Published : Oct 06, 2025, 07:34 AM ISTUpdated : Oct 06, 2025, 10:56 PM IST

State News Live: ಚೆನ್ನೈನಲ್ಲಿ ಅಪರೂಪದ ಕ್ಷಣಗಳನ್ನು ಕಳೆದ 80ರ ದಶಕದ ಲೆಜೆಂಡ್‌ಗಳು; ಯಾರೆಲ್ಲಾ ಬಂದಿದ್ದರು ನೋಡಿ!

ಸಾರಾಂಶ

ಬೆಂಗಳೂರು (ಅ.6): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಬಲ ಜಾತಿಗಳ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಹಾಗೂ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡುವೆಯೇ ಪ್ರತ್ಯೇಕ ಲಿಂಗಾಯತ ಧರ್ಮ ಪರ ನಿಲುವಿನ ಸ್ವಾಮೀಜಿಗಳು ಭಾನುವಾರ ನಗರದಲ್ಲಿ ನಡೆದ 'ಬಸವ ಸಂಸ್ಕೃತಿ ಅಭಿಯಾನ 2025' ಸಮಾರೋಪದಲ್ಲಿ ಸಿದ್ದು ಅವರನ್ನು ಹಾಡಿ ಹೊಗಳುವ ಮೂಲಕ ಪರೋಕ್ಷ ಬೆಂಬಲ ವ್ಯಕ್ತಪಡಿಸಿದರು. ವಿಭೂತಿ ಹಚ್ಚಿ ಹೂಮಳೆ ಸುರಿಸಿ 301 ಶ್ರೀಗಳಿಂದ ಸಿಎಂ ಸನ್ಮಾನ ಮಾಡಲಾಯಿತು. ಈ ವೇಳೆ ಅವರು, ಸಿದ್ದು ಎದೆ ಸೀಳಿದರೆ ಬಸವಣ್ಣ ಕಾಣುತ್ತಾರೆ. ಅವರೊಬ್ಬ ಕಳಕರಹಿತ ವ್ಯಕ್ತಿ ಎಂದು ಹೊಗಳಿದ್ದಾರೆ.ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

80 Decade Legendary Stars

10:56 PM (IST) Oct 06

ಚೆನ್ನೈನಲ್ಲಿ ಅಪರೂಪದ ಕ್ಷಣಗಳನ್ನು ಕಳೆದ 80ರ ದಶಕದ ಲೆಜೆಂಡ್‌ಗಳು; ಯಾರೆಲ್ಲಾ ಬಂದಿದ್ದರು ನೋಡಿ!

ಇದರ ಉದ್ದೇಶ ಸ್ಪಷ್ಟವಾಗಿತ್ತು – ಕೇವಲ ವೈಭವವನ್ನು ಪ್ರದರ್ಶಿಸುವುದಲ್ಲ, ಬದಲಾಗಿ ಆತ್ಮೀಯತೆಯನ್ನು ಮತ್ತು ಸೌಹಾರ್ದತೆಯನ್ನು ಆಚರಿಸುವುದು. ರಾಜ್‌ಕುಮಾರ್ ಸೇತುಪತಿ ಮತ್ತು ಶ್ರೀಪ್ರಿಯಾ ಅವರು ಈ ಪುನರ್ಮಿಲನಕ್ಕೆ ಸೂಕ್ತವಾದ ಆತಿಥ್ಯ ನೀಡಿದರು.

Read Full Story

10:34 PM (IST) Oct 06

ಇಡೀ ಮನೆಗೆ ಒಂದು ಚಿಂತೆಯಾದ್ರೆ, ರಕ್ಷಿತಾ & ಕಾಕ್ರೋಚ್ ಸುಧಿಗೆ ಮತ್ತೊಂದು ಸಮಸ್ಯೆ

Bigg Boss Kannada Show: ಬಿಗ್‌ಬಾಸ್ ಮನೆಯಲ್ಲಿ ಅಡುಗೆ ವಿಚಾರವಾಗಿ ಒಂಟಿಗಳು ಮತ್ತು ಜಂಟಿಗಳ ನಡುವೆ ಜಗಳ ಶುರುವಾಗಿದೆ. ಜಾನ್ವಿ ಬಳಸಿದ 'ಗಾಂಚಾಲಿ' ಪದವು ದೊಡ್ಡ ಗಲಾಟೆಗೆ ಕಾರಣವಾಗಿದ್ದು, ನಿಯಮ ಉಲ್ಲಂಘನೆಗಾಗಿ ಬಿಗ್‌ಬಾಸ್ ಜಂಟಿಗಳಿಗೆ ಕಠಿಣ ಶಿಕ್ಷೆ ನೀಡಿದ್ದಾರೆ.

Read Full Story

08:44 PM (IST) Oct 06

ನಿಶ್ಚಿತಾರ್ಥದ ಬೆನ್ನಲ್ಲೇ ವಿಜಯ್ ದೇವರಕೊಂಡ ಕಾರು ಅಪಘಾತ; ಮುಂದೆ ಕಾದಿದೆಯಾ ಗಂಡಾಂತರ?

ನಟಿ ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥದ ನಂತರ, ನಟ ವಿಜಯ್ ದೇವರಕೊಂಡ ಅವರು ತೆಲಂಗಾಣದ ಗದ್ವಾಲ್ ಬಳಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಪುಟ್ಟಪರ್ತಿಯಿಂದ ಹೈದರಾಬಾದ್‌ಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಇನ್ನು ಬುಲೆರೋ ವಾಹನದಿಂದಲೇ ಈ ಅಪಘಾತವಾಗಲು ಕಾರಣವೆಂದು ಹೇಳಲಾಗುತ್ತಿದೆ.

Read Full Story

08:40 PM (IST) Oct 06

ಮಲೆನಾಡು ಭಾಗದ ಪ್ರಯಾಣಿಕರಿಗೆ ಸಂತಸದ ಸುದ್ದಿ, ದೀಪಾವಳಿ ಹಬ್ಬಕ್ಕೆ ಸ್ಪೆಷಲ್ ಟ್ರೈನ್ ಸಂಚಾರ, ಈಗಲೇ ಟಿಕೆಟ್‌ ಬುಕ್ ಮಾಡಿ

ದೀಪಾವಳಿ ಹಬ್ಬದ ಪ್ರಯುಕ್ತ, ಯಶವಂತಪುರ ಮತ್ತು ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ಘೋಷಿಸಿದೆ. ಈ ರೈಲುಗಳು ಅಕ್ಟೋಬರ್ 17, 18, 24, ಮತ್ತು 25 ರಂದು ಸಂಚರಿಸಲಿದ್ದು, ಮಲೆನಾಡು ಭಾಗದ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿ ಹೊಂದಿವೆ.
Read Full Story

08:21 PM (IST) Oct 06

ಹೆಂಡ್ತಿಗೆ ₹18 ಲಕ್ಷ, 120 ಗ್ರಾಂ ಚಿನ್ನ ಕೊಟ್ಟು ಡಿವೋರ್ಸ್; ಹಾಲಿನ ಸ್ನಾನ ಮಾಡಿ, ಕೇಕ್ ಕತ್ತರಿಸಿ ಸಂಭ್ರಮ!

ವಿಚ್ಛೇದನವನ್ನು ದುಃಖದ ಬದಲು ಸ್ವಾತಂತ್ರ್ಯದ ಸಂಭ್ರಮವಾಗಿ ಆಚರಿಸಿದ ಯುವಕನೊಬ್ಬನ ವಿಡಿಯೋ ವೈರಲ್ ಆಗಿದೆ. ಹಾಲಿನ ಸ್ನಾನ ಮಾಡಿ, 'ಹಾಪಿ ಡೈವೋರ್ಸ್' ಎಂದು ಬರೆದ ಕೇಕ್ ಕತ್ತರಿಸಿದ ಈತನ ವಿಶಿಷ್ಟ ಆಚರಣೆಯು ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.
Read Full Story

08:00 PM (IST) Oct 06

ಬಿಗ್‌ಬಾಸ್ ಶೋ ನಿಲ್ಲಿಸಿ? ವಿದ್ಯುತ್ ಕಡಿತಗೊಳಿಸಿ, ಮಾಲಿನ್ಯ ಮಂಡಳಿಯಿಂದ ಶಾಕಿಂಗ್ ನೋಟಿಸ್

Bigg Boss Kannada pollution notice: ಬಿಡದಿಯಲ್ಲಿರುವ ಬಿಗ್‌ಬಾಸ್ ಹೌಸ್, ಸಂಸ್ಕರಿಸದ ತ್ಯಾಜ್ಯ ನೀರನ್ನು ಹೊರಬಿಟ್ಟು ಪರಿಸರ ಮಾಲಿನ್ಯ ಉಂಟುಮಾಡಿದ ಆರೋಪದ ಮೇಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಪಡೆದಿದೆ. 

Read Full Story

07:48 PM (IST) Oct 06

ಉದ್ಯಮಿ ಮೋಹನ್ ದಾಸ್ ಪೈ ಭ್ರಷ್ಟಾಚಾರದ ಬಗ್ಗೆ ಟ್ವೀಟ್ ಸ್ಫೋಟ - ಸರ್ಕಾರದ ನಿರಾಕರಣೆ, ವಿಪಕ್ಷಗಳ ಸವಾರಿ!

ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಅವರು ಕರ್ನಾಟಕ ಸರ್ಕಾರದ 12 ಇಲಾಖೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಟ್ವೀಟ್ ಮಾಡಿ ರಾಜಕೀಯ ಸಂಚಲನ ಸೃಷ್ಟಿಸಿದ್ದಾರೆ. ಈ ಆರೋಪವನ್ನು ಸರ್ಕಾರ ತಳ್ಳಿಹಾಕಿದ್ದು, ದಾಖಲೆ ನೀಡುವಂತೆ ಸವಾಲು ಹಾಕಿದೆ.  

Read Full Story

07:23 PM (IST) Oct 06

ಯೂಟ್ಯೂಬರ್ ಮುಕಳೆಪ್ಪ-ಗಾಯತ್ರಿ ಮದುವೆ ವಿವಾದ ಸುಖಾಂತ್ಯ; ಕಿರಿಕಿರಿ ಮಾಡದಂತೆ ಕೈ-ಮುಗಿದು ಮನವಿ!

ಯೂಟ್ಯೂಬರ್ ಮುಕಳೆಪ್ಪ, ಹಿಂದೂ ಯುವತಿ ಗಾಯತ್ರಿಯನ್ನು ಮದುವೆಯಾದ ನಂತರ 'ಲವ್ ಜಿಹಾದ್' ಆರೋಪ ಎದುರಿಸಿದ್ದರು. ಹಿಂದೂ ಸಂಘಟನೆಗಳ ಪ್ರತಿಭಟನೆಯ ನಂತರ, ಇದು ಪ್ರೀತಿಯಿಂದಾದ ಮದುವೆಯೇ ಹೊರತು ಮತಾಂತರವಲ್ಲ ಎಂದು ಮುಕಳೆಪ್ಪ ಸ್ಪಷ್ಟಪಡಿಸಿದ್ದಾರೆ. ವಿವಾದ ಬದಿಗೊತ್ತಿ ಸಂತೋಷದಿಂದಿರುವ ಫೋಟೋ ಹಂಚಿಕೊಂಡಿದ್ದಾರೆ.

Read Full Story

07:12 PM (IST) Oct 06

ಭಾರತೀಯ ರೈಲು ಬೋಗಿಗಳ ಸ್ವಚ್ಛತೆಯ ಹೊಸ ಅಧ್ಯಾಯ, ಸ್ವದೇಶಿ ಡ್ರೋನ್ ತಂತ್ರಜ್ಞಾನ ಬಳಕೆಯ ಪರೀಕ್ಷೆ ಯಶಸ್ವಿ

ಭಾರತೀಯ ರೈಲ್ವೆಯು ಸ್ವದೇಶಿ ಡ್ರೋನ್ ತಂತ್ರಜ್ಞಾನವನ್ನು ಬಳಸಿ ರೈಲು ಬೋಗಿಗಳನ್ನು ತೊಳೆಯುವ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಸೂರತ್‌ನ ಯುವಕರು ಅಭಿವೃದ್ಧಿಪಡಿಸಿದ ಈ ಕಡಿಮೆ ವೆಚ್ಚದ ವಿಧಾನವು, ಅಮೃತ್ ಭಾರತ್ ಎಕ್ಸ್‌ಪ್ರೆಸ್‌ನ 25 ಬೋಗಿಗಳನ್ನು ಕೇವಲ 30 ನಿಮಿಷಗಳಲ್ಲಿ ಶುಚಿಗೊಳಿಸಿದೆ.

Read Full Story

06:49 PM (IST) Oct 06

ನವಜಾತ ಶಿಶುವಿನ ಗರ್ಭದಲ್ಲಿ ಇನ್ನೊಂದು ಮಗು! ಬೆಚ್ಚಿಬಿದ್ದ ಹುಬ್ಬಳ್ಳಿ ವೈದ್ಯರು- ಇದೇನಿದು ಪ್ರಕರಣ?

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ, ನವಜಾತ ಗಂಡು ಶಿಶುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣ ಪತ್ತೆಯಾಗಿ ವೈದ್ಯರನ್ನು ಅಚ್ಚರಿಗೊಳಿಸಿದೆ. ಇದು ಅವಳಿ ಶಿಶುಗಳಲ್ಲಿ ಕಂಡುಬರುವ ಅತ್ಯಂತ ಅಪರೂಪದ ವೈದ್ಯಕೀಯ ಸ್ಥಿತಿಯಾಗಿದ್ದು, ಒಂದು ಭ್ರೂಣವು ಇನ್ನೊಂದರೊಳಗೆ ಬೆಳೆಯುತ್ತದೆ.  

Read Full Story

06:20 PM (IST) Oct 06

ಜಡ್ಜ್‌ ಮೇಲೆ ಶೂ ಎಸೆತ ಯತ್ನ - ಮನುವಾದಿ ಮನಸ್ಸುಗಳು ಸಮಾಜದಲ್ಲಿ ಹುಟ್ಟಿಕೊಂಡಿವೆ ಎಂದ ಸಿಎಂ ಸಿದ್ದರಾಮಯ್ಯ

CJI BR Gavai ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಸಿಎಂ ಸಿದ್ದರಾಮಯ್ಯ, ಇದು ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿಗಳ ಮೇಲಿನ ಹಲ್ಲೆ ಎಂದು ಬಣ್ಣಿಸಿದ್ದು, ಕಿಡಿಗೇಡಿ ವಕೀಲನ ಬಂಧನಕ್ಕೆ ಆಗ್ರಹಿಸಿದ್ದಾರೆ.

Read Full Story

06:09 PM (IST) Oct 06

ಹೊರಗಡೆ ವಿವಾದದಲ್ಲಿರುವ ಬಿಗ್‌ಬಾಸ್ ಜಾಹ್ನವಿ ಒಳಗಡೆ ಸಿಕ್ಕಾಪಟ್ಟೆ ಗ್ಲಾಮರ್, ವಯಸ್ಸಿನ ಬಗ್ಗೆ ನೆಟ್ಟಿಗರ ಹುಡುಕಾಟ

ಬಿಗ್‌ಬಾಸ್‌ ಕನ್ನಡ ಸೀಸನ್‌-12ರ ಸ್ಪರ್ಧಿ, ನಿರೂಪಕಿ ಜಾಹ್ನವಿ ತಮ್ಮ ವಿಚ್ಛೇದನದ ಬಗ್ಗೆ ಮನೆಯಲ್ಲಿ ಮಾತನಾಡಿದ್ದಾರೆ. ತನ್ನ ಪತಿ ಜೀವಂತವಾಗಿರುವಾಗಲೇ ಬೇರೆ ಮದುವೆಯಾಗಿದ್ದೇ ಡಿವೋರ್ಸ್‌ಗೆ ಕಾರಣ ಎಂದಿದ್ದರು. ಆದರೆ, ಜಾಹ್ನವಿಯ ಮಾಜಿ ಪತಿ ಕಾರ್ತಿಕ್ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ.

Read Full Story

05:55 PM (IST) Oct 06

ಬಡ್ಡಿ ಬಂಗಾರಮ್ಮಾ ಮೊನಚಾದ ಮಾತಿನೇಟಿಗೆ ರಾಜಮಾತೆಯ ಕಣ್ಣೀರು; ದಿಗ್ಬ್ರಮೆಯಾಗಿ ನಿಂತ ರಕ್ಷಿತಾ ಶೆಟ್ಟಿ

Manju Bhashini angry reactionn: ಬಿಗ್‌ಬಾಸ್ ಸೀಸನ್ 12ರ ಎರಡನೇ ವಾರದಲ್ಲಿ ಒಂಟಿ ಮತ್ತು ಜಂಟಿ ಬಣಗಳ ನಡುವೆ ಸಂಘರ್ಷ ತಾರಕಕ್ಕೇರಿದೆ. ಜಾನ್ವಿ ಬಳಸಿದ 'ಗಾಂಚಾಲಿ' ಪದದಿಂದಾಗಿ ಮಂಜು ಭಾಷಿಣಿ ಆಕ್ರೋಶಗೊಂಡಿದ್ದು, ಈ ಬೆಳವಣಿಗೆಗಳಿಂದ ನೊಂದ ಒಂಟಿಗಳ ರಾಜಮಾತೆ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ.

Read Full Story

05:54 PM (IST) Oct 06

ಶ್ರೀಕೃಷ್ಣದೇವರಾಯ ವಿವಿ ಅಂಕಪಟ್ಟಿಯಲ್ಲಿ ಸ್ವಾಮೀಜಿ ಫೋಟೋ - ಸಿಬ್ಬಂದಿ ಎಡವಟ್ಟಿಗೆ ವಿದ್ಯಾರ್ಥಿ ಭವಿಷ್ಯ ಅತಂತ್ರ!

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು (ವಿಎಸ್‌ಕೆವಿವಿ) ವಿದ್ಯಾರ್ಥಿಯೊಬ್ಬನ ಅಂಕಪಟ್ಟಿಯಲ್ಲಿ ಆತನ ಫೋಟೋ ಬದಲು ಗವಿಸಿದ್ದೇಶ್ವರ ಸ್ವಾಮೀಜಿ ಫೋಟೋ ಮುದ್ರಿಸಿ, ಫಲಿತಾಂಶವನ್ನೂ ತಪ್ಪಾಗಿ ನಮೂದಿಸಿದೆ. ವರ್ಷ ಕಳೆದರೂ ದೋಷ ಸರಿಪಡಿಸದ ಕಾರಣ, ವಿದ್ಯಾರ್ಥಿಯ ಭವಿಷ್ಯ ಅತಂತ್ರವಾಗಿದೆ.

Read Full Story

05:50 PM (IST) Oct 06

Amruthadhaare - ವಠಾರಕ್ಕೆ ಗೌತಮ್​ನನ್ನು ಹುಡುಕಿಬಂದ ಪೊಲೀಸರು! ಮಗಳ ಬಗ್ಗೆ ಬಿಗ್​ ಅಪ್​ಡೇಟ್

ಕಾಣೆಯಾದ ಮಗಳ ಬಗ್ಗೆ ಪೊಲೀಸರು ವಿಚಾರಿಸಿದ್ದರಿಂದ ಗೌತಮ್‌ಗೆ ಹೊಸ ಭರವಸೆ ಮೂಡಿದೆ. ಇನ್ನೊಂದೆಡೆ, ಭೂಮಿಕಾಗೆ ಹೆಡ್ ಮಿಸ್ ಕೆಲಸ ಸಿಕ್ಕಿದ್ದು, ಗೌತಮ್ ನೆನಪಿನಿಂದ ದೂರವಿರಲು ಪ್ರಯತ್ನಿಸುತ್ತಾಳೆ. ಎರಡು ಮಕ್ಕಳಲ್ಲಿ ನಿಜವಾದ ಮಗು ಯಾರು ಎಂಬ ರಹಸ್ಯವು ಕಥೆಗೆ ಹೊಸ ತಿರುವು ನೀಡಿದೆ.
Read Full Story

05:09 PM (IST) Oct 06

Lakshmi Nivasa - ತನು ಕೈಯಲ್ಲಿ ವಿಶ್ವನ ಜಾತಕ! ಜಾನುನೇ ಲವರ್​ ಎಂದು ಗೊತ್ತಾಗೋಗತ್ತಾ?

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ವಿಶ್ವನ ಮೇಲಿನ ಅನುಮಾನದಿಂದ ತನು ಆತನ ಕಾಲೇಜಿಗೆ ಹೋಗಿ ಜಾಹ್ನವಿಯ ದಾಖಲೆಗಳನ್ನು ಪತ್ತೆಹಚ್ಚುತ್ತಾಳೆ. ವಿಶ್ವ ತಡೆಯಲು ಪ್ರಯತ್ನಿಸಿದರೂ, ಜಾಹ್ನವಿಯ ದಾಖಲೆ ತನು ಕೈ ಸೇರಿದ್ದು, ವಿಶ್ವ ಮತ್ತು ಜಾಹ್ನವಿಯ ರಹಸ್ಯ ಬಯಲಾಗುವ ಹಂತ ತಲುಪಿದೆ.
Read Full Story

05:05 PM (IST) Oct 06

ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ, ಗಂಡನ ಮನೆಯಲ್ಲಿ ನಿಗೂಢ ಹೆಣವಾದ ಗೃಹಿಣಿ ರಕ್ಷಿತಾ!

ಬೆಂಗಳೂರಿನ ಲಗ್ಗೆರೆಯಲ್ಲಿ ಗೃಹಿಣಿ ರಕ್ಷಿತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೆಣ್ಣು ಮಗು ಜನಿಸಿದ್ದಕ್ಕೆ ಪತಿ ರವೀಶ್ ಮತ್ತು ಆತನ ಸಹೋದರ ನಿರಂತರ ಕಿರುಕುಳ ನೀಡುತ್ತಿದ್ದು, ಅವರೇ ಕೊಲೆ ಮಾಡಿ ಆತ್ಮಹ*ತ್ಯೆ ಎಂದು ಬಿಂಬಿಸಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

Read Full Story

04:38 PM (IST) Oct 06

ಬಿಹಾರ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ - 2 ಹಂತದಲ್ಲಿ ಮತದಾನ, 14 ನವೆಂಬರ್‌ಗೆ ರಿಸಲ್ಟ್

Bihar Assembly poll dates: ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಸಿಎಂ ನಿತೀಶ್ ಕುಮಾರ್, ಪಾಟ್ನಾದಲ್ಲಿ ಮೆಟ್ರೋ ರೈಲು ಉದ್ಘಾಟನೆ ಮಾಡಿದ್ದು, ನಾಳೆಯಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ. 2020ರಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಒಟ್ಟು 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

Read Full Story

04:26 PM (IST) Oct 06

Bigg Bossನಲ್ಲಿ ಪ್ರತಿಸಲನೂ ಯಾಕೋ ಹೀಗೆ ಗೊತ್ತಿಲ್ಲ, ಇದು ನೋವಿನ ಸಂಗತಿ ! ಐಶ್ವರ್ಯ ಸಿಂಧೋಗಿ ತೀವ್ರ ಅಸಮಾಧಾನ

ಬಿಗ್​ಬಾಸ್​ 12ರ ಮೊದಲ ವಾರದ ಎಲಿಮಿನೇಷನ್‌ ಬಗ್ಗೆ ಬಿಗ್​ಬಾಸ್​ 11ರ ಸ್ಪರ್ಧಿ ಐಶ್ವರ್ಯ ಸಿಂಧೋಗಿ ಬೇಸರ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣವಿಲ್ಲದೆ ಸ್ಪರ್ಧಿಗಳನ್ನು ಹೊರಹಾಕುವುದು ಅನ್ಯಾಯ ಎಂದಿರುವ ಅವರು, ತಮ್ಮ ಸೀಸನ್‌ನ ಅನುಭವವನ್ನೂ ಹಂಚಿಕೊಂಡಿದ್ದಾರೆ.  

Read Full Story

03:55 PM (IST) Oct 06

ನಿನ್ನಂತಹ ಆಂಟಿಗಳೇ ಇಷ್ಟವೆಂದ ಅಭಿಷೇಕ್‌ಗೆ ಖಡಕ್ ತಿರುಗೇಟು ಕೊಟ್ಟ ಜಾಹ್ನವಿ! ಬಿಗ್ ಬಾಸ್ ಅಸಲಿ ಆಟ ಈಗ ಶುರು!

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಒಂಟಿ (ಅರಸರು) ಮತ್ತು ಜಂಟಿ (ಗುಲಾಮರು) ಎಂಬ ಥೀಮ್‌ನಿಂದಾಗಿ ಸ್ಪರ್ಧಿಗಳ ನಡುವೆ ಅಸಮಾನತೆ ಸೃಷ್ಟಿಯಾಗಿದೆ. ಈ ಕಾರಣದಿಂದಾಗಿ ಎರಡೂ ಗುಂಪುಗಳ ನಡುವೆ ತೀವ್ರ ಕಿತ್ತಾಟ ಶುರುವಾಗಿದ್ದು, ಜಾಹ್ನವಿ ಜಂಟಿಗಳ ನಿಯಮ ಉಲ್ಲಂಘನೆಗೆ ಖಡಕ್ ತಿರುಗೇಟು ಕೊಟ್ಟಿದ್ದಾರೆ.

Read Full Story

03:50 PM (IST) Oct 06

Karna ಸೀರಿಯಲ್​ಗೂ ಎಂಟ್ರಿ ಕೊಟ್ಟ ಜೋಗತವ್ವ! ತಲೆಗೆ ಹುಳು ಬಿಡೋ ಇವರು ತ್ರಿಕಾಲ ಜ್ಞಾನಿಗಳಾ?

ಕನ್ನಡ ಧಾರಾವಾಹಿಗಳಲ್ಲಿ ಜೋಗತವ್ವನ ಪ್ರವೇಶ ಸಾಮಾನ್ಯವಾಗಿದ್ದು, ಇದೀಗ 'ಕರ್ಣ' ಸೀರಿಯಲ್​ನಲ್ಲಿ ದೊಡ್ಡ ತಿರುವು ಸಿಕ್ಕಿದೆ. ನಿಧಿಯನ್ನು ಪ್ರೀತಿಸಿದ ಕರ್ಣ, ಅನಿರೀಕ್ಷಿತವಾಗಿ ನಿತ್ಯಾಗೆ ತಾಳಿ ಕಟ್ಟಿದ್ದು, ಆಕೆ ಗರ್ಭಿಣಿ ಎಂಬ ಸತ್ಯವೂ ಬಹಿರಂಗವಾಗಿದೆ.  

Read Full Story

03:39 PM (IST) Oct 06

ತುಂಗಭದ್ರಾ ನದಿಯಲ್ಲಿ ತೆಪ್ಪ ಮುಳುಗಿ ಇಬ್ಬರು ಯುವಕರು ಸಾವು, ಮರಳು ದಂಧೆ ಶಂಕೆ

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ತುಂಗಭದ್ರಾ ನದಿಯಲ್ಲಿ ತೆಪ್ಪ ಮುಗುಚಿ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಮೀನುಗಾರಿಕೆ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದ್ದರೂ, ಇದು ಅಕ್ರಮ ಮರಳು ದಂಧೆಯ ಪರಿಣಾಮವಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

03:25 PM (IST) Oct 06

ಡಿವೋರ್ಸ್ ಆದ್ರು ಬಿಡ್ತಿಲ್ಲ - ನಿರೂಪಕಿ ಜಾನ್ವಿ ಮಾಜಿ ಗಂಡ ಕಾರ್ತಿಕ್ ಮಹಡಿ ಬೇಸರ

ಬಿಗ್‌ಬಾಸ್ ಮನೆಯಲ್ಲಿ ನಿರೂಪಕಿ ಜಾನ್ವಿ ತಮ್ಮ ವಿಚ್ಚೇದನದ ಬಗ್ಗೆ ಮಾಡಿದ ಆರೋಪಗಳಿಗೆ ಅವರ ಮಾಜಿ ಪತಿ ಕಾರ್ತಿಕ್ ಮಹಡಿ ಪ್ರತಿಕ್ರಿಯಿಸಿದ್ದಾರೆ. ಜಾನ್ವಿ ಅವರ ನಡವಳಿಕೆ ಬಗ್ಗೆ ಕಾರ್ತಿಕ್ ಮಾತನಾಡಿದ್ದಾರೆ.

Read Full Story

02:49 PM (IST) Oct 06

ಕಾಶ್ಮೀರದ ಮುಸ್ಲಿಂ ವ್ಯಕ್ತಿ ತೋಟದಲ್ಲಿ ಸಿಕ್ಕ ಪುರಾತನ ಶಿವಲಿಂಗ; ಶಿವನ ನಾಡಲ್ಲಿ ಮುಂದಾಗಿದ್ದು ಚಮಾತ್ಕಾರ!

ಉತ್ತರ ಕಾಶ್ಮೀರದ ಹಂದ್ವಾರಾದಲ್ಲಿ, ಆಕಿಬ್ ರಸೂಲ್ ಎಂಬ ಮುಸ್ಲಿಂ ಯುವಕನಿಗೆ ತನ್ನ ತೋಟದಲ್ಲಿ ಪ್ರಾಚೀನ ಶಿವಲಿಂಗವೊಂದು ಪತ್ತೆಯಾಗಿದೆ. ಅದನ್ನು ನೋಡಿದಾಕ್ಷಣ ಇದು ಹಿಂದೂಗಳ ಆರಾಧ್ಯ ದೈವ ಶಿವಲಿಂಗ ಮೂರ್ತಿಉ ಎಂಬುದು ತಿಳಿದುಬಂದಿದೆ. ನಂತರ ಆತನ ಕೈಯಿಂದಲೇ ಒಂದು ಚಮಾತ್ಕಾರದ ಘಟನೆ ನಡೆದಿದೆ.

Read Full Story

02:49 PM (IST) Oct 06

'ಎಲ್ಲಾ ಅವನೊಬ್ನೆ' ಯಶ್‌ನ ಸರ್ವಾಂತರ್ಯಾಮಿ ಅಂತಾ ಕೆಣಿಕಿದ ಕೆಆರ್‌ಕೆ!

KRK tweet on Yash's next film ಯಶ್ ಅವರ ಮುಂಬರುವ 'ಟಾಕ್ಸಿಕ್' ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದಾರೆ. ಯಶ್ ಅವರ ಸರ್ವಾಂತರ್ಯಾಮಿ ವರ್ತನೆ ಮತ್ತು 600 ಕೋಟಿ ಬಜೆಟ್ ಇದಕ್ಕೆ ಕಾರಣ ಎಂದಿದ್ದು, ಇದಕ್ಕೆ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸಿ ಯಶ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

Read Full Story

02:29 PM (IST) Oct 06

ಕುಡಿದ ಮತ್ತಿನಲ್ಲಿ ವಿಮಾನದ ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದ ಪ್ರಯಾಣಿಕ - ವಿಮಾನ ತುರ್ತು ಲ್ಯಾಂಡಿಂಗ್

Drunk Passenger Trying to Open Emergency Exit :ವಿಮಾನದಲ್ಲಿ ಪ್ರಯಾಣಿಸುತ್ತಿದ್ದವನೋರ್ವ ಕುಡಿದ ಮತ್ತಿನಲ್ಲಿ ವಿಮಾನದ ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದ ಘಟನೆ ನಡೆದಿದೆ. ಕುಡುಕ ಪ್ರಯಾಣಿಕ ಈ ಹಾವಳಿಯಿಂದಾಗಿ ವಿಮಾನವನ್ನು ತುರ್ತು ಲ್ಯಾಂಡ್ ಮಾಡಬೇಕಾಯ್ತು. 

Read Full Story

02:07 PM (IST) Oct 06

ಸುಜಾತ ಭಟ್ ಕಟ್ಟುಕತೆ ವಾಸಂತಿ ಸಾವಿನ ರಹಸ್ಯ - ಕಾಲಿವುಡ್ ನಟನ ಸಹೋದರನ ಸುತ್ತ ಅನುಮಾನ!

ವಾಸಂತಿ ನಿಗೂಢ ಸಾವಿನ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಖ್ಯಾತ ನಟನೊಬ್ಬನ ಸಹೋದರನ ಪಾತ್ರದ ಬಗ್ಗೆ ಶಂಕೆ ವ್ಯಕ್ತವಾಗಿದೆ. ವಾಸಂತಿ ಸಾವು ಮತ್ತು ಸುಜಾತಾ ಭಟ್ ಅವರ ಕಟ್ಟುಕತೆಯ ನಡುವೆ ಸಂಬಂಧವಿರಬಹುದೆಂದು ಎಸ್ಐಟಿ ಅನುಮಾನಿಸಿದ್ದು, ನಟನ ಸಹೋದರನ ವಿಚಾರಣೆಗೆ ಸಿದ್ಧತೆ ನಡೆಸಿದೆ.
Read Full Story

01:44 PM (IST) Oct 06

ಹಬ್ಬಕ್ಕೆ ಬಂದ ಬಿಜ್ಯುವೆಲ್ಡ್‌ ಬ್ಲೌಸ್‌ ಟ್ರೆಂಡ್‌ - ಫ್ಯಾಷನ್‌ ಜಗತ್ತಿನಲ್ಲಿ ಸದ್ದು ಮಾಡ್ತಿದೆ ಹೊಸ ಟ್ರೆಂಡಿ ಲುಕ್‌

ಅಲಿಯಾ ಭಟ್‌ರಿಂದ ಇತ್ತೀಚಿಗೆ ಎಂಟ್ರಿಕೊಟ್ಟ ಶಾರ್ವರಿ ವಾಗ್‌ ತನಕ ಹಲವರು ಈ ಸ್ಟೈಲ್‌ಗೆ ಫಿದಾ ಆಗಿದ್ದಾರೆ. ಜೊತೆಗೆ ಹಬ್ಬದ ಸೀಸನ್‌ಗೆ ಬಿಜ್ಯುವೆಲ್ಡ್‌ ಟ್ರೆಂಡ್‌ ಬಾಲಿವುಡ್‌ನಿಂದ ಬೆಳಗಾವಿ ಹುಡುಗಿಯರವರೆಗೆ ಹಲವರ ಮೈಮೇಲೆ ವಿರಾಜಮಾನವಾಗುತ್ತಿದೆ.

Read Full Story

01:35 PM (IST) Oct 06

ನಮಗೆ ಬದುಕಲು ಇಷ್ಟವಿಲ್ಲ, ಇನ್ಮುಂದೆ ನೀವೆಲ್ಲ ಸಂತೋಷವಾಗಿರಿ; ಬಾಲಕಿಯರ ಸ್ಕೂಲ್ ಬ್ಯಾಗ್‌ನಲ್ಲಿದ್ದ ಡೆತ್ ನೋಟ್!

ಅಯ್ಯೋ ಮನೇಲಿ ದಿನಾಲೂ ಎಷ್ಟೂ ಅಂತಾ ಕೆಲಸ ಮಾಡಿಸ್ತೀರಿ. 2ನೇ ಹೆಂಡತಿಯ ಮಗಳು ಅಂತಾ ನೀವು ನನಗೆ ಇಷ್ಟೊಂದು ಕಷ್ಟಕೊಟ್ಟರೆ ಹೇಗೆ ಸಹಿಸಿಕೊಳ್ಳಲಿ. ನನಗೆ ಬದುಕಲು ಇಷ್ಟವಿಲ್ಲ, ನೀವೆಲ್ಲ ಇನ್ಮುಂದೆ ಸಂತೋಷವಾಗಿರಿ ಎಂದು ಡೆತ್‌ನೋಟ್ ಬರೆದಿಟ್ಟು ಇಬ್ಬರು ವಿದ್ಯಾರ್ಥಿಗಳು ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.

Read Full Story

01:17 PM (IST) Oct 06

ಕೆಮ್ಮಿನ ಸಿರಪ್ ದುರಂತ.. ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ - ಸಚಿವ ದಿನೇಶ್ ಗುಂಡೂರಾವ್

ಕಳಪೆ ಕೆಮ್ಮಿನ ಸಿರಪ್ ರಾಜ್ಯದಲ್ಲಿ ಸರಬರಾಜು ಆಗಿಲ್ಲ.ದೇಶದ ಬೇರೆ ರಾಜ್ಯಗಳಲ್ಲಿ ಕೆಮ್ಮಿನ ಸಿರಪ್‌ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Read Full Story

01:08 PM (IST) Oct 06

ಕೊಪ್ಪಳದ ಜನ, ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದ ಕಹಿ ಅನುಭವ ಮತ್ತೆ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ!

ಕೊಪ್ಪಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಹಿಂದಿನ ಲೋಕಸಭಾ ಚುನಾವಣೆಯ ಸೋಲನ್ನು ನೆನಪಿಸಿಕೊಂಡರು. ಇದೇ ವೇಳೆ, ಜಾತಿ ಸಮೀಕ್ಷೆಯು ಸಮ ಸಮಾಜ ನಿರ್ಮಾಣಕ್ಕಾಗಿ ಎಂದು ಸ್ಪಷ್ಟಪಡಿಸಿ, ಗ್ಯಾರಂಟಿ ಯೋಜನೆಗಳು ನಿಲ್ಲುವ ವದಂತಿಯನ್ನು ತಳ್ಳಿಹಾಕಿದರು.
Read Full Story

12:51 PM (IST) Oct 06

ಆನ್‌ಲೈನ್‌ನಲ್ಲಿ 50 ಲಕ್ಷಕ್ಕೂ ಅಧಿಕ 'ಕಾಂತಾರ ಚಾಪ್ಟರ್‌ 1' ಟಿಕೆಟ್ ಮಾರಾಟ - ವಿಶ್ವಾದ್ಯಂತ 230 ಕೋಟಿ ಗಳಿಕೆ

‘ಕಾಂತಾರ ಚಾಪ್ಟರ್‌ 1’ ಆನ್‌ಲೈನ್‌ನಲ್ಲಿ 50 ಲಕ್ಷಕ್ಕೂ ಅಧಿಕ ಟಿಕೆಟ್‌ ಮಾರಾಟ ಕಂಡಿದೆ ಎಂದು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ ತಿಳಿಸಿದೆ. ಸಿನಿಮಾ ಬಿಡುಗಡೆಯಾದಾಗಿನಿಂದ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯುತ್ತಿದೆ.

Read Full Story

12:47 PM (IST) Oct 06

Rachita Ram ಮಾತಿಗೆ ಅಪ್ಪು ಫ್ಯಾನ್ಸ್​ ಫುಲ್​ ಗರಂ! ಅಷ್ಟಕ್ಕೂ ಅಂಥದ್ದೇನು ಹೇಳಿದ್ರು ನಟಿ?

ನಟಿ ರಚಿತಾ ರಾಮ್ ತಮ್ಮ 33ನೇ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು. ಈ ಸಂದರ್ಭದಲ್ಲಿ, 'ಬದುಕಿರುವಾಗಲೇ ನನಗೆ ಹೆಸರು, ಪ್ರಶಸ್ತಿ ಬರುತ್ತಿದೆ' ಎಂದು ಅವರು ನೀಡಿದ ಹೇಳಿಕೆಯು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. 

Read Full Story

12:43 PM (IST) Oct 06

ಇದೊಂದನ್ನು ಮಾಡಿದ್ರೆ 2027ರ ವಿಶ್ವಕಪ್ ಆಡ್ತಾರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ! ಏನದು?

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಶುಭ್‌ಮನ್ ಗಿಲ್ ನಾಯಕರಾಗಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಆಡಲಿದ್ದಾರೆ. 2027ರ ವಿಶ್ವಕಪ್ ಆಡಲು ಇವರಿಬ್ಬರೂ ಫಿಟ್ನೆಸ್ ಕಾಪಾಡಿಕೊಳ್ಳಲು ದೇಶಿ ಕ್ರಿಕೆಟ್ ಆಡಬೇಕು ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸಲಹೆ ನೀಡಿದ್ದಾರೆ.
Read Full Story

12:23 PM (IST) Oct 06

ಗಂಡನನ್ನು ಹುಡುಕಲು ಡ್ರೋನ್​ ಬಳಸಿದಳಾ Amruthadhaare ಭೂಮಿಕಾ? ಇದೆಲ್ಲಾ ಬೇಕಿತ್ತಾ?

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಬೆಂಗಳೂರಿನಲ್ಲಿ ಹೆಡ್ ಮಿಸ್ ಆಗಿ ಕೆಲಸ ಮಾಡುತ್ತಿದ್ದರೆ, ಗೌತಮ್ ಕೂಡ ಅದೇ ನಗರದಲ್ಲಿ ಅವಳನ್ನು ಹುಡುಕುತ್ತಿದ್ದಾನೆ. ಇದರ ನಡುವೆ ಗೌತಮ್‌ಗೆ ಅನಾಥ ಹೆಣ್ಣು ಮಗು ಸಿಕ್ಕಿದ್ದು, ಭೂಮಿಕಾ ಡ್ರೋನ್ ಹಿಡಿದ ವಿಡಿಯೋ ವೈರಲ್ ಆಗಿ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
Read Full Story

11:51 AM (IST) Oct 06

ಲಿಂಗಾಯತ vs ವೀರಶೈವ ಫೈಟ್ ಮತ್ತೆ ಶುರು - "ಈ ಬಾರಿ ಸಿದ್ದರಾಮಯ್ಯ ತಲೆಗೆ ಕಟ್ಟಲು ಆಗುವುದಿಲ್ಲ" ಎಂದ ಎಂಬಿ ಪಾಟೀಲ್!

MB Patil Demands Separate Lingayat Religion, Says Can't Blame Siddaramaiah This Time ಸಚಿವ ಎಂ.ಬಿ. ಪಾಟೀಲ್ ಅವರು ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಯನ್ನು ಮತ್ತೆ ಬಲವಾಗಿ ಮುಂದಿಟ್ಟಿದ್ದು, ಇದು ಬಸವ ಧರ್ಮ ಆಧಾರಿತ ಭಾರತೀಯ ಮೂಲದ ಧರ್ಮ ಎಂದು ಪ್ರತಿಪಾದಿಸಿದ್ದಾರೆ.

Read Full Story

11:47 AM (IST) Oct 06

ಕುಡಿಯೋಕೆ ನೀರು ಕೊಡದ ಪತ್ನಿಯ ತಲೆಗೆ ಲಟ್ಟಣಿಗೆಯಿಂದ ಹೊಡೆದ ಪತಿ.. ನಂತರ ಆಗಿದ್ದೇನು?

ಕ್ಷುಲ್ಲಕ ಕಾರಣಕ್ಕೆ ಪಾಪಿ ಪತಿಯೋರ್ವ ತನ್ನ ಪತ್ನಿಯ ತಲೆಗೆ ಲಟ್ಟಣಿಗೆಯಿಂದ ಹೊಡೆದ ಘಟನೆ ಬೆಂಗಳೂರಿನ ಪೀಣ್ಯದ ಬಳಿಯ ಚೊಕ್ಕಸಂದ್ರದಲ್ಲಿ ನಡೆದಿದೆ. ಸೆಪ್ಟೆಂಬರ್ 24ರಂದು ನಡೆದಿದ್ದ ಘಟನೆಯು ಇದೀಗ ಬೆಳಕಿಗೆ ಬಂದಿದೆ.

Read Full Story

11:14 AM (IST) Oct 06

ಮಹಿಳಾ ಪ್ರಧಾನ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ - ಯೋಗರಾಜ್ ಭಟ್ ನಿರ್ದೇಶನ!

ಹರ್ಷಿಕಾ ಪೂಣಚ್ಚ ಅವರು ಮಹಿಳಾ ಪ್ರಧಾನ ಚಿತ್ರಕ್ಕೆ ನಾಯಕಿಯಾಗುತ್ತಿದ್ದಾರೆ. ಆ ಮೂಲಕ ತುಂಬಾ ದಿನಗಳ ನಂತರ ನಟಿ ಹರ್ಷಿಕಾ ಪೂಣಚ್ಚ ಅವರು ತೆರೆಗೆ ಮರಳುತ್ತಿದ್ದಾರೆ. ತಮ್ಮ ಈ ಹೊಸ ಚಿತ್ರವನ್ನು ತಮ್ಮ ಪುತ್ರಿಯ ಹುಟ್ಟುಹಬ್ಬದಂದು ಘೋಷಣೆ ಮಾಡಿದ್ದಾರೆ.

Read Full Story

10:55 AM (IST) Oct 06

ಪಾಕ್ ಕ್ರಿಕೆಟ್ ಅಭಿಮಾನಿಗಳ ನಿದ್ದೆ ಕದ್ದ ನಾಯಕಿ ಫಾತಿಮಾ ಸನಾ! ಈಕೆಯ ಬ್ಯೂಟಿಗೆ ಫ್ಯಾನ್ಸ್ ಫಿದಾ

ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಸನಾ ತನ್ನ ಅದ್ಭುತ ಆಟದ ಜತೆಗೆ ತಮ್ಮ ಬ್ಯೂಟಿ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ಅಷ್ಟಕ್ಕೂ ಯಾರು ಈ ಸನಾ? ಈಕೆಯ ಹಿನ್ನೆಲೆ ಏನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

Read Full Story

10:54 AM (IST) Oct 06

ಪತಿಗೆ ಕಿರುಕುಳ ನೀಡಿ ಮರುಜೀವನ ಬೇಕೆಂದ ಪತ್ನಿ ಅರ್ಜಿ ವಜಾ - ಹೈಕೋರ್ಟ್‌ ಆದೇಶ

ವರದಕ್ಷಿಣೆ ಕಿರುಕುಳದ ಆರೋಪ ಮಾಡಿ ಹಲವು ಬಾರಿ ಕೇಸ್‌ ದಾಖಲಿಸಿದ್ದ ಮಹಿಳೆಗೆ ಪತಿಯೊಂದಿಗೆ ಮರು ಜೀವನ ನಡೆಸಲು ಬಯಕೆ. ಪತಿಯಿಂದ ವಿರೋಧ ಬಂದಾಗ ವೈವಾಹಿಕ ಸಂಬಂಧ ಪುನರ್‌ ಸ್ಥಾಪಿಸಲು ಹೈಕೋರ್ಟ್‌ಗೆ ಮೊರೆ.

Read Full Story

More Trending News