Published : Oct 24, 2025, 06:55 AM ISTUpdated : Oct 24, 2025, 10:39 PM IST

Karnataka News Live: ಬದ್ಧತೆ ಇದ್ದರೆ ಬನ್ನಿ... ನೀರಾವರಿ ಯೋಜನೆಗೆ ಒಟ್ಟಿಗೆ ಒತ್ತಡ ಹಾಕೋಣ - ಡಿ.ಕೆ.ಶಿವಕುಮಾರ್

ಸಾರಾಂಶ

ಬೆಂಗಳೂರು: ಧರ್ಮಸ್ಥಳ ಗ್ರಾಮ ಸುತ್ತಮುತ್ತ ಶವಗಳನ್ನು ಹೂತ ಆರೋಪ ಸಂಬಂಧ ತನಿಖೆ ನಡೆಸಲು ರಚಿಸಿದ್ದ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಶೀಘ್ರ ಚಾರ್ಜ್‌ಶೀಟ್‌ ಸಲ್ಲಿಸಲು ರಾಜ್ಯ ಸರ್ಕಾರ ಸೂಚಿಸಿದ್ದು, ವಾರದಲ್ಲಿ ಈ ಕುರಿತ ತನಿಖೆ ಪ್ರಕ್ರಿಯೆ ಪೂರ್ಣಗೊಳ್ಳುವ ಸುಳಿವು ಲಭಿಸಿದೆ. ಪ್ರಕರಣದ ಬಗ್ಗೆ ನಡೆಸಿರುವ ತನಿಖೆಯಲ್ಲಿ ಲಭ್ಯವಾಗಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸದ್ಯದಲ್ಲೇ ನ್ಯಾಯಾಲಯಕ್ಕೆ ಎಸ್‌ಐಟಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಿದೆ. ರಾಜ್ಯ ಸರ್ಕಾರ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ಚಾರ್ಜ್‌ಶೀಟ್‌ ಸಲ್ಲಿಸುವಂತೆ ಗೃಹ ಇಲಾಖೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

DK Shivakumar

10:39 PM (IST) Oct 24

ಬದ್ಧತೆ ಇದ್ದರೆ ಬನ್ನಿ... ನೀರಾವರಿ ಯೋಜನೆಗೆ ಒಟ್ಟಿಗೆ ಒತ್ತಡ ಹಾಕೋಣ - ಡಿ.ಕೆ.ಶಿವಕುಮಾರ್

ಬಿಜೆಪಿ ನಾಯಕರಿಗೆ ಕರ್ನಾಟಕ ರಾಜ್ಯದ ಬಗ್ಗೆ ಕಾಳಜಿ ಇದ್ದರೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರದ ಮೇಲೆ ಒಟ್ಟಿಗೆ ಒತ್ತಡ ಹಾಕೋಣ ಬನ್ನಿ ಎಂದು ಡಿ.ಕೆ.ಶಿವಕುಮಾರ್‌ ಸವಾಲೆಸೆದರು.

Read Full Story

09:56 PM (IST) Oct 24

ರಾಜ್ಯದಲ್ಲಿ ಅಹಿಂದ ನಾಯಕತ್ವವಿದೆ - ಸಚಿವ ಸತೀಶ್‌ ಜಾರಕಿಹೊಳಿ ಸ್ಪಷ್ಟನೆ

ರಾಜ್ಯದಲ್ಲಿ ಅಹಿಂದ ನಾಯಕತ್ವ ಇದ್ದೇ ಇದೆ. ಅದು ಇಲ್ಲದೇ ಸಂಘಟನೆ ಮಾಡಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಕಾಕತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Read Full Story

09:33 PM (IST) Oct 24

ಅಧಿಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದದ್ದು ಕಾಂಗ್ರೆಸ್ಸಿಗರು - ಎಚ್.ಡಿ.ಕುಮಾರಸ್ವಾಮಿ

ಅಧಿಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಇದೇ ಕಾಂಗ್ರೆಸ್ಸಿಗರು. ಅದಕ್ಕೂ ಮೊದಲು ನಾನು ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡಿದ್ದು ಅವರಿಗೆ ಗೊತ್ತಿರಲಿಲ್ಲವೇ? ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

Read Full Story

09:24 PM (IST) Oct 24

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ಗೆ ಮದುವೆಯಾ? ಇನ್‌ಸ್ಟಾ ಪೋಸ್ಟ್‌ನಿಂದ ಗೊಂದಲಕ್ಕೊಳಗಾದ ಫ್ಯಾನ್ಸ್!

ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್, ತಮ್ಮ ಮದುವೆಯನ್ನು ಖಚಿತಪಡಿಸುವಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಪೋಸ್ಟ್ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. ಮದುವೆ ಘೋಷಣೆ ಮಾಡ್ತಾರಾ?

Read Full Story

09:07 PM (IST) Oct 24

ಕಾಮಗಾರಿ ಹಿನ್ನಲೆಯಲ್ಲಿ ನ.2 ರಿಂದ ಬೆಂಗಳೂರು-ಮಂಗಳೂರು ಹಲವು ರೈಲು ಸಂಚಾರ ರದ್ದು

ಕಾಮಗಾರಿ ಹಿನ್ನಲೆಯಲ್ಲಿ ನ.2 ರಿಂದ ಬೆಂಗಳೂರು-ಮಂಗಳೂರು ಹಲವು ರೈಲು ಸಂಚಾರ ರದ್ದು ಮಾಡಲಾಗಿದೆ. ಸರಿಸುಮಾರು ಒಂದೂವರೆ ತಿಂಗಳು ದಿನಗಳ ಕಾಲ ಕಾಮಗಾರಿ ನಡೆಯಲಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ರೈಲು ಸೇವೆಗಳು ರದ್ದಾಗುತ್ತಿದೆ. ಯಾವ ರೈಲು ಸೇವೆ ರದ್ದಾಗಿದೆ?

Read Full Story

08:51 PM (IST) Oct 24

Karna Serial - ತ್ಯಾಗಮಯಿ ಕರ್ಣನ ಮೇಲೆ ಮತ್ತೊಂದು ಅಪವಾದ; ನೀಚನ ದುಷ್ಟತನಕ್ಕೆ ವೀಕ್ಷಕರ ಹಿಡಿಶಾಪ

ತೇಜಸ್ ಮತ್ತು ಆತನ ಪೋಷಕರನ್ನು ಅಪಹರಿಸಿ, ಅದಕ್ಕೆ ಕರ್ಣನೇ ಕಾರಣ ಎಂದು ನಂಬಿಸಲಾಗಿದೆ. ಇದರಿಂದ ಕರ್ಣನ ಮೇಲೆ ಮತ್ತೊಂದು ಅಪವಾದ ಬಂದಿದ್ದು, ನಿತ್ಯಾ ಮತ್ತೆ ತಪ್ಪು ತಿಳಿದುಕೊಳ್ಳುವ ಆತಂಕ ಎದುರಾಗಿದೆ. ಮತ್ತೊಂದೆಡೆ, ನಿತ್ಯಾ ಮೂರು ತಿಂಗಳ ನಂತರ ಕರ್ಣನ ಜೀವನದಿಂದ ದೂರ ಹೋಗಲು ನಿರ್ಧರಿಸಿದ್ದಾಳೆ.
Read Full Story

08:20 PM (IST) Oct 24

ಸದ್ಯ ಜೆಡಿಎಸ್‌ ರಾಜ್ಯಾಧ್ಯಕ್ಷರ ಬದಲು ಇಲ್ಲ - ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟನೆ

ಸದ್ಯಕ್ಕೆ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ. ಈ ವಿಷಯ ಚರ್ಚೆಗೆ ಬಂದಿಲ್ಲ. ಈಗ ನಾನೇ ಅಧ್ಯಕ್ಷನಾಗಿದ್ದೇನೆ ಎಂದು ಜೆಡಿಎಸ್‌ನ ಹಾಲಿ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

Read Full Story

08:10 PM (IST) Oct 24

ಬಿಹಾರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ - ಸಿ.ಟಿ. ರವಿ

ಬಿಹಾರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ಜನಾಭಿಪ್ರಾಯ ಎನ್‌ಡಿಎ ಪರವಾಗಿದೆ ಎಂದರು.

Read Full Story

08:05 PM (IST) Oct 24

ಮುಂದಿನ ಸಿಎಂ ಹೇಳಿಕೆ ಕೋಲಾಹಲ, ಪುತ್ರನಿಂದ ವಿವರಣೆ ಪಡೆದು ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ

ಮುಂದಿನ ಸಿಎಂ ಹೇಳಿಕೆ ಕೋಲಾಹಲ, ಪುತ್ರನಿಂದ ವಿವರಣೆ ಪಡೆದು ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ಸಿದ್ದರಾಮಯ್ಯ ನಿವೃತ್ತಿ ಬಳಿಕ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಬಹುದು ಅನ್ನೋ ಹೇಳಿಕೆ ಕುರಿತು ಇದೀಗ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

Read Full Story

07:43 PM (IST) Oct 24

Bigg Boss ವೇಳೆ ಸುದೀಪ್​ ಹಿಡಿದಿರೋ ಗ್ಲಾಸ್​ನಲ್ಲಿ ಇರೋ ಡ್ರಿಂಕ್ಸ್​ ಏನು? ಕಿಚ್ಚನಿಂದ ಕೊನೆಗೂ ಗುಟ್ಟು ರಿವೀಲ್​

ಬಿಗ್ ಬಾಸ್ ಪ್ರೊಮೋದಲ್ಲಿ ಕಿಚ್ಚ ಸುದೀಪ್ ಕೈಯಲ್ಲಿದ್ದ ಗ್ಲಾಸ್‌ನ ಪಾನೀಯದ ಬಗ್ಗೆ ಭಾರೀ ಚರ್ಚೆಯಾಗಿತ್ತು. ಇದೀಗ ವೈರಲ್ ವಿಡಿಯೋವೊಂದರಲ್ಲಿ ಸ್ವತಃ ಸುದೀಪ್ ಅವರೇ ಆ ಗ್ಲಾಸ್​ ರಹಸ್ಯವನ್ನು ತೆರೆದಿಟ್ಟಿದ್ದಾರೆ. ಅವರು ಹೇಳಿದ್ದೇನು? 

Read Full Story

07:40 PM (IST) Oct 24

ಸ್ಟಾರ್ ಹೀರೋಗೆ ಡ್ಯಾಡಿ ಅಂದ ನಟಿ.. ಕೊನೆಗೆ ಅವರ ಜೊತೆಯೇ ಹೀರೋಯಿನ್ ಆಗಿ ರೊಮ್ಯಾನ್ಸ್ ಮಾಡಿದ್ರು!

ಒಬ್ಬ ಖ್ಯಾತ ನಟಿ ತಾನು ಅಂಕಲ್, ಡ್ಯಾಡಿ ಅಂತ ಕರೆಯುತ್ತಿದ್ದ ಹೀರೋಗಳ ಜೊತೆಯಲ್ಲೇ ನಾಯಕಿಯಾಗಿ ನಟಿಸಿ ರೊಮ್ಯಾನ್ಸ್ ಮಾಡಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು? ಆ ಹೀರೋಗಳು ಯಾರು? ಅನ್ನೋದನ್ನು ಈ ಲೇಖನದಲ್ಲಿ ತಿಳಿಯಿರಿ. 

Read Full Story

07:35 PM (IST) Oct 24

ಇನ್‌ಸ್ಟಾಗ್ರಾಂ ಮೂಲಕ ಪರಿಚಯ,ಹಾವೇರಿಯಲ್ಲಿ ನಾಲ್ವರಿಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ

ಇನ್‌ಸ್ಟಾಗ್ರಾಂ ಮೂಲಕ ಪರಿಚಯ,ಹಾವೇರಿಯಲ್ಲಿ ನಾಲ್ವರಿಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತೆ ಗರ್ಭಿಣಿಯಾಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಪೋಕ್ಸೋ ಕೇಸ್ ದಾಖಲಾಗಿದೆ.

Read Full Story

07:25 PM (IST) Oct 24

Karna Serial ರೋಚಕ ಟ್ವಿಸ್ಟ್​ - ಮದುಮಗ ತೇಜಸ್​ ಕಿಡ್ನಾಪ್​- 3 ತಿಂಗಳ ಗಡುವು ಕೇಳಿದ ನಿತ್ಯಾ!

ಅಕ್ಕನಿಗಾಗಿ ತನ್ನ ಪ್ರೀತಿಯನ್ನೇ ತ್ಯಾಗ ಮಾಡಿದ್ದಾಳೆ ನಿಧಿ. ಇದೀಗ ಕರ್ಣನ ಪತ್ನಿಯಾಗಿರುವ ನಿತ್ಯಾ, ಕಾಣೆಯಾದ ತೇಜಸ್‌ನನ್ನು ಹುಡುಕಲು ಮೂರು ತಿಂಗಳ ಕಾಲಾವಕಾಶ ಕೇಳಿದ್ದು, ಅವಳ ಗರ್ಭದ ರಹಸ್ಯವು ಕಥೆಗೆ ಹೊಸ ತಿರುವು ನೀಡಿದೆ.
Read Full Story

07:04 PM (IST) Oct 24

ಸ್ಟಾರ್ ಹೀರೋಗಳ ಲುಕ್ ಬಗ್ಗೆ ಖ್ಯಾತ ಕಾಸ್ಟ್ಯೂಮ್ ಡಿಸೈನರ್ ನೀರಜಾ ಕೋನಾ ಹೇಳಿದ್ದಿಷ್ಟು..

ಖ್ಯಾತ ಕಾಸ್ಟ್ಯೂಮ್ ಡಿಸೈನರ್ ಮತ್ತು ನಿರ್ದೇಶಕಿ ನೀರಜಾ ಕೋನಾ, ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸ್ಟಾರ್ ಹೀರೋಗಳ ಲುಕ್ ಬಗ್ಗೆ ಹಲವು ಪ್ರಮುಖ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆ ವಿವರಗಳೇನು ಎಂದು ಈಗ ತಿಳಿಯೋಣ.

 

Read Full Story

06:48 PM (IST) Oct 24

ದಿವ್ಯಾ ಸುರೇಶ್ ಹಿಟ್ ಅಂಡ್ ರನ್ - ಇನ್‌ಸ್ಟಾಗ್ರಾಮ್‌ನಲ್ಲಿ ಉಡಾಫೆ ಮಾತಾಡಿದ ನಟಿಗೆ ಶಿಕ್ಷೆ ನೀಡಲು ಆಗ್ರಹ!

ನಟಿ ದಿವ್ಯಾ ಸುರೇಶ್ ಹಿಟ್ ಅಂಡ್ ರನ್ ಪ್ರಕರಣದಲ್ಲಿ, ಗಾಯಾಳು ಅನಿತಾ ಅವರು ಘಟನೆಯನ್ನು ವಿವರಿಸಿದ್ದಾರೆ. ಅಪಘಾತದ ನಂತರ ದಿವ್ಯಾ ಸ್ಥಳದಿಂದ ಪರಾರಿಯಾಗಿದ್ದು, ಈ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಕಾನೂನಿನ ಬಗ್ಗೆ ಉಡಾಫೆಯ ಪೋಸ್ಟ್ ಮಾಡಿದ್ದಾರೆ.
Read Full Story

06:40 PM (IST) Oct 24

40 ಕೋಟಿ ಸಂಭಾವನೆ, 1000 ಕೋಟಿ ಆಸ್ತಿ.. ಚಿತ್ರರಂಗ ನನ್ನನ್ನು ಹೊರಹಾಕಿದೆ ಎಂದ ನಟಿ ಯಾರು?

ಆಕೆ ಒಬ್ಬ ಸ್ಟಾರ್ ನಟಿ, ಹೀರೋಗಳಿಗಿಂತ ಹೆಚ್ಚು ಸಂಭಾವನೆ ಪಡೆದ ನಟಿ, ಸುಮಾರು 1000 ಕೋಟಿ ಆಸ್ತಿ ಹೊಂದಿರುವ ಸುಂದರಿ. ಚಿತ್ರರಂಗ ತನ್ನನ್ನು ಹೊರಹಾಕಿದೆ ಎಂದು ಆರೋಪಿಸಿದ ತಾರೆ.. ಸದ್ಯ ಪ್ಯಾನ್ ವರ್ಲ್ಡ್ ಸಿನಿಮಾ ಮಾಡುತ್ತಿರುವ ಈ ನಟಿ ಯಾರೆಂದು ಗೊತ್ತಾ?

Read Full Story

06:26 PM (IST) Oct 24

ರಿಷಬ್‌ರದ್ದು ಒನ್ ಮ್ಯಾನ್ ಶೋ... ಕಾಂತಾರ ಚಾಪ್ಟರ್ 1 ಬಗ್ಗೆ ಅಲ್ಲು ಅರ್ಜುನ್ ಸೆನ್ಸೇಷನಲ್ ವಿಮರ್ಶೆ

ಕಾಂತಾರ ಚಾಪ್ಟರ್ 1 ಸಿನಿಮಾ ದೇಶದಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಈ ಚಿತ್ರದ ಬಗ್ಗೆ ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಡವಾಗಿ ಪ್ರತಿಕ್ರಿಯಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Read Full Story

05:52 PM (IST) Oct 24

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಎನ್ನುವುದೇ ಇಲ್ಲ - ಆರ್.ಅಶೋಕ್‌

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಾನೂನು ಸುವ್ಯವಸ್ಥೆ ಇಲ್ಲವೇ ಇಲ್ಲ. ಗೃಹ ಸಚಿವ ಪರಮೇಶ್ವರ ಅವರಿಗೆ ಏನೇ ಕೇಳಿದರೂ ಗೊತ್ತಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್‌ ಹೇಳಿದರು.

Read Full Story

05:41 PM (IST) Oct 24

ಮೆಣಸಿನ ಪುಡಿಯಲ್ಲಿ ಕಲಬೆರಕೆ ಆಗಿದ್ಯಾ? ಮನೆಯಲ್ಲೇ ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಸುಲಭದ ವಿಧಾನ

ಇಂದಿನ ಕಲಬೆರಕೆ ಯುಗದಲ್ಲಿ, ಹಣದ ದುರಾಸೆಗಾಗಿ ಮೆಣಸಿನ ಪುಡಿಯಲ್ಲಿಯೂ ಅಪಾಯಕಾರಿ ವಸ್ತುಗಳನ್ನು ಬೆರೆಸಲಾಗುತ್ತಿದೆ, ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಲೇಖನದಲ್ಲಿ, ನೀರಿನ ಸಹಾಯದಿಂದ, ಕೈಗಳಿಂದ ಉಜ್ಜುವ ಮೂಲಕ  ಸುಲಭವಾಗಿ ಪತ್ತೆ ಹಚ್ಚುವುದು ಹೇಗೆಂದು ವಿವರಿಸಲಾಗಿದೆ.

Read Full Story

05:27 PM (IST) Oct 24

ಮಾಸ್ ಸಿನಿಮಾ ನಿರ್ದೇಶನಕ್ಕಿಳಿದ ಸತ್ಯಪ್ರಕಾಶ್‌ - ಡಾ. ರಾಜ್‌ ಮೊಮ್ಮಗ ಧೀರೇನ್‌ ಹೀರೋ!

ಸಿನಿಮಾ ಬಗ್ಗೆ ವಿವರ ನೀಡಿದ ನಿರ್ದೇಶಕ ಸತ್ಯಪ್ರಕಾಶ್‌, ಹೊಸ ಸಿನಿಮಾ ಈಗ ಪ್ರಿ ಪ್ರೊಡಕ್ಷನ್‌ ಹಂತದಲ್ಲಿದೆ. ಸದ್ಯ ಧೀರೇನ್‌ ಅವರು ಪಬ್ಬಾರ್‌ ಸಿನಿಮಾ ಶೂಟಿಂಗ್‌ನಲ್ಲಿದ್ದಾರೆ. ಆ ಕೆಲಸದ ಬಳಿಕ ಈ ಸಿನಿಮಾ ಸೆಟ್ಟೇರಲಿದೆ ಎಂದರು.

Read Full Story

05:13 PM (IST) Oct 24

BBK 12 - ಕಿಚ್ಚನ ಪಂಚಾಯಿತಿಯಲ್ಲಿ ಗರ್ಮಾಗರಂ ವಿಷ್ಯ; ಸುಧಿಗೆ ಸೆಡೆ ಅರ್ಥ, ಅಶ್ವಿನಿಗೌಡ ಇಂಗ್ಲೀಷ್ ವಿಟಿ ತೋರಿಸಿ!

ಬಿಗ್ ಬಾಸ್ ಕನ್ನಡ ಸೀಸನ್ 12ರ ಕಿಚ್ಚನ ಪಂಚಾಯಿತಿಯಲ್ಲಿ, ಅಶ್ವಿನಿ ಗೌಡ ಮತ್ತು ಕಾಕ್ರೋಚ್ ಸುಧಿ ವಿರುದ್ಧ ಪ್ರೇಕ್ಷಕರ ಆಕ್ರೋಶ ಭುಗಿಲೆದ್ದಿದೆ. ಅವರ ಇಂಗ್ಲಿಷ್ ಬಳಕೆ, 'ಎಸ್ ಕೆಟಗರಿ' ಮತ್ತು 'ಸೆಡೆ' ಪದಗಳ ಪ್ರಯೋಗದ ಬಗ್ಗೆ ಕಿಚ್ಚ ಸುದೀಪ್ ಪ್ರಶ್ನಿಸಬೇಕೆಂದು ಜನತೆ ಆಗ್ರಹಿಸುತ್ತಿದ್ದಾರೆ.

Read Full Story

04:58 PM (IST) Oct 24

ಸೀರೆಗೂ ಬ್ಲೌಸ್‌ಗೂ ತಾಳಮೇಳ ಬೇಡ - ಸೋನಂ–ಶ್ರದ್ಧಾ ಹೊಸ ಫ್ಯೂಜನ್ ಸ್ಟೈಲ್‌ನಿಂದ ಫ್ಯಾಷನ್ ಲವರ್ಸ್ ಫಿದಾ!

ಸೀರೆಗೂ ಬ್ಲೌಸ್‌ಗೂ ಸಂಬಂಧ ಕಲ್ಪಿಸಬೇಡಿ ಅನ್ನುತ್ತಲೇ ಫ್ಯೂಜನ್‌ ಸ್ಟೈಲ್‌ನ ಮೊರೆ ಹೋಗಿದ್ದಾರೆ. ಬಿಡಿಬಿಡಿಯಾಗಿ ನೋಡಿದರೆ ಈ ಸೀರೆಗೂ, ಬ್ಲೌಸ್‌ಗೂ ತಾಳಮೇಳ ಸರಿಹೋಗುತ್ತಿಲ್ಲವಲ್ಲ ಅನಿಸುತ್ತೆ.

Read Full Story

04:36 PM (IST) Oct 24

ರಕ್ಷಿತಾ ಶೆಟ್ಟಿಗೆ ಎಸ್ ಕೆಟಗರಿ ಪದ ಬಳಸಿದ್ದ ಬಿಗ್ ಬಾಸ್ ಅಶ್ವಿನಿ ಜೈಲುಪಾಲು; ಎಲ್ಲಿದ್ರೂ ಹುಲಿನೇ ಎಂದ ಗೌಡ್ತಿ!

ಬಿಗ್ ಬಾಸ್ ಸೀಸನ್ 12ರಲ್ಲಿ ನಟಿ ಅಶ್ವಿನಿ ಗೌಡ ಅವರು ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರಿಗೆ ಇವಳು ‘ಎಸ್ ಕೆಟಗರಿ’ಗೆ ಸೇರಿದವಳು ಎಂದು ಹೇಳಿದ್ದರು. ಈ ಆಕ್ಷೇಪಾರ್ಹ ಪದಬಳಕೆ ವಿರುದ್ಧ ಹೈಕೋರ್ಟ್ ವಕೀಲರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಅಶ್ವಿನಿ ಗೌಡ ಜೈಲು ಸೇರಿದ್ದಾರೆ.

Read Full Story

03:55 PM (IST) Oct 24

Bhagyalakshmi - ಶ್ರೇಷ್ಠಾ ನೀಚತನ ಬಯಲಾಯ್ತು! ಭಾಗ್ಯ-ಆದಿ ಒಂದಾಗೋ ಹೊತ್ತಲ್ಲೇ ತಾಂಡವ್​ ಬಾಳಲ್ಲಿ ಬಿರುಗಾಳಿ!

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ, ಶ್ರೇಷ್ಠಾಳ ಕುತಂತ್ರವನ್ನು ಮಗಳು ತನ್ವಿ ತನ್ನ ತಂದೆ ತಾಂಡವ್ ಎದುರು ಬಯಲು ಮಾಡಿದ್ದಾಳೆ. ಇನ್ನೊಂದೆಡೆ, ಭಾಗ್ಯ ಮತ್ತು ಆಕೆಯ ಗಂಡನನ್ನು ಒಂದು ಮಾಡಲು ಹೊರಟ ಆದಿಗೆ ಸತ್ಯ ತಿಳಿದಿಲ್ಲ, ಆದರೆ ಕುಸುಮಾ ಆದಿ ಮತ್ತು ಭಾಗ್ಯಳನ್ನು ಒಂದು ಮಾಡಲು ಯೋಜನೆ ರೂಪಿಸುತ್ತಿದ್ದಾಳೆ.
Read Full Story

03:31 PM (IST) Oct 24

ದಲಿತರನ್ನ ಹಾಳುಮಾಡಿದ್ದೇ ಖರ್ಗೆ ಕುಟುಂಬ - ಚಲವಾದಿ ನಾರಾಯಣಸ್ವಾಮಿ ಕಿಡಿ

ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ದಲಿತ ನಾಯಕರನ್ನು ಬೆಳೆಯಲು ಬಿಡದ ಖರ್ಗೆ ಕುಟುಂಬದ ವಿರುದ್ಧವೂ ಅವರು ಗಂಭೀರ ಆರೋಪ ಮಾಡಿದ್ದಾರೆ.

Read Full Story

03:31 PM (IST) Oct 24

ರಘು ದೀಕ್ಷಿತ್ ಬಾಳಲ್ಲಿ ಹೊಸ ರಾಗ - ಕೊಳಲು ವಾದಕಿ ವಾರಿಜಶ್ರೀ ವೇಣುಗೋಪಾಲ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ಗಾಯಕ!

ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ಎರಡನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಗ್ರ್ಯಾಮಿ ನಾಮನಿರ್ದೇಶಿತ ಕೊಳಲು ವಾದಕಿ ಮತ್ತು ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಅವರನ್ನು ವಿವಾಹವಾಗಿದ್ದು, ಇವರಿಬ್ಬರ ಸ್ನೇಹವು ಪ್ರೀತಿಗೆ ತಿರುಗಿ ದಾಂಪತ್ಯದಲ್ಲಿ ಒಂದಾಗಿದೆ.
Read Full Story

03:02 PM (IST) Oct 24

ರಾಶಿಕಾಗಾಗಿ ಬಿಗ್ ಬಾಸ್ ಶೋಗೆ ಬಂದ್ರಂತೆ ಸೂರಜ್, ನಿಜವಾಗ್ಲೂ ಇಬ್ಬರ ಮಧ್ಯೆ ಶುರುವಾಗಿದ್ಯಾ ಕುಚ್ ಕುಚ್

Suraj Singh Rashika : ಬಿಗ್ ಬಾಸ್ ಮನೆ ಒಂದ್ಕಡೆ ಗಲಾಟೆ, ಜಗಳಗಳ ತಾಣವಾದ್ರೆ ಇನ್ನೊಂದು ಕಡೆ ಪ್ರೇಮಲೋಕ ಸೃಷ್ಟಿಸಿದೆ. ಇಷ್ಟು ದಿನ ಬರೀ ಗಿಲ್ಲಿ – ಕಾವ್ಯ ಮಾತಿತ್ತು ಈಗ ರಾಶಿಕಾ – ಸೂರಜ್ ಮಿಂಚುತ್ತಿದ್ದಾರೆ.

Read Full Story

02:40 PM (IST) Oct 24

'ಯಾರೂ ಅನಿವಾರ್ಯರಲ್ಲ..' ಜಾರಕಿಹೊಳಿ ಪರ ಯತೀಂದ್ರ ಹೇಳಿಕೆಗೆ ಸಚಿವ ಮಹದೇವಪ್ಪ ಗರಂ

HC Mahadevappa statement on leadership:ಯತೀಂದ್ರ ಸಿದ್ದರಾಮಯ್ಯರವರ ಹೇಳಿಕೆಗೆ ಗರಂ ಆದ ಸಚಿವ ಎಚ್.ಸಿ. ಮಹದೇವಪ್ಪ, 'ವ್ಯವಸ್ಥೆಯಲ್ಲಿ ಯಾರೂ ಅನಿವಾರ್ಯರಲ್ಲ' ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ನಾಯಕತ್ವದ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

02:32 PM (IST) Oct 24

Amruthadhaare - ಗಂಡ- ಹೆಂಡ್ತಿ ಮನಸ್ಸು ಸೇರಾಯ್ತು - ಅಕ್ಕ-ತಮ್ಮ ಒಂದಾಗೋ ಹೊತ್ತೂ ಬಂದಾಗೋಯ್ತು!

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾ ಮನಸ್ಸುಗಳು ಒಂದಾಗಿದ್ದು, ಅವರ ಮುದ್ದಾದ ಜಗಳ ಮುಂದುವರೆದಿದೆ. ಇನ್ನೊಂದೆಡೆ, ಆಕಾಶ್ ಮತ್ತು ಬಾಲಕಿಯ ನಡುವೆ ಅಕ್ಕ-ತಮ್ಮನ ಬಾಂಧವ್ಯ ಬೆಳೆಯುತ್ತಿದ್ದು, ಜೈದೇವ್ ಮತ್ತು ಶಕುನಿ ಮಾಮ ಆಸ್ತಿಗಾಗಿ ಹೊಸ ಸಂಚು ರೂಪಿಸುತ್ತಿದ್ದಾರೆ.
Read Full Story

02:12 PM (IST) Oct 24

ಇಸ್ಕಾನ್‌ನಲ್ಲಿ ಗೋವರ್ಧನ ಪೂಜೆ - ದೀಪಾವಳಿ ಪ್ರಯುಕ್ತ ನಡೆದ ವಿಶೇಷ ಕಾರ್ಯಕ್ರಮ

ಬೆಂಗಳೂರಿನ ಇಸ್ಕಾನ್‌ನಲ್ಲಿ, ಶ್ರೀಕೃಷ್ಣನ ಗೋವರ್ಧನ ಲೀಲೆಯ ಸ್ಮರಣಾರ್ಥವಾಗಿ ಗೋವರ್ಧನ ಪೂಜೆಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಈ ಪಾವನ ಪರ್ವದಂದು, ಗೋವರ್ಧನ ಗಿರಿಯ ಪ್ರತಿಕೃತಿಯನ್ನು ನಿರ್ಮಿಸಿ, ಅದರ ಸುತ್ತ ವಿವಿಧ ಖಾದ್ಯಗಳ 'ಅನ್ನಕೂಟ'ವನ್ನು ಭಗವಂತನಿಗೆ ಅರ್ಪಿಸಲಾಯಿತು.

Read Full Story

01:44 PM (IST) Oct 24

ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಹೊಳೆಯಲ್ಲ ಈ ಪ್ರದೀಪ್ ಈಶ್ವರ್, ಕರ್ನಾಟಕದ ಏಕೈಕ ಕಾಮಿಡಿ ಪೀಸ್ - ಪ್ರತಾಪ ಸಿಂಹ

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವೈಯಕ್ತಿಕ ಟೀಕೆ ಹಾಗೂ ಅವಾಚ್ಯ ಪದಗಳನ್ನು ಬಳಸಿದ ಸಿಂಹ, ತಮ್ಮ ತಾಯಿಯ ಬಗ್ಗೆ ಅವಹೇಳನ ಮಾಡಿದ್ದಕ್ಕೆ ಈ ರೀತಿ ಉತ್ತರಿಸಬೇಕಾಯಿತು ಎಂದು ಹೇಳಿದ್ದಾರೆ.

Read Full Story

01:36 PM (IST) Oct 24

Bigg Boss ಮನೆಯಿಂದ ಸೀದಾ ಪೊಲೀಸ್​ ಸ್ಟೇಷನ್​ಗೆ ಅಶ್ವಿನಿ ಗೌಡ? ಮರುಕಳಿಸತ್ತಾ 10ನೇ ಸೀಸನ್​?

ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ದೊಡ್ಮನೆಯಿಂದ ಸೀದಾ ಪೊಲೀಸ್​ ಠಾಣೆಗೆ ಹೋಗಬೇಕಾಗಿ ಬರಬಹುದು.   ಮರುಕಳಿಸತ್ತಾ  ಬಿಗ್​ಬಾಸ್​ ​10ನೇ ಸೀಸನ್​? 

Read Full Story

01:32 PM (IST) Oct 24

ಮತಗಳ್ಳತನದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ - ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ವಿರುದ್ಧ ಗಂಭೀರ ಮತಗಳ್ಳತನದ ಆರೋಪ ಮಾಡಿದ್ದಾರೆ. ಆಳಂದ ಕ್ಷೇತ್ರದ ಪ್ರಕರಣ ಉಲ್ಲೇಖಿಸಿ, ಎಸ್‌ಐಟಿ ತನಿಖೆ ಮುಗಿದ ನಂತರ ದಾಖಲೆ ಸಮೇತ ಎಲ್ಲವನ್ನೂ ಜನರ ಮುಂದಿಡುವುದಾಗಿ ಹೇಳಿದ್ದಾರೆ. ಚುನಾವಣೆ ಆಯೋಗವು ಒಂದು ಪಕ್ಷದ ಕಪಿಮುಷ್ಠಿಯಲ್ಲಿದೆ ಎಂದು ಅವರು ಆರೋಪಿಸಿದ್ದಾರೆ.

Read Full Story

01:24 PM (IST) Oct 24

ಕೆ.ಎಸ್.ಡಿ.ಎಲ್ ಸಂಸ್ಥೆಯಿಂದ ಸರ್ಕಾರಕ್ಕೆ ₹135 ಕೋಟಿ ಡಿವಿಡೆಂಡ್ ಹಸ್ತಾಂತರ; ಮೈಸೂರು ಸ್ಯಾಂಡಲ್ ಸೋಪ್ ಭರ್ಜರಿ ಸೇಲ್

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (ಕೆಎಸ್ಡಿಎಲ್) 2024-25ನೇ ಸಾಲಿನ ಲಾಭಾಂಶವಾಗಿ 135 ಕೋಟಿ ರೂಪಾಯಿಗಳನ್ನು ಸರಕಾರಕ್ಕೆ ಹಸ್ತಾಂತರಿಸಿದೆ. ಕಳೆದ ಹಣಕಾಸು ವರ್ಷದಲ್ಲಿ 1,700 ಕೋಟಿ ರೂ. ವಹಿವಾಟು ನಡೆಸಿ 451 ಕೋಟಿ ರೂ. ಲಾಭ ಗಳಿಸಿದ್ದು, ಇದು ಸಂಸ್ಥೆಯ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆಯಾಗಿದೆ.

Read Full Story

01:22 PM (IST) Oct 24

ಶಿರಾಡಿ ಘಾಟ್ - 40 ಅಡಿ ಪ್ರಪಾತದ ಹೊಳೆಗೆ ಬಿತ್ತು ನಾಲ್ವರು ಪ್ರಯಾಣಿಸುತ್ತಿದ್ದ ಕಾರ್

ಸಕಲೇಶಪುರದ ಶಿರಾಡಿ ಘಾಟ್‌ನಲ್ಲಿ, ಚನ್ನಗಿರಿಯ ಕುಟುಂಬವೊಂದು ಪ್ರಯಾಣಿಸುತ್ತಿದ್ದ ಕಾರು 40 ಅಡಿ ಆಳದ ಹೊಳೆಗೆ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದ ಈ ಘಟನೆಯಲ್ಲಿ, ಕಾರಿನಲ್ಲಿದ್ದ ನಾಲ್ವರು ಸದಸ್ಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read Full Story

01:11 PM (IST) Oct 24

ಖರ್ಗೆ ಪಿಯುಸಿ ಫೇಲಾದ ಮಗನಿಗೆ ಐಟಿ-ಬಿಟಿ ಖಾತೆ ಕೊಡಿಸಿ ಬೆಂಗಳೂರಿಗೆ ಕೆಟ್ಟ ಹೆಸರು ತಂದ್ರು; ಪ್ರತಾಪ್ ಸಿಂಹ!

ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಶೈಕ್ಷಣಿಕ ಅರ್ಹತೆ ಮತ್ತು ರಾಜಕೀಯ ಪ್ರಭಾವವನ್ನು ಪ್ರಶ್ನಿಸಿದ್ದಾರೆ. ಪಿಯುಸಿ ಫೇಲಾದ ಮಗನಿಗೆ ಪ್ರಮುಖ ಖಾತೆ ನೀಡಿ ಬೆಂಗಳೂರಿಗೆ ಕೆಟ್ಟ ಹೆಸರು ತರಲಾಗುತ್ತಿದೆ ಎಂದು ಆರೋಪಿಸಿದರು.

Read Full Story

12:58 PM (IST) Oct 24

ಅವಳಿಂದ ದೂರ ಇಲ್ಲದಿದ್ರೆ ನಿಮ್​ ಮಗ ಉದ್ಧಾರ ಆಗಲ್ಲಮ್ಮಾ - Bigg Boss ಸೂರಜ್​ ಸಿಂಗ್​ ತಾಯಿಗೆ ಫ್ಯಾನ್ಸ್​ ಮನವಿ

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಸೂರಜ್ ಸಿಂಗ್ ಅವರಿಗೆ ಅವರ ತಾಯಿ ಬೆಂಬಲ ಕೋರಿದ್ದಾರೆ. ಆದರೆ, ಸಹ ಸ್ಪರ್ಧಿ   ಜೊತೆಗಿನ ಸೂರಜ್ ಅವರ ಬಾಂಧವ್ಯವನ್ನು ನೋಡಿದ ವೀಕ್ಷಕರು, 'ಅವಳಿಂದ ನಿಮ್ಮ ಮಗನನ್ನು ದೂರವಿರಿಸಿ' ಎಂದು ಸೂರಜ್ ತಾಯಿಗೆ ಸಲಹೆ ನೀಡುತ್ತಿದ್ದಾರೆ.

Read Full Story

12:42 PM (IST) Oct 24

ರೇಣುಕಾಸ್ವಾಮಿ ಕೇಸ್ - ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ವಿಚಾರಣೆ ವಿಳಂಬಕ್ಕೆ ಎಸ್‌ಪಿಪಿ ಕೆಂಡಾಮಂಡಲ!

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ಆರೋಪಿಗಳು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಪಿ ಪ್ರದೂಷ್‌ಗೆ ತಂದೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ನ್ಯಾಯಾಲಯವು ಅನುಮತಿ ನೀಡಿದೆ.

Read Full Story

12:41 PM (IST) Oct 24

ದಕ್ಷಿಣ ಭಾರತ ನಗರಾಭಿವೃದ್ಧಿ ಸಚಿವರ ಸಮ್ಮೇಳನ ಅ. 30ಕ್ಕೆ - ಡಿಸಿಎಂ ಡಿಕೆ ಶಿವಕುಮಾರ

ಬೆಂಗಳೂರಿನಲ್ಲಿ ಅಕ್ಟೋಬರ್ 30 ರಂದು ದಕ್ಷಿಣ ಭಾರತದ ನಗರಾಭಿವೃದ್ಧಿ ಸಚಿವರ ಸಮ್ಮೇಳನ ನಡೆಯಲಿದ್ದು, ಕೇಂದ್ರ ಸಚಿವ ಮನೋಹರ ಲಾಲ್ ಖಟ್ಟರ್ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಅನುದಾನದ ಬೇಡಿಕೆ ಹಾಗೂ ಜಿಬಿಎ ವ್ಯಾಪ್ತಿಗೆ ಹೊಸ ಪ್ರದೇಶಗಳನ್ನು ಸೇರಿಸುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಚರ್ಚಿಸಲಿದ್ದಾರೆ.

Read Full Story

12:24 PM (IST) Oct 24

Actress Jyothi Rai - ಕನ್ನಡಕ್ಕೆ ಮರಳಿದ ನಟಿ ಜ್ಯೋತಿ ರೈ; ಚಿತ್ರದ ಫಸ್ಟ್ ಲುಕ್ ಔಟ್

ಕಿರುತೆರೆಯ ಜನಪ್ರಿಯ ನಟಿ ಜ್ಯೋತಿ ರೈ, 'ಹಲ್ಕಾ ಡಾನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಪ್ರಮೋದ್ ನಾಯಕರಾಗಿರುವ ಈ ಸಿನಿಮಾದಲ್ಲಿ ಜ್ಯೋತಿ ರೈ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಇದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.
Read Full Story

More Trending News