ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಬ್ಬರ ಮುಂದುವರಿದಿದ್ದು, ಮಂಗಳವಾರ ದಾವಣಗೆರೆ, ಬೀದರ್, ರಾಯಚೂರು, ಚಾಮರಾಜನಗರ, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಬಳ್ಳಾರಿಯಲ್ಲಿ ವರುಣನ ಆರ್ಭಟಕ್ಕೆ ಸುಮಾರು 500ಕ್ಕೂ ಅಧಿಕ ಮರಗಳು ಹಾಗೂ 76 ವಿದ್ಯುತ್ ಕಂಬಗಳು ಧರೆಗುರುಳಿವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಗುಡುಗು, ಮಿಂಚಿನ ಮಳೆಗೆ 20 ಅಡಕೆ ಮರಗಳು ಸುಟ್ಟುಹೋಗಿದೆ. ಇನ್ನೂ ರಾಯಚೂರಿನ ಮಾನ್ವಿ, ಮಸ್ಕಿ ಹಾಗೂ ಲಿಂಗಸುಗೂರು ಇತರೆ ಪ್ರದೇಶಗಳಲ್ಲಿ ವಿದ್ಯುತ್ ಕಂಬ, ಮರಗಳು ನೆಳಕ್ಕುರುಳಿವೆ.
ಕಾರವಾರದಲ್ಲಿ ಚಂಡಮಾರುತ, ಭಾರಿ ಮಳೆ ಸಾಧ್ಯತೆ ಹಿನ್ನೆಲೆ ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆಗಳನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ. ಗೋಕರ್ಣ, ಮುರು ಡೇಶ್ವರ, ಕಾರವಾರ ಬೀಚ್ಗಳಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಚಂಡಮಾರುತ ಹಾಗೂ ಭಾರಿ ಮಳೆ ಉಂಟಾಗುವ ಸಾಧ್ಯತೆ ಕುರಿತು ಮುನ್ಸೂಚನೆ ನೀಡಿರುವುದರಿಂದ ಸುರಕ್ಷತೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
11:12 PM (IST) May 20
ತ್ರಿಶಾ ಅವರ ಈ 'ಗಾಡ್ ಥಿಂಗ್ಸ್' ಹಿಂದೆ ನಿಜಕ್ಕೂ ವಿಜಯ್ ಇದ್ದಾರಾ? ಅಥವಾ ಇದು ಕೇವಲ ಅಭಿಮಾನಿಗಳ ಕಲ್ಪನೆಯಾ? ಕಾಲವೇ ಉತ್ತರಿಸಬೇಕು! ಆದರೆ ಸದ್ಯಕ್ಕಂತೂ ತ್ರಿಶಾ ಕೃಷ್ಣನ್ ಬಾಕ್ಸ್ ಆಫೀಸ್ ಹಾಗೂ ಸೋಷಿಯಲ್ ಮೀಡಿಯಾ ‘ಕ್ವೀನ್’ ಆಗಿ ಮೆರೆಯುತ್ತಿದ್ದಾರೆ.
11:00 PM (IST) May 20
ಪ್ರಯಾಣ ದರ ರಹಿತ ಆದಾಯವನ್ನು ಹೆಚ್ಚಿಸಲು, ಬಿಎಂಟಿಸಿ ತನ್ನ ಬಸ್ ಟಿಕೆಟ್ಗಳ ಹಿಂಭಾಗದಲ್ಲಿ ಜಾಹೀರಾತುಗಳನ್ನು ಮುದ್ರಿಸಲು ಮತ್ತು ಸೀಟುಗಳ ಹಿಂದೆ ಕ್ಯೂಆರ್ ಕೋಡ್ ಅಳವಡಿಸಲು ಮುಂದಾಗಿದೆ. 'ಶಕ್ತಿ' ಯೋಜನೆಯ ಆರ್ಥಿಕ ಒತ್ತಡವನ್ನು ಸರಿದೂಗಿಸಲು ಸಂಸ್ಥೆಯು ಭೂಮಿ ನಗದೀಕರಣಕ್ಕೆ ಮುಂದಾಗುತ್ತದೆ.
10:38 PM (IST) May 20
09:27 PM (IST) May 20
09:21 PM (IST) May 20
T G Nandish Death: 47ನೇ ವಯಸ್ಸಿಗೆ ದಿಲೀಪ್ ರಾಜ್ ಅವರು ನಿಧನರಾದರು. ಈ ಸಾವನ್ನು ಅರಗಿಸಿಕೊಳ್ಳುವ ಮುನ್ನವೇ 37ನೇ ವಯಸ್ಸಿಗೆ ಸಂಭಾಷಣೆಕಾರ ಟಿಜಿ ನಂದೀಶ್ ಅವರು ನಿಧನರಾಗಿದ್ದಾರೆ. ಮೊನ್ನೆ ಮೊನ್ನೆ ದಿಲೀಪ್ ಸಾವಿಗೆ ಸಂತಾಪ ಸೂಚಿಸಿದ್ದ ನಂದೀಶ್ ಈಗ ನೆನಪಾಗಿ ಉಳಿದಿದ್ದಾರೆ.
08:39 PM (IST) May 20
ಮಣ್ಣು ಕೊಟ್ಟು ತಮ್ಮೂರಿಗೆ ತೆರಳುತ್ತಿದ್ದ ಇಬ್ಬರು ಮಸಣ ಸೇರಿದ ದುರ್ಘಟನೆ ಬುಧವಾರ ಜರುಗಿದೆ. ತಾಲೂಕಿನ ರಾಜೂರು ಗ್ರಾಮದ ಬೈಪಾಸ್ ರಸ್ತೆಯಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ರಸ್ತೆ ಅಪಘಾತ ಸಂಭವಿಸಿದೆ.
07:10 PM (IST) May 20
ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ಜೀ ಅವರ ಪುತ್ರ ತಾರಿಕ್ ಪ್ರೇಮ್ಜೀ, ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ₹45.71 ಕೋಟಿ ಮೌಲ್ಯದ ಐಷಾರಾಮಿ ಪೆಂಟ್ಹೌಸ್ ಖರೀದಿಸಿದ್ದಾರೆ. '27 ಸಮ್ಮಿಟ್' ಕಟ್ಟಡದಲ್ಲಿರುವ ಈ ಡ್ಯುಪ್ಲೆಕ್ಸ್ ಅಪಾರ್ಟ್ಮೆಂಟ್, 11 ಕಾರ್ ಪಾರ್ಕಿಂಗ್ ಸ್ಥಳಗಳನ್ನು ಒಳಗೊಂಡಿದೆ.
06:56 PM (IST) May 20
06:56 PM (IST) May 20
ಯುವ ವಕೀಲ ಕನಕೇಶ್ ಮುರುಡಿ (25) ಅವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ಕೂಡಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರೊಳಗೆ ಕನಕೇಶ ಮೃತಪಟ್ಟಿದ್ದಾರೆ.
06:23 PM (IST) May 20
ಪವನ್ ಕಲ್ಯಾಣ್ ಅಭಿನಯದ 'ತಮ್ಮುಡು' ಸಿನಿಮಾದಲ್ಲಿ 'ಲವ್ಲಿ' ಹೆಸರಿನ ಪಾತ್ರದಲ್ಲಿ ಮಿಂಚಿದ್ದ ನಟಿ ಅದಿತಿ ಗೋವಿತ್ರಿಕರ್. "ವಯ್ಯಾರಿ ಭಾಮ ನೀ ಹಂಸ ನಡಕ.." ಹಾಡಿನಲ್ಲಿ ತಮ್ಮ ಅದ್ಭುತ ಸೌಂದರ್ಯದಿಂದ ರಾತ್ರೋರಾತ್ರಿ ಯುವಕರ ಹೃದಯ ಕದ್ದಿದ್ದ ಈ ನಟಿ, ಬಾಲ್ಯದಲ್ಲಿ ಲೈಂ*ಗಿಕ ಕಿರುಕುಳ ಅನುಭವಿಸಿದ್ದರಂತೆ.
05:17 PM (IST) May 20
ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಯೋಜನೆ ಕುಮಾರಸ್ವಾಮಿ ಕಾಲದ್ದೇ ಎಂದು ಸ್ಪಷ್ಟಪಡಿಸಿ, ರೈತರಿಗೆ ಶೀಘ್ರ ಪರಿಹಾರದ ಭರವಸೆ ನೀಡಿದ್ದಾರೆ.
03:29 PM (IST) May 20
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನೂರೊಂದು ಬಾವಿ ಮತ್ತು ದೇವಾಲಯಗಳನ್ನು ಪತ್ತೆಹಚ್ಚಲು ಇಸ್ರೋ ಸಹಯೋಗದೊಂದಿಗೆ ಸ್ಯಾಟಲೈಟ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇತ್ತೀಚೆಗೆ ರಾಷ್ಟ್ರಕೂಟರ ಕಾಲದ ಅಪರೂಪದ ವೀರಗಲ್ಲೊಂದು ಪತ್ತೆಯಾಗಿದೆ.
03:17 PM (IST) May 20
Funny husband wife fancy dress kid: ಚಿಕ್ಕ ಮಕ್ಕಳಿಗೆ ಶಾಲೆಯಲ್ಲಿ ಛದ್ಮವೇಷ ಸ್ಪರ್ಧೆ ಇಡಲಾಗುವುದು. ಇತ್ತೀಚೆಗೆ ತಂತ್ರಜ್ಞಾನ ಕೂಡ ಮುಂದುವರೆದಿದ್ದು, ಶಾಲೆಯಲ್ಲಿ ಪ್ರಾಜೆಕ್ಟ್ ವರ್ಕ್, ಛದ್ಮವೇಷ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗುವುದು. ಈಗ ಪುಟ್ಟ ಪೋರ ವಿಶೇಷ ಕಾಸ್ಟ್ಯೂಮ್ ಹಾಕಿ ಗಮನಸೆಳೆದಿದ್ದಾನೆ.
03:16 PM (IST) May 20
03:06 PM (IST) May 20
ಹಚ್ಚಿಟ್ಟಿರೋ ಪಟಾಕಿ ಎಂಬ ಸಾಹಿತ್ಯದ ಮೂಲಕ ನಾಯಕನ ಭರ್ಜರಿ ಎಂಟ್ರಿಯನ್ನು ಹಾಡಿನಲ್ಲಿ ಬಿಂಬಿಸಲಾಗಿದ್ದು, ಸಿಡಿಯಲು ಸಿದ್ಧವಾಗಿರುವ ಪಟಾಕಿಯಂತೆ ರಕ್ಕಿ ಅವರ ಎನರ್ಜಿ ಈ ಹಾಡಿನಲ್ಲಿ ಕಾಣುತ್ತದೆ. ವೇಗದ ನೃತ್ಯ, ಸ್ಟೈಲಿಶ್ ದೃಶ್ಯ ವಿನ್ಯಾಸ ಮತ್ತು ಮಾಸ್ ಫೀಲಿಂಗ್ನಿಂದ ಈ ಹಾಡು ಪ್ರೇಕ್ಷಕರಿಗೆ ಹಬ್ಬದ ಅನುಭವ ನೀಡುವಂತಿದೆ.
02:45 PM (IST) May 20
02:35 PM (IST) May 20
ರಾಜ್ಯವೇ ಬೆಚ್ಚಿ ಬಿದ್ದಿರೋ ಬಹುಕೋಟಿ ಮಹಾ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ, ಹುಬ್ಬಳ್ಳಿಯ ಶಿವಾನಂದ್ ನೀಲಣ್ಣನವರ್ ಕನ್ನಡ ಚಿತ್ರರಂಗದ ಜೊತೆ ನಂಟು ಹೊಂದಿದ್ದ. 4500 ಕೋಟಿ ದೋಖಾ ಕೇಸ್ ರೂವಾರಿ ಈ ಶಿವಾನಂದ್ನೀಲಣ್ಣನವರ್, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ಗೆ ಕೊಟ್ಟಿದ್ದೆಷ್ಟು ಗೊತ್ತಾ? ಈ ಸ್ಟೋರಿ ನೋಡಿ..
01:19 PM (IST) May 20
01:15 PM (IST) May 20
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ಗೆ ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದ ನಂತರ, ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಇದು ಸುಳ್ಳು ಸುದ್ದಿ ಎಂದು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದು, ದರ್ಶನ್ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
12:49 PM (IST) May 20
12:32 PM (IST) May 20
ನಟ ಕಿಶೋರ್ ತಾಯಿಯವರಿಗೆ ಒಂದು ಆಕಸ್ಮಿಕ ಅಪಘಾತ ಸಂಭವಿಸಿತ್ತು. ಗಾಯಗೊಂಡ ತಾಯಿಯನ್ನು ತಕ್ಷಣವೇ ಬೆಂಗಳೂರಿನ ಜೆ.ಪಿ. ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಕಿಶೋರ್ ಫೋನ್ ರಿಸೀವ್ ಮಾಡದ ಕಾರಣ ಆತಂತ ಸೃಷ್ಟಿಯಾಗಿತ್ತು. ಆದರೆ ಈಗ ಕಿಶೋರ್ ಎಲ್ಲದಕ್ಕೂ ಕ್ಲಾರಿಟಿ ಕೊಟ್ಟಿದ್ದಾರೆ. ಅದೇನು ನೋಡಿ..
12:22 PM (IST) May 20
10:53 AM (IST) May 20
ಶಿವಮೊಗ್ಗದ ವಿಶಾಲ್ ಮಾರ್ಟ್ ಲಿಫ್ಟ್ ಘಟನೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಸಮುದಾಯ ಹಾಗೂ ಮಹಿಳೆಯರ ವಿರುದ್ಧ ಕೆಪಿಟಿಸಿಎಲ್ ನೌಕರ ಅವಮಾನಕಾರಿ ಕಾಮೆಂಟ್, ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ.
10:36 AM (IST) May 20
Actor Kishore: ನಟ ಕಿಶೋರ್ ಅವರ ತಾಯಿಗೆ ಅಪಘಾತವಾಗಿದ್ದು, ಈ ಬಗ್ಗೆ ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ನಟ ಕಿಶೋರ್ ಅವರು ಫೋನ್ ರಿಸೀವ್ ಮಾಡದ ಕಾರಣ, ಈ ರೀತಿಯಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
10:24 AM (IST) May 20
ಬೆಂಗಳೂರಿನ ಮಂತ್ರಿಮಾಲ್ನಲ್ಲಿರುವ ಯುವತಿಗೆ ಡಬಲ್ ಜಾಕ್ ಪಾಟ್ ಸಿಕ್ಕಿದೆ. ಈ 'ಡಬಲ್ ಜಾಕ್ಪಾಟ್' ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.
09:48 AM (IST) May 20
ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಂಭ್ರಮಾಚರಣೆ ಮತ್ತು ಸಾಧನಾ ಸಮಾವೇಶವನ್ನು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಮುಖ್ಯಮಂತ್ರಿ ಕನಸನ್ನು ವ್ಯಂಗ್ಯವಾಡಿದ ಅವರು, ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿದ್ದಾರೆ.
09:44 AM (IST) May 20
ಭಾರತ ‘ಮಾನವ್’ ಯೋಜನೆ ಜಾರಿಗೊಳಿಸಿದೆ. ಇಟಲಿಯು ನೈತಿಕತೆಯ ಆಧಾರದಲ್ಲಿ ಎಐ ಅಭಿವೃದ್ಧಿಪಡಿಸುತ್ತಿದೆ. ಎರಡೂ ದೇಶ ಸೇರಿಕೊಂಡು ಕೃತಕ ಬುದ್ಧಿಮತ್ತೆಯು ಸಾಮಾಜಿಕ ಸಬಲೀಕರಣವನ್ನು ದೃಢಪಡಿಸುವುದನ್ನು ಖಚಿತಪಡಿಸಿಕೊಳ್ಳುವತ್ತ ಕೆಲಸ ಮಾಡುತ್ತಿವೆ.
ನರೇಂದ್ರ ಮೋದಿ ಭಾರತದ ಪ್ರಧಾನಿ
09:30 AM (IST) May 20
Cricketer Virat Kohli On Imposter Syndrome: ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ವಿರಾಟ್ ಕೊಹ್ಲಿ ಅವರು ಇಂದು ಕೂಡ ಟಾಪ್ ಲೆವೆಲ್ ಪ್ರದರ್ಶನವನ್ನು ಕೊಡುತ್ತಾರೆ. ಈಗ ಅವರು ತಮಗೆ ಇರುವ ಕಾಯಿಲೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ್ದಾರೆ.
08:59 AM (IST) May 20
08:30 AM (IST) May 20
ಸಂಸದ ರಮೇಶ ಜಿಗಜಿಣಗಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಆಡಳಿತವನ್ನು ಸಾಧನೆಯಲ್ಲ, ಬದಲಿಗೆ 300 ವೈಫಲ್ಯಗಳ ಸರಮಾಲೆ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳು, ಭ್ರಷ್ಟಾಚಾರ, ಮತ್ತು ಮಹಿಳೆಯರ ಅಸುರಕ್ಷತೆಯಂತಹ ವಿಷಯಗಳ ಬಗ್ಗೆ ಅವರು ತೀವ್ರ ವಾಗ್ದಾಳಿ ನಡೆಸಿದರು.
07:47 AM (IST) May 20
07:36 AM (IST) May 20