಮನ್ನು ಗಟ್ಟಿ ಮಾಡುವುದಕ್ಕೆ ಬರುತ್ತದೆ. ಕುಗ್ಗುವುದು ಬೇಡ. ಕೆಲಸದ ಒತ್ತಡ ಹೆಚ್ಚಾದರೂ ಲಾಭವೂ ಹೆಚ್ಚಾಗಲಿದೆ.

ಕುಂಭ: ಹೊಸ ಬಗೆಯ ವೃತ್ತಿಯತ್ತ ಮನಸ್ಸು ಹರಿಯಲಿದೆ. ಆಹಾರದ ವಿಚಾರದಲ್ಲಿ ಹೆಚ್ಚು ಜಾಗೃತೆ ವಹಿಸಿ. ದುಡುಕಿನಿಂದ ಹಾನಿ.

ಮೀನ: ಚಿಕ್ಕ ಕೆಲಸ ಎಂದು ಸುಮ್ಮನೆ ಕೂರುವುದು ಬೇಡ. ಚಿಕ್ಕ ಚಿಕ್ಕ ಕಲ್ಲುಗಳಿಂದಲೇ ಸೌಧ ಕಟ್ಟಲು ಸಾಧ್ಯವಾಗುವುದು. ಧೈರ್ಯ ಇರಲಿ.
 

Follow Us:
Download App:
  • android
  • ios