ನವದೆಹಲಿ: ರಾಜ್ಯದ ಜನರಿಗೆ ಇಂದಿರಾ ಕಿಟ್ ವಿತರಿಸುವ ಯೋಜನೆಯ ಟೆಂಡರ್ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದು, ಆದಷ್ಟು ಬೇಗ ಈ ಯೋಜನೆ ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ದೆಹಲಿಯಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ರಾಜ್ಯಕ್ಕೆ ಬರಬೇಕಾದ ₹1902 ಕೋಟಿ ಹಣವನ್ನು ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ರಾಜ್ಯದಿಂದ ಅಡಿಟ್ ವರದಿ ನೀಡಲಾಗಿದೆ.
ಬಾಕಿ ಹಣವನ್ನು ಕೇಂದ್ರ ಸರ್ಕಾರ ಬೇಗ ನೀಡಿದರೆ ರೈತರಿಗೆ ತಲುಪಿಸಲು ಸಹಾಯ ಆಗುತ್ತದೆ. ಮೊದಲ ಹಂತದಲ್ಲಿ ₹190 ಕೋಟಿ ಕೇಂದ್ರ ಬಿಡುಗಡೆ ಮಾಡಿದ್ದು, ಉಳಿದಂತೆ ಎಂಎಸ್ಪಿ ಅಡಿ ನೀಡುವ ಅನುದಾನ ಬಿಡುಗಡೆಯಾಗಬೇಕಿದೆ ಎಂದು ತಿಳಿಸಿದರು.
10:42 PM (IST) Jul 09
ಮಳೆಗಾಲದ ತೇವಾಂಶದಿಂದ ದ್ವಿದಳ ಧಾನ್ಯಗಳಲ್ಲಿ ಕೀಟಗಳು ಬರುವುದು ಸಾಮಾನ್ಯ. ಈ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಅಷ್ಟೇ ಅಲ್ಲದೇ, ದಾನ್ಯಗಳ ಸಂಗ್ರಹಣೆ, ಮತ್ತು ಅವುಗಳ ಶುಚಿತ್ವವಾಗಿಡುವುದು ಹೇಗೆಂದು ಈ ಸ್ಟೋರಿ ನೀಡಲಾಗಿದೆ.
10:31 PM (IST) Jul 09
Toxic Tabaahi Song: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಮೊದಲ ವಿಡಿಯೊ ಹಾಡು 'ತಬಾಹಿ' ಬಿಡುಗಡೆಯಾದ ಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
10:05 PM (IST) Jul 09
ವ್ಯವಸ್ಥಿತವಾಗಿ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯಲ್ಲಿ ₹1 ಕೋಟಿ ಸಂಪತ್ತು ಸೃಷ್ಟಿಸಬಹುದು. ಚಕ್ರಬಡ್ಡಿಯ ಲಾಭ, ಚಿಕ್ಕ ವಯಸ್ಸಿನಲ್ಲಿ ಹೂಡಿಕೆ ಆರಂಭಿಸುವುದು ಮತ್ತು ಸರಿಯಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡುವುದು ಈ ಗುರಿಯನ್ನು ತಲುಪಲು ಪ್ರಮುಖ ಅಂಶಗಳಾಗಿವೆ. ಕೋಟಿ ಸೂತ್ರ ಫಾರ್ಮುಲಾ ಇಲ್ಲಿದೆ ನೋಡಿ!
10:00 PM (IST) Jul 09
09:12 PM (IST) Jul 09
ಪತಿ ಮಾಡಿದ ಸಾಲಕ್ಕೆ ಪತ್ನಿ ನೇರ ಕಾರಣವಗುತ್ತಾಳಾ? ಮೃತ ವ್ಯಕ್ತಿ ಸಾಲ ಯಾರಿಂದ ವಸೂಲಿ ಮಾಡಬಹುದೆಂದದು ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನ ಕುರಿತು ಸಂಪೂರ್ಣ ವಿವರ ಇಲ್ಲಿದೆ.
08:39 PM (IST) Jul 09
ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ನಡೆ ನೆಪೋಟಿಸಂ ಚರ್ಚೆಗೆ ಕಾರಣವಾಗಿದೆ. ಕಳಪೆ ಪ್ರದರ್ಶನದ ಹೊರತಾಗಿಯೂ ಈ ಆಟಗಾರರಿಗೆ ಮಣೆ ಹಾಕುತ್ತಿರುವುದು ತಂಡದ ಸೋಲಿಗೆ ಕಾರಣವಾಗಬಹುದೇ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ. ಈ ಕುರಿತು
08:18 PM (IST) Jul 09
ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ 'ಮೈಸಾ' ಚಿತ್ರಕ್ಕಾಗಿ ಒಂದು ದೊಡ್ಡ ಅಂಡರ್ವಾಟರ್ ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್ ಮುಗಿಸಿದ್ದಾರೆ. ಇದು ಭಾರತದಲ್ಲೇ ಮೊದಲ ಬಾರಿಗೆ ನಾಯಕಿಯೊಬ್ಬರು ಮಾಡಿದ ನೀರೊಳಗಿನ ಫೈಟ್ ಎಂದು ಹೇಳಲಾಗುತ್ತಿದೆ.
07:37 PM (IST) Jul 09
SIM ಎಂದರೆ ಸಬ್ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್ (Subscriber Identity Module). ಇದೊಂದು ಚಿಕ್ಕ ಚಿಪ್ ಆಗಿದ್ದು, ನಮ್ಮ ಮೊಬೈಲ್ ಅನ್ನು ಮೊಬೈಲ್ ನೆಟ್ವರ್ಕ್ಗೆ ಸಂಪರ್ಕಿಸುತ್ತದೆ.
07:31 PM (IST) Jul 09
ಅತಿಯಾದ ಕೆಲಸದ ಒತ್ತಡ ಹಾಗೂ ಬರ್ನೌಟ್ನಿಂದ ಬೇಸತ್ತ 31 ವರ್ಷದ ಪಿಎಸ್ಯು ಮಹಿಳಾ ಉದ್ಯೋಗಿಯೊಬ್ಬರು, ನೆಮ್ಮದಿಗಾಗಿ ತಮಗಿದ್ದ ಸರ್ಕಾರಿ ಕೆಲಸ ಬಿಡಲು ನಿರ್ಧರಿಸಿದ್ದಾರೆ. ತಮ್ಮಲ್ಲೇ ₹80 ಲಕ್ಷದ ಹೂಡಿಕೆ ನಿಧಿ ಇಟ್ಟುಕೊಂಡು ನಿವೃತ್ತಿ ಹೊಂದಲು ಬಯಸಿದ ಅವರ ವೈರಲ್ ರೆಡ್ಡಿಟ್ ಪೋಸ್ಟ್, ಆರ್ಥಿಕ ಭದ್ರತೆಗಿಂತ ಮಾನಸಿಕ ನೆಮ್ಮದಿ ಮುಖ್ಯವೇ ಎಂಬ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
07:18 PM (IST) Jul 09
Ramayana Trailer Release Date: ಭಾರತೀಯ ಚಿತ್ರರಂಗದಲ್ಲೇ ಬಹುನಿರೀಕ್ಷೆ ಹುಟ್ಟಿಸಿರುವ ರಣಬೀರ್ ಕಪೂರ್ ಅವರ 'ರಾಮಾಯಣ' ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ.
07:08 PM (IST) Jul 09
ಗ್ರಾಮ ಪಂಚಾಯತ್ ಚುನಾವಣೆಯ ಕರಡು ಮೀಸಲಾತಿ ಪಟ್ಟಿಯಲ್ಲಿನ ದೋಷಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಈ ಸ್ಟೋರಿ ಮಾರ್ಗದರ್ಶನವಾಗಲಿದೆ. ಅರ್ಜಿಯನ್ನು ಹೇಗೆ ಸಿದ್ಧಪಡಿಸಬೇಕು, ಯಾವ ಕಾರಣಗಳನ್ನು ನೀಡಬೇಕು, ಮತ್ತು ನಿಗದಿತ ಸಮಯದೊಳಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆ ಇದು ವಿವರಿಸುತ್ತದೆ.
07:01 PM (IST) Jul 09
ಪ್ರೀತಿಯನ್ನು ನಿರಾಕರಿಸಿ, ಕುಟುಂಬದ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದ ಯುವತಿಗೆ ಆಕೆಯ ಮಾಜಿ ಪ್ರಿಯತಮನೇ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ರಾಮಗೊಂಡನಹಳ್ಳಿಯಲ್ಲಿ ನಡೆದಿದೆ.
06:05 PM (IST) Jul 09
ಮಾಜಿ ಸಿಎಂ ಸಿದ್ದರಾಮಯ್ಯನವರು ಬಿಕೆ ಹರಿಪ್ರಸಾದ್ಗೆ ಸಚಿವ ಸ್ಥಾನ ನೀಡಲು ತೀವ್ರ ಒಲವು ತೋರಿದ್ದಾರೆ. ಈ ಬೆಳವಣಿಗೆಯು ಸಚಿವ ಸತೀಶ ಜಾರಕಿಹೊಳಿ ಅವರಲ್ಲಿ ಅಸಮಾಧಾನವನ್ನು ಉಂಟುಮಾಡಿದ್ದು, ಇಬ್ಬರ ನಡುವೆ ಮುನಿಸು ಮೂಡಿದೆ ಎನ್ನಲಾಗಿದೆ.
06:00 PM (IST) Jul 09
ಮಹಾರಾಷ್ಟ್ರ ಮತ್ತು ಕರ್ನಾಟಕದ ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ರಾಜ್ಯದ ಪ್ರಮುಖ ಜಲಾಶಯಗಳಿಗೆ ಕೇವಲ 24 ಗಂಟೆಗಳಲ್ಲಿ 20 ಟಿಎಂಸಿ ನೀರು ಹರಿದುಬಂದಿದೆ. ಕೃಷ್ಣಾ ಕೊಳ್ಳದ ಆಲಮಟ್ಟಿ, ಘಟಪ್ರಭಾ ಜಲಾಶಯಗಳು ಗಣನೀಯ ಪ್ರಮಾಣದ ನೀರನ್ನು ಪಡೆದಿದೆ.
05:51 PM (IST) Jul 09
Karavali Dubbing Controversy: ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲೇ ವಿವಾದದ ಕೇಂದ್ರಬಿಂದುವಾಗಿದೆ.
05:49 PM (IST) Jul 09
ಬ್ರಿಸ್ಟೊಲ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಪಂದ್ಯವನ್ನು ನೀವು ಯಾವುದೇ ರೀಚಾರ್ಜ್ ಇಲ್ಲದೇ ಉಚಿತವಾಗಿ ವೀಕ್ಷಿಸಬಹುದು. ಅದು ಹೇಗೆ ಎನ್ನುವುದನ್ನು ನೋಡೋಣ ಬನ್ನಿ.
05:31 PM (IST) Jul 09
ಬೆಂಗಳೂರಿನ ಥಣಿಸಂದ್ರದಲ್ಲಿ 'ವಂದೇ ಭಾರತ್ ಸ್ಲೀಪರ್' ರೈಲುಗಳ ನಿರ್ವಹಣೆಗಾಗಿ ಬೃಹತ್ ಡಿಪೋ ನಿರ್ಮಿಸಲು SWR ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ. ಈ ಯೋಜನೆಯು ಅತ್ಯಾಧುನಿಕ ವರ್ಕ್ಶಾಪ್ಗಳು ಮತ್ತು ರೈಲು ನಿಲುಗಡೆ ಹಳಿಗಳನ್ನು ಒಳಗೊಂಡಿರಲಿದ್ದು, ಇದರ ನಿರ್ಮಾಣಕ್ಕೆ ಈಗಾಗಲೇ ಗುತ್ತಿಗೆಯನ್ನೂ ನೀಡಲಾಗಿದೆ.
05:11 PM (IST) Jul 09
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಮಡಿವಾಳದಲ್ಲಿ ಎಳೆಯ ಮನಸ್ಸೊಂದು ಶಿಕ್ಷಕಿಯ ನಿರ್ಲಕ್ಷ್ಯ ಮತ್ತು ಅವಮಾನಕ್ಕೆ ಬಲಿಯಾಗಿದೆ. ಮರಸೂರು ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಮಧುಶ್ರೀ (14) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಘಟನೆ ಇಡೀ ರಾಜ್ಯದ ಗಮನ ಸೆಳೆದಿದ್ದು, ಬಾಲಕಿ ಬರೆದಿಟ್ಟ ಚೀಟಿಯು ಕಣ್ಣಂಚನ್ನು ತೇವಗೊಳಿಸಿದೆ
05:00 PM (IST) Jul 09
ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಪುತ್ರರ ನಂತರ, ಇದೀಗ ಮತ್ತೊಬ್ಬ ದಿಗ್ಗಜನ ಪುತ್ರ ಕ್ರಿಕೆಟ್ ಜಗತ್ತಿನಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿರುವ ಅವರು, ಕ್ರಿಕೆಟ್ ಲೋಕದಲ್ಲಿ ಸದ್ದು ಮಾಡುತ್ತಿದ್ದಾರೆ.
04:44 PM (IST) Jul 09
'ಬಿಗ್ ಬಾಸ್ ಕನ್ನಡ ಸೀಸನ್ 12' ಖ್ಯಾತಿಯ ಡಾಗ್ ಸತೀಶ್ ಮತ್ತೊಮ್ಮೆ ತಮ್ಮ ಮಾತುಗಳಿಂದ ಚರ್ಚೆಗೆ ಗ್ರಾಸವಾಗಿದ್ದಾರೆ. ಈ ಬಾರಿ ಅವರು ಮಗನ ಸಿನಿಮಾ ಪ್ರವೇಶ, ಮದುವೆ ಹಾಗೂ ತಮ್ಮ ವೈಯಕ್ತಿಕ ಅನುಭವಗಳ ಬಗ್ಗೆ ಮಾತನಾಡಿದ್ದಾರೆ.
04:36 PM (IST) Jul 09
04:23 PM (IST) Jul 09
ಕೆಲವು ಆನ್ಲೈನ್ ವೇದಿಕೆಗಳು ಟೀಂ ಇಂಡಿಯಾ ಸ್ಟಾರ್ ಅಭಿಷೇಕ್ ಶರ್ಮಾ ಅವರ ನಿದ್ದೆಗೆಡಿಸಿದ್ದವು. ಅವುಗಳ ವಿರುದ್ಧ ಕಾನೂನು ಸಮರ ಸಾರಿದ್ದ ಅಭಿಷೇಕ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಏನಿದು ಕೇಸ್ ಅನ್ನೋ ವಿವರ ಇಲ್ಲಿದೆ..
04:17 PM (IST) Jul 09
‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಶಿವರಾಜ್ಕುಮಾರ್, ಡಾಲಿ ಧನಂಜಯ ಕಾಂಬಿನೇಶನ್ನ ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, ವೈಶಾಖ್ ನಿರ್ಮಿಸಿದ್ದಾರೆ.
04:14 PM (IST) Jul 09
ಅಂಚೆ ಕಚೇರಿ ಯೋಜನೆ ಎನ್ನುವದು ಸರ್ಕಾರಿ ಗ್ಯಾರಂಟಿಯೊಂದಿಗೆ ಬರುವ ಸುರಕ್ಷಿತ ಹೂಡಿಕೆಯಾಗಿದೆ. ಪ್ರತಿ ತಿಂಗಳು ₹2,000 ದಂತಹ ಸಣ್ಣ ಮೊತ್ತ 5 ವರ್ಷಗಳ ಕಾಲ ಹೂಡಿಕೆ ಮಾಡುವ ಮೂಲಕ, 6.7% ಬಡ್ಡಿದರದಲ್ಲಿ ಗಮನಾರ್ಹವಾದ ನಿಧಿ ಹೇಗೆ ಸೃಷ್ಟಿಸಬಹುದು ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ!
03:45 PM (IST) Jul 09
ಸ್ವಂತ ಎಐ ಸ್ಟಾರ್ಟ್ಅಪ್ ಕಟ್ಟುವ ಉದ್ದೇಶದಿಂದ ಐಐಟಿ ಬಾಂಬೆ ಪದವೀಧರ ರಿಷಭ್ ಅಗರ್ವಾಲ್ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ ನೀಡಿದ ₹8.5 ಕೋಟಿ (1M$) ಸಂಬಳದ ಆಫರ್ ತಿರಸ್ಕರಿಸಿದ್ದಾರೆ. ಕೋಟಿ ಆಫರ್ ಬದಿಗಿಟ್ಟು ಭಾರತದಲ್ಲೇ ತಂತ್ರಜ್ಞಾನ ಕ್ರಾಂತಿ ಮಾಡಲು ಹೊರಟಿರುವ ಯುವಕನ ಧೈರ್ಯಕ್ಕೆ ಟೆಕ್ ಲೋಕ ಮೆಚ್ಚುಗೆ ವ್ಯಕ್ತಪಡಿಸಿದೆ.
03:23 PM (IST) Jul 09
02:48 PM (IST) Jul 09
02:43 PM (IST) Jul 09
'ಟಾರ್ಗೆಟ್ ಇಂಡಿಯಾ' ಕಾರ್ಯಕ್ರಮದಲ್ಲಿ, ಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು 1.50 ಲಕ್ಷ ಕೋಟಿ ರೂ.ಗಳ ಬೃಹತ್ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಲ್ಲಿ 500 ಕಿ.ಮೀ. ಮೆಟ್ರೋ ವಿಸ್ತರಣೆ, 40 ಕಿ.ಮೀ. ಸುರಂಗ ರಸ್ತೆ ನಿರ್ಮಾಣ ಸೇರಿವೆ.
02:38 PM (IST) Jul 09
ಸ್ವಂತ ಎಐ ಸ್ಟಾರ್ಟ್ಅಪ್ ಕಟ್ಟುವ ಉದ್ದೇಶದಿಂದ ಐಐಟಿ ಬಾಂಬೆ ಪದವೀಧರ ರಿಷಭ್ ಅಗರ್ವಾಲ್ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ ನೀಡಿದ ₹8.5 ಕೋಟಿ (1M$) ಸಂಬಳದ ಆಫರ್ ತಿರಸ್ಕರಿಸಿದ್ದಾರೆ. ಕೋಟಿ ಆಫರ್ ಬದಿಗಿಟ್ಟು ಭಾರತದಲ್ಲೇ ತಂತ್ರಜ್ಞಾನ ಕ್ರಾಂತಿ ಮಾಡಲು ಹೊರಟಿರುವ ಯುವಕನ ಧೈರ್ಯಕ್ಕೆ ಟೆಕ್ ಲೋಕ ಮೆಚ್ಚುಗೆ ವ್ಯಕ್ತಪಡಿಸಿದೆ.
02:16 PM (IST) Jul 09
ಕುಮಾರಸ್ವಾಮಿ ಅವರು ತಾವು ದೆಹಲಿಯಲ್ಲಿದ್ದರೂ ಕರ್ನಾಟಕದ ಪ್ರತಿ ಬೆಳವಣಿಗೆಯ ಮೇಲೆ ಕಣ್ಣಿಟ್ಟಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಸಕ್ರಿಯರಾಗುವ ಮುನ್ಸೂಚನೆ ನೀಡಿದ್ದಾರೆ. ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಅನ್ನೋದ್ರ ವಿವರ ಇಲ್ಲಿದೆ.
02:00 PM (IST) Jul 09
01:16 PM (IST) Jul 09
12:58 PM (IST) Jul 09
12:58 PM (IST) Jul 09
12:16 PM (IST) Jul 09
12:05 PM (IST) Jul 09
ಬಳ್ಳಾರಿಯ ಸಂಗನಕಲ್ ಗ್ರಾಮದ ಬಳಿ, ಜೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಹುಲಗಪ್ಪ ಎಂಬ 22 ವರ್ಷದ ಯುವಕ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ. ಸುರಕ್ಷತಾ ಕ್ರಮಗಳಿಲ್ಲದೆ, ಲೈನ್ ಕ್ಲಿಯರೆನ್ಸ್ ಪಡೆಯದೆ ಕಂಬ ಹತ್ತಿಸಿದ್ದರಿಂದ, ಆತ ಸುಮಾರು 15 ನಿಮಿಷಗಳ ಕಾಲ ನರಳಾಡಿ ಪ್ರಾಣ ಬಿಟ್ಟಿದ್ದಾನೆ.
11:46 AM (IST) Jul 09
ಸಕಲೇಶಪುರ ತಾಲೂಕಿನ ಲಕ್ಕುಂದ ಗ್ರಾಮದ ಬಳಿ ಲೈನ್ ದುರಸ್ತಿ ಮುಗಿಸಿ ವಾಪಸಾಗುತ್ತಿದ್ದ ಚೆಸ್ಕಾಂ ಸಿಬ್ಬಂದಿಯ ವಾಹನದ ಮೇಲೆ ಒಂಟಿ ಸಲಗವೊಂದು ದಾಳಿಗೆ ಯತ್ನಿಸಿದೆ. ತಡರಾತ್ರಿ ನಡೆದ ಈ ಘಟನೆ ವಾಹನದ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಿಬ್ಬಂದಿ ಅದೃಷ್ಟವಶಾತ್ ಪಾರಾಗಿದ್ದಾರೆ.
11:01 AM (IST) Jul 09
ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ಸಂಭಾವ್ಯ ಸ್ಥಳವಾಗಿ ಹಾರೋಹಳ್ಳಿಯನ್ನು ಪರಿಗಣಿಸುವಂತೆ CM ಸೂಚಿಸಿದ್ದಾರೆ. ಈಗಾಗಲೇ ಶಾರ್ಟ್ಲಿಸ್ಟ್ ಮಾಡಲಾಗಿರುವ ನೆಲಮಂಗಲ, ಸೋಮನಹಳ್ಳಿ ಮತ್ತು ಚೂಡಹಳ್ಳಿ ಜೊತೆಗೆ, ಕಡಿಮೆ ಭೂಸ್ವಾಧೀನ ವೆಚ್ಚ ಹಾಗೂ ಗ್ರಾಮಗಳ ಸ್ಥಳಾಂತರ ತಪ್ಪಿಸುವ ಸ್ಥಳಕ್ಕೆ ಸರ್ಕಾರ ಆದ್ಯತೆ ನೀಡಲಿದೆ.
10:46 AM (IST) Jul 09
ಹಾಸನ ಪಟ್ಟಣದ ಶ್ರೀ ಚನ್ನಕೇಶವ ದೇಗುಲದ ಹುಂಡಿ ಹಣ ಎಣಿಕೆ ಮಾಡುವ ವೇಳೆ ₹1.98 ಲಕ್ಷ ನಗದು ಕಳ್ಳತನ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ. ವಿಡಿಯೋ ಗ್ರಾಫರ್ ನೀಲಕಂಠ ಸಿಕ್ಕಿಬಿದ್ದಿದ್ದು ಹೇಗೆ?
10:45 AM (IST) Jul 09