ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ವಿಧಿವಶರಾಗಿದ್ದಾರೆ. ಇಂದು ಚೆನ್ನಮ್ಮ ಪಾರ್ಥೀವ ಶರೀರ ಹಾಸನದ ಹೊಳೆನರಸೀಪುರ ತಲುಪಿದ್ದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಳೆ ಕಾರಣದಿಂದ ಸದ್ಯ ಹೊಳೆನರಸಿಪುರದಲ್ಲಿರುವ ರೇವಣ್ಣ ಮನೆಯೊಳಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 6.30ರ ನಂತರ ಮನೆ ಹೊರಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆ ವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

10:03 PM (IST) Jul 20
ಬರೋಬ್ಬರಿ 58 ನಟ-ನಟಿಯರು ಹಾಗೂ 14 ಅನುಭವಿ ನಿರ್ದೇಶಕರ ಬೃಹತ್ ಸೈನ್ಯವನ್ನೇ ಕಟ್ಟಿಕೊಂಡು, ಸಂಪೂರ್ಣ ಸಿನಿಮಾವನ್ನು ಕೇವಲ ಒಂದೇ ದಿನದಲ್ಲಿ (24 ಗಂಟೆಗಳಲ್ಲಿ) ಶೂಟಿಂಗ್ ಮುಗಿಸಿ ಬಿಡುಗಡೆ ಮಾಡಲಾಗಿತ್ತು. ಈ ಐತಿಹಾಸಿಕ ಪವಾಡದ ನಡುವೆ ಪ್ರಮುಖ ಪಾತ್ರದಲ್ಲಿ ಕನ್ನಡಿಗನೊಬ್ಬ ಮಿಂಚಿ, ಭಾರತೀಯ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿದ್ದು ಈ ಕಥೆಯ ಅತ್ಯಂತ ಕೌತುಕದ ವಿಷಯ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
09:30 PM (IST) Jul 20
ಕಿರುತೆರೆಯಿಂದ ಬೆಳ್ಳಿತೆರೆಗೆ ಯಶಸ್ವಿಯಾಗಿ ಹೆಜ್ಜೆ ಇಟ್ಟಿರುವ ನಟಿ ಸಂಪದ ಹುಲಿವನ, ಅವಕಾಶಗಳಿಗಾಗಿ ಆತುರಪಡುವ ಬದಲು ಉತ್ತಮ ಕಥೆ ಮತ್ತು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.
09:21 PM (IST) Jul 20
ಇತ್ತೀಚಿನ ಸರಣಿ ಸೋಲುಗಳ ನಂತರ, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಯುವ ಭಾರತ ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ವಿಶೇಷ ಬ್ಯಾಟಿಂಗ್ ಸ್ಟ್ಯಾಟರ್ಜಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
08:41 PM (IST) Jul 20
V Nagendra Prasad: ಸಿನಿಮಾ ಥಿಯೇಟರ್ನಿಂದ ಬಂದ ಬಳಿಕವೂ ಅದರ ಹಾಡುಗಳು ವರ್ಷಗಳ ಕಾಲ ಜನಮನದಲ್ಲಿ ಉಳಿಯುತ್ತವೆ. ಕಾಲ ಕಳೆದರೂ ಅವುಗಳನ್ನು ಗುನುಗುತ್ತೇವೆ, ಸಂಭಾಷಣೆಗಳಲ್ಲಿ ಉಲ್ಲೇಖಿಸುತ್ತೇವೆ.
08:03 PM (IST) Jul 20
Toxic Second Song: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಮೊದಲ ಸಿಂಗಲ್ 'ತಬಾಹಿ' ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ.
08:02 PM (IST) Jul 20
ಹರಿಯಾಣದ ಜೀಂದ್-ಸೋನಿಪತ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಭಾರತದ ಮೊದಲ ಪರಿಸರ ಸ್ನೇಹಿ ಹೈಡ್ರೋಜನ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ದಾಳಿಯಿಂದ ರೈಲಿನ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿ ಕಾಲ್ತುಳಿತದ ವಾತಾವರಣ ನಿರ್ಮಾಣವಾಗಿದೆ.
07:23 PM (IST) Jul 20
ಖ್ಯಾತ ಕ್ರಿಕೆಟಿಗನ ವಿರುದ್ಧ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್ಮೇಲ್ ಆರೋಪ ಮಾಡಿದ್ದಾರೆ. ಈ ಗಂಭೀರ ಪ್ರಕರಣದಲ್ಲಿ ಹೈಕೋರ್ಟ್ ಆ ಕ್ರಿಕೆಟಿಗನ ಬಂಧನಕ್ಕೆ ಆದೇಶಿಸಿದ್ದು, ಕ್ರೀಡಾಲೋಕದಲ್ಲಿ ಸಂಚಲನ ಸೃಷ್ಟಿಯಾಗಿದೆ.
07:21 PM (IST) Jul 20
06:57 PM (IST) Jul 20
ಬೆಂಗಳೂರಿನಲ್ಲಿ ಖಾಸಗಿ ಕಾರುಗಳ ಸಂಖ್ಯೆ ಐತಿಹಾಸಿಕವಾಗಿ 25 ಲಕ್ಷದ ಗಡಿ ದಾಟಿದ್ದು, ನಗರದ ಒಟ್ಟು ವಾಹನಗಳ ಸಂಖ್ಯೆ 1.28 ಕೋಟಿಗೆ ತಲುಪಿದೆ. ಸಾರ್ವಜನಿಕ ಸಾರಿಗೆಯ ಕೊರತೆ, ಮೆಟ್ರೋ ವಿಳಂಬ ಮತ್ತು ಬಿಎಂಟಿಸಿ ಬಸ್ಗಳ ಸಂಖ್ಯೆ ಇಳಿಕೆಯು ಈ ಅಪಾಯಕಾರಿ ಪ್ರವೃತ್ತಿಗೆ ಮುಖ್ಯ ಕಾರಣವೆಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸುರಂಗ ರಸ್ತೆಗಳ ಬದಲು ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದೇ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ.
06:50 PM (IST) Jul 20
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನಡುವೆ, ಕಾಕ್ರೋಚ್ ಜನತಾ ಪಕ್ಷದ ನಿಯೋಗವು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ 3 ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
06:41 PM (IST) Jul 20
Actor Ram Charan Teja: ನಟ ರಾಮ್ ಚರಣ್ ತೇಜ ಮನೆಯಲ್ಲಿ ಎಲ್ಲರೂ ಕಲಾವಿದರು, ಉದ್ಯಮಿಗಳೇ. ಈಗ ಅವರು ತಂದೆ ಚಿರಂಜೀವಿ ಜೊತೆ ಉಪಾಸನಾ ಅವರು ಕ್ಲೋಸ್ ಎಂದು ಹೇಳಿಕೊಂಡಿದ್ದಾರೆ. ಇದು ತುಂಬ ಡೇಂಜರ್ ಎಂದು ಅವರು ಹೇಳಿದ್ದಾರೆ.
06:18 PM (IST) Jul 20
06:13 PM (IST) Jul 20
ದುನಿಯಾ ವಿಜಯ್ ಅವರ ಮೂರನೇ ನಿರ್ದೇಶನದ ಸಿನಿಮಾ 'ಸಿಟಿ ಲೈಟ್ಸ್' ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಪ್ರಚಾರ ಕಾರ್ಯಗಳು ಜೋರಾಗಿವೆ. ಈಗ ಚಿತ್ರದ 'ಕಂದಮ್ಮ ಕಂದಮ್ಮ..' ವಿಡಿಯೊ ಹಾಡು ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
05:52 PM (IST) Jul 20
ಸತತ ಸೋಲುಗಳಿಂದ ಕಂಗೆಟ್ಟಿರುವ ಟೀಂ ಇಂಡಿಯಾ, ಶ್ರೇಯಸ್ ನಾಯಕತ್ವದಲ್ಲಿ ಇದೀಗ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಸಜ್ಜಾಗಿದೆ. ಯುವ ಆಟಗಾರರಿಂದ ಕೂಡಿರುವ ಈ ತಂಡಕ್ಕೆ, ಗೆಲುವಿನ ಹಾದಿಗೆ ಮರಳಲು ಇದೊಂದು ಮಹತ್ವದ ಅವಕಾಶವಾಗಿದ್ದು, ಸರಣಿಯ ವೇಳಾಪಟ್ಟಿ ಮತ್ತು ನೇರಪ್ರಸಾರದ ವಿವರ ಇಲ್ಲಿದೆ.
05:40 PM (IST) Jul 20
05:36 PM (IST) Jul 20
Chaddi Baddy Song: ಸ್ನೇಹಿತರ ನಡುವಿನ ಬಾಂಧವ್ಯವನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಡುವ 'ಚಡ್ಡಿ ಬಡ್ಡಿ' ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
05:23 PM (IST) Jul 20
05:11 PM (IST) Jul 20
04:52 PM (IST) Jul 20
ಸಿಟಿಜನ್ಸ್ ಫಾರ್ ಜಸ್ಟಿಸ್ ಆಂಡ್ ಪೀಸ್ ಸಂಘಟನೆಯು ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಸಂಸತ್ ಮಾರ್ಚ್ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗೆ ಕಾರಣವಾಯಿತು. ಈ ಮಧ್ಯ ರಂಗಪ್ರವೇಶಿಸಿದ ಸರ್ಕಾರ ಹೇಳಿದ್ದೇನು ಗೊತ್ತಾ?
04:51 PM (IST) Jul 20
OTT release Today: ಈ ವಾರ ನೆಟ್ಫ್ಲಿಕ್ಸ್, ಪ್ರೈಮ್ ವಿಡಿಯೋ, ಜಿಯೋ-ಹಾಟ್ಸ್ಟಾರ್, ಸೋನಿಲಿವ್ ಮತ್ತು ಆ್ಯಪಲ್ ಟಿವಿ+ ನಂತಹ ಪ್ರಮುಖ ಓಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಹಲವು ಹೊಸ ಸಿನಿಮಾಗಳು ಮತ್ತು ವೆಬ್ ಸೀರಿಸ್ಗಳು ಬಿಡುಗಡೆಯಾಗುತ್ತಿವೆ. ಅವುಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
04:41 PM (IST) Jul 20
04:30 PM (IST) Jul 20
ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳ ಸರಮಾಲೆ ನಿರ್ಮಿಸಿದ ಬಳಿಕ ಇದೀಗ ಡಿಜಿಟಲ್ ಲೋಕದಲ್ಲೂ ಮತ್ತೊಂದು ಅಪರೂಪದ ಮೈಲಿಗಲ್ಲು ಸಾಧಿಸಿದೆ.
03:51 PM (IST) Jul 20
01:54 PM (IST) Jul 20
01:46 PM (IST) Jul 20
ಬೇರೆಯವರ ವೀಕ್ನೆಸ್ ಅನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಸುಲಿಗೆ ಮಾಡ್ತಿರೋರಿಗೇನೂ ಕಮ್ಮಿ ಇಲ್ಲ. ಅದಕ್ಕೆ ಹೇಳೋದು ಯುವಕರು ಸ್ವಲ್ಪ ಎಚ್ಚರದಿಂದ ಇರಬೇಕು ಅಂತಾ. ಅಂತೆಯೇ ಬೆಂಗಳೂರಿನಲ್ಲಿ ಸೌಂದರ್ಯದ ಆಸೆ ತೋರಿಸಿ, ಪ್ರೀತಿಯ ಬಲೆ ಬೀಸಿ ನಿಮ್ಮ ಇಡೀ ಬದುಕನ್ನೇ ಬೀದಿಗೆ ತರುವ ಕಿರಾತಕರ ಗ್ಯಾಂಗ್ವೊಂದು ಸಕ್ರಿಯವಾಗಿದೆ, ಎಚ್ಚರ!
12:44 PM (IST) Jul 20
ಅಪರಿಚಿತ ಸ್ಥಳಗಳಿಗೆ ಹೋಗುವಾಗ ದಾರಿದೀಪವಾಗುವುದು ಗೂಗಲ್ ಮ್ಯಾಪ್. ಆದರೆ, ಅದೇ ಮ್ಯಾಪ್ ಕೆಲವೊಮ್ಮೆ ನಮ್ಮನ್ನು ಅಪಾಯಕ್ಕೆ ತಳ್ಳಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಅಷ್ಟಕ್ಕೂ ಆಗಿದ್ದೇನು? ಸ್ಟೋರಿ ಓದಿ.
12:43 PM (IST) Jul 20
12:26 PM (IST) Jul 20
12:25 PM (IST) Jul 20
12:07 PM (IST) Jul 20
ಮಂಗಳೂರಿನ ಪ್ರೀಮಿಯರ್ ಶೋನಲ್ಲಿ ಭರ್ಜರಿ ಸಕ್ಸಸ್ ಕಂಡಿರುವ 'ಕರಾವಳಿ' ಚಿತ್ರ ಜುಲೈ 24ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಮತ್ತು ಮಿತ್ರ ಅವರ ತ್ರಿವೇಣಿ ಸಂಗಮವನ್ನು ದೊಡ್ಡ ಪರದೆಯ ಮೇಲೆ ನೋಡಲು ಸಿನಿರಸಿಕರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
12:02 PM (IST) Jul 20
ವಿಶ್ವವಿಖ್ಯಾತ ಹಂಪಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು, ಹಂಪಿ ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆ ಹೊಸ ಯೋಜನೆ ಜಾರಿಗೆ ತಂದಿದೆ. ಪ್ರವಾಸಿಗರು ಬಳಸಿದ ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ನಿಗದಿತ ಯಂತ್ರದಲ್ಲಿ ಹಾಕಿದರೆ, ಪ್ರತಿ ಬಾಟಲಿಗೆ ಹಣ ಪಡೆಯಬಹುದು. ಈ ಕ್ರಮವು ಹಂಪಿಯಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ಪರಿಸರ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ.
11:46 AM (IST) Jul 20
11:34 AM (IST) Jul 20
11:19 AM (IST) Jul 20
ಗೀತ ರಚನೆಕಾರ ಕವಿರಾಜ್ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ, 15 ವರ್ಷಗಳ ಹಿಂದೆ ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿದಾಗ ಸಿಕ್ಕ ಪ್ರತಿಕ್ರಿಯೆಗೂ, ಇಂದು ಸೋನಮ್ ವಾಂಗ್ಚುಕ್ ಹೋರಾಟ ಬೆಂಬಲಿಸಿದಾಗ ಸಿಗುತ್ತಿರುವ ದ್ವೇಷದ ಪ್ರತಿಕ್ರಿಯೆಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ.
11:01 AM (IST) Jul 20
'ನನ್ನ ಖಾಸಗಿತನಕ್ಕೆ ಧಕ್ಕೆ ತರುತ್ತಿರುವ ಈ ಕಿಡಿಗೇಡಿಗಳನ್ನು ಸುಮ್ಮನೆ ಬಿಡಬಾರದು" ಎಂದು ಖಡಕ್ ಆಗಿ ಹೇಳಿದ್ದಾರೆ. ಸದ್ಯ ಸಂಜಯ್ ನಗರ ಪೊಲೀಸರು FIR ದಾಖಲಿಸಿಕೊಂಡಿದ್ದು, ಸೈಬರ್ ಕ್ರೈಮ್ ತಜ್ಞರ ನೆರವಿನೊಂದಿಗೆ ಈ 'ನಕಲಿ ಫ್ರೊಫೈಲ್' ಖದೀಮರ ಜಾಲವನ್ನು ಭೇದಿಸಲು ಸಜ್ಜಾಗಿದ್ದಾರೆ ಪೊಲೀಸರು.
10:43 AM (IST) Jul 20
ದಾಂಡೇಲಿಯಲ್ಲಿ ಜಿಪ್ ಲೈನ್ ಆಡುವಾಗ ತಾಂತ್ರಿಕ ದೋಷದಿಂದ 40 ಅಡಿ ಎತ್ತರದಿಂದ ಬಿದ್ದು ವಿಜಯಪುರದ ಯುವಕ ಕುಬೇರ ಸುರಪುರ ಗಂಭೀರವಾಗಿ ಗಾಯಗೊಂಡಿದ್ದಾರೆ. ಎರಡೂ ಕೈ-ಕಾಲುಗಳ ಮೂಳೆಗಳು ಮುರಿದು ಹಾಸಿಗೆ ಹಿಡಿದಿರುವ ಅವರ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ್ದ ರೆಸಾರ್ಟ್, ಇದೀಗ ಸ್ಪಂದಿಸುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
09:33 AM (IST) Jul 20
ವೈರಲ್ ಆಯ್ತು ರೋಹಿತ್-ಗಂಭೀರ್ ಮಾತುಕತೆಯ ವಿಡಿಯೋ! ಇಬ್ಬರ ನಡುವೆ ವೈಮನಸ್ಸು ಎಂಬ ಸುದ್ದಿಗೆ ಲಾರ್ಡ್ಸ್ ಮೈದಾನದಲ್ಲೇ ಸಿಕ್ಕಿತು ಉತ್ತರ. ರೋಹಿತ್ ಶತಕದ ಸಂಭ್ರಮದ ನಡುವೆ ಕೋಚ್ ಜೊತೆಗಿನ ಈ ವಿಡಿಯೋ ಈಗ ಸಖತ್ ಸೌಂಡ್ ಮಾಡ್ತಿದೆ
08:54 AM (IST) Jul 20
08:23 AM (IST) Jul 20
08:23 AM (IST) Jul 20
ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ ಹಿನ್ನಲೆಯಲ್ಲಿ ಹೊಳೆನರಸೀಪುರದಲ್ಲಿ ಸ್ವಯಂಪ್ರೇರಿತ ಬಂದ್ ನಡೆಸಿದ್ದಾರೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಚೆನ್ನಮ್ಮ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.