ಬೆಂಗಳೂರು: ನಿಮ್ಮ ಮತ್ತು ಡಿಸಿಎಂ ನಡುವಿನ ಕುಚುಕು ಕುಚುಕು ಬಗ್ಗೆ ನಮಗೇನೂ ಸಂಕಟವಿಲ್ಲ. ಆದರೆ ನಿಮ್ಮೊಳಗೆ ಹುದುಗಿದ್ದ ಅಸಹನೆಯ ಜ್ವಾಲಾಮುಖಿ ಅದೆಷ್ಟೋ ಬಾರಿ ವೇದಿಕೆಗಳ ಮೇಲೆಯೇ ಸ್ಫೋಟಿಸಿದೆ. ರಾಜ್ಯದ ಜನ ನೋಡಿ ಕೃತಾರ್ಥರಾಗಿದ್ದಾರೆ. ಎದುರಿಗೆ ನಗುವುದು, ಬೆನ್ನ ಹಿಂದೆ ಚೂರಿ ಹಾಕುವಷ್ಟು ನಿಮ್ಮಬ್ಬರ ಕುಚುಕು ಬಗ್ಗೆ ಜನತೆಗೆ ಗೊತ್ತಿಲ್ಲದ್ದು ಏನೂ ಇಲ್ಲವೇನೋ? ನಿಮ್ಮ ಸ್ನೇಹ ಚಿರಾಯುವಾಗಲಿ ಹಾಗೂ ನಿಮ್ಮ ಸ್ನೇಹಿತನಿಗಾಗಿ ನಿಮ್ಮ ವಚನ ಉಳಿಸಿಕೊಳ್ಳಿ ಮಿಸ್ಟರ್ ಅಗ್ರಿಮೆಂಟ್ ರಾಮಯ್ಯ... ಎಂದು ಹೆಚ್ ಡಿ ಕುಮಾರಸ್ವಾಮಿ ಕಾಲೆಳೆದಿದ್ದಾರೆ.

10:14 PM (IST) Mar 04
08:06 PM (IST) Mar 04
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ 'ಚೆಲುವಿನ ಚಿತ್ತಾರ' ಸಿನಿಮಾದಂತೆಯೇ ಘಟನೆಯೊಂದು ನಡೆದಿದೆ. ಪೋಷಕರ ವಿರೋಧದ ನಡುವೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಸೃಷ್ಟಿ ಮತ್ತು ಮಣಿಕಂಠ ಜೋಡಿಯನ್ನು, ಯುವತಿಯ ಪೋಷಕರೇ ಬಲವಂತವಾಗಿ ಬೇರ್ಪಡಿಸಿದ್ದಾರೆ.
06:34 PM (IST) Mar 04
ದಾವಣಗೆರೆ ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದು, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದಾಗ ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ.
06:29 PM (IST) Mar 04
ಹಾಗಲಕಾಯಿ ಅಂದಕೂಡಲೇ ಅದರ ಕಹಿಯ ನೆನಪಾಗಿ ಅನೇಕರು ಮುಖ ಹಿಂಡುತ್ತಾರೆ. ಆದರೆ, ಆಯುರ್ವೇದದಲ್ಲಿ 'ರಾಮಬಾಣ' ಎಂದು ಕರೆಸಿಕೊಳ್ಳುವ ಈ ತರಕಾರಿ ಆರೋಗ್ಯದ ಗಣಿಯಾಗಿದೆ. ಹಾಗಲಕಾಯಿಯ ಅದ್ಭುತ ಪ್ರಯೋಜನಗಳು ಮತ್ತು ಅದರ ಕಹಿಯನ್ನು ಹೋಗಲಾಡಿಸುವ 6 ಸರಳ ಸೂತ್ರಗಳು ಇಲ್ಲಿವೆ
06:21 PM (IST) Mar 04
06:10 PM (IST) Mar 04
ಬಾಲಿವುಡ್ನಿಂದ ಹಾಲಿವುಡ್ವರೆಗೆ ತನ್ನದೇ ಆದ ಛಾಪು ಮೂಡಿಸಿರುವ 'ದೇಶಿ ಗರ್ಲ್' ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್ ಪಾಪ್ ಸಿಂಗರ್ ನಿಕ್ ಜೋನಸ್ ಜೋಡಿ ಸದಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತದೆ. ಈ ಜೋಡಿ ಕೇವಲ ಸಿನಿಮಾಗಳಿಗಾಗಿ ಮಾತ್ರವಲ್ಲದೆ ವಿಭಿನ್ನ ವಿಷಯಕ್ಕೂ ಸುದ್ದಿಯಾಗುತ್ತಾರೆ.
06:05 PM (IST) Mar 04
ಬೀದರ್ನ ಪ್ರತಿಷ್ಠಿತ ಬ್ರಿಮ್ಸ್ ಆಸ್ಪತ್ರೆಯಲ್ಲಿ ಎಕ್ಸ್-ರೇ ಸೌಲಭ್ಯಕ್ಕಾಗಿ ದಿನಗಟ್ಟಲೆ ಕಾಯುವಂತಾದ ಔರಾದ್ ನಿವಾಸಿ ಆನಂದ ಕರಬಾಳೆ ಎಂಬುವವರು, ಚಿಕಿತ್ಸೆ ಸಿಗದೆ ಮನನೊಂದು ಆತ್ಮ೧ಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯು ಆಸ್ಪತ್ರೆಯ ಅವ್ಯವಸ್ಥೆ, ಸಿಬ್ಬಂದಿಯ ಬೇಜವಾಬ್ದಾರಿ ಬಯಲಾಗಿದೆ.
05:54 PM (IST) Mar 04
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನಲ್ಲಿ ನಿರಂತರ ಕಾಡಾನೆ ಹಾವಳಿಯನ್ನು ತಡೆಯಲು ರಾಜ್ಯ ಸರ್ಕಾರವು 7.71 ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ₹12.77 ಕೋಟಿ ಅನುದಾನ ಬಿಡುಗಡೆ ಮಾಡಿದೆ.
05:54 PM (IST) Mar 04
ನಟ ಸುದೀಪ್ ಅವರಿಗೆ 'ಕಿಚ್ಚ' ಎಂಬ ಹೆಸರು ಬಂದಿದ್ದು 2001ರ 'ಹುಚ್ಚ' ಸಿನಿಮಾದಿಂದ. ಈ ಸಿನಿಮಾದಲ್ಲಿ 'ಕಿಚ್ಚ' ಪದದ ಅರ್ಥ ಹುಡುಕುವ ದೃಶ್ಯವಿದ್ದು, ಕೊನೆಗೆ ಜ್ಯೋತಿಷಿಯೊಬ್ಬರು ಕಿಚ್ಚ ಶಬ್ದದ ಅರ್ಥ ವಿವರಿಸುತ್ತಾರೆ. ಈ ಮೂಲಕ ಸುದೀಪ್ ಅವರ ಜನಪ್ರಿಯ ಹೆಸರಿನ ಹಿಂದಿನ ಕಥೆಯನ್ನು ಲೇಖನವು ತಿಳಿಸುತ್ತದೆ.
05:33 PM (IST) Mar 04
ಮಂಗಳೂರಿನ ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ನಲ್ಲಿನ ತೀವ್ರ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ, ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸಲು ದಕ್ಷಿಣ ರೈಲ್ವೆ ಅನುಮೋದನೆ ನೀಡಿದೆ. ಸಂಸದ ಬ್ರಿಜೇಶ್ ಚೌಟ ಅವರ ಪ್ರಯತ್ನದ ಫಲವಾಗಿ ಈ ಯೋಜನೆ ಜಾರಿಯಾಗುತ್ತಿದೆ.
05:23 PM (IST) Mar 04
05:07 PM (IST) Mar 04
ಬೆಂಗಳೂರು ಮೂಲದ ಐಟಿ ಸ್ಟಾರ್ಟ್ಅಪ್ ಒಂದೇ ದಿನದಲ್ಲಿ ತನ್ನ 40% ಉದ್ಯೋಗಿಗಳನ್ನು ವಜಾಗೊಳಿಸಿದೆ. ವಾರ್ಷಿಕ ₹92 ಲಕ್ಷ ಸಂಬಳ ಪಡೆಯುತ್ತಿದ್ದ ಉದ್ಯೋಗಿ ಸೇರಿದಂತೆ ಹಲವರು ಕೆಲಸ ಕಳೆದುಕೊಂಡಿದ್ದು, ಈ ಘಟನೆಯು ಭಾರತದ ತಂತ್ರಜ್ಞಾನ ವಲಯದಲ್ಲಿನ ಹೆಚ್ಚುತ್ತಿರುವ ಉದ್ಯೋಗ ಅನಿಶ್ಚಿತತೆಯನ್ನು ತೋರಿಸುತ್ತದೆ.
04:52 PM (IST) Mar 04
ಮುನಿಸಿಕೊಂಡ ಗ್ರಾಹಕರ ಸೆಳೆಯಲು ಓಲಾ ಎಲೆಕ್ಟ್ರಿಕ್ ಹೋಳಿ ಆಫರ್, ಕೈಗೆಟುಕುವ ದರದಲ್ಲಿ ಇವಿ ಬೈಕ್, ಹಬ್ಬದ ಆಫರ್ ಮೂಲಕ ಸ್ಕೂಟರ್ ಖರೀದಿಸಲು ಓಲಾ ವಿಶೇಷ ಆಫರ್ ನೀಡಿದೆ. ಟೀಕೆ, ದೂರುಗಳಿಂದ ಸೊರಗಿದ್ದ ಓಲಾ ಹೊಸ ಆಫರ್ ನೀಡಿದೆ.
04:28 PM (IST) Mar 04
ಬೆಂಗಳೂರು ಮೂಲದ ಟೆಕ್ಕಿ ದೀಕ್ಷಾ ಅಗರ್ವಾಲ್, ಗೂಗಲ್ನಲ್ಲಿ ತಮ್ಮ ಮೊದಲ ವರ್ಷದ ಸೇವೆಯಲ್ಲಿ ಕಲಿತ ಮಹತ್ವದ ಪಾಠಗಳನ್ನು ಹಂಚಿಕೊಂಡಿದ್ದಾರೆ. ಸರಳ ಕೋಡಿಂಗ್, ಗುಣಮಟ್ಟದ ಪರೀಕ್ಷೆ, ದೋಷಾರೋಪಣೆಗಿಂತ ಪರಿಹಾರಕ್ಕೆ ಆದ್ಯತೆ ನೀಡುವ ಸಂಸ್ಕೃತಿವಿವರಿಸಿದ್ದಾರೆ.
04:16 PM (IST) Mar 04
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ವಿದ್ಯುತ್ ದರವನ್ನು ಪರಿಷ್ಕರಿಸಿದ್ದು, ಏಪ್ರಿಲ್ 1 ರಿಂದ ಹೊಸ ದರಗಳು ಜಾರಿಗೆ ಬರಲಿವೆ. ಈ ನಿರ್ಧಾರದಿಂದ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೆ ದರ ಏರಿಕೆಯಾಗಿದ್ದು, ಗೃಹ ಬಳಕೆದಾರರ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.
04:14 PM (IST) Mar 04
ಇತ್ತೀಚಿನ ಕೆಪಿಎಸ್ಸಿ ಪರೀಕ್ಷಾ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಒಂದೇ ಪರೀಕ್ಷಾ ಕೊಠಡಿಯಿಂದ 10ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸಾಗಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಕೆಪಿಎಸ್ಸಿ ಕಾರ್ಯದರ್ಶಿ ಜ್ಯೋತಿ ತಿಳಿಸಿದ್ದಾರೆ.
04:12 PM (IST) Mar 04
ಬಳ್ಳಾರಿಯ ಎಎಸ್ಎಂ ಮಹಿಳಾ ಕಾಲೇಜು ಬಳಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಮೂರು ಬೈಕ್ಗಳಿಗೆ ಡಿಕ್ಕಿ ಹೊಡೆದ ಚಾಲಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ಕಾರು ಪಲ್ಟಿಯಾಗಿ ಜಖಂಗೊಂಡಿದೆ.
03:46 PM (IST) Mar 04
ಒಳ ಮೀಸಲಾತಿ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ, ಆದರೆ ಕಾನೂನಾತ್ಮಕ ತೊಡಕುಗಳಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನೇಮಕಾತಿ ಪ್ರಕ್ರಿಯೆ, ಬಿಜೆಪಿ ವಿರುದ್ಧದ ಆರೋಪ, ದಲಿತ ನಾಯಕರ ಸರಣಿ ಸಭೆ ಕುರಿತು ಅವರು ಮಾಹಿತಿ, ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲೇ ನಿಭಾಯಿಸುವುದಾಗಿ ತಿಳಿಸಿದ್ದಾರೆ.
03:42 PM (IST) Mar 04
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಪ್ರತಿದಿನದ ವಿಚಾರಣೆ, ಮನೆಯೂಟ ಸೇರಿದಂತೆ ದರ್ಶನ್ ಪರ ವಕೀಲರ ಹಲವು ಮನವಿಗಳಿಗೆ ವಿಶೇಷ ಸರ್ಕಾರಿ ಅಭಿಯೋಜಕರು (ಎಸ್ಪಿಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
03:38 PM (IST) Mar 04
2 ಮಹಡಿಗಿಂತ ಹೆಚ್ಚಿನ ಕಟ್ಟಡಗಳು ಮತ್ತು ಪಿಜಿಗಳಲ್ಲಿ ಹಸಿ ಮತ್ತು ಒಣ ಕಸಕ್ಕೆ ಪ್ರತ್ಯೇಕ ಡಬ್ಬಿಗಳನ್ನು ಕಡ್ಡಾಯಗೊಳಿಸಲು ಜಿಬಿಎ ಮುಂದಾಗಿದೆ. ಸಾರ್ವಜನಿಕ ಸಭೆಯಲ್ಲಿ ಈ ವಿಷಯ ತಿಳಿಸಿದ ಮುಖ್ಯ ಆಯುಕ್ತ ಮಹೇಶ್ವರ ರಾವ್, ಕಟ್ಟಡ ನಿಯಮ ಉಲ್ಲಂಘನೆ ವಿರುದ್ಧವೂ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
02:03 PM (IST) Mar 04
01:50 PM (IST) Mar 04
ಬೆಂಗಳೂರಿನ ರಸ್ತೆಯಲ್ಲಿ 15 ದಿನಗಳ ಕಾಲ ರಸ್ತೆ ದುರಸ್ತಿ ಕಾಮಗಾರಿ ನಡೆಯಲಿದೆ. ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದ್ದು, ಡಾಂಬರೀಕರಣದ ಸಮಯದಲ್ಲಿ ಪರ್ಯಾಯ ಮಾರ್ಗ ಸೂಚಿಸಲಾಗುವುದು.
01:43 PM (IST) Mar 04
ತುಮಕೂರಿನ ಬೆಳ್ಳಾವಿ ಮಠದಲ್ಲಿ ಹುಟ್ಟುಹಬ್ಬದ ಪ್ಲೆಕ್ಸ್ ವಿಚಾರಕ್ಕೆ ಯುವಕರು ಗಲಾಟೆ ಮಾಡಿದ್ದರಿಂದ ಮನನೊಂದ ವೀರಬಸವ ಸ್ವಾಮೀಜಿ ಮಠವನ್ನೇ ತೊರೆದಿದ್ದಾರೆ. ಎರಡು ದಿನಗಳ ನಂತರ ನಾಪತ್ತೆಯಾಗಿದ್ದ ಶ್ರೀಗಳು ಸಿದ್ದಗಂಗಾ ಮಠದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದು, ಗಲಾಟೆ ಮಾಡಿದ ಯುವಕರು ಪೊಲೀಸರು ವಶಕ್ಕೆ
01:37 PM (IST) Mar 04
01:27 PM (IST) Mar 04
ಮಧ್ಯಪ್ರಾಚ್ಯದಲ್ಲಿನ ಯುದ್ಧದ ಭೀತಿಯಿಂದಾಗಿ ಕರ್ನಾಟಕದ ಭಟ್ಕಳ, ಬೆಂಗಳೂರು ಸೇರಿದಂತೆ ಹಲವೆಡೆ ಪೆಟ್ರೋಲ್ ಬಂಕ್ಗಳಲ್ಲಿ ಜನಜಂಗುಳಿ ಉಂಟಾಗಿದೆ. ಇರಾನ್ ಹೋರ್ಮುಜ್ ಜಲಸಂಧಿಯನ್ನು ಬಂದ್ ಮಾಡುವ ಎಚ್ಚರಿಕೆ ನೀಡಿರುವುದರಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಆತಂಕ ಸೃಷ್ಟಿಯಾಗಿದೆ.
01:06 PM (IST) Mar 04
ಬೆಂಗಳೂರು ಮಂಗಳವಾರ 13ರ 'ತೀವ್ರ' ಯುವಿ ಸೂಚ್ಯಂಕವನ್ನು ದಾಖಲಿಸಿದೆ, ಇದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಅಪಾಯಕಾರಿ ಮಟ್ಟವಾಗಿದೆ. ಈ ಹೆಚ್ಚಳವು ಚರ್ಮದ ಕ್ಯಾನ್ಸರ್, ಬಿಸಿಲಿನ ಬೇಗೆಯಂತಹ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಿದೆ.
01:04 PM (IST) Mar 04
ಬೆಂಗಳೂರಿನಲ್ಲಿ ಅಡುಗೆ ಮಾಡುವ ವಿಚಾರವಾಗಿ ಅತ್ತೆಯೊಂದಿಗೆ ನಡೆದ ಜಗಳದ ನಂತರ ಇಂಜಿನಿಯರ್ ಸೊಸೆ ಸುಷ್ಮಾ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪೋಷಕರು ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದು, ಪೊಲೀಸರು ಪತಿಯನ್ನು ಬಂಧಿಸಿದ್ದಾರೆ. ಘಟನೆಯ ನಂತರ ಆರೋಪಿ ಅತ್ತೆ ಪರಾರಿಯಾಗಿದ್ದಾರೆ.
01:04 PM (IST) Mar 04
ಬೆಂಗಳೂರಿನ ಬೆಳ್ಳಿ ವ್ಯಾಪಾರಿಯೊಬ್ಬರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯೋಗೇಶ ಸಿಂಗ್ ಎಂಬಾತ, ಹುಬ್ಬಳ್ಳಿಯಲ್ಲಿ ₹59 ಲಕ್ಷ ಮೌಲ್ಯದ 24 ಕೆಜಿ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.
12:50 PM (IST) Mar 04
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅತ್ಯಧಿಕ ತೆರಿಗೆ ಸಂಗ್ರಹಿಸುವ ಮೂಲಕ ಶೇ. 103ರಷ್ಟು ಗುರಿ ಸಾಧಿಸಿದೆ. ಈ ಐತಿಹಾಸಿಕ ಸಾಧನೆಯೊಂದಿಗೆ, ಕಡಬ ತಾಲೂಕು ಜಿಲ್ಲೆ ಹಾಗೂ ರಾಜ್ಯದಲ್ಲೇ ತೆರಿಗೆ ಸಂಗ್ರಹಣೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
12:41 PM (IST) Mar 04
'ನಾ ನಿನ್ನ ಬಿಡಲಾರೆ' ಸೀರಿಯಲ್ ಖ್ಯಾತಿಯ ನಟಿ ನೀತಾ ಅಶೋಕ್ ಅವರು ಶೂಟಿಂಗ್ ವೇಳೆ ಕಾಲು ಮುರಿದುಕೊಂಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸರ್ಜರಿಗೆ ಒಳಗಾಗಿದ್ದು, ಆಸ್ಪತ್ರೆಯಲ್ಲಿಯೇ ಕೆಲವು ದೃಶ್ಯಗಳ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ. ಈ ಕುರಿತು ನಟಿ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
12:41 PM (IST) Mar 04
ಇರಾನ್-ಇಸ್ರೇಲ್ ಯುದ್ಧದ ಕಾರಣದಿಂದಾಗಿ, ಬೆಂಗಳೂರಿನ ಎಂಟು ಮಂದಿ ಹಿರಿಯ ಸ್ನೇಹಿತರು ಕತಾರ್ನ ದೋಹಾ ಬಂದರಿನಲ್ಲಿ ಕ್ರೂಸ್ ಶಿಪ್ನಲ್ಲಿ ಸಿಲುಕಿಕೊಂಡಿದ್ದಾರೆ. ಇತರ ದೇಶಗಳು ತಮ್ಮ ಪ್ರಜೆಗಳನ್ನು ರಕ್ಷಿಸಿದ್ದರೂ, ಭಾರತ ಸರ್ಕಾರದ ವಿಳಂಬ ಮಾಡಿದೆ ಎಂದು ಸಂತ್ರಸ್ತರ ಆರೋಪ.
12:04 PM (IST) Mar 04
11:56 AM (IST) Mar 04
ಈ ಲೇಖನವು ಮನೆಯಲ್ಲಿ ಪಾಟ್ ಬಳಸಿ ಕಾಳುಮೆಣಸಿನ ಗಿಡವನ್ನು ಹೇಗೆ ಸುಲಭವಾಗಿ ಬೆಳೆಸಬಹುದು ಎಂಬುದನ್ನು ವಿವರಿಸುತ್ತದೆ. ಪಾಟ್ ಸಿದ್ಧತೆ, ನಾಟಿ ಮಾಡುವ ವಿಧಾನ, ನೀರು ಮತ್ತು ಗೊಬ್ಬರದ ನಿರ್ವಹಣೆಯಿಂದ ಹಿಡಿದು ಫಸಲು ಪಡೆಯುವವರೆಗಿನ ಸಂಪೂರ್ಣ ಮಾಹಿತಿಯನ್ನು ಇದು ಒಳಗೊಂಡಿದೆ.
11:49 AM (IST) Mar 04
Illegal cow slaughter in Karnataka: ಚಿಕ್ಕಮಗಳೂರಿನಲ್ಲಿ ಗೋವಿನ ಕಳೇಬರ ಪತ್ತೆಯಾದ ಹಿನ್ನೆಲೆ ಪ್ರತಿಭಟನೆ ನಡೆಸಿದ ಭಜರಂಗದಳ ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಾಗಿದೆ. ಮತ್ತೊಂದೆಡೆ, ಬಳ್ಳಾರಿಯಲ್ಲಿ ಕೇರಳದ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 29 ಜಾನುವಾರುಗಳನ್ನು ರಕ್ಷಿಸಲಾಗಿದೆ.
11:21 AM (IST) Mar 04
ಬೆಂಗಳೂರಿನ HSR ಲೇಔಟ್ ಸಮೀಪದ 900 ವರ್ಷಗಳ ಇತಿಹಾಸವಿರುವ ಎಳ್ಳುಕುಂಟೆ ಗ್ರಾಮದ ಪುರಾತನ ದೇವಾಲಯದಲ್ಲಿ ನಿಧಿಗಾಗಿ ಕಿಡಿಗೇಡಿಗಳು 15 ಅಡಿ ಆಳದ ಗುಂಡಿ ತೋಡಿದ್ದಾರೆ. ಈ ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದು, ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕೈವಾಡವನ್ನು ಶಂಕಿಸಿದ್ದಾರೆ.
11:19 AM (IST) Mar 04
10:27 AM (IST) Mar 04
10:16 AM (IST) Mar 04
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಬಿಡುಗಡೆ ದಿನಾಂಕವನ್ನು ಮಾರ್ಚ್ 19 ರಿಂದ ಮುಂದೂಡಲಾಗಿದೆ. ರಣ್ವೀರ್ ಸಿಂಗ್ ನಟನೆಯ 'ಧುರಂಧರ್-2' ಚಿತ್ರದೊಂದಿಗೆ ಮುಖಾಮುಖಿ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಚಿತ್ರದ ಟ್ರೇಲರ್ ಮಾರ್ಚ್ 8 ರಂದು ಬಿಡುಗಡೆಯಾಗಲಿದೆ.
09:28 AM (IST) Mar 04
Wild elephant Bhima: ಚಿಕ್ಕಮಗಳೂರು: ಕಾಫಿತೋಟದಲ್ಲಿ ಕಾಡಾನೆ ಭೀಮನ ಹಾವಳಿ ಜೋರಾಗಿದ್ದು, ನಾನು ನಡೆದದ್ದೇ ದಾರಿ ಅಂತ ಕಾಫಿತೋಟದಲ್ಲಿ ಬಿಂದಾಸ್ ಆಗಿ ಓಡಾಡ್ತಿರುವ ಭೀಮನ ಫೋಟೊ ವೀಡಿಯೋಗಳು ವೈರಲ್ ಆಗಿವೆ.
09:04 AM (IST) Mar 04
ಜೀ ಕನ್ನಡದ 'ಕರ್ಣ' ಧಾರಾವಾಹಿಯಲ್ಲಿ ರಮೇಶ್ ಪಾತ್ರದಿಂದ ಹಿರಿಯ ನಟ ಟಿ.ಎಸ್. ನಾಗಾಭರಣ ಹೊರನಡೆದಿದ್ದು, ಆ ಪಾತ್ರಕ್ಕೆ ಇದೀಗ ನಟ ಅಭಿಜಿತ್ ಪ್ರವೇಶಿಸಿದ್ದಾರೆ. ರಮೇಶ್ ಪಾತ್ರದಲ್ಲಿ ಅಭಿಜಿತ್, ಕರ್ಣನ ಮುಂದಿನ ಹೆಜ್ಜೆಗಳನ್ನು ತಾನೇ ನಿರ್ಧರಿಸುವುದಾಗಿ ಪಣ ತೊಟ್ಟಿದ್ದಾರೆ.