Published : Aug 03, 2026, 07:08 AM ISTUpdated : Aug 03, 2026, 09:51 PM IST

Karnataka News Live: ಭಾರೀ ಮಳೆ ಮುನ್ಸೂಚನೆ - ನಾಳೆ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಆದೇಶ!

ಸಾರಾಂಶ

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಆ.9, 10 ಮತ್ತು 11ರಂದು ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ತಾಲೂಕಿನ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು. 

ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಳೆದ ಜು.30, 31 ಮತ್ತು ಆ.1 ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ ನಮ್ಮಜ್ಜಿ ಚನ್ನಮ್ಮರ ಅಗಲಿಕೆಯಿಂದ ಪಾದಯಾತ್ರೆ ಮುಂದೂಡಲಾಗಿತ್ತು. ರಾಜ್ಯ ಸರ್ಕಾರ ಈ ವಿಚಾರವನ್ನು ಪ್ರತಿಷ್ಠೆಗೆ ತೆಗೆದುಕೊಂಡು ರೈತರ ಜಮೀನು ಕಸಿಯುವ ಪ್ರಯತ್ನ ಮಾಡುತ್ತಿದೆ. ಮೊದಲಿನಿಂದ ಬೈರಮಂಗಲ ಭಾಗದ ಜನರ ಜತೆ ಜೆಡಿಎಸ್ ನಿಂತಿದೆ. ಒಂದು ಬಾರಿ ಪಾದಯಾತ್ರೆ ಮಾಡಿ ಧೈರ್ಯ ನೀಡಿದೆ. ಈ ಯೋಜನೆಗೆ ಸ್ಟೇ ತರಲು ಕಾನೂನು ಹೋರಾಟಕ್ಕೆ ಸಹ ಸಿದ್ಧತೆ ನಡೆಸಲಾಗಿದೆ ಎಂದರು.

09:52 PM (IST) Aug 03

ಭಾರೀ ಮಳೆ ಮುನ್ಸೂಚನೆ - ನಾಳೆ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಆದೇಶ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 4 ರಂದು ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

Read Full Story

09:37 PM (IST) Aug 03

'ಕರ್ಣಾಟಬಲಂ ಅಜೇಯಂ" ಚಿತ್ರಕ್ಕಾಗಿ ಬಾದಾಮಿಯಲ್ಲಿ ಸಹಸ್ರಾರು ಕಲಾವಿದರೊಂದಿಗೆ ಹೆಜ್ಜೆ ಹಾಕಿದ ಧ್ಯಾನ್ ಯೋಗೇಶ್ವರ್

ಶಾಸಕ, ನಟ, ನಿರ್ಮಾಪಕ ಸಿಪಿ ಯೋಗೇಶ್ವರ್ ಅವರ ಮಗ ಧ್ಯಾನ್ ಯೋಗೇಶ್ವರ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ 'ಕರ್ಣಾಟಬಲಂ ಅಜೇಯಂ' ಚಿತ್ರಕ್ಕೆ ಬಾದಾಮಿಯಲ್ಲಿ ಅದ್ದೂರಿಯಾಗಿ ಹಾಡಿನ ಚಿತ್ರೀಕರಣ ನಡೆದಿದೆ. ಧ್ಯಾನ್ ಸಹಸ್ರಾರು ಕಲಾವಿರೊಂದಿಗೆ 'ಬಾದಾಮಿ ಸೀಮೆಯಿದು ಎಂತ ಸೊಬಗು ..' ಎಂಬ ಗೀತೆಗೆ ಭರ್ಜರಿಯಾಗಿ ಹೆಜ್ಜೆ ಹಾಕಿದರು.

Read Full Story

09:09 PM (IST) Aug 03

ಕೊಪ್ಪಳಕ್ಕೆ ಇಬ್ಬರು ಸಚಿವರು - ಜಿಲ್ಲೆಯ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ ಎಂದ ಜನಾರ್ದನ ರೆಡ್ಡಿ

G Janardhana Reddy: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಕೊಪ್ಪಳ ಜಿಲ್ಲೆಗೆ ಇಬ್ಬರಿಗೆ ಸಚಿವ ಸ್ಥಾನ ನೀಡಿರುವದು ಸಂತಸ ತಂದಿದೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು.

Read Full Story

08:31 PM (IST) Aug 03

ಬೆಂಗಳೂರು ಉಪನಗರ ರೈಲು ಯೋಜನೆಗೆ ವೇಗ - ಹುಸ್ಕೂರು ಸ್ಟೇಷನ್‌ ಬಳಿ ಮೊದಲ 'ಟಿ-ಗಿರ್ಡರ್' ಯಶಸ್ವಿ ಅಳವಡಿಕೆ!

ಬೆಂಗಳೂರು ಉಪನಗರ ಸಾರಿಗೆ ಯೋಜನೆಯ 'ಕಾರಿಡಾರ್ 4' (ಕನಕ ಲೈನ್) ವ್ಯಾಪ್ತಿಯಲ್ಲಿ, ಹುಸ್ಕೂರು ರೈಲ್ವೆ ನಿಲ್ದಾಣದ ಬಳಿ ಮೊದಲ 'ಟಿ-ಗಿರ್ಡರ್' ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಇದು ಯೋಜನೆಯ ಪ್ರಮುಖ ಮೈಲಿಗಲ್ಲಾಗಿದೆ.

Read Full Story

07:35 PM (IST) Aug 03

50ನೇ ಸಿನಿಮಾ 'ಡಿಟೆಕ್ಟಿವ್ ತೀಕ್ಷ್ಣ' ಕುರಿತು ಪ್ರಿಯಾಂಕಾ ಉಪೇಂದ್ರ ಮನದಾಳದ ಮಾತು - ನಿರ್ದೇಶನದ ಕನಸು ಬಿಚ್ಚಿಟ್ಟ ನಟಿ

Detective Teekshana: ನಟಿ ಪ್ರಿಯಾಂಕಾ ಉಪೇಂದ್ರ ತಮ್ಮ ಸಿನಿ ಪಯಣ, ಮಹಿಳಾ ಪಾತ್ರಗಳ ಬದಲಾವಣೆ, ಹೊಸ ಸಿನಿಮಾದ ವಿಶೇಷತೆ ಹಾಗೂ ಮುಂದಿನ ನಿರ್ದೇಶನದ ಕನಸಿನ ಬಗ್ಗೆ ಪ್ರಿಯಾಂಕಾ ಮನಬಿಚ್ಚಿ ಮಾತನಾಡಿದ್ದಾರೆ.

Read Full Story

07:33 PM (IST) Aug 03

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ - ಯಾರ ಮೇಲೆ 19 ಹೊಸ ಸಚಿವರ ಪ್ರಮಾಣ; ಮಹಿಳೆಯರಿಲ್ಲದೆ 33ಕ್ಕೆ ಹಿಗ್ಗಿದ ಸಂಪುಟ ಗಾತ್ರ!

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, 19 ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ, ಸಂಪುಟದ ಒಟ್ಟು ಬಲ 33ಕ್ಕೆ ಏರಿಕೆಯಾಗಿದೆ. ಆದರೆ, ಈ ವಿಸ್ತರಿತ ಮಂತ್ರಿಮಂಡಲದಲ್ಲಿ ಒಬ್ಬರೂ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ಗಮನಾರ್ಹ ಚರ್ಚೆಗೆ ಕಾರಣವಾಗಿದೆ.

Read Full Story

07:30 PM (IST) Aug 03

ಉಗ್ರನ ಗೆಳತಿ, ರಾಜಕಾರಣಿಗಳೇ ಟಾರ್ಗೆಟ್!​ ಯಾರೀ ಹನಿಟ್ರ್ಯಾಪ್​ ಸುಂದರಿ ಅರ್ಪಿತಾ? ಬೆಚ್ಚಿಬೀಳೋ ಸ್ಟೋರಿ

ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ ಅರ್ಪಿತಾ ಸರ್ಕಾರ್​ಳನ್ನು ಪಶ್ಚಿಮ ಬಂಗಾಳ ವಿಶೇಷ ಕಾರ್ಯಪಡೆ ಬಂಧಿಸಿದೆ. ಜೈಷ್​-ಎ-ಮೊಹಮ್ಮದ್​ ಉಗ್ರನೊಂದಿಗೆ ಸಂಬಂಧ ಹೊಂದಿದ್ದ ಈಕೆ, ರಾಜಕಾರಣಿಗಳನ್ನು ಹನಿಟ್ರ್ಯಾಪ್ ಮಾಡುವ ಸಂಚಿನ ಭಾಗವಾಗಿದ್ದಳು ಎಂಬ ಆರೋಪದ ಮೇಲೆ ತನಿಖೆ ನಡೆಯುತ್ತಿದೆ.
Read Full Story

07:06 PM (IST) Aug 03

ಇಂಜಿನಿಯರಿಂಗ್‌ ಪ್ಲಾಸ್ಟಿಕ್‌ ಆಗಬಹುದು ನಿಮ್ಮನೆಯ ಹಾಲಿನ ಖಾಲಿ ಪ್ಯಾಕೆಟ್‌, IISc ವಿಜ್ಞಾನಿಗಳ ಕ್ರಾಂತಿಕಾರಿ ತಂತ್ರಜ್ಞಾನ!

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ವಿಜ್ಞಾನಿಗಳು, ಪರಿಸರಕ್ಕೆ ಮಾರಕವಾಗಿದ್ದ ಹಾಲಿನ ಪ್ಲಾಸ್ಟಿಕ್ ಪೊಟ್ಟಣಗಳನ್ನು ಅತ್ಯಂತ ಗಟ್ಟಿಮುಟ್ಟಾದ 'ಹೈ-ಪರ್ಫಾರ್ಮೆನ್ಸ್ ಇಂಜಿನಿಯರಿಂಗ್ ಪ್ಲಾಸ್ಟಿಕ್' ಆಗಿ ಪರಿವರ್ತಿಸುವ ಕ್ರಾಂತಿಕಾರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

Read Full Story

06:43 PM (IST) Aug 03

ಬೆಂಗಳೂರಿನ ಕೆಂಗೇರಿ ಬಳಿಯ 530 ಎಕರೆ ಅರಣ್ಯ ಭೂಮಿ ಕಬಳಿಸುವ ಸಂಚಿಗೆ ಚೆಕ್‌ಮೆಟ್‌ ನೀಡಿದ ತಹಶೀಲ್ದಾರ್!

ಬೆಂಗಳೂರಿನ ಕೆಂಗೇರಿ ಬಳಿಯ 30,000 ಕೋಟಿ ರೂ. ಮೌಲ್ಯದ ಬಿ.ಎಂ ಕಾವಲ್ ಅರಣ್ಯ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ನಡೆಸಿದ ಬೃಹತ್ ಸಂಚನ್ನು ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ವಿಫಲಗೊಳಿಸಿದ್ದಾರೆ.

Read Full Story

06:10 PM (IST) Aug 03

'ಅದೃಷ್ಟವು ನಮ್ಮ ಕೈಯಲ್ಲಿಲ್ಲ' ಎನ್ನುತ್ತಲೇ ಪತಿ ಜೊತೆ ಹೊಸ ಹೆಜ್ಜೆ ಇಟ್ಟ ನಟಿ ತಾರಾ - ಫೋಟೋಗಳು ವೈರಲ್​

ಹಿರಿಯ ನಟಿ ತಾರಾ ಅನುರಾಧ ಮತ್ತು ಪತಿ ಎಚ್‌.ಸಿ ವೇಣುಗೋಪಾಲ್ ಬೆಂಗಳೂರಿನ ಜೆಪಿ ನಗರದಲ್ಲಿ ತಮ್ಮ ಹಳೆಯ ಮನೆಯ ಜಾಗದಲ್ಲಿ ನೂತನ ಕಮರ್ಷಿಯಲ್‌ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದಂಪತಿ ಕಟ್ಟಡದ ಚಾವಣಿ ಹಾಕುವ ಮುನ್ನ ವಿಶೇಷ ಮೌಲ್ಡಿಂಗ್ ಪೂಜೆಯನ್ನು ನೆರವೇರಿಸಿದ್ದಾರೆ.
Read Full Story

05:33 PM (IST) Aug 03

ಒಂದು ರಾತ್ರಿಯಲ್ಲೇ ಹೆಣ್ಣಿನ ಬದುಕಿನ ಅನಾವರಣ - ಚರ್ಚೆಗೆ ಗ್ರಾಸವಾದ 'ಬ್ರಹ್ಮ ಕಮಲ' ಟ್ರೇಲರ್

Brahma Kamala Trailer: ವಿಭಿನ್ನ ಕಥೆಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸುತ್ತಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಮತ್ತೊಮ್ಮೆ ಹೊಸ ಪ್ರಯೋಗದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

Read Full Story

05:20 PM (IST) Aug 03

ಉತ್ತರ ಕರ್ನಾಟಕ ಮಂದಿಗೆ ಮಸ್ತ್ ಸುದ್ದಿ.. ಮಿಸ್ ಮಾಡ್ದೇ ಓದಲೇಬೇಕಾದ ಸ್ಟೋರಿ ಇದು..!

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು 'ರಾಜರಥ' ಹೆಸರಿನ ನೂತನ ಐಷಾರಾಮಿ ಎಸಿ ಸ್ಲೀಪರ್ ಬಸ್‌ಗಳನ್ನು ಪರಿಚಯಿಸಿದೆ. ಈ ಬಸ್‌ಗಳು ಬೆಳಗಾವಿ-ಥಾಣೆ ಮತ್ತು ಚಿಕ್ಕೋಡಿ-ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸಲಿದ್ದು, ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡುವ ಮೂಲಕ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲಿವೆ.
Read Full Story

05:08 PM (IST) Aug 03

ದುನಿಯಾ ವಿಜಯ್ ಅಭಿಮಾನಿಗಳಿಗೆ ಗುಡ್‌ನ್ಯೂಸ್ - ದೊಡ್ಮನೆ ಕುಡಿಯ 'ಸಿಟಿ ಲೈಟ್ಸ್' ರಿಲೀಸ್ ಡೇಟ್ ಫಿಕ್ಸ್

City Lights Kannada Movie: ದುನಿಯಾ ವಿಜಯ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಪೋಸ್ಟರ್ ಹಂಚಿಕೊಂಡು, "ಸಿಟಿ ಲೈಟ್ಸ್ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ" ಎಂದು ಘೋಷಿಸಿದ್ದಾರೆ.

Read Full Story

04:49 PM (IST) Aug 03

ಮಧು ಬಂಗಾರಪ್ಪಗೆ ಮತ್ತೆ ಸಚಿವ ಸ್ಥಾನ; ಸಹೋದರ ಕುಮಾರ್ ಬಂಗಾರಪ್ಪ ಅಚ್ಚರಿಕೆ ಹೇಳಿಕೆ

ಸಚಿವ ಸಂಪುಟ ವಿಸ್ತರಣೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಲಭಿಸಿರುವ ಹಿನ್ನೆಲೆಯಲ್ಲಿ ಅವರ ಸಹೋದರ ಹಾಗೂ ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಅವರು ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯವಾಗಿ ಭಿನ್ನ ಪಕ್ಷಗಳಲ್ಲಿದ್ದರೂ ಸಹೋದರನ ಯಶಸ್ಸಿಗೆ ಅವರು ಹಾರೈಸಿದ್ದಾರೆ. ಆ ಕುರಿತಾದ ವರದಿ ಇಲ್ಲಿದೆ..

Read Full Story

04:48 PM (IST) Aug 03

ತಮ್ಮನ್ನೇ 'ಅಯೋಗ್ಯ' ಎಂದ ಅಭಿಷೇಕ್ ಅಂಬರೀಶ್ - ವೈರಲ್ ವಿಡಿಯೋ ನೋಡಿ ಫ್ಯಾನ್ಸ್ ಫುಲ್ ಖುಷ್

ನಟ ಅಭಿಷೇಕ್ ಅಂಬರೀಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರ ಹೊಸ ಸಿನಿಮಾ ಅಥವಾ ಲುಕ್‌ನಿಂದಲ್ಲ. 'ಅಯೋಗ್ಯ 2' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ತಮ್ಮ ಮುಂದಿನ ಚಿತ್ರದ ಬಗ್ಗೆ ಕೇಳಲಾದ..

Read Full Story

03:56 PM (IST) Aug 03

ಸಚಿವರ ಪಟ್ಟಿಯಲ್ಲಿದ್ದರೂ ಕೊನೇ ಕ್ಷಣದಲ್ಲಿ ಮಂಕಾಳ್‌ ವೈದ್ಯಗೆ ಕೈತಪ್ಪಿದ ಮಂತ್ರಿಗಿರಿ, ಕರಾವಳಿಯಲ್ಲಿ ಸಿಡಿದೆದ್ದ ಮೀನುಗಾರರ ಸಮುದಾಯ!

ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿದ ಸಚಿವರ ಪಟ್ಟಿಯಲ್ಲಿದ್ದ ಶಾಸಕ ಮಂಕಾಳು ವೈದ್ಯ ಅವರ ಹೆಸರನ್ನು ಕೊನೆ ಕ್ಷಣದಲ್ಲಿ ಕೈಬಿಡಲಾಗಿದ್ದು, ಇದನ್ನು ಎಐಸಿಸಿ 'ಟೈಪಿಂಗ್ ಮಿಸ್ಟೇಕ್' ಎಂದು ಸಮಜಾಯಿಷಿ ನೀಡಿದೆ.

Read Full Story

03:39 PM (IST) Aug 03

ಕದ್ದ ಚಿನ್ನ, ಹಣವನ್ನ ಮನೆಗೆ ಎಸೆದ ಕಳ್ಳರು.. ಅದರಲ್ಲಿತ್ತು ಒಂದು ಭಾವನಾತ್ಮಕ ಪತ್ರ!

ಸಾಮಾನ್ಯವಾಗಿ ಕಳ್ಳರು ಕದ್ದ ಮಾಲನ್ನು ಮಾರಿ ಐಷಾರಾಮಿ ಜೀವನ ನಡೆಸುತ್ತಾರೆ. ಆದರೆ ಈ ಕಳ್ಳರು ಪಶ್ಚಾತ್ತಾಪ ಪಟ್ಟು ಮಾಲನ್ನು ಮರಳಿಸಿರುವುದು ಈಗ ಕಾಕಿನಾಡ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯ ಪೊಲೀಸರು ಈ 'ಪಶ್ಚಾತ್ತಾಪ' ಪಟ್ಟ ಕಳ್ಳರು ಯಾರು ಎಂಬುದನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿಸಿದ್ದಾರೆ.

Read Full Story

03:16 PM (IST) Aug 03

Karnataka Cabinet expansion today - ಶಾಸಕ ತನ್ವೀರ್‌ ಸೇಠ್‌ಗೆ ಕೈತಪ್ಪಿದ ಸಚಿವ ಸ್ಥಾನ; ಬೆಂಬಲಿಗರಿಂದ ಪ್ರತಿಭಟನೆ

ಶಾಸಕ ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಮೈಸೂರು ಹಾಗೂ ಮಂಡ್ಯದಲ್ಲಿ ಅವರ ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಓರ್ವ ಬೆಂಬಲಿಗ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರೆ, ಮತ್ತೊಬ್ಬ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
Read Full Story

03:05 PM (IST) Aug 03

ನಾಳೆ ಬೆಳಗ್ಗೆ 10 ಗಂಟೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ - ಸುವರ್ಣ ನ್ಯೂಸ್‌ಗೆ ಬೇಳೂರು ಗೋಪಾಲಕೃಷ್ಣ ಅಧಿಕೃತ ಹೇಳಿಕೆ

ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ, ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಪ್ರಭಾವಿ ಕುಟುಂಬಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.
Read Full Story

03:03 PM (IST) Aug 03

108 ವರ್ಷಗಳ ಇತಿಹಾಸದಲ್ಲೇ ಎರಡನೇ ಬಾರಿ.. ಅತ್ಯಂತ ಕೆಟ್ಟ ದಾಖಲೆಗೆ ಸಾಕ್ಷಿಯಾದ ಬೆಂಗಳೂರು

ಬೆಂಗಳೂರು 108 ವರ್ಷಗಳ ಇತಿಹಾಸದಲ್ಲಿ ಎರಡನೇ ಅತಿ ಒಣ ಜುಲೈಗೆ ಸಾಕ್ಷಿಯಾಗಿದೆ, ಕೇವಲ 23 ಮಿ.ಮೀ ಮಳೆ ದಾಖಲಾಗಿದೆ. ಇದರೊಂದಿಗೆ, 112 ವರ್ಷಗಳಲ್ಲೇ ಅತಿ ಹೆಚ್ಚು ಬಿಸಿಲು ಕೂಡ ದಾಖಲಾಗಿದ್ದು, ಜುಲೈ 14 ರಂದು ಗರಿಷ್ಠ 33.6°C ತಾಪಮಾನವಿತ್ತು. ಈ ಐತಿಹಾಸಿಕ ಹವಾಮಾನ ವೈಪರೀತ್ಯವು ನಗರದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.
Read Full Story

02:17 PM (IST) Aug 03

ನೂತನ ಸಚಿವರ ಲಿಸ್ಟ್ ರಿಲೀಸ್.. ಬೆನ್ನಲ್ಲೇ ಪತಿಯ ಫೋಟೋ ಮುಂದೆ ಮಗನ ತಬ್ಬಿ ಕಣ್ಣೀರಿಟ್ಟ ಧರ್ಮಸಿಂಗ್ ಪತ್ನಿ

ಮಾಜಿ ಸಿಎಂ ಧರ್ಮಸಿಂಗ್ ಅವರ ಪುತ್ರ ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರಿಗೆ ಮೊದಲ ಬಾರಿಗೆ ಸಚಿವ ಸ್ಥಾನ ಲಭಿಸಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅವರ ತಾಯಿ ಪ್ರಭಾವತಿ ಧರ್ಮಸಿಂಗ್ ಅವರು ಭಾವುಕರಾಗಿ ಆನಂದಬಾಷ್ಪ ಸುರಿಸಿದ್ದು, ಅಜಯ್ ಸಿಂಗ್ ತಂದೆಯ ಭಾವಚಿತ್ರಕ್ಕೆ ನಮಿಸಿ ಆಶೀರ್ವಾದ ಪಡೆದರು.
Read Full Story

02:14 PM (IST) Aug 03

ಫುಟ್‌ಪಾತ್‌ ತೆರವು - ಸರ್ಕಾರಕ್ಕೆ 25 ಕೋಟಿ ಯೋಜನೆ ನೆನಪಿಸಿದ ಜಯನಗರದ ವ್ಯಾಪಾರಿಗಳು

ಬೆಂಗಳೂರಿನಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಜಯನಗರದ ರಸ್ತೆಬದಿ ವ್ಯಾಪಾರಿಗಳು ಹೊಸ ಹೆಜ್ಜೆಯೊಂದನ್ನು ಮುಂದಿಟ್ಟಿದ್ದಾರೆ. 2020ರಲ್ಲಿ ಅನುಮೋದನೆಗೊಂಡು ಕೋವಿಡ್‌ನಿಂದಾಗಿ ಸ್ಥಗಿತಗೊಂಡಿದ್ದ ಈ ಯೋಜನೆಗೆ ಮರುಚಾಲನೆ ನೀಡಬೇಕೆಂದು ವ್ಯಾಪಾರಿಗಳ ಸಂಘಟನೆ ಆಗ್ರಹಿಸಿದೆ.

Read Full Story

02:03 PM (IST) Aug 03

ಸಭಾಪತಿ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ, ನಾನಿನ್ನೂ ಅಧಿಕಾರದಲ್ಲಿದ್ದೇನೆ, ಬಸವರಾಜ್ ಹೊರಟ್ಟಿ ತಿರುಗೇಟು!

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಹೊಸ ಹೆಸರುಗಳು ಚರ್ಚೆಯಾಗುತ್ತಿರುವಾಗ, ಹಾಲಿ ಸಭಾಪತಿ ಬಸವರಾಜ್ ಹೊರಟ್ಟಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಕೇವಲ ಸಂಖ್ಯಾಬಲದಿಂದ ತಮ್ಮನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿರುವ ಅವರು, ಅವಿಶ್ವಾಸ ನಿರ್ಣಯ ಮಂಡಿಸಲು ಇರುವ ಕಠಿಣ ಕಾನೂನು ಪ್ರಕ್ರಿಯೆ ಮತ್ತು ನಿಯಮಗಳನ್ನು ನೆನಪಿಸಿದ್ದಾರೆ.
Read Full Story

01:00 PM (IST) Aug 03

ಅರಣ್ಯ ಸಿಬ್ಬಂದಿ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ 'ಆ ಘಟನೆ'ಗೆ ಬಿಗ್ ಟ್ವಿಸ್ಟ್! ಆರೋಪಿ ಮತ್ತೆ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?

ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ನಡೆಸಿ, ನ್ಯಾಯಾಂಗ ಬಂಧನದಿಂದ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಮರುಬಂಧಿಸಿದ್ದಾರೆ. ಹೊಸನಗರ ತಾಲೂಕಿನ ವೆಂಕಟೇಶ್‌ನನ್ನು ರಿಪ್ಪನ್‌ಪೇಟೆ ಪೊಲೀಸರು ಆತನ ಮನೆಯ ಸಮೀಪವೇ ಕಾರ್ಯಾಚರಣೆ ನಡೆಸಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Read Full Story

12:54 PM (IST) Aug 03

ಕಾನ್‌ಸ್ಟೇಬಲ್‌ ನೇಮಕಾತಿಗೆ ಮರುಪರೀಕ್ಷೆ..? ನಿನ್ನೆ ಪರೀಕ್ಷೆ ಬರೆದವರಿಗೆ ಶುರುವಾಯ್ತು ಗೊಂದಲ

ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ಒಎಂಆರ್ ಶೀಟ್ ಗೊಂದಲದ ವದಂತಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಳ್ಳಿಹಾಕಿದ್ದು, ಅಭ್ಯರ್ಥಿಗಳಲ್ಲಿ ಮರುಪರೀಕ್ಷೆಯ ಬಗ್ಗೆ ಆತಂಕ ಮುಂದುವರೆದಿದೆ.
Read Full Story

12:53 PM (IST) Aug 03

ಲಕ್ಷ್ಮೀ ಹೆಬ್ಬಾಳಕರ್ ಸೇರಿ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಘಟಾನುಘಟಿಗಳಿಗೆ ಶಾಕ್, ಇಲ್ಲಿದೆ ಲಿಸ್ಟ್

ಡಿಕೆ ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆ ಪಟ್ಟಿ ಹೈಕಮಾಂಡ್ ಕಳುಹಿಸಿದೆ. ಕೆಲ ಅಚ್ಚರಿ ಹೆಸರುಗಳು ಇದರಲ್ಲಿದೆ. ಆದರೆ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಘಟಾನುಘಟಿಗಳಿಗೆ ಹೈಕಮಾಂಡ್ ಶಾಕ್ ಕೊಟ್ಟಿದೆ. ಸಚಿವ ಸ್ಥಾನದಿಂದ ವಂಚಿತರಾದವರ ಪಟ್ಟಿ ಇಲ್ಲಿದೆ.

Read Full Story

12:44 PM (IST) Aug 03

ಬೆಂಗಳೂರಿಗರೇ ಗಮನಿಸಿ, ಇಂದು ನೂತನ ಸಚಿವರ ಪದಗ್ರಹಣ ಹಿನ್ನೆಲೆ ಈ ರಸ್ತೆಗಳಲ್ಲಿ ಸಂಚಾರ ಬಂದ್!

ಬೆಂಗಳೂರಿನ ಗಾಜಿನ ಮನೆಯಲ್ಲಿ ನಡೆಯಲಿರುವ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ, ನಗರದ ಕೇಂದ್ರ ಭಾಗದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 2 ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಮತ್ತು ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳಗಳನ್ನು ಸೂಚಿಸಿದ್ದಾರೆ.
Read Full Story

12:41 PM (IST) Aug 03

ರಾಮಾಯಣ ಟ್ರೈಲರ್ ನೋಡಿ ದರ್ಶನ್ ಫ್ಯಾನ್ಸ್ ಕಣ್ಣಲ್ಲಿ ನೀರು! ಕಾರಣ ಗೊತ್ತಾದ್ರೆ ನಿಮ್ಮ ಕಣ್ಣಲ್ಲೂ ನೀರು ಬರುತ್ತೆ..!

ತೆರೆಮೇಲೆ ರಾವಣನ ಹಾವಳಿ ಜೋರಾಗಿದೆ, ಆದರೆ ಕರುನಾಡಿನ ದುರ್ಯೋಧನನ ರಾಜಸಿಕ ಕಳೆ ಮಾತ್ರ ಮೌನವಾಗಿದೆ. ಕಾಲ ಎಲ್ಲ ಗಾಯಗಳಿಗೂ ಮದ್ದು ಮಾಡುತ್ತದೆ ಅಂತಾರೆ . ಹಾಗೆಯೇ, ದರ್ಶನ್ ಎಂಬ ಚಕ್ರವರ್ತಿ ಬದುಕಿನ ಈ ಕರಾಳ ರಾಮಾಯಣ ಮುಗಿದು, ಮತ್ತೆ ಅವರ ಸಿಂಹಾಸನದ ರಾಜಯೋಗ ಯಾವಾಗ ಕೂಡಿಬರಲಿದೆ? ಕಾಲವೇ ಉತ್ತರಿಸಬೇಕು!

Read Full Story

12:18 PM (IST) Aug 03

ಕೊಟ್ಟ ಮಾತು ಉಳಿಸಿಕೊಂಡ ಸಿದ್ದು.. ಡಿಕೆಶಿ ಸಂಪುಟ ಸೇರುತ್ತಿರೋ ಗಾಯತ್ರಿ ಶಾಂತೇಗೌಡ ಯಾರು?

ರಾಜ್ಯ ರಾಜಕಾರಣದಲ್ಲಿ ಇಂದು ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ ಅಚ್ಚರಿಯ ಹೆಸರೊಂದು ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನ ನೂತನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಎ.ವಿ. ಅವರಿಗೆ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದ್ದು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Read Full Story

12:01 PM (IST) Aug 03

ಬಿಗ್‌ಬಾಸ್ 13 ಸ್ಪರ್ಧಿಗಳಿಗೆ ಕಾದಿದೆ ತ್ರಿಬಲ್ ಚಾಲೆಂಜ್? ಗಿಲ್ಲಿ, ವಿನಯ್, ಸಂಗೀತಾ ಎಂಟ್ರಿ!

ಕನ್ನಡ ಬಿಗ್‌ಬಾಸ್ ಸೀಸನ್ 13 ಶೀಘ್ರದಲ್ಲೇ ಆರಂಭವಾಗಲಿದ್ದು, ಹೊಸ ಸ್ಪರ್ಧಿಗಳ ಆಯ್ಕೆಗೆ ಈ ಬಾರಿ ವಿಶೇಷ ಟ್ವಿಸ್ಟ್ ನೀಡಲಾಗಿದೆ ಎನ್ನಲಾಗುತ್ತಿದೆ. ಮಾಜಿ ಸ್ಪರ್ಧಿಗಳಾದ ಸಂಗೀತಾ, ವಿನಯ್ ಮತ್ತು ಗಿಲ್ಲಿ ನಟ ಕಾಣಿಸಿಕೊಂಡು, ಸ್ಪರ್ಧಿಗಳಿಗೆ ಮೂರು ಸವಾಲುಗಳನ್ನು ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Read Full Story

11:43 AM (IST) Aug 03

ಬುರುಡೆ ಓಪನ್ ಮಾಡದೆಯೇ ಮೆದುಳು ಶಸ್ತ್ರಚಿಕಿತ್ಸೆ.. ಭಾರತೀಯ ವೈದ್ಯನ ಚಮತ್ಕಾರ..!

ಭಾರತೀಯ ಮೂಲದ ಅಮೆರಿಕನ್ ಆರ್ಮಿ ಸರ್ಜನ್ ಮೇಜರ್ ಜಗತ್ ಕುಮಾರ್ ಪಟೇಲ್, ತಲೆಬುರುಡೆ ತೆರೆಯದೆ ಮೂಗಿನ ಮೂಲಕವೇ ಗಾಲ್ಫ್ ಬಾಲ್ ಗಾತ್ರದ ಮೆದುಳಿನ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ. ಈ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯಿಂದಾಗಿ ರೋಗಿಯು ಕೇವಲ ಎರಡು ದಿನಗಳಲ್ಲಿ ಚೇತರಿಸಿಕೊಂಡಿದ್ದು, ಈ ಸಾಧನೆಗೆ ಜಾಗತಿಕ ಮನ್ನಣೆ ದೊರೆತಿದೆ.
Read Full Story

11:14 AM (IST) Aug 03

ಡಿಕೆ ಶಿವಕುಮಾರ್ ಕೈ ಸೇರಿದ ನೂತನ ಸಚಿವರ ಲಿಸ್ಟ್; ಅಜ್ಜಯ್ಯನ ಮಠಕ್ಕೆ ತೆರಳಿದ ಸಿಎಂ

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದೆ. ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸಭೆಯ ನಂತರ ಅಂತಿಮಗೊಂಡ ಪಟ್ಟಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೈ ಸೇರಿದೆ ಎನ್ನಲಾಗಿದ್ದು, ಸಂಭಾವ್ಯ ಸಚಿವರ ಹೆಸರುಗಳು ಚರ್ಚೆಯಲ್ಲಿವೆ.
Read Full Story

11:05 AM (IST) Aug 03

ಮಂಗಳೂರು-ಬೆಂಗಳೂರು ರೈಲ್ವೆ ಸಂಚಾರ ರದ್ದು, ಪೊಲೀಸ್‌ ಪರೀಕ್ಷೆ ತಪ್ಪಿಸಿಕೊಂಡ ಅಭ್ಯರ್ಥಿಗಳು, ಮತ್ತೆ ರೈಲು ಆರಂಭ ಯಾವಾಗ?

ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸಕಲೇಶಪುರ ಸಮೀಪದ ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿ, ಬದಲಿ ಮಾರ್ಗದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಪ್ರಯಾಣಿಕರು ವಿವಿಧ ನಿಲ್ದಾಣಗಳಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ರೈಲ್ವೆ ಇಲಾಖೆ ಹಳಿ ದುರಸ್ತಿ ಕಾರ್ಯ ಕೈಗೊಂಡಿದೆ.

Read Full Story

10:52 AM (IST) Aug 03

Photo - 'ವಾತ್ಸಲ್ಯ' ಥೀಮ್‌ನಡಿ ವಿಶೇಷ ಫೋಟೋಶೂಟ್ ಮಾಡಿಸಿಕೊಂಡ ನಟಿ ಹರ್ಷಿಕಾ ಪೂಣಚ್ಚ

ನಟಿ ಹರ್ಷಿಕಾ ಪೂಣಚ್ಚ  ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, 'ವಾತ್ಸಲ್ಯ' ಥೀಮ್‌ನಡಿ ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಯಶೋದೆ-ಕೃಷ್ಣನ ಪ್ರೀತಿಯನ್ನು ಸಾರುವ ಈ ಫೋಟೋಗಳಲ್ಲಿ, ಅವರು ಕಡುಗೆಂಪು ಕಾಂಚೀಪುರಂ ಸೀರೆಯುಟ್ಟು ಕಂಗೊಳಿಸಿದ್ದು, ಈ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Read Full Story

10:52 AM (IST) Aug 03

ಇನ್ನೂ ಎಷ್ಟು ದಿನ ಮಳೆ ಸುರಿಯುತ್ತೆ..? ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಭಾರೀ ಮಳೆಯಿಂದಾಗಿ ಶಿರಸಿ-ಹುಬ್ಬಳ್ಳಿ ರಸ್ತೆ ಜಲಾವೃತಗೊಂಡಿದ್ದು, ಬಂಟ್ವಾಳದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಾಗೂ ಕಾರ್ಕಳದಲ್ಲಿ ಕಿರು ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.

Read Full Story

10:18 AM (IST) Aug 03

ಶಿವಮೊಗ್ಗದಲ್ಲಿ ದಾರುಣ ಘಟನೆ.. ದೇವಸ್ಥಾನದ ಲಿಫ್ಟ್‌ಗೆ ಸಿಲುಕಿ ನಿವೃತ್ತ ಇಂಜಿನಿಯರ್ ಸಾವು

ಶಿವಮೊಗ್ಗದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಲಿಫ್ಟ್ ಅವಘಡದಲ್ಲಿ ನಿವೃತ್ತ ಇಂಜಿನಿಯರ್ ಕುಮಾರಸ್ವಾಮಿ ಮೃತಪಟ್ಟಿದ್ದಾರೆ. ಲಿಫ್ಟ್ ಇಲ್ಲದಿದ್ದರೂ ಬಾಗಿಲು ತೆರೆದಿದ್ದರಿಂದ ಒಳಗೆ ಪ್ರವೇಶಿಸಿದ ಅವರ ಮೇಲೆ ಲಿಫ್ಟ್ ಬಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
Read Full Story

09:41 AM (IST) Aug 03

ಶತಕ ಬಾರಿಸಿದ KRS; ಆತಂಕಗಳ ನಡುವೆಯೂ ರೈತರಿಗೆ ಭರ್ಜರಿ ಗುಡ್‌ನ್ಯೂಸ್..!

ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಮಂಡ್ಯದ ಕೃಷ್ಣರಾಜ ಸಾಗರ (KRS) ಜಲಾಶಯದ ನೀರಿನ ಮಟ್ಟ 100 ಅಡಿ ತಲುಪಿದೆ. ಕೇವಲ ಮೂರು ದಿನಗಳಲ್ಲಿ 8 ಅಡಿಗಳಷ್ಟು ಏರಿಕೆ ಕಂಡಿದ್ದು, ಒಳಹರಿವು ಹೆಚ್ಚಾಗಿರುವುದರಿಂದ ರೈತರಲ್ಲಿ ಸಂತಸ ಮೂಡಿದೆ ಮತ್ತು ಕಾವೇರಿ ಹೋರಾಟದ ಕಾವು ಸದ್ಯಕ್ಕೆ ತಣ್ಣಗಾಗಿದೆ.
Read Full Story

09:14 AM (IST) Aug 03

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಂಚಲನ, ಪೊಲೀಸರಿಗೆ ಕೂಲಿಂಗ್ ಆಫ್‌ ಪಿರಿಯಡ್ ಜಾರಿ, ಏನಿದು ಹೊಸ ನಿಯಮ?

ಗೃಹ ಇಲಾಖೆಯು ಇನ್ಸ್‌ಪೆಕ್ಟರ್ ಮತ್ತು ಡಿವೈಎಸ್ಪಿಗಳಿಗೆ ಹೊಸ 'ಕೂಲಿಂಗ್ ಆಫ್ ಪಿರಿಯಡ್' ನಿಯಮವನ್ನು ಜಾರಿಗೊಳಿಸಿದೆ. ಈ ನಿಯಮದ ಪ್ರಕಾರ, ಎರಡು ವರ್ಷಗಳ ಎಕ್ಸಿಕ್ಯುಟಿವ್ ಹುದ್ದೆಯ ನಂತರ, ಅಧಿಕಾರಿಗಳು ಕಡ್ಡಾಯವಾಗಿ ನಿಗದಿತ ಅವಧಿಗೆ ನಾನ್-ಎಕ್ಸಿಕ್ಯುಟಿವ್ ಹುದ್ದೆಗಳಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ, ಇದು ಇಲಾಖೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.
Read Full Story

08:44 AM (IST) Aug 03

Annabrahma Chaturmasya - ಅನ್ನಬ್ರಹ್ಮ ಚಾತುರ್ಮಾಸ್ಯ, ಧರ್ಮಸಭೆಯಲ್ಲಿ ನಿದ್ದೆ-ಊಟದ ಮಹತ್ವ ಹೇಳಿದ ಭಾರತೀ ಶ್ರೀಗಳು

ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು, ಆಹಾರ ಮತ್ತು ನಿದ್ದೆಯ ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಿದ್ದಾರೆ. ನಿದ್ದೆಯು ಮಾತೃಸ್ವರೂಪಿಣಿಯಾಗಿದ್ದು, ಶರೀರ ಮತ್ತು ಮನಸ್ಸಿಗೆ ಚೈತನ್ಯ ನೀಡುತ್ತದೆ ಹಾಗೂ ಸರಿಯಾದ ನಿದ್ದೆ ಸಮಾಧಿ ಸ್ಥಿತಿಗೆ ಸಮಾನ ಎಂದು ಅವರು ತಿಳಿಸಿದ್ದಾರೆ.

Read Full Story

08:30 AM (IST) Aug 03

ಸವದತ್ತಿ-ಬೆಂಗಳೂರು - 'ಪಲ್ಲಕ್ಕಿ'ಯ ಹೊಸ ಪಯಣ, ಎರಡು ಬಸ್‌ಗಳಿಗೆ ಚಾಲನೆ; ಸಮಯ ಈ ರೀತಿ

ಶಾಸಕ ವಿಶ್ವಾಸ ವೈದ್ಯ ಅವರು ಸವದತ್ತಿಯಿಂದ ಬೆಂಗಳೂರಿಗೆ ಪ್ರಯಾಣಿಸುವ ನೂತನ 'ಪಲ್ಲಕ್ಕಿ' ನಾನ್ ಎಸಿ ಸ್ಲೀಪರ್ ಬಸ್‌ಗಳಿಗೆ ಚಾಲನೆ ನೀಡಿದರು. ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಭಕ್ತರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಈ ಸೇವೆಯನ್ನು ಆರಂಭಿಸಲಾಗಿದ್ದು, ಇದು ಸುರಕ್ಷಿತ ಹಾಗೂ ಸುಖಕರ ಪ್ರಯಾಣವನ್ನು ಒದಗಿಸಲಿದೆ.
Read Full Story

More Trending News