- Home
- Entertainment
- TV Talk
- Amruthadhaare Serial: ಗಂಡ- ಹೆಂಡ್ತಿ ಮನಸ್ಸು ಸೇರಾಯ್ತು: ಅಕ್ಕ-ತಮ್ಮ ಒಂದಾಗೋ ಹೊತ್ತೂ ಬಂದಾಗೋಯ್ತು!
Amruthadhaare Serial: ಗಂಡ- ಹೆಂಡ್ತಿ ಮನಸ್ಸು ಸೇರಾಯ್ತು: ಅಕ್ಕ-ತಮ್ಮ ಒಂದಾಗೋ ಹೊತ್ತೂ ಬಂದಾಗೋಯ್ತು!
ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾ ಮನಸ್ಸುಗಳು ಒಂದಾಗಿದ್ದು, ಅವರ ಮುದ್ದಾದ ಜಗಳ ಮುಂದುವರೆದಿದೆ. ಇನ್ನೊಂದೆಡೆ, ಆಕಾಶ್ ಮತ್ತು ಬಾಲಕಿಯ ನಡುವೆ ಅಕ್ಕ-ತಮ್ಮನ ಬಾಂಧವ್ಯ ಬೆಳೆಯುತ್ತಿದ್ದು, ಜೈದೇವ್ ಮತ್ತು ಶಕುನಿ ಮಾಮ ಆಸ್ತಿಗಾಗಿ ಹೊಸ ಸಂಚು ರೂಪಿಸುತ್ತಿದ್ದಾರೆ.

ಗಂಡ-ಹೆಂಡ್ತಿ ಮನಸ್ಸು ಸೇರಾಗಿದೆ
ಅಮೃತಧಾರೆ (Amruthadhaare) ಸೀರಿಯಲ್ನಲ್ಲಿ ಸದ್ಯ ಭೂಮಿಕಾ ಮತ್ತು ಗೌತಮ್ ಮನಸ್ಸು ಸೇರಾಗಿದೆ. ತಾನು ಪತಿಯಿಂದ ದೂರ ಇದ್ದು ತಪ್ಪು ಮಾಡಿದ್ದೇನೆ ಎಂದು ಭೂಮಿಕಾಗೆ ಮನವರಿಕೆ ಆಗಿದೆ. ಆದರೂ ಅದನ್ನು ನೇರವಾಗಿ ಹೇಳದೇ ಒಳಗೊಳಗೇ ಒದ್ದಾಡುತ್ತಿದ್ದಾಳೆ.
ಗೌತಮ್-ಭೂಮಿಕಾ ಕೋಳಿ ಜಗಳ
ಅದೇ ಇನ್ನೊಂದೆಡೆ, ಗೌತಮ್ ಮತ್ತು ಭೂಮಿಕಾ ನಡುವೆ ಕೋಳಿ ಜಗಳ ನಡೆಯುತ್ತಲೇ ಇರುತ್ತಿದೆ. ಈ ಕ್ಯೂಟ್ ಜಗಳ ನೋಡೋದು ಎಂದರೆ ವೀಕ್ಷಕರಿಗೆ ಇನ್ನಿಲ್ಲದ ಪ್ರೀತಿ ಕೂಡ. ಹೊಸ ಜೋಡಿಯಂತೆ ಕದ್ದು ಕದ್ದು ಇಬ್ಬರೂ ಒಬ್ಬರನ್ನೊಬ್ಬರು ಕುಡಿನೋಟ ಬೀರುವುದೇ ವೀಕ್ಷಕರನ್ನು ರೋಮಾಂಚನಗೊಳಿಸುವುದು ಇದೆ.
ಅಕ್ಕ-ತಮ್ಮ ಒಂದಾಗ್ತಾರಾ?
ಈಗ ಏನಿದ್ದರೂ ಆಕಾಶ್ಗೆ ಗೌತಮ್ ತನ್ನ ಅಪ್ಪ ಎಂದು ಗೊತ್ತಾಗಬೇಕಿದೆ. ಇದರ ನಡುವೆಯೇ ಗೌತಮ್ ಬಳಿ ಇರುವ ಬಾಲಕಿ ಮತ್ತು ಆಕಾಶ್ ನಡುವೆ ಪ್ರೀತಿ ಹುಟ್ಟಬೇಕಿದೆ. ಇವರಿಬ್ಬರೂ ಅಕ್ಕ-ತಮ್ಮ ಹೌದೋ ಅಲ್ಲವೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಆದರೆ ಹಾಗೆ ನೋಡಿದರೆ ಈಗಲೂ ಇಬ್ಬರೂ ಅಕ್ಕ-ತಮ್ಮನೇ ಆಗಿದ್ದಾರೆ.
ಮಕ್ಕಳ ಆಟ ನೋಡ್ತಿರೋ ಬಾಲಕಿ
ಆಕಾಶ್ ತನ್ನ ಅಪ್ಪ ಗೌತಮ್ನ ಗತ್ತಿನಂತೆ ಇಡೀ ವಠಾರದ ಮಕ್ಕಳ ಎದುರು ಯಜಮಾನನ ರೀತಿಯಲ್ಲಿ ವರ್ತಿಸುತ್ತಿದ್ದು, ಮಕ್ಕಳ ಆಟವನ್ನು ಬಾಲಕಿ ತನ್ನ ಮನೆಯ ಎದುರಿನಿಂದ ನೋಡುತ್ತಿದ್ದಾಳೆ.
ಹಿರಿಹಿರಿ ಹಿಗ್ಗಿದ ಭೂಮಿಕಾ
ಅವಳನ್ನು ನೋಡಿದ ಆಕಾಶ್, ಆಟಕ್ಕೆ ಬರುತ್ತಿಯಾ ಎಂದು ಪ್ರಶ್ನಿಸಿದ್ದಾನೆ. ಹೇಳಿ ಕೇಳಿ ಪುಟಾಣಿಗಳು. ಬೇಡ ಅಂತಾರಾ? ಬಾಲಕಿ, ಆಕಾಶ್ ಜೊತೆ ಆಡಲು ಹೋಗುವುದು ಒಂದೇ ಬಾಕಿ. ಹಾಗಾದರೆ ಇಬ್ಬರಲ್ಲಿಯೂ ಅಕ್ಕ-ತಮ್ಮನ ಪ್ರೀತಿ ಬೆಳೆಯುವುದರಲ್ಲಿ ಸಂದೇಹವೇ ಇಲ್ಲ. ಇದನ್ನು ನೋಡಿ ಭೂಮಿಕಾ ಹಿರಿಹಿರಿ ಹಿಗ್ಗುತ್ತಿದ್ದಾರೆ.
ಗೌತಮ್-ಭೂಮಿಕಾರ ಹುಡುಕಾಟದಲ್ಲಿ
ಅದೇ ಇನ್ನೊಂದೆಡೆ, ಜೈದೇವ್ ಮತ್ತು ಶಕುಂತಲಾ ಭೂಮಿಕಾ ಮತ್ತು ಗೌತಮ್ ಎಲ್ಲಿದ್ದಾರೆ ಎನ್ನುವ ಹುಡುಕಾಟ ನಡೆಸಿದ್ದಾರೆ. ಅವರ ಆಸ್ತಿಯನ್ನು ಮಾರಾಟ ಮಾಡಲು ಅವರಿಗೆ ಸಹಿಬೇಕಿದೆ. ಇದನ್ನು ಅವರೇ ಮನೆಯಿಂದ ಹೊರಕ್ಕೆ ಹಾಕಿರೋ ಶಕುನಿ ಮಾಮಾ ಕೇಳಿಸಿಕೊಂಡಿದ್ದಾನೆ.
ಶಕುನಿ ಮಾಮನ ಆಟ
ಈಗ ಆತ ಏನಿದ್ದರೂ ಥೇಟ್ ಮಹಾಭಾರತದ ಶಕುನಿಯಂತೆ. ಕೌರವರ ಬಳಿ ಇದ್ದುಕೊಂಡೇ ಅವರ ವಿರುದ್ಧ ಸ್ಕೆಚ್ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಇಡೀ ಸಂಚಿಕೆ ರೋಚಕ ರೀತಿಯಲ್ಲಿ ಸಾಗಿದೆ.