ಗದಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಾಗಿಲು ಹಾಕಿ ಒತ್ತಾಯಪೂರ್ವಕವಾಗಿ ರಾಜೀನಾಮೆ ಸಲ್ಲಿಸುವಂತೆ ಮಾಡಿದರು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಒತ್ತಡ ಹೇರುವ ಮೂಲಕ ರಾಜೀನಾಮೆ ಪಡೆಯುವುದು ಸರಿಯಾದ ಕ್ರಮವಲ್ಲ. ನಾನು ಯಾವುದೇ ತಪ್ಪು ಮಾಡದಿದ್ದರೂ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಯಿತು. ಬಾಗಿಲು ಹಾಕಿಕೊಂಡು ಈ ರೀತಿಯಾಗಿ ರಾಜೀನಾಮೆ ಪಡೆಯುವ ಪರಿಸ್ಥಿತಿ ಎದುರಾಗಿದ್ದು ನೋವು ತಂದಿತ್ತು. ರಾಜಕೀಯದಲ್ಲಿ ಅಧಿಕಾರಕ್ಕಿಂತ ಪ್ರಜಾಪ್ರಭುತ್ವದ ಮೌಲ್ಯಗಳು, ಪರಸ್ಪರ ಗೌರವ ಹಾಗೂ ಪಾರದರ್ಶಕತೆ ಮುಖ್ಯವಾಗಬೇಕು. ನಾನು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಅದೇ ಹುದ್ದೆಗೆ ಏರುವೆ ಎಂದರು.
ಸಭಾಪತಿ ಸ್ಥಾನದಲ್ಲಿ ಕುಳಿತುಕೊಂಡು ಯಾವುದೇ ರೀತಿಯ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಾಡದೇ ಆ ಸ್ಥಾನಕ್ಕೆ ಗೌರವ ತರುವ ರೀತಿಯಲ್ಲಿ ನಡೆದುಕೊಂಡಿದ್ದೇನೆ. ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಸಂಬಂಧಿಸಿದಂತೆ ಪತ್ರ ನೀಡಿದ್ದರೆ, ಅದನ್ನು ಎರಡು ನಿಮಿಷದಲ್ಲೇ ತಿರಸ್ಕರಿಸುತ್ತಿದ್ದೆ. ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಅವಿಶ್ವಾಸ ನಿರ್ಣಯದ ಕಾನೂನುಬದ್ಧ ಮಾರ್ಗವನ್ನು ಅನುಸರಿಸಿದ್ದರೆ ಅದನ್ನು ಎದುರಿಸಲು ಸಿದ್ಧನಿದ್ದೆ ಎಂದರು.
11:35 PM (IST) Aug 30
‘ಅಮೆರಿಕಾ ಅಮೆರಿಕಾ 2’ ಸಿನಿಮಾದ ಟ್ರೇಲರ್ ಮೈಸೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಸಿನಿಮಾದ ಬಗ್ಗೆ ಡಾಲಿ ಧನಂಜಯ, ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಹಾಗೂ ಶಾನ್ವಿ ಶ್ರೀವತ್ಸ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
11:13 PM (IST) Aug 30
1989ರಲ್ಲಿ ಉಡಾವಣೆಯಾದ 'ಅಗ್ನಿ' ಕ್ಷಿಪಣಿಯು ಭಾರತವನ್ನು ಮಿಲಿಟರಿ ಸೂಪರ್ ಪವರ್ ಆಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನೇತೃತ್ವದಲ್ಲಿ, ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಮೀರಿ ಸ್ವದೇಶಿ ತಂತ್ರಜ್ಞಾನದಿಂದ ಅಗ್ನಿ-1 ರಿಂದ ಅಗ್ನಿ-5 ರವರೆಗೆ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲಾಯಿತು.
10:39 PM (IST) Aug 30
ವರ್ಕೌಟ್ಗೆ ಸಮಯ ಸಿಗದ ಕಾರಣ ಸಂಗೀತಾ ಶೃಂಗೇರಿ ತಮ್ಮ ಡಯಟ್ನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಅನ್ನ, ರೋಟಿ, ದೋಸೆಗೆ ಬ್ರೇಕ್ ನೀಡಿ ಹಣ್ಣು-ತರಕಾರಿ ಸಲಾಡ್ಗೆ ಆದ್ಯತೆ ನೀಡುತ್ತಿರುವುದಾಗಿ ನಟಿ ಹೇಳಿದ್ದಾರೆ.
10:35 PM (IST) Aug 30
ಪಂಜಾಬ್ ಟಿ20 ಲೀಗ್ನಲ್ಲಿ ಒಂದೇ ಓವರ್ನಲ್ಲಿ 6 ಸಿಕ್ಸರ್ ಸಿಡಿಸಿದ ಅಭಿಷೇಕ್ ಶರ್ಮಾ, ಕೇವಲ 26 ಎಸೆತಗಳಲ್ಲಿ 77 ರನ್ ಚಚ್ಚುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಇವರ ಈ ಬಿರುಗಾಳಿಯಂತಹ ಬ್ಯಾಟಿಂಗ್ ನೆರವಿನಿಂದ ಅಮೃತಸರ ಸೂರ್ಮಾಸ್ ತಂಡ 258 ರನ್ಗಳ ಬೃಹತ್ ಮೊತ್ತ ಪೇರಿಸಿದೆ.
09:16 PM (IST) Aug 30
ಕಿಚ್ಚ ಸುದೀಪ್ ಅವರು ತಮ್ಮ ತಾಯಿ ಸರೋಜಾ ಸಂಜೀವ್ ಅವರ ಸ್ಮರಣಾರ್ಥ ಆರ್ಥಿಕ ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾಗಳನ್ನು ನೀಡಿ ಸ್ವಾವಲಂಬಿ ಬದುಕಿಗೆ ನೆರವಾಗಿದ್ದಾರೆ.
09:09 PM (IST) Aug 30
ಪಂಜಾಬ್ ಸಿಎಂ ಭಗವಂತ್ ಮಾನ್, ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆದರು.
08:52 PM (IST) Aug 30
ಹೆಸರಿನ ವಿಚಾರದಲ್ಲಿ ಶುರುವಾಗಿದ್ದ ಗೊಂದಲಕ್ಕೆ ಶಿವಣ್ಣ ಸೌಮ್ಯವಾಗಿಯೇ ಉತ್ತರ ನೀಡಿದ್ದು, ಭವಿಷ್ಯದ ಮಲ್ಟಿಸ್ಟಾರರ್ ಸಿನಿಮಾದ ಕನಸನ್ನು ಅಭಿಮಾನಿಗಳ ಕಣ್ಣಲ್ಲಿ ಬಿತ್ತಿದ್ದಾರೆ. ಹಾಗಿದ್ರೆ, ಶಿವರಾಜ್ಕುಮಾರ್-ಸಲ್ಮಾನ್ ಖಾನ್ ಜೋಡಿಯ ಸಿನಿಮಾ ಯಾವಾಗ ಶುರು? ನೋಡಿ…
08:43 PM (IST) Aug 30
ಸಾಮಾನ್ಯವಾಗಿ 40 ಎಕರೆ ಜಮೀನಿನಲ್ಲಿ ಎಡೆ ಹೊಡೆಯಲು 18ರಿಂದ 20 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ಆದರೆ ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದ ಜೋಡೆತ್ತುಗಳು ಕೇವಲ 9 ಗಂಟೆಗಳಲ್ಲಿ ಬರೋಬ್ಬರಿ 40 ಎಕರೆ ಜಮೀನಿನಲ್ಲಿ ಎಡೆ ಹೊಡೆದು ಗಮನ ಸೆಳೆದಿವೆ.
08:43 PM (IST) Aug 30
ಬೆಂಗಳೂರಿನ ಹಲವು ಪ್ರಮುಖ ಫ್ಲೈ ಓವರ್ ಮೇಲೆ ಬೈಕ್ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಬೆಂಗಳೂರು ಸಂಚಾರಿ ಪೊಲೀಸರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಯಾವೆಲ್ಲಾ ಫ್ಲೈ ಓವರ್ ಮೇಲೆ ದ್ವಿಚಕ್ರ ವಾಹನ ನಿರ್ಬಂಧಿಸಲಾಗಿದೆ?
08:34 PM (IST) Aug 30
ಟಿಪ್ಪು ಕಟೌಟ್ ಮೇಲೆ ಪಾಕಿಸ್ತಾನ ಪರ ಹಾಡು ಬಳಸಿದ ಪ್ರಕರಣವನ್ನು ಖಂಡಿಸಿ ಹಿಂದೂ ಸಂಘಟನೆಗಳು ನಾಳೆ 'ಚಿಕ್ಕಮಗಳೂರು ಚಲೋ'ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಚಿಕ್ಕಮಗಳೂರು ತಹಶೀಲ್ದಾರ್ ನಗರದಾದ್ಯಂತ ಬಿಎನ್ಎಸ್ 163 ಅಡಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
08:14 PM (IST) Aug 30
ನಾರಾಯಣ ಮೂರ್ತಿ ಅವರ ಕುಟುಂಬದ ಕ್ಯಾಟಮರನ್ ವೆಂಚರ್ಸ್ ಹಾಗೂ ಎಲ್ಐಸಿಯಂತಹ ದಿಗ್ಗಜ ಸಂಸ್ಥೆಗಳು 'ಫೋಸೆಕೊ ಇಂಡಿಯಾ' ಕೆಮಿಕಲ್ ಕಂಪನಿಯ ಷೇರುಗಳನ್ನು ಖರೀದಿಸಿವೆ. ಕಳೆದ 5 ವರ್ಷಗಳಲ್ಲಿ ಶೇ. 324 ರಷ್ಟು ಮಲ್ಟಿಬ್ಯಾಗರ್ ಲಾಭ ನೀಡಿರುವ ಈ ಕಂಪನಿಯ ಪ್ರಬಲ ಆರ್ಥಿಕ ಬೆಳವಣಿಗೆಯೇ ಈ ಭಾರಿ ಹೂಡಿಕೆಗೆ ಕಾರಣವಾಗಿದೆ.
07:59 PM (IST) Aug 30
07:52 PM (IST) Aug 30
07:45 PM (IST) Aug 30
ಧಾರವಾಡದ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ತೀವ್ರಗೊಂಡಿದೆ. ಎಬಿವಿಪಿ, ಆರ್ಎಸ್ಎಸ್ ಕಾರ್ಯಕರ್ತರ ಬಂಧನಕ್ಕೆ ಆಕ್ರೋಶಗಳು ಹೆಚ್ಚಾಗುತ್ತಿದೆ. ಠಾಣೆಗೆ ಶಾಸಕ ಅರವಿಂದ್ ಬೆಲ್ಲದ್ ಬೇಟಿ ನೀಡಿ ಪೊಲೀಸ್ ಕ್ರಮ ಪ್ರಶ್ನಿಸಿದ್ದಾರೆ.
07:18 PM (IST) Aug 30
"ಮುಂದಿನ ಬೇಟೆ" (Next Hunt) ಎಂಬ ಪದದ ಬಗ್ಗೆ ಕೇಳಿದಾಗ, ಸುದೀಪ್ ತುಂಬಾ ಮಾರ್ಮಿಕವಾಗಿ ಉತ್ತರಿಸಿದ್ದಾರೆ. "ಸದ್ಯಕ್ಕೆ ಬಿಗ್ ಬಾಸ್ ಮೇಲೆ ಮಾತ್ರ ಗಮನವಿರಲಿ. ನನ್ನ ಮುಂದಿನ ಸಿನಿಮಾ ಮತ್ತು ಬೇಟೆಯ ಬಗ್ಗೆ ಸರಿಯಾದ ಸಮಯ ಬಂದಾಗ ಖಂಡಿತಾ ಎಲ್ಲವನ್ನೂ ಹಂಚಿಕೊಳ್ಳುತ್ತೇನೆ" ಎಂದು ಹೇಳುವ ಮೂಲಕ ಸಸ್ಪೆನ್ಸ್ ಉಳಿಸಿದ್ದಾರೆ.
06:46 PM (IST) Aug 30
ದಕ್ಷಿಣ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ರಾಗಿಗುಡ್ಡದಿಂದ ಕನಕಪುರ ರಸ್ತೆಯವರೆಗೆ 18.5 ಕಿ.ಮೀ ಉದ್ದದ ಹೊಸ ಟೋಲ್ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಸರ್ಕಾರ ಬಿಡ್ ಆಹ್ವಾನಿಸಿದೆ. ₹18,000 ಕೋಟಿ ವೆಚ್ಚದ ಬೃಹತ್ ಯೋಜನೆಯ ಭಾಗವಾಗಿರುವ ಈ ರಸ್ತೆಯು ಪೈಪ್ಲೈನ್ ರಸ್ತೆಯ ಮೂಲಕ ಸಾಗಿ ನೈಸ್ ರಸ್ತೆಯನ್ನು ಸಂಪರ್ಕಿಸಲಿದೆ.
06:41 PM (IST) Aug 30
ದರ್ಶನ್ ಹಾಡು ಬಿಗ್ ಬಾಸ್ ಮನೆಯಲ್ಲಿ ಏಕೆ ಪ್ಲೇ ಆಗೋದಿಲ್ಲ ಅನ್ನೋ ವಿಚಾರಕ್ಕೆ ಸಂಬಂಧಿಸಿ ಬಂದ ಪ್ರಶ್ನೆಗೆ ಸ್ಯಾಂಡಲ್ವುಡ್ ನಟ, ಬಿಗ್ ಬಾಸ್ ಕನ್ನಡದ ನಿರೂಪಕ ಕಿಚ್ಚ ಸುದೀಪ್ ಖಡಕ್ ಉತ್ತರ ನೀಡಿದ್ದಾರೆ. "ಓಪನ್ ಆಗಿ ಹೇಳ್ತಿನಿ" ಎಂದು ಮಾತು ಶುರು ಮಾಡಿದ ಸುದೀಪ್ ಹೇಳಿದ್ದೇನು? ಈ ಸ್ಟೋರಿ ನೋಡಿ..
06:36 PM (IST) Aug 30
ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಸಿನಿಮಾದಲ್ಲಿ ಕಥೆಯೇ ಇಲ್ಲ ಎಂಬ ಟೀಕೆಗೆ ಮಾಸ್ಟರ್ ಆನಂದ್ ಪ್ರತಿಕ್ರಿಯಿಸಿದ್ದಾರೆ. ಯಶ್ ಅಭಿನಯದ ಚಿತ್ರದ ನಾನ್-ಲೀನಿಯರ್ ಕಥೆ, ಕ್ಲೈಮ್ಯಾಕ್ಸ್ ಹಾಗೂ ಪಾತ್ರದ ಹಿನ್ನೆಲೆ ಬಗ್ಗೆ ಅವರು ವಿವರಿಸಿದ್ದಾರೆ.
05:29 PM (IST) Aug 30
ಕೈಲಾಸ ಯಾತ್ರೆಗೆ ತೆರಳಿದ್ದ ತಮಿಳುನಾಡಿನ 21 ಯಾತ್ರಿಕರು ನೇಪಾಳದ ಭೀಕರ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ, ರತ್ನಕುಮಾರ್ ಮತ್ತು ಪೂಂಗುಳಲಿ ಎಂಬ ದಂಪತಿ ಜಾರುವ ಬೆಟ್ಟದಿಂದ ಎಲ್ಲರನ್ನೂ ಮೇಲೆತ್ತಿ ಜೀವ ಉಳಿಸಿದರು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
05:25 PM (IST) Aug 30
ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಜನಪ್ರಿಯ ನಾಯಕಿಯಾಗಿ ಮಿಂಚಿದ್ದ ನಟಿ ಪ್ರೇಮಾ, ಇತ್ತೀಚಿನ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ವೈಯಕ್ತಿಕ ಜೀವನ ಮತ್ತು ಕುಟುಂಬದ ಕುರಿತು ನಟಿ ಹೇಳಿದ್ದೇನು?
04:59 PM (IST) Aug 30
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘TOXIC’ ಸಿನಿಮಾ ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ವಿಶ್ವದಾದ್ಯಂತ ₹250 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಇದೇ ವೇಳೆ ಯಶ್ 7.5 ಕೆಜಿ ಡಂಬೆಲ್ಸ್ ಬಳಸಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
04:54 PM (IST) Aug 30
04:42 PM (IST) Aug 30
ಜಾಗತಿಕ ಮಟ್ಟಕ್ಕೆ ಕನ್ನಡದ ಬಾವುಟ ಹಾರಿಸಿದ 'ರಾಕಿಂಗ್ ಸ್ಟಾರ್' ಯಶ್ ಈಗ 'ಟಾಕ್ಸಿಕ್' (TOXIC) ಸಿನಿಮಾದ ಮೂಲಕ ಇಡೀ ವಿಶ್ವದಾದ್ಯಂತ ಅಕ್ಷರಶಃ ಅಬ್ಬರಿಸುತ್ತಿದ್ದಾರೆ. ಕೇವಲ 4 ದಿನಗಳಲ್ಲಿ ಈ ಸಿನಿಮಾ 250 ಕೋಟಿಗೂ ಅಧಿಕ ಗಳಿಸಿದೆ. ಈಗೇನ್ಮಾಡ್ತಿದಾರೆ ಯಶ್? ಉತ್ತರಕ್ಕೆ ಈ ಸ್ಟೋರಿ ನೋಡಿ..
04:31 PM (IST) Aug 30
ಕಿಚ್ಚ ಸುದೀಪ್ ಪುತ್ರಿ, ಗಾಯಕಿ ಸಾನ್ವಿ ಸುದೀಪ್ ಕೂಡ ಸೇರ್ಪಡೆಯಾಗಿದ್ದಾರೆ. ‘ಟಾಕ್ಸಿಕ್’ನಲ್ಲಿ ಯಶ್ ಅವರ ಅಭಿನಯಕ್ಕೆ ಫಿದಾ ಆಗಿರುವ ಸಾನ್ವಿ, ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
04:13 PM (IST) Aug 30
ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಸರ್ವೆಯ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಫಲಾನುಭವಿಗಳಿಂದ ಸರಿಯಾದ ಸ್ಪಂದನೆ ಸಿಗದ ಕಾರಣ ಮತ್ತು ಸರ್ವೆ ಕಾರ್ಯ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಬೆಸ್ಕಾಂ ಮನವಿ ಮೇರೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
04:10 PM (IST) Aug 30
30 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿದ ನೌಕರರ ಮಾಸಿಕ ಪಿಂಚಣಿಯನ್ನು ಅವರ ಅಂತಿಮ ಮೂಲ ವೇತನದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ನಿಯಮಗಳ ಪ್ರಕಾರ, ಅಂತಿಮ ಮೂಲ ವೇತನದ 50% ಮೂಲ ಪಿಂಚಣಿಯಾಗಿದ್ದು, ಇದರ ಜೊತೆಗೆ ತುಟ್ಟಿಭತ್ಯೆಯೂ ಸೇರಿ ಒಟ್ಟು ಪಿಂಚಣಿ ನಿರ್ಧಾರವಾಗುತ್ತದೆ. ಅದನ್ನು ಹೇಗೆ ಲೆಕ್ಕಹಾಕಬಹುದೆನ್ನುವ ಸರಳವಿಧಾನ ಇಲ್ಲಿದೆ.
03:19 PM (IST) Aug 30
03:08 PM (IST) Aug 30
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಈ ಮದುವೆ ನಿಜಕ್ಕೂ ರಾಜವೈಭವವನ್ನು ನೆನಪಿಸುವಂತಿತ್ತು. ರೇಷ್ಮೆ ಶರ್ಟ್, ಪಂಚೆ ಹಾಗೂ ತಲೆಗೆ ಮೈಸೂರು ಪೇಟ ಧರಿಸಿದ್ದ ಚಿಕ್ಕಣ್ಣ ಪಕ್ಕಾ ಮೈಸೂರು ಅಳಿಯನಂತೆ ಮಿಂಚುತ್ತಿದ್ದರು. ವಧುವಿನ ಕಡೆಯವರು ಚಿಕ್ಕಣ್ಣನಿಗೆ ಆರತಿ ಬೆಳಗಿ ಮದುವೆ ಮಂಟಪಕ್ಕೆ ಬರಮಾಡಿಕೊಂಡ ರೀತಿ ಅದ್ಭುತವಾಗಿತ್ತು. ಪಾವನ ಗೌಡ ಕೂಡ ಮದುವೆಯ ಸಾಂಪ್ರದಾಯಿಕ ಉಡುಗೆಯಲ್ಲಿ ಕಣ್ಮನ ಸೆಳೆಯುತ್ತಿದ್ದರು.
02:30 PM (IST) Aug 30
"ಯಶ್ ಸರ್, ನೀವು ನಿಮ್ಮ ಪಾತ್ರವನ್ನು ಕೇವಲ ನಿರ್ವಹಿಸುವುದಿಲ್ಲ, ಅದಕ್ಕೆ ನಿಮ್ಮ ಹೃದಯದ ರಕ್ತವನ್ನೇ ಸುರಿದು ಜೀವ ತುಂಬುತ್ತೀರಿ" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಒಬ್ಬ ಪ್ರಭಾವಿ ವ್ಯಕ್ತಿಯ ಅಂತರಂಗದ ಹೋರಾಟವನ್ನು ತೆರೆಯ ಮೇಲೆ ಅಷ್ಟು ದೃಢವಾಗಿ ಚಿತ್ರಿಸುವುದು ಸುಲಭದ ಮಾತಲ್ಲ. ಅದನ್ನು ಯಶ್ ಸಲೀಸಾಗಿ ಮಾಡಿದ್ದಾರೆ ಎಂದು ರಿಷಬ್ ಮೆಚ್ಚಿಕೊಂಡಿದ್ದಾರೆ.
01:49 PM (IST) Aug 30
ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಕೊಲ್ಲಾಪುರದಿಂದ ಬಂದ ರೈಲಿನ ಬೋಗಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಆಸನದ ಕೆಳಗೆ ಅರೆಬೆತ್ತಲೆ, ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿದ್ದು, ಬಲ ತ್ಕಾರ ವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
01:22 PM (IST) Aug 30
ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಮೊದಲ ದಿನ ಭರ್ಜರಿ 101.10 ಕೋಟಿ ಗಳಿಕೆ ಕಂಡರೂ, ನಂತರದ ದಿನಗಳಲ್ಲಿ ಕಲೆಕ್ಷನ್ನಲ್ಲಿ ಇಳಿಕೆ ದಾಖಲಿಸಿದೆ. 300 ಕೋಟಿ ಸಿನಿಮಾಗಳ ಪಟ್ಟಿಗೆ ಸೇರುವಲ್ಲಿ ಟಾಕ್ಸಿಕ್ ಮುಂದಾಗಿದೆ. ನಾಲ್ಕು ದಿನಗಳಲ್ಲಿ ಟಾಕ್ಸಿಕ್ ಗಳಿಸಿದ್ದೆಷ್ಟು ಎಂದು ನೋಡೋಣ ಬನ್ನಿ.
01:00 PM (IST) Aug 30
12:58 PM (IST) Aug 30
Sandalwood Film 1997ರಲ್ಲಿ ಬಿಡುಗಡೆಯಾದ ಕಾದಂಬರಿ ಆಧಾರಿತ ಜಾನಪದ ಸಿನಿಮಾ. ಗಂಡನ ರೂಪದಲ್ಲಿ ಬರುವ ಹಾವಿನೊಂದಿಗೆ ನಾಯಕಿ ಸಂಸಾರ ನಡೆಸುವ ಈ ರೋಚಕ ಕಥೆಯುಳ್ಳ ಚಿತ್ರವು ಸಂಗೀತಮಯವಾಗಿದ್ದು, 5 ರಾಜ್ಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
12:52 PM (IST) Aug 30
ವಿಜಯನಗರದಲ್ಲಿ ಮಳೆ ಕೊರತೆಯಿಂದ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಕೃಷಿ ಚಟುವಟಿಕೆ ಇಲ್ಲದೆ ಅನ್ನದಾತರು ಆತಂಕಕ್ಕೀಡಾಗಿದ್ದಾರೆ. ಈ ಹಿನ್ನೆಲೆ ಮಳೆಗಾಗಿ ಪ್ರಾರ್ಥಿಸಿ ಉಲವತ್ತಿ ಗ್ರಾಮದ ಸರ್ವಧರ್ಮದ ನಾಗರಿಕರು ಒಂಭತ್ತು ದಿನಗಳ ಕಾಲ ಭಜನೆ ವ್ರತ ಕೈಗೊಂಡಿದ್ದಾರೆ.
12:19 PM (IST) Aug 30
ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಕೆರೆಯ ತಡೆಗೋಡೆಗೆ ಹೊಡೆದ ದುರಂತ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಕಾಸ್ಪೋಡಿಯಲ್ಲಿ ನಡೆದಿದೆ.
11:59 AM (IST) Aug 30
11:36 AM (IST) Aug 30
10:53 AM (IST) Aug 30
ಎಐ ಸಲಹೆಗಳ ಮೇಲೆ ಗ್ರಾಹಕರ ನಂಬಿಕೆ 40% ಕ್ಕಿಂತ ಕಡಿಮೆ ಇದ್ದರೂ, ಶಾಪಿಂಗ್ ಮಾಡಲು ಮಾತ್ರ ಅದನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ಮೆಕಿನ್ಸೆ ಸಂಶೋಧನೆ ತಿಳಿಸಿದೆ. ಗ್ರಾಹಕರ ವಿಚಿತ್ರ ನಡೆವಳಿಕೆಯು ಬ್ರ್ಯಾಂಡ್ಗಳಿಗೆ ಹೊಸ ಸವಾಲುಗಳನ್ನು ಒಡ್ಡಿದೆ.
10:34 AM (IST) Aug 30
10:03 AM (IST) Aug 30