LIVE NOW
Published : Mar 04, 2026, 06:51 AM ISTUpdated : Mar 04, 2026, 09:28 AM IST

Karnataka News Live: ಕಿವಿ ಹರ್ಕೊಂಡು ಒಂದು ಕೊಂಬು ಮುರ್ಕೊಂಡಿರೋ ಕಾಡಾನೆ ಭೀಮಾ - ಕಾಫಿ ತೋಟದ ಬೇಲಿಗಳೆಲ್ಲಾ ಪುಡಿ ಪುಡಿ

ಸಾರಾಂಶ

ಬೆಂಗಳೂರು: ನಿಮ್ಮ ಮತ್ತು ಡಿಸಿಎಂ ನಡುವಿನ ಕುಚುಕು ಕುಚುಕು ಬಗ್ಗೆ ನಮಗೇನೂ ಸಂಕಟವಿಲ್ಲ. ಆದರೆ ನಿಮ್ಮೊಳಗೆ ಹುದುಗಿದ್ದ ಅಸಹನೆಯ ಜ್ವಾಲಾಮುಖಿ ಅದೆಷ್ಟೋ ಬಾರಿ ವೇದಿಕೆಗಳ ಮೇಲೆಯೇ ಸ್ಫೋಟಿಸಿದೆ. ರಾಜ್ಯದ ಜನ ನೋಡಿ ಕೃತಾರ್ಥರಾಗಿದ್ದಾರೆ. ಎದುರಿಗೆ ನಗುವುದು, ಬೆನ್ನ ಹಿಂದೆ ಚೂರಿ ಹಾಕುವಷ್ಟು ನಿಮ್ಮಬ್ಬರ ಕುಚುಕು ಬಗ್ಗೆ ಜನತೆಗೆ ಗೊತ್ತಿಲ್ಲದ್ದು ಏನೂ ಇಲ್ಲವೇನೋ? ನಿಮ್ಮ ಸ್ನೇಹ ಚಿರಾಯುವಾಗಲಿ ಹಾಗೂ ನಿಮ್ಮ ಸ್ನೇಹಿತನಿಗಾಗಿ ನಿಮ್ಮ ವಚನ ಉಳಿಸಿಕೊಳ್ಳಿ ಮಿಸ್ಟರ್ ಅಗ್ರಿಮೆಂಟ್ ರಾಮಯ್ಯ... ಎಂದು ಹೆಚ್‌ ಡಿ ಕುಮಾರಸ್ವಾಮಿ ಕಾಲೆಳೆದಿದ್ದಾರೆ.

09:28 AM (IST) Mar 04

ಕಿವಿ ಹರ್ಕೊಂಡು ಒಂದು ಕೊಂಬು ಮುರ್ಕೊಂಡಿರೋ ಕಾಡಾನೆ ಭೀಮಾ - ಕಾಫಿ ತೋಟದ ಬೇಲಿಗಳೆಲ್ಲಾ ಪುಡಿ ಪುಡಿ

Wild elephant Bhima: ಚಿಕ್ಕಮಗಳೂರು: ಕಾಫಿತೋಟದಲ್ಲಿ ಕಾಡಾನೆ ಭೀಮನ ಹಾವಳಿ ಜೋರಾಗಿದ್ದು, ನಾನು ನಡೆದದ್ದೇ ದಾರಿ ಅಂತ ಕಾಫಿತೋಟದಲ್ಲಿ ಬಿಂದಾಸ್ ಆಗಿ ಓಡಾಡ್ತಿರುವ ಭೀಮನ ಫೋಟೊ ವೀಡಿಯೋಗಳು ವೈರಲ್ ಆಗಿವೆ.

Read Full Story

09:04 AM (IST) Mar 04

ಬರುತ್ತಿದ್ದಂತೆ ಕರ್ಣ, ನಿತ್ಯಾ, ನಿಧಿಗೆ ಪಿಂಡ ಇಟ್ಟ ಅಭಿಜಿತ್; ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಟಿಎಸ್ ನಾಗಾಭರಣ?

ಜೀ ಕನ್ನಡದ 'ಕರ್ಣ' ಧಾರಾವಾಹಿಯಲ್ಲಿ ರಮೇಶ್ ಪಾತ್ರದಿಂದ ಹಿರಿಯ ನಟ ಟಿ.ಎಸ್. ನಾಗಾಭರಣ ಹೊರನಡೆದಿದ್ದು, ಆ ಪಾತ್ರಕ್ಕೆ ಇದೀಗ ನಟ ಅಭಿಜಿತ್ ಪ್ರವೇಶಿಸಿದ್ದಾರೆ. ರಮೇಶ್ ಪಾತ್ರದಲ್ಲಿ ಅಭಿಜಿತ್, ಕರ್ಣನ ಮುಂದಿನ ಹೆಜ್ಜೆಗಳನ್ನು ತಾನೇ ನಿರ್ಧರಿಸುವುದಾಗಿ ಪಣ ತೊಟ್ಟಿದ್ದಾರೆ.

Read Full Story

08:50 AM (IST) Mar 04

ಮಾಲೀಕ ಆಸ್ಪತ್ರೆಯಲ್ಲಿದ್ದಾಗ ಕುರಿ ಶೆಡ್‌ಗೆ ಬೆಂಕಿ - 30ಕ್ಕೂ ಹೆಚ್ಚು ಕುರಿಗಳು ಸಜೀವ ದಹನ

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದಲ್ಲಿ ಕುರಿ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 30ಕ್ಕೂ ಹೆಚ್ಚು ಕುರಿಗಳು ಸಜೀವ ದಹನವಾಗಿವೆ. ಮಾಲೀಕ ಹುಚ್ಚಪ್ಪ ಮುದ್ದಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗ ಈ ದುರಂತ ಸಂಭವಿಸಿದೆ.

Read Full Story

08:38 AM (IST) Mar 04

ದರರ್ಶನ್ & ರೇಣುಕಾಸ್ವಾಮಿ ಕೇಸ್ - ಇನ್‌ಸ್ಪೆಕ್ಟರ್‌ ಗಿರೀಶ್ ನಾಯ್ಕ್ ‘ಆರೋಪಿ’ ಮನವಿಗೆ ಆಕ್ಷೇಪ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಸುಳ್ಳು ಸಾಕ್ಷ್ಯ ಸೃಷ್ಟಿ ಆರೋಪದ ಮೇಲೆ ತನಿಖಾಧಿಕಾರಿ ಗಿರೀಶ್ ನಾಯ್ಕ್ ಅವರನ್ನೇ ಆರೋಪಿಯನ್ನಾಗಿಸಬೇಕೆಂಬ ಮನವಿಗೆ ವಿಶೇಷ ಸರ್ಕಾರಿ ಅಭಿಯೋಜಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

Read Full Story

08:37 AM (IST) Mar 04

ಇರಾನ್‌ ಅಣ್ವಸ್ತ್ರ ತಯಾರಿ ಅಂತಿಮ ಹಂತಕ್ಕೆ ತಲುಪಿದ್ದೇ ದಾಳಿಗೆ ಕಾರಣ

ಇರಾನ್‌ನ ಅಣ್ವಸ್ತ್ರದ ಕನಸಿಗೆ ಹಲವು ದಶಕಗಳಿಂದ ಅಡ್ಡಿ ಮಾಡುತ್ತಲೇ ಇದ್ದ ಅಮೆರಿಕ ಇದೀಗ ದಿಢೀರನೆ ಆ ದೇಶದ ಮೇಲೆ ದಾಳಿ ಮಾಡಲು, ಅದು ಇನ್ನೇನು ಅಣ್ವಸ್ತ್ರ ತಯಾರಿಯ ಅಂತಿಮ ಹಂತಕ್ಕೆ ಬಂದಿದ್ದೇ ಕಾರಣ ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ

Read Full Story

08:19 AM (IST) Mar 04

ಸೋಮವಾರಪೇಟೆ - ಮನೆಯಲ್ಲಿ ಆಕಸ್ಮಿಕ ಬೆಂಕಿ - 1 ಕಾಲು ಕಳೆದುಕೊಂಡಿದ್ದ ಯೋಧ ಹೊರ ಬಾರಲಾಗದೇ ಸಜೀವ ದಹನ

Former CRPF soldier death: ಕೊಡಗಿನ ಸೋಮವಾರಪೇಟೆಯಲ್ಲಿ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಾಜಿ ಸಿಆರ್‌ಪಿಎಫ್ ಯೋಧರೊಬ್ಬರು ಸಜೀವ ದಹನಗೊಂಡಿದ್ದಾರೆ. ಕಾಲು ಕಳೆದುಕೊಂಡಿದ್ದ 64 ವರ್ಷದ ವೆಂಕಟೇಶ್ ಅವರು, ಬೆಂಕಿ ಹೊತ್ತಿಕೊಂಡಾಗ ಮನೆಯಿಂದ ಹೊರಬರಲಾಗದೆ ದುರಂತ ಅಂತ್ಯ ಕಂಡಿದ್ದಾರೆ.

Read Full Story

08:06 AM (IST) Mar 04

ಪುತ್ತೂರಿನಲ್ಲಿ ತೀರಾ ಸಮೀಪ ಹಾರಾಡಿ ಜನರಲ್ಲಿ ಆತಂಕ ಸೃಷ್ಟಿಸಿದ ವಿಮಾನ; ಇಲ್ಲಿದೆ ಕಾರಣ

ಪುತ್ತೂರು ನಗರದಲ್ಲಿ ಮಂಗಳವಾರ ತೀರಾ ಸಮೀಪದಲ್ಲಿ ಹಾರಾಡಿದ ವಿಮಾನ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಬಳಿಕ ಇದು ಭೂ ಭೌತಿಕ ಸಮೀಕ್ಷೆ ನಡೆಸುವ ಸೆಸ್ನಾ ವಿಮಾನವಾಗಿದ್ದು, ಖನಿಜ ಮತ್ತು ಜಲ ಸಂಪನ್ಮೂಲಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ ಎಂದು ತಿಳಿದುಬಂದಿದೆ.
Read Full Story

07:51 AM (IST) Mar 04

Hassan - ನಿಧಾನವಾಗಿ ಚಲಿಸು ಎಂದಿದ್ದಕ್ಕೆ ಕಾರ್ ಗುದ್ದಿಸಿ ಯುವಕನ ಭೀಕರ ಹತ್ಯೆ; ಮೂವರು ಪಾರು

ಹೊಳೆನರಸೀಪುರದ ಸೂರನಹಳ್ಳಿ ಬಳಿ, ನಿಧಾನವಾಗಿ ಚಲಿಸುವಂತೆ ಬುದ್ಧಿಮಾತು ಹೇಳಿದ್ದಕ್ಕೆ ಕೋಪಗೊಂಡ ಕಾರು ಚಾಲಕನೊಬ್ಬ ನಾಲ್ವರ ಮೇಲೆ ಕಾರು ಹರಿಸಿದ್ದಾನೆ. ಈ ಘಟನೆಯಲ್ಲಿ ಮನು ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

Read Full Story

07:50 AM (IST) Mar 04

ಬಾಣಂತನಕ್ಕೆ ಹೋದ ಹೆಂಡ್ತಿ - ಊಟಕ್ಕೆಂದು ಹೊಟೇಲ್‌ಗೆ ಹೋದಾಗ ಆಕಸ್ಮಿಕವಾಗಿ ಕಾಲ್ತುಳಿದಿದ್ದಕ್ಕೆ ಯುವಕನ ಕೊಲೆ

ಬೆಂಗಳೂರಿನ ಬಸವೇಶ್ವರ ನಗರದ ಹೋಟೆಲ್‌ನಲ್ಲಿ ದೋಸೆ ತಿನ್ನುವಾಗ ಆಕಸ್ಮಿಕವಾಗಿ ಕಾಲು ತುಳಿದಿದ್ದರಿಂದ ರೊಚ್ಚಿಗೆದ್ದ ಯುವಕರಿಬ್ಬರು, ಖಾಸಗಿ ಕಂಪನಿ ಉದ್ಯೋಗಿಯೊಬ್ಬರನ್ನು ಡ್ಯಾಗರ್‌ನಿಂದ ಇರಿದು ಕೊಲೆ ಮಾಡಿದ್ದಾರೆ. ಮೃತ ವ್ಯಕ್ತಿಗೆ 11 ತಿಂಗಳ ಮಗುವಿದೆ.

Read Full Story

07:33 AM (IST) Mar 04

ಈ ಕೆಟ್ಟ ಸಂಸ್ಕೃತಿಯನ್ನು ನಾವು ಕೊನೆಗಾಣಿಸಲೇಬೇಕು - ಕಾಂತಾರ ನಟಿ ಸಪ್ತಮಿ ಗೌಡ ಆಗ್ರಹ

‘ಕಾಂತಾರ’ ಖ್ಯಾತಿಯ ನಟಿ ಸಪ್ತಮಿ ಗೌಡ ಅವರು ಸಿನಿಮಾ ಕಾರ್ಯಕ್ರಮಗಳಲ್ಲಿ ಪಾಪರಾಜಿಗಳು ಮತ್ತು ಯೂಟ್ಯೂಬರ್‌ಗಳು ನಟಿಯರ ಅಸಭ್ಯ ಫೋಟೋ ಮತ್ತು ವೀಡಿಯೋಗಳನ್ನು ತೆಗೆಯುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೆಟ್ಟ ಸಂಸ್ಕೃತಿಯನ್ನು ಕೊನೆಗಾಣಿಸಬೇಕೆಂದು ಒತ್ತಾಯಿಸಿದ್ದಾರೆ.

Read Full Story

07:17 AM (IST) Mar 04

ಬೆಂಗಳೂರಲ್ಲಿ ಮೊಬೈಲ್ ಕದಿಯಲು ದೆಹಲಿಯಿಂದ ವಿಮಾನದಲ್ಲಿ ಬರುತ್ತಿದ್ದ ಚಾಲಾಕಿಗಳ ಬಂಧನ

ಬೆಂಗಳೂರಿನ ಸಂಗೀತ ಕಾರ್ಯಕ್ರಮಗಳಲ್ಲಿ ಮೊಬೈಲ್ ಕದಿಯಲೆಂದೇ ದೆಹಲಿಯಿಂದ ವಿಮಾನದಲ್ಲಿ ಬರುತ್ತಿದ್ದ ಇಬ್ಬರು ಖದೀಮರನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 9 ಲಕ್ಷ ಮೌಲ್ಯದ 14 ಐಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Read Full Story

07:11 AM (IST) Mar 04

ಬೈಕ್ ಶೋರೂಮ್‌ಗಳಿಂದ ಮಹಾ ವಂಚನೆ - ಸಬ್ಸಿಡಿ ಸಿಗುತ್ತೆ ಅಂತ ಸಾಲ ಮಾಡಿಸಿ ಬೈಕ್ - 3250 ಜನರಿಗೆ 35 ಕೋಟಿ ರೂ ವಂಚನೆ

ಕೇಂದ್ರ ಸರ್ಕಾರದ ಸಬ್ಸಿಡಿ ಹೆಸರಿನಲ್ಲಿ ಎಲೆಕ್ಟಿಕ್ ಬೈಕ್ ನೀಡುವುದಾಗಿ ನಂಬಿಸಿ, 'ಆಪೈ ಇವಿ' ಮತ್ತು 'ಬಿಲ್ಕರ್ ಟೆಕ್ನೋಲಜಿ' ಎಂಬ ಬೈಕ್ ಶೋರೂಂಗಳು ಸಾವಿರಾರು ಗ್ರಾಹಕರಿಗೆ ವಂಚಿಸಿವೆ. ಗ್ರಾಹಕರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು, ಸುಮಾರು 35 ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ.

Read Full Story

07:09 AM (IST) Mar 04

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ - ಡಿಸಿಎಂ

ನಾನು ಈವರೆಗೆ ಮುಖ್ಯಮಂತ್ರಿ ಸ್ಥಾನ ಖಾಲಿ ಆಗುತ್ತದೆ ಎಂದು ಎಲ್ಲೂ ಹೇಳಿಲ್ಲ. ನಾನು ಯಾವತ್ತೂ ಪಕ್ಷದ ಶಿಸ್ತು ಉಲ್ಲಂಘಿಸುವುದಿಲ್ಲ, ಅಧ್ಯಕ್ಷನಾಗಿ ಪಕ್ಷ ಕೊಲ್ಲುತ್ತಿದ್ದೀಯಾ ಎಂದು ಯಾರೂ ಬೆರಳು ತೋರಿಸಬಾರದು ಎಂಬಂತಿದ್ದೇನೆ.

Read Full Story

07:02 AM (IST) Mar 04

ಹಣ್ಣು ಬದಲು ಬಟ್ಟೆ ಸಂಗ್ರಹಿಸಿದ್ದ ಕೋಲ್ಡ್‌ ಸ್ಟೋರೇಜ್‌!

ಬೆಂಗಳೂರಿನ ದೇವನಹಳ್ಳಿ ಸಮೀಪದ ಪೂಜೇನಹಳ್ಳಿಯಲ್ಲಿರುವ ಕೆಪೆಕ್ ಕೋಲ್ಡ್ ಸ್ಟೋರೇಜ್‌ನಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ನಾಲ್ಕು ಲೋಡ್ ರೆಡಿಮೇಡ್ ಬಟ್ಟೆಗಳನ್ನು ಜಿಎಸ್‌ಟಿ ಅಧಿಕಾರಿಗಳು ವಶಪಡಿಸಿಕೊಂಡು, ಕೋಲ್ಡ್ ಸ್ಟೋರೇಜ್ ಸೀಜ್ ಮಾಡಿರುವ ಘಟನೆ ಸೋಮವಾರ ನಡೆದಿದೆ.

Read Full Story

More Trending News