ಇಂದು ಈ ರಾಶಿಯವರಿಗೆ ಆಸ್ತಿ ವಿಚಾರವಾಗಿ ಗೊಂದಲ ಉಂಟಾಗಲಿದೆ
ಶನಿವಾರ ಜನವರಿ 04 ನಿಮ್ಮ ರಾಶಿಗಳ ಫಲಾ ಫಲ ಶುಭವಾಗಿದೆಯಾ? ತಿಳಿಯಿರಿ
ಮೇಷ: ಸ್ವಾರ್ಥಿಗಳ ಸ್ವಾರ್ಥ ಸಾಧನೆಗೆ ನೀವು ಬಳಕೆಯಾಗುವ ಅವಕಾಶವಿದೆ. ಎಚ್ಚರಿಕೆಯಿಂದ ಇರಿ. ಮಾತಿಗಿಂತ ಮೌನ ಲೇಸು.
ವೃಷಭ: ಎಲ್ಲವೂ ನನ್ನಿಂದಲೇ ಎನ್ನುವ ಅಹಂ ಬೇಡ. ನಿಮ್ಮ ಹಿತ ಬಯಸುವ ವ್ಯಕ್ತಿಗಳ ಮಾತಿಗೆ ಬೆಲೆ ನೀಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಿಥುನ: ಸಂಬಂಧಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕದಿರಿ. ದಿನ ಪೂರ್ತಿ ಕಾರ್ಯ ಮಗ್ನರಾಗಲಿದ್ದೀರಿ. ಅತಿಯಾದ ಕೋಪ ಬೇಡ.
ಕಟಕ: ಇಡೀ ದಿನ ಹೆಚ್ಚು ಕ್ರಿಯಾಶೀಲವಾಗಿಇರಲಿದ್ದೀರಿ. ತಾಯಿಯ ಸಹಕಾರದಿಂದ ಕೆಲಸದಲ್ಲಿ ಪ್ರಗತಿ ಸಾಧ್ಯವಾಗಲಿದೆ.
ಸಿಂಹ: ಕಣ್ಣಿಗೆ ಕಾಣುವುದೆಲ್ಲವೂ ಸತ್ಯವಲ್ಲ. ಸರಿಯಾಗಿ ವಿವೇಚನೆ ಮಾಡಿ ನಿರ್ಧಾರ ಕೈಗೊಳ್ಳಿ. ನಿಮ್ಮಿಂದ ಇತರರು ಖುಷಿಯಾಗಲಿದ್ದಾರೆ.
ಕನ್ಯಾ: ಬೆಳಿಗ್ಗೆಯಿಂದಲೇ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸಣ್ಣ ಪುಟ್ಟ ಸಮಸ್ಯೆಗಳನ್ನು ಹೆಚ್ಚು ಪರಿಗಣಿಸದಿರಿ.
ಹೊಸ ವರ್ಷ ಆರಂಭವಾಗುವ ಈ ವಾರ ನಿಮ್ಮ ರಾಶಿಯ ಫಲವೇನು?
ತುಲಾ: ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲಿದ್ದೀರಿ. ಆಸ್ತಿ ವಿಚಾರವಾಗಿ ಗೊಂದಲ ಉಂಟಾಗಲಿದೆ. ಎಚ್ಚರಿಕೆ ಇರಲಿ.
ವೃಶ್ಚಿಕ: ತಾಳ್ಮೆಯೇ ನಿಮಗೆ ಶುಭದಾಯಕವಾಗಲಿದೆ. ಸಂಜೆ ವೇಳೆಗೆ ಅಪರಿಚಿತರ ಭೇಟಿಯಾಗಲಿದೆ. ಅಂದುಕೊಂಡ ಕಾರ್ಯ ನೆರವೇರಲಿದೆ.
ಧನಸ್ಸು: ಆರೋಗ್ಯ ಕೊಂಚ ಕೈ ಕೊಡುವ ಸಾಧ್ಯತೆ ಇದೆ. ಚಳಿಯ ಹೊಡೆತಕ್ಕೆ ಸಿಲುಕಿಕೊಳ್ಳುವಿರಿ. ದುಡಿಯುವ ವರ್ಗಕ್ಕೆ ಇಂದು ಶುಭ ಫಲ.
ಮಕರ: ಕಾಯಕ ನಿಷ್ಠೆ ಇರಲಿ. ಪ್ರೀತಿಯಿಂದ ನೋಡಿದರೆ ಜಗತ್ತು ಸುಂದರವಾಗಿ ಕಾಣುತ್ತದೆ. ಬೇಡದ ವಿಚಾರಗಳಿಗೆ ತಲೆ ಹಾಕದಿರಿ.
ಕುಂಭ: ಮತ್ತೊಬ್ಬರ ಮನಸ್ಸಿಗೆ ನೋವಾಗುತ್ತದೆ ಎನ್ನುವ ಕಾರಣಕ್ಕೆ ಸುಳ್ಳು ಹೇಳುವುದು ಬೇಡ. ನೇರ, ನಿಷ್ಠೂರವಾಗಿ ನಡೆದುಕೊಳ್ಳಿ.
ಮೀನ: ಸಣ್ಣ ಮಟ್ಟದ ವ್ಯಾಪಾರಿಗಳಿಗೆ ಹೆಚ್ಚು ವಹಿವಾಟು ನಡೆಯಲಿದೆ. ಕೃಷಿಕರಿಗೆ ಲಾಭ. ದೊಡ್ಡವರ ಮಾತಿಗೆ ಹೆಚ್ಚು ಮಾನ್ಯತೆ ನೀಡಿ.