Published : Nov 22, 2025, 07:27 AM ISTUpdated : Nov 22, 2025, 11:14 PM IST

State News Live: ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ದೋಷ, 2 ಗಂಟೆಯಿಂದ ಪ್ರಯಾಣಿಕರ ಪರದಾಟ

ಸಾರಾಂಶ

ಬೆಂಗಳೂರು (ನ.22): ಆಡಳಿತಾರೂಡ ಕಾಂಗ್ರೆಸ್‌ ಪಕ್ಷದ ಗುಂಪುಗಳ ಜಗಳ ಈಗ ಬೀದಿಗೆ ಬಂದಿದ್ದು, ಹಿರಿಯ ನಾಯಕರಿಗೆ ಮುಜುಗರ ಸೃಷ್ಟಿಸಿದೆ. ಕಾಂಗ್ರೆಸ್‌ನ ಬಣ ರಾಜಕೀಯ ಉಲ್ಭಣವಾಗಿರುವ ರೀತಿ ಕಂಡು ಹೈಕಮಾಂಡ್‌ ಕೂಡ ತಲ್ಲಣಗೊಂಡಿದೆ. ಸಿಎಂ ಹುದ್ದೆಗೆ ಡಿಕೆಶಿ ಬಣದಿಂದ ಒತ್ತಡ ಹೇರುವ ತಂತ್ರ ತಾರಕಕ್ಕೆ ಏರಿದ್ದರೆ, ಐದು ವರ್ಷವೂ ಸಿದ್ದು ಸಿಎಂಎ ಎನ್ನುವ ಮೂಲಕ ಸಿದ್ದು ಬಣ ಪತ್ರಿತಂತ್ರ ಹೂಡಿದೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

11:14 PM (IST) Nov 22

ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ದೋಷ, 2 ಗಂಟೆಯಿಂದ ಪ್ರಯಾಣಿಕರ ಪರದಾಟ

ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ದೋಷ, 2 ಗಂಟೆಯಿಂದ ಪ್ರಯಾಣಿಕರ ಪರದಾಟ, ಮೈಸೂರಿನಿಂದ ಹೊರಟ ರೈಲು ಚನ್ನಪಟ್ಟಣ ಬಳಿ ಕೆಟ್ಟು ನಿಂತಿದೆ. ರೈಲ್ವೆ ಪೊಲೀಸರು ಭೇಟಿ ನೀಡಿದ್ದಾರೆ.

Read Full Story

10:32 PM (IST) Nov 22

ಬಿಗ್ ಬಾಸ್ ಬೆನ್ನಲ್ಲೇ ಕಾಮಿಡಿ ಕಿಲಾಡಿಗಳಿಗೂ ಸಂಕಷ್ಟ, ಹಾಸ್ಯ ಶೋ-ವಾಹಿನಿ ವಿರುದ್ಧ ದೂರು ದಾಖಲು

ಬಿಗ್ ಬಾಸ್ ಬೆನ್ನಲ್ಲೇ ಕಾಮಿಡಿ ಕಿಲಾಡಿಗಳಿಗೂ ಸಂಕಷ್ಟ, ಹಾಸ್ಯ ಶೋ-ವಾಹಿನಿ ವಿರುದ್ಧ ದೂರು ದಾಖಲು, ಈಗಾಗಲೇ ಬಿಗ್ ಬಾಸ್ ಶೋ ವಿರುದ್ದ ಹಲವು ಕಾರಣಗಳಿಂದ ದೂರು ದಾಖಲಾಗಿದೆ. ಇದೀಗ ಕಾಮಿಡಿ ಕಿಲಾಡಿ ಶೋ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದೆ.

Read Full Story

09:56 PM (IST) Nov 22

ರಾಜಮೌಳಿ ಕಥೆ ಹೇಗೆ ಶುರು ಮಾಡ್ತಾರೆ? ಐಡಿಯಾ ಬಂದ ತಕ್ಷಣ ಮೊದಲು ಹೇಳೋದು ಯಾರಿಗೆ? ರಹಸ್ಯ ಬಿಚ್ಚಿಟ್ಟ ರಮಾ!

ನಿರ್ದೇಶಕ ರಾಜಮೌಳಿ ಒಂದು ಸಿನಿಮಾ ಮುಗಿದ ತಕ್ಷಣ ಮುಂದಿನ ಸಿನಿಮಾದ ಕಥೆಯನ್ನು ಹೇಗೆ ಶುರು ಮಾಡುತ್ತಾರೆ? ಸ್ಟೋರಿ ಐಡಿಯಾವನ್ನು ಮೊದಲು ಯಾರೊಂದಿಗೆ ಹಂಚಿಕೊಳ್ಳುತ್ತಾರೆ? ಈ ಬಗ್ಗೆ ವಿವರ ಇಲ್ಲಿದೆ.

Read Full Story

09:19 PM (IST) Nov 22

ಮೆಗಾ ಸೊಸೆ ಉಪಾಸನಾ ಹೇಳಿಕೆ ಸೃಷ್ಟಿಸಿದ ಬಿರುಗಾಳಿ.. ಏನಿದು ಎಗ್ ಫ್ರೀಜಿಂಗ್? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಇತ್ತೀಚೆಗೆ ಉಪಾಸನಾ ನೀಡಿದ ಹೇಳಿಕೆಯೊಂದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಮಕ್ಕಳನ್ನು ಹೊಂದುವ ಬಗ್ಗೆ ಮಹಿಳೆಯರಿಗೆ ಮೆಗಾ ಸೊಸೆ ಉಪಾಸನಾ ನೀಡಿದ ಸಲಹೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಅವರು ಹೇಳಿದ ಎಗ್ ಫ್ರೀಜಿಂಗ್ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಯುತ್ತಿದೆ.

Read Full Story

08:49 PM (IST) Nov 22

ರಾಮ್ ಚರಣ್, ಎನ್‌ಟಿಆರ್, ಪ್ರಭಾಸ್ ಇರುವಾಗ ಇಂಡಸ್ಟ್ರಿಯಲ್ಲಿ ನೀನ್ಯಾಕೆ? ಮುಖಕ್ಕೆ ಹೊಡೆದಂತೆ ಕೇಳಿದ್ರೂ ಬದಲಾಗಲಿಲ್ವಾ?

ಟಾಲಿವುಡ್‌ನಲ್ಲಿ ರಾಮ್ ಚರಣ್, ಎನ್‌ಟಿಆರ್, ಪ್ರಭಾಸ್ ಅವರಂತಹ ಹೀರೋಗಳು ಮಾಡುವ ಸಿನಿಮಾಗಳನ್ನೇ ಮಾಡಲು ನೀನ್ಯಾಕೆ ಇಂಡಸ್ಟ್ರಿಯಲ್ಲಿ ಇರಬೇಕು ಎಂಬ ಪ್ರಶ್ನೆ ಸ್ಟಾರ್ ನಟನ ಮಗನಿಗೆ ಎದುರಾಯಿತಂತೆ. ಆ ಹೀರೋ ಯಾರು? ಹಾಗೆ ಪ್ರಶ್ನಿಸಿದ್ದು ಯಾರು? ಈ ಲೇಖನದಲ್ಲಿ ತಿಳಿಯೋಣ.

Read Full Story

08:39 PM (IST) Nov 22

ನವೆಂಬರ್ ಕ್ರಾಂತಿ ಡೆಡ್‌ಲೈನ್ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಭೇಟಿಯಾದ ಸಿಎಂ

ನವೆಂಬರ್ ಕ್ರಾಂತಿ ಡೆಡ್‌ಲೈನ್ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಭೇಟಿಯಾದ ಸಿಎಂ , ಸದಾಶಿವನಗರದಲ್ಲಿರುವ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ, ಮಹತ್ವದ ಮಾತುಕತೆಗೆ ಮುಂದಾಗಿದ್ದಾರೆ.

Read Full Story

08:29 PM (IST) Nov 22

666 ಆಪರೇಷನ್‌ ಡ್ರೀಮ್‌ ಥಿಯೇಟರ್‌ ಚಿತ್ರಕ್ಕೆ ಪ್ರಿಯಾಂಕ ಮೋಹನ್‌ ನಾಯಕಿ.. ಆದ್ರೆ, ಶಿವಣ್ಣನ ಬಗ್ಗೆ ಹೀಗಾ ಹೇಳೋದು?

ಹೇಮಂತ್ ಎಂ ರಾವ್ ಅವರ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದೆ. ಆದರೆ ಅದು ಇಷ್ಟು ಬೇಗ ನೆರವೇರುತ್ತದೆ ಅಂತ ಭಾವಿಸಿರಲಿಲ್ಲ ನಟಿ ಎಂದು ಪ್ರಿಯಾಂಕ ಮೋಹನ್‌ ಹೇಳಿಕೊಂಡಿದ್ದಾರೆ.

Read Full Story

08:12 PM (IST) Nov 22

ಡಿಕೆ ಶಿವಕುಮಾರ್‌ಗೆ ಸಿಗುತ್ತಾ ಮುಖ್ಯಮಂತ್ರಿ ಸ್ಥಾನ? ಕಾರ್ಯಕರ್ತರ ಎಂಟ್ರಿಯಿಂದ ಹೊಸ ತಿರುವು

ಡಿಕೆ ಶಿವಕುಮಾರ್‌ಗೆ ಸಿಗುತ್ತಾ ಮುಖ್ಯಮಂತ್ರಿ ಸ್ಥಾನ? ಕಾರ್ಯಕರ್ತರ ಎಂಟ್ರಿಯಿಂದ ಹೊಸ ತಿರುವು, ಒಂದೆಡೆ ನಾಯಕರು ಡಿಕೆ ಶಿವಕುಮಾರ್ ಪರ ಲಾಭಿ ಆರಂಭಿಸಿದ್ದರೆ, ಇದೀಗ ಕಾರ್ಯಕರ್ತರು ಹೊಸ ದಾಳ ಉರುಳಿಸಿದ್ದಾರೆ.

 

Read Full Story

07:48 PM (IST) Nov 22

'ಆಂಧ್ರ ಕಿಂಗ್‌ ತಾಲೂಕ' ಚಿತ್ರದಲ್ಲಿ ನಾನು ಸೂಪರ್ ಸ್ಟಾರ್ ಪಾತ್ರ ಮಾಡಿದ್ದೇನೆ - ಉಪೇಂದ್ರ ಹೇಳಿದ್ದೇನು?

ನಾನು ಬೇರೆ ಭಾಷೆಗಳಲ್ಲಿ ತುಂಬಾ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಈ ಆಂಧ್ರ ಕಿಂಗ್‌ ತಾಲೂಕ ಚಿತ್ರ ಒಪ್ಪಿಕೊಳ್ಳುವುದಕ್ಕೆ ಕಾರಣ ಸೂರ್ಯ ಕುಮಾರ್‌ ಎನ್ನುವ ಪಾತ್ರ ಎಂದರು ರಿಯಲ್ ಸ್ಟಾರ್ ಉಪೇಂದ್ರ.

Read Full Story

07:45 PM (IST) Nov 22

ಡಿಕೆಶಿ ಮಹತ್ವದ ನಿರ್ಧಾರ, ಮೇಕೆದಾಟು ಯೋಜನೆಗೆ ಮತ್ತೆ ಡಿಪಿಆರ್ ಸಲ್ಲಿಕೆ, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಎಸ್‌ಐಟಿ ರಚನೆ

ಡಿಸಿಎಂ ಡಿಕೆ ಶಿವಕುಮಾರ್ ಅವರು ಜಲಸಂಪನ್ಮೂಲ ಮತ್ತು ಬಿಡಿಎ ಇಲಾಖೆಗಳಲ್ಲಿ ಬಾಕಿ ಇರುವ 61,846 ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸುವುದಾಗಿ ಘೋಷಿಸಿದ್ದಾರೆ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳು ಮತ್ತು ವಕೀಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Read Full Story

07:36 PM (IST) Nov 22

Karna Serial ನಿಧಿಯ ರಿಯಲ್​ ಅಕ್ಕ-ತಂಗಿ ಇವ್ರೇ ನೋಡಿ - DKD ವೇದಿಕೆಯಲ್ಲಿ ಕ್ಯೂಟ್​ ಸಿಸ್ಟರ್ಸ್​ ಭರ್ಜರಿ ಸ್ಟೆಪ್​

ಕರ್ಣ ಸೀರಿಯಲ್ ಖ್ಯಾತಿಯ ನಿಧಿ ಅಲಿಯಾಸ್ ಭವ್ಯಾ ಗೌಡ, 'ಡಾನ್ಸ್ ಕರ್ನಾಟಕ ಡಾನ್ಸ್' ವೇದಿಕೆಯಲ್ಲಿ ತಮ್ಮ ಸಹೋದರಿಯರೊಂದಿಗೆ ಕಾಣಿಸಿಕೊಂಡಿದ್ದಾರೆ. ಇಂಟಿರಿಯರ್ ಡಿಸೈನರ್ ಆಗಿರುವ ಅಕ್ಕ ವರ್ಷಿಣಿ ಮತ್ತು ಮೇಕಪ್ ಆರ್ಟಿಸ್ಟ್ ಆಗಿರುವ ತಂಗಿ ದಿವ್ಯಾ ಜೊತೆಗೂಡಿ,   ಕುಟುಂಬದ ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ.

Read Full Story

07:32 PM (IST) Nov 22

ರಿಷಬ್ ಶೆಟ್ಟಿ ಕಥೆಗೆ ಗ್ರೀನ್ ಸಿಗ್ನಲ್ ಕೊಟ್ಟ ತೆಲುಗು ಹೀರೋ ಯಾರು? ಟಾಲಿವುಡ್ ಮೇಲೆ ಕಾಂತಾರ ನಟನ ಕಣ್ಣು!

ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾವನ್ನೇ ಶೇಕ್ ಮಾಡಿದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ಟಾಲಿವುಡ್ ಮೇಲೆ ಕಣ್ಣಿಟ್ಟಿದ್ದಾರೆ. ತೆಲುಗಿನ ಸ್ಟಾರ್ ಹೀರೋಗೆ ಕಥೆ ಹೇಳಿ ಗ್ರೀನ್ ಸಿಗ್ನಲ್ ಕೂಡ ಪಡೆದಿದ್ದಾರಂತೆ. ಅಷ್ಟಕ್ಕೂ ರಿಷಬ್ ಶೆಟ್ಟಿ ನಿರ್ದೇಶಿಸಲಿರುವ ಆ ಪ್ಯಾನ್ ಇಂಡಿಯಾ ಹೀರೋ ಯಾರು ಗೊತ್ತಾ?

Read Full Story

07:10 PM (IST) Nov 22

ನನ್ನ ವೃತ್ತಿ ಬದುಕಿನಲ್ಲಿ ವಿಶೇಷ ಸಿನಿಮಾ ರಾಧೇಯ - ಅಜಯ್ ರಾವ್ ಓಪನ್ ಟಾಕ್

ನನಗಿಂತ ಜಾಸ್ತಿ ಸಿನಿಮಾ ಪ್ರೀತಿಯುಳ್ಳ ನಿರ್ದೇಶಕ, ನಿರ್ಮಾಪಕ ವೇದ್‌ಗುರು ಅವರಿಗೆ ಈ ಸಿನಿಮಾದಿಂದ ಒಳ್ಳೆಯದಾಗಲಿ. ಇದೊಂದು ಒಳ್ಳೆಯ ಪ್ರಯತ್ನ, ಈ ಚಿತ್ರಕ್ಕೆ ಎಲ್ಲರ ಪ್ರೀತಿ- ಬೆಂಬಲ ಅಗತ್ಯವಿದೆ ಹೀಗೆ ಹೇಳಿದ್ದು ಅಜಯ್ ರಾವ್.

Read Full Story

06:59 PM (IST) Nov 22

ಕರಾವಳಿಯ ಕಂಬಳ ವೈಭವ ಕಂಡ ಥ್ರಿಲ್ ಆದ 15 ವಿದೇಶಿಗರು, ಆಸ್ಟ್ರೇಲಿಯಾ, ಫ್ರಾನ್ಸ್‌ನ ಮಹಿಳಾ ಪ್ರವಾಸಿಗರು ಕೂಡ ಭಾಗಿ!

ಪಣಪಿಲದಲ್ಲಿ ನಡೆದ 16ನೇ ವರ್ಷದ ಜಯ-ವಿಜಯ ಕಂಬಳವು ವಿದೇಶಿ ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸಿತು. ಇದೇ ವೇಳೆ, ರಾಜ್ಯ ಕಂಬಳ ಅಸೋಸಿಯೇಷನ್ ಸರ್ಕಾರದಿಂದ 5 ಕೋಟಿ ರೂ. ಅನುದಾನಕ್ಕೆ ಬೇಡಿಕೆಯಿಟ್ಟಿದ್ದು, ಹೊಸ ನಿಯಮಗಳ ಬಗ್ಗೆಯೂ ಪ್ರಸ್ತಾಪಿಸಿದೆ.

Read Full Story

06:53 PM (IST) Nov 22

Sri Krishna - ಶ್ರೀಕೃಷ್ಣನಿಗೆ ನಿಜಕ್ಕೂ 16,108 ಹೆಂಡತಿಯರು ಇದ್ದರೇ?

ಶ್ರೀಕೃಷ್ಣನಿಗೆ (Sri Krishna) ಅಷ್ಟಮಹಿಷಿಯರು ಎಂಬ ಎಂಟು ಮುಖ್ಯ ಪತ್ನಿಯರಿದ್ದರು. ಇದರ ಜೊತೆಗೆ ನರಕಾಸುರನಿಂದ ಪಾರುಮಾಡಿದ 16,100 ಮಹಿಳೆಯರನ್ನು ಕೃಷ್ಣನು ವಿವಾಹವಾದ. ಆದರೆ ಇದರ ಹಿಂದಿನ ರಹಸ್ಯವೇನು? 

Read Full Story

06:35 PM (IST) Nov 22

ದುನಿಯಾ ವಿಜಯ್‌ ನನಗೆ ಹೀಗಂದ್ರು - ನಟಿ ಬೃಂದಾ ಆಚಾರ್ಯ ಬಿಚ್ಚಿಟ್ಟ ಸೀಕ್ರೆಟ್ ಏನು?

ದುನಿಯಾ ವಿಜಯ್‌, ಶ್ರೇಯಸ್‌ ಮಂಜು ನಟನೆಯ, ಎಸ್‌. ನಾರಾಯಣ್‌ ನಿರ್ದೇಶನದ ಹಾಗೂ ಕೆ. ಮಂಜು, ರಮೇಶ್‌ ಯಾದವ್‌ ನಿರ್ಮಾಣದ ‘ಮಾರುತ’ ಸಿನಿಮಾ ನ.21ರಂದು ತೆರೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕಿ ಬೃಂದಾ ಆಚಾರ್ಯ ಮಾತನಾಡಿದ್ದಾರೆ.

Read Full Story

06:19 PM (IST) Nov 22

ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಸಪೋರ್ಟ್, ಜಕ್ಕಣ್ಣನ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಆರ್‌ಜಿವಿ ಹೇಳಿದ್ದೇನು?

ವಾರಣಾಸಿ ವಿವಾದದ ಬಗ್ಗೆ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದಾರೆ. ರಾಜಮೌಳಿಗೆ ಬೆಂಬಲ ನೀಡುತ್ತಲೇ, ಟೀಕಾಕಾರರಿಗೆ ಖಡಕ್ ಉತ್ತರ ನೀಡಿದ್ದಾರೆ. ಬಹಳ ದಿನಗಳ ನಂತರ ವರ್ಮಾ ತಮ್ಮ ಮಾರ್ಕ್ ಕಾಮೆಂಟ್‌ಗಳಿಂದ ಸದ್ದು ಮಾಡಿದ್ದಾರೆ.

Read Full Story

06:07 PM (IST) Nov 22

ಸೂಪರ್ ಟ್ವಿಸ್ಟ್‌ಗಳಿಂದ ತುಂಬಿದ ಸೈಕಾಲಜಿಕಲ್ ಎಮೋಷನಲ್‌ ಜರ್ನಿ - ಇಲ್ಲಿದೆ ರಾಧೇಯ ಸಿನಿಮಾ ವಿಮರ್ಶೆ

ಯಾರು ಕೆಟ್ಟ ಕೆಲಸ ಮಾಡುತ್ತಿರುತ್ತಾರೋ ಇದ್ದಕ್ಕಿದ್ದಂತೆ ಅವರ ಸಾವು ಸಂಭವಿಸುತ್ತಿರುತ್ತದೆ. ಯಾರು ಕೊಲೆ ಮಾಡುತ್ತಿರುವವರು ಎಂದು ಕುತೂಹಲದಿಂದ ಕಾಯುವಷ್ಟರಲ್ಲಿಯೇ ಒಬ್ಬ ವ್ಯಕ್ತಿ ಆ ಕೊಲೆ ಮಾಡುತ್ತಿರುವುದು ತಾನೇ ಎಂದು ಸರೆಂಡರ್‌ ಆಗಿ ಬಿಡುತ್ತಾನೆ.

Read Full Story

05:57 PM (IST) Nov 22

ಬೆಂಗಳೂರು - ರಾಬರಿ ಪ್ರಕರಣ, ಹೈದರಾಬಾದ್‌ನಲ್ಲಿ ಮತ್ತೆ ಮೂವರ ಬಂಧನ, ಹೇಗಿತ್ತು ಗೊತ್ತಾ ದರೋಡೆಗೆ ಸ್ಕೆಚ್?

ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿ ಮತ್ತೆ ಮೂವರನ್ನು ಬಂಧಿಸಲಾಗಿದ್ದು, ಒಟ್ಟು ಬಂಧಿತರ ಸಂಖ್ಯೆ ಆರಕ್ಕೇರಿದೆ. ಈವರೆಗೆ 6.45 ಕೋಟಿ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಪೊಲೀಸ್ ಪೇದೆಯೇ ಈ ದರೋಡೆಯ ನೀಲಿ ನಕ್ಷೆ ರೂಪಿಸಿದ್ದು ತನಿಖೆಯಿಂದ ಬಯಲಾಗಿದೆ.
Read Full Story

05:51 PM (IST) Nov 22

ವಿಂಟೇಜ್‌ ಎಸ್‌. ನಾರಾಯಣ್‌ ಈಸ್‌ ಬ್ಯಾಕ್‌ - ದುನಿಯಾ ವಿಜಯ್‌ 'ಮಾರುತ' ಸಿನಿಮಾ ಹೇಗಿದೆ?

ಒಂದು ಸುಂದರ ಮಲೆನಾಡು. ಎಲ್ಲಿ ನೋಡಿದರಲ್ಲಿ ಹಸಿರು. ಅಲ್ಲೊಂದು ಪ್ರೇಮತಾಪದ ಜೋಡಿ. ಹೀರೋ ಅಕ್ಕಪಕ್ಕ ತರಲೆ ಪೋಲಿ ಗೆಳೆಯರು. ಹಸಿರು ಬೆಟ್ಟದ ಮೇಲೆ ಸುಂದರ ಡಾನ್ಸು. ಲಂಗ ದಾವಣಿಯ ಸಹನಟಿಯರು. ಪಂಚೆ ತೊಟ್ಟಿರುವ ಸಹ ನಟರು.

Read Full Story

05:44 PM (IST) Nov 22

ಕಂಗ್ರಾಜುಲೇಷನ್‌ ಬ್ರದರ್‌ ಸಿನಿಮಾ ವಿಮರ್ಶೆ - ಜೆನ್‌ ಝೀ ತಲೆಮಾರಿನ ಇಷ್ಟ, ಕಷ್ಟಗಳ ಸಲ್ಲಾಪ

ಒಂದು ಐಟಿ ಕಂಪನಿ. ಅಲ್ಲಿ ಕೆಲಸ ಮಾಡುತ್ತಿರುವ ತನು ಮತ್ತು ರಕ್ಷಿ ನಡುವೆ ಸ್ನೇಹ, ನಂತರ ಪ್ರೀತಿ ಹುಟ್ಟಿಕೊಳ್ಳುತ್ತದೆ. ತನ್ನ ಪ್ರೀತಿಯನ್ನು ಹೇಳಿಕೊಳ್ಳುವ ಹೊತ್ತಿಗೆ ತನು ಒಂದು ಷರತ್ತು ಹಾಕುತ್ತಾಳೆ. ಈಗ ಸಿರಿ ಎಂಟ್ರಿ ಆಗುತ್ತಾಳೆ.

Read Full Story

05:42 PM (IST) Nov 22

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ‌ ಸಂಚರಿಸುತ್ತಿದ್ದ ಕಾರು ಅಪಘಾತ

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ‌ ಸಂಚರಿಸುತ್ತಿದ್ದ ಕಾರು ಅಪಘಾತ , ಕ್ಕೋಡಿ ತಾಲೂಕಿನ ನಾಗರಮುನ್ನೂಳಿ ಹೊರವಲಯದಲ್ಲಿ ಅಪಘಾತ ಸಂಭವಿಸಿದೆ. ರೈತ ಮುಖಂಡರ ಭೇಟಿ ವೇಳೆ ಅಪಘಾತವಾಗಿದೆ.

Read Full Story

05:42 PM (IST) Nov 22

ನಿರೂಪಕಿ ಅನುಶ್ರೀ ಮದುವೆ ಕ್ಷಣವನ್ನು ಮತ್ತಷ್ಟು ಸುಂದರವಾಗಿಸಿದ ಕಲಾವಿದೆ ಹರ್ಷಿತಾ

ಖ್ಯಾತ ನಿರೂಪಕಿ ಅನುಶ್ರೀ ಅವರ ಮದುವೆಯ ಕ್ಷಣವನ್ನು ರಾಳ ಕಲಾವಿದೆ ಹರ್ಷಿತಾ ಅವರು ಒಂದು ಸುಂದರ ಕಲಾಕೃತಿಯಲ್ಲಿ ಸೆರೆಹಿಡಿದಿದ್ದಾರೆ. ಈ ಚಿತ್ರದಲ್ಲಿ ದಿವಂಗತ ಪುನೀತ್ ರಾಜ್‌ಕುಮಾರ್ ಅವರು ಅನುಶ್ರೀ ಮತ್ತು ರೋಷನ್ ದಂಪತಿಗೆ ಆಶೀರ್ವಾದಿಸುತ್ತಿರುವಂತೆ ಚಿತ್ರಿಸಲಾಗಿದೆ. 

Read Full Story

05:40 PM (IST) Nov 22

ಸತ್ತರೂ ಬಿಡಲಿಲ್ಲ ನಂಟು - ಇಲ್ಲಿಂದ ಹಾರಿ ಅಲ್ಲಿ ಜೊತೆಯಾದ Puttakkana Makkalu ಸ್ನೇಹಾ- ಬಂಗಾರಮ್ಮ!

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಿಧನರಾದಂತೆ ತೋರಿಸಲಾಗಿದ್ದ ಬಂಗಾರಮ್ಮ ಮತ್ತು ಸ್ನೇಹಾ ಪಾತ್ರಧಾರಿಗಳು ಇದೀಗ ಮತ್ತೆ ಒಂದಾಗಿದ್ದಾರೆ. ನಟಿಯರಾದ ಮಂಜು ಭಾಷಿಣಿ ಮತ್ತು ಸಂಜನಾ ಬುರ್ಲಿ ಅವರು  ಹೊಸ ಧಾರಾವಾಹಿಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಕಥೆಗೆ ಹೊಸ ತಿರುವು ನೀಡಿದ್ದಾರೆ.

Read Full Story

05:11 PM (IST) Nov 22

ಮದುವೆ ಫೋಟೋಗ್ರಾಫರ್‌ಗೆ ಮದುಮಗಳೇ ಲೈನ್‌ ಹೊಡೆದರೆ.. - ಇಲ್ಲಿದೆ 'ಫುಲ್‌ ಮೀಲ್ಸ್‌' ಸಿನಿಮಾ ರಿವ್ಯೂ!

ಮದುವೆ ಫಿಕ್ಸ್‌ ಆಗಿದೆ, ಪ್ರೀವೆಡ್ಡಿಂಗ್‌ ಫೋಟೋಶೂಟ್‌ ನಡೀತಿದೆ, ಈ ನಡುವೆ ಮದುಮಗಳಿಗೆ ಫೋಟೋಗ್ರಾಫರ್‌ ಮೇಲೇ ಆಕರ್ಷಣೆ ಆಗಿದೆ. ಮುಂದ? ಹೀಗೊಂದು ಒನ್‌ಲೈನ್‌ನೊಂದಿಗೆ ಪ್ರೇಕ್ಷಕನಿಗೆ ಮುಖಾಮುಖಿಯಾಗುವ ಸಿನಿಮಾ‘ಫುಲ್‌ ಮೀಲ್ಸ್‌’.

Read Full Story

04:46 PM (IST) Nov 22

ಸಚಿವ ಸಂತೋಷ‌ ಲಾಡ್ ರನ್ನೇ 'ನಿಮ್ಮ ಹೆಸರೇನು' ಎಂದ ಸೈಕ್ಲಿಂಗ್ ಪಟು! ಇಡೀ ಸಭೆ ನಕ್ಕಾಗ ಏನಾಯ್ತು?

ಮುಧೋಳದಲ್ಲಿ ನಡೆದ ರಾಜ್ಯಮಟ್ಟದ ಸೈಕ್ಲಿಂಗ್ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಸಂತೋಷ್ ಲಾಡ್ ಭಾಗವಹಿಸಿದ್ದರು. ಈ ವೇಳೆ ಸೈಕ್ಲಿಂಗ್ ಪಟುವೊಬ್ಬರು ಸಚಿವರ ಹೆಸರನ್ನೇ ಕೇಳಿದ ಸ್ವಾರಸ್ಯಕರ ಘಟನೆ ನಡೆದರೆ, ಬಳಿಕ ಲಾಡ್  ಅಂಬೇಡ್ಕರ್ ಅವರ ಹಿಂದೂ ಕೋಡ್ ಬಿಲ್ ಬಗ್ಗೆ ಮಾತನಾಡಿದರು.

Read Full Story

04:39 PM (IST) Nov 22

Akhanda Movie - ನಂದಮೂರಿ ಬಾಲಕೃಷ್ಣ ಸಿನಿಮಾಕ್ಕೆ ಸಾಥ್‌ ನೀಡಿದ ಶಿವರಾಜ್‌ಕುಮಾರ್

ನಂದಮೂರಿ ಬಾಲಕೃಷ್ಣ ನಟನೆಯ ಅಖಂಡ 2 ಸಿನಿಮಾದ ಸೀಕ್ವೆಲ್ ಟ್ರೇಲರ್ ರಿಲೀಸ್‌ ಆಗಿದೆ. ಚಿಕ್ಕಬಳ್ಳಾಪುರದ ಚಿಂತಾಮಣಿಯ ಚಿನ್ನಸಂದ್ರ ಬಳಿ ಟ್ರೇಲರ್ ರಿಲೀಸ್ ಮಾಡಲಾಯಿತು. ನಟ ಶಿವರಾಜ್ ಕುಮಾರ್ ವಿಶೇಷ ಅತಿಥಿಯಾಗಿ ಭಾಗಿ ಬಾಲಯ್ಯ ಸಿನಿಮಾಕ್ಕೆ ಶುಭ ಹಾರೈಸಿದರು. 

 

Read Full Story

04:37 PM (IST) Nov 22

BBK 12 - ಮಹಿಳಾ ಸ್ಪರ್ಧಿ ಕೊಟ್ಟ ಶಾಕ್‌ಗೆ ಮಕ್ಕರ್ ಆದ ಗಿಲ್ಲಿ ನಟ; ಊಹೆ ಮಾಡಿರಲಿಲ್ಲ ಮಾತಿನ ಮಲ್ಲ

ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ ತಮ್ಮ ವ್ಯಂಗ್ಯ ಮಾತುಗಳಿಂದಲೇ ಸದ್ದು ಮಾಡುತ್ತಿದ್ದಾರೆ. ಇದೀಗ ಸಹ ಸ್ಪರ್ಧಿಯೊಬ್ಬರು, ಗಿಲ್ಲಿ ನಟನಿಗೆ ಹೆದರಿಸಿ ಶಾಕ್ ಕೊಟ್ಟಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಕುತೂಹಲ ಮೂಡಿಸಿದೆ.

Read Full Story

04:36 PM (IST) Nov 22

ಬೆಂಗಳೂರು ಬಳಿಕ ಚಾಮರಾಜನಗರದಲ್ಲೂ ಸಿನಿಮಾ ಸ್ಟೈಲ್ ರಾಬರಿ - 1.3 ಕೆಜಿ ಚಿನ್ನ ದರೋಡೆ

ಕಾರನ್ನು ಫಾಲೋ ಮಾಡಿಕೊಂಡು ಬಂದ ಗ್ಯಾಂಗ್ ಸಿನಿಮಾ ಸ್ಟೈಲ್ ನಲ್ಲಿ ಬಂಡೀಪುರದ ಅರಣ್ಯದಲ್ಲಿ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಚಿನ್ನ ದರೋಡೆ ಮಾಡಿ ಹೋಗಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

Read Full Story

03:43 PM (IST) Nov 22

ಡಿಕೆ ಶಿವಕುಮಾರ್ ಸಂಪರ್ಕದಲ್ಲಿದ್ದಾರಾ ಅಮಿತ್ ಶಾ? ಸ್ಪಷ್ಟನೆ ಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ

ಡಿಕೆ ಶಿವಕುಮಾರ್ ಸಂಪರ್ಕದಲ್ಲಿದ್ದಾರಾ ಅಮಿತ್ ಶಾ? ಸ್ಪಷ್ಟನೆ ಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ, ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಸ್ತಾಂತರ ಚರ್ಚೆಗಳ ಬೆನ್ನಲ್ಲೇ ಬಿಜೆಪಿ ಸಂಪರ್ಕದ ವರದಿಗಳ ಹರಿದಾಡುತ್ತಿದೆ.

Read Full Story

03:37 PM (IST) Nov 22

ಸಿದ್ದರಾಮಯ್ಯರನ್ನು ಬೆಳೆಸಿದ್ದೇ ದೇವೇಗೌಡ್ರು, ಆದ್ರೆ ಅವರು ಬಂದ ದಾರಿ ಮರೆತಿದ್ದಾರೆ - ನಿಖಿಲ್ ಕುಮಾರಸ್ವಾಮಿ

ಜೆಡಿಎಸ್ ಪಕ್ಷದ 25ನೇ ವರ್ಷದ ಸಂಭ್ರಮಾಚರಣೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ದೇವೇಗೌಡರು ಮತ್ತು ಕುಮಾರಸ್ವಾಮಿಯವರನ್ನು ಶ್ಲಾಘಿಸಿದರು. ಸಿದ್ದರಾಮಯ್ಯನವರನ್ನು ಟೀಕಿಸಿದ ಅವರು, ಕುಮಾರಸ್ವಾಮಿಯವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ ಎಂದು ಘೋಷಿಸಿದರು.  

Read Full Story

03:33 PM (IST) Nov 22

Bigg Boss Kannada 12 - ಗೆದ್ದಿತ್ತಿನ ಬಾಲ ಹಿಡಿದ ಸ್ಪರ್ಧಿ; ಜಾನ್ವಿಯಿಂದ ಖಡಕ್ ಮಾತು

ಬಿಗ್‌ಬಾಸ್ ಮನೆಯಲ್ಲಿ 'ಉತ್ತಮ' ಪದಕ ಪಡೆದ ಸೂರಜ್ ಪಕ್ಕ ನಿಂತ 'ಗಿಲ್ಲಿ ನಟ'ನನ್ನು ಜಾನ್ವಿ 'ಗೆದ್ದಿತ್ತಿನ ಬಾಲ ಹಿಡಿಯೋ ಸ್ಪರ್ಧಿ' ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಂದೆಡೆ, ಈ ಹಿಂದಿನ ಜಗಳ ಮರೆತು ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿಯ ಆಟವನ್ನು ಮೆಚ್ಚಿ 'ಉತ್ತಮ' ಸ್ಪರ್ಧಿ ಎಂದು ಹೇಳಿದ್ದಾರೆ. 

 

Read Full Story

02:58 PM (IST) Nov 22

Annayya Serial - ಅಣ್ಣಯ್ಯ ಧಾರಾವಾಹಿಯಿಂದ ಹೊರಬಂದ್ರಾ ಖ್ಯಾತ ನಟಿ? ಕಾರಣ ಏನು?

Annayya Kannada Serial: ಧಾರಾವಾಹಿಗಳಲ್ಲಿ ಹೀರೋ, ಹೀರೋಯಿನ್‌ ಪೋಷಕ ಪಾತ್ರಗಳಿಂದ ಹಿಡಿದು ಬದಲಾವಣೆ ಆಗುತ್ತಿರುತ್ತದೆ. ಕೆಲವರು ಮಾತ್ರ ಆರಂಭದಿಂದ ಅಂತ್ಯದವರೆಗೂ ಅವರ ಪಾತ್ರಕ್ಕೆ ಜೀವ ತುಂಬೋದುಂಟು. ಈಗ ಅಣ್ಣಯ್ಯ ಸೀರಿಯಲ್‌ನಿಂದ ಓರ್ವ ನಟಿ ಹೊರಬಂದಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

 

Read Full Story

02:35 PM (IST) Nov 22

BBK 12 - ಅಶ್ವಿನಿ ಅವ್ರೇ..ಎಮೋಶನ್‌ ಬ್ಲ್ಯಾಕ್‌ಮೇಲ್‌ ಮಾಡ್ತೀರಾ? ಮುಖದ್ಮೇಲೆ ಹೇಳ್ತೀನಿ - ಕಿಚ್ಚ ಸುದೀಪ್

ಇಷ್ಟು ವಾರಗಳಿಂದ ಸ್ವಲ್ಪ ಸಮಾಧಾನದಿಂದ ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ವೀಕೆಂಡ್‌ ಎಪಿಸೋಡ್‌ ನಿರೂಪಣೆ ಮಾಡುತ್ತಿದ್ದ ಕಿಚ್ಚ ಸುದೀಪ್‌ ಈ ಬಾರಿ ಸ್ಪರ್ಧಿಗಳನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇವತ್ತು ನಾನು ಮುಖಕ್ಕೆ ಹೊಡೆದಂತೆ ಮಾತಾಡ್ತೀನಿ ಎಂದು ಅವರು ಮೊದಲೇ ಎಚ್ಚರಿಕೆ ಕೊಟ್ಟಿದ್ದರು.

Read Full Story

02:22 PM (IST) Nov 22

ಅಪ್ಪನ ಹೆಗಲ್ಮೇಲೆ ಕುಳಿತ ಬಿಗ್‌ಬಾಸ್‌ನ ಸ್ಟೈಲಿಶ್ ಸ್ಪರ್ಧಿಯ ಬಾಲ್ಯದ ಫೋಟೋ ವೈರಲ್

ಬಿಗ್‌ಬಾಸ್ ಸ್ಪರ್ಧಿಯ ಬಾಲ್ಯದ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋದಲ್ಲಿ, ಅವರು ತಮ್ಮ ತಂದೆಯ ಹೆಗಲ ಮೇಲೆ ಕುಳಿತಿರುವುದು ಕಂಡುಬಂದಿದೆ. ಈ ಲೇಖನವು ಅವರ ಬಿಗ್‌ಬಾಸ್ ಪಯಣ ಮತ್ತು ವೈರಲ್ ಆದ ಫೋಟೋದ ಕುರಿತು ವಿವರಿಸುತ್ತದೆ.

Read Full Story

02:21 PM (IST) Nov 22

Amruthadhaare ಶೂಟಿಂಗ್​ ವೇಳೆ ನಡೆಯಬಾರದ್ದೆಲ್ಲಾ ನಡೆದೋಯ್ತು! ವಿಡಿಯೋ ನೋಡಿದ್ರೆ ಬಿದ್ದೂ ಬಿದ್ದೂ ನಗ್ತೀರಾ

ಅಮೃತಧಾರೆ ಧಾರಾವಾಹಿಯ ಶೂಟಿಂಗ್ ಸೆಟ್‌ನಲ್ಲಿ ನಡೆದ ತಮಾಷೆಯ ಕ್ಷಣಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಭೂಮಿಕಾ, ಗೌತಮ್ ಮತ್ತು ಜೈದೇವ್ ಅವರಂತಹ ಪಾತ್ರಗಳು ಡೈಲಾಗ್‌ಗಳನ್ನು ಮರೆತು ಮಾಡಿದ ಎಡವಟ್ಟುಗಳು ಮತ್ತು ನಗುವಿನ ಸನ್ನಿವೇಶಗಳನ್ನು ಇದರಲ್ಲಿ ಸೆರೆಹಿಡಿಯಲಾಗಿದೆ.
Read Full Story

02:21 PM (IST) Nov 22

ಬೆಂಗಳೂರು ದರೋಡೆ - ಪ್ರಕರಣ ಭೇದಿಸುವಲ್ಲಿ ಪೊಲೀಸರಿಗೆ ಸವಾಲಾಗಿದ್ದ ಅಂಶವೇನು?

ಬೆಂಗಳೂರಿನಲ್ಲಿ 7.11 ಕೋಟಿ ರೂ. ಹೊತ್ತೊಯ್ಯುತ್ತಿದ್ದ ನಗದು ವಾಹನ ದರೋಡೆ ಪ್ರಕರಣವನ್ನು ಪೊಲೀಸರು 60 ಗಂಟೆಗಳಲ್ಲಿ ಭೇದಿಸಿದ್ದಾರೆ. ಈ ಪೂರ್ವ ಯೋಜಿತ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 5.76 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
Read Full Story

01:54 PM (IST) Nov 22

ಪವರ್ ಶೇರಿಂಗ್ ಬಾಂಬ್ - ಡಿಕೆಶಿ ತಲೆಮೇಲೆ ಕೈ ಇಟ್ಟು ಸಿದ್ದರಾಮಯ್ಯ ಆಣೆ ಪ್ರಮಾಣ? ಹೆಚ್‌ ವಿಶ್ವನಾಥ ಸ್ಫೋಟಕ ಹೇಳಿಕೆ!

ಬಿಜೆಪಿ ಎಂಎಲ್‌ಸಿ ಎಚ್ ವಿಶ್ವನಾಥ್ ಅವರು ಕಾಂಗ್ರೆಸ್ ಸರ್ಕಾರದ ಅಧಿಕಾರ ಹಂಚಿಕೆ ಕುರಿತು ಗಂಭೀರ ಆರೋಪ ಮಾಡಿದ್ದಾರೆ. ಡಿಕೆಶಿ ಅವರಿಗೆ ನೀಡಿದ ಮಾತನ್ನು ಸಿದ್ದರಾಮಯ್ಯ ಉಳಿಸಿಕೊಳ್ಳಬೇಕು, ವಚನಭ್ರಷ್ಟರಾಗಬಾರದು. ಈ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ  ಖರ್ಗೆ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.

Read Full Story

01:39 PM (IST) Nov 22

ಸರಿ-ತಪ್ಪು ಏನೇ ಇರಲೀ, ಅಶ್ವಿನಿ ಗೌಡ ವಿಚಾರದಲ್ಲಿ ಮಾನವೀಯತೆ ಮೆರೆದ Bigg Boss Kannada 12!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಘು ಅವರು ಅಶ್ವಿನಿ ಎಂದು ಕರೆದರು, ಏನು ಕಿತ್ತಾಕಿದ್ದೀರಾ ಅಂತ ಹೇಳಿದರು ಎಂದು ಬೇಸರ ಮಾಡಿಕೊಂಡ ಅಶ್ವಿನಿ ಗೌಡ ಅವರು ಎರಡು ದಿನಗಳ ಕಾಲ ಊಟ ಬಿಟ್ಟಿದ್ದರು. ಇವರ ವಿಚಾರದಲ್ಲಿ ಬಿಗ್‌ ಬಾಸ್‌ ಮಾನವೀಯತೆ ತೋರಿಸಿದೆ.

 

Read Full Story

01:18 PM (IST) Nov 22

ಬೆಂಗಳೂರು 7 ಕೋಟಿ ದರೋಡೆ - ರಿಕವರಿಯಾದ ಹಣವನ್ನು ಸೂಟ್‌ಕೇಸ್, ಗೋಣಿಚೀಲ, ಬಟ್ಟೆಯಲ್ಲಿ ಕಮಿಷನರ್ ಕಚೇರಿಗೆ ತಂದ ಪೊಲೀಸರು

ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಿಂಗ್‌ಪಿನ್ ಎಕ್ಸೇವಿಯರ್ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದ ದರೋಡೆಕೋರರಿಗೆ ಸಿಎಂಎಸ್ ಸಿಬ್ಬಂದಿಯೇ ಸಹಾಯ ಮಾಡಿದ್ದಾರೆ.

Read Full Story

More Trending News