Published : Jun 01, 2025, 06:46 AM ISTUpdated : Jun 01, 2025, 11:42 PM IST

Karnataka News Live 1st June 2025: ಆರ್‌ಸಿಬಿ ಫೈನಲ್ ಕ್ರೇಜ್, ಬೆಂಗಳೂರಿನ ಬಹುತೇಕ ಪಬ್, ರೆಸ್ಟೋರೆಂಟ್ ಟಿಕೆಟ್ ಸೋಲ್ಡ್ ಔಟ್

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಂಗಳೂರು: ಕೋವಿಡ್ ಆತಂಕದ ನಡುವೆಯೇ ರಾಜ್ಯದಲ್ಲಿ ಸರ್ಕಾರ ಶಾಲಾ ವಿದ್ಯಾರ್ಥಿಗಳ ಆರೋಗ್ಯದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಕ್ಕಳಲ್ಲಿ ಜ್ವರ, ಕೆಮ್ಮು ನೆಗಡಿ ಲಕ್ಷಣ ಕಂಡುಬಂದಲ್ಲಿ ಶಾಲೆಗೆ ಕಳುಹಿಸದಂತೆ ಪೋಷಕರಿಗೆ ಮನವಿ ಮಾಡಿದೆ. ದೇಶದಲ್ಲಿ 3500ರ ಸನಿಹಕ್ಕೆ ಸಕ್ರಿಯ ಕೋವಿಡ್ ಕೇಸ್‌ಗಳು ದಾಖಲಾಗಿದ್ದು, ಇದುವರೆಗೆ 26 ಜನ ಸಾವನ್ನಪ್ಪಿದ್ದಾರೆ. ಹಾಗೆಯೇ ಕರ್ನಾಟಕದಲ್ಲಿ ನಿನ್ನೆ 58 ಹೊಸ ಪ್ರಕರಣಗಳು ದಾಖಲಾಗಿವೆ. ನಿನ್ನೆಯೂ ಕೋವಿಡ್‌ಗೆ ಒಬ್ಬರು ಸಾವನ್ನಪ್ಪುವುದರೊಂದಿಗೆ ಕೋವಿಡ್‌ಗೆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 4ಕ್ಕೆ ಏರಿದೆ.

11:42 PM (IST) Jun 01

ಆರ್‌ಸಿಬಿ ಫೈನಲ್ ಕ್ರೇಜ್, ಬೆಂಗಳೂರಿನ ಬಹುತೇಕ ಪಬ್, ರೆಸ್ಟೋರೆಂಟ್ ಟಿಕೆಟ್ ಸೋಲ್ಡ್ ಔಟ್

ಆರ್‌ಸಿಬಿ ಫೈನಲ್ ಪಂದ್ಯಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಲೇ ಬೆಂಗಳೂರಿನಲ್ಲಿ ಕ್ರೇಜ್ ಹೆಚ್ಚಾಗಿದೆ. ವಿಶೇಷ ಅಂದರೆ ಬೆಂಗಳೂರಿನ ಬುಹುತೇಕ ಪಬ್, ರೆಸ್ಟೋರೆಂಟ್ ಟಿಕೆಟ್ ಸೋಲ್ಡ್ ಔಟ್ ಆಗಿದೆ.

Read Full Story

11:19 PM (IST) Jun 01

ತಪ್ಪು ಮಾಹಿತಿಯನ್ನು ಪತ್ತೆಹಚ್ಚುವ AI - ಸತ್ಯಕ್ಕಾಗಿ ಟೆಕ್ ಯುದ್ಧ!

AI ಸುಳ್ಳು ಸುದ್ದಿ ವಿರುದ್ಧ ಪ್ರಮುಖ ರಕ್ಷಣೆಯಾಗಿ ಹೇಗೆ ಹೊರಹೊಮ್ಮುತ್ತಿದೆ ಎಂಬುದನ್ನು ತಿಳಿಯಿರಿ.

Read Full Story

11:12 PM (IST) Jun 01

ಸನ್‌ರೂಫ್ ತೆರೆದು ನಿಂತುಕೊಂಡು ಪ್ರಯಾಣಿಸುತ್ತೀರಾ? ಡೇಂಜರ್ ಕಾರಣ ತಿಳಿಸಿದ ಪೊಲೀಸ್

ಸನ್‌ರೂಫ್ ಫೀಚರ್ ಕಾರಿನಲ್ಲಿ ತೆರಳುವಾಗ ಮಕ್ಕಳು, ಯುವ ಸಮೂಹ ಸೇರಿದಂತೆ ಹಲವರು ನಿಂತುಕೊಂಡು ಪ್ರಯಾಣ ಅಸ್ವಾದಿಸುತ್ತಾರೆ. ಹೀಗೆ ತೆರಳುತ್ತಿದ್ದ ಕಾರನ್ನು ತಡೆದ ಪೊಲೀಸ್ ಇದರ ಅಪಾಯವನ್ನು ಪೋಷಕರಿಗೆ ತಿಳಿಸಿದ್ದಾರೆ.

Read Full Story

10:10 PM (IST) Jun 01

ಟರ್ಬುಲೆನ್ಸ್‌ನಿಂದ ನಿಯಂತ್ರಣಕ್ಕೆ ಸಿಗದ ಇಂಡಿಗೋ ವಿಮಾನ, ಪ್ರಯಾಣಿಕರ ಚೀರಾಟ ದೃಶ್ಯ ಸೆರೆ

ಜೈಪುರ್ ಡೆಲ್ಲಿ ಇಂಡಿಗೋ ವಿಮಾನ ಭಾರಿ ಟರ್ಬುಲೆನ್ಸ್ ಹೊಡೆತಕ್ಕೆ ಸಿಲುಕಿದೆ. ಇನ್ನೇನು ಡೆಲ್ಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕು ಅನ್ನುಷ್ಟರಲ್ಲೇ  ವಿಮಾನ ನಿಯಂತ್ರಣಕ್ಕೆ ಸಿಕಿಲ್ಲ. ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಪ್ರಯಾಣಿಕರು ಚೀರಾಡುತ್ತಿರುವ ದೃಶ್ಯ ಸೆರೆಯಾಗಿದೆ.

Read Full Story

09:16 PM (IST) Jun 01

ಮಳೆಯಿಂದ ಸ್ಥಗಿತಗೊಂಡ ಪಂಜಾಬ್-ಮುಂಬೈ ಪಂದ್ಯ ರದ್ದಾದರೆ ಆರ್‌ಸಿಬಿಗೆ ಪ್ರಯೋಜನವಾಗುತ್ತಾ?

ಪಂಜಾಬ್ ಹಾಗೂ ಮುಂಬೈ ನಡುವಿನ ಪಂದ್ಯ ಟಾಸ್ ಬೆನ್ನಲ್ಲೇ ಮಳೆಯಿಂದ ಸ್ಥಗಿತಗೊಂಡಿದೆ. ಈ ಪಂದ್ಯ ರದ್ದಾದರೆ ಆರ್‌ಸಿಬಿಗೆ ಲಾಭವಾಗುತ್ತಾ? ಲಾಭ ನಷ್ಟದ ಲೆಕ್ಕಾಚಾರವೇನು?

Read Full Story

09:05 PM (IST) Jun 01

EPFO 3.0 ಜಾರಿ - ಪಿಎಫ್ ಹಣವನ್ನು ATM ನಿಂದ ಡ್ರಾ ಮಾಡಿ! ಪಿಂಚಣಿ ಯೋಜನೆಗಳಿಗೂ ಲಿಂಕಿಂಗ್!

EPFO 3.0 ಪೋರ್ಟಲ್ ಜೂನ್ 2025 ರಲ್ಲಿ ಬಿಡುಗಡೆಯಾಗಲಿದ್ದು, ATM ಮೂಲಕ ಪಿಎಫ್ ಹಣ ಹಿಂಪಡೆಯುವಿಕೆ, ಆಟೋ-ಕ್ಲೈಮ್ ಸೆಟಲ್‌ಮೆಂಟ್ ಮತ್ತು OTP ಆಧಾರಿತ ದೃಢೀಕರಣದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಅಟಲ್ ಪಿಂಚಣಿ ಯೋಜನೆ ಮತ್ತು ಪಿಎಂಜೆಜೆಬಿವೈ ಸೇರಿದಂತೆ ಇತರ ಯೋಜನೆಗಳೊಂದಿಗೆ ಏಕೀಕರಣಗೊಳ್ಳಲಿದೆ.

Read Full Story

08:49 PM (IST) Jun 01

ಆರೋಪಿಯ ಫೋನ್‌ಪೇ ಬಳಸಿ ಬೆಟ್ಟಿಂಗ್‌ ಆಡಿದ ಆರೋಪ; ತುರುವೇಕೆರೆ SI ಸಂಗಪ್ಪ ಮೇಟಿ ಅಮಾನತು, ಏನಿದು ಪ್ರಕರಣ?

ತುರುವೇಕೆರೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಂಗಪ್ಪ ಮೇಟಿ ಅವರನ್ನು ಬಂಧಿತನ ಫೋನ್‌ಪೇ ಹಣ ದುರ್ಬಳಕೆ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಬಂಧಿತನ ಮೊಬೈಲ್‌ನಿಂದ ಹಣ ತೆಗೆದು ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Read Full Story

08:34 PM (IST) Jun 01

ಕೊರೊನಾ ಸೋಂಕು ಹೆಚ್ಚಳ - ಶಾಲೆಗಳಿಗೆ ಕೋವಿಡ್ ಮಾರ್ಗಸೂಚಿ ಹೊರಡಿಸಿದ ಶಿಕ್ಷಣ ಇಲಾಖೆ!

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದರೆ ಶಾಲೆಗೆ ಕಳುಹಿಸದಂತೆ ಮತ್ತು ಪೂರ್ಣ ಗುಣಮುಖವಾದ ನಂತರವೇ ಶಾಲೆಗೆ ಕಳುಹಿಸುವಂತೆ ಸೂಚಿಸಲಾಗಿದೆ.
Read Full Story

08:21 PM (IST) Jun 01

ಬಾಹ್ಯಾಕಾಶದಿಂದ ಭೂಮಿಗೆ ಬರುತ್ತಿದೆ ನಿಗೂಢ ಸಂಕೇತ, ಪ್ರತಿ 44 ನಿಮಿಷಕ್ಕೆ ಸಿಗ್ನಲ್

ಬಾಹ್ಯಾಕಾಶದಿಂದ ವಿಚಿತ್ರ ವಸ್ತೊಂದು ನಿಗೂಢ ಸಂಕೇತಗಳನ್ನು ಭೂಮಿಗೆ ಕಳುಹಿಸುತ್ತಿದೆ. ಪ್ರತಿ 44 ನಿಮಿಷಕ್ಕೆ ಬಾಹ್ಯಾಕಾಶದಿಂದ ನಿಗೂಢ ಸಿಗ್ನಲ್ ಭೂಮಿಗೆ ಕಳುಹಿಸಲಾಗುತ್ತಿದೆ. ಈ ರೀತಿ ಸಂಕೇತಗಳು ಬಾಹ್ಯಾಕಾಶದಿಂದ ಭೂಮಿಗೆ ನೀಡಲಾಗುತ್ತಿದೆ ಅನ್ನೋದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಏನಿದು?

Read Full Story

08:09 PM (IST) Jun 01

ನೆಲಮಂಗಲದಲ್ಲಿ ಕಾರಿನ ಗ್ಲಾಸ್ ಒಡೆದು ₹11.5 ಲಕ್ಷ ಕಳ್ಳತನ

ನೆಲಮಂಗಲದಲ್ಲಿ ಕಾರು ನಿಲ್ಲಿಸಿ ಮಿಕ್ಸಿ ರಿಪೇರಿ ಮಾಡಿಸಲು ಹೋದಾಗ, ಕಾರಿನ ಗ್ಲಾಸ್ ಒಡೆದು 11.5 ಲಕ್ಷ ರೂ. ನಗದು ಹಣ ಕದ್ದೊಯ್ದ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಕಳ್ಳತನ ಸೆರೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story

08:00 PM (IST) Jun 01

ಮುಟ್ಟಿನ ಕಪ್​ ಬಳಸ್ತಾ ಇದ್ದೀರಾ? ಎಚ್ಚರ ತಪ್ಪಿದರೆ ಪ್ರಾಣಕ್ಕೆ ಅಪಾಯ - ವೈದ್ಯೆ ಹೇಳಿದ ಎಚ್ಚರಿಕೆ ಕೇಳಿಬಿಡಿ

ಮುಟ್ಟಿನ ಕಪ್​ ಅಥವಾ ಮೆನ್ಸ್ಟ್ರುವಲ್ ಕಪ್ ಬಳಕೆ ಮಾಡುವವರು ಈ ಒಂದು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ. ವೈದ್ಯೆಯ ಈ ಮಾತನ್ನು ಕೇಳಿ...

Read Full Story

07:39 PM (IST) Jun 01

ಉಕ್ರೇನ್‌ನಿಂದ ರಷ್ಯಾ ವಾಯುನೆಲೆಗಳ ಮೇಲೆ ಬೃಹತ್ ಡ್ರೋನ್ ದಾಳಿ! ತೀವ್ರ ನಷ್ಟ

ಉಕ್ರೇನ್ ತನ್ನ ಗಡಿಯಾಚೆಗಿನ ರಷ್ಯಾದ ವಾಯುನೆಲೆಗಳ ಮೇಲೆ ಬೃಹತ್ ಡ್ರೋನ್ ದಾಳಿ ನಡೆಸಿದೆ. ಸೈಬೀರಿಯಾದಲ್ಲಿರುವ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡ ಈ ದಾಳಿಯಲ್ಲಿ 40ಕ್ಕೂ ಹೆಚ್ಚು ಯುದ್ಧ ಬಾಂಬರ್‌ಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
Read Full Story

07:17 PM (IST) Jun 01

ಐಪಿಎಲ್ 2025 ಲಾಂಗೆಸ್ಟ್ ಸಿಕ್ಸ್; ಕೊಹ್ಲಿ ಕೈಕೊಟ್ಟರೂ ಸ್ಥಾನ ಗಿಟ್ಟಿಸಿದ RCB ಏಕೈಕ ಆಟಗಾರ

ಐಪಿಎಲ್ 2025 ಫೈನಲ್ ಹಂತಕ್ಕೆ ಬಂದಿದೆ. ಈ ಸೀಸನ್‌ನಲ್ಲಿ ಯಾವ ಬ್ಯಾಟ್ಸ್‌ಮನ್‌ಗಳು ದೊಡ್ಡ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ ನೋಡೋಣ. ಇದರಲ್ಲಿ ಒಬ್ಬ ಆರ್‌ಸಿಬಿ ಪ್ಲೇಯರ್ ಕೂಡ ಇದ್ದಾರೆ.

Read Full Story

07:11 PM (IST) Jun 01

ಸುರೇಶ್ ರೈನಾಗೆ ಲಾಂಗ್ ಹಿಡಿಯುವ ಸ್ಟೈಲ್‌ನಲ್ಲಿ ಬ್ಯಾಟ್ ಹಿಡಿಯಲು ಕಲಿಸಿದ ಶಿವಣ್ಣ, ವಿಡಿಯೋ

ಶಿವರಾಜ್ ಕುಮಾರ್ ಲಾಂಗ್ ಹಿಡಿಯುವ ಸ್ಟೈಲ್‌ಗೆ ಸರಿಸಾಟಿ ಇಲ್ಲ. ಇತ್ತ ಕ್ರಿಕೆಟ್ ಫೀಲ್ಡ್‌ನಲ್ಲಿ ಸುರೇಶ್ ರೈನಾ ಕ್ಯಾಚ್ ಹಿಡಿಯು ರೀತಿಗೆ ಸರಿಸಾಟಿ ಇಲ್ಲ. ಇವರಿಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಕ್ರಿಕೆಟ್ ಬ್ಯಾಟನ್ನೇ ಲಾಂಗ್ ರೀತಿ ಹಿಡಿದರೆ ಹೇಗಿರುತ್ತೆ? ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

Read Full Story

06:35 PM (IST) Jun 01

ಲವ್ ಜಿಹಾದ್ ವಿರುದ್ಧ ಸಹಾಯವಾಣಿಗೆ ವರ್ಷ; 'ಮಠ, ದೇವಾಲಯಗಳಿಗೆ ಹಣ ನೀಡೋದು ಸಾಕು ಎಂದಿದ್ದೇಕೆ ಮುತಾಲಿಕ್?

ಶ್ರೀರಾಮಸೇನೆಯ ಲವ್ ಜಿಹಾದ್ ಸಹಾಯವಾಣಿಯ ವಾರ್ಷಿಕೋತ್ಸವದಲ್ಲಿ ಪ್ರಮೋದ್ ಮುತಾಲಿಕ್ ಲವ್ ಜಿಹಾದ್ ವಿರುದ್ಧ ಹೋರಾಡಲು ಕರೆ ನೀಡಿದರು ಮತ್ತು ಮಠಗಳಿಗೆ ಹಣ ನೀಡುವ ಬದಲು ಹಿಂದೂ ಪರ ಕೆಲಸ ಮಾಡುವವರಿಗೆ ಸಹಾಯ ಮಾಡುವಂತೆ ಹೇಳಿದರು.
Read Full Story

06:25 PM (IST) Jun 01

ದಿಢೀರ್ ತಬ್ಬಿಕೊಂಡು ಚುಂಬಿಸಲು ಮುಂದಾದ ನಿರ್ದೇಶಕ,ನಟಿ ಸರ್ವಿನ್ ಚಾವ್ಲಾ ಹೇಳಿದ ಸಿನಿ ಘಟನೆ

ಕಚೇರಿ ಡೂರ್ ತೆಗೆದಿದ್ದೇ ತಡ, ನಿರ್ದೇಶಕ ದಿಢೀರ್ ತಬ್ಬಿಕೊಂಡು ಚುಂಬಿಸಲು ಮುಂದಾದ. ಅಂದು ಆ ನಿರ್ದೇಶಕನ ಕಚೇರಿಯಲ್ಲಿ ನಡೆದಿದ್ದೇನು? ಖ್ಯಾತ ನಟಿ ಸರ್ವೀನ್ ಚಾವ್ಲಾ ಬಾಲಿವುಡ್ ಕಾಸ್ಟಿಂಗ್ ಕೌಚ್ ಕುರಿತು ತೆರೆದಿಟ್ಟಿದ್ದಾರೆ.

Read Full Story

06:15 PM (IST) Jun 01

ಟ್ರಂಪ್ ಹೇಳಿಕೆ ಬಗ್ಗೆ ಮೋದಿ ಮೌನವೇಕೆ ಎಂದ ಜೈರಾಮ್ ರಮೇಶ್

ಭಾರತ-ಪಾಕಿಸ್ತಾನ ಸಂಘರ್ಷದ ನಡುವೆ  ಟ್ರಂಪ್ ಮಧ್ಯಸ್ಥಿಕೆ ಹೇಳಿಕೆಗಳ ಬಗ್ಗೆ ಮೌನವಾಗಿರುವುದಕ್ಕೆ ಜೈರಾಮ್ ರಮೇಶ್ ಪ್ರಧಾನಿ ಮೋದಿಯವರನ್ನು ಟೀಕಿಸಿದ್ದಾರೆ. ಮಿಲಿಟರಿ ಕಾರ್ಯಾಚರಣೆಗಳ ಕುರಿತು ಸಿಡಿಎಸ್ ಚೌಹಾಣ್ ಅವರ ಬಹಿರಂಗಪಡಿಸುವಿಕೆಯ ನಂತರ ವಿಶೇಷ ಸಂಸತ್ ಅಧಿವೇಶನದ ಬೇಡಿಕೆಯನ್ನು ಅವರು ಪುನರುಚ್ಚರಿಸಿದರು.

Read Full Story

06:07 PM (IST) Jun 01

ಹಟ್ಟಿ ಚಿನ್ನದ ಗಣಿಯಲ್ಲಿ ದುರಂತ - 2800 ಅಡಿ ಆಳದಿಂದ ಕಾರ್ಮಿಕನ ಮೃತದೇಹ ಹೊರತೆಗೆದ ಸಿಬ್ಬಂದಿ!

ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ಮೈನಿಂಗ್ ವೇಳೆ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. 2800 ಅಡಿ ಆಳದಿಂದ ಮೃತದೇಹವನ್ನು ಹೊರತೆಗೆಯಲಾಗಿದೆ. ಕಾರ್ಮಿಕ ಸಂಘಟನೆಗಳು ಒಂದು ಕೋಟಿ ಪರಿಹಾರಕ್ಕೆ ಆಗ್ರಹಿಸಿವೆ.
Read Full Story

05:34 PM (IST) Jun 01

ಹೇಮಾವತಿ ಲಿಂಕ್ ಕೆನಾಲ್ ವಿರೋಧ - ನನ್ನ ಮಕ್ಕಳ ಮೇಲಾಣೆ ರಾಜಕೀಯ ಮಾಡ್ತಿಲ್ಲ; ಶಾಸಕ ಸುರೇಶ್ ಗೌಡ

ತುಮಕೂರು ಜಿಲ್ಲೆಗೆ ನೀರಿನ ಹಂಚಿಕೆ ವಿಚಾರದಲ್ಲಿ ಹೇಮಾವತಿ ಲಿಂಕ್ ಕಾಲುವೆ ಯೋಜನೆಯನ್ನು ಶಾಸಕ ಬಿ. ಸುರೇಶ್‌ಗೌಡ ವಿರೋಧಿಸಿದ್ದಾರೆ. ರಾಮನಗರಕ್ಕೆ ನೀರು ಹರಿಸಿದರೆ ತುಮಕೂರಿಗೆ ಒಂದು ಹನಿಯೂ ನೀರು ಸಿಗುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಐಐಎಸ್‌ಸಿ ತಜ್ಞರಿಂದ ಸಮೀಕ್ಷೆ ನಡೆಸಿ.

Read Full Story

05:34 PM (IST) Jun 01

ಮುಲ್ಲಪೆರಿಯಾರ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಟ್ಟ ಕೇರಳ

ತಮಿಳುನಾಡು ಕೃಷಿಗಾಗಿ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರು ಪಡೆಯಲು ಪ್ರಾರಂಭಿಸಿದೆ. 120 ದಿನಗಳವರೆಗೆ ಸೆಕೆಂಡಿಗೆ 300 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ಐದು ಜಿಲ್ಲೆಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲಿದೆ.
Read Full Story

05:30 PM (IST) Jun 01

IPL 2025 ಕ್ವಾಲಿಫೈಯರ್-2 - ಇಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದೋರೇ ಬಾಸ್!

ಐಪಿಎಲ್ 2025ರ ಎರಡನೇ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಫೈನಲ್ ಪ್ರವೇಶಕ್ಕಾಗಿ ಹಣಾಹಣಿ ನಡೆಸಲಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟಾಸ್ ಮಹತ್ವದ ಪಾತ್ರ ವಹಿಸಲಿದೆ.
Read Full Story

05:10 PM (IST) Jun 01

ಮಳೆಯಲ್ಲಿ ಮೈ ಮರೆತ ಹೊಯ್ಸಳ ಬೆಡಗಿ… ಮುಂಗಾರು ಮಳೆ 3 ಗೆ ರೆಡೀನಾ?

ಚಂದನವನದ ಸುಂದರಿ ಅಮೃತಾ ಅಯ್ಯಂಗಾರ್ ಮಳೆಯಲ್ಲಿ ನೆನೆಯುತ್ತಾ ಸಖತ್ ಆಗಿ ಎಂಜಾಯ್ ಮಾಡ್ತಿದ್ದಾರೆ. ಮುದ್ದಾದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

Read Full Story

05:01 PM (IST) Jun 01

ಕ್ವಾಲಿಫೈಯರ್-2 ಪಂದ್ಯ ಮಳೆಯಿಂದ ರದ್ದಾದ್ರೆ ಫೈನಲ್ ಟಿಕೆಟ್ ಯಾರಿಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಐಪಿಎಲ್ 2024ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮಳೆ ಅಡ್ಡಿಯಾದರೆ ಪಂಜಾಬ್ ಫೈನಲ್‌ಗೆ ಅರ್ಹತೆ ಪಡೆಯಲಿದೆ.
Read Full Story

04:52 PM (IST) Jun 01

ಈ ಯೂನಿವರ್ಸಿಟಿಯಲ್ಲಿ ಉಪನ್ಯಾಸಕ ಮಾತ್ರವಲ್ಲ ಕ್ಯಾಂಟೀನ್ ಕೆಲಸಕ್ಕೂ ಡಾಕ್ಟರೇಟ್ ಆಗಿರ್ಬೇಕು

ಉಪನ್ಯಾಸಕರಾಗಿ ಸೇವೆ ಆರಂಭಿಸಬೇಕಾದರೆ ಪಿಹೆಚ್‌ಡಿ ಅತ್ಯವಶ್ಯಕ. ಆದರೆ ಈ ವಿಶ್ವವಿದ್ಯಾಲದಲ್ಲಿ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಬೇಕಾದರೂ ಪಿಹೆಚ್‌ಡಿ, ಡಾಕ್ಟರೇಟ್ ಪಡೆದಿರಬೇಕು. ಇದೀಗ ನೇಮಕಾತಿ ಕುರಿತು ಯೂನಿವರ್ಸಿಟಿ ಪ್ರಕಟಿಸಿದ ಜಾಹೀರಾತು ಭಾರಿ ಚರ್ಚೆಗೆ ಗ್ರಾಸವಾಗಿದೆ.

Read Full Story

04:10 PM (IST) Jun 01

ದಕ್ಷಿಣ ಭಾರತದ ಮೊದಲ ಎನ್‌ಎಸ್ಐಸಿ ಶಾಖೆ ಶೀಘ್ರವೇ ಬೆಂಗಳೂರಿನಲ್ಲಿ ಆರಂಭ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉದ್ಯೋಗಿಗಳ ಕೌಶಲ ಅಭಿವೃದ್ಧಿಗೆ ಪೀಣ್ಯದಲ್ಲಿ ಎನ್‌ಎಸ್‌ಐಸಿ ಶಾಖೆ ಆರಂಭವಾಗಲಿದೆ. ದಕ್ಷಿಣ ಭಾರತದ ಮೊದಲ  ಶಾಖೆ ಇದಾಗಿದ್ದು, ಕೆಲಸ ನಿರ್ವಹಣೆ, ಕೈಗಾರಿಕೆ ನಿರ್ವಹಣೆ, ಮಾರುಕಟ್ಟೆ ವಿಸ್ತರಣೆ ಮತ್ತು ತಂತ್ರಜ್ಞಾನ ಅಳವಡಿಕೆಯಂತಹ ಕೌಶಲ ತರಬೇತಿ ನೀಡಲಾಗುವುದು.

Read Full Story

04:05 PM (IST) Jun 01

ಚೀನೀಯರ ವೀಸಾ ರದ್ದು ಮಾಡ್ತಿರುವ ಟ್ರಂಪ್ - ಚೀನಾ ಅಧ್ಯಕ್ಷರ ಮಗಳಿಗೂ ಗಡೀಪಾರು ಭೀತಿ?

ಅಮೆರಿಕದಲ್ಲಿ ಚೀನಾ ಸೇರಿದಂತೆ ಹಲವು ದೇಶಗಳ ವಿದ್ಯಾರ್ಥಿಗಳ ವೀಸಾ ರದ್ದತಿಯ ನಡುವೆ, ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಪುತ್ರಿ ಕ್ಸಿ ಮಿಂಗ್ಜೆ ಅವರನ್ನು ಗಡೀಪಾರು ಮಾಡಬೇಕೆಂಬ ಕೂಗು ಕೇಳಿಬಂದಿದೆ.

Read Full Story

03:56 PM (IST) Jun 01

ಬಾಯ್‌ಫ್ರೆಂಡ್ ಗೆದ್ದ 30 ಕೋಟಿ ಲಾಟರಿ ಹಣ ಪಡೆದು ಮತ್ತೊಬ್ಬನ ಜೊತೆ ಪರಾರಿ

30 ಕೋಟಿ ರೂಪಾಯಿ ಲಾಟರಿ ಜಾಕ‌್‌ಪಾಟ್ ಗೆದ್ದ ಬಾಯ್‌ಫ್ರೆಂಡ್ ಇದೀಗ ಬಹುಮಾನ ಮೊತ್ತವೂ ಇಲ್ಲ, ತನ್ನ ಜೊತೆಗೆ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ ಗರ್ಲ್‌ಫ್ರೆಂಡ್ ಕೂಡ ಇಲ್ಲ. ಈತನ ಪರಿಸ್ಥಿತಿ ಯಾರಿಗೂ ಬೇಡ.

Read Full Story

03:45 PM (IST) Jun 01

'ಈ ಟೀಂ ಕಪ್ ಗೆಲ್ಲುತ್ತೆ' - ಐಪಿಎಲ್ ಫೈನಲ್‌ಗೂ ಮುನ್ನ ಭವಿಷ್ಯ ನುಡಿದ ಡೇವಿಡ್ ವಾರ್ನರ್!

ಬೆಂಗಳೂರು: 2025ರ ಐಪಿಎಲ್ ಟೂರ್ನಿಯಲ್ಲಿ ಇದೀಗ  ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಗಳಷ್ಟೇ ಬಾಕಿ ಉಳಿದಿದೆ. ಹೀಗಿರುವಾಗಲೇ ಆಸೀಸ್ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಈ ಸಲ ಐಪಿಎಲ್ ಕಪ್ ಗೆಲ್ಲೋದು ಯಾರು ಎನ್ನುವ ಬಗ್ಗ ಭವಿಷ್ಯ ನುಡಿದಿದ್ದಾರೆ.

Read Full Story

03:33 PM (IST) Jun 01

ಬೆಂಗಳೂರು ಉದ್ಯಮಿ ಮನೆಯಲ್ಲಿ 2 ಕೆಜಿ ಚಿನ್ನ, ₹10 ಲಕ್ಷ ನಗದು ಕದ್ದ ನೇಪಾಳ ಸೆಕ್ಯೂರಿಟಿ ಗಾರ್ಡ್!

ಬೆಂಗಳೂರಿನ ಶಾಸ್ತ್ರೀನಗರದಲ್ಲಿ ಬಿಜೆಪಿ ಮುಖಂಡ ರಮೇಶ್ ಬಾಬು ಅವರ ಮನೆಯಲ್ಲಿ ನೇಪಾಳಿ ಸೆಕ್ಯೂರಿಟಿ ಗಾರ್ಡ್ ದಂಪತಿ 2 ಕೆಜಿ ಚಿನ್ನ, ₹10 ಲಕ್ಷ ಹಾಗೂ ಲೈಸೆನ್ಸ್ ಗನ್ ಕದ್ದೊಯ್ದಿದ್ದಾರೆ. ಕುಟುಂಬ ತಿರುಪತಿಗೆ ಹೋದಾಗ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

03:33 PM (IST) Jun 01

ನೈಜೀರಿಯಾ ಪ್ರವಾಹ - ಸಾವಿನ ಸಂಖ್ಯೆ 151ಕ್ಕೆ ಏರಿಕೆ

ನೈಜೀರಿಯಾದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ 151 ಜನರು ಸಾವನ್ನಪ್ಪಿದ್ದಾರೆ ಮತ್ತು 3000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಮುಕ್ವಾದಲ್ಲಿ ಉಂಟಾದ ಪ್ರವಾಹವು ವ್ಯಾಪಾರ ಮತ್ತು ಸಾರಿಗೆಗೆ ಅಡ್ಡಿಯುಂಟುಮಾಡಿದೆ. ಅಧ್ಯಕ್ಷರು ಪರಿಹಾರ ಕಾರ್ಯಗಳನ್ನು ಘೋಷಿಸಿದ್ದಾರೆ.
Read Full Story

03:26 PM (IST) Jun 01

ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ವಂಚನೆ ಕೇಸ್; ಮಹಿಳೆಯಿಂದ ವಂಚನೆ ಆರೋಪದ ಮೇಲೆ FIR

ಆದರೆ ಕೆಲ ದಿನಗಳ ಕಾಲ ಸೂರಪ್ಪ ಬಾಬು ಸಂಪರ್ಕಕ್ಕೆ ಸಿಗಲಿಲ್ಲ. ಈ ವೇಳೆ ವಿಚಾರಿಸಿದಾಗ ಸೂರಪ್ಪ ಬಾಬು ಶಿವರಾಜ್ ಕುಮಾರ್ ಜೊತೆ ಫಿಲ್ಮ್‌ ಮಾಡುತ್ತಿಲ್ಲ ಅಂತ ಗೊತ್ತಾಗಿದೆ. ಇದರಿಂದ ಹಣ ವಾಪಸ್ ಕೇಳಿದಾಗ 25 ಲಕ್ಷ ರೂ. ವಾಪಸ್ ನೀಡಿದ್ದರು ಸೂರಪ್ಪ ಬಾಬು ಎನ್ನಲಾಗಿದ್ದು, ಉಳಿದ ಹಣ ಕೇಳಿದಾಗ ಬೆದರಿಕೆ..

Read Full Story

02:38 PM (IST) Jun 01

ಪೊಲೀಸ್ ಬೇಡವೆಂದರೂ ಹುಬ್ಬಳ್ಳಿ ಗಲಭೆ ವಾಪಸ್ - ಸರ್ಕಾರದ ಕ್ರಮಕ್ಕೆ ಹೈಕೋರ್ಟ್‌ ತಡೆ

ಹುಬ್ಬಳ್ಳಿ ಗಲಭೆ ಪ್ರಕರಣ ಸೇರಿದಂತೆ 43 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ರಾಜಕೀಯ ಒತ್ತಡಕ್ಕೆ ಮಣಿದು ಸರ್ಕಾರ ಕಾನೂನುಬಾಹಿರ ಕ್ರಮ ಕೈಗೊಂಡಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
Read Full Story

01:58 PM (IST) Jun 01

ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಟ್ರ್ಯಾಕ್ ರೆಕಾರ್ಡ್ ಹೇಗಿದೆ?

ಐಪಿಎಲ್ 2025ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ. ಗೆದ್ದ ತಂಡ ಫೈನಲ್‌ನಲ್ಲಿ ಆರ್‌ಸಿಬಿ ಎದುರಿಸಲಿದೆ. ಮುಂಬೈ ತಂಡಕ್ಕೆ ಅಹಮದಾಬಾದ್‌ನಲ್ಲಿ ಸವಾಲು ಎದುರಾಗಲಿದೆ.
Read Full Story

01:09 PM (IST) Jun 01

ಗೆಳತಿ ಬ್ಯಾಂಕ್‌ಗೆ ₹30 ಕೋಟಿ ಹಣ ಹಾಕಿದ ಗೆಳೆಯ; ಮತ್ತೊಬ್ಬನೊಂದಿಗೆ ಓಡಿಹೋದ ಯುವತಿ!

ಗೆಳತಿಯ ಬ್ಯಾಂಕ್ ಅಕೌಂಟ್‌ಗೆ ಹಾಕಿಸಲಾಗಿದ್ದ ಲಾಟರಿ ಹಣ ಹಾಕಿದ ಯುವಕನಿಗೆ ಮೋಸ. 30 ಕೋಟಿ ರೂ. ಲಾಟರಿ ಹಣದೊಂದಿಗೆ ಮತ್ತೊಬ್ಬನೊಂದಿಗೆ ಪರಾರಿ.

Read Full Story

01:05 PM (IST) Jun 01

ಪ್ರೊ ಕಬಡ್ಡಿ ಹರಾಜು - ಶಾದ್ಲೂ, ದೇವಾಂಕ್‌ಗೆ ತಲಾ 2.2 ಕೋಟಿ, ಪ್ರದೀಪ್ ನರ್ವಾಲ್ ಅನ್‌ಸೋಲ್ಡ್

ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಇರಾನ್‌ನ ಮೊಹಮ್ಮದ್ ರಜಾ ಶಾದ್ಲೂ ಮತ್ತು ಭಾರತದ ದೇವಾಂಕ್ ದಲಾಲ್ ಅತ್ಯಧಿಕ ಬೆಲೆಗೆ ಮಾರಾಟವಾಗಿದ್ದಾರೆ. ಶಾದ್ಲೂ 2.23 ಕೋಟಿಗೆ ಗುಜರಾತ್ ಜೈಂಟ್ಸ್ ತಂಡ ಸೇರಿದರೆ, ದೇವಾಂಕ್ 2.205 ಕೋಟಿಗೆ ಬೆಂಗಾಲ್ ವಾರಿಯರ್ಸ್ ಪಾಲಾಗಿದ್ದಾರೆ.
Read Full Story

12:51 PM (IST) Jun 01

ಫೋನ್‌ನಲ್ಲಿ ಮಾತನಾಡ್ತಾ ನವಜಾತ ಶಿಶುವಿನ ಹೆಬ್ಬೆರಳು ಕತ್ತರಿಸಿದ ನರ್ಸ್‌!

ವೆಲ್ಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್‌ನ ನಿರ್ಲಕ್ಷ್ಯದಿಂದ ನವಜಾತ ಶಿಶುವಿನ ಹೆಬ್ಬೆರಳು ಕತ್ತರಿಸಲ್ಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಟೇಪ್ ತೆಗೆಯುವಾಗ ಕತ್ತರಿ ಬಳಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಮಗುವನ್ನು ಚೆನ್ನೈನ ಸ್ಟಾನ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story

11:55 AM (IST) Jun 01

ಇವತ್ತಿನಲ್ಲಿ ಕ್ರಿಕೆಟ್‌ನಲ್ಲಿ ಹೊಸ ನಿಯಮಗಳು ಜಾರಿ! ಈ ರೂಲ್ಸ್ ಗೊತ್ತಿರಲಿ

ಜೂನ್ 1 ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ನಿಯಮಗಳು ಜಾರಿಯಾಗಲಿವೆ. ಏಕದಿನ ಕ್ರಿಕೆಟ್‌ನಲ್ಲಿ ಚೆಂಡಿನ ಬಳಕೆ, ಕನ್ಕಶನ್ ಸಬ್‌ಸ್ಟಿಟ್ಯೂಟ್ ಆಟಗಾರರ ಆಯ್ಕೆ, ಬೌಂಡರಿ ಲೈನ್ ಮತ್ತು ಡಿಆರ್‌ಎಸ್ ನಿಯಮಗಳಲ್ಲಿ ಬದಲಾವಣೆಗಳನ್ನು ಐಸಿಸಿ ಜಾರಿಗೊಳಿಸಿದೆ.
Read Full Story

11:37 AM (IST) Jun 01

16 ಸಾವಿರ ಟನ್‌ ತೂಕ ಹೊತ್ತೊಯ್ಯಬಲ್ಲ ಬಾಹುಬಲಿ ಡ್ರೋನ್‌ ಸಿದ್ಧಪಡಿಸಿದ ಚೀನಾ

ಚೀನಾ 16,000 ಟನ್ ತೂಕ ಹೊತ್ತೊಯ್ಯಬಲ್ಲ ಬೃಹತ್ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದೆ.

Read Full Story

11:31 AM (IST) Jun 01

ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಸೇವಿಸಿ ಉಗಿದರೆ ಬೀಳುತ್ತೆ ದಂಡ - 3 ವರ್ಷ ಜೈಲು

ತಿದ್ದುಪಡಿ ಕಾಯ್ದೆಯಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವಷ್ಟೇ ಅಲ್ಲದೆ ಹೊಗೆ ರಹಿತ ತಂಬಾಕು ಪದಾರ್ಥಗಳನ್ನು ಸೇವಿಸಿ, ಉಗಿಯುವುದನ್ನೂ ನಿಷೇಧಿಸಲಾಗಿದೆ.

Read Full Story

11:27 AM (IST) Jun 01

ಇಂದು ಮುಂಬೈ vs ಪಂಜಾಬ್‌ ಹೈವೋಲ್ಟೇಜ್ ಮ್ಯಾಚ್ - ಗೆದ್ರೆ ಫೈನಲ್‌ಗೆ, ಸೋತ್ರೆ ಮನೆಗೆ!

ಐಪಿಎಲ್ 2025ರ ಫೈನಲ್‌ನಲ್ಲಿ ಆರ್‌ಸಿಬಿ ಎದುರಾಳಿ ಯಾರೆಂಬುದು ಭಾನುವಾರ ನಿರ್ಧಾರವಾಗಲಿದೆ. ಕ್ವಾಲಿಫೈಯರ್ -2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಮುಖಾಮುಖಿಯಾಗಲಿವೆ. ಗೆದ್ದ ತಂಡ ಜೂನ್ 3 ರಂದು ಆರ್‌ಸಿಬಿ ವಿರುದ್ಧ ಫೈನಲ್‌ನಲ್ಲಿ ಸೆಣಸಲಿದೆ.

Read Full Story

More Trending News