MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Naa Ninna Bidalaare: ಸಂಜೀವಿನಿ ಸಿಗದೇ ದುರ್ಗಾ ಪರದಾಟ! ಹಿತಾ ಬ*ಲಿಗೆ ವೇದಿಕೆ ಸಿದ್ಧ- ಮುಂದೇನು?

Naa Ninna Bidalaare: ಸಂಜೀವಿನಿ ಸಿಗದೇ ದುರ್ಗಾ ಪರದಾಟ! ಹಿತಾ ಬ*ಲಿಗೆ ವೇದಿಕೆ ಸಿದ್ಧ- ಮುಂದೇನು?

ದುಷ್ಟ ಶಕ್ತಿ ಪಡೆಯಲು ಮಾಳವಿಕಾ, ಹಿತಾಳನ್ನು ಬ*ಲಿ ಕೊಡಲು ಸಿದ್ಧತೆ ನಡೆಸಿದ್ದಾಳೆ. ಇನ್ನೊಂದೆಡೆ, ಹಿತಾಳನ್ನು ಉಳಿಸಲು ದುರ್ಗಾ, ದೇವಿಯ ಕಳೆದುಹೋದ ಗೆಜ್ಜೆ, ಬಳೆಗಳನ್ನು ಹುಡುಕಿ ಇದೀಗ ಸಂಜೀವಿನಿ ಮೂಲಿಕೆಗಾಗಿ ಪರದಾಡುತ್ತಿದ್ದಾಳೆ. ಬ*ಲಿಗೂ, ಸಂಜೀವಿನಿ ಹುಡುಕಾಟಕ್ಕೂ ಕ್ಷಣಗಣನೆ ಆರಂಭವಾಗಿದೆ.

2 Min read
Author : Suchethana D
Published : Oct 21 2025, 05:42 PM IST
Share this Photo Gallery
  • FB
  • TW
  • Linkdin
  • Whatsapp
17
ಕುತೂಹಲ ತಿರುವು
Image Credit : Instagram

ಕುತೂಹಲ ತಿರುವು

ಒಂದೆಡೆ, ಪುಟಾಣಿ ಹಿತಾಳನ್ನು ಬ*ಲಿ ಕೊಟ್ಟು ಸಂಪೂರ್ಣ ಶಕ್ತಿಯನ್ನು ಪಡೆಯಬೇಕು ಎಂದು ಮಾಳವಿಕಾ ಹೊರಟಿದ್ದಾಳೆ. ಇದರ ಅರಿವು ಯಾರಿಗೂ ಇಲ್ಲ. ಇದೇ ಕಾರಣಕ್ಕೆ, ಮಾಳವಿಕಾಳ ತಾಂತ್ರಿಕ ಬುದ್ಧಿಯಿಂದಾಗಿ ಹಿತಾ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಅವಳನ್ನು ಕಾಪಾಡುವುದು ಸದ್ಯ ದುರ್ಗಾಳ ಕೈಯಲ್ಲಿ ಇದೆ. ಇದೇ ಕಾರಣಕ್ಕೆ ಆಕೆ ದೊಡ್ಡ ಹೋರಾಟವನ್ನೇ ನಡೆಸಿದ್ದಾಳೆ. ಇದು ಸದ್ಯ ​ನಾ ನಿನ್ನ ಬಿಡಲಾರೆ (Na Ninna Bidalaare Serial) ಸೀರಿಯಲ್​ ಸ್ಟೋರಿ.

27
ಅಜ್ಜಿ ರೂಪದಲ್ಲಿ ದೇವಿ
Image Credit : Instagram

ಅಜ್ಜಿ ರೂಪದಲ್ಲಿ ದೇವಿ

ಅಲ್ಲಿ ದೇವಿ ಅಜ್ಜಿ ರೂಪದಲ್ಲಿ ದುರ್ಗಾಳಿಗೆ ಎದುರಾಗುತ್ತಾಳೆ. ಆಗ ಆಕೆ ದುರ್ಗಾಪುರದ ಕಥೆ ಹೇಳುತ್ತಾಳೆ. ಸಾವಿರಾರು ವರ್ಷಗಳ ಹಿಂದಿನ ಕಥೆ ಅದು. ರಾಕ್ಷಸಿ ದುರ್ಗಾಪುರದ ಮೇಲೆ ದಾಳಿ ಮಾಡಿದ್ದಳು. ಆ ರಾಕ್ಷಸಿಗೆ ಬೇಕಾದ ವಸ್ತುಗಳನ್ನು ಪಡೆದುಕೊಳ್ಳಲು ಪ್ರಯತ್ನ ಪಡುತ್ತಿದ್ದಳು. ದುರ್ಗಾಪುರ ನಾಶ ಮಾಡುವ ಉದ್ದೇಶ ಹೊಂದಿದ್ದಳು. ದೇವಿ ರಕ್ಷಕರೂ ಇದ್ದರು. ಅವರು ಇಲ್ಲಿಯ ರಾಜ ಮತ್ತು ಇಬ್ಬರು ಹೆಣ್ಣುಮಕ್ಕಳು. ಅವರ ದುರ್ಗಾಪುರದ ರಕ್ಷಣೆ ಮಾಡುತ್ತಾ ಜೀವ ಬಿಟ್ಟರು. ದೇವಿಯ ಮೂರ್ತಿಯನ್ನು ರಾಕ್ಷಸಿ ಕೊಂಡೊಯ್ದಳು ಎನ್ನುತ್ತ ಆ ಘಟನೆಯನ್ನುಹೇಳಿದ್ದಾಳೆ ಅಜ್ಜಿ.

Related Articles

Related image1
Bigg Bossಗೆ ಎಂಟ್ರಿ ಕೊಡುತ್ತಲೇ ಷರ್ಟ್​ ಬಿಚ್ಚಿ ಹೆಣ್ಮಕ್ಕಳ ಎದೆಬಡಿತ ತಪ್ಪಿಸಿರೋ ಸೂರಜ್​ ಯಾರು? ಕೆನಡಾದಿಂದ ಬಂದದ್ಯಾಕೆ?
Related image2
Brahmagantu ಎಲ್ಲೆಲ್ಲೂ ಉರಿ ಉರಿ: ಸೌಂದರ್ಯಳ ನೋಡಿ ಅಯ್ಯೋ ಪಾಪ ಅಂತಿರೋ ಫ್ಯಾನ್ಸ್​: ಆಗಿದ್ದೇನು?
37
ಶತಮಾನದ ಕಥೆ
Image Credit : Instagram

ಶತಮಾನದ ಕಥೆ

ಕೊನೆಗೆ, ಆ ರಾಕ್ಷಸಿ ದೇವಿಯ ಮೂರ್ತಿ ಯಾರಿಗೂ ಸಿಗಬಾರದು ಎನ್ನುವ ಕಾರಣಕ್ಕೆ ಅದನ್ನು ಅಲ್ಲಿಯೇ ಇಟ್ಟಳು. ಆದರೆ ದೇವಿಯ ಬಳೆ ಮತ್ತು ಗೆಜ್ಜೆ ಎಲ್ಲಿದೆ ಎಂದು ತಿಳಿದಿಲ್ಲ. ದೇವಾಲಯದ ಪಕ್ಕದಲ್ಲಿ ಇರುವ ಗುಹೆಯಲ್ಲಿ ದೇವಿಯ ಮೂರ್ತಿ ಇದೆ. ಆದರೆ ಆ ಕಾಣೆಯಾದ ಬಳೆ ಮತ್ತು ಗೆಜ್ಜೆಯನ್ನು ತಂದರೆ ಮಾತ್ರ ಆ ಬಾಗಿಲು ತೆರೆಯುತ್ತದೆ. ಅವುಗಳನ್ನು ದೇವಿಯ ಹತ್ತಿರ ಇಟ್ಟರೆ, ಹಿತಾಳಿಗೆ ಎಚ್ಚರ ಆಗುತ್ತದೆ ಎಂದಿದ್ದಾಳೆ. ಅದಕ್ಕೂ ಇದಕ್ಕೂ ಏನು ಸಂಬಂಧ ಎನ್ನುವ ಗೊಂದಲ ದುರ್ಗಾಳಿಗೆ ಇದ್ದರೂ, ಹಿತಾಳ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡಲು ರೆಡಿಯಾಗಿದ್ದಾಳೆ.

47
ಗೆಜ್ಜೆ ಹುಡುಕುವಲ್ಲಿ ಯಶಸ್ವಿ
Image Credit : Instagram

ಗೆಜ್ಜೆ ಹುಡುಕುವಲ್ಲಿ ಯಶಸ್ವಿ

ಮೊದಲಿಗೆ ಹರಸಾಹಸ ಪಟ್ಟು ದೇವಿಯ ಬಳೆ ಹುಡುಕಿ ಕೊನೆಗೆ ಸಮುದ್ರದ ಆಳದಲ್ಲಿರುವ ದೇವಿಯ ಗೆಜ್ಜೆಯನ್ನೂ ಹುಡುಕುವಲ್ಲಿ ದುರ್ಗಾ ಯಶಸ್ವಿಯಾಗಿದ್ದಾಳೆ. ತನ್ನ ಅಕ್ಕನನ್ನು ಇನ್ನೂ ಭೇಟಿ ಮಾಡಿಸಿಲ್ಲ ಎಂದು ದೇವಿಯ ಮೇಲೆಯೇ ಬಹಳ ವರ್ಷಗಳಿಂದ ಮುನಿಸು ಮಾಡಿಕೊಂಡಿರೋ ದುರ್ಗಾ, ಕೊನೆಗೆ ಹಿತಾಳಿಗಾಗಿ ಅಲ್ಲಿ ಪೂಜೆಯನ್ನೂ ಸಲ್ಲಿಸಿದ್ದಾಳೆ. ಈಗ ಕೊನೆಯ ಹಂತವಾಗಿ ಸಂಜೀವಿನಿ ಹುಡುಕುವ ಕೆಲಸ.

57
ಸಂಜೀವಿನಿ ಹುಡುಕಿ ಹೊರಟ ದುರ್ಗಾ
Image Credit : Instagram

ಸಂಜೀವಿನಿ ಹುಡುಕಿ ಹೊರಟ ದುರ್ಗಾ

ಅದನ್ನು ಹುಡುಕಲು ಹೊರಟಿದ್ದಾಳೆ ದುರ್ಗಾ. ಆಗ ಅಲ್ಲಿ ಶರತ್​ ಕೂಡ ಸಾಥ್​ ಕೊಟ್ಟಿದ್ದಾನೆ. ಆದರೆ ಶರತ್​ಗೆ ಯಾರೋ ಬಂದು ಹೊಡೆದಿದ್ದಾರೆ. ಇದರಿಂದ ದುರ್ಗಾ ಒಂಟಿಯಾಗಿ ಅದನ್ನು ಹುಡುಕಬೇಕಿದೆ. ಅದು ಸಿಗದೇ ಪರದಾಡುತ್ತಿದ್ದಾಳೆ.

67
ದುಷ್ಟ ಶಕ್ತಿ ಆಹ್ವಾನ
Image Credit : Instagram

ದುಷ್ಟ ಶಕ್ತಿ ಆಹ್ವಾನ

ಅತ್ತ ಮಾಳವಿಕಾ ಹಿತಾಳ ಬ*ಲಿಗಾಗಿ ದುಷ್ಟ ಶಕ್ತಿಗಳನ್ನು ಆಹ್ವಾನ ಮಾಡಿದ್ದಾಳೆ. ಹಿತಾ ಸತ್ತರೆ ಅಂಬಿಕಾಳ ಶಕ್ತಿಯೂ ಕ್ಷೀಣಿಸಿ ಎಲ್ಲ ಶಕ್ತಿಯೂ ತನ್ನ ಪರವಾಗಿ ಬರುವುದಕ್ಕಾಗಿ ಆಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾಳೆ.

77
ಬ*ಲಿಗಾಗಿ ವೇದಿಕೆ ಸಿದ್ಧ
Image Credit : Instagram

ಬ*ಲಿಗಾಗಿ ವೇದಿಕೆ ಸಿದ್ಧ

ಇನ್ನೇನಿದ್ದರೂ ಕೆಲವೇ ಕ್ಷಣಗಳು ಬಾಕಿ ಇವೆ. ಅಲ್ಲಿ ಬ*ಲಿಗಾಗಿ ವೇದಿಕೆ ಸಿದ್ಧವಾಗಿದ್ದರೆ, ಇತ್ತ ದುರ್ಗಾ ಸಂಜೀವಿನಿ ಸಿಗದೇ ಪರದಾಡುತ್ತಿದ್ದಾಳೆ. ಮುಂದಿರುವುದೇ ರೋಚಕ ಕ್ಷಣ. ಮುಂದೇನಾಗುತ್ತೆ ಎನ್ನುವುದನ್ನು ಇನ್ನಷ್ಟೇ ಕಾದು ನೋಡಬೇಕಿದೆ. ಅಷ್ಟಕ್ಕೂ ದುರ್ಗಾಳಿಗೆ ದೇವಿಯ ವರ ಇರುವ ಕಾರಣ ಆಕೆಯೇ ಗೆಲ್ಲುವುದು ನಿಶ್ಚಿತವಾದರೂ ಅದರಲ್ಲಿ ಇನ್ನೇನು ಟ್ವಿಸ್ಟ್​ ಸಿಗಲಿದೆ ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ನಾ ನಿನ್ನ ಬಿಡಲಾರೆ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಹುಟ್ಟಿದ ದಿನದ ಹಚ್ಚೆ ನೋಡಿ ಲವ್​ನಲ್ಲಿ ಮೋಸ ಹೋದೆ, ನೀವು ಕೇರ್​ಫುಲ್​ ಆಗಿರಿ ಎಂದ ಉರ್ಫಿ ಜಾವೇದ್​
Recommended image2
Karna ಕಾಪಾಡಲು ಹೀರೊಯಿನ್ಸ್​ ಕರೆಸಿದ್ರಿ: ನೀವ್​ ಕೊಟ್ಟ ಟಿಪ್ಸ್​ನಿಂದ ಎಡವಟ್ಟಾದ್ರೆ ಇವ್ರೇ ಬರ್ತಾರಾ? ವೀಕ್ಷಕರು ಗರಂ
Recommended image3
Naa Ninna Bidalaare ಇದೇನಿದು ಟ್ವಿಸ್ಟ್​? ಎಲ್ಲರೂ ಸತ್ತು ದೆವ್ವ ಆಗ್ತಾರಾ? ತಲೆಗೆ ಹುಳುಬಿಟ್ಟ ದುರ್ಗಾ!
Related Stories
Recommended image1
Bigg Bossಗೆ ಎಂಟ್ರಿ ಕೊಡುತ್ತಲೇ ಷರ್ಟ್​ ಬಿಚ್ಚಿ ಹೆಣ್ಮಕ್ಕಳ ಎದೆಬಡಿತ ತಪ್ಪಿಸಿರೋ ಸೂರಜ್​ ಯಾರು? ಕೆನಡಾದಿಂದ ಬಂದದ್ಯಾಕೆ?
Recommended image2
Brahmagantu ಎಲ್ಲೆಲ್ಲೂ ಉರಿ ಉರಿ: ಸೌಂದರ್ಯಳ ನೋಡಿ ಅಯ್ಯೋ ಪಾಪ ಅಂತಿರೋ ಫ್ಯಾನ್ಸ್​: ಆಗಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved