LIVE NOW
Published : Jun 21, 2026, 07:19 AM ISTUpdated : Jun 21, 2026, 10:07 PM IST

Ayogya 2 - ಜಗಳ ಆಗುತ್ತೆ, ಮಾತು ಬರುತ್ತೆ, ಅದೆಲ್ಲ ಮರೆತು ಸಿನಿಮಾಕ್ಕಾಗಿ ಒಂದಾಗೋಣ - ರಚಿತಾ ರಾಮ್‌

ಸಾರಾಂಶ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಇಂದು ರಾಜ್ಯದೆಲ್ಲೆಡೆ ಯೋಗಾಭ್ಯಾಸ ನಡೆಸಲಾಗುತ್ತಿದೆ. ವಿಧಾನಸೌಧ ಮುಂಭಾಗದ ಮೆಟ್ಟಿಲಲ್ಲಿ 12 ನೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗಿದೆ. ಆಯುಷ್ ಇಲಾಖೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದ್ದಾರೆ. ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಪರಮೇಶ್ವರ ,ಯು ಟಿ ಖಾದರ್,ಸೇರಿದಂತೆ ಹಲವು ಗಣ್ಯರು. ಭಾಗಿಯಾಗಿದ್ದಾರೆ..ಸುಧಾರಾಣಿ,ವಶಿಷ್ಠ ಸಿಂಹ ,ಹರಿಪ್ರಿಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಯಲ್ಲಿ ಭಾಗಿಯಾಗಿದ್ದಾರೆ.

Rachita Ram

10:07 PM (IST) Jun 21

Ayogya 2 - ಜಗಳ ಆಗುತ್ತೆ, ಮಾತು ಬರುತ್ತೆ, ಅದೆಲ್ಲ ಮರೆತು ಸಿನಿಮಾಕ್ಕಾಗಿ ಒಂದಾಗೋಣ - ರಚಿತಾ ರಾಮ್‌

ಅಯೋಗ್ಯ 2 ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಕನ್ನಡ ಚಿತ್ರರಂಗದ ಏಕತೆ ಬಗ್ಗೆ ಮಾತನಾಡಿದ್ದಾರೆ. ಸಣ್ಣಪುಟ್ಟ ಜಗಳ, ಮುನಿಸು ಮರೆತು ಸಿನಿಮಾಗಾಗಿ ಒಂದಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದ್ದಾರೆ.

Read Full Story

08:54 PM (IST) Jun 21

'Useless Fellows' - ಡಿಕೆಶಿ ಘೋಷಣೆಗೆ ಸಿಟ್ಟಾದ ಖರ್ಗೆ - ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಗುಡುಗು!

Mallikarjun Kharge: ಬಿ.ಕೆ. ಹರಿಪ್ರಸಾದ್ ಪದಗ್ರಹಣ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಪರ ಘೋಷಣೆಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗರಂ ಆಗಿದ್ದಾರೆ. ವ್ಯಕ್ತಿಪೂಜೆ ಬೇಡ, ಪಕ್ಷದ ಶಿಸ್ತು ಕಾಪಾಡಿ ಎಂದು ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Read Full Story

08:22 PM (IST) Jun 21

Nora Fatehi - ಫಿಫಾ ವೇದಿಕೆಯಲ್ಲಿ ಮಿಂಚಿದ ನೋರಾ - ಆ ಪ್ರದರ್ಶನಕ್ಕೆ ಗೂಗಲ್‌ನಲ್ಲಿ ನಂಬರ್ 1 ಆದ ಬಾಲಿವುಡ್ ಬೆಡಗಿ!

Nora Fatehi: ಫಿಫಾ ವಿಶ್ವಕಪ್ 2026ರ ಉದ್ಘಾಟನಾ ಸಮಾರಂಭದಲ್ಲಿ ನೀಡಿದ ಭರ್ಜರಿ ಪ್ರದರ್ಶನದ ಬಳಿಕ ನೋರಾ ಫತೇಹಿ ಜಾಗತಿಕ ಮಟ್ಟದಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಗೂಗಲ್ ಟ್ರೆಂಡ್ಸ್‌ನಲ್ಲಿ ಬಾಲಿವುಡ್ ತಾರೆಯರನ್ನು..

Read Full Story

06:42 PM (IST) Jun 21

ವಿರಾಟ್‌ ಕೊಹ್ಲಿ, ಸಚಿನ್‌ ಆಟ ಗೊತ್ತು; Vaibhav Suryavanshi ಮುಂದೆ ಹಾಗೆ ಆಗ್ತಾನೆ, ನೋಡ್ತಿರಿ - ಪಾಕ್ ಆಟಗಾರ

ಇಷ್ಟು ವರ್ಷಗಳ ಕಾಲ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿಯ ಆಟ ನೋಡಿದ್ದ ವೀಕ್ಷಕರಿಗೆ ಈಗ ವೈಭವ್‌ ಸೂರ್ಯವಂಶಿ ಆರ್ಭಟ ನೋಡುವ ಸಮಯ ಸಿಕ್ಕಿದೆ. ಕೇವಲ 15 ವರ್ಷದ ಹುಡುಗನೊಬ್ಬ ಜಗತ್ತೇ ತಿರುಗಿ ನೋಡುವಂತೆ ಮಾಡಿದ್ದಾರೆ. ಭಾರತೀಯ ಕ್ರಿಕೆಟ್‌ನ 'ವಂಡರ್ ಕಿಡ್' ವೈಭವ್ ಸೂರ್ಯವಂಶಿ ಸಾಮಾನ್ಯ ಪ್ರತಿಭೆ ಅಲ್ಲ.

Read Full Story

06:20 PM (IST) Jun 21

Shankhpushpi - ಹೀಗೆ ಮಾಡಿದ್ರೆ ಸಿಕ್ಕಾಪಟ್ಟೆ ಶಂಖಪುಷ್ಪ ಬಿಡುತ್ತೆ; ದೇವರಿಗೆ ಪ್ರಿಯ, ಪವರ್‌ಫುಲ್‌

Shankhpushpi or aparajita gardening tips india: ಅಪರಾಜಿತಾ ಗಿಡವನ್ನು ಸರಿಯಾದ ಮಣ್ಣು, ಬಿಸಿಲು ಮತ್ತು ಆರೈಕೆಯಿಂದ ಬೆಳೆಸಬಹುದು. ಆದರೆ, ಇದರಲ್ಲಿ ಹೂಗಳು ಹೆಚ್ಚಾಗಿ ಬರಲು ಟೀ ಪುಡಿ ಮತ್ತು ಫಿಟ್ಕರಿ (ಪಟಿಕ) ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

 

Read Full Story

06:02 PM (IST) Jun 21

Fathers Day Movie - ಕನ್ನಡದ ಮೊದಲ ಬೈಕರ್‌ ಸಿನಿಮಾದಲ್ಲಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ನಟ ಅಜಿತ್‌ ಹಂದೆ!

Fathers Day Kannada movie: ELEVEN ELEMENTS ಸಂಸ್ಥೆ ಲಾಂಛನದಲ್ಲಿ ರಾಜಾರಾಮ್ ರಾಜೇಂದ್ರನ್ ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿರುವ ಚಿತ್ರ "ಫಾದರ್ಸ್ ಡೇ". ತಂದೆ - ಮಗನ ಬಾಂಧವ್ಯ ಸಾರುವ ಈ ಚಿತ್ರದ ಟ್ರೇಲರ್ ಫಾದರ್ಸ್ ಡೇ ದಿನದಂದೆ ಬಿಡುಗಡೆಯಾಗಿದೆ.

Read Full Story

05:46 PM (IST) Jun 21

Yash Movies - ಟಾಕ್ಸಿಕ್ ಅಷ್ಟೇ ಅಲ್ಲ, ಯಶ್ ಕೈಯಲ್ಲಿವೆ ಇನ್ನೂ 5 ದೊಡ್ಡ ಸಿನಿಮಾಗಳು - ಲಿಸ್ಟ್ ಇಲ್ಲಿದೆ

Yash Movies: ಕಳೆದ 4 ವರ್ಷಗಳಿಂದ ದೊಡ್ಡ ಪರದೆಯಿಂದ ದೂರವಿದ್ದ ಯಶ್, ತಮ್ಮ 'ಟಾಕ್ಸಿಕ್' ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. 2026-27ರಲ್ಲಿ ಅವರ ಹಲವು ದೊಡ್ಡ ಸಿನಿಮಾಗಳು ತೆರೆಗೆ ಬರಲಿವೆ. ಪೂರ್ತಿ ಡೀಟೇಲ್ಸ್ ಇಲ್ಲಿದೆ.

Read Full Story

05:22 PM (IST) Jun 21

ನಾಳೆ, ನಾಡಿದ್ದು ಈ ಪ್ರದೇಶಗಳಲ್ಲಿ ವಿದ್ಯುತ್​ ಕಡಿತ - ದಿನಪೂರ್ತಿ ಇರಲ್ಲ ಕರೆಂಟ್​ - ನಿಮ್​ ಏರಿಯಾ ಇದ್ಯಾ ಚೆಕ್​ ಮಾಡಿಕೊಳ್ಳಿ

ಬೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿಯ ಕಾರಣದಿಂದಾಗಿ ಜೂನ್ 22 ಮತ್ತು 23 ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವನ್ನು ಘೋಷಿಸಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಮತ್ತಿಕೆರೆ, ಯಶವಂತಪುರ, HBR ಲೇಔಟ್ ಸೇರಿದಂತೆ ಹಲವು ಪ್ರದೇಶಗಳು ಈ ಪಟ್ಟಿಯಲ್ಲಿವೆ.
Read Full Story

05:06 PM (IST) Jun 21

Sreeleela - ಯೋಗ ನನ್ನ ಜೀವನವೇ ಬದಲಿಸಿತು - ಶ್ರೀಲೀಲಾ ಹೇಳಿದ ಅನುಭವ ವೈರಲ್

Sreeleela: ಅಂತರಾಷ್ಟ್ರೀಯ ಯೋಗ ದಿನದಂದು ನಟಿ ಶ್ರೀಲೀಲಾ ಯೋಗದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಇಂದಿನ ಒತ್ತಡ ಮತ್ತು ಆತಂಕದ ಬದುಕಿನಲ್ಲಿ ಯೋಗ ಪ್ರತಿಯೊಬ್ಬರ ಜೀವನದ ಭಾಗವಾಗಬೇಕು ಎಂದು ಅವರು ಕರೆ ನೀಡಿದ್ದಾರೆ.

Read Full Story

04:56 PM (IST) Jun 21

ಕಿರಾತಕ ಸಿನಿಮಾದಲ್ಲಿಯೇ ಫಿಕ್ಸ್ ಆಗಿತ್ತು ಟಾಕ್ಸಿಕ್ ರಿಲೀಸ್ ಡೇಟ್; ತಾರಾ ಹೇಳಿದ್ದ ಭವಿಷ್ಯನುಡಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಬಿಡುಗಡೆ ದಿನಾಂಕ ಅಂತಿಮಗೊಂಡಿದೆ. ಈ ದಿನಾಂಕಕ್ಕೂ 2011ರ 'ಕಿರಾತಕ' ಸಿನಿಮಾದ ಸಂಭಾಷಣೆಗೂ ಇರುವ ಅಚ್ಚರಿಯ ನಂಟನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಶ್ರಾವಣ ಮಾಸದಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
Read Full Story

04:48 PM (IST) Jun 21

Gangavathi Temple News - ವಿಜಯನಗರ ಕಾಲದ ನಿಧಿಗಾಗಿ ಕಳ್ಳರ ಬೇಟೆ - ಕೊನೆಗೆ ನಡೆದಿದ್ದು ಏನು?

Gangavathi ತಾಲೂಕಿನ ತಿಮಲಾಪುರ ಗ್ರಾಮದ ಪುರಾತನ ಲಕ್ಷ್ಮೀ ದೇಗುಲದಲ್ಲಿ ನಿಧಿಗಾಗಿ ಕಳ್ಳರು ಶೋಧನೆ ನಡೆಸಲು ಯತ್ನಿಸಿದ್ದಾರೆ. ವಿಜಯನಗರ ಕಾಲದ ದೇಗುಲದಲ್ಲಿ ನಿಧಿ ಇದೆ ಎಂಬ ಅನುಮಾನದಿಂದ ದೇಗುಲಕ್ಕೆ ಹಾನಿ ಮಾಡಲಾಗಿದೆ.

Read Full Story

04:35 PM (IST) Jun 21

Bigg Boss ಶೋಗೆ ಹೋಗಿದ್ದು ತಂಗಿ, ಲವ್‌ ಆಗಿದ್ದು ಅಕ್ಕಂಗೆ; Bhavya Gowda ಮನೇಲಿ ಮದುವೆ ಸಂಭ್ರಮ! PHOTOS

Bhavya Gowda Sister Divya Gowda: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶೋನಲ್ಲಿ ಭವ್ಯಾ ಗೌಡ ಭಾಗವಹಿಸಿದ್ದರು. ಈಗ ಧಾರಾವಾಹಿಯಲ್ಲಿ ನಟಿಸುತ್ತಿರುವ ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಅವರು ಮದುವೆ ಆಗಲು ರೆಡಿ ಆಗಿದ್ದಾರೆ. ಹೂ ಮುಡಿಸೋ ಶಾಸ್ತ್ರ ಕೂಡ ಆಗಿದೆ.

Read Full Story

04:13 PM (IST) Jun 21

ಜನ್ಮದಿನದಂದೇ ಹೊಸ ಸಿನಿಮಾ ಮುಹೂರ್ತ; ಕಾವ್ಯ ಶೈವ ಹೀರೋಯಿನ್‌ ಅಂತ ಕೇಳಿದ್ರೆ ಮಾತೇ ಆಡ್ಲಿಲ್ಲ ಗಿಲ್ಲಿ ನಟ

Bigg Boss Gilli Nata New Movie: ಗಿಲ್ಲಿ ನಟ ಅವರಿಗೆ ಇಂದು ಜನ್ಮದಿನದ ವಿಶೇಷ. ಈ ದಿನವೇ ಅವರ ‘ಪಳಾರ್’‌ ಸಿನಿಮಾ ಘೋಷಣೆ ಆಗಿದೆ. ಈ ಹಿಂದೆ ಬಿಗ್‌ ಬಾಸ್‌ ಶೋನಲ್ಲಿದ್ದಾಗ ಗಿಲ್ಲಿ ನಟ ಅವರಿಗೆ ಪಳಾರ್‌ ಗಿಲ್ಲಿ ಎಂಬ ಬಿರುದು ಸಿಕ್ಕಿತ್ತು. ಈಗ ಈ ಹೆಸರಿನಲ್ಲೇ ಸಿನಿಮಾ ಅವಕಾಶ ಸಿಕ್ಕಿದೆ.

Read Full Story

03:51 PM (IST) Jun 21

ದಾವಣಗೆರೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ 19ರ ಹರೆಯದ ನವ ವಿವಾಹಿತೆ ಮೃತದೇಹ ಪತ್ತೆ

19ರ ಹರೆಯದ ಅಮೂಲ್ಯ ಮೃತದೇಹ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಘಟನೆ ಬಳಿಕ ಪತಿ ಹಾಗೂ ಆತನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಅಮೂಲ್ಯ ಬಾಳಲ್ಲಿ ಏನಾಯಿತು?

Read Full Story

02:39 PM (IST) Jun 21

ಶೀಘ್ರದಲ್ಲಿಯೇ ವಿಜಯಪುರ–ತಿರುಪತಿ ನಡುವೆ ನೇರ ರೈಲು ಸೇವೆ - ಟ್ರೈನ್ ರೂಟ್ ಯಾವುದು?

ವಿಜಯಪುರ ಮತ್ತು ತಿರುಪತಿ ನಡುವೆ ನೇರ ರೈಲು ಸಂಚಾರದ ಬಹುಕಾಲದ ಬೇಡಿಕೆಗೆ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸಂಸದ ನಾರಾಯಣಸಾ ಕೆ. ಭಾಂಡೆಗೆ ಅವರ ಮನವಿಯನ್ನು ಮುಂದಿನ ಕ್ರಮಕ್ಕಾಗಿ ರವಾನಿಸಲಾಗಿದ್ದು, ಉತ್ತರ ಕರ್ನಾಟಕದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.
Read Full Story

02:09 PM (IST) Jun 21

Bengaluru - ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್

ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್ ಉಂಟಾಗಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ನಿಲ್ದಾಣದ ಹೊರಗೆ ಅಳವಡಿಸಿದ್ದ ನೇಮ್ ಬೋರ್ಡ್‌ನಲ್ಲಿನ ಬೆಂಕಿ ಕಾಣಿಸಿಕೊಂಡಿದೆ.

Read Full Story

01:51 PM (IST) Jun 21

ಎಸ್ಸೆಸ್ಸೆಲ್ಸಿವರೆಗೆ ಸಹಪಾಠಿಗಳು - ನಾಲ್ಕು ವರ್ಷದಿಂದ ಪ್ರೇಮಿಗಳು- ಈಗ ಮಂತ್ರ ಮಾಂಗಲ್ಯ ಮದುವೆ!

ಮೈಸೂರಿನಲ್ಲಿ, ಬಾಲ್ಯದ ಸಹಪಾಠಿಗಳಾಗಿದ್ದ ಬೇರೆ ಬೇರೆ ಸಮಾಜದ ಜಿ.ಸುಬ್ರಮಣಿ ಮತ್ತು ಎಂ.ಸೌಮ್ಯಾ ಅವರು ನಾಲ್ಕು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಕುವೆಂಪು ಅವರ ಮಂತ್ರಮಾಂಗಲ್ಯದಂತೆ, ಮಾನವ ಮಂಟಪದಲ್ಲಿ ನಡೆದ ಈ ಸರಳ ವಿವಾಹಕ್ಕೆ ಎರಡೂ ಕುಟುಂಬಗಳ ಒಪ್ಪಿಗೆಯೂ ಇತ್ತು.
Read Full Story

01:44 PM (IST) Jun 21

ಕಮಲ್ ಹಾಸನ್ ಮಗಳು ರಜನಿಕಾಂತ್ ಫ್ಯಾನ್ ಆಗಿದ್ದು ಹೇಗೆ? ರಹಸ್ಯ ಬಿಚ್ಚಿಟ್ಟ ಶ್ರುತಿ ಹಾಸನ್!

ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರನ್ನು ಒಂದೇ ಫ್ರೇಮ್‌ನಲ್ಲಿ ನೋಡುವುದೇ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಹಬ್ಬದಂತಿದೆ. ನೆಲ್ಸನ್ ದಿಲೀಪ್ ಕುಮಾರ್ ಅವರ ಈ ಪ್ರಾಜೆಕ್ಟ್ ಸದ್ಯಕ್ಕೆ ಇಂಡಿಯನ್ ಸಿನೆಮಾ ಇಂಡಸ್ಟ್ರಿಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳ ಪಟ್ಟಿಯಲ್ಲಿದೆ.

Read Full Story

01:43 PM (IST) Jun 21

ಯೋಗ ದಿನದಂದು ಅಭಿಮಾನಿಗಳಿಗೆ ಹಬ್ಬದೂಟ; ಜೈಲಿನಲ್ಲಿ Actor Darshan Thoogudeepa ಯೋಗ ನೋಡಿ!

Darshan Thoogudeepa: ಇಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗಾಗಿ ವಿಶೇಷ ಯೋಗ ಶಿಬಿರ ಹಮ್ಮಿಕೊಳ್ಳಲಾಗಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಯೋಗ ದಿನಾಚರಣೆಯಲ್ಲಿ ಭಾಗಿ ಆಗಿದ್ದಾರೆ.

Read Full Story

12:50 PM (IST) Jun 21

3 ದಶಕಗಳ ಬಳಿಕ ಮೊದಲ ಬಾರಿಗೆ ಬರಿದಾದ ಭದ್ರೆಯ ಒಡಲು; ಬರದ ಛಾಯೆ, ಸ್ಥಳೀಯರಲ್ಲಿ ಆತಂಕ

ಸುಮಾರು 30 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭದ್ರಾ ನದಿ ಸಂಪೂರ್ಣ ಬತ್ತಿ ಹೋಗಿದ್ದು, ನದಿ ಪಾತ್ರವು ಮೈದಾನದಂತಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ, ತುಂಬಿ ಹರಿಯಬೇಕಿದ್ದ ನದಿಯಲ್ಲಿ ಯುವಕರು ವಾಲಿಬಾಲ್ ಆಡುತ್ತಿದ್ದು, ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.
Read Full Story

12:46 PM (IST) Jun 21

Shilpa Shetty Fitness - 51ರಲ್ಲೂ 25ರಂತೆ ಕಾಣಲು ಶಿಲ್ಪಾ ಶೆಟ್ಟಿ ಮಾಡುವ 5 ಯೋಗಾಸನಗಳಿವು!

ಅಂತಾರಾಷ್ಟ್ರೀಯ ಯೋಗ ದಿನ 2026 ಹತ್ತಿರ ಬರ್ತಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಫಿಟ್ನೆಸ್‌ಗೆ ಯಾವ ಯೋಗ ಮಾಡ್ತಾರೆ? ಅವರ ಫಿಟ್ನೆಸ್ ಗುಟ್ಟೇನು? ಇಲ್ಲಿದೆ ಮಾಹಿತಿ.
Read Full Story

12:28 PM (IST) Jun 21

ನೆಲಮಂಗಲ ಬಳಿ ಕೆಟ್ಟು ನಿಂತ ರೈಲಿನಿಂದ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪರದಾಟ

ನೆಲಮಂಗಲ ಬಳಿ ರೈಲು ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದೆ. ಪರಿಣಾಮ ಇದೇ ರೈಲಿನಲ್ಲಿ ಸಾಗುತ್ತಿದ್ದ ನೀಟ್ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇತ್ತ ಬೇರೆ ರೈಲಿಗೆ ಮಾರ್ಗವಿಲ್ಲದೆ ಸಂಚಾರ ಅಸ್ತವ್ಯಸ್ತಗೊಂಡಿದೆ.

 

Read Full Story

12:19 PM (IST) Jun 21

2010ರ ಮೇ 23ಕ್ಕೂ ಮುಂಚೆ ನೇಮಕಗೊಂಡು ಸೇವೆಯಲ್ಲಿರುವ ಶಿಕ್ಷಕರಿಗೆ ಸಿಗುತ್ತಾ ವಿನಾಯ್ತಿ?

2010ರ ಮೇ 23ಕ್ಕೂ ಮೊದಲು ನೇಮಕವಾದ ಶಿಕ್ಷಕರಿಗೆ ಟಿಇಟಿ ಪರೀಕ್ಷೆಯಿಂದ ವಿನಾಯತಿ ನೀಡಬೇಕೆಂದು ಆಗ್ರಹಿಸಿ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು. ಈ ನಿಯಮವು ಲಕ್ಷಾಂತರ ಶಿಕ್ಷಕರ ಸೇವೆಗೆ ಕುತ್ತು ತರಲಿದೆ ಎಂದು ಆತಂಕ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
Read Full Story

12:11 PM (IST) Jun 21

ನನ್ನನ್ನು ನಟಿ ಮಾಲಾಶ್ರೀ ಅವರಿಗೆ ಹೋಲಿಸುತ್ತಿದ್ದಾರೆ - ನಟಿ ತನಿಷಾ ಕುಪ್ಪಂಡ ಸಂದರ್ಶನ

ಬಿಗ್‌ಬಾಸ್‌ ನಂತರ ತಮ್ಮ ಸಿನಿ ಬದುಕಿನಲ್ಲಿ ಆದ ಬದಲಾವಣೆಗಳು, ಹೆಚ್ಚಾಗಿ ಪೊಲೀಸ್ ಪಾತ್ರಗಳು ಸಿಗುತ್ತಿರುವುದು ಹಾಗೂ ನಟಿ ಮಾಲಾಶ್ರೀ ಅವರಿಗೆ ತಮ್ಮನ್ನು ಹೋಲಿಸುವುದರ ಬಗ್ಗೆ ನಟಿ ತನಿಶಾ ಕುಪ್ಪಂಡ ಮಾತನಾಡಿದ್ದಾರೆ. ಜೊತೆಗೆ, ವರ್ತೂರ್ ಸಂತೋಷ್ ಜೊತೆಗಿನ ಗಾಸಿಪ್ ಮತ್ತು ತಮ್ಮ ಮದುವೆಯ ಯೋಚನೆಗಳ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.
Read Full Story

11:56 AM (IST) Jun 21

Secret Tips - ಮದುವೆ ಆದವರು, ಆಗದೇ ಇರುವವರು ಎಲ್ಲರೂ ಒಮ್ಮೆ ನೋಡಿ.. ಕಳೆದುಕೊಂಡಿದ್ದೇನು, ಪಡೆದುಕೊಂಡಿದ್ದೇನು?

ಇಲ್ಲಿ ಹೇಳಹೊರಟಿರುವುದು ಮದುವೆ ಆಗಬೇಕೋ ಬೇಡವೋ, ಪೋಷಕರು ಸರಿಯೋ ಅಥವಾ ಮಕ್ಕಳು ಸರಿಯೋ ಎಂಬ ಚರ್ಚೆಯಲ್ಲ. ಆದರೆ, ಮದುವೆ ಆದವರಿಗೂ ಆಗದಿರುವವರಿಗೂ ಇರುವ ವ್ಯತ್ಯಾಸ.. ಏನೆಲ್ಲಾ ಇದೆ? ತುಂಬಾ ಆಸಕ್ತಿಕರವಾಗಿದೆ ನೋಡಿ.. 

Read Full Story

11:48 AM (IST) Jun 21

ವಿಜಯಪುರದಲ್ಲಿ ಖಗೋಳ ವಿಸ್ಮಯ; ಇದು ಬರಗಾಲ? ಮಳೆ ಸೂಚನೆನಾ? ಏನಿದು ಸನ್ ಹ್ಯಾಲೋ ಚಮತ್ಕಾರ?

ವಿಜಯಪುರ ಜಿಲ್ಲೆಯ ಘೋಣಸಗಿ ಗ್ರಾಮದಲ್ಲಿ ಸೂರ್ಯನ ಸುತ್ತ ಬಂಗಾರದ ಉಂಗುರಾಕಾರದ ವಿಸ್ಮಯ ಕಂಡುಬಂದಿದೆ. 'ಸನ್ ಹ್ಯಾಲೋ' ಎಂದು ಕರೆಯಲ್ಪಡುವ ಈ ಪ್ರಕೃತಿ ವಿಸ್ಮಯವು ವಾತಾವರಣದಲ್ಲಿನ ನೀರಿನ ಕಣಗಳಿಂದ ಉಂಟಾಗುತ್ತದೆ.

Read Full Story

10:47 AM (IST) Jun 21

ಹಾಲಿನ ಕಲಬೆರಕೆ, ಕಬಾಬ್‌ಗೆ ವಿಷಕಾರಿ ಬಣ್ಣ ಬಳಸುವವರಿಗೆ ಆರೋಗ್ಯ ಸಚಿವ ಖಾದರ್ ಖಡಕ್ ವಾರ್ನಿಂಗ್!

ಹೊರ ರಾಜ್ಯಗಳಿಂದ ಬರುವ ಹಾಲಿನ ಗುಣಮಟ್ಟವನ್ನು ಗಡಿಯಲ್ಲಿಯೇ ಪರೀಕ್ಷಿಸಲಾಗುತ್ತಿದ್ದು, ಕಲಬೆರಕೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಯು.ಟಿ.ಖಾದರ್‌ ಎಚ್ಚರಿಸಿದ್ದಾರೆ. ಜೊತೆಗೆ, ಕಬಾಬ್‌ನಂತಹ ಆಹಾರ ಪದಾರ್ಥಗಳಲ್ಲಿ ವಿಷಕಾರಿ ಬಣ್ಣ ಬಳಸದಂತೆ ಎಚ್ಚರಿಸಿದರು.

Read Full Story

10:21 AM (IST) Jun 21

ಬೆಂಗಳೂರಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆ, ರಾಜ್ಯ ಚುನಾವಣಾ ಆಯೋಗದಿಂದ ಘೋಷಣೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಿಸಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ. ಹಿಂದೆ ಪ್ರಕಟಿಸಿದ ಅಂತಿಮ ಮತದಾರ ಪಟ್ಟಿಗೆ ತಡೆ ನೀಡಲಾಗಿದೆ.

Read Full Story

09:37 AM (IST) Jun 21

ಹಾಡಹಗಲೇ ಮನೆಗೆ ನುಗ್ಗಿ ಹಲ್ಲೆ ನಡೆಸಿ ಐಫೋನ್, ಲ್ಯಾಪ್‌ಟಾಪ್, ಕಾರು ಕದ್ದು ಪರಾರಿ, ಇಬ್ಬರ ಬಂಧನ

ಹಾಡಹಾಗಲೇ ಮನೆಗೆ ಏಕಾಏಕಿ ನುಗ್ಗಿ ಕಬ್ಬಿಣ್ಣದ ರಾಡ್ ನಿಂದ ಹಲ್ಲೆ ನಡೆಸಿ ಮನೆಯಲ್ಲಿದ್ದ ವಸ್ತುಗಳ ದೋಚಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಕಾರು, ಸ್ಕೂಟರ್, ಐಫೋನ್ ಕಸಿದು ಪರಾರಿಯಾಗಿದ್ದಾರೆ. 8 ಮಂದಿ ವಿರುದ್ದ ಕೇಸ್ ದಾಖಲಾಗಿದೆ.

 

Read Full Story

09:04 AM (IST) Jun 21

International Yoga day - 5000 ವರ್ಷಗಳ ಇತಿಹಾಸವಿರುವ ಯೋಗದಲ್ಲಿ ಅಡಗಿದೆ ರಹಸ್ಯ, ಇದು ತಿಳಿದವರೇ ಸುಖಿ, ಆರೋಗ್ಯವಂತರು!

ಜೂನ್ 21 ರಂದು ಆಚರಿಸಲಾಗುವ ವಿಶ್ವ ಯೋಗ ದಿನದ ಇತಿಹಾಸ, ಮಹತ್ವ ಮತ್ತು ಭಾರತದ ಪುರಾತನ ಜೀವನಶೈಲಿಯಾದ ಯೋಗದ ಅರ್ಥವನ್ನು ಈ ಲೇಖನ ವಿವರಿಸುತ್ತದೆ. ಇದು ಪತಂಜಲಿ ಮಹರ್ಷಿಗಳ ಅಷ್ಟಾಂಗ ಯೋಗವನ್ನು ಪರಿಚಯಿಸಿ, ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯ ವೃದ್ಧಿಸುವ ಯೋಗದ ಹಲವಾರು ಪ್ರಯೋಜನ ತಿಳಿಯಿರಿ.

Read Full Story

08:58 AM (IST) Jun 21

Breaking News - ನಟ ಪ್ರಕಾಶ್ ರಾಜ್ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್; ಇದೀಗ ಬಂಧನದ ಭೀತಿ!

ಪ್ರಕಾಶ್ ರಾಜ್ ವಿರುದ್ಧ ದಿಲೀಪ್ ಕುಮಾರ್ ಎಂಬುವರು ಕೇಸ್ ದಾಖಲಿಸಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಜಾಮೀನು ರಹಿತ ವಾರಂಟ್ (NBW) ಜಾರಿಯಾಗಿದೆ. ಮುಂದೇನು..? ಈ ಸ್ಟೋರಿ ನೋಡಿ..

Read Full Story

08:42 AM (IST) Jun 21

World Yoga day 2026 - ನಿಮ್ಮೊಳಗೆ ನಿಮ್ಮನ್ನು ಸಂಪರ್ಕಿಸುವುದೇ ಯೋಗ! | ಗುರುದೇವ ಶ್ರೀ ಶ್ರೀ ರವಿ ಶಂಕರ್‌

International Yoga Day 2026: ಯೋಗವು ಕೇವಲ ಆಸನ ಅಥವಾ ದೇಹದ ಭಂಗಿಗಳಲ್ಲ. ವ್ಯಾಯಾಮ ಮತ್ತು ಆಸನಗಳು ಯೋಗದ ಒಂದು ಭಾಗವಾಗಿರುವುದು ನಿಜ. ಆದರೆ ಯೋಗವನ್ನು ಕೇವಲ ವ್ಯಾಯಾಮ ಎಂದು ಸೀಮಿತಗೊಳಿಸಬಾರದು ಇದು ಮಾನವ ಜೀವನದ ಸಮಗ್ರ ಬೆಳವಣಿಗೆ ಸಂಪರ್ಕವಾಗಿದೆ. ಯೋಗವು ಒಂದು ಸಂಪೂರ್ಣ ವಿಜ್ಞಾನ.

 

Read Full Story

08:23 AM (IST) Jun 21

ನೀರು ಕುಡಿಯಲು ಬಂದ ಕಾಡೆಮ್ಮೆ ಬೇಟೆಯಾಡಿದ ಹುಲಿ, ಪ್ರವಾಸಿಗರಿಂದ ಬಂಡಿಪುರದ ರೋಚಕ ದೃಶ್ಯ ಸೆರೆ

ನೀರು ಕುಡಿಯಲು ಬಂದ ಕಾಡೆಮ್ಮೆಯನ್ನು ಹುಲಿ ಬೇಟೆಯಾಡಿದ ಅಪರೂಪದ ದೃಶ್ಯ ಸೆರೆಯಾಗಿದೆ. ಬಂಡಿಪುರದ ಸಫಾರ ವೇಳೆ ಈ ದೃಶ್ಯ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯದಲ್ಲಿ ಈ ವಿಡಿಯೋ ವೈರಲ್ ಆಗಿದೆ.

 

Read Full Story

07:57 AM (IST) Jun 21

ಬಸ್‌ ಪ್ರಯಾಣ ದರ ಏರಿಕೆ ಆಗುತ್ತಾ? ಡೀಸೆಲ್‌ ದರದ ₹40 ವ್ಯತ್ಯಾಸ ನೋಡಿ ಗಾಬರಿ ಆಯಿತು ಎಂದ ಸಿಎಂ

‘ಡೀಸೆಲ್ ದರದ 40 ರೂಪಾಯಿ ವ್ಯಾತ್ಯಾಸ ನೋಡಿ ನನಗೇ ಗಾಬರಿ ಆಯ್ತು’ ಸಿಎಂ ಡಿಕೆ ಶಿವವಕುಮಾರ್ ಹೇಳಿಕೆ ನೀಡಿದ ಹಿನ್ನೆಲೆ ಸಾರಿಗೆ ಬಸ್ಸುಗಳ ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ನಿಗಮಗಳ ಉಳಿವು ಹೂ ಜನರ ಹಿತ ಎರಡನ್ನೂ ಗಮನದಲ್ಲಿಟ್ಕೊಂಡು ತೀರ್ಮನಾ ಮಾಡಲಾಗುತ್ತೆ ಎಂದು ಸಿಎಂ ಹೇಳಿದ್ದಾರೆ.

Read Full Story

07:55 AM (IST) Jun 21

ಮೋದಿಗೆ ಸಿಗುತ್ತಿರುವ ಮನ್ನಣೆ ಹೇಳುವ ಭರದಲ್ಲಿ ರಾಜ್ಯ ಬಿಜೆಪಿ ಸೋಶಿಯಲ್ ಮೀಡಿಯಾದಿಂದ ಎಡವಟ್ಟು

ಪ್ರಧಾನಿ ನರೇಂದ್ರ ಮೋದಿಗೆ ವಿಶ್ವಮಟ್ಟದಲ್ಲಿ ಸಿಗುತ್ತಿರುವ ಮನ್ನಣೆ, ಜನಪ್ರಿಯತೆ ಕುರಿತು ಹೇಳುವ ಭರದಲ್ಲಿ ರಾಜ್ಯ ಬಿಜೆಪಿ ಸೋಶಿಯಲ್ ಮೀಡಿಯಾ ತಂಡ ಎಡವಟ್ಟು ಮಾಡಿದೆ. ಇದು ಭಾರಿ ಸದ್ದು ಮಾಡುತ್ತಿದೆ.

Read Full Story

07:20 AM (IST) Jun 21

ಯೋಗ ಪಟುಗಳ ಗಮನ ಸೆಳೆದ ಮಲ್ಲಗಂಭ ಪ್ರದರ್ಶನ‌

ಧಾರವಾಡದಲ್ಲಿ ಅಂತಾರಾಷ್ಟ್ರೀಯ ಯೋಗದಿನಾಚರಣೆ ಹಿನ್ನಲೆಯಲ್ಲಿ ಅಕಾಡೆಮಿಯಿಂದ ಯೋಗಾಭ್ಯಾಸ ಪ್ರದರ್ಶನ ನೀಡಲಾಗಿದೆ. ಈ ವೇಳೆ ಯೋಗಪಟುಗಳ ಮಲ್ಲಕಂಭ ಪ್ರದರ್ಶನ ಎಲ್ಲರ ಗಮನಸೆಳೆದಿದೆ. ಏಳುಬಾರಿ ವಿಶ್ವದಾಖಲೆ ಮಾಡಿರುವ ಧಾರವಾಡ ಮಲ್ಲಗಂಭ ಅಕಾಡೆಮಿ ಈ ಪ್ರದರ್ಶನ ಆಯೋಜಿಸಿದೆ.


More Trending News