Published : Oct 21, 2025, 07:23 AM ISTUpdated : Oct 21, 2025, 10:31 PM IST

Karnataka News Live: ಬೈಕ್‌ಗೆ ಸಿಮೆಂಟ್ ಟ್ಯಾಂಕರ್ ಡಿಕ್ಕಿ, ಕಲಬುರಗಿ ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಸಾವು

ಸಾರಾಂಶ

ಬೆಂಗಳೂರು: ‘ಆಲ್‌ ಐಸ್ ಆನ್‌ ಚಿತ್ತಾಪುರ್‌ (ಎಲ್ಲರ ಕಣ್ಣು ಚಿತ್ತಾಪುರದತ್ತ)’ಎಂಬ ಹ್ಯಾಷ್‌ಟ್ಯಾಗ್‌ ಮಾಡಿ, ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಕಾರ್ಯಕರ್ತರು ಇದನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಇದುವರೆಗೆ ವಿದೇಶಗಳಲ್ಲಿ ನಡೆಯುತ್ತಿದ್ದ ಆಲ್‌ ಐಸ್‌ ಆನ್ ಅಭಿಯಾನ ಕರ್ನಾಟಕಕ್ಕೂ ಕಾಲಿಟ್ಟಂತಾಗಿದೆ. ನ್ಯಾಯಾಲಯದ ಸೂಚನೆ ಮೇರೆಗೆ, ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ ನಡೆಸಲು ಈಗಾಗಲೇ ಸ್ಥಳೀಯ ಪುರಸಭೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗೆ ಆರ್‌ಎಸ್‌ಎಸ್‌ ವತಿಯಿಂದ ಮನವಿ ಸಲ್ಲಿಸಲಾಗಿದೆ. ಸುಮಾರು 25 ಸಾವಿರ ಸ್ವಯಂ ಸೇವಕರನ್ನು ಸೇರಿಸಿ, ಶಕ್ತಿ ಪ್ರದರ್ಶಿಸಲು ಸಂಘ ಪರಿವಾರದ ನಾಯಕರು ತೀರ್ಮಾನಿಸಿದ್ದಾರೆ.

Kalaburagi Accident

10:31 PM (IST) Oct 21

ಬೈಕ್‌ಗೆ ಸಿಮೆಂಟ್ ಟ್ಯಾಂಕರ್ ಡಿಕ್ಕಿ, ಕಲಬುರಗಿ ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಸಾವು

ಬೈಕ್‌ಗೆ ಸಿಮೆಂಟ್ ಟ್ಯಾಂಕರ್ ಡಿಕ್ಕಿ, ಕಲಬುರಗಿ ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಸಾವು, ರಿಂಗ್ ರಸ್ತೆಯಲ್ಲಿ ಆ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ.

Read Full Story

09:41 PM (IST) Oct 21

Photos - ದೀಪಾವಳಿಗೆ ಫಸ್ಟ್‌ ಟೈಮ್ ಮಗಳು ದುವಾ ಮುಖ ತೋರಿಸಿದ Deepika Padukone, Ranveer Singh ದಂಪತಿ!

Deepika Padukone‌ Daughter Photos: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಪಾಲಕರಾಗಿ ಬಡ್ತಿ ಪಡೆದು ಒಂದು ವರ್ಷವಾಗಿದೆ. ಕಳೆದ ಒಂದು ವರ್ಷದಿಂದ ಇವರಿಬ್ಬರು ಮಗಳ ಮುಖವನ್ನು ಪಬ್ಲಿಕ್‌ಗೆ ತೋರಿಸಿರಲಿಲ್ಲ. ಈಗ ಫೋಟೋ ಹಂಚಿಕೊಂಡಿದ್ದಾರೆ.

 

Read Full Story

08:28 PM (IST) Oct 21

ಬೆಂಗಳೂರು ಸ್ವಿಗ್ಗಿ, ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ಸ್‌ಗಳ ರಾಬರಿ ಮಾಡ್ತಿದ್ದ ನೇಪಾಳಿ ಗ್ಯಾಂಗ್ ಅರೆಸ್ಟ್!

ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿದ್ದ ನೇಪಾಳಿ ಮೂಲದ ನಾಲ್ವರ ಗ್ಯಾಂಗ್ ಅನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 9 ಮೊಬೈಲ್ ಫೋನ್‌ಗಳು ಮತ್ತು ಮೂರು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾದೆ.

Read Full Story

08:15 PM (IST) Oct 21

ಯುಎಸ್ ಎಚ್-1ಬಿ ವೀಸಾ ಶುಲ್ಕ ಹೆಚ್ಚಳ ರದ್ದುಗೊಳಿಸಿದ ಟ್ರಂಪ್, ಜೊತೆಗೆ ಭರ್ಜರಿ ವಿನಾಯಿತಿ ಘೋಷಣೆ

ಎಚ್-1ಬಿ ವೀಸಾಗೆ ಟ್ರಂಪ್ ಆಡಳಿತ ವಿಧಿಸಿದ್ದ ಭಾರಿ ಶುಲ್ಕ ಹೆಚ್ಚಳದಲ್ಲಿ ದೊಡ್ಡ ವಿನಾಯಿತಿಗಳನ್ನು ಘೋಷಿಸಲಾಗಿದೆ. ಈ ಹೊಸ ಪ್ರಕಟಣೆಯ ಪ್ರಕಾರ, ಈಗಾಗಲೇ ಎಚ್-1ಬಿ ವೀಸಾ ಹೊಂದಿರುವವರು ಮತ್ತು ನಿರ್ದಿಷ್ಟ ದಿನಾಂಕದ ಮೊದಲು ಅರ್ಜಿ ಸಲ್ಲಿಸುವವರಿಗೆ ಈ ಶುಲ್ಕ ಹೆಚ್ಚಳ ಅನ್ವಯಿಸುವುದಿಲ್ಲ. 

Read Full Story

07:35 PM (IST) Oct 21

Lakshmi Nivasa ಜಯಂತ್​ಗೆ ಪ್ರಶಸ್ತಿಯಲ್ಲಿ ಅನ್ಯಾಯ? ನಟ ದೀಪಕ್​ ಅಭಿಮಾನಿಗಳು ಸಿಕ್ಕಾಪಟ್ಟೆ ಗರಂ

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಸೈಕೋ ಜಯಂತ್ ಪಾತ್ರದ ಮೂಲಕ ದೀಪಕ್ ಸುಬ್ರಹ್ಮಣ್ಯ ಅದ್ಭುತ ನಟನೆಯಿಂದ ಗಮನ ಸೆಳೆದಿದ್ದಾರೆ. ಆದರೆ, ಈ ಬಾರಿಯ ಜೀ ಕುಟುಂಬ ಪ್ರಶಸ್ತಿ ಸಮಾರಂಭದಲ್ಲಿ ಅವರಿಗೆ ಯಾವುದೇ ಪ್ರಶಸ್ತಿ ಲಭಿಸದಿರುವುದು ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
Read Full Story

06:35 PM (IST) Oct 21

ಪ್ರದೀಪ್ ಈಶ್ವರ್ ಜ್ಞಾನವಿಲ್ಲದ ಮಾತಿನಿಂದ ದೇಶದ ಜನ ನಮ್ಮ ಕ್ಷೇತ್ರ ನೋಡಿ ನಗ್ತಿದ್ದಾರೆ; ಸಂಸದ ಡಿ. ಸುಧಾಕರ್

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಜ್ಞಾನವಿಲ್ಲದ ಮಾತುಗಳಿಂದ ಕ್ಷೇತ್ರವು ನಗೆಪಾಟಲಿಗೀಡಾಗುತ್ತಿದೆ ಎಂದು ಸಂಸದ ಡಾ.ಕೆ. ಸುಧಾಕರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ, ಕಾಂಗ್ರೆಸ್ ಸರ್ಕಾರವು ಹಿಂದೂಗಳನ್ನು ಕೆರಳಿಸುತ್ತಾ, ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

Read Full Story

06:28 PM (IST) Oct 21

RSS ಪಥಸಂಚಲನದ ವಿಡಿಯೋ ಜೊತೆ, ಬಾಲ್ಯದ ಕಹಿ ಸತ್ಯವನ್ನೂ ಅನಾವರಣಗೊಳಿಸಿದ ನಟ ಜಗ್ಗೇಶ್

ನಟ ಜಗ್ಗೇಶ್ ಅವರು ಆರ್​ಎಸ್​ಎಸ್​ ಪಥಸಂಚಲನದಲ್ಲಿ ಭಾಗಿಯಾದ ವಿಡಿಯೋ ಹಂಚಿಕೊಂಡಿದ್ದಾರೆ. ಇದರ ಜೊತೆಗೆ, ತಾವು ಹುಟ್ಟಿಬೆಳೆದ ಗುಡಿಸಲಿನ ಫೋಟೋ ಶೇರ್ ಮಾಡಿ, ಬಡತನದಿಂದ ನವರಸನಾಯಕನಾಗಿ ಬೆಳೆದ ತಮ್ಮ ಗೆಲುವಿನ ಕಥೆಯನ್ನು ವಿವರಿಸಿ, ಕೊರಗುವವರಿಗೆ ಸ್ಫೂರ್ತಿದಾಯಕ ಪಾಠ ಹೇಳಿದ್ದಾರೆ.

Read Full Story

06:22 PM (IST) Oct 21

ನಮ್ಮ ಸಾವ್ಕಾರನ ಬೆನ್ನಿಗೆ ಚಾಕು ಹಾಕಿದಿರಿ, ಶಾಸಕ ರಾಜು ಕಾಗೆ-ಸವದಿ ಜೋಡೆತ್ತುಗಳ ನಡುವೆ ಆಡಿಯೋ ಬಿರುಗಾಳಿ!

ಚಿಕ್ಕೋಡಿ ಡಿಸಿಸಿ ಬ್ಯಾಂಕ್ ಚುನಾವಣೆ ಬಳಿಕ, ಶಾಸಕ ರಾಜು ಕಾಗೆ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಣಗಳ ನಡುವೆ ಭಿನ್ನಮತ ಸ್ಫೋಟಗೊಂಡಿದೆ. ಸವದಿ ಬೆಂಬಲಿಗರು ಕಾಗೆ ವಿರುದ್ಧ "ಬೆನ್ನಿಗೆ ಚೂರಿ ಹಾಕಿದ್ದೀರಿ" ಎಂದು ಆರೋಪಿಸಿರುವ ಆಡಿಯೋ ವೈರಲ್ ಆಗಿದೆ.

Read Full Story

05:47 PM (IST) Oct 21

Bigg Boss, ಅವಳು ಸಂಸ್ಕಾರಿಯಲ್ಲ, Adut Toys ಮಾರಾಟ ಮಾಡಿದ್ಳು - ವೈಲ್ಡ್‌ಕಾರ್ಡ್‌ಎಂಟ್ರಿಯಿಂದ ಸತ್ಯ ಬಯಲು!

Bigg Boss 19 Show: ಬಿಗ್ ಬಾಸ್ 19 ಶೋನಲ್ಲಿ ತಾನ್ಯಾ ಮಿತ್ತಲ್‌ ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡುತ್ತಿದ್ದಾರೆ. ತಾನು ಆಗರ್ಭ ಶ್ರೀಮಂತೆ, ನಮ್ಮದು ತುಂಬ ಬ್ಯುಸಿನೆಸ್‌ ಇದೆ ಎಂದು ಹೇಳಿಕೊಳ್ಳುವ ಅವರು ದೊಡ್ಮನೆಯಲ್ಲಿ ನಿತ್ಯವೂ ಸೀರೆ ಧರಿಸುತ್ತಾರೆ.

 

Read Full Story

05:42 PM (IST) Oct 21

Naa Ninna Bidalaare - ಸಂಜೀವಿನಿ ಸಿಗದೇ ದುರ್ಗಾ ಪರದಾಟ! ಹಿತಾ ಬ*ಲಿಗೆ ವೇದಿಕೆ ಸಿದ್ಧ- ಮುಂದೇನು?

ದುಷ್ಟ ಶಕ್ತಿ ಪಡೆಯಲು ಮಾಳವಿಕಾ, ಹಿತಾಳನ್ನು ಬ*ಲಿ ಕೊಡಲು ಸಿದ್ಧತೆ ನಡೆಸಿದ್ದಾಳೆ. ಇನ್ನೊಂದೆಡೆ, ಹಿತಾಳನ್ನು ಉಳಿಸಲು ದುರ್ಗಾ, ದೇವಿಯ ಕಳೆದುಹೋದ ಗೆಜ್ಜೆ, ಬಳೆಗಳನ್ನು ಹುಡುಕಿ ಇದೀಗ ಸಂಜೀವಿನಿ ಮೂಲಿಕೆಗಾಗಿ ಪರದಾಡುತ್ತಿದ್ದಾಳೆ. ಬ*ಲಿಗೂ, ಸಂಜೀವಿನಿ ಹುಡುಕಾಟಕ್ಕೂ ಕ್ಷಣಗಣನೆ ಆರಂಭವಾಗಿದೆ.

Read Full Story

05:08 PM (IST) Oct 21

ಹಾಸನಾಂಬೆ ಸನ್ನಿಧಿಯಲ್ಲಿ ನಡೆಯಿತು ಪವಾಡ - ಇದು ಮೈಸೂರು ಮಹಿಳೆಯ ₹4 ಲಕ್ಷದ ಮಾಂಗಲ್ಯ ಸರದ ಕಥೆ!

ಹಾಸನಾಂಬೆ ದೇವಿಯ ದರ್ಶನೋತ್ಸವದಲ್ಲಿ, ಮೈಸೂರಿನ ಮಹಿಳೆಯೊಬ್ಬರು ಕಳೆದುಕೊಂಡಿದ್ದ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಮತ್ತೊಬ್ಬ ಭಕ್ತರು ಪ್ರಾಮಾಣಿಕವಾಗಿ ಹಿಂತಿರುಗಿಸಿದ್ದಾರೆ. ಈ ಘಟನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Read Full Story

04:40 PM (IST) Oct 21

Brahmagantu- ಎಲ್ಲೆಲ್ಲೂ ಉರಿ ಉರಿ - ಸೌಂದರ್ಯಳ ನೋಡಿ ಅಯ್ಯೋ ಪಾಪ ಅಂತಿರೋ ಫ್ಯಾನ್ಸ್​ - ಆಗಿದ್ದೇನು?

ಬ್ರಹ್ಮಗಂಟು ಸೀರಿಯಲ್‌ನಲ್ಲಿ, ದೀಪಾಳ ಮೇಲೆ ಸೇಡು ತೀರಿಸಿಕೊಳ್ಳಲು ಚಿರು ಮತ್ತು ದಿಶಾಳನ್ನು ಒಂದು ಮಾಡಲು ಸೌಂದರ್ಯ ಪ್ರಯತ್ನಿಸುತ್ತಿದ್ದಾಳೆ. ಆದರೆ, ದಿಶಾ ರೂಪದಲ್ಲಿರುವ ದೀಪಾ, 'ವಸ್ತ್ರದೀಪ' ಡಿಸೈನ್ ಮೂಲಕ ಮತ್ತು ತನ್ನ ವರ್ತನೆಯಿಂದ ಸೌಂದರ್ಯಳಿಗೆ ತಿರುಗೇಟು ನೀಡುತ್ತಿದ್ದಾಳೆ.  

Read Full Story

04:32 PM (IST) Oct 21

ಮದುವೆಯಾಗಿ 5 ತಿಂಗಳಲ್ಲೇ ಹೆಂಡ್ತಿ ಕಿರುಕುಳ ತಾಳಲಾಗದೇ ರೈಲಿಗೆ ತಲೆಕೊಟ್ಟ ನವವಿವಾಹಿತ!

ಕೇವಲ ಐದು ತಿಂಗಳ ಹಿಂದೆ ವಿವಾಹವಾಗಿದ್ದ ಯುವಕನೊಬ್ಬ, ಪತ್ನಿಯಿಂದ ತೀವ್ರ ಕಿರುಕುಳ ತಾಳಲಾರದೆ ಬಿಡದಿ ಬಳಿ ರೈಲಿಗೆ ತಲೆಕೊಟ್ಟಿದ್ದಾನೆ. ಸಾವಿಗೂ ಮುನ್ನ ಆತ ಚಿತ್ರೀಕರಿಸಿದ ವಿಡಿಯೋದಲ್ಲಿ ತನ್ನ ಸಾವಿಗೆ ಪತ್ನಿಯೇ ಕಾರಣ ಎಂದು ಆರೋಪಿಸಿದ್ದು, ಈ ವಿಡಿಯೋ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.

Read Full Story

04:01 PM (IST) Oct 21

ಭಾಷಣದ ವೇಳೆ ಡೀಸೆಲ್‌ ಪೆಟ್ರೋಲ್ ಬೆಲೆ ಕಡಿಮೆ ಮಾಡಬೇಕೆಂದು ಕೂಗಾಡಿದ ಸಬಿಕ, ಮೋದಿಗೆ ವೋಟ್ ಒತ್ತಿದ್ಯಲ್ಲ ಆಗ ನೆನಪಾಗಿಲ್ವಾ ಎಂದ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಾಂಧಿನಗರದಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ದಿನೇಶ್ ಗುಂಡೂರಾವ್ ಅವರನ್ನು ಶ್ಲಾಘಿಸಿ, ಬೆಂಗಳೂರು ಅಭಿವೃದ್ಧಿಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಡಿಸಿಎಂ ಜೊತೆಯಲ್ಲಿದ್ದರು.

Read Full Story

03:58 PM (IST) Oct 21

ವಿಜಯ್ ಮಲ್ಯ ಶಬರಿಮಲೆ ದೇಗುಲಕ್ಕೆ ಕೊಟ್ಟಿದ್ದ ಚಿನ್ನದ ಹೊದಿಕೆ ಕದ್ದು ಬೆಂಗಳೂರಿಗೆ ತಂದಿದ್ದ ಕಳ್ಳರು!

ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣದ ಹಿಂದಿನ ಸಂಚು ಬಯಲಾಗಬೇಕೆಂದು ಹೈಕೋರ್ಟ್ ಹೇಳಿದೆ. ತನಿಖಾ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಮುಚ್ಚಿದ ಕೋಣೆಯಲ್ಲಿ ವಿಚಾರಣೆ ನಡೆಸಿ, ಸ್ವಯಂಪ್ರೇರಿತವಾಗಿ ಹೊಸ ಪ್ರಕರಣ ದಾಖಲಿಸಿಕೊಂಡಿದೆ. ಇದು ಯೋಜಿತ ಕಳ್ಳತನ ಎಂದು ವಿಶೇಷ ತನಿಖಾ ತಂಡ ಖಚಿತಪಡಿಸಿದೆ.

Read Full Story

03:54 PM (IST) Oct 21

ಆ ಮಾತು ಹೇಳಿದ್ದಕ್ಕೆ Bigg Boss ಮನೆಯಲ್ಲೇ ಮಹಿಳೆಯಿಂದ ಚಪ್ಪಲಿ ಏಟು ತಿಂದ ಸ್ಪರ್ಧಿ! ಯಾರದು?

Bigg Boss Show: ಬಿಗ್ ಬಾಸ್ ಕನ್ನಡ ಸೀಸನ್ 19ರಲ್ಲಿ ಭಾಗವಹಿಸಿರುವ ಶೆಹಬಾಜ್ ಅವರು, ತಮ್ಮ ಕಾಮಿಡಿಯಿಂದಲೇ ದೊಡ್ಮನೆಯಲ್ಲಿ ನಿತ್ಯವೂ ನಗು ತರಿಸುತ್ತಿದ್ದಾರೆ. ಇವರಿಂದಲೇ ಉಳಿದವರು ಕೂಡ ಸ್ವಲ್ಪ ಜಗಳ ಬಿಟ್ಟು, ನಗೋಕೆ ಆರಂಭಿಸಿದ್ದಾರೆ. ಕಾಮಿಡಿ ಮಾಡುತ್ತಿದ್ದ ಶೆಹಬಾಜ್‌ಗೆ ಈಗ ಚಪ್ಪಲಿ ಏಟು ಸಿಕ್ಕಿದೆ.

 

Read Full Story

03:42 PM (IST) Oct 21

ವಿಧಾನಸೌಧದ ಬಾಗಿಲು ಮುಚ್ಚಿಸಲು ಹೋಗಿದ್ಯಾಕೆ ನಟ ಉಪೇಂದ್ರ? ಶಿವಣ್ಣನ ಎದುರು ರಿವೀಲ್​- ನಟನ ಬಾಯಲ್ಲೇ ಕೇಳಿ

ರಿಯಲ್ ಸ್ಟಾರ್ ಉಪೇಂದ್ರ  ವಿಧಾನಸೌಧದ ಬಾಗಿಲು ಹಾಕಿಸುವುದಾಗಿ ಶಿವರಾಜ್ ಕುಮಾರ್ ಜೊತೆಗಿನ ಹಳೆಯ ಸಂದರ್ಶನವೊಂದರಲ್ಲಿ ಹೇಳಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ. ಅವರು ಹೀಗೆ ಹೇಳಿದ್ಯಾಕೆ? ಅದಕ್ಕೆ ಕಾರಣವೇನು? 

Read Full Story

03:32 PM (IST) Oct 21

ಚಿತ್ತಾಪುರದಲ್ಲಿ ನ.2ರ RSS ಪಥಸಂಚಲನ - ಕೋರ್ಟ್‌ ನಿರ್ದೇಶದ ಬಳಿಕ ಜಿಲ್ಲಾಧಿಕಾರಿಗೆ ಹೊಸ ಅರ್ಜಿ ಸಲ್ಲಿಕೆ

ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ವಿವಾದ ತೀವ್ರಗೊಂಡಿದೆ. ಹೈಕೋರ್ಟ್ ನಿರ್ದೇಶನದಂತೆ ಆರ್‌ಎಸ್‌ಎಸ್ ಜಿಲ್ಲಾಧಿಕಾರಿಗೆ ಮರು ಮನವಿ ಸಲ್ಲಿಸಿದ್ದು, ಭೀಮ್ ಆರ್ಮಿ ವಿರೋಧದ ನಡುವೆ ಜಿಲ್ಲಾಡಳಿತದ ನಿರ್ಧಾರ ಕುತೂಹಲ ಮೂಡಿಸಿದೆ.
Read Full Story

03:07 PM (IST) Oct 21

ಚಿತ್ತಾಪುರದಲ್ಲಿ RSS ಪಥಸಂಚಲನ - ಪ್ರಿಯಾಂಕ್ ಖರ್ಗೆ ಬಳಿಕ ಸೆಡ್ಡು ಹೊಡೆದ ಭೀಮ್ ಆರ್ಮಿ!

ಚಿತ್ತಾಪುರದಲ್ಲಿ ನವೆಂಬರ್ 2 ರಂದು ಆರ್‌ಎಸ್‌ಎಸ್ ಹಮ್ಮಿಕೊಂಡಿರುವ ಪಥಸಂಚಲನಕ್ಕೆ ಭೀಮ್ ಆರ್ಮಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆರ್‌ಎಸ್‌ಎಸ್‌ನ ನೋಂದಣಿ ಪ್ರಶ್ನಿಸಿರುವ ಭೀಮ್ ಆರ್ಮಿ, ಅದೇ ದಿನ ತಮಗೂ ಪಥಸಂಚಲನಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದು, ಇದು ಸ್ಥಳೀಯವಾಗಿ ಸಂಘರ್ಷಕ್ಕೆ ಕಾರಣವಾಗಬಹುದು.

Read Full Story

03:07 PM (IST) Oct 21

ತಬ್ಬಿಕೊಂಡು ಮುತ್ತಿಕ್ಕಿದ, ಮತ್ತೆ ಏನೇನೋ..,ಪರೀಕ್ಷೆ ನೆಪದಲ್ಲಿ ಕಿರುಕುಳ ನೀಡಿದ ಬೆಂಗಳೂರು ವೈದ್ಯ ಅರೆಸ್ಟ್

ತಬ್ಬಿಕೊಂಡು ಮುತ್ತಿಕ್ಕಿದ, ಮತ್ತೆ ಏನೇನೋ..,ಪರೀಕ್ಷೆ ನೆಪದಲ್ಲಿ ಕಿರುಕುಳ ನೀಡಿದ ಬೆಂಗಳೂರು ವೈದ್ಯ ಅರೆಸ್ಟ್ ಮಾಡಲಾಗಿದೆ. ವೈದ್ಯ ವಿರುದ್ದ ಕುಟುಂಬಸ್ಥರು ಭಾರಿ ಪ್ರತಿಭಟನೆ ನಡೆಸಿದ್ದರೆ, ಇತ್ತ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

Read Full Story

02:59 PM (IST) Oct 21

Karna Serial - ಒಡೆದ ಹೃದಯಗಳ ಪಿಸುಮಾತಿಗೆ ಸಾಕ್ಷಿಯಾದ ಕರ್ಣ-ನಿಧಿ ಮೌನ, ಅಸಹಾಯಕಳಾಗಿ ನಿಂತ ನಿಧಿ

ಸ್ವಾರ್ಥಿ ರಮೇಶನ ಕುತಂತ್ರದಿಂದಾಗಿ ಕರ್ಣನು ನಿಧಿಯ ಬದಲು ಆಕೆಯ ಅಕ್ಕ ನಿತ್ಯಾಳನ್ನು ಮದುವೆಯಾಗಿದ್ದಾನೆ. ಪ್ರೀತಿ ಕಳೆದುಕೊಂಡು ನೊಂದಿರುವ ನಿಧಿಗೆ, ರಮೇಶನು ಕರ್ಣನ ಮೇಲೆ ದ್ವೇಷ ಬರುವಂತೆ ಮಾಡುತ್ತಿದ್ದಾನೆ. ಆದರೆ, ಈ ಮದುವೆಯ ಹಿಂದೆ ನಿತ್ಯಾಳ ಗರ್ಭಧಾರಣೆಯ ರಹಸ್ಯ ಅಡಗಿದೆ.
Read Full Story

02:41 PM (IST) Oct 21

ಪ್ರಿಯಾಂಕ್ ಖರ್ಗೆಗೆ ದುರ್ಬುದ್ಧಿ ಯಾಕೆ ಬಂದಿದೆ ಗೊತ್ತಿಲ್ಲ; ಚಿತ್ತಾಪುರ RSS ಪಥಸಂಚನ ತಡೆಯೋಕಾಗಲ್ಲ- ವಿಜಯೇಂದ್ರ

ಸಚಿವ ಪ್ರಿಯಾಂಕ್ ಖರ್ಗೆಯವರ ಆರ್‌ಎಸ್‌ಎಸ್‌ ಟೀಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ನಡೆದೇ ತೀರುತ್ತದೆ ಎಂದು ಸವಾಲು ಹಾಕಿದ್ದು, ಜೆಡಿಎಸ್ ಜೊತೆ ಸಮನ್ವಯ ಸಮಿತಿ ರಚಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

Read Full Story

02:38 PM (IST) Oct 21

ಬೆಂಗಳೂರು - ಬನಶಂಕರಿಯಲ್ಲಿ ಮನೆ ದರೋಡೆ, ಚಾಕು ಇರಿದಾಗ ಸತ್ತಂತೆ ನಾಟಕವಾಡಿ ಪ್ರಾಣ ಉಳಿಸಿಕೊಂಡ ವೃದ್ಧೆ!

ಬೆಂಗಳೂರಿನ ಬನಶಂಕರಿಯಲ್ಲಿ, ಮಾಜಿ ಚಾಲಕನೇ ತನ್ನ ಸಹಚರರೊಂದಿಗೆ ಜೊಮೆಟೊ ಬಾಯ್ ವೇಷದಲ್ಲಿ ಬಂದು ವೃದ್ಧೆಯೊಬ್ಬರ ಮನೆ ದರೋಡೆ ಮಾಡಿದ್ದಾನೆ. ಚಾಕು ಇರಿತಕ್ಕೊಳಗಾದ ವೃದ್ಧೆ ಕನಕಪುಷ್ಪಮ್ಮ ಸತ್ತಂತೆ ನಟಿಸಿ ಪ್ರಾಣ ಉಳಿಸಿಕೊಂಡಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Read Full Story

02:33 PM (IST) Oct 21

BBK 12 - ನಮ್ಮ ಗುಂಡಿ ನಾವೇ ತೋಡ್ಕೊಂಡ್ವಿ ಅನಿಸ್ತಿದೆ - ಹೆದರಿ, ಕಣ್ಣೀರಿಟ್ಟ ಜಾಹ್ನವಿ

Bigg Boss Kannada Season 12: ರಕ್ಷಿತಾ ಶೆಟ್ಟಿ ವಿರುದ್ಧ ಜಗಳ ಆಡಿ, ಬಾಯಿಗೆ ಬಂದ ಹಾಗೆ ಮಾತನಾಡಿ ಜಾಹ್ನವಿ, ಅಶ್ವಿನಿ ಗೌಡ ಅವರಿಗೆ ನೆಗೆಟಿವ್‌ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಅವರಿಗೆ ಹೊರಗಡೆ ಯಾವ ರೀತಿ ಜನರು ನಮ್ಮನ್ನು ನೋಡ್ತಿದ್ದಾರೆ ಎಂದು ಅರಿವಾಗಿದೆ. 

Read Full Story

02:04 PM (IST) Oct 21

Bengaluru - ಅತ್ತಿಬೆಲೆಯಲ್ಲಿ ಪಟಾಕಿಗೆ 90% ಡಿಸ್ಕೌಂಟ್ - ವೈರಲ್ ಬಿಲ್ ನಿಜಾನಾ? ಫ್ಯಾಕ್ಟ್ ಚೆಕ್

ಬೆಂಗಳೂರಿನ ನಿವಾಸಿಯೊಬ್ಬರು ಅತ್ತಿಬೆಲೆಯಲ್ಲಿ ಖರೀದಿಸಿದ ಪಟಾಕಿಯ ಬಿಲ್ ವೈರಲ್ ಆಗಿದೆ. ಇದರಲ್ಲಿ 90% ರಿಯಾಯಿತಿ ನೀಡಿರುವುದು ಗ್ರಾಹಕರನ್ನು ಆಶ್ಚರ್ಯಗೊಳಿಸಿದ್ದು, ಗಡಿ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಪಟಾಕಿ ಸಿಗುವುದರ ಹಿಂದಿನ ಕಾರಣ ಏನು?

Read Full Story

01:24 PM (IST) Oct 21

ಕರ್ನಾಟಕ ಹವಾಮಾನ - ರಾಜ್ಯಾದ್ಯಂತ 4 ದಿನ ಯೆಲ್ಲೋ ಅಲರ್ಟ್, ಭಾರೀ ಮಳೆ ಮುನ್ಸೂಚನೆ

ಭಾರತೀಯ ಹವಾಮಾನ ಇಲಾಖೆಯು ಅಕ್ಟೋಬರ್ 22 ರಿಂದ ನಾಲ್ಕು ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಅರೇಬಿಯನ್ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿನ ಹವಾಮಾನ ಬದಲಾವಣೆಗಳಿಂದಾಗಿ ದಕ್ಷಿಣ ಮತ್ತು ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

Read Full Story

01:21 PM (IST) Oct 21

ಬೆಂಗಳೂರು ಜನರ ಲೈಫ್‌ಸ್ಟೈಲ್ ಬದಲಿಸಿದ ನಮ್ಮ ಮೆಟ್ರೋ, 6 ಕಿ.ಮೀ ನಿಂದ ಶುರುವಾದ ಪಯಣಕ್ಕೆ ಈಗ 14 ವರ್ಷಗಳ ಸಂಭ್ರಮ

ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆಗೆ 14 ವರ್ಷ ಪೂರ್ಣಗೊಂಡಿದೆ. 2011ರಲ್ಲಿ ಎಂಜಿ ರಸ್ತೆ – ಬೈಯಪ್ಪನಹಳ್ಳಿ ನಡುವೆ 6 ಕಿ.ಮೀ. ಮಾರ್ಗದಲ್ಲಿ ಆರಂಭವಾದ ಈ ಸೇವೆ, ಇಂದು ಚಲಘಟ್ಟದಿಂದ ಕಾಡುಗೋಡಿವರೆಗೆ ವಿಸ್ತರಿಸಿ ನಗರದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟುಮಾಡಿದೆ.

Read Full Story

01:07 PM (IST) Oct 21

'ಬಿಜೆಪಿಯ 19 ಸಂಸದರು ಇಂಡಿಯಾ ಗೇಟ್ ಕಾಯೋಕೆ ಇರೋದಾ?' ಕೇಂದ್ರದ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ರೊಚ್ಚಿಗೆದ್ದಿದ್ದು ಯಾಕೆ?

Pradeep Eshwar on BJP government: ನೈರುತ್ಯ ಮುಂಗಾರು ಪ್ರವಾಹ ಹಾನಿಗೆ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ. ರಾಜ್ಯದ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ ಆರೆಸ್ಸೆಸ್ ಕುರಿತು ಜೆಡಿಎಸ್ ನಿಲುವು ಪ್ರಶ್ನಿಸಿದರು.

Read Full Story

12:51 PM (IST) Oct 21

ಗುಡ್‌ನ್ಯೂಸ್‌ ನೀಡಿದ ಪಾರು; ಅಣ್ಣಯ್ಯ ಇನ್ಮುಂದೆ ಅಪ್ಪಯ್ಯ, ಇತ್ತ ರಾವಣ ದಹನದ ರಹಸ್ಯ!

ಅಣ್ಣಯ್ಯ ಸೀರಿಯಲ್‌ನಲ್ಲಿ ಪಾರು ಗರ್ಭಿಣಿ ಎಂಬ ಸಿಹಿಸುದ್ದಿ ಹೊರಬಿದ್ದಿದೆ. ಈ ಸಂಭ್ರಮದ ನಡುವೆಯೇ, ನಾಗೇಗೌಡನ ಕುತಂತ್ರದಿಂದ ರಾಣಿ ಮತ್ತು ಮನು ಜೀವಕ್ಕೆ ಅಪಾಯ ಎದುರಾಗಿದ್ದು, ಅವರನ್ನು ರಾವಣನ ಗೊಂಬೆಗೆ ಕಟ್ಟಿಹಾಕಲಾಗಿದೆ. 

Read Full Story

12:50 PM (IST) Oct 21

Bigg Bossಗೆ ಎಂಟ್ರಿ ಕೊಡುತ್ತಲೇ ಷರ್ಟ್​ ಬಿಚ್ಚಿ ಹೆಣ್ಮಕ್ಕಳ ಎದೆಬಡಿತ ತಪ್ಪಿಸಿರೋ ಸೂರಜ್​ ಯಾರು? ಕೆನಡಾದಿಂದ ಬಂದದ್ಯಾಕೆ?

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಸೂರಜ್ ಸಿಂಗ್ಎಂ ಟ್ರಿ ಕೊಟ್ಟಿದ್ದಾರೆ. ಕೆನಡಾದಲ್ಲಿ ಐಟಿ ಉದ್ಯೋಗಿಯಾಗಿದ್ದ ಇವರು, ಫಿಟ್ನೆಸ್ ಫ್ರೀಕ್ ಮತ್ತು ಮಾಡೆಲ್ ಆಗಿದ್ದು, ತಮ್ಮ ಸ್ಟೈಲಿಶ್ ಎಂಟ್ರಿ ಮೂಲಕವೇ ಗಮನ ಸೆಳೆದಿದ್ದಾರೆ.  ಇವರು ಯಾರು, ಹಿನ್ನೆಲೆ ಏನು? 

Read Full Story

12:36 PM (IST) Oct 21

ಉತ್ತರ ಭಾರತದ ಸೊಸೆಯಾಗಿ ಮೊದಲ ದೀಪಾವಳಿ ಆಚರಿಸಿದ Actress Vaishnavi Gowda - ಸೀತಾರಾಮ ನಟಿ ಫೋಟೋಗಳಿವು

Actress Vaishnavi Gowda Photos: ನಟಿ ವೈಷ್ಣವಿ ಗೌಡ ಅವರಿಗೆ ಮದುವೆಯಾದಬಳಿಕ ಇದು ಮೊದಲ ದೀಪಾವಳಿ ಹಬ್ಬ. ಪತಿ ಅನುಕೂಲ್‌ ಮಿಶ್ರಾ ಜೊತೆಗೆ ಅವರು ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

 

Read Full Story

12:35 PM (IST) Oct 21

ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್, ಮಾರಾಟಕ್ಕಲ್ಲದ ಔಷಧಿ ತಂದು ಇಂಜೆಕ್ಟ್ ಮಾಡಿದ್ದ ಡಾ.ಮಹೇಂದ್ರ ರೆಡ್ಡಿ!

ಚರ್ಮರೋಗ ತಜ್ಞೆ ಡಾ.ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ, ಪತಿ ಡಾ.ಮಹೇಂದ್ರ ರೆಡ್ಡಿ ಅರಿವಳಿಕೆ ಮದ್ದನ್ನು ಅತಿಯಾಗಿ ನೀಡಿ ಕೊಲೆ ಮಾಡಿರುವುದು ತನಿಖೆಯಿಂದ ದೃಢಪಟ್ಟಿದೆ. ಆಸ್ತಿಗಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

Read Full Story

12:32 PM (IST) Oct 21

ಹುಣಸೂರು - ಮನೆ ಸಾಲ ತೀರಿಸಲು ಆಗದೆ ಸೈನಿಕ ನೇಣುಬಿಗಿದು ದುರಂತ ಸಾವು

hunusuru soldier death due to home loan debt ಹುಣಸೂರಿನಲ್ಲಿ, ಮನೆ ಕಟ್ಟಲು ಮಾಡಿದ ಸಾಲ ತೀರಿಸಲಾಗದೆ ಭಾರತೀಯ ಸೇನೆಯ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಪ್ಯಾರಾಚೂಟ್‌ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್‌, ಆರ್ಥಿಕ ಸಂಕಷ್ಟದಿಂದ ಈ ದುರಂತ ನಿರ್ಧಾರ.

Read Full Story

12:12 PM (IST) Oct 21

BBK 12 - ರಷಾ ಬಂದಿದ್ದೇ ಬಂದಿದ್ದು, ಅವ್ರ ತೊಡೆ ಮೇಲೆ ಮಲಗಿದ ಗಿಲ್ಲಿ ನಟ, ಚಂದ್ರಪ್ರಭ!

Bigg Boss Kannada Season 12: ಬಿಗ್‌ ಬಾಸ್‌ ಮನೆಯಲ್ಲಿ ಕಾವ್ಯ ಶೈವ, ಗಿಲ್ಲಿ ಫ್ರೆಂಢ್ಸ್‌ ಆಗಿದ್ದರು. ಈಗ ರಷಾ ಬಂದ್ಮೇಲೆ ಗಿಲ್ಲಿ ನಟ ಅವರ ಜೊತೆಯೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹಾಗಾದರೆ ಮುಂದೆ ಏನಾಗುವುದು?

Read Full Story

12:12 PM (IST) Oct 21

Brahmagantu ಅರ್ಚನಾ ಜೊತೆ ಸ್ಟೆಪ್​ ಹಾಕಿದ ದೀಪಾ - ನಟಿ ಕೇಳಿದ ಈ ಪ್ರಶ್ನೆ ನೀವು ಉತ್ತರಿಸುತ್ತೀರಾ?

ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾ ಈಗ ದಿಶಾ ಆಗಿ ಸೌಂದರ್ಯಳ ಸೊಕ್ಕಡಗಿಸುತ್ತಿದ್ದಾಳೆ. ಇದೀಗ ದೀಪಾ ಪಾತ್ರಧಾರಿ ದಿಯಾ ಮತ್ತು ಅರ್ಚನಾ ಪಾತ್ರಧಾರಿ ಸನ್ಮಿತಾ ಒಟ್ಟಿಗೆ ಡಾನ್ಸ್ ರೀಲ್ಸ್ ಮಾಡಿದ್ದು, ದೀಪಾ-ಅರ್ಚನಾ ಸ್ನೇಹ ಮತ್ತು ದಿಶಾ-ಅರ್ಚನಾ ಪ್ರೀತಿಯಲ್ಲಿ ಯಾವ ಜೋಡಿ ಇಷ್ಟ ಎಂದು ಪ್ರಶ್ನಿಸಿದ್ದಾರೆ.

Read Full Story

12:08 PM (IST) Oct 21

ಮನುಷ್ಯನಿಗೆ ಯಾವುದೇ ಕಾಯಿಲೆ ಇಲ್ಲದಿದ್ದರೆ ಕೋಟಿ ದುಡ್ಡು ಇದ್ದಂತೆ - ನಿರ್ಮಲಾನಂದಶ್ರೀ

ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆರೋಗ್ಯವೇ ಮನುಷ್ಯನಿಗೆ ದೊಡ್ಡ ಭಾಗ್ಯ ಎಂದು ತಿಳಿಸಿದರು. ಎಂ.ಎಂ.ಫೌಂಡೇಷನ್ ವತಿಯಿಂದ ಮಹಾಲಿಂಗೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದರು.

Read Full Story

11:56 AM (IST) Oct 21

Bengaluru - ಹೊಡಿತಾಳೆ, ಬಡಿತಾಳೆಅಂತ ಆಫಿಸ್‌ನಲ್ಲೇ ಮಲಗಿದ ಗಂಡ - ಹೆಂಡ್ತಿ ಏಟಿಗೆ ಬೆಚ್ಚಿದ ಪತಿ

Wife Harassing Husband Case: ಪತ್ನಿಯ ಕಿರುಕುಳದಿಂದ ತಪ್ಪಿಸಿಕೊಳ್ಳಲು ಕಚೇರಿಯಲ್ಲೇ ಮಲಗಿದ್ದ ಉದ್ಯೋಗಿಯ ಮೇಲೆ ಆತನ ಪತ್ನಿ, ಸಾಕು ತಾಯಿ ಮತ್ತು ರೌಡಿಗಳು ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಪತಿ, ಪತ್ನಿ ಮತ್ತು ಇತರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read Full Story

11:32 AM (IST) Oct 21

Bigg Boss ಮನೆಯೊಳಕ್ಕೆ ಪ್ರಿಯಾ ಸುದೀಪ್ ಎಂಟ್ರಿ​? ಕುತೂಹಲ ಕೆರಳಿಸಿದ ಕಿಚ್ಚನ ಹೇಳಿಕೆ- ಫ್ಯಾನ್ಸ್​ ಏನಂದ್ರು?

ಬಿಗ್​ಬಾಸ್​ 12ರ ವೇದಿಕೆಯ ಮೇಲೆ ನಿರೂಪಕ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಕಾಣಿಸಿಕೊಂಡಿದ್ದು, ಮನೆಯೊಳಗೆ ಹೋಗಿಬರಲು ಸುದೀಪ್ ಕೇಳಿದ್ದಾರೆ.  ಇದಕ್ಕೆ ಪ್ರಿಯಾ ಸುದೀಪ್​ ಹೇಳಿದ್ದೇನು? ನಿಜಕ್ಕೂ ಅವರ ದೊಡ್ಮನೆಗೆ ಎಂಟ್ರಿ ಕೊಡ್ತಾರಾ? 

Read Full Story

11:30 AM (IST) Oct 21

ವಾಲ್ಮೀಕಿ ಸಮುದಾಯ ಅವಹೇಳ - ರಮೇಶ್ ಕತ್ತಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಮಾಜಿ ಸಂಸದ ರಮೇಶ ಕತ್ತಿ ಅವರು ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದನ್ನು ಖಂಡಿಸಿ ಗೋಕಾಕದಲ್ಲಿ ವಾಲ್ಮೀಕಿ ಸಮುದಾಯ ಮತ್ತು ದಲಿತಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು. ರಸ್ತೆ ತಡೆ ನಡೆಸಿ. ಕತ್ತಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು.

Read Full Story

11:16 AM (IST) Oct 21

ಸೂರ್ಯ ಚಂದ್ರ ಇರೋ ತನಕ ಆರ್‌ಎಸ್‌ಎಸ್ ಇರುತ್ತದೆ, ಸಿಎಂ ಡಿಸಿಎಂ ನಾಟಕವಾಡ್ತಿದ್ದಾರೆ - ದೆಹಲಿಯಿಂದ ಸಚಿವ ಸೋಮಣ್ಣ ವರದಿ

ಕೇಂದ್ರ ಸಚಿವ ವಿ. ಸೋಮಣ್ಣ ಅವರು, ಜಿಎಸ್‌ಟಿ ಕಡಿತವನ್ನು 'ದೀಪಾವಳಿ ಉಡುಗೊರೆ' ಎಂದು ಶ್ಲಾಘಿಸಿದ್ದಾರೆ. ಇದೇ ವೇಳೆ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಕೇಂದ್ರ ಮಟ್ಟದಲ್ಲಿ ಆಚರಿಸುವ ಬಗ್ಗೆ ಮಾಹಿತಿ ನೀಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಫಲ್ಯ  ಕುರಿತು ತೀವ್ರ ವಾಗ್ದಾಳಿ ನಡೆಸಿದರು.

Read Full Story

More Trending News