ಬೆಂಗಳೂರಲ್ಲಿ ಅಂಗಡಿ ಗೋಡೆ ಕೊರೆದು 10 ಕೆಜಿ ಬೆಳ್ಳಿ ಕಳ್ಳತನ ಮಾಡಿದ್ದ ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ತಿಂಗಳು ಹಲಸೂರಿನ ಕಾರ್ ಸ್ಟ್ರೀಟ್ ನಲ್ಲಿ ಜ್ಯುವೆಲ್ಲರಿ ಅಂಗಡಿಗೆ ಕನ್ನ ಹಾಕಿದ್ದ ಆರೋಪಿ ತೇಜು, ಬೆಳ್ಳಿ ಕದ್ದು ಪರಾರಿಯಾಗಿದ್ದ. ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡು ಮೂಲಕ ತೇಜುವನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪದೇ ಪದೇ ಕೈ ಕೊಡ್ತಿರುವ ನಮ್ಮ ಮೆಟ್ರೋ, ಧರ್ಮಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ, ಅಬಕಾರಿ ಹೆಚ್ಚುವರಿ ಆಯುಕ್ತ ವೈ ಡಿ ಮಂಜುನಾಥ ನಿವಾಸದ ಮೇಲೆ ಇ ಡಿ ದಾಳಿ ಪ್ರಕರಣ, ರಾಜ್ಯ ಸರ್ಕಾರದ ಆಡಳಿ, ರಾಜ್ಯ ರಾಜಕಾರಣ ಸೇರಿದಂತೆ ಇಂದಿನ ಕ್ಷಣ ಕ್ಷಣದ ಸುದ್ದಿ ಲೈವ್ ಅಪ್ಡೇಟ್ ಇಲ್ಲಿದೆ.

09:01 PM (IST) Jun 26
ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ದೀಪಿಕಾರನ್ನು ಭೇಟಿಯಾಗಲು ಇಂದ್ರಜಿತ್ ಲಂಕೇಶ್ ಮುಂಬೈಗೆ ಹೋದರು. ಆದರೆ ಆ ಭೇಟಿ ಆಗಿದ್ದು ಲಿಫ್ಟ್ನಲ್ಲಿ. ಅಲ್ಲಿ ನಡೆದ ಕೆಲವೇ ನಿಮಿಷಗಳ ಸಂಭಾಷಣೆ ದೀಪಿಕಾ ಬದುಕಿನ ದಿಕ್ಕನ್ನು ಬದಲಿಸಿತು ಎಂದರೆ ನಂಬಲೇಬೇಕು. ಹಾಗಿದ್ದರೆ ನಡೆದಿದ್ದು ಏನು?
07:24 PM (IST) Jun 26
06:49 PM (IST) Jun 26
06:48 PM (IST) Jun 26
06:12 PM (IST) Jun 26
ಪವನ್ ಕಲ್ಯಾಣ್ ತಮ್ಮ ರಾಜಕೀಯ ಬದ್ಧತೆಯ ನಡುವೆಯೇ ಸಿನಿಮಾ ಬದ್ಧತೆಯನ್ನೂ ಕಾಪಾಡಿಕೊಂಡು ಬರುತ್ತಿದ್ದಾರೆ. ಭೂಗತ ಲೋಕದ 'ಹಂಗ್ರಿ ಚೀತಾ' ಜಪಾನ್ನಿಂದ ಹಾರಿ ಬರಲು ರೆಡಿಯಾಗುತ್ತಿದೆ. 'OG 2' ಕೇವಲ ಒಂದು ಸಿನಿಮಾವಲ್ಲ, ಇದು ಪವರ್ ಸ್ಟಾರ್ ಅಭಿಮಾನಿಗಳ ಪಾಲಿಗೆ ಹಬ್ಬದೂಟ!
05:47 PM (IST) Jun 26
Love Seasons Kannada Movie: ಪ್ರೇಮಕಾವ್ಯ ಧಾರಾವಾಹಿಯಲ್ಲಿ ಸ್ನೇಹ ಪಾತ್ರ ಮಾಡುತ್ತಿರುವ ನಟಿ ಶ್ವೇತಾ ಈಗ ಬೆಳ್ಳಿತೆರೆಯತ್ತ ಗಮನ ಕೊಟ್ಟಿದ್ದಾರೆ. ಹೌದು, ಇವರ ‘ಲವ್ ಸೀಸನ್ಸ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
05:46 PM (IST) Jun 26
04:40 PM (IST) Jun 26
Bengalurina Aa Ondu Ghatane: ‘ಬೆಂಗಳೂರಿನ ಆ ಒಂದು ಘಟನೆ’ ಯುಟ್ಯೂಬ್ನಲ್ಲಿ ರಿಲೀಸ್ ಆಗಲು ರೆಡಿಯಾಗಿದೆ. ನಮ್ಮ ಕುಡ್ಲದ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಇದೀಗ ನಿರ್ಮಾಣವಾಗಿದೆ. ಇದೊಂದು ಕ್ರೈಂ ಥ್ರಿಲ್ಲರ್ ವೆಬ್ ಸರಣಿಯಾಗಿದೆ. ಇದರಲ್ಲಿ ನಾಲ್ಕು ಸಂಚಿಕೆಗಳಿವೆ.
04:19 PM (IST) Jun 26
Telugu Saregamapa Show: ಜನಪ್ರಿಯ ಮನರಂಜನಾ ವಾಹಿನಿ 'ಜೀ ತೆಲುಗು', ತನ್ನ ಅತ್ಯಂತ ಯಶಸ್ವಿ ಸಿಂಗಿಂಗ್ ರಿಯಾಲಿಟಿ ಶೋ 'ಸ ರಿ ಗ ಮ ಪ'ದ ಹೊಸ ಸೀಸನ್ನೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಬೆಂಗಳೂರಿನಲ್ಲಿ ಇದರ ಆಡಿಷನ್ ನಡೆಯಲಿದೆ.
03:54 PM (IST) Jun 26
ಯಾವಾಗಲೂ ಟಾಪ್ 5 ಸೀರಿಯಲ್ಗಳ ಪಟ್ಟಿಯಲ್ಲಿ ಜೀ ಕನ್ನಡದ ನಾಲ್ಕೈದು ಧಾರಾವಾಹಿಗಳಿರುತ್ತಿದ್ದವು. ಆದರೆ ಈ ವಾರ ಚಿತ್ರಣ ಉಲ್ಟಾ ಪಲ್ಟಾ ಆಗಿದೆ. 'ಅಣ್ಣಯ್ಯ' ಧಾರಾವಾಹಿ 6.6 ರೇಟಿಂಗ್ ಪಡೆದು ಇಡೀ ಕರ್ನಾಟಕದ ನಂಬರ್ 1 ಸೀರಿಯಲ್ ಆಗಿ ಹೊರಹೊಮ್ಮುವ ಮೂಲಕ ಜೀ ಕನ್ನಡದ ಮರ್ಯಾದೆ ಉಳಿಸಿದೆ. ಆದರೆ, ಮಿಕ್ಕಂತೆ ಕಲರ್ಸ್ ಕನ್ನಡ ಧಾರಾವಾಹಿಗಳು ಮಿಂಚಿವೆ!
03:20 PM (IST) Jun 26
02:11 PM (IST) Jun 26
01:27 PM (IST) Jun 26
ಬೆಂಗಳೂರನ್ನು ಮತ್ತೊಮ್ಮೆ ಹಸಿರು ನಗರವನ್ನಾಗಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) #GreenBengaluruByBDA ಎಂಬ ವಿಶೇಷ ಹಸಿರು ಆಂದೋಲನವನ್ನು ಹಮ್ಮಿಕೊಂಡಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುವ ಈ ಯೋಜನೆಯಡಿ 15 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದ್ದು, ನಟ ಸುದೀಪ್ ಈ ಕಾರ್ಯಕ್ಕೆ ಬೆಂಬಲ ಸೂಚಿಸಿದ್ದಾರೆ.
12:43 PM (IST) Jun 26
Mantalaya hundi collection: ರಾಯಚೂರಿನ ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಜೂನ್ ತಿಂಗಳ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ಕೇವಲ 21 ದಿನದಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ಕಾಣಿಕೆ ಸಂಗ್ರಹವಾಗಿದೆ. ಭಕ್ತರು ನೀಡಿದ ಚಿನ್ನ ಬೆಳ್ಳಿಯಷ್ಟು ತಿಳಿಯಿರಿ.
12:40 PM (IST) Jun 26
ಗ್ಲಾಮರ್ ಪ್ರಪಂಚದ ಹಿಂದೆ ಇಂತಹದೊಂದು ಕರಾಳ ಕಥೆ ಅಡಗಿದೆ ಎಂಬುದು ಈಗ ಸಾಬೀತಾಗಿದೆ. ಸ್ಯಾಂಡಲ್ವುಡ್ ಈ ನಟಿಗೆ ಕಾದಿದೆಯಾ ಕಂಟಕ? ಅಥವಾ ವಿಚಾರಣೆಯಲ್ಲಿ ಈ ಸಾವಿನ ರಹಸ್ಯ ಬಯಲಾಗುತ್ತಾ? ಸದ್ಯಕ್ಕೆ ಪೊಲೀಸರ ವಿಚಾರಣೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
12:31 PM (IST) Jun 26
11:48 AM (IST) Jun 26
ಅಲ್ಲಿಯವರೆಗೆ ಕೇವಲ ಖಳನಾಯಕನಾಗಿ ಮಾತ್ರ ಗುರುತಿಸಿಕೊಂಡಿದ್ದ ಅಂಬರೀಶ್ ಅವರನ್ನು ಹೀರೋ ಆಗಿ ಮಾಡುತ್ತಿರುವುದನ್ನು ಯಾರೊಬ್ಬರೂ ಒಪ್ಪಿರಲಿಲ್ಲ. "ಅವನು ಯಾವ ಸೀಮೆ ಹೀರೋರೀ? ಒಬ್ಬ ವಿಲನ್ ಅನ್ನು ಕರೆದುಕೊಂಡು ಬಂದು ನೀವು ಹೀರೋ ಮಾಡ್ತಾ ಇದ್ದೀರಾ, ಇದು ಹೇಗೆ ಸಾಧ್ಯ?" ಎಂದು ಎಲ್ಲರೂ ಗೇಲಿ ಮಾಡಿದ್ದರು.
11:19 AM (IST) Jun 26
10:06 AM (IST) Jun 26
ಈ ಪವಿತ್ರ ಕ್ಷೇತ್ರದಲ್ಲಿ ನಿಂತು ಮಾತನಾಡುತ್ತಿದ್ದೇನೆ. ಅಡ್ಡಮತದಾನ ಬಳಿಕ ಡಿಕೆಶಿ ಜೊತೆ ಆತ್ಮೀಯತೆ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ವಿಜಯೇಂದ್ರ ಹೇಳಿದ್ದೇನು?
09:39 AM (IST) Jun 26
ದರ್ಶನ್ ಪುತ್ರ ವಿನೀಶ್ ಕಾರು ಚಲಾಯಿಸಿಲ್ಲ. ಬೈಕ್ ಸವಾರರ ತಪ್ಪಿನಿಂದ ಸಣ್ಣ ಅಪಘಾತವಾಗಿದೆ ಎಂದು ದರ್ಶನ್ ಪುತ್ರ ವಿನೀಶ್ ಕಾರು ಅಫಘಾತ ಪ್ರಕರಣ ಕುರಿತು ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ. ವಿಜಯಲಕ್ಷ್ಮಿ ಹೇಳಿದ್ದೇನು?
08:55 AM (IST) Jun 26
ನಿನ್ನೆ ರಾತ್ರಿಯಿಂದ ತುರ್ತು ಸೇವೆಗಳ ಸಹಾಯವಾಣಿ ಸ್ಥಗಿತಗೊಂಡಿದೆ. ಆ್ಯಂಬುಲೆನ್ಸ್ (108), ಆರೋಗ್ಯ ಸಹಾಯವಾಣಿ (104) ಎರಡೂ ಸೇವೆಗಳು ವ್ಯತ್ಯಯವಾಗಿದೆ. ಆರೋಗ್ಯ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡಿದೆ.
08:44 AM (IST) Jun 26
ಆ.ಪ್ರದೇಶ ಸರ್ಕಾರವು ಬೆಂಗಳೂರಿನ 'ಏರ್ಬೌಂಡ್' ಸ್ಟಾರ್ಟಪ್ ಜೊತೆಗೂಡಿ ವಿಶ್ವದ ಅತಿದೊಡ್ಡ ಡ್ರೋನ್ ಸರಕು ವಿತರಣಾ ಜಾಲ ಸ್ಥಾಪಿಸಲು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಈ ಮಹತ್ವಾಕಾಂಕ್ಷಿ ಯೋಜನೆಯಡಿ, ರಾಜ್ಯಾದ್ಯಂತ ದಿನಕ್ಕೆ ಕನಿಷ್ಠ 10,000 ಡ್ರೋನ್ಗಳ ಮೂಲಕ ಔಷಧಿ, ಅಗತ್ಯ ವಸ್ತುಗಳ ತಲುಪಿಸುವ ಗುರಿ.
08:39 AM (IST) Jun 26
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದಿದ್ದಾರೆ. ಈ ವೇಳೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆಣೆ ಪ್ರಮಾಣ ವಿಚಾರದಲ್ಲಿ ಧರ್ಮಸ್ಥಳ ಹೆಸರೆತ್ತಿದ ಕಾರಣಕ್ಕಾಗಿ ಮಂಜುನಾಥನ ದರ್ಶನಕ್ಕೆ ಆಗಮಿಸಿದ್ರಾ?
08:08 AM (IST) Jun 26
ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಎರಡನೇ ಪತ್ನಿ ಕೂಡ ಪರಿಹಾರಕ್ಕೆ ಅರ್ಹಳು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೃತನ ಆದಾಯವನ್ನು ಅವಲಂಬಿಸಿದ ಎಲ್ಲರೂ ಪರಿಹಾರ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಎಂದು ಹೇಳಿದೆ. ಏನಿದು ಪ್ರಕರಣ? ತಿಳಿಯಿರಿ.
07:42 AM (IST) Jun 26
ನಮ್ಮ ಮೆಟ್ರೋ ಪದೇ ಪದೆ ಕೈಕೊಡುತ್ತಿದೆ. ದೇಶದಲ್ಲಿ 2ನೇ ಅತೀ ದೊಡ್ಡ ಮೆಟ್ರೋ ಜಾಲ ಹೊಂದಿರು ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ಯಾವಾಗ ಮೆಟ್ರೋ ಓಡುತ್ತೆ, ಯಾವಾಗ ನಿಲ್ಲುತ್ತೆ ಅನ್ನೋದೆ ಗೊತ್ತಾಗದಂತಾಗಿದೆ.
07:40 AM (IST) Jun 26
ಒಕ್ಕಲಿಗರ ಸಂಘದ ನಿರ್ದೇಶಕ ಕೋನಪ್ಪ ರೆಡ್ಡಿ, ಉಮಾಪತಿ ಶ್ರೀನಿವಾಸ ಗೌಡ ಅವರ ಅಕ್ರಮದ ಆರೋಪಗಳಿಗೆ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ತಿರುಗೇಟು ನೀಡಿದ್ದಾರೆ. ಆರೋಪಗಳು ನಡೆದಾಗ ಅವರೇ ಅಧಿಕಾರದಲ್ಲಿದ್ರು , ಉಮಾಪತಿ ಅವರು 50 ಲಕ್ಷ ಕಿಕ್ಬ್ಯಾಕ್ ಪಡೆದಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.
07:08 AM (IST) Jun 26
ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿ ತೇಜು 10 ಕೆಜಿ ಪೈಕಿ 5 ಕೆಜಿ ಬೆಳ್ಳಿ ಮಾರಾಟ ಮಾಡಿದ್ದ. ಪೊಲೀಸರು ತೇಜು ಅರೆಸ್ಟ್ ಮಾಡಿ ಬಾಕಿ ಉಳಿದ 5 ಕೆಜಿ ಬೆಳ್ಳಿ ವಶಕ್ಕೆ ಪಡೆದಿದ್ದಾರೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.