Published : Jul 27, 2025, 07:24 AM ISTUpdated : Jul 27, 2025, 11:17 PM IST

Karnatata Latest News Live: Pratham Rakshak Bullet controversy - ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ನಟ ಪ್ರಥಮ್, ರಕ್ಷಕ್ ಬುಲೆಟ್!

ಸಾರಾಂಶ

ಬೆಂಗಳೂರು: ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ಯೂರಿಯಾ ದೊರೆಯದ್ದರಿಂದ ರೈತರು ಕಂಗಾಲಾ ಗಿದ್ದು, ಗೊಬ್ಬರಕ್ಕಾಗಿ ಕೃಷಿ ಚಟುವಟಿಕೆ ಬಿಟ್ಟು ಅಂಗಡಿಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಈ ಬಾರಿ ಉತ್ತಮವಾಗಿ ಸುರಿಯುತ್ತಿರುವ ನಡುವೆ ರಾಜ್ಯದಲ್ಲಿ ಬೆಳೆಗಳಿಗೆ ಅಗತ್ಯವಾದ ಯೂರಿಯಾ ರಸಗೊಬ್ಬರದ ಅಭಾವ ಕೂಡ ಮುಂದುವರಿದಿದೆ. ಯೂರಿಯಾಗಾಗಿ ರಾಜ್ಯದ ವಿವಿಧೆಡೆ ರೈತರು ಮುಗಿಬೀಳುತ್ತಿದ್ದು, ಶನಿವಾರವೂ ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ. ಇದರ ನಡುವೆ, ಕೊಪ್ಪಳ ಜಿಲ್ಲೆಯಲ್ಲಿ ರೈತನೊಬ್ಬ ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ದಾವಣಗೆರೆ ಜಿಲ್ಲೆಯ ಜಗಳೂರು, ಚಿತ್ರದುರ್ಗ, ಗದಗ ಜಿಲ್ಲೆಯ ನರಗುಂದ ಸೇರಿ ಅನೇಕ ಕಡೆ ಗೊಬ್ಬರದ ಅಂಗಡಿಗಳ ಮುಂದೆ ಹನುಮನ ಬಾಲದಂತೆ ಸರದಿ ಕಂಡುಬಂದಿದೆ. ಇನ್ನೂ ಕೆಲವು ಕಡೆ ಪೊಲೀಸ್ ಭದ್ರತೆಯಲ್ಲಿ ಗೊಬ್ಬರ ವಿತರಿಸಲಾಗಿದೆ.ಗದಗ ಜಿಲ್ಲೆ ಲಕ್ಷ್ಮಶ್ವರದಲ್ಲಿ ರೈತರು ಚಳಿ, ಮಳೆ ಲೆಕ್ಕಿಸದೆ ಗೊಬ್ಬರದ ಅಂಗಡಿಗಳ ಮುಂದೆ ರಾತ್ರಿಯಿಡೀ ಟ್ರ್ಯಾಕ್ಟರ್‌ನಲ್ಲಿ ವಾಸ್ತವ್ಯ ಹೂಡಿ ಮುಂಜಾನೆವರೆಗೆ ಸರದಿಯಲ್ಲಿ ನಿಂತ ರೈತರಿಗೆ ಕೇವಲ 2 ಚೀಲ ಮಾತ್ರ ಗೊಬ್ಬರ ಸಿಕ್ಕಿದೆ.

Olle huduga pratam

11:17 PM (IST) Jul 27

Pratham Rakshak Bullet controversy - ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ನಟ ಪ್ರಥಮ್, ರಕ್ಷಕ್ ಬುಲೆಟ್!

ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಪ್ರಥಮ್ ಮತ್ತು ರಕ್ಷಕ್ ಬುಲೆಟ್ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ರಕ್ಷಕ್ ಬುಲೆಟ್ ವಿರುದ್ಧದ ಆರೋಪಗಳು ಮತ್ತು ಪ್ರಥಮ್‌ನ ಜೀವ ಬೆದರಿಕೆ ಆರೋಪಗಳು ಚರ್ಚೆಗೆ ಗ್ರಾಸವಾಗಿವೆ. 

Read Full Story

10:32 PM (IST) Jul 27

ಚಿಕ್ಕಮಗಳೂರು - ಕಾಡಾನೆ ದಾಳಿಗೆ ಮತ್ತೊಂದು ಬಲಿ; ನಾಲ್ಕು ದಿನದಲ್ಲಿ ಇಬ್ಬರು ಸಾವು, ಮಲೆನಾಡಿಗರು ಆಕ್ರೋಶ, ನಾಳೆ ಬಾಳೆಹೊನ್ನೂರು ಬಂದ್

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಅಂಡುವಾನೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸುಬ್ರಾಯಗೌಡ ಬಲಿ. ನಾಲ್ಕು ದಿನಗಳ ಅಂತರದಲ್ಲಿ ಎರಡನೇ ಬಲಿ. ಕಾಡಾನೆ ಹಾವಳಿಗೆ ಆತಂಕಿತರಾಗಿರುವ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ, ನಾಳೆ ಬಾಳೆಹೊನ್ನೂರು ಬಂದ್‌ಗೆ ಕರೆ ನೀಡಿದ್ದಾರೆ.
Read Full Story

09:32 PM (IST) Jul 27

ಚಾಮರಾಜನಗರದಲ್ಲಿ ಮನಿ ಡಬ್ಲಿಂಗ್ ಶಾಕಿಂಗ್ ಕೇಸ್, ವಂಚಕರಿಗೆ ಪೊಲೀಸರಿಂದಲೇ ಸಾಥ್!?

ಚಾಮರಾಜನಗರದಲ್ಲಿ ಮನಿ ಡಬ್ಲಿಂಗ್ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ 3 ಲಕ್ಷ ರೂಪಾಯಿ ವಂಚಿಸಲಾಗಿದೆ. ಆಘಾತಕಾರಿಯಾಗಿ, ಈ ವಂಚನೆಯಲ್ಲಿ ಪೊಲೀಸರೇ ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಒಟ್ಟು ಏಳು ಮಂದಿಯ ವಿರುದ್ಧ ದೂರು ದಾಖಲಾಗಿದೆ.
Read Full Story

09:00 PM (IST) Jul 27

Kundapra Kannada Habba-2025 - ಕುಂದಾಪುರ ಪ್ರವಾಸಿ ತಾಣವನ್ನಾಗಿಸುವುದು ಮೊದಲ ಆದ್ಯತೆ - ಡಿಸಿಎಂ ಭರವಸೆ

ಕುಂದಾಪುರವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಮೂಲಕ ವಿಮಾನ ನಿಲ್ದಾಣದ ಯೋಜನೆಯನ್ನು ಪರಿಗಣಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. 

Read Full Story

08:09 PM (IST) Jul 27

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರನ ಆರೋಗ್ಯ ಸ್ಥಿತಿ ಗಂಭೀರ!

ಮಲ್ಲಿಕಾರ್ಜುನ ಖರ್ಗೆ ಪುತ್ರ ಮಿಲಿಂದ್ ಖರ್ಗೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Read Full Story

07:52 PM (IST) Jul 27

ಕಾಂಗ್ರೆಸ್ ಪ್ರತಿಜ್ಞಾ ಸಮಾವೇಶದಲ್ಲಿ ಆರೆಸ್ಸೆಸ್ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ

ಬೆಳಗಾವಿಯಲ್ಲಿ ನಡೆದ ಯುವ ಕಾಂಗ್ರೆಸ್ ಸಮಾವೇಶದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಆರ್‌ಎಸ್‌ಎಸ್ ದೇಶದ ಸಂವಿಧಾನ ಮತ್ತು ರಾಷ್ಟ್ರಧ್ವಜದ ಬಗ್ಗೆ ಗೌರವಿಸುವುದಿಲ್ಲ, ಕೇವಲ ತೋರಿಕೆಗೆ ದೇಶಭಕ್ತಿಯ ಮಾತನಾಡುತ್ತಾರೆ ಎಂದು ಆರೋಪಿಸಿದರು.

Read Full Story

07:21 PM (IST) Jul 27

ಇವರನ್ನ ಮದ್ವೆಯಾದ ಗಂಡನ ಜೀವನ ಅಧೋಗತಿ - ಅಮೃತಾ & ರಮೋಲಾ ಲೆಕ್ಕಾಚಾರಕ್ಕೆ ಹುಡುಗರೆಲ್ಲಾ ಸುಸ್ತು!

ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ರಮೋಲಾ ಮತ್ತು ಅಮೃತಾ ತಮ್ಮ ತಿಂಗಳ ಖರ್ಚುವೆಷ್ಟು ಎಂದು ಬಹಿರಂಗಪಡಿಸಿದ್ದಾರೆ. ರಮೋಲಾ ತಿಂಗಳಿಗೆ 55 ಸಾವಿರ ರೂ. ಖರ್ಚು ಮಾಡಿದರೆ, ಅಮೃತಾ 1 ಲಕ್ಷ ರೂ.ಗೂ ಹೆಚ್ಚು ಖರ್ಚು ಮಾಡುತ್ತಾರೆ.
Read Full Story

07:19 PM (IST) Jul 27

ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ - ಮನೆ, ಆಸ್ತಿ, ಹೆಂಡತಿ ಆಭರಣ ಮಾರಿ 70,000 ಉಚಿತ ಹೆಲ್ಮೆಟ್ ವಿತರಣೆ!

ಗೆಳೆಯನ ಸಾವಿನಿಂದ ಜಾಗೃತರಾದ ರಾಘವೇಂದ್ರ ಕುಮಾರ್, 'ಹೆಲ್ಮೆಟ್ ಮ್ಯಾನ್' ಎಂದೇ ಖ್ಯಾತರಾಗಿದ್ದಾರೆ. ತಮ್ಮ ಆಸ್ತಿಯನ್ನೇ ಮಾರಿ 70,000ಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಜಾಗೃತಿಗಾಗಿ ದೇಶಾದ್ಯಂತ ಸಂಚರಿಸುತ್ತಿರುವ ರಾಘವೇಂದ್ರ, ಹೆಲ್ಮೆಟ್ ಬ್ಯಾಂಕ್‌ ಸ್ಥಾಪಿಸುತ್ತಿದ್ದಾರೆ.

Read Full Story

07:00 PM (IST) Jul 27

'ತೀರ್ಮಾನ ಹೈಕಮಾಂಡ್‌ನದ್ದು..' ಕರ್ನಾಟಕಕ್ಕೆ ದಲಿತ ಸಿಎಂ ಫಿಕ್ಸ್? ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ ಹೇಳಿಕೆ ಸಂಚಲನ!

ಕರ್ನಾಟಕದಲ್ಲಿ ದಲಿತ ಸಿಎಂ ಬಗ್ಗೆ ಚರ್ಚೆ ಮತ್ತೆ ತೀವ್ರಗೊಂಡಿದೆ. ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ ಅವರು ದಲಿತ ಸಿಎಂ ಬಗ್ಗೆ ಮಾತನಾಡಿದ್ದು, ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಯೂ ಹೌದು ಎಂದಿದ್ದಾರೆ.
Read Full Story

06:20 PM (IST) Jul 27

ಶಿವಮೊಗ್ಗದಲ್ಲಿ ಸಸ್ಪೆನ್ಸ್ ಮರ್ಡರ್ - ಅಕ್ಕ-ಪಕ್ಕದಲ್ಲಿ ಮಲಗಿದ್ದ ಅಣ್ಣನ ಕೊಲೆ, ತಮ್ಮ ನಾಪತ್ತೆ!

ಶಿವಮೊಗ್ಗದಲ್ಲಿ ಅಣ್ಣನ ಭೀಕರ ಕೊಲೆಯಾಗಿದ್ದು, ತಮ್ಮ ನಾಪತ್ತೆಯಾಗಿದ್ದಾನೆ. ರಾತ್ರಿ ಅಕ್ಕ-ಪಕ್ಕದಲ್ಲೇ ಮಲಗಿದ್ದ ಅಣ್ಣ-ತಮ್ಮಂದಿರ ಪೈಕಿ ಬೆಳಗ್ಗೆ ಅಣ್ಣ ಮಣಿಕಂಠನ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಮಣಿಕಂಠನ ಮೃತದೇಹದ ಬಳಿ ಕಲ್ಲು ಪತ್ತೆಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Read Full Story

05:56 PM (IST) Jul 27

ಮೈಸೂರಿನಲ್ಲಿ ಡ್ರಗ್ಸ್ ತಯಾರಿಕ ಘಟಕ ಪತ್ತೆ ಪ್ರಕರಣ; 'ಕರ್ನಾಟಕಲ್ಲೇ ನಡೆತಿರೋದು ಆತಂಕಕಾರಿ' - ಗೃಹ ಸಚಿವ

ಮೈಸೂರಿನಲ್ಲಿ ಭಾರೀ ಪ್ರಮಾಣದ MDMA ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾಗಿದ್ದು, ಗೃಹ ಸಚಿವ ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ. ಮುಂಬೈ ಪೊಲೀಸರಿಂದ ಲಭ್ಯವಾದ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದ್ದು, ಕರ್ನಾಟಕ ಪೊಲೀಸರು ತನಿಖೆ ನಡೆಸಲಿದ್ದಾರೆ.
Read Full Story

05:18 PM (IST) Jul 27

ಬ್ರೆಜ್ಜಾಗಿಂತ ದೊಡ್ಡದು, ಸೆ.3ಕ್ಕೆ ಮಾರುತಿ ಸುಜುಕಿ ಮಿಡ್‌ಸೈಜ್ ಎಸ್‌ಯುವಿ ಕಾರು ಲಾಂಚ್

ದೀಪಾವಳಿ ಹಬ್ಬಕ್ಕೆ ಮಾರುತಿ ಸುಜುಕಿ ಹೊಸ ಮಿಡ್‌ಸೈಜ್ ಎಸ್‌ಯುವಿ ಕಾರು ಬಿಡುಗಡೆ ಮಾಡುತ್ತಿದೆ. ಮಾರುತಿ ಬ್ರೆಜ್ಜಾ ಕಾರಿಗಿಂತ ದೊಡ್ಡದು, ಗ್ರ್ಯಾಂಡ್ ವಿಟಾರ ಕಾರಿಗಿಂತ ಚಿಕ್ಕದು, ಜೊತೆಗೆ ಕಡಿಮೆ ಬೆಲೆಯಲ್ಲಿ ಈ ಕಾರು ಬಿಡುಗಡೆಯಗುತ್ತಿದೆ.

Read Full Story

05:06 PM (IST) Jul 27

ದರ್ಶನ್ ಅಭಿಮಾನಿಗಳ ಮುಂದೆ ಬುದ್ಧಿವಂತಿಕೆಯಿಂದ ತಲೆ ತಗ್ಗಿಸಿದೆ; ನಟ ಒಳ್ಳೆ ಹುಡುಗ ಪ್ರಥಮ್

ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಮೇಲೆ ದರ್ಶನ್ ಅಭಿಮಾನಿಗಳಿಂದ ದಾಳಿ ನಡೆದಿದೆ. ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, 15-20 ಜನರು ಮಾರಕಾಸ್ತ್ರಗಳೊಂದಿಗೆ ಪ್ರಥಮ್‌ರನ್ನು ಬೆದರಿಸಿದ್ದಾರೆ. ನಟ ಪ್ರಥಮ್ ಅವರ ಮುಂದೆ ಬುದ್ಧಿವಂತಿಕೆಯಿಂದ ತಲೆ ತಗ್ಗಿಸಿ ಹೊರಗೆ ಬಂದಿದ್ದಾರೆ. 

Read Full Story

05:04 PM (IST) Jul 27

ಮ್ಯಾಂಚೆಸ್ಟರ್‌ ಟೆಸ್ಟ್‌ - 700 ರನ್ ಸಿಡಿಸಿ ಹೊಸ ಮೈಲಿಗಲ್ಲು ನೆಟ್ಟ ಶುಭ್‌ಮನ್ ಗಿಲ್

ಇಂಗ್ಲೆಂಡ್‌ನಲ್ಲಿ ಒಂದು ಟೆಸ್ಟ್ ಸರಣಿಯಲ್ಲಿ 700 ರನ್ ಗಳಿಸಿದ ಮೊದಲ ಏಷ್ಯನ್ ಆಟಗಾರ ಎಂಬ ಹೆಗ್ಗಳಿಕೆಗೆ ಶುಭ್‌ಮನ್ ಗಿಲ್ ಪಾತ್ರರಾಗಿದ್ದಾರೆ. ಇದರೊಂದಿಗೆ ಪಾಕಿಸ್ತಾನದ ಮೊಹಮ್ಮದ್ ಯೂಸುಫ್ ಹಾಗೂ ವಿರಾಟ್ ಕೊಹ್ಲಿ ದಾಖಲೆಗಳನ್ನು ಮುರಿದಿದ್ದಾರೆ.  

Read Full Story

04:47 PM (IST) Jul 27

ಎಐ ಟೆಕ್‌ನಿಂದ ಟಾಟಾ ಕಂಪನಿಯಲ್ಲಿ 12,000 ಉದ್ಯೋಗ ಕಡಿತ, ಯಾರ ಜಾಬ್‌ಗೆ ಕತ್ತರಿ?

ದಿಗ್ಗಜ ಕಂಪನಿಗಳ ಬಳಿಕ ಇದೀಗ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಉದ್ಯೋಗ ಕಡಿತ ಘೋಷಿಸಿದೆ. ಬರೋಬ್ಬರಿ 12,000 ಉದ್ಯೋಗ ಕಡಿತ ಮಾಡುತ್ತಿದೆ. ಈ ಕುರಿತು ಕಂಪನಿ ಸಿಇಒ ಹೇಳಿದ್ದಾರೆ.

Read Full Story

03:58 PM (IST) Jul 27

ವಿಜ್ಞಾನಿಗಳ ಅಚ್ಚರಿಗೊಳಿಸಿದ ಘಟನೆ, ನೆಪ್ಚೂನ್ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಚಿತ್ರ ವಸ್ತು ಪತ್ತೆ

ಸೌರವ್ಯೂಹದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇದು ಖಗೋಳಶಾಸ್ತ್ರಜ್ಞರ ಅಚ್ಚರಿಗೊಳಿಸಿದೆ. ನೆಪ್ಚೂನ್ ಗ್ರಹದ ಜೊತೆ ವಿಚಿತ್ರ ವಸ್ತುವೊಂದು ಡ್ಯಾನ್ಸ್ ಮಾಡುತ್ತಿರುವುದ ಪತ್ತೆಯಾಗಿದೆ.

Read Full Story

03:42 PM (IST) Jul 27

ಕರಾವಳಿ ದೈವದ ಪವಾಡ; ಕಡಿಯಾಳಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಬಂದು ಮೂರ್ಛೆಹೋಗಿ, ಸಿಕ್ಕಿಬಿದ್ದ ಕಳ್ಳರು!

ಕರ್ನಾಟಕದ ಕರಾವಳಿಯಲ್ಲಿ ಮತ್ತೊಂದು ದೈವದ ಪವಾಡ ಘಟನೆಯೊಂದು ನಡೆದಿದೆ. ಉಡುಪಿಯ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಕಳ್ಳರ ಪೈಕಿ ಒಬ್ಬ ಕಳ್ಳ ಮೂರ್ಛೆ ಹೋಗಿ ಬಿದ್ದ ಘಟನೆ ನಡೆದಿದೆ. ಸ್ಥಳೀಯರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Read Full Story

03:29 PM (IST) Jul 27

ಚಿಕನ್​ ಪ್ರಿಯರಿಗೆ ಮರ್ಮಾಘಾತ - ಎಂಪೈರ್​ ರೆಸ್ಟೋರೆಂಟ್​ ಕಬಾಬ್​ ತಿಂದೋರಿಗೆ ಶಾಕ್ ಕೊಟ್ಟ ಆಹಾರ ಇಲಾಖೆ

ಬೆಂಗಳೂರಿನ ಎಂಪೈರ್ ರೆಸ್ಟೋರೆಂಟ್​ ಒಂದರಲ್ಲಿ ಬಳಲಾಗ್ತಿರೋ ಚಿಕನ್​ ಕಬಾಬ್​ ಅಸುಕ್ಷಿತವಾಗಿರುವುದಾಗಿ ರಾಜ್ಯ ಆಹಾರ ಇಲಾಖೆ ನೋಟಿಸ್​ ಜಾರಿ ಮಾಡಿದೆ. ವರದಿಯಲ್ಲಿ ಕಂಡು ಬಂದ ಸತ್ಯವೇನು?

 

Read Full Story

03:24 PM (IST) Jul 27

ವಾಶಿಂಗ್ ಮಷಿನ್‌ಗೂ ಕಾಲಿಟ್ಟ ಎಐ ತಂತ್ರಜ್ಞಾನ, 20 ವರ್ಷ ವಾರೆಂಟಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಎಲ್ಲಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ಇದೀಗ ವಾಶಿಂಗ್ ಮಶಿನ್‌ನಲ್ಲೂೂ ಎಐ ತಂತ್ರಜ್ಞಾನದ ಬಳಸಿಕೊಳ್ಳಲಾಗಿದೆ. ಇದು ನೀರು ಶುದ್ಧೀಕರಿಸಿ ಬಟ್ಟೆ ತೊಳೆಯಲಿದೆ.ಬರೋಬ್ಬರಿ 20 ವರ್ಷ ವಾರೆಂಟಿ ನೀಡುತ್ತಿದೆ.

Read Full Story

02:49 PM (IST) Jul 27

ತಮ್ಮನಿಗೆ ಹೆಚ್‌ಐವಿ ಪಾಸಿಟಿವ್; ಮನೆ ಮರ್ಯಾದೆ ಹೋಗುತ್ತೆಂದು ಅಕ್ಕ-ಭಾವ ಸೇರಿ ಕುತ್ತಿಗೆ ಹಿಸುಕಿ ಕೊಂದೇಬಿಟ್ರು!

ಚಿತ್ರದುರ್ಗ ಜಿಲ್ಲೆಯಲ್ಲಿ ಎಚ್ಐವಿ ಸೋಂಕಿತ ಯುವಕನನ್ನು ಆತನ ಅಕ್ಕ ಮತ್ತು ಭಾವ ಕೊಲೆಗೈದಿರುವ ಆಘಾತಕಾರಿ ಘಟನೆ ನಡೆದಿದೆ. ಇದೊಂದು ಮರ್ಯಾದಾ ಹತ್ಯೆಯಾಗಿದೆ. ಮೃತ ಯುವಕನ ಕತ್ತಿನ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Read Full Story

02:08 PM (IST) Jul 27

ಮಣಿಪುರ ಬಳಿಕ ಜನವರಿಯಲ್ಲಿ ಪ.ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ, ಖ್ಯಾತ ಜ್ಯೋತಿಷಿ ಭವಿಷ್ಯ

2026ರ ಜನವರಿ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಆಳ್ವಿಕೆ ಅಂತ್ಯಗೊಳ್ಳಲಿದೆ. ಕಾರಣ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆ ಎಂದು ಖ್ಯಾತ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ.

Read Full Story

02:02 PM (IST) Jul 27

ಧರ್ಮಸ್ಥಳದಲ್ಲಿ ಶವ ಹೂಳಿರುವ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ ಅನಾಮಿಕ; ಪೊಲೀಸರಲ್ಲಿ ಢವ-ಢವ!

ಧರ್ಮಸ್ಥಳದ ಶವ ಹೂಳುವಿಕೆ ಪ್ರಕರಣದಲ್ಲಿ ಅನಾಮಿಕ ವ್ಯಕ್ತಿಯ ಹೇಳಿಕೆಗಳು ಹೊಸ ತಿರುವುಗಳನ್ನು ಸೃಷ್ಟಿಸಿವೆ. ಕಾನೂನು ಪ್ರಕ್ರಿಯೆಗಳಿಲ್ಲದೆ ಶವಗಳನ್ನು ಹೂಳಲಾಗಿದೆ ಎಂಬ ಆರೋಪಗಳು ಎದ್ದಿವೆ. ಎಸ್ಐಟಿ ತನಿಖೆ ಚುರುಕುಗೊಂಡಿದ್ದು, ಬೆಳ್ತಂಗಡಿ ಪೊಲೀಸರಿಗೆ ದಾಖಲೆಗಳ ಪರಿಶೀಲನೆಗೆ ಸೂಚನೆ ನೀಡಲಾಗಿದೆ.
Read Full Story

01:22 PM (IST) Jul 27

ಧರ್ಮಸ್ಥಳ ಶವ ಹೂತ ಪ್ರಕರಣ - ಅನಾಮಿಕ ದೂರುದಾರನ ವೈಯಕ್ತಿಕ ಮಾಹಿತಿ ಕೆದಕಿದ ಎಸ್ಐಟಿ!

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರಾರು ಮಹಿಳೆಯರ ಶವಗಳನ್ನು ಹೂತ ಪ್ರಕರಣದಲ್ಲಿ ಅನಾಮಿಕ ದೂರುದಾರನ ಹಿನ್ನೆಲೆ ಮತ್ತು ವೈಯಕ್ತಿಕ ಮಾಹಿತಿಯನ್ನು ಎಸ್‌ಐಟಿ ತೀವ್ರವಾಗಿ ಪರಿಶೀಲಿಸುತ್ತಿದೆ. ಲೈಂಗಿಕ ಕಿರುಕುಳದ ಆರೋಪ ಮತ್ತು ಕುಟುಂಬದೊಂದಿಗೆ ಧರ್ಮಸ್ಥಳದಿಂದ ಪಲಾಯನದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

Read Full Story

01:06 PM (IST) Jul 27

ಆಸ್ಪತ್ರೆಯಿಂದ ಹಿಂದಿರುಗುವ ವೇಳೆ ಅಪ್ಪ ಮಗಳ ಸ್ಕೂಟರ್‌ಗೆ ಡಿಕ್ಕಿಯಾದ BMW ಕಾರು, ಬಾಲಕಿ ಸಾವು

ಅನಾರೋಗ್ಯದಿಂದ ಅಸ್ವಸ್ಥಗೊಂಡಿದ್ದ 5 ವರ್ಷದ ಮಗಳನ್ನು ಸ್ಕೂಟರ್ ಮೂಲಕ ಆಸ್ಪತ್ರೆಯಿಂದ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಯದ್ವಾ ತದ್ವಾ BMW ಕಾರೊಂದು ಚಲಾಯಿಸಿದ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ 5 ವರ್ಷದ ಬಾಲಕಿ ಮೃತಪಟ್ಟ ಘಟನೆ ನಡೆದಿದೆ.

Read Full Story

12:25 PM (IST) Jul 27

ರಾಷ್ಟ್ರೀಯ ಸ್ಕಾಚ್ ಡೇ, ಮಳೆಯಿಂದ ಬೇಸಿಗೆವರೆಗೆ 500 ವರ್ಷ ಇತಿಹಾಸದ ಮದ್ಯ ಜೊತೆಗಾರನಾಗಿದ್ದು ಹೇಗೆ?

ಜುಲೈ 27 ರಾಷ್ಟ್ರೀಯ ಸ್ಕಾಚ್ ಡೇ. ಕಾಲ ಯಾವುದೇ ಇರಲಿ, ಕೈಯಲ್ಲೊಂದು ಗ್ಲಾಸ್, ಒಂದೊಂದು ಗುಟುಕು ಹೀರುತ್ತಾ ಸ್ಕಾಚ್ ಸವಿ ಅನುಭವಿಸುವ ಮಂದಿ ಕಡಿಮೆಯೇನಿಲ್ಲ. ಅಷ್ಟಕ್ಕೂ ವಿಸ್ಕಿ ಸ್ಕಾಚ್ ಆಗಲ್ಲ ಯಾಕೆ? ಸ್ಕಾಚ್ ಇತಿಹಾಸವೇನು?

Read Full Story

11:40 AM (IST) Jul 27

ಆಸ್ಪತ್ರೆ ಮಹಿಳಾ ರಿಸೆಪ್ಷನಿಸ್ಟ್ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಹೊಸ ವಿಡಿಯೋ ಬಹಿರಂಗ

ಕ್ಲಿನಿಕ್ ಮಹಿಳಾ ರೆಸೆಪ್ಷನಿಸ್ಟ್ ಮೇಲೆ ರೋಗಿ ಸಂಬಂಧಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಬಾಲಿವುಡ್ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಈ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇದಕ್ಕೂ ಮೊದಲಿನ ವಿಡಿಯೋ ಬಹಿರಂಗವಾಗಿದ್ದು, ಇದೀಗ ರೆಸೆಪ್ಷನಿಸ್ಟ್ ಮೇಲೂ ಕ್ರಮಕ್ಕೆ ಹಲವರು ಆಗ್ರಹಿಸಿದ್ದಾರೆ.

Read Full Story

11:40 AM (IST) Jul 27

ಕನಕಪುರದಲ್ಲಿ ಕಾಂಗ್ರೆಸ್ ಮುಖಂಡನ ಭೀಕರ ಹತ್ಯೆ; ಮುಖ, ಮೂತಿಗೆಲ್ಲಾ ಮಚ್ಚಿನೇಟು!

ಕನಕಪುರ ತಾಲೂಕಿನ ಸಾತನೂರು ಬಳಿ ಕಾಂಗ್ರೆಸ್ ಮುಖಂಡ ನಂಜೇಶ್‌ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ರಾಜಕೀಯ ಕಾರಣಗಳು ಹಾಗೂ ಜಮೀನು ವಿವಾದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದೆಂದು ಶಂಕಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Read Full Story

11:16 AM (IST) Jul 27

ಭದ್ರಕಾಳಿ ದೇಗುಲದಲ್ಲಿ ನಿಗೂಢ ದುರ್ಗಾದೇವಿ ವಿಗ್ರಹ ಪತ್ತೆ; ಬೆರಳಚ್ಚು ತಂಡದ ಆಗಮನ!

ಕಳ್ಳತನ ಪ್ರಕರಣದ ನಂತರ ಭದ್ರಕಾಳಿ ದೇವಸ್ಥಾನದಲ್ಲಿ ದುರ್ಗಾದೇವಿ ವಿಗ್ರಹ ಪತ್ತೆಯಾಗಿದೆ. ಈ ವಿಗ್ರಹ ದೇವಸ್ಥಾನಕ್ಕೆ ಸೇರಿದ್ದಲ್ಲದ ಕಾರಣ, ಪೊಲೀಸರು ತನಿಖೆ ಆರಂಭಿಸಿದ್ದಾರೆ. 30 ವರ್ಷಗಳ ಹಿಂದಿನ ಕಳ್ಳತನದ ನಂತರ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
Read Full Story

11:11 AM (IST) Jul 27

ನವಭಾರತದ ಬಿಸಿನೆಸ್‌ಗೆ ಬ್ರಿಟನ್‌ ಒಪ್ಪಂದ ಉದಾಹರಣೆ - ಪೀಯೂಷ್‌ ಗೋಯಲ್‌ ಲೇಖನ

ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಅರ್ಥ ವ್ಯವಸ್ಥೆಯಲ್ಲಾದ ಕ್ರಾಂತಿಕಾರಿ ಸುಧಾರಣೆಗಳು, ಸುಗಮ ವ್ಯಾಪಾರ ಮತ್ತು ಪ್ರಧಾನಿಯವರ ಜಾಗತಿಕ ಸ್ಥಾನಮಾನವು ಭಾರತದಲ್ಲಿ ಸಾಮಾನ್ಯ ಜನರಿಗೂ ದೊಡ್ಡ ಅವಕಾಶ ಒಲಿಯಲು ಸಾಧ್ಯವಾಗಿದೆ. ಎಲ್ಲಿಯೂ ರಾಜಿಯಾಗದೇ ಜನರ ಹಿತಾಸಕ್ತಿಗೆ ಬದ್ಧವಾಗಿದೆ.

Read Full Story

11:06 AM (IST) Jul 27

Breaking ಮಾನಸ ದೇವಿ ದೇಗುಲುದಲ್ಲಿ ಭೀಕರ ಕಾಲ್ತುಳಿತ, 6 ಭಕ್ತರು ಸಾವು

ಮಾನಸ ದೇವಿ ದೇಗುಲದಲ್ಲಿ ಏಕಾಏಕಿ ಸಾವಿರಾರು ಭಕ್ತರು ಸೇರಿದ ಕಾರಣ ಭೀಕರ ಕಾಲ್ತುಳಿತ ಸಂಭವಿಸಿದೆ. ಪವಿತ್ರ ಶ್ರಾವಣ ಮಾಸದ ವಿಶೇಷ ಪೂಜೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ವೇಳೆ ಕಾಲ್ತುಳಿತ ಸಂಭವಿಸಿ 6 ಮಂದಿ ಮೃತಪಟ್ಟಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದಾರೆ.

Read Full Story

10:43 AM (IST) Jul 27

ರನ್‌ವೇಯಲ್ಲಿ ವಿಮಾನಕ್ಕೆ ಹೊತ್ತಿಕೊಂಡ ಬೆಂಕಿ, ಎಮೆರ್ಜೆನ್ಸಿ ಡೋರ್‌ನಿಂದ ಜಿಗಿದ ಪ್ರಯಾಣಿಕರು

ಟೇಕ್ಆಫ್‌ಗಾಗಿ ಬೋಯಿಂಗ್ ವಿಮಾನ ವೇಗವಾಗಿ ರನ್‌ವೇಯಲ್ಲಿ ಸಾಗುತ್ತಿದ್ದಂತೆ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ತುರ್ತು ನಿರ್ಗಮನದ ಮೂಲಕ ಪ್ರಯಾಣಿಕರು ಹೊರಕ್ಕೆ ಜಿಗಿದ ಘಟನೆ ನಡೆದಿದೆ.

Read Full Story

10:32 AM (IST) Jul 27

ಚೌಡಿಮಾವಿನ ಮರ - ಮಕ್ಕಳ ಕನಸು, ಅಪ್ಪಯ್ಯನ ನೆನಪು, ಹಳ್ಳಿಯ ಕತೆ

ಚೌಡಿ ಮಾವಿನಮರದ ಹಣ್ಣು ಒಳ್ಳೆ ಈಶಾಡಿ ಹಣ್ಣಿನ ತರಹ ರುಚಿ ಇತ್ತು. ಮರವೋ ದೈತ್ಯಾಕಾರದಲ್ಲಿ ಬೆಳೆದು ರೆಂಬೆಕೊಂಬೆಗಳನ್ನು ಸುತ್ತ ಚಾಚಿತ್ತು.

Read Full Story

09:52 AM (IST) Jul 27

ಯುಟೋರಿ - ಸಾವಕಾಶ, ಸಾವಧಾನ ಎಂಬ ವರಯೋಗ ಸೂತ್ರ

ಮೂರು ನಾಲ್ಕು ದಶಕಗಳ ಹಿಂದೆ, ಮುಂಜಾನೆ ಎದ್ದು ಒಂದು ಗಂಟೆ ಪತ್ರಿಕೆಗಳನ್ನು ಓದಿ, ಒಂದೂವರೆ ಗಂಟೆ ವಾಕಿಂಗ್ ಮಾಡಿ, ಗೆಳೆಯರ ಜತೆಗೆ ಮಾತನಾಡಿ, ತರಕಾರಿ ತೆಗೆದುಕೊಂಡು ಮನೆಗೆ ಬರುತ್ತಿದ್ದ ಅನೇಕರನ್ನು ಬೆಂಗಳೂರಲ್ಲಿ ನೋಡಬಹುದಾಗಿತ್ತು.

Read Full Story

09:36 AM (IST) Jul 27

ವಿಷದ ಬಾಟಲಿಯ ಮುಚ್ಚಳದಿಂದಾಗಿ ಕೊಲೆ ಬಯಲು - ಮೃತನ ಪತ್ನಿ ಸೆರೆ!

ಆತ್ಮ*ಹತ್ಯೆ ಎಂಬಂತೆ ಬಿಂಬಿತವಾಗಿದ್ದ ಪ್ರಕರಣವೊಂದು ಮುಚ್ಚಳ ಇಲ್ಲದ ವಿಷದ ಬಾಟಲಿ ಹಾಗೂ ಕಾಣೆಯಾಗಿದ್ದ ಒಂದು ಚಪ್ಪಲಿಯಿಂದಾಗಿ ಕೊಲೆ ಎಂದು ದೃಢಪಟ್ಟಿರುವ ಕುತೂಹಲಕಾರಿ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.

Read Full Story

08:51 AM (IST) Jul 27

ಸಿಮೆಂಟ್ ಪೈಪ್ ಫ್ಯಾಕ್ಟರಿ ಮಾಡಲು ಹೊರಟವರ ಕೈ ಹಿಡಿದ ಅರಿಶಿಣ - ಇಲ್ಲಿದೆ ಭಾನುಪ್ರಸಾದ್ ಯಶೋಗಾಥೆ

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಅಡಿ ಚಾಮರಾಜನಗರವು ಅರಿಶಿಣ ಉತ್ಪನ್ನಕ್ಕೆ ಆಯ್ಕೆಯಾಗಿತ್ತು. ಅದರಂತೆ ಅರಿಶಿಣ ಸಂಸ್ಕರಣೆಗೆ ತೊಡಗಿಸಿಕೊಂಡರು ಮೈಸೂರಿನ ಬಿ.ಎಸ್ ಭಾನುಪ್ರಸಾದ್.

Read Full Story

08:31 AM (IST) Jul 27

ಹಳೆಯ ಬಾಯ್ ಫ್ರೆಂಡ್‌ನಿಂದ 2.5 ಕೋಟಿ ಸುಲಿಗೆ ಯತ್ನ - ನಾಲ್ವರ ಬಂಧನ

ತನ್ನ ಹಳೆಯ ಬಾಯ್ ಫ್ರೆಂಡ್‌ನನ್ನು ಮಾತುಕತೆ ಸೋಗಿನಲ್ಲಿ ಕರೆಸಿಕೊಂಡು ಬಳಿಕ ಅಪಹರಿಸಿ 2.5 ಕೋಟಿ ರು. ವಸೂಲಿಗೆ ಯತ್ನಿಸಿದ್ದ ದುಬೈ ಟ್ರಾವೆಲ್ಸ್‌ ಏಜೆನ್ಸಿ ಉದ್ಯೋಗಿಯ ಮಾಜಿ ಪ್ರಿಯತಮೆಯ ನಾಲ್ವರು ಸಹಚರರು ಅಶೋಕ ನಗರ ಠಾಣೆ ಪೊಲೀಸರು ಬಲೆಗೆ ಬಿದ್ದಿದ್ದಾರೆ.

Read Full Story

08:12 AM (IST) Jul 27

ಮುಂಜಾನೆ 6 ಗಂಟೆಗೆ ಶೋ ಆರಂಭಿಸಿ ‘ಸು ಫ್ರಂ ಸೋ’ ಸಿನಿಮಾ ದಾಖಲೆ - 120 ಸ್ಕ್ರೀನ್‌ಗಳಲ್ಲೂ ಹೌಸ್‌ಫುಲ್

ರಾಜ್ ಬಿ.ಶೆಟ್ಟಿ ನಿರ್ಮಾಣ, ಜೆ.ಪಿ.ತುಮಿನಾಡ್‌ ನಿರ್ದೇಶನದ ‘ಸು ಫ್ರಂ ಸೋ’ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಕಮಾಲ್‌ ಮಾಡುತ್ತಿದೆ.

Read Full Story

More Trending News