LIVE NOW
Published : Aug 03, 2026, 07:08 AM ISTUpdated : Aug 03, 2026, 09:41 AM IST

Karnataka News Live: ಶತಕ ಬಾರಿಸಿದ KRS; ಆತಂಕಗಳ ನಡುವೆಯೂ ರೈತರಿಗೆ ಭರ್ಜರಿ ಗುಡ್‌ನ್ಯೂಸ್..!

ಸಾರಾಂಶ

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಆ.9, 10 ಮತ್ತು 11ರಂದು ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ತಾಲೂಕಿನ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು. 

ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಳೆದ ಜು.30, 31 ಮತ್ತು ಆ.1 ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ ನಮ್ಮಜ್ಜಿ ಚನ್ನಮ್ಮರ ಅಗಲಿಕೆಯಿಂದ ಪಾದಯಾತ್ರೆ ಮುಂದೂಡಲಾಗಿತ್ತು. ರಾಜ್ಯ ಸರ್ಕಾರ ಈ ವಿಚಾರವನ್ನು ಪ್ರತಿಷ್ಠೆಗೆ ತೆಗೆದುಕೊಂಡು ರೈತರ ಜಮೀನು ಕಸಿಯುವ ಪ್ರಯತ್ನ ಮಾಡುತ್ತಿದೆ. ಮೊದಲಿನಿಂದ ಬೈರಮಂಗಲ ಭಾಗದ ಜನರ ಜತೆ ಜೆಡಿಎಸ್ ನಿಂತಿದೆ. ಒಂದು ಬಾರಿ ಪಾದಯಾತ್ರೆ ಮಾಡಿ ಧೈರ್ಯ ನೀಡಿದೆ. ಈ ಯೋಜನೆಗೆ ಸ್ಟೇ ತರಲು ಕಾನೂನು ಹೋರಾಟಕ್ಕೆ ಸಹ ಸಿದ್ಧತೆ ನಡೆಸಲಾಗಿದೆ ಎಂದರು.

09:41 AM (IST) Aug 03

ಶತಕ ಬಾರಿಸಿದ KRS; ಆತಂಕಗಳ ನಡುವೆಯೂ ರೈತರಿಗೆ ಭರ್ಜರಿ ಗುಡ್‌ನ್ಯೂಸ್..!

ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಮಂಡ್ಯದ ಕೃಷ್ಣರಾಜ ಸಾಗರ (KRS) ಜಲಾಶಯದ ನೀರಿನ ಮಟ್ಟ 100 ಅಡಿ ತಲುಪಿದೆ. ಕೇವಲ ಮೂರು ದಿನಗಳಲ್ಲಿ 8 ಅಡಿಗಳಷ್ಟು ಏರಿಕೆ ಕಂಡಿದ್ದು, ಒಳಹರಿವು ಹೆಚ್ಚಾಗಿರುವುದರಿಂದ ರೈತರಲ್ಲಿ ಸಂತಸ ಮೂಡಿದೆ ಮತ್ತು ಕಾವೇರಿ ಹೋರಾಟದ ಕಾವು ಸದ್ಯಕ್ಕೆ ತಣ್ಣಗಾಗಿದೆ.
Read Full Story

09:14 AM (IST) Aug 03

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಂಚಲನ, ಪೊಲೀಸರಿಗೆ ಕೂಲಿಂಗ್ ಆಫ್‌ ಪಿರಿಯಡ್ ಜಾರಿ, ಏನಿದು ಹೊಸ ನಿಯಮ?

ಗೃಹ ಇಲಾಖೆಯು ಇನ್ಸ್‌ಪೆಕ್ಟರ್ ಮತ್ತು ಡಿವೈಎಸ್ಪಿಗಳಿಗೆ ಹೊಸ 'ಕೂಲಿಂಗ್ ಆಫ್ ಪಿರಿಯಡ್' ನಿಯಮವನ್ನು ಜಾರಿಗೊಳಿಸಿದೆ. ಈ ನಿಯಮದ ಪ್ರಕಾರ, ಎರಡು ವರ್ಷಗಳ ಎಕ್ಸಿಕ್ಯುಟಿವ್ ಹುದ್ದೆಯ ನಂತರ, ಅಧಿಕಾರಿಗಳು ಕಡ್ಡಾಯವಾಗಿ ನಿಗದಿತ ಅವಧಿಗೆ ನಾನ್-ಎಕ್ಸಿಕ್ಯುಟಿವ್ ಹುದ್ದೆಗಳಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ, ಇದು ಇಲಾಖೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.
Read Full Story

08:44 AM (IST) Aug 03

Annabrahma Chaturmasya - ಅನ್ನಬ್ರಹ್ಮ ಚಾತುರ್ಮಾಸ್ಯ, ಧರ್ಮಸಭೆಯಲ್ಲಿ ನಿದ್ದೆ-ಊಟದ ಮಹತ್ವ ಹೇಳಿದ ಭಾರತೀ ಶ್ರೀಗಳು

ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು, ಆಹಾರ ಮತ್ತು ನಿದ್ದೆಯ ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಿದ್ದಾರೆ. ನಿದ್ದೆಯು ಮಾತೃಸ್ವರೂಪಿಣಿಯಾಗಿದ್ದು, ಶರೀರ ಮತ್ತು ಮನಸ್ಸಿಗೆ ಚೈತನ್ಯ ನೀಡುತ್ತದೆ ಹಾಗೂ ಸರಿಯಾದ ನಿದ್ದೆ ಸಮಾಧಿ ಸ್ಥಿತಿಗೆ ಸಮಾನ ಎಂದು ಅವರು ತಿಳಿಸಿದ್ದಾರೆ.

Read Full Story

08:30 AM (IST) Aug 03

ಸವದತ್ತಿ-ಬೆಂಗಳೂರು - 'ಪಲ್ಲಕ್ಕಿ'ಯ ಹೊಸ ಪಯಣ, ಎರಡು ಬಸ್‌ಗಳಿಗೆ ಚಾಲನೆ; ಸಮಯ ಈ ರೀತಿ

ಶಾಸಕ ವಿಶ್ವಾಸ ವೈದ್ಯ ಅವರು ಸವದತ್ತಿಯಿಂದ ಬೆಂಗಳೂರಿಗೆ ಪ್ರಯಾಣಿಸುವ ನೂತನ 'ಪಲ್ಲಕ್ಕಿ' ನಾನ್ ಎಸಿ ಸ್ಲೀಪರ್ ಬಸ್‌ಗಳಿಗೆ ಚಾಲನೆ ನೀಡಿದರು. ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಭಕ್ತರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಈ ಸೇವೆಯನ್ನು ಆರಂಭಿಸಲಾಗಿದ್ದು, ಇದು ಸುರಕ್ಷಿತ ಹಾಗೂ ಸುಖಕರ ಪ್ರಯಾಣವನ್ನು ಒದಗಿಸಲಿದೆ.
Read Full Story

08:13 AM (IST) Aug 03

ಉಳುಮೆ ಮಾಡವಾಗ ಪತ್ತೆಯಾಯ್ತು ಪಾಳೇಗಾರರ ಕಾಲದ ಅಪರೂಪದ ಶಾಸನ; ಆಕಳು ಕೊಂದ ಪಾಪದ ಉಲ್ಲೇಖ

ಚಿತ್ರದುರ್ಗ ಜಿಲ್ಲೆಯ ಜವಗೊಂಡನಹಳ್ಳಿಯಲ್ಲಿ ಉಳುಮೆ ಮಾಡುವಾಗ ಪಾಳೇಗಾರ ಅರಸ ಕಾಮಗೇತಿ ಇಮ್ಮಡಿ ಚಿಕ್ಕಣ್ಣ ನಾಯಕರ ಕಾಲದ ಶಾಸನವೊಂದು ಪತ್ತೆಯಾಗಿದೆ. ಜನೋಪಕಾರಕ್ಕಾಗಿ ಕೆರೆ ಕಟ್ಟಿಸಿದ ದೊಡ್ಡಗೌಡನಿಗೆ ಅರಸರು ಉಂಬಳಿ ಭೂಮಿ ನೀಡಿದ್ದನ್ನು ಈ ಶಾಸನವು ದಾಖಲಿಸುತ್ತದೆ. ಪ್ರಸ್ತುತ ಈ ಶಾಸನವನ್ನು ಚಿತ್ರದುರ್ಗದ ಸರ್ಕಾರಿ ವಸ್ತುಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗಿದೆ.
Read Full Story

08:08 AM (IST) Aug 03

Karnataka Politics - ಈ ಮೂವರ ಪೈಕಿ ಕರ್ನಾಟಕದ ಮುಂದಿನ ವಿಧಾನಸಭಾ ಸ್ಪೀಕರ್ ಯಾರು?

ವಿಧಾನಸಭೆ ಸ್ಪೀಕರ್ ಹುದ್ದೆಗೆ ಎಚ್.ಕೆ.ಪಾಟೀಲ್, ಬಸವರಾಜ ರಾಯರೆಡ್ಡಿ ಹಾಗೂ ಆರ್.ವಿ.ದೇಶಪಾಂಡೆ ಅವರ ಹೆಸರುಗಳು ಮುಂಚೂಣಿಯಲ್ಲಿವೆ ಎಂದು ಮಾಜಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದೇನು? ಮೂವರ ಪೈಕಿ ಯಾರಾಗಲಿದ್ದಾರೆ ಸ್ಪೀಕರ್?

Read Full Story

07:55 AM (IST) Aug 03

Exclusive - ಕರಾವಳಿ ವಿವಾದದಿಂದ ಕಲಿತ ಪಾಠ ಏನು? ಪ್ರಜ್ವಲ್ ದೇವರಾಜ್ ಮನದಾದಳ ಮಾತು

'ಕರಾವಳಿ' ಚಿತ್ರದ ಅನುಭವದ ನಂತರ, ಚಿತ್ರರಂಗದ ಒಳಿತಿಗಾಗಿ ಸಂಭಾವನೆ ಕಡಿಮೆ ಮಾಡಿಕೊಳ್ಳುವುದು ಮತ್ತು ಉತ್ತಮ ಪ್ರೀ-ಪ್ರೊಡಕ್ಷನ್‌ ಪ್ರಾಮುಖ್ಯತೆಯನ್ನು ನಟರೊಬ್ಬರು ಒತ್ತಿಹೇಳಿದ್ದಾರೆ. 'ಕರಾವಳಿ' ವಿವಾದದಿಂದ ಪಾಠ ಕಲಿತಿದ್ದು, ಅಗ್ರಿಮೆಂಟ್‌ ಇಲ್ಲದೆ ಸಿನಿಮಾ ಮಾಡಬಾರದೆಂದು ನಿರ್ಧರಿಸಿದ್ದಾರೆ. ಜೊತೆಗೆ, ತಾವೇ ನಿರ್ಮಾಪಕರಾಗಿ ಹೊಸ ಸಿನಿಮಾ ಆರಂಭಿಸುತ್ತಿದ್ದು, ಕಥೆಯೇ ಹೀರೋ ಆಗಿರಲಿದೆ ಎಂದು ಘೋಷಿಸಿದ್ದಾರೆ.
Read Full Story

07:47 AM (IST) Aug 03

Bengaluru - ಜೀವನಾಂಶದ ಒಪ್ಪಂದ ಮುರಿದ ಮಗಳು - ಹೈಕೋರ್ಟ್ ಕೊಟ್ಟ ಮಹತ್ವದ ತೀರ್ಪೇನು?

ಅಪ್ರಾಪ್ತ ವಯಸ್ಸಿನಲ್ಲಿ ತಾಯಿಯೊಂದಿಗೆ ರಾಜೀ ಒಪ್ಪಂದ ಮಾಡಿಕೊಂಡು ತಂದೆಯಿಂದ ಶಾಶ್ವತ ಜೀವನಾಂಶ ಪಡೆದಿದ್ದ ಮಗಳು, ಪ್ರಾಪ್ತ ವಯಸ್ಕಳಾದ ಮೇಲೆ ಮತ್ತೆ ಜೀವನಾಂಶ ಕೋರಲು ಸಾಧ್ಯವಿಲ್ಲ. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್, ಈ ಹಿಂದಿನ ರಾಜೀ ಒಪ್ಪಂದವೇ ಅಂತಿಮ ಎಂದು ಮಹತ್ವದ ತೀರ್ಪು ನೀಡಿದೆ.
Read Full Story

07:33 AM (IST) Aug 03

ಕಾವೇರಿ ನೀರಿಗಾಗಿ ಮತ್ತೆ ಹೋರಾಟ 13ರಂದು ಕರ್ನಾಟಕ ಬಂದ್ ಫಿಕ್ಸ್, ವಾಪಸ್ ಮಾತೇ ಇಲ್ಲ - ವಾಟಾಳ್

ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದನ್ನು ವಿರೋಧಿಸಿ ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ರಾಜ್ಯ ಸರ್ಕಾರದ ವಿರುದ್ಧ ರೈತರು ಮತ್ತು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

Read Full Story

07:27 AM (IST) Aug 03

ಮೊದಲ ಗಂಡನ ಹಣದಲ್ಲಿ 2ನೇ ಪತಿ ಜತೆಗೆ ವಿವಾಹ ವಾರ್ಷಿಕೋತ್ಸವ; ಜೀವನಾಂಶಕ್ಕಾಗಿ ದೂರು

ವಿಚ್ಛೇದನ ನೀಡದೆ ಎರಡನೇ ವ್ಯಕ್ತಿಯೊಂದಿಗೆ ವಾಸಿಸುತ್ತಿರುವ ಪತ್ನಿ, ತನ್ನಿಂದ ಜೀವನಾಂಶ ಪಡೆಯುತ್ತಿದ್ದಾಳೆ ಎಂದು ಪತಿ ಹೈಕೋರ್ಟ್‌ಗೆ ದೂರು ನೀಡಿದ್ದಾರೆ. ಪತಿಯ ಅಳಲು ಆಲಿಸಿದ ನ್ಯಾಯಾಲಯ, ಪತ್ನಿಗೆ ಜೀವನಾಂಶ ಪಾವತಿಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
Read Full Story

More Trending News