ಮಹರ್ಷಿ ವಾಲ್ಮೀಕಿ ನಿಗಮದಡಿ ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣದಲ್ಲಿ ಸಚಿವ ನಾಗೇಂದ್ರ ಅವರು ₹187 ಕೋಟಿ ಹಗರಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಇಂತಹ ಪ್ರಕರಣದ ಆರೋಪಿಯನ್ನು ಮತ್ತೆ ಸಚಿವರನ್ನಾಗಿ ಮಾಡಿರುವುದು ಕಾಂಗ್ರೆಸ್ ಸರ್ಕಾರದ ಧೋರಣೆಗೆ ಸಾಕ್ಷಿಯಾಗಿದೆ. ಸಚಿವ ಬಿ.ನಾಗೇಂದ್ರ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಆಗ್ರಹಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಿಜೆಪಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ರಾಜೀನಾಮೆ ಕೊಡುವವರೆಗೂ ಧರಣಿ ಮುಂದುವರೆಸುವುದಾಗಿ ವಿಪಕ್ಷ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧಿಸಿ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಅಮಾನತುಗೊಂಡಿರುವ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ನಿವಾಸ ಸೇರಿ ರಾಜ್ಯಾದ್ಯಂತ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ. ಇದೀಗ ಶಿವಶಂಕರಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಹಲವು ಸತ್ಯಾಂಶಗಳು ಹೊರಬೀಳುವ ಸಾಧ್ಯತೆಗಳಿವೆ.
11:33 PM (IST) Aug 20
ಯಶ್ ಅವರನ್ನು ಯಾಕೆ ನಿರ್ದೇಶನಕ್ಕೆ ಆರಿಸಿಕೊಂಡರು ಅನ್ನುವುದಷ್ಟೇ ಆ ಹೊತ್ತಿನ ಕುತೂಹಲ. ಸಿನಿಮಾ ತಡವಾಗುತ್ತಿದ್ದಂತೆ ಊಹಾಪೋಹಗಳು ಕೇಳಿಬಂದವು. ಯಶ್ ಇಡೀ ಸಿನಿಮಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ.
11:18 PM (IST) Aug 20
10:50 PM (IST) Aug 20
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸಿಂಗಾರಿಪುರದಲ್ಲಿ ಹಸು ಕಟ್ಟುವ ವಿಚಾರದ ಗಲಾಟೆಗೆ ಹೆದರಿ ನಾಗೇಂದ್ರ ಎಂಬ ಅಪ್ರಾಪ್ತ ಬಾಲಕ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ..
10:46 PM (IST) Aug 20
Yash Cutouts: ‘ಟಾಕ್ಸಿಕ್’ ಸ್ವಾಗತಕ್ಕೆ ಅಭಿಮಾನಿಗಳು ಈಗಾಗಲೇ ಸಜ್ಜಾಗಿದ್ದಾರೆ. ರಾಜ್ಯ ಮಾತ್ರವಲ್ಲದೆ ದೇಶದ ಹಲವು ಭಾಗಗಳಲ್ಲೂ ಚಿತ್ರತಂಡ ಹಾಗೂ ಅಭಿಮಾನಿಗಳಿಂದ ಭರ್ಜರಿ ತಯಾರಿ ನಡೆಯುತ್ತಿದೆ.
10:04 PM (IST) Aug 20
09:43 PM (IST) Aug 20
ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇಗುಲಕ್ಕೆ ಟಿವಿಎಸ್ ಕಂಪನಿ ಎಂಡಿ ವೇಣು ಶ್ರೀನಿವಾಸನ್ ಅವರು 66 ಲಕ್ಷ ರೂಪಾಯಿ ಮೌಲ್ಯದ 400 ಗ್ರಾಂ ತೂಕದ ಚಿನ್ನದ ಅಷ್ಟಲಕ್ಷ್ಮಿ ಕಳಶವನ್ನು ಕಾಣಿಕೆಯಾಗಿ ನೀಡಿದ್ದಾರೆ. ಪಂಚರಂಗ ಕ್ಷೇತ್ರಗಳಲ್ಲಿ ಮೊದಲನೆಯದಾದ 'ಆದಿ ರಂಗ' ಖ್ಯಾತಿಯ ಈ ಪುರಾತನ ದೇಗುಲಕ್ಕೆ ಉದ್ಯಮಿ ನೀಡಿದ ಕೊಡುಗೆಯು ಭಕ್ತರ ಶ್ಲಾಘನೆಗೆ ಪಾತ್ರವಾಗಿದೆ.
09:27 PM (IST) Aug 20
Kichcha Sudeep Viral Video: ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂದ್ರೆ ಬರೀ ಅಭಿನಯ ಮಾತ್ರವಲ್ಲ, ಅವರ ಸ್ಟೈಲ್, ಸ್ಟೇಜ್ ಪ್ರೆಸೆನ್ಸ್ ಹಾಗೂ ಸಂಗೀತದ ಮೇಲಿನ ಆಸಕ್ತಿಗೂ ಪ್ರತ್ಯೇಕ ಅಭಿಮಾನಿ ಬಳಗವಿದೆ.
08:51 PM (IST) Aug 20
Dhruva Sarja New Movie: ‘ತತ್ಸಮ ತದ್ಭವ’ ಸಿನಿಮಾ ಮೂಲಕ ನಿರ್ದೇಶಕರಾಗಿ ಗಮನ ಸೆಳೆದ ವಿಷಾಲ್ ಆತ್ರೇಯ ಹಾಗೂ ಧ್ರುವ ಸರ್ಜಾ ಹೊಸ ಸಿನಿಮಾಗಾಗಿ ಕೈಜೋಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
08:30 PM (IST) Aug 20
ಬೆಂಗಳೂರಲ್ಲಿ ಯಾರನ್ನ ನಂಬಬೇಕು? ನಂಬಬಾರದು ಎಂಬುದೇ ಗೊತ್ತಾಗಲ್ಲ. 20 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಮನೆ ಮಾಲೀಕನ ಕೆಟ್ಟ ಕಣ್ಣು ಬಿದ್ದು ಏನೆಲ್ಲ ಆಗೋಯ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
08:14 PM (IST) Aug 20
ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ತಮ್ಮ ನೃತ್ಯ ಮತ್ತು ಅಭಿನಯದ ಮೂಲಕವೇ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟಿ ಶ್ರೀಲೀಲಾ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
07:54 PM (IST) Aug 20
ಮಳೆಗಾಲದಲ್ಲಿ ಮನೆಗೆ ಇಲಿಗಳ ಕಾಟ ಹೆಚ್ಚಾಗುತ್ತಿದೆಯೇ? ಪುದೀನಾ, ಬೆಳ್ಳುಳ್ಳಿ, ಲವಂಗ ಸೇರಿದಂತೆ ಕೆಲವು ನೈಸರ್ಗಿಕ ಮನೆಮದ್ದುಗಳ ಬಗ್ಗೆ ತಿಳಿಯಿರಿ. ಜೊತೆಗೆ ಇಲಿಗಳ ಕಾಟ ತಪ್ಪಿಸಲು ಸುರಕ್ಷಿತ ಕ್ರಮಗಳನ್ನೂ ನೋಡಿ.
07:34 PM (IST) Aug 20
ಜಮೀನು ವಿವಾದ ಬಗೆಹರಿಸಿಕೊಡುವುದಾಗಿ ನಂಬಿಸಿ ಮಹಿಳೆಯಿಂದ ಹಣ, ಬಂಗಾರ ಪಡೆದು ಲೈಂ*ಕ ಕಿರುಕುಳ ನೀಡಿದ್ದ ಹೋರಾಟಗಾರ ಶ್ರೀನಾಥ್ನನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ.
07:04 PM (IST) Aug 20
ಮನೆಯ ಡ್ರೈನೇಜ್ ದುರ್ವಾಸನೆ ಮತ್ತು ಕಿಚನ್ನ ಜಿರಳೆ ಸಮಸ್ಯೆಗೆ ಎಕ್ಸ್ಪೈರ್ ಆದ ಮಾತ್ರೆ ಬಳಸುವ ವೈರಲ್ ಟಿಪ್ಸ್ ಬಗ್ಗೆ ಎಚ್ಚರ. ಡ್ರೈನೇಜ್ ಸ್ವಚ್ಛತೆ, ಕಿಚನ್ ಹೈಜೀನ್ ಹಾಗೂ ಸುರಕ್ಷಿತ ಪೆಸ್ಟ್ ಕಂಟ್ರೋಲ್ ವಿಧಾನಗಳ ಬಗ್ಗೆ ತಿಳಿಯಿರಿ.
06:57 PM (IST) Aug 20
06:33 PM (IST) Aug 20
ವಿಜಯ್ ದೇವರಕೊಂಡ ಅಪ್ಪ-ಅಮ್ಮನ ನಡುವೆ ನೆಮ್ಮದಿಯಾಗಿ ನಿದ್ರಿಸುತ್ತಿರುವ ಕ್ಯೂಟ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋವನ್ನು ಸ್ಪೆಷಲ್ ವ್ಯಕ್ತಿ ಕ್ಲಿಕ್ ಮಾಡಿದ್ದಾರೆ.
06:20 PM (IST) Aug 20
ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ 3 ಗಂಟೆಗೂ ಹೆಚ್ಚು ರನ್ಟೈಮ್ನೊಂದಿಗೆ ಬರಲಿದೆ ಎಂಬ ಚರ್ಚೆ ಶುರುವಾಗಿದೆ. ‘ಪುಷ್ಪ 2’, ‘ಅನಿಮಲ್’, ‘ಧುರಂಧರ್’ ಬಳಿಕ ಲಾಂಗ್ ರನ್ಟೈಮ್ ಸಿನಿಮಾಗಳ ಟ್ರೆಂಡ್ ಬಗ್ಗೆ ಇಲ್ಲಿದೆ ಮಾಹಿತಿ.
06:13 PM (IST) Aug 20
ಸಾಲ ತೀರಿಸಲು ಸ್ಮಶಾನದ ಹೆಣವನ್ನು ಸುಟ್ಟು ತನ್ನದೇ ಸಾವಿನ ನಾಟಕವಾಡಿದ್ದ ಕೋಲಾರದ ಅರುಣ್ ರೆಡ್ಡಿ, 11 ವರ್ಷಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆಧಾರ್ ಕಾರ್ಡ್ ಸುಳಿವು ಮತ್ತು ಪೊಲೀಸರ ಚಾಣಾಕ್ಷತನದಿಂದಾಗಿ 'ದೃಶ್ಯಂ' ಶೈಲಿಯ ನಾಟಕ ಬಯಲಾಗಿದ್ದು, ಆರೋಪಿ ಈಗ ಜೈಲು ಪಾಲಾಗಿದ್ದಾನೆ.
06:00 PM (IST) Aug 20
ಕೊಡಗಿನಲ್ಲಿ ಮಾನವ-ಆನೆ ಸಂಘರ್ಷ ತೀವ್ರಗೊಂಡಿದ್ದು, ಆನೆ ದಾಳಿ ನಿಯಂತ್ರಣಕ್ಕೆ ವೈಜ್ಞಾನಿಕ ಯೋಜನೆ ಆಗ್ರಹಿಸಿ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ ಸೇರಿದಂತೆ ಹಲವೆಡೆ ಬಂದ್ಗೆ ರೈತ ಮತ್ತು ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ.
05:43 PM (IST) Aug 20
ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ‘ಸರ್ಕಲ್ಗೆ ಎಷ್ಟು ಸೈಡ್ಸ್?’ ಎಂಬ ಪ್ರಶ್ನೆಗೆ ವಿನಯ್ ಗೌಡ ನೀಡಿದ್ದ ಉತ್ತರ ವೈರಲ್ ಆಗಿತ್ತು. ಟ್ರೋಲ್ಗಳ ಬೆನ್ನಲ್ಲೇ ಜೋರ್ಡನ್ ಕರ್ವ್ ಸಿದ್ಧಾಂತ ಉಲ್ಲೇಖಿಸಿ ನಟ ಸ್ಪಷ್ಟನೆ ನೀಡಿದ್ದಾರೆ.
05:35 PM (IST) Aug 20
ಕನಸಿನಲ್ಲಿ ಸತ್ತವರು ಕಾಣಿಸಿಕೊಂಡರೆ ಭಯಪಡುವುದು ಸಾಮಾನ್ಯ, ಆದರೆ ಇದು ಯಾವಾಗಲೂ ಅಶುಭ ಸಂಕೇತವಲ್ಲ. ಸ್ವಪ್ನ ಶಾಸ್ತ್ರದ ಪ್ರಕಾರ, ಈ ಕನಸುಗಳು ಜೀವನದಲ್ಲಿ ಬರಲಿರುವ ಬದಲಾವಣೆಗಳನ್ನು ಸೂಚಿಸುತ್ತವೆ. ಸತ್ತವರು ನಗುತ್ತಾ, ಅಳುತ್ತಾ ಅಥವಾ ಮಾತನಾಡುತ್ತಾ ಕಾಣಿಸಿಕೊಳ್ಳುವುದರ ಹಿಂದೆ ಬೇರೆ ಬೇರೆ ಅರ್ಥಗಳಿವೆ.
05:14 PM (IST) Aug 20
ಹೆಬ್ಬಾಳ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ನಮ್ಮ ಮೆಟ್ರೋ ಸಂಪರ್ಕವು ನಿಧಾನಗತಿಯ ಕಾಮಗಾರಿಯಿಂದಾಗಿ 2027ರ ಜೂನ್ ಗಡುವು ತಪ್ಪುವ ಸಾಧ್ಯತೆಯಿದೆ. ಗುತ್ತಿಗೆದಾರ ಸಂಸ್ಥೆಯು ಮೂರನೇ ಬಾರಿಗೆ ಗಡುವು ವಿಸ್ತರಣೆ ಕೋರಿದೆ.
05:11 PM (IST) Aug 20
‘ಟಾಕ್ಸಿಕ್’ ಸಿನಿಮಾ ಕುರಿತು ರಿಷಿಕಾ ಸಿಂಗ್ ಟೀಕಿಸಿದ ಬೆನ್ನಲ್ಲೇ ತಂದೆ ರಾಜೇಂದ್ರ ಸಿಂಗ್ ಬಾಬು ಪ್ರತಿಕ್ರಿಯಿಸಿದ್ದಾರೆ. ಯಶ್ ಅವರನ್ನು ಕನ್ನಡ ಚಿತ್ರರಂಗದ ‘ಕೊಹಿನೂರ್ ವಜ್ರ’ ಎಂದು ಹೊಗಳಿರುವ ಅವರು, ಮಗಳ ಅಭಿಪ್ರಾಯ ವೈಯಕ್ತಿಕ ಎಂದಿದ್ದಾರೆ.
04:57 PM (IST) Aug 20
04:42 PM (IST) Aug 20
Yash Ravana Voice: ‘ರಾಮಾಯಣ’ ಟ್ರೇಲರ್ನಲ್ಲಿ ರಾವಣನಾಗಿ ಯಶ್ ಅವರ ಗಂಭೀರ ಧ್ವನಿ ಕೇಳಿಬಂದಿತ್ತು. ಈ ಧ್ವನಿ ದೇವರಾಜ್ ಅವರದ್ದು ಎಂಬ ವದಂತಿಗೆ ಪ್ರಜ್ವಲ್ ದೇವರಾಜ್ ಸ್ಪಷ್ಟನೆ ನೀಡಿದ್ದಾರೆ.
04:29 PM (IST) Aug 20
Moderna ಮತ್ತು ಮರ್ಕ್ ಕಂಪನಿಗಳ ಪರ್ಸನಲೈಸ್ಡ್ mRNA ಕ್ಯಾನ್ಸರ್ ವ್ಯಾಕ್ಸಿನ್ ಚರ್ಮದ ಕ್ಯಾನ್ಸರ್ ವಿರುದ್ಧದ ಮೂರನೇ ಹಂತದ ಪ್ರಯೋಗದಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಈ ಚಿಕಿತ್ಸೆಯು ಶಸ್ತ್ರಚಿಕಿತ್ಸೆಯ ನಂತರ ಕ್ಯಾನ್ಸರ್ ಮತ್ತೆ ಬರುವ ಮತ್ತು ಹರಡುವ ಅಪಾಯವನ್ನು ಗಣನೀಯವಾಗಿ ತಗ್ಗಿಸಿದೆ ಎಂದು ವರದಿಯಾಗಿದೆ.
04:23 PM (IST) Aug 20
04:20 PM (IST) Aug 20
ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನದಂತೆ, ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳಾದ ಕೆಎಸ್ಟಿಡಿಸಿ ಮಯೂರ ಹೋಟೆಲ್, ಸರ್ಕಾರಿ ವಸ್ತುಸಂಗ್ರಹಾಲಯ, ಮತ್ತು ವೆಂಕಟಪ್ಪ ಆರ್ಟ್ ಗ್ಯಾಲರಿಗಳು ಶೀಘ್ರದಲ್ಲೇ ನವೀಕರಣಗೊಳ್ಳಲಿವೆ.
04:18 PM (IST) Aug 20
‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೂಲಕ ರಾಜ್ಯದ ಮನೆಮಾತಾಗಿರುವ ‘ಹಳ್ಳಿಕಾರ್ ಒಡೆಯ’ ವರ್ತೂರು ಸಂತೋಷ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಹತ್ವದ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.
03:59 PM (IST) Aug 20
ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ಮುಂಬರುವ 24 ಗಂಟೆಯಲ್ಲಿ ಗುಡುಗು, ಭಾರೀ ಗಾಳಿಯೊಂದಿಗೆ ಕುಡಿದ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಪ್ರಮುಖವಾಗಿ ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇದೆ.
01:45 PM (IST) Aug 20
12:40 PM (IST) Aug 20
ಸೆಪ್ಟೆಂಬರ್ ತಿಂಗಳಲ್ಲಿ ಗ್ರಹಗಳ ಸಂಯೋಗದಿಂದ 'ರಾಜ ಮಾಳಿಗೈ ಧನಯೋಗ' ಉಂಟಾಗುತ್ತಿದ್ದು, ಇದು ಕೆಲವು ರಾಶಿಗಳ ಧನ ಸ್ಥಾನವನ್ನು ಪ್ರಚೋದಿಸಲಿದೆ. ಈ ಯೋಗದ ಪ್ರಭಾವದಿಂದ 4 ರಾಶಿಯವರಿಗೆ ದಿಢೀರ್ ಧನಲಾಭ, ಆಸ್ತಿ ಸಂಪಾದನೆ ಮತ್ತು ವೃತ್ತಿಯಲ್ಲಿ ಉನ್ನತಿಯ ಯೋಗವಿದೆ.
12:34 PM (IST) Aug 20
12:20 PM (IST) Aug 20
11:52 AM (IST) Aug 20
ಹೊಸಕೋಟೆಯ ಪ್ರಸಿದ್ಧ ಬಿರಿಯಾನಿ ಮಾರಾಟದ ಸಮಯವನ್ನು ಬದಲಾಯಿಸಲಾಗಿದೆ. ಬೆಳಗಿನ ಜಾವ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆ, ಅಪಘಾತಗಳು ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಯಲು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಹೊಸಕೋಟೆ ಬಿರಿಯಾನಿ ಸಮಯ ಈ ಕೆಳಗಿನಂತಿದೆ.
11:39 AM (IST) Aug 20
ಆಗಸ್ಟ್ 20 ರ ವಿಶ್ವ ಸೊಳ್ಳೆಗಳ ದಿನ, ಸೊಳ್ಳೆಗಳಿಂದ ಮಲೇರಿಯಾ ಹರಡುತ್ತದೆ ಎಂದು ಕಂಡುಹಿಡಿದ ಸರ್ ರೋನಾಲ್ಡ್ ರೋಸ್ ಅವರನ್ನು ಸ್ಮರಿಸುತ್ತದೆ. ಈ ಲೇಖನವು ಮಲೇರಿಯಾ, ಡೆಂಘಿ, ಚಿಕೂನ್ಗೂನ್ಯಾದಂತಹ ಸೊಳ್ಳೆಗಳಿಂದ ಹರಡುವ ಮಾರಕ ರೋಗಗಳು ಸಂತಾನೋತ್ಪತ್ತಿ ನಿಯಂತ್ರಿಸುವ ಕ್ರಮಗಳ ಬಗ್ಗೆ ವಿವರಿಸುತ್ತದೆ.
11:23 AM (IST) Aug 20
11:17 AM (IST) Aug 20
11:14 AM (IST) Aug 20
ಬೀದರ್ನ ಚಿಟಗುಪ್ಪಾ ಪಟ್ಟಣದ ಶಾಹೀನ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು 'ವಂದೇ ಮಾತರಂ' ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗೆ ಪ್ರಾಂಶುಪಾಲರೇ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ವಿದ್ಯಾರ್ಥಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಾಂಶುಪಾಲರ ವಿರುದ್ಧ ಎಫ್ಐಆರ್.
10:47 AM (IST) Aug 20
ಹನೂರು ಎನ್ಕೌಂಟರ್ ಬಳಿಕ, ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಧಾಮಗಳಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಜಿಲೆಟಿನ್ ಬಳಸಿ ಕಳ್ಳಬೇಟೆ ತಡೆ ಶಿಬಿರಗಳನ್ನು ಸ್ಫೋಟಿಸುತ್ತಿದ್ದು, 10 ಎಕರೆ ಕಾಡಿಗೆ ಬೆಂಕಿ ಹಚ್ಚಿದ್ದಾರೆ. ಈ ಕೇಸಿನ ತನಿಖೆಗೆ ಆ್ಯಂಟಿ ನಕ್ಸಲ್ ಫೋರ್ಸ್ (ANF) ಬರಬಹುದು.
10:37 AM (IST) Aug 20
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ಈ ಪ್ರಕ್ರಿಯೆಗಾಗಿ ಬಯೋಮೆಟ್ರಿಕ್/ಫೇಸ್ ಅಥೆಂಟಿಕೇಶನ್ ಬಳಸಲಾಗುವುದು ಎಂದು ಹೇಳಿದ್ದಾರೆ.