ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಇಂದು ರಾಜ್ಯದೆಲ್ಲೆಡೆ ಯೋಗಾಭ್ಯಾಸ ನಡೆಸಲಾಗುತ್ತಿದೆ. ವಿಧಾನಸೌಧ ಮುಂಭಾಗದ ಮೆಟ್ಟಿಲಲ್ಲಿ 12 ನೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗಿದೆ. ಆಯುಷ್ ಇಲಾಖೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದ್ದಾರೆ. ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಪರಮೇಶ್ವರ ,ಯು ಟಿ ಖಾದರ್,ಸೇರಿದಂತೆ ಹಲವು ಗಣ್ಯರು. ಭಾಗಿಯಾಗಿದ್ದಾರೆ..ಸುಧಾರಾಣಿ,ವಶಿಷ್ಠ ಸಿಂಹ ,ಹರಿಪ್ರಿಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಯಲ್ಲಿ ಭಾಗಿಯಾಗಿದ್ದಾರೆ.

10:47 AM (IST) Jun 21
ಹೊರ ರಾಜ್ಯಗಳಿಂದ ಬರುವ ಹಾಲಿನ ಗುಣಮಟ್ಟವನ್ನು ಗಡಿಯಲ್ಲಿಯೇ ಪರೀಕ್ಷಿಸಲಾಗುತ್ತಿದ್ದು, ಕಲಬೆರಕೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಯು.ಟಿ.ಖಾದರ್ ಎಚ್ಚರಿಸಿದ್ದಾರೆ. ಜೊತೆಗೆ, ಕಬಾಬ್ನಂತಹ ಆಹಾರ ಪದಾರ್ಥಗಳಲ್ಲಿ ವಿಷಕಾರಿ ಬಣ್ಣ ಬಳಸದಂತೆ ಎಚ್ಚರಿಸಿದರು.
10:21 AM (IST) Jun 21
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಿಸಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ. ಹಿಂದೆ ಪ್ರಕಟಿಸಿದ ಅಂತಿಮ ಮತದಾರ ಪಟ್ಟಿಗೆ ತಡೆ ನೀಡಲಾಗಿದೆ.
09:37 AM (IST) Jun 21
ಹಾಡಹಾಗಲೇ ಮನೆಗೆ ಏಕಾಏಕಿ ನುಗ್ಗಿ ಕಬ್ಬಿಣ್ಣದ ರಾಡ್ ನಿಂದ ಹಲ್ಲೆ ನಡೆಸಿ ಮನೆಯಲ್ಲಿದ್ದ ವಸ್ತುಗಳ ದೋಚಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಕಾರು, ಸ್ಕೂಟರ್, ಐಫೋನ್ ಕಸಿದು ಪರಾರಿಯಾಗಿದ್ದಾರೆ. 8 ಮಂದಿ ವಿರುದ್ದ ಕೇಸ್ ದಾಖಲಾಗಿದೆ.
09:04 AM (IST) Jun 21
ಜೂನ್ 21 ರಂದು ಆಚರಿಸಲಾಗುವ ವಿಶ್ವ ಯೋಗ ದಿನದ ಇತಿಹಾಸ, ಮಹತ್ವ ಮತ್ತು ಭಾರತದ ಪುರಾತನ ಜೀವನಶೈಲಿಯಾದ ಯೋಗದ ಅರ್ಥವನ್ನು ಈ ಲೇಖನ ವಿವರಿಸುತ್ತದೆ. ಇದು ಪತಂಜಲಿ ಮಹರ್ಷಿಗಳ ಅಷ್ಟಾಂಗ ಯೋಗವನ್ನು ಪರಿಚಯಿಸಿ, ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯ ವೃದ್ಧಿಸುವ ಯೋಗದ ಹಲವಾರು ಪ್ರಯೋಜನ ತಿಳಿಯಿರಿ.
08:58 AM (IST) Jun 21
ಪ್ರಕಾಶ್ ರಾಜ್ ವಿರುದ್ಧ ದಿಲೀಪ್ ಕುಮಾರ್ ಎಂಬುವರು ಕೇಸ್ ದಾಖಲಿಸಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್ನಿಂದ ಜಾಮೀನು ರಹಿತ ವಾರಂಟ್ (NBW) ಜಾರಿಯಾಗಿದೆ. ಮುಂದೇನು..? ಈ ಸ್ಟೋರಿ ನೋಡಿ..
08:42 AM (IST) Jun 21
International Yoga Day 2026: ಯೋಗವು ಕೇವಲ ಆಸನ ಅಥವಾ ದೇಹದ ಭಂಗಿಗಳಲ್ಲ. ವ್ಯಾಯಾಮ ಮತ್ತು ಆಸನಗಳು ಯೋಗದ ಒಂದು ಭಾಗವಾಗಿರುವುದು ನಿಜ. ಆದರೆ ಯೋಗವನ್ನು ಕೇವಲ ವ್ಯಾಯಾಮ ಎಂದು ಸೀಮಿತಗೊಳಿಸಬಾರದು ಇದು ಮಾನವ ಜೀವನದ ಸಮಗ್ರ ಬೆಳವಣಿಗೆ ಸಂಪರ್ಕವಾಗಿದೆ. ಯೋಗವು ಒಂದು ಸಂಪೂರ್ಣ ವಿಜ್ಞಾನ.
08:23 AM (IST) Jun 21
ನೀರು ಕುಡಿಯಲು ಬಂದ ಕಾಡೆಮ್ಮೆಯನ್ನು ಹುಲಿ ಬೇಟೆಯಾಡಿದ ಅಪರೂಪದ ದೃಶ್ಯ ಸೆರೆಯಾಗಿದೆ. ಬಂಡಿಪುರದ ಸಫಾರ ವೇಳೆ ಈ ದೃಶ್ಯ ಪ್ರವಾಸಿಗರ ಮೊಬೈಲ್ನಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯದಲ್ಲಿ ಈ ವಿಡಿಯೋ ವೈರಲ್ ಆಗಿದೆ.
07:57 AM (IST) Jun 21
‘ಡೀಸೆಲ್ ದರದ 40 ರೂಪಾಯಿ ವ್ಯಾತ್ಯಾಸ ನೋಡಿ ನನಗೇ ಗಾಬರಿ ಆಯ್ತು’ ಸಿಎಂ ಡಿಕೆ ಶಿವವಕುಮಾರ್ ಹೇಳಿಕೆ ನೀಡಿದ ಹಿನ್ನೆಲೆ ಸಾರಿಗೆ ಬಸ್ಸುಗಳ ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ನಿಗಮಗಳ ಉಳಿವು ಹೂ ಜನರ ಹಿತ ಎರಡನ್ನೂ ಗಮನದಲ್ಲಿಟ್ಕೊಂಡು ತೀರ್ಮನಾ ಮಾಡಲಾಗುತ್ತೆ ಎಂದು ಸಿಎಂ ಹೇಳಿದ್ದಾರೆ.
07:55 AM (IST) Jun 21
ಪ್ರಧಾನಿ ನರೇಂದ್ರ ಮೋದಿಗೆ ವಿಶ್ವಮಟ್ಟದಲ್ಲಿ ಸಿಗುತ್ತಿರುವ ಮನ್ನಣೆ, ಜನಪ್ರಿಯತೆ ಕುರಿತು ಹೇಳುವ ಭರದಲ್ಲಿ ರಾಜ್ಯ ಬಿಜೆಪಿ ಸೋಶಿಯಲ್ ಮೀಡಿಯಾ ತಂಡ ಎಡವಟ್ಟು ಮಾಡಿದೆ. ಇದು ಭಾರಿ ಸದ್ದು ಮಾಡುತ್ತಿದೆ.
07:20 AM (IST) Jun 21
ಧಾರವಾಡದಲ್ಲಿ ಅಂತಾರಾಷ್ಟ್ರೀಯ ಯೋಗದಿನಾಚರಣೆ ಹಿನ್ನಲೆಯಲ್ಲಿ ಅಕಾಡೆಮಿಯಿಂದ ಯೋಗಾಭ್ಯಾಸ ಪ್ರದರ್ಶನ ನೀಡಲಾಗಿದೆ. ಈ ವೇಳೆ ಯೋಗಪಟುಗಳ ಮಲ್ಲಕಂಭ ಪ್ರದರ್ಶನ ಎಲ್ಲರ ಗಮನಸೆಳೆದಿದೆ. ಏಳುಬಾರಿ ವಿಶ್ವದಾಖಲೆ ಮಾಡಿರುವ ಧಾರವಾಡ ಮಲ್ಲಗಂಭ ಅಕಾಡೆಮಿ ಈ ಪ್ರದರ್ಶನ ಆಯೋಜಿಸಿದೆ.