ವಿಷ್ಣು-ಲಲಿತಾ ಸಹಸ್ರನಾಮದ ಬಗ್ಗೆ ಕ್ರೈಸ್ತ ಮಹಿಳೆ ಮಾತು; ವೈರಲ್ ವಿಡಿಯೋದಲ್ಲಿ ಏನಿದೆ?
ವಿಷ್ಣು ಸಹಸ್ರನಾಮ ಹಾಗೂ ಲಲಿತಾ ಸಹಸ್ರನಾಮದ ಬಗ್ಗೆ ಕ್ರೈಸ್ತ ಧರ್ಮದ ಮಹಿಳೆಯೊಬ್ಬರು ಮಾತನಾಡಿದ್ದು, ಆ ವಿಡಿಯೋ ತುಂಬಾ ವೈರಲ್ ಆಗಿದೆ. ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಅವರು ಸಹಸ್ರನಾಮದಿಂದ ಆಗುವ ಪ್ರಯೋಜನೆಗಳ ಬಗ್ಗೆ ಮನಸಾರೆ ಹೊಗಳಿದ್ದಾರೆ. ಹಾಗಾದರೆ ಲಲಿತಾ ಸಹಸ್ರನಾಮ ಹಾಗೂ ವಿಷ್ಣು ಸಹಸ್ರನಾಮವನ್ನು ಏಕೆ ಓದಬೇಕು ಮತ್ತು ಇದರ ಪ್ರಯೋಜನೆಗಳು ಏನು ಎಂಬ ಮಾಹಿತಿ ಇಲ್ಲಿದೆ.
ವಿಷ್ಣು ಸಹಸ್ರನಾಮ ಹಾಗೂ ಲಲಿತಾ ಸಹಸ್ರನಾಮದ ಬಗ್ಗೆ ಕ್ರೈಸ್ತ ಧರ್ಮದ ಮಹಿಳೆಯೊಬ್ಬರು ಮಾತನಾಡಿದ್ದು, ಆ ವಿಡಿಯೋ ತುಂಬಾ ವೈರಲ್ ಆಗಿದೆ. ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಅವರು ಸಹಸ್ರನಾಮದಿಂದ ಆಗುವ ಪ್ರಯೋಜನೆಗಳ ಬಗ್ಗೆ ಮನಸಾರೆ ಹೊಗಳಿದ್ದಾರೆ. ಹಾಗಾದರೆ ಲಲಿತಾ ಸಹಸ್ರನಾಮ ಹಾಗೂ ವಿಷ್ಣು ಸಹಸ್ರನಾಮವನ್ನು ಏಕೆ ಓದಬೇಕು ಮತ್ತು ಇದರ ಪ್ರಯೋಜನೆಗಳು ಏನು ಎಂಬ ಮಾಹಿತಿ ಇಲ್ಲಿದೆ.
ನಮ್ಮ ಸನಾತನ ಸಂಪ್ರದಾಯದಲ್ಲಿ ಲಲಿತ ಸಹಸ್ರನಾಮ, ವಿಷ್ಣು ಸಹಸ್ರನಾಮವನ್ನು ಪಠಿಸುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ. ಜೀವನದಲ್ಲಿ ಒಂದು ದೃಢ ಸಂಕಲ್ಪದಿಂದ ಲಲಿತ ಸಹಸ್ರನಾಮ ಹಾಗೂ ವಿಷ್ಣು ಸಹಸ್ರನಾಮ ಪಠಿಸಿದರೆ, ಬೇರೆ ಯಾವುದೇ ಪರಿಹಾರೋಪಾಯಗಳ ಅವಶ್ಯಕತೆಯೇ ಇಲ್ಲ ಎನ್ನುತ್ತಾರೆ. ಅತ್ಯಂತ ಪ್ರಭಾವಶಾಲಿ ಜಪ ಇದಾಗಿದ್ದು, ಇದನ್ನು ದಿನವೂ ಪಠಿಸಿದರೆ ಒಳ್ಳೆಯದಾಗಲಿದೆ. ಇದರಿಂದ ಏನು ಪ್ರಯೋಜನೆಗಳು ಆಗಲಿವೆ ಎಂದು ಕ್ರೈಸ್ತ ಮಹಿಳೆಯು ತುಂಬಾ ಮನದಾಳದಿಂದ ಮಾತನಾಡಿದ್ದಾರೆ. ಹಾಗಾದರೆ ಈ ಸಹಸ್ರಮಾನ ಪಠಣದ ಪ್ರಯೋಜನೆ ಏನು ಎಂಬ ಡೀಟೇಲ್ಸ್ ಇಲ್ಲಿದೆ.
ಏಕಾಗಿ ಈ ಜಪಗಳು ಪಠಿಸಬೇಕು?
ವಿಷ್ಣು ಹಾಗೂ ಲಲಿತಾ ಸಹಸ್ರನಾಮಗಳನ್ನು ಏಕಾಗ್ರತೆಯಿಂದ ಓದಿದವರಿಗೆ ಎಲ್ಲ ಕಷ್ಟಗಳನ್ನೂ ನಿವಾರಣೆ ಆಗುತ್ತವೆ. ಯಾವುದೇ ಕಾರಣಕ್ಕೂ ಪರಿಹಾರಕ್ಕಾಗಿ ಬೇರೆಡೆ ಅಲೆಯುವ ಪ್ರಮೇಯ ಬರುವುದಿಲ್ಲ. ಇದಕ್ಕಾಗಿ ಮನೆಯಲ್ಲಿ ಅಲ್ಪ ಸಮಯ ಮೀಸಲಿಟ್ಟು ಓದಬೇಕು. ಇದರಿಂದ ಮನೆ-ಮನದಲ್ಲಿ ಶಾಂತಿಯನ್ನು ನೆಲೆಸುತ್ತದೆ, ಸುಖಸಮೃದ್ಧಿಯನ್ನು ತಂದುಕೊಡುತ್ತದೆ. ಮೋಕ್ಷ ಮಾರ್ಗವನ್ನೂ ಕರುಣಿಸುತ್ತದೆ.
ವಿಷ್ಣು ಸಹಸ್ರನಾಮ ಪಠಿಸುವುದರ ಪ್ರಯೋಜನ
ಇದರಲ್ಲಿ ವಿಷ್ಣುವಿನ ಸಾವಿರ ಹೆಸರು ಇರುತ್ತದೆ. ಜೀವನದಲ್ಲಿ ನಿಮಗೆ ಕಷ್ಟಗಳೇ ಬೆಳೆಯುತ್ತಿದೆ ಎಂತಿದ್ದರೆ, ಸಂಸಾರ ನಡೆಸಲು ಕಷ್ಟವಾಗುತ್ತದೆ ಎಂದಿದ್ದರೆ, ಆರ್ಥಿಕ ಸಮಸ್ಯೆ ಕಾಣಿಸಿಕೊಂಡರೆ, ನಿಮ್ಮ ಮೇಲೆ ಯಾರಾದರೂ ವಾಮಾಚಾರದ ಪ್ರಯೋಗ ಮಾಡಿದ್ದರೆ, ನಿಮ್ಮ ಕುಟುಂಬಕ್ಕೆ ಯಾರದ್ದಾದರೂ ಕೆಟ್ಟ ದೃಷ್ಟಿ ಬಿದ್ದಿದ್ದರೆ ಅಂಥವರು ವಿಷ್ಣುಸಹಸ್ರನಾಮವನ್ನು ಅವಶ್ಯಕವಾಗಿ ಜಪಿಸಲೇಬೇಕು.
ವಿಷ್ಣುಸಹಸ್ರನಾಮ ಓದುತ್ತಿರುವವರ ಜಾತಕದ ಮೇಲೆ ಭಗವಂತನಾದ ವಿಷ್ಣು ಹಾಗೂ ಶಿವ ಇಬ್ಬರ ವಿಶೇಷ ಕೃಪೆಯೂ ಇರುತ್ತದೆ. ಇದು ಜಾತಕದಲ್ಲಿ ಒಳ್ಳೇ ಪ್ರಭಾವ ಬೀರಿ ಮತ್ತಷ್ಟು ಶಕ್ತಿಯುತವನ್ನಾಗಿ ಮಾಡುತ್ತದೆ. ಯೋಜನೆಗಳನ್ನು ಹಾಕಿಕೊಂಡಿದ್ದರೆ ಅದು ಕೈಗೂಡಲು ಸಹಾಯಕ ಮಾಡುತ್ತದೆ. ನಿಮ್ಮ ಮೇಲೆ ಯಾರದ್ದಾದರೂ ಕೆಟ್ಟ ದೃಷ್ಟಿ ಬಿದ್ದಿದ್ದರೆ, ಅದರಿಂದ ರಕ್ಷಣೆ ಮಾಡುತ್ತದೆ.
hanumanji : ಪಂಚಮುಖಿ ಹನುಮನ ಯಾವ ರೂಪ ಪೂಜಿಸಬೇಕು? ಇದರಿಂದ ಏನಾಗಲಿದೆ..?
ಲಲಿತಾ ಸಹಸ್ರನಾಮ ಪಠಿಸುವುದರ ಪ್ರಯೋಜನ
ಲಲಿತಾ ಪಾರ್ವತಿ ದೇವಿಯ ರೂಪ. ಶ್ರೀ ಲಲಿತಾ ಸಹಸ್ರನಾಮ ಅತ್ಯಂತ ಪವಿತ್ರವಾದ ಮಂತ್ರವಾಗಿದೆ. ಭಗವಾನ್ ಹಯಗ್ರೀವ ಮತ್ತು ಅಗಸ್ತ್ಯ ಮುನಿಗಳ ಚರ್ಚೆಯಿಂದ ಹೊರಹೊಮ್ಮಿದ ಮಂತ್ರವೇ ಶ್ರೀ ಲಿಲತಾ ಸಹಸ್ರನಾಮ. ಇದು ಅತ್ಯಂತ ಶಕ್ತಿಯುತವಾದ ಮಂತ್ರವಾಗಿದೆ. ಹಾಗೂ ಲಲಿತಾ ದೇವಿಯ ಅತ್ಯಂತ ನೆಚ್ಚಿನ ಮಂತ್ರವಾಗಿದೆ.
ಧಾರ್ಮಿಕ ಸ್ಥಳಗಳಿಗೆ ಭೇಟಿ, ಪವಿತ್ರ ನದಿಯಲ್ಲಿ ಸ್ನಾನ ಹಾಗೂ ಆಹಾರವನ್ನು ದಾನ ಮಾಡಲು ಆಗದಿದ್ದರೆ ನೀವು ಲಲಿತಾ ಸಹಸ್ರನಾಮವನ್ನು ಪಠಿಸುವ ಮೂಲಕ ಈ ಎಲ್ಲಾ ಅಂಶಗಳ ಶುಭ ಫಲವನ್ನು ಪಡೆದುಕೊಳ್ಳಬಹುದು. ಶ್ರೀ ಲಲಿತಾ ಸಹಸ್ರನಾಮವನ್ನು ನಿಯಮಿತವಾಗಿ ಪಠಿಸುವುದರಿಂದ ಅಪೂರ್ಣವಾದ ಪೂಜೆಯಿಂದುಂಟಾಗುವ ಕಷ್ಟವನ್ನು ದೂರಾಗಿಸುತ್ತದೆ. ಹಾಗೂ ಇದು ಅಕಾಲಿಕ ಮರಣದ ಭಯವನ್ನು ದೂರಾಗಿಸುತ್ತದೆ.