LIVE NOW
Published : Jun 26, 2026, 07:08 AM ISTUpdated : Jun 26, 2026, 10:06 AM IST

Karnataka News Live: ಪವಿತ್ರ ಕ್ಷೇತ್ರದಲ್ಲಿ ಹೇಳುತ್ತಿದ್ದೇನೆ, ಡಿಕೆಶಿ ಜೊತೆ ಆತ್ಮೀಯತೆ ಆರೋಪಕ್ಕೆ ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ

ಸಾರಾಂಶ

ಬೆಂಗಳೂರಲ್ಲಿ ಅಂಗಡಿ ಗೋಡೆ ಕೊರೆದು 10 ಕೆಜಿ ಬೆಳ್ಳಿ ಕಳ್ಳತನ ಮಾಡಿದ್ದ ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ತಿಂಗಳು ಹಲಸೂರಿನ ಕಾರ್ ಸ್ಟ್ರೀಟ್ ನಲ್ಲಿ ಜ್ಯುವೆಲ್ಲರಿ ಅಂಗಡಿಗೆ ಕನ್ನ ಹಾಕಿದ್ದ ಆರೋಪಿ ತೇಜು, ಬೆಳ್ಳಿ ಕದ್ದು ಪರಾರಿಯಾಗಿದ್ದ. ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡು ಮೂಲಕ ತೇಜುವನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪದೇ ಪದೇ ಕೈ ಕೊಡ್ತಿರುವ ನಮ್ಮ‌ ಮೆಟ್ರೋ, ಧರ್ಮಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ, ಅಬಕಾರಿ ಹೆಚ್ಚುವರಿ ಆಯುಕ್ತ ವೈ ಡಿ ಮಂಜುನಾಥ ನಿವಾಸದ ಮೇಲೆ ಇ ಡಿ ದಾಳಿ ಪ್ರಕರಣ, ರಾಜ್ಯ ಸರ್ಕಾರದ ಆಡಳಿ, ರಾಜ್ಯ ರಾಜಕಾರಣ ಸೇರಿದಂತೆ ಇಂದಿನ ಕ್ಷಣ ಕ್ಷಣದ ಸುದ್ದಿ ಲೈವ್ ಅಪ್‌ಡೇಟ್ ಇಲ್ಲಿದೆ.

BY Vijayendra Rejects Allegations

10:06 AM (IST) Jun 26

ಪವಿತ್ರ ಕ್ಷೇತ್ರದಲ್ಲಿ ಹೇಳುತ್ತಿದ್ದೇನೆ, ಡಿಕೆಶಿ ಜೊತೆ ಆತ್ಮೀಯತೆ ಆರೋಪಕ್ಕೆ ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ

ಈ ಪವಿತ್ರ ಕ್ಷೇತ್ರದಲ್ಲಿ ನಿಂತು ಮಾತನಾಡುತ್ತಿದ್ದೇನೆ. ಅಡ್ಡಮತದಾನ ಬಳಿಕ ಡಿಕೆಶಿ ಜೊತೆ ಆತ್ಮೀಯತೆ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ವಿಜಯೇಂದ್ರ ಹೇಳಿದ್ದೇನು?

Read Full Story

09:39 AM (IST) Jun 26

ಸವಾರರ ಸುರಕ್ಷತೆ ಖಚಿತಪಡಿಸಲು ಕಾರಿನಿಂದ ಇಳಿದಿದ್ದ ದರ್ಶನ್ ಪುತ್ರ, ಅಪಘಾತ ಕೇಸ್‌ಗೆ ವಿಜಯಲಕ್ಷ್ಮಿ ಸ್ಪಷ್ಟನೆ

ದರ್ಶನ್ ಪುತ್ರ ವಿನೀಶ್ ಕಾರು ಚಲಾಯಿಸಿಲ್ಲ. ಬೈಕ್ ಸವಾರರ ತಪ್ಪಿನಿಂದ ಸಣ್ಣ ಅಪಘಾತವಾಗಿದೆ ಎಂದು ದರ್ಶನ್ ಪುತ್ರ ವಿನೀಶ್ ಕಾರು ಅಫಘಾತ ಪ್ರಕರಣ ಕುರಿತು ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ. ವಿಜಯಲಕ್ಷ್ಮಿ ಹೇಳಿದ್ದೇನು?

 

Read Full Story

08:55 AM (IST) Jun 26

ತುರ್ತು ಸೇವೆ 108 ಆ್ಯಂಬುಲೆನ್ಸ್, 104 ಆರೋಗ್ಯ ಸಹಾಯವಾಣಿ ಕಮಾಂಡ್ ಸೆಂಟರ್ ತಾತ್ಕಾಲಿಕ ಸ್ಥಗಿತ

ನಿನ್ನೆ ರಾತ್ರಿಯಿಂದ ತುರ್ತು ಸೇವೆಗಳ ಸಹಾಯವಾಣಿ ಸ್ಥಗಿತಗೊಂಡಿದೆ. ಆ್ಯಂಬುಲೆನ್ಸ್ (108), ಆರೋಗ್ಯ ಸಹಾಯವಾಣಿ (104) ಎರಡೂ ಸೇವೆಗಳು ವ್ಯತ್ಯಯವಾಗಿದೆ. ಆರೋಗ್ಯ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡಿದೆ.

Read Full Story

08:44 AM (IST) Jun 26

Bengaluru Airbound - ಬೆಂಗ್ಳೂರು ನೆರವಿಂದ ಆಂಧ್ರದಲ್ಲಿ ಡ್ರೋನ್‌ ಡೆಲಿವರಿ ನೆಟ್‌ವರ್ಕ್‌!

ಆ.ಪ್ರದೇಶ ಸರ್ಕಾರವು ಬೆಂಗಳೂರಿನ 'ಏರ್‌ಬೌಂಡ್‌' ಸ್ಟಾರ್ಟಪ್ ಜೊತೆಗೂಡಿ ವಿಶ್ವದ ಅತಿದೊಡ್ಡ ಡ್ರೋನ್ ಸರಕು ವಿತರಣಾ ಜಾಲ ಸ್ಥಾಪಿಸಲು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಈ ಮಹತ್ವಾಕಾಂಕ್ಷಿ ಯೋಜನೆಯಡಿ, ರಾಜ್ಯಾದ್ಯಂತ ದಿನಕ್ಕೆ ಕನಿಷ್ಠ 10,000 ಡ್ರೋನ್‌ಗಳ ಮೂಲಕ ಔಷಧಿ, ಅಗತ್ಯ ವಸ್ತುಗಳ ತಲುಪಿಸುವ ಗುರಿ.

Read Full Story

08:39 AM (IST) Jun 26

ಧರ್ಮಸ್ಥಳಕ್ಕೆ ವಿಜಯೇಂದ್ರ ಭೇಟಿ, ಹೆಸರೆತ್ತಿದ ಪ್ರಾಯಶ್ಚಿತ್ತಕ್ಕೆ ಮಂಜುನಾಥನ ದರ್ಶನ ಪಡೆದ್ರಾ ಬಿಜೆಪಿ ರಾಜ್ಯಾಧ್ಯಕ್ಷ?

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದಿದ್ದಾರೆ. ಈ ವೇಳೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆಣೆ ಪ್ರಮಾಣ ವಿಚಾರದಲ್ಲಿ ಧರ್ಮಸ್ಥಳ ಹೆಸರೆತ್ತಿದ ಕಾರಣಕ್ಕಾಗಿ ಮಂಜುನಾಥನ ದರ್ಶನಕ್ಕೆ ಆಗಮಿಸಿದ್ರಾ?

Read Full Story

08:08 AM (IST) Jun 26

ರಸ್ತೆ ಅಪಘಾತದಲ್ಲಿ ಮೃತನ 2ನೇ ಪತ್ನಿಗೂ ಸಮಾನ ಪರಿಹಾರ ಕೊಡಬೇಕು - ಹೈಕೋರ್ಟ್ ಮಹತ್ವದ ಆದೇಶ

ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಎರಡನೇ ಪತ್ನಿ ಕೂಡ ಪರಿಹಾರಕ್ಕೆ ಅರ್ಹಳು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೃತನ ಆದಾಯವನ್ನು ಅವಲಂಬಿಸಿದ ಎಲ್ಲರೂ ಪರಿಹಾರ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಎಂದು ಹೇಳಿದೆ. ಏನಿದು ಪ್ರಕರಣ? ತಿಳಿಯಿರಿ.

Read Full Story

07:42 AM (IST) Jun 26

ಪದೇ ಪದೇ ಕೈಕೊಡುತ್ತಿದೆ ನಮ್ಮ ಮೆಟ್ರೋ, ಮೂರು ವರ್ಷದಲ್ಲಿ 21 ಬಾರಿ ಎಡವಟ್ಟಿಗೆ ಬೇಸತ್ತ ಪ್ರಯಾಣಿಕರು

ನಮ್ಮ ಮೆಟ್ರೋ ಪದೇ ಪದೆ ಕೈಕೊಡುತ್ತಿದೆ. ದೇಶದಲ್ಲಿ 2ನೇ ಅತೀ ದೊಡ್ಡ ಮೆಟ್ರೋ ಜಾಲ ಹೊಂದಿರು ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ಯಾವಾಗ ಮೆಟ್ರೋ ಓಡುತ್ತೆ, ಯಾವಾಗ ನಿಲ್ಲುತ್ತೆ ಅನ್ನೋದೆ ಗೊತ್ತಾಗದಂತಾಗಿದೆ.

Read Full Story

07:40 AM (IST) Jun 26

Vokkaligara Sangha - ನೇಮಕಾತೀಲಿ ಭ್ರಷ್ಟಾಚಾರ ನಡೆದಿದೆ ಅಂತ ಆರೋಪ ಮಾಡಿದವರಿಂದಲೇ ಹಲವು ಅಕ್ರಮ - ಒಕ್ಕಲಿಗರ ಸಂಘ

ಒಕ್ಕಲಿಗರ ಸಂಘದ ನಿರ್ದೇಶಕ ಕೋನಪ್ಪ ರೆಡ್ಡಿ, ಉಮಾಪತಿ ಶ್ರೀನಿವಾಸ ಗೌಡ ಅವರ ಅಕ್ರಮದ ಆರೋಪಗಳಿಗೆ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ತಿರುಗೇಟು ನೀಡಿದ್ದಾರೆ. ಆರೋಪಗಳು ನಡೆದಾಗ ಅವರೇ ಅಧಿಕಾರದಲ್ಲಿದ್ರು , ಉಮಾಪತಿ ಅವರು 50 ಲಕ್ಷ ಕಿಕ್‌ಬ್ಯಾಕ್ ಪಡೆದಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.

Read Full Story

07:08 AM (IST) Jun 26

ಆರೋಪಿಯಿಂದ 5 ಕೆಜಿ ಬೆಳ್ಳಿ ವಶಕ್ಕೆ

ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿ ತೇಜು 10 ಕೆಜಿ ಪೈಕಿ 5 ಕೆಜಿ ಬೆಳ್ಳಿ ಮಾರಾಟ ಮಾಡಿದ್ದ. ಪೊಲೀಸರು ತೇಜು ಅರೆಸ್ಟ್ ಮಾಡಿ ಬಾಕಿ ಉಳಿದ 5 ಕೆಜಿ ಬೆಳ್ಳಿ ವಶಕ್ಕೆ ಪಡೆದಿದ್ದಾರೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


More Trending News