LIVE NOW
Published : Jan 15, 2026, 06:52 AM ISTUpdated : Jan 15, 2026, 10:41 PM IST

Karnataka News Live: Bhatkal - ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ

ಸಾರಾಂಶ

ಬೆಂಗಳೂರು: ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ದೆಹಲಿಗೆ ಆಹ್ವಾನಿಸಿದ್ದು, ಸಂಕ್ರಾಂತಿ ಬಳಿಕ ಅಲ್ಲಿಗೆ ತೆರಳಿ ಗೊಂದಲ ಬಗೆಹರಿಸಿಕೊಂಡು ಬರುತ್ತಾರೆ ಎಂದು ವಿಧಾನಸಭೆ ಸರ್ಕಾರದ ಮುಖ್ಯಸಚೇತಕ ಅಶೋಕ್‌ ಪಟ್ಟಣ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್‌ಗಾಂಧಿ ಅವರು ಇಬ್ಬರು ನಾಯಕರ ಜತೆ ಮಂಗಳವಾರ ಏನೂ ಚರ್ಚೆ ಮಾಡಿಲ್ಲ. ದೆಹಲಿಗೆ ಬನ್ನಿ ಎಂದು ಕರೆದಿದ್ದಾರೆ ಅಷ್ಟೇ. ಸಂಕ್ರಾಂತಿ ಬಳಿಕ ಇಬ್ಬರೂ ದೆಹಲಿಗೆ ಹೋಗಲಿದ್ದು, ಆಗ ಶೇ.100 ರಷ್ಟು ಗೊಂದಲ ಬಗೆಹರಿಸುವ ವಿಶ್ವಾಸವಿದೆ ಎಂದು ಹೇಳಿದರು. ಹೈಕಮಾಂಡ್‌ ಏನೇ ತೀರ್ಮಾನ ಮಾಡಿದರೂ ನಾವು ಅದಕ್ಕೆ ಬದ್ಧವಾಗಿದ್ದೇವೆ. ಸಂಪುಟ ವಿಸ್ತರಣೆ ಸೇರಿ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಸಂಪುಟ ಪುನರ್‌ರಚನೆ ಆಗಬೇಕು ಎಂಬ ಆಸೆ ನಮಗೂ ಇದೆ, ಅದು ನಮ್ಮ ಬೇಡಿಕೆ ಕೂಡ. ಇವೆಲ್ಲದರ ಬಗ್ಗೆಯೂ ದೆಹಲಿಯಲ್ಲಿ ಚರ್ಚೆಯಾಗಲಿದೆ ಎಂದರು.

Bhatkal Jatre Uttara Kannada

10:41 PM (IST) Jan 15

Bhatkal - ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ

ಉತ್ತರಕನ್ನಡದ ಭಟ್ಕಳದಲ್ಲಿ ಪ್ರಸಿದ್ಧ ಶೇಡಬರಿ ಜಟಕ ಮಹಾಸತಿ ದೇವಿ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆತಿದೆ. ಮಕ್ಕಳಾಗದವರು ಸೇರಿದಂತೆ ಹರಕೆ ಹೊತ್ತ ಭಕ್ತರು, ತಮ್ಮ ಇಷ್ಟಾರ್ಥ ಸಿದ್ಧಿಯಾದ ಬಳಿಕ ಇಲ್ಲಿನ 'ಶೇಡಬರಿ ಮರ' ಏರಿ ಹರಕೆ ಒಪ್ಪಿಸುವುದು ಈ ಜಾತ್ರೆಯ ಪ್ರಮುಖ ವಿಶೇಷತೆಯಾಗಿದೆ.

Read Full Story

10:21 PM (IST) Jan 15

'ಅಶ್ವಿನಿ ಪರ ನಿಂತಿರುವುದು ಯಾಕೆ ಗೊತ್ತಾ?' ಟೀಕಾಕಾರರಿಗೆ ಕರವೇ ಅಧ್ಯಕ್ಷ ನಾರಾಯಣಗೌಡ ಖಡಕ್ ವಾರ್ನಿಂಗ್!

ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಅವರನ್ನು ಕರವೇ ಬೆಂಬಲಿಸುತ್ತಿರುವುದಕ್ಕೆ ವ್ಯಕ್ತವಾದ ಟೀಕೆಗಳಿಗೆ ಟಿ.ಎ. ನಾರಾಯಣಗೌಡ ಪ್ರತಿಕ್ರಿಯಿಸಿದ್ದಾರೆ. ಅಶ್ವಿನಿ ಕನ್ನಡ ಹೋರಾಟಗಾರ್ತಿ ಎಂದು ಸಮರ್ಥಿಸಿಕೊಂಡ ಅವರು, ಇಲ್ಲಸಲ್ಲದ ಪೋಸ್ಟ್ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Read Full Story

10:02 PM (IST) Jan 15

'ನಾಯಿ-ನರಿಗಳು ಕರವೇ ಬಗ್ಗೆ ಮಾತಾಡಿದ್ರೆ ಏನ್‌ ಹೇಳೋಕೆ ಆಗುತ್ತೆ..' ಸುದೀಪ್‌ ಭೇಟಿ ಕುರಿತ ವಿವಾದದ ಬಗ್ಗೆ ನಾರಾಯಣ ಗೌಡ ತಿರುಗೇಟು

Narayana Gowda Slams Trolls Over Sudeep Meeting & BBK12 Controversy ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಪರ ಬ್ಯಾಟಿಂಗ್ ಹಾಗೂ ಕಿಚ್ಚ ಸುದೀಪ್ ಭೇಟಿ ಕುರಿತಾದ ವಿವಾದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಖಡಕ್‌ ತಿರುಗೇಟು ನೀಡಿದ್ದಾರೆ.

 

Read Full Story

09:13 PM (IST) Jan 15

'ನನ್‌ ಮದ್ವೆಗೆ ಏನಾದ್ರೂ ಪ್ರಾಬ್ಲಮ್‌ ಆದ್ರೆ ಗಿಲ್ಲಿನೇ ಕಾರಣ..' ಬಿಗ್‌ಬಾಸ್‌ನಲ್ಲೇ ಅಫರ್‌ ಕೊಟ್ರಾ ಕಾವ್ಯಾ?

ಬಿಗ್‌ಬಾಸ್‌ ಫಿನಾಲೆ ವಾರದಲ್ಲಿ ಗಿಲ್ಲಿ ಮತ್ತು ಕಾವ್ಯಾ ಶೈವ ನಡುವಿನ ಬಾಂಧವ್ಯ ಹೊಸ ತಿರುವು ಪಡೆದಿದೆ. ಗಿಲ್ಲಿ ಕಣ್ಣು ಹೊಡೆದಿದ್ದಕ್ಕೆ ಪ್ರತಿಕ್ರಿಯಿಸಿದ ಕಾವ್ಯಾ, ತನ್ನ ಮದುವೆಗೆ ಗಿಲ್ಲಿಯೇ ಕಾರಣವಾದರೆ ಎಂಬ ಮಾತುಗಳನ್ನಾಡಿದ್ದು, ಇವರಿಬ್ಬರ ನಡುವಿನ ಸಂಭಾಷಣೆ ಪ್ರೀತಿಯ ಸಾಧ್ಯತೆಯನ್ನು ಸೂಚಿಸುತ್ತಿದೆ.
Read Full Story

08:40 PM (IST) Jan 15

ಸಚಿವ ದಿನೇಶ್‌ ಗುಂಡೂರಾವ್‌ ಕಾರ್ಯಕ್ರಮದ ವೇಳೆ ಅಗ್ನಿ ಅವಘಡ

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಭಾಗವಹಿಸಿದ್ದ ಚಿಕ್ಕಪೇಟೆಯ ಸಂಕ್ರಾಂತಿ ಹಬ್ಬದ ಕಾರ್ಯಕ್ರಮದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಪಟಾಕಿ ಕಿಡಿಯಿಂದ ಫ್ಲೆಕ್ಸ್‌ ಬ್ಯಾನರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.
Read Full Story

07:15 PM (IST) Jan 15

ರಂಧ್ರ ಬಿದ್ದು ತುಂಗಭದ್ರಾ ನದಿಯಲ್ಲಿ ನಿಂತ ನಾಡದೋಣಿ, ಬರೋಬ್ಬರಿ 3 ಜಿಲ್ಲೆಗಳ ಸಂಪರ್ಕ ಕಡಿತ! ಜನರ ಪರದಾಟ

 ಮಾಗಳ-ವಿಠ್ಠಲಾಪುರ ಮಧ್ಯೆ ತುಂಗಭದ್ರಾ ನದಿಯಲ್ಲಿ ಸಂಚರಿಸುತ್ತಿದ್ದ ನಾಡದೋಣಿ 15 ದಿನಗಳಿಂದ ಸ್ಥಗಿತಗೊಂಡಿದೆ. ದೋಣಿಯ ತಳದಲ್ಲಿ ರಂಧ್ರ ಬಿದ್ದಿರುವುದರಿಂದ ಪ್ರಯಾಣಿಕರು 30-40 ಕಿ.ಮೀ. ಸುತ್ತುವರಿದು ಪ್ರಯಾಣಿಸುವಂತಾಗಿದ್ದು, ಇಲಾಖೆ ದುರಸ್ತಿಗೆ ಮುಂದಾಗಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

06:55 PM (IST) Jan 15

ಬರೋಬ್ಬರಿ 12 ದಿನವಾದ್ರೂ ಹಿಪ್ಪರಗಿ ಬ್ಯಾರೇಜ್ ದುರಸ್ಥಿಗೆ ಹರಸಾಹಸ, ನೀರು ಸೋರಿಕೆಯಾಗಿ ಅರ್ಧದಷ್ಟು ಪೋಲು!

ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ.22ರ ದುರಸ್ತಿ ಕಾರ್ಯ 12 ದಿನಗಳಿಂದ ಮುಂದುವರೆದಿದ್ದು, ನೀರಿನ ಸೋರಿಕೆ ಸಂಪೂರ್ಣ ನಿಂತಿಲ್ಲ. ಈ ಅವಘಡದಿಂದ 3.5 ಟಿಎಂಸಿ ನೀರು ಪೋಲಾಗಿದ್ದು, ಎಲ್ಲಾ 22 ಗೇಟ್‌ಗಳನ್ನು ಬದಲಾಯಿಸಲು ಸ್ಥಳೀಯ ಮುಖಂಡರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

Read Full Story

06:26 PM (IST) Jan 15

ಕೆ.ಎಸ್. ಈಶ್ವರಪ್ಪ ಬಿಜೆಪಿ ವಾಪಸಾತಿ, ನನ್ನ ಮನಸ್ಸಲ್ಲೂ ಇದೆ ಬಸನಗೌಡ ಯತ್ನಾಳ್ ಮನಸ್ಸಲ್ಲೂ ಇದೆ ಅಂದ್ರು!

ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿಗೆ ಮರಳುವ ಇಂಗಿತವನ್ನು ವ್ಯಕ್ತಪಡಿಸಿದ್ದು, ತಾವೂ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಅವರ ಮನಸ್ಸಲ್ಲೂ ಇದೇ ಇದೆ ಎಂದಿದ್ದಾರೆ. ಪಕ್ಷದಲ್ಲಿ ಬದಲಾವಣೆ ತರಲು ಹೊರಬಂದಿರುವುದಾಗಿ ಹೇಳಿದರು,

Read Full Story

06:08 PM (IST) Jan 15

Bigg Bossಗೆ ವೋಟ್​ ಮಾಡುವ ಅಭಿಮಾನಿಗಳಿಗೆ 'ಲಕ್ಷ್ಮೀ ನಿವಾಸ' ನಟಿ ಹೇಳಿರೋ ಕಿವಿಮಾತೇನು?

ಲಕ್ಷ್ಮೀ ನಿವಾಸ ಧಾರಾವಾಹಿ ಖ್ಯಾತಿಯ ನಟಿ ಅಶ್ವಿನಿ ಆರ್, ಬಿಗ್‌ಬಾಸ್‌ ವೋಟಿಂಗ್ ಕುರಿತು ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ದೇಶದ ಚುನಾವಣೆಗಳಲ್ಲೂ ಇದೇ ರೀತಿ ಮತ ಚಲಾಯಿಸಲು ಪ್ರೇರೇಪಿಸಿದ್ದು, ಅವರ ನಟನಾ ವೃತ್ತಿ ಮತ್ತು ಬ್ಯೂಟಿ ಸಲೂನ್ ವ್ಯವಹಾರದ ಬಗ್ಗೆಯೂ ಈ ಲೇಖನ ಮಾಹಿತಿ ನೀಡುತ್ತದೆ.
Read Full Story

05:59 PM (IST) Jan 15

ಕೋಟ್ಯಾಂತರ ಮೌಲ್ಯದ ಚಿನ್ನ ದರೋಡೆ ಮಾಡಿ ಎಸ್ಕೇಪ್ - ಆರೋಪಿ ಪ್ರೀತ್ ಪನ್ಸೇರ್ ಗಡೀಪಾರಿಗೆ ಭಾರತಕ್ಕೆ ಕೆನಡಾ ಮನವಿ

2023ರಲ್ಲಿ ಕೆನಡಾದ ಟೊರಾಂಟೊ ವಿಮಾನ ನಿಲ್ದಾಣದಲ್ಲಿ ನಡೆದ 20 ಮಿಲಿಯನ್ ಡಾಲರ್ ಮೌಲ್ಯದ ಚಿನ್ನದ ದರೋಡೆ ಪ್ರಕರಣದ ಮುಖ್ಯ ಆರೋಪಿ, ಭಾರತೀಯ ಮೂಲದ ಸಿಮ್ರಾನ್ ಪ್ರೀತ್ ಪನೇಸರ್‌ನನ್ನು ಹಸ್ತಾಂತರಿಸುವಂತೆ ಕೆನಡಾ ಸರ್ಕಾರ ಭಾರತಕ್ಕೆ ಅಧಿಕೃತವಾಗಿ ಮನವಿ ಮಾಡಿದೆ. 

Read Full Story

05:47 PM (IST) Jan 15

ಕಾರುಣ್ಯ ರಾಮ್ ತಂಗಿಯ ಬೆಟ್ಟಿಂಗ್ ಆ್ಯಪ್‌ ಗೀಳು, ಮೈ ತುಂಬಾ ಸಾಲ, ಸಂಪಾದಿಸಿದ ಗೌರವ ತಂಗಿಯಿಂದ ಹೋಯ್ತು ಮಾಧ್ಯಮದ ಮುಂದೆ ಕಣ್ಣೀರಿಟ್ಟ ನಟಿ!

ನಟಿ ಕಾರುಣ್ಯ ರಾಮ್,ತಮ್ಮ ಸಹೋದರಿ ಸಮೃದ್ಧಿ ರಾಮ್ ಅವರ ಬೆಟ್ಟಿಂಗ್ ಆ್ಯಪ್ ಚಟ ಮತ್ತು ಸಾಲ, ವಂಚನೆ ಹಾಗೂ ಮಾನಸಿಕ ಕಿರುಕುಳದ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಮೃದ್ಧಿ ಸುಮಾರು 25 ಲಕ್ಷ ಸಾಲ ಮಾಡಿ ಮನೆ ಬಿಟ್ಟು ಹೋಗಿದ್ದು, ಆಕೆ ಮಾಡಿದ ತಪ್ಪಿಗೆ ಇಂದು ಬೆದರಿಕೆ ಬರುತ್ತಿದೆ ಎಂದಿದ್ದಾರೆ.

Read Full Story

05:39 PM (IST) Jan 15

ನೀವು ಸಣ್ಣ ಸಣ್ಣ ವಿಷಯಕ್ಕೂ ಬೇಜಾರು ಮಾಡ್ಕೋತೀರಾ? - ಇಲ್ಲಿವೆ 5 ಮನೋವೈಜ್ಞಾನಿಕ ಕಾರಣಗಳು

ಜೀವನದಲ್ಲಿ ಒಳ್ಳೆ ಮತ್ತು ಕೆಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವರು ಬೇಗ ಮರೆತರೆ, ಇನ್ನು ಕೆಲವರು ಮನಸ್ಸಲ್ಲೇ ಇಟ್ಟುಕೊಂಡು ಕೊರಗುತ್ತಾರೆ. ಸಣ್ಣ ವಿಷಯಗಳಿಗೂ ಬೇಜಾರಾಗುತ್ತಾರೆ. ಯಾಕೆ ಹೀಗೆ? ಇದರ ಬಗ್ಗೆ ಮನೋವಿಜ್ಞಾನ ಏನು ಹೇಳುತ್ತೆ? ಇಲ್ಲಿ ಓದಿ.

Read Full Story

05:26 PM (IST) Jan 15

ಬಿಗ್ ಬಾಸ್ ಟ್ರೋಫಿಗೂ ಮುನ್ನ ಇತಿಹಾಸ ಸೃಷ್ಟಿಸಿದ ಗಿಲ್ಲಿ ನಟ - ಹಳ್ಳಿ-ಹಳ್ಳಿಗೂ ಡಂಗೂರ, ಎಂಎಲ್‌ಎ ಕೂಡ ಬಿಡ್ಲಿಲ್ಲ!

ಬಿಗ್ ಬಾಸ್ ಸೀಸನ್ 12ರ ಫಿನಾಲೆ ಸಮೀಪಿಸುತ್ತಿದ್ದಂತೆ, ಮಂಡ್ಯದ ಗಿಲ್ಲಿ ನಟನ ಪರವಾಗಿ ಹಳ್ಳಿ-ಹಳ್ಳಿಗಳಲ್ಲಿ ಡಂಗೂರ ಸಾರುವ ಮೂಲಕ ಬೃಹತ್ ವೋಟಿಂಗ್ ಅಭಿಯಾನ ನಡೆಯುತ್ತಿದೆ. ಶಾಸಕರೂ ಸೇರಿದಂತೆ ಜನಸಾಮಾನ್ಯರು ಗಿಲ್ಲಿ ನಟನ ಗೆಲುವಿಗಾಗಿ ಕೈಜೋಡಿಸಿದ್ದು, ಬಿಗ್ ಬಾಸ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.

Read Full Story

05:21 PM (IST) Jan 15

Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​ - ಮಾತು ನಿಜವಾಗೋಯ್ತು- ವಿಡಿಯೋ ವೈರಲ್​

ಬಿಗ್​ಬಾಸ್​ನ ಪ್ರಬಲ ಸ್ಪರ್ಧಿ ಎನಿಸಿರುವ ಗಿಲ್ಲಿ ನಟನ ಕುರಿತು ನಟ ಜಗ್ಗೇಶ್ ಈ ಹಿಂದೆ ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಆಡಿದ್ದ ಮಾತುಗಳು ವೈರಲ್ ಆಗಿವೆ. ಗಿಲ್ಲಿ ನಟನ ಬಗ್ಗೆ ಅಂದು ಜಗ್ಗೇಶ್ ನುಡಿದಿದ್ದ ಭವಿಷ್ಯ ಇದೀಗ ನಿಜವಾಗುತ್ತಿದೆ ಎಂದು ಅಭಿಮಾನಿಗಳು ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.

Read Full Story

04:54 PM (IST) Jan 15

ಬೆಳ್ತಂಗಡಿ ಬಾಲಕ ಸುಮಂತ್ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್ - ಶವ ಪತ್ತೆಯಾದ ಕೆರೆಯಲ್ಲಿ ಕತ್ತಿ ಟಾರ್ಚ್ ಪತ್ತೆ

ಧನುರ್ಮಾಸದ ಪೂಜೆಗೆಂದು ಹೋದ ಬೆಳ್ತಂಗಡಿಯ 16 ವರ್ಷದ ಬಾಲಕ ಸುಮಂತ್, ನಿಗೂಢವಾಗಿ ನಾಪತ್ತೆಯಾಗಿ ನಂತರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಹೊಡೆದಿರುವುದು ದೃಢಪಟ್ಟಿದ್ದು, ಇದೊಂದು ಕೊಲೆ ಎಂದು ಪೊಲೀಸರು ಖಚಿತಪಡಿಸಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.

Read Full Story

04:34 PM (IST) Jan 15

Bigg Bossನಲ್ಲಿ ಊಹಿಸದ ತಿರುವು; ತಬ್ಬಿ ಭಾವುಕರಾದ ಹಾವು-ಮುಂಗುಸಿ! ಗಿಲ್ಲಿಗೆ ಅಶ್ವಿನಿ ಬಹು ಪರಾಕ್​

ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಹತ್ತಿರವಾಗುತ್ತಿದ್ದಂತೆ, ಸದಾ ಹಾವು-ಮುಂಗುಸಿಯಂತಿದ್ದ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಒಂದಾಗಿದ್ದಾರೆ. ಏಕವಚನದಲ್ಲಿ ಮಾತನಾಡಿದ್ದಕ್ಕೆ ಗಿಲ್ಲಿ ನಟ ಅಶ್ವಿನಿಯವರ ಕ್ಷಮೆ ಕೇಳಿದರೆ,  ಅಶ್ವಿನಿ ಧನ್ಯವಾದ ತಿಳಿಸಿದ್ದಾರೆ. ಆಗಿದ್ದೇನು?

Read Full Story

04:28 PM (IST) Jan 15

ಬೆಂಗಳೂರಿನಿಂದ ಮುಂಬೈ ಬರೀ 18 ಗಂಟೆಯಲ್ಲೇ ಪ್ರಯಾಣ? ಶೀಘ್ರದಲ್ಲೇ ಬರಲಿದೆ ದುರಂತೋ ಎಕ್ಸ್‌ಪ್ರೆಸ್‌..!

Bengaluru to Mumbai in 18 Hours: Duronto Express Premium Service Soon ಕೆಎಸ್ಆರ್ ಬೆಂಗಳೂರನ್ನು ಸಿಎಸ್ಎಂಟಿ ಮುಂಬೈಗೆ 18 ಗಂಟೆಗಳಲ್ಲಿ ಸಂಪರ್ಕಿಸುವ ಪ್ರೀಮಿಯಂ ರೈಲು ಸೇವೆ ಆರಂಭವಾಗುವ ಸಾಧ್ಯತೆ ಇದೆ.

 

Read Full Story

04:22 PM (IST) Jan 15

ವಿಜಯ್ ಹಜಾರೆ ಸೆಮಿಫೈನಲ್ - ಒಂದಂಕಿ ಮೊತ್ತಕ್ಕೆ ಮಯಾಂಕ್, ಪಡಿಕ್ಕಲ್ ಔಟ್; ಮತ್ತೆ ಕರ್ನಾಟಕಕ್ಕೆ ಆಸರೆಯಾದ ಅನುಭವಿ ಕ್ರಿಕೆಟಿಗ!

ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್‌ನಲ್ಲಿ ವಿದರ್ಭ ವಿರುದ್ಧ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿತು. ನಾಯಕ ಮಯಾಂಕ್ ಮತ್ತು ಪಡಿಕ್ಕಲ್ ವಿಫಲವಾದರೂ, ಕರುಣ್ ನಾಯರ್ (76) ಮತ್ತು ಕೃಷ್ಣನ್ ಶ್ರೀಜಿತ್ (51*) ಅವರ ಜವಾಬ್ದಾರಿಯುತ ಆಟದಿಂದ ತಂಡ ಚೇತರಿಸಿಕೊಂಡು ಬೃಹತ್ ಮೊತ್ತದತ್ತ ಸಾಗಿತು.
Read Full Story

04:18 PM (IST) Jan 15

ಬಿಗ್ ಬಾಸ್ ಮನೆಗೆ ಬಂದು ಗುಣಗಳನ್ನೇ ಬದಲಿಸಿಕೊಂಡ ಸ್ಪರ್ಧಿ; ನಾನು ವಿಲನ್ ಆಗ್ತೀನಿ ಸಪೋರ್ಟ್ ಮಾಡಿ ಎಂದ ಮಹಾಶಯ!

ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಯೊಬ್ಬರು ತಾನು ಸಿನಿಮಾಗಳಲ್ಲಿ ದೊಡ್ಡ ವಿಲನ್ ಆಗ್ತೇನೆ. ಆಗಲೂ ನೀವು ನನಗೆ ಬೆಂಬಲಿಸಬೇಕು ಎಂದು ಬಿಗ್ ಬಾಸ್ ವೀಕ್ಷಕರ ಮುಂದೆ ಬೆಂಬಲವನ್ನು ಕೋರಿದ್ದಾರೆ. ಆದರೆ ಈ ವ್ಯಕ್ತಿ ಮನೆಯೊಳಗೆ ಬರುವಾಗ ಇದ್ದ ಗುಣಗಳನ್ನು ಬದಲಿಸಿಕೊಂಡಿದ್ದಾರೆ.

Read Full Story

04:01 PM (IST) Jan 15

ಪೌರಾಯುಕ್ತೆಗೆ ಅಶ್ಲೀಲ ಪದ ಬಳಸಿ ಜೀವ ಬೆದರಿಕೆ, ಕೇಸ್ ದಾಖಲಾಗ್ತಿದ್ದಂತೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಎಸ್ಕೇಪ್!

ಶಿಡ್ಲಘಟ್ಟದಲ್ಲಿ ಫ್ಲೆಕ್ಸ್ ತೆರವು ವಿಚಾರವಾಗಿ ಪೌರಾಯುಕ್ತೆಗೆ ಅಶ್ಲೀಲವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಪ್ರಕರಣ ದಾಖಲಾಗುತ್ತಿದ್ದಂತೆ ರಾಜೀವ್ ಗೌಡ ತಲೆಮರೆಸಿಕೊಂಡಿದ್ದಾರೆ.

Read Full Story

03:36 PM (IST) Jan 15

ಮಂಗಳೂರಿನಿಂದ ಮರವಂತೆಗೆ ಇನ್ನು 110 ಕಿ.ಮೀ ಕರಾವಳಿ ದೋಣಿ ಜಾಲ, ಈ ಐದು ಸ್ಥಳಗಳಲ್ಲಿ ಇರಲಿದೆ ಸ್ಟಾಪ್‌!

Mangaluru to Maravanthe Coastal Ferry & ₹180 Cr Water Metro Planned ಮಂಗಳೂರಿನಿಂದ ಮರವಂತೆಗೆ ಕರಾವಳಿ ದೋಣಿ ಜಾಲವನ್ನು ಕರ್ನಾಟಕ ಯೋಜಿಸಿದೆ. ಅದರೊಂದೊಗೆ ಮಂಗಳೂರಿಗೆ 180 ಕೋಟಿ ರೂ.ಗಳ ಜಲ ಮೆಟ್ರೋ ಯೋಜನೆಯನ್ನು ರೂಪಿಸಿದೆ.

Read Full Story

03:04 PM (IST) Jan 15

ಚಾಮರಾಜ ಕ್ಷೇತ್ರಕ್ಕೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ, ಉಪದ್ರ ನೀಡುವ ಜನಪ್ರತಿನಿಧಿ ಬೇಡ, ನಾನು ಆಕ್ಷಾಂಕ್ಷಿ - ಪ್ರತಾಪ್ ಸಿಂಹ

ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಸರ್ಕಾರದ ಆಡಳಿತವನ್ನು 'ಸತ್ತ ಹೆಣ'ಕ್ಕೆ ಹೋಲಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಾಮರಾಜ ಕ್ಷೇತ್ರದ ಜನರಿಗೆ ಉಪದ್ರವ ನೀಡುವ ಜನಪ್ರತಿನಿಧಿಗಳು ಬೇಡ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾಷಾ ಶೈಲಿಯೇ ಕಾರ್ಯಕರ್ತರ ದುರ್ವರ್ತನೆಗೆ ಕಾರಣ ಎಂದು ಆರೋಪಿಸಿದ್ದಾರೆ.

Read Full Story

02:33 PM (IST) Jan 15

BBK 12 - ನಾನು ಆಚೆನೂ ಅಲ್ಲ, ಈಚೆನೂ ಅಲ್ಲ ಎನ್ನುತ್ತ ಅಸಲಿ ವಯಸ್ಸು ತಿಳಿಸಿದ ಕಾವ್ಯಾ ಶೈವ! ಗಿಲ್ಲಿ ಹೇಳಿದ್ದೇನು?

ಬಿಗ್​ಬಾಸ್​ ಸೀಸನ್ 12ರ ಮನೆಯಲ್ಲಿ ಜೆನ್​ ಜಿ ಯಾರು ಎಂಬ ಬಗ್ಗೆ ಸ್ಪರ್ಧಿಗಳಾದ ಕಾವ್ಯಾ ಶೈವ, ರಘು, ಮತ್ತು ಗಿಲ್ಲಿ ನಟ ನಡುವೆ ಚರ್ಚೆ ನಡೆದಿದೆ. ಈ ಚರ್ಚೆಯ ಸಮಯದಲ್ಲಿ, ಕಾವ್ಯಾ ಶೈವ ತಮ್ಮ ನಿಜವಾದ ವಯಸ್ಸನ್ನು ಬಹಿರಂಗಪಡಿಸಿದ್ದಾರೆ. ಗಿಲ್ಲಿ ನಟನ ವಯಸ್ಸೆಷ್ಟು?

Read Full Story

02:26 PM (IST) Jan 15

ರಾಹುಲ್ ಗಾಂಧಿ ಮುಂದೆ ಡಿಕೆ-ಸಿದ್ದು ಹಾಕಿರೋ ಪಟ್ಟುಗಳೇನು? ಸಂಕ್ರಾಂತಿ ಬಳಿಕ ಯಾರ ಜೊತೆಗಿದೆ ಗ್ರಹಬಲದ ಶಕ್ತಿ?

ರಾಹುಲ್ ಗಾಂಧಿ ಭೇಟಿ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಹೋದರ ಡಿ.ಕೆ. ಸುರೇಶ್ ಅವರ ನಿಗೂಢ ಪೋಸ್ಟ್‌ಗಳು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿವೆ. ಸಂಕ್ರಾಂತಿ ನಂತರ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆಯಾಗಲಿದೆಯೇ ಎಂಬ ಚರ್ಚೆಗಳು ಶುರುವಾಗಿದೆ.

Read Full Story

02:09 PM (IST) Jan 15

ಲಕ್ಕುಂಡಿ ನಿಧಿ - ರಿತ್ತಿ ಕುಟುಂಬಕ್ಕೆ ಸಿಕ್ತು ಸಂಪತ್ತು-ಗ್ರಾಮಸ್ಥರಿಗೆ ಬಂತು ಆಪತ್ತು! ಸರ್ಪಕ್ಕಿಂತಲೂ ದೊಡ್ಡ ಭಯ!

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾದ ನಿಧಿಯು ಸರ್ಕಾರಕ್ಕೆ ಸಂತಸ ತಂದರೂ, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ನಿಧಿ ಸಿಕ್ಕ ಕುಟುಂಬವು ಭಯದಿಂದ ಬೇರೆ ಜಾಗಕ್ಕೆ ಸ್ಥಳಾಂತರಗೊಳ್ಳಲು ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

Read Full Story

01:38 PM (IST) Jan 15

ಸಕ್ರಾಂತಿ ದಿನವೇ ರಾಜಕಾರಣದ ಪಥ ಬದಲಿಸಿದ ಕುಮಾರಣ್ಣ; 2028ಕ್ಕೆ ರಾಜ್ಯ ರಾಜಕಾರಣಕ್ಕೆ ರೀ-ಎಂಟ್ರಿ ಖಚಿತ!

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು 2028ರ ವಿಧಾನಸಭಾ ಚುನಾವಣೆಗೆ ರಾಜ್ಯ ರಾಜಕಾರಣಕ್ಕೆ ಮರಳುವ ಸ್ಪಷ್ಟ ಸುಳಿವನ್ನು ನೀಡಿದ್ದಾರೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದ ಅವರು, ಅಧಿಕಾರಿಗಳ ಮೇಲಿನ ದೌರ್ಜನ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

Read Full Story

01:34 PM (IST) Jan 15

ಅಪ್ರಾಪ್ತರಿಂದಲೇ ಅಪ್ರಾಪ್ತ ಬಾಲಕನ ಕೊಲೆ! ಇನ್ಸ್ಟಾಗ್ರಾಮ್ ‘ಡಾನ್’ ಗೀಳು, ಸೋಷಿಯಲ್ ಮೀಡಿಯಾ ಕಾರಣಕ್ಕೆ ಘೋರ ದುರಂತ!

ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ, ಶಾಲೆಯ ಕ್ಷುಲ್ಲಕ ಜಗಳವೊಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಇನ್ಸ್ಟಾಗ್ರಾಮ್‌ನಲ್ಲಿ 'ಡಾನ್' ಆಗಿ ಮೆರೆಯುವ ಗೀಳಿನಿಂದ ಪ್ರೇರಿತರಾಗಿ ಮೂವರು ಅಪ್ರಾಪ್ತರು ಈ ಕೃತ್ಯ ಎಸಗಿದ್ದಾರೆ  

Read Full Story

01:28 PM (IST) Jan 15

ದರ್ಶನ್​ ಇಲ್ಲದ ಸಂಕ್ರಾಂತಿ - ಕುದುರೆ ಜೊತೆ ವಿಜಯಲಕ್ಷ್ಮಿ ಕುತೂಹಲದ ಪೋಸ್ಟ್​- ಅಭಿಮಾನಿಗಳು ಭಾವುಕ

 ನಟ ದರ್ಶನ್ ಜೈಲಿನಲ್ಲಿರುವ ಕಾರಣ, ಅವರ ಪತ್ನಿ ವಿಜಯಲಕ್ಷ್ಮಿ ಪತಿಯ ಅನುಪಸ್ಥಿತಿಯಲ್ಲಿ ಹಬ್ಬವನ್ನು ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಫಾರಂಹೌಸ್​​ನ ಕುದುರೆಯೊಂದಿಗೆ ಸಮಯ ಕಳೆದ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಕಳೆದ ವರ್ಷದ ದರ್ಶನ್ ಜೊತೆಗಿನ ಸಂಭ್ರಮದ ಆಚರಣೆಯನ್ನು ನೆನಪಿಸಿದೆ.

Read Full Story

12:41 PM (IST) Jan 15

ಮಂಡ್ಯದಲ್ಲಿ ಅಮೆರಿಕದ ಸೆಮಿಕಂಡಕ್ಟರ್ ಘಟಕಕ್ಕೆ 100 ಎಕರೆ ಭೂಮಿ ಗುರುತು - ಕೆಐಎಡಿಬಿಗೆ ಸೂಚನೆ

ಅಮೆರಿಕ ಮೂಲದ ಸ್ಯಾನ್ಸನ್ ಗ್ರೂಪ್‌ನ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಮಂಡ್ಯದಲ್ಲಿ 100 ಎಕರೆಗೂ ಹೆಚ್ಚು ಸರ್ಕಾರಿ ಜಾಗ ಲಭ್ಯವಿರುವುದನ್ನು ಗುರುತಿಸಲಾಗಿದೆ. ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರವು ಕೆಐಎಡಿಬಿಗೆ ಸೂಚನೆ ನೀಡಿದೆ. 

Read Full Story

12:25 PM (IST) Jan 15

BBK 12 - ರಕ್ಷಿತಾ ಶೆಟ್ಟಿ ಮನೆಯಿಂದ ಔಟ್​! ಎಲ್ಲರೂ ಮಲಗಿದ್ದಾಗ ರಾತ್ರೋರಾತ್ರಿ ಶಾಕ್​ ಕೊಟ್ಟ ಮಂಗಳೂರು ಪುಟ್ಟಿ!

ಬಿಗ್​ಬಾಸ್​ ಸ್ಪರ್ಧಿ ರಕ್ಷಿತಾ ಶೆಟ್ಟಿ, ತಾನು ಮಿಡ್​ವೀಕ್​ ಎಲಿಮಿನೇಟ್​ ಆಗಿರುವುದಾಗಿ ಹೇಳಿ ಮನೆಮಂದಿಗೆ ಪ್ರಾಂಕ್​ ಮಾಡಿದ್ದಾರೆ. ತನ್ನ ಅನುಪಸ್ಥಿತಿಯಲ್ಲಿ ಇತರರ ಪ್ರತಿಕ್ರಿಯೆ ನೋಡಲು ಅವರು ಕಪ್​ಬೋರ್ಡ್​ನಲ್ಲಿ ಅಡಗಿ ಕುಳಿತಿದ್ದು, ಈ ಪ್ರೊಮೋ ಕುತೂಹಲ ಮೂಡಿಸಿದೆ.
Read Full Story

12:23 PM (IST) Jan 15

ಒಂದೇ ವರ್ಷದಲ್ಲಿ ಎಂಆರ್‌ಪಿಎಲ್‌ ಆದಾಯ 4,119 ಕೋಟಿ ಏರಿಕೆ - ದಾಖಲಿಸಿದ ಒಟ್ಟು ಹಣ ಎಷ್ಟು?

ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ಮೂರನೇ ತ್ರೈಮಾಸಿಕದಲ್ಲಿ 29,720 ಕೋಟಿ ರೂ. ಆದಾಯ ಮತ್ತು 1,445 ಕೋಟಿ ರೂ. ತೆರಿಗೆ ನಂತರದ ಲಾಭ ಗಳಿಸಿದೆ. ಇದೇ ಮೊದಲ ಬಾರಿಗೆ ಲಿಬಿಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ.

Read Full Story

12:19 PM (IST) Jan 15

ಕೋಲಾರದ ನರ್ಸ್ ಸುಜಾತಾ ಮರ್ಡರ್ - 2 ಮಕ್ಕಳ ತಂದೆಯನ್ನು ಲವ್ ಮಾಡಿ ರಸ್ತೆ ಮಧ್ಯದಲ್ಲೇ ಹೆಣವಾದಳು!

ಕೋಲಾರದಲ್ಲಿ ವಿವಾಹಿತ ಪ್ರಿಯಕರನೊಬ್ಬ ತನ್ನ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೆಲಸಕ್ಕೆ ತೆರಳುತ್ತಿದ್ದ ನರ್ಸ್ ಸುಜಾತಾ ಕೊಲೆಗಿದ್ದು, ಪರಾರಿಯಾಗಲು ಯತ್ನಿಸಿದ ಆರೋಪಿ ಚಿರಂಜೀವಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Read Full Story

12:02 PM (IST) Jan 15

ಬೆಂಗಳೂರು - ಅಕ್ರಮ ಬಾಂಗ್ಲಾದೇಶಿಗರು ನೆಲೆಸಿದ್ದ ಶೆಡ್‌ ನಲ್ಲಿ ಸಿಲಿಂಡರ್ ಸ್ಫೋಟ, ಭಾರೀ ಬೆಂಕಿ, ಬಾನೆತ್ತರ ತುಂಬಿಕೊಂಡ ಹೊಗೆ!

ಬೆಂಗಳೂರಿನ ಬೇಗೂರು ಬಳಿ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದ ಶೆಡ್‌ಗಳಲ್ಲಿ ಸಿಲಿಂಡರ್ ಸ್ಫೋಟಗೊಂಡು ಭಾರೀ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲವಾದರೂ, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಾಶವಾಗಿದೆ.  

Read Full Story

11:54 AM (IST) Jan 15

BBK 12 - ನಾಲ್ವರೊಂದಿಗೆ ಅವರಿಬ್ಬರು ಯಾಕಿಲ್ಲ? ವೀಕ್ಷಕರಲ್ಲಿ ಕಸಿವಿಸಿಯುಂಟು ಮಾಡಿದ ಬಿಗ್‌ಬಾಸ್ ಪ್ರೋಮೋ

ಬಿಗ್‌ಬಾಸ್ ಕನ್ನಡ ಸೀಸನ್ 12ರ ಅಂತಿಮ ಹಂತದಲ್ಲಿ ಧ್ರುವಂತ್ ಎಲಿಮಿನೇಟ್ ಆದ ನಂತರ ಅಶ್ವಿನಿ ಒಂಟಿಯಾಗಿದ್ದಾರೆ. ಸಂಕ್ರಾಂತಿ ಹಬ್ಬದ ವಿಶೇಷ ಪ್ರೋಮೋದಲ್ಲಿ, ನಾಲ್ವರು ಸ್ಪರ್ಧಿಗಳು ಮಾತ್ರ ಶುಭಾಶಯ ಕೋರಿದ್ದು, ಅಶ್ವಿನಿ ಮತ್ತು ರಕ್ಷಿತಾ ಕಾಣಿಸಿಕೊಳ್ಳದಿರುವುದು ವೀಕ್ಷಕರಲ್ಲಿ ಚರ್ಚೆಗೆ ಕಾರಣವಾಗಿದೆ. 

Read Full Story

11:28 AM (IST) Jan 15

ಮಕ್ಕಳಿಗೆ ಪಾಠ ಹೇಳಿಕೊಟ್ಟ ಶಾಲಾ ಕೊಠಡಿಯಲ್ಲೇ ನೇಣಿಗೆ ಶರಣಾದ ಸರ್ಕಾರಿ ಶಾಲೆ ಶಿಕ್ಷಕ!

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೊಬ್ಬರು ತರಗತಿ ಕೊಠಡಿಯಲ್ಲೇ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನದ ವಿರಾಮದ ವೇಳೆ ಈ ಘಟನೆ ನಡೆದಿದ್ದು, ಆತ್ಮ*ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

Read Full Story

11:09 AM (IST) Jan 15

ಹಾಸನ ನಿವೇಶನ ವಿವಾದ - ನಿರ್ಮಾಪಕಿ ಪುಷ್ಮಾ ಅರುಣ್‌ಕುಮಾರ್‌ಗೆ ನ್ಯಾಯಾಲಯದಲ್ಲಿ ಹಿನ್ನಡೆ

ಹಾಸನದ ನಿವೇಶನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪುಷ್ಪಾ ಅರುಣ್‌ಕುಮಾರ್‌ ಅವರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ನಿವೇಶನದ ಮಾಲೀಕತ್ವದ ಬಗ್ಗೆ ದೇವರಾಜು ಎಂಬುವವರ ಪರವಾಗಿ ನ್ಯಾಯಾಲಯ ಆದೇಶ ನೀಡಿದ್ದು, ಈ ಆದೇಶಕ್ಕೆ ತಡೆ ಕೋರಿ ಪುಷ್ಪಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿಲ್ಲ. 

Read Full Story

10:50 AM (IST) Jan 15

ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ವಿಧಿವಶ - ಸಿಎಂ, ಡಿಸಿಎಂ ಸಂತಾಪ- ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಕಾಗಿನೆಲೆ ಮಹಾಸಂಸ್ಥಾನದ ತಿಂಥಣಿ ಬ್ರಿಜ್ ಶಾಖಾ ಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಹೃದಯಾಘಾತದಿಂದ ದೈವಾಧೀನರಾಗಿದ್ದಾರೆ. ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡಿದ್ದ ಶ್ರೀಗಳ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲು ಸರ್ಕಾರ ನಿರ್ಧರಿಸಿದೆ.

Read Full Story

10:30 AM (IST) Jan 15

ಸರ್ಕಾರ ಸತ್ತು ಹೋಗಿದೆ, ಸತ್ತ ಆಡಳಿತದ ಹೆಣವನ್ನ ಸಿದ್ದರಾಮಯ್ಯ ಮುಂದೆ, ಡಿಕೆಶಿ ಹಿಂದೆ ಹೊತ್ತಿದ್ದಾರೆ- ಪ್ರತಾಪ್ ಸಿಂಹ

ರಾಜ್ಯ ಸರ್ಕಾರದ ಆಡಳಿತವನ್ನು 'ಸತ್ತ ಹೆಣ'ಕ್ಕೆ ಹೋಲಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಹೆಣವನ್ನು ಹೊತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.

Read Full Story

10:21 AM (IST) Jan 15

ಕಟ್ಟಾ ಅಭಿಮಾನಿಯ ಅದೊಂದು ಪ್ರೀತಿಗೆ ಕರಗಿ ಹೋದ ಗಿಲ್ಲಿ! ಮತ್ತೆ ಹಳೆ ಖದರ್ ತೋರಿಸಿದ ನಿಜವಾದ ಕಲಾವಿದ

ಬಿಗ್ ಬಾಸ್ ಸೀಸನ್ 12ರ ಫೈನಲಿಸ್ಟ್ ಗಿಲ್ಲಿ, ಫಿನಾಲೆಗೂ ಮುನ್ನ ತಮ್ಮ ಅಭಿಮಾನಿಗಳನ್ನು ಭೇಟಿಯಾದರು. ಅಭಿಮಾನಿಯೊಬ್ಬರು ತಮ್ಮ ತೋಳಿನ ಮೇಲೆ ಗಿಲ್ಲಿಯ ಟ್ಯಾಟೂ ಹಾಕಿಸಿಕೊಂಡು ಬಂದಿದ್ದು, ಈ ಪ್ರೀತಿಯಿಂದ ಭಾವುಕರಾದ ಗಿಲ್ಲಿ, ಗೆಲ್ಲುವ ವಿಶ್ವಾಸವನ್ನು ಮರಳಿ ಪಡೆದಿದ್ದಾರೆ.
Read Full Story

09:56 AM (IST) Jan 15

ಒಂದೇ ಏಟಿಗೆ 3 ಹಕ್ಕಿ ಹೊಡೆದ ಸಿಎಂ ಸಿದ್ದರಾಮಯ್ಯ; ಡಿ.ಕೆ.ಶಿವಕುಮಾರ್, ಬಿಜೆಪಿ & ಜೆಡಿಎಸ್ ಪ್ಲಾನ್ ಫ್ಲಾಪ್!

ಸಿಎಂ ಸಿದ್ದರಾಮಯ್ಯ ಹಠಾತ್ ಜಂಟಿ ಅಧಿವೇಶನ ಕರೆಯುವ ಮೂಲಕ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನ ಹೋರಾಟದ ಯೋಜನೆ ವಿಫಲಗೊಳಿಸಿದ್ದಾರೆ. ಜೊತೆಗೆ ಈ ನಿರ್ಧಾರ ಸ್ವಪಕ್ಷದಲ್ಲಿನ ಸಿಎಂ ಬದಲಾವಣೆಯ ಚರ್ಚೆಗೂ ತಾತ್ಕಾಲಿಕವಾಗಿ ತೆರೆ ಎಳೆದು, ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ.

Read Full Story

More Trending News