MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಲಕ್ಕುಂಡಿ ನಿಧಿ: ರಿತ್ತಿ ಕುಟುಂಬಕ್ಕೆ ಸಿಕ್ತು ಸಂಪತ್ತು-ಗ್ರಾಮಸ್ಥರಿಗೆ ಬಂತು ಆಪತ್ತು! ಸರ್ಪಕ್ಕಿಂತಲೂ ದೊಡ್ಡ ಭಯ!

ಲಕ್ಕುಂಡಿ ನಿಧಿ: ರಿತ್ತಿ ಕುಟುಂಬಕ್ಕೆ ಸಿಕ್ತು ಸಂಪತ್ತು-ಗ್ರಾಮಸ್ಥರಿಗೆ ಬಂತು ಆಪತ್ತು! ಸರ್ಪಕ್ಕಿಂತಲೂ ದೊಡ್ಡ ಭಯ!

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾದ ನಿಧಿಯು ಸರ್ಕಾರಕ್ಕೆ ಸಂತಸ ತಂದರೂ, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ನಿಧಿ ಸಿಕ್ಕ ಕುಟುಂಬವು ಭಯದಿಂದ ಬೇರೆ ಜಾಗಕ್ಕೆ ಸ್ಥಳಾಂತರಗೊಳ್ಳಲು ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

2 Min read
Author : Sathish Kumar KH
Published : Jan 15 2026, 02:09 PM IST
Share this Photo Gallery
  • FB
  • TW
  • Linkdin
  • Whatsapp
18
ನಿಧಿ ಪತ್ತೆಯಾದ ಲಕ್ಕುಂಡಿ ಜನರಿಗೆ ಆತಂಕ
Image Credit : Asianet News

ನಿಧಿ ಪತ್ತೆಯಾದ ಲಕ್ಕುಂಡಿ ಜನರಿಗೆ ಆತಂಕ

ಗದಗ (ಜ.15): ಚಾಲುಕ್ಯರ ಕಾಲದ ಐತಿಹಾಸಿಕ ದೇವಾಲಯಗಳ ತವರೂರು, 'ಶಿಲ್ಪಕಲೆಯ ನೆಲೆವೀಡು' ಎಂದೇ ಪ್ರಖ್ಯಾತಿ ಪಡೆದಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಈಗ 'ನಿಧಿ'ಯ ಚರ್ಚೆ ತೀವ್ರಗೊಂಡಿದೆ. ಇತ್ತೀಚೆಗೆ ಗ್ರಾಮದ ರಿತ್ತಿ ಕುಟುಂಬದ ಮನೆಯ ಪಾಯ ಅಗೆಯುವಾಗ ಅನಿರೀಕ್ಷಿತವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ನಿಧಿ ಪತ್ತೆಯಾದ ಬೆನ್ನಲ್ಲೇ, ಸರ್ಕಾರಕ್ಕೆ ಸಂತಸವಾದರೆ-ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ.

28
ದೇವಾಲಯದಲ್ಲಿ 7 ಅಡಿ ಅಗೆದಿದ್ದ ನಿಧಿಗಳ್ಳರು
Image Credit : Asianet News

ದೇವಾಲಯದಲ್ಲಿ 7 ಅಡಿ ಅಗೆದಿದ್ದ ನಿಧಿಗಳ್ಳರು

ಹೌದು, ಲಕ್ಕುಂಡಿಯ ಹೊರವಲಯದಲ್ಲಿರುವ ಪುರಾತನ ಗೋಣಿ ಬಸವೇಶ್ವರ ದೇವಸ್ಥಾನ ಈಗ ನಿಧಿಗಳ್ಳರ ಪ್ರಮುಖ ಗುರಿಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ದುಷ್ಕರ್ಮಿಗಳು ದೇವಸ್ಥಾನದ ಗರ್ಭಗುಡಿಯ ಬಳಿ ಇರುವ ಬಸವಣ್ಣನ ಮೂರ್ತಿಯ ಪಕ್ಕದಲ್ಲಿ ಸುಮಾರು 6-7 ಅಡಿಗಳಷ್ಟು ಆಳದ ಗುಂಡಿ ಅಗೆದು ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಘಟನಾ ಸ್ಥಳದಲ್ಲಿ ನಿಂಬೆಹಣ್ಣು, ಕುಂಕುಮ ಸೇರಿದಂತೆ ಮಾಟ-ಮಂತ್ರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

Related Articles

Related image1
ಲಕ್ಕುಂಡಿ ನಿಧಿಗೆ ಉಂಟು ವಿಜಯನಗರ ಸಾಮ್ರಾಜ್ಯದ ನಂಟು; ಚಿನ್ನಾಭರಣಕ್ಕಿರುವ 300 ವರ್ಷ ಇತಿಹಾಸ ಬಿಚ್ಚಿಟ್ಟ ಡಿಸಿ!
Related image2
ಲಕ್ಕುಂಡಿ: ನಿಧಿ ಸಿಕ್ಕ ಜಾಗದಲ್ಲಿ ದೊಡ್ಡ ಸರ್ಪ ಎದ್ದಿದೆ, ಒಂದಲ್ಲ ಒಂದು ದಿನ ಕಚ್ಚುತ್ತೆ, ನಮಗೆ ಆ ಜಾಗ ಬೇಡವೆಂದ ಕುಟುಂಬ!
38
ಮನೆಗೆ ಬದಲಿ ಜಾಗ ಕೊಡಲು ಜಿಲ್ಲಾಡಳಿತ ಭರವಸೆ
Image Credit : Asianet News

ಮನೆಗೆ ಬದಲಿ ಜಾಗ ಕೊಡಲು ಜಿಲ್ಲಾಡಳಿತ ಭರವಸೆ

ಇತ್ತೀಚೆಗೆ ನಿಧಿ ಪತ್ತೆಯಾದ ರಿತ್ತಿ ಕುಟುಂಬಕ್ಕೆ ಈಗ ಮತ್ತೊಂದು ರೀತಿಯ ಭಯ ಕಾಡುತ್ತಿದೆ. 'ನಿಧಿ ಇರುವ ಜಾಗದಲ್ಲಿ ದೊಡ್ಡ ಸರ್ಪ ವಾಸವಿರುತ್ತದೆ ಮತ್ತು ಅದು ನಿಧಿಯನ್ನು ಕಾಯುತ್ತಿರುತ್ತದೆ. ನಮಗೆ ನಿಧಿ ಸಿಕ್ಕಿದ್ದಕ್ಕೆ ಆ ಸರ್ಪ ಬಂದು ನಮ್ಮ ಕುಟುಂಬದವರನ್ನು ಕಚ್ಚಿ ಸಾಯಿಸುತ್ತದೆ' ಎಂಬ ಭಯದಲ್ಲಿ ಆ ಕುಟುಂಬವಿದೆ. 

ಈ ಹಿನ್ನೆಲೆಯಲ್ಲಿ, 'ನಮಗೆ ನಿಧಿ ಸಿಕ್ಕ ಜಾಗದಲ್ಲಿ ಸರ್ಕಾರವೇ ದೇವಸ್ಥಾನ ಕಟ್ಟಲಿ, ನಮಗೆ ವಾಸಿಸಲು ಬೇರೆಡೆ ಜಾಗ ನೀಡಲಿ' ಎಂದು ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಜಿಲ್ಲಾಡಳಿತ, ಅವರಿಗೆ ಬೇರೆ ಜಾಗವನ್ನು ಮಂಜೂರು ಮಾಡುವ ಭರವಸೆ ನೀಡಿದೆ.

48
ಪುರಾತನ ದೇವಸ್ಥಾನಗಳ ಮೇಲೆ ನಿಧಿಗಳ್ಳರ ಕಣ್ಣು
Image Credit : Asianet News

ಪುರಾತನ ದೇವಸ್ಥಾನಗಳ ಮೇಲೆ ನಿಧಿಗಳ್ಳರ ಕಣ್ಣು

ಈ ಹಿಂದೆ ಕೂಡ ಲಕ್ಕುಂಡಿಯಲ್ಲಿ ಇಂತಹ ಹಲವು ಪ್ರಕರಣಗಳು ವರದಿಯಾಗಿದ್ದವು. 'ಲಕ್ಕುಂಡಿಯಲ್ಲಿ ಎಲ್ಲಿ ಅಗೆದರೂ ಚಿನ್ನ ಸಿಗುತ್ತದೆ' ಎಂಬ ನಂಬಿಕೆ ಬಲವಾಗಿರುವುದರಿಂದ, ಇಲ್ಲಿನ ಪ್ರತಿಯೊಂದು ಪುರಾತನ ಕಲ್ಲುಗಳ ಅಡಿಯಲ್ಲೂ ನಿಧಿ ಇರುತ್ತದೆ ಎಂದು ನಿಧಿಗಳ್ಳರು ನಂಬಿದ್ದಾರೆ. ಇದರಿಂದಾಗಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಶಿಲ್ಪಕಲೆಗಳು ಮತ್ತು ದೇವಾಲಯಗಳು ನಾಶವಾಗುವ ಭೀತಿ ಎದುರಾಗಿದೆ. ಒಟ್ಟಾರೆ ಲಕ್ಕುಂಡಿಯ ಪುರಾತನ ದೇವಸ್ಥಾನಗಳ ಮೇಲೆ ನಿಧಿಗಳ್ಳರ ಕಣ್ಣು ಬಿದ್ದಿದೆ. ಇದು ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

58
65 ಲಕ್ಷದ ನಿಧಿಯಲ್ಲಿ ಕುಟುಂಬಕ್ಕೆ ಸಿಗುವ ಪಾಲು ಎಷ್ಟು?
Image Credit : Asianet News

65 ಲಕ್ಷದ ನಿಧಿಯಲ್ಲಿ ಕುಟುಂಬಕ್ಕೆ ಸಿಗುವ ಪಾಲು ಎಷ್ಟು?

ಪುರಾತತ್ವ ಇಲಾಖೆಯ ಮಾಹಿತಿಯಂತೆ, ರಿತ್ತಿ ಕುಟುಂಬದ ಮನೆಯಲ್ಲಿ ಸಿಕ್ಕಿರುವ ಚಿನ್ನಾಭರಣಗಳ ಒಟ್ಟು ಮೌಲ್ಯ ಅಂದಾಜು 65 ಲಕ್ಷ ರೂಪಾಯಿಗಳು. ಸರ್ಕಾರದ ನಿಯಮಾವಳಿಯ ಪ್ರಕಾರ, ಖಾಸಗಿ ಜಾಗದಲ್ಲಿ ನಿಧಿ ಪತ್ತೆಯಾದಾಗ ಆ ವ್ಯಕ್ತಿ ಅಥವಾ ಕುಟುಂಬಕ್ಕೆ ನಿಧಿಯ ಒಟ್ಟು ಮೌಲ್ಯದ ಶೇ. 20 ರಷ್ಟು (1/5 ಭಾಗ) ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ. ಈ ಲೆಕ್ಕಾಚಾರದಂತೆ ಸರ್ಕಾರವು ರಿತ್ತಿ ಕುಟುಂಬಕ್ಕೆ 13 ಲಕ್ಷ ರೂಪಾಯಿ ಹಣವನ್ನು ನೀಡಲಿದೆ.

68
ಲಕ್ಕುಂಡಿ ನಾಣ್ಯ ಟಂಕಸಾಲೆ ಆಗಿತ್ತು
Image Credit : Asianet News

ಲಕ್ಕುಂಡಿ ನಾಣ್ಯ ಟಂಕಸಾಲೆ ಆಗಿತ್ತು

ಹಿಂದೆ ಬ್ರಿಟಿಷರ ಕಾಲದಲ್ಲೂ ಲಕ್ಕುಂಡಿಯ ಜೈನ ಬಸದಿಗಳು ಮತ್ತು ದೇವಾಲಯಗಳಲ್ಲಿ ಹೇರಳವಾದ ಬಂಗಾರ ದೊರೆತಿತ್ತು ಎಂಬ ಉಲ್ಲೇಖಗಳಿವೆ. ಲಕ್ಕುಂಡಿಯನ್ನು ಹಿಂದೆ 'ಲೋಕಿ ಗುಂಡಿ' ಎಂದು ಕರೆಯಲಾಗುತ್ತಿತ್ತು ಮತ್ತು ಇಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಪ್ರಸಿದ್ಧ ಟಂಕಸಾಲೆ (Mint) ಇತ್ತು. ಹೀಗಾಗಿಯೇ ಇಲ್ಲಿ ಚಿನ್ನದ ನಾಣ್ಯಗಳು ಸಿಗುವುದು ಸಾಮಾನ್ಯವಾಗಿದೆ.

78
ಇತಿಹಾಸದ ನೆನಪು
Image Credit : Asianet News

ಇತಿಹಾಸದ ನೆನಪು

ಜಿಲ್ಲಾಡಳಿತ ಮತ್ತು ಪುರಾತತ್ವ ಇಲಾಖೆಯು ಲಕ್ಕುಂಡಿಯ ಪ್ರತಿಯೊಂದು ದೇವಾಲಯಕ್ಕೂ ಸಿಸಿಟಿವಿ ಕ್ಯಾಮೆರಾ ಮತ್ತು ಕಟ್ಟುನಿಟ್ಟಿನ ಭದ್ರತೆಯನ್ನು ಒದಗಿಸದಿದ್ದರೆ, ಈ ಐತಿಹಾಸಿಕ ತಾಣ ನಿಧಿಗಳ್ಳರ ಪಾಲಾಗುವುದರಲ್ಲಿ ಸಂಶಯವಿಲ್ಲ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

88
ಲಕ್ಕುಂಡಿ ದೇವಾಲಯ, ಬಸದಿಗಳ ಶಿಲ್ಪಕಲೆಯ ಇತಿಹಾಸ
Image Credit : Instragram

ಲಕ್ಕುಂಡಿ ದೇವಾಲಯ, ಬಸದಿಗಳ ಶಿಲ್ಪಕಲೆಯ ಇತಿಹಾಸ

ಲಕ್ಕುಂಡಿಯು ಅದ್ಭುತವಾದ ದೇವಾಲಯಗಳಿಂದ ತುಂಬಿದೆ ಮತ್ತು ಇದನ್ನು ಸೂಕ್ತವಾಗಿ 'ಶಿಲ್ಪ ಕಾಶಿ' ಎಂದು ಕರೆಯಲಾಗುತ್ತದೆ. ಬ್ರಹ್ಮ ಜಿನಾಲಯ - ಬ್ರಹ್ಮ ಜಿನಾಲಯವು ಬೃಹತ್ ಮತ್ತು ಸುಂದರವಾದ ದೇವಾಲಯವಾಗಿದೆ. ಇದನ್ನು ದಾನ ಚಿಂತಾಮಣಿ ಅತ್ತಿಮಬ್ಬೆ ಕ್ರಿ. ಶ 1007 ರಲ್ಲಿ ನಿರ್ಮಿಸಿದರು. ಇದು ಆಯಾತಕಾರದ ಗರ್ಭಗೃಹ ಅರ್ಧ ಮಂಟಪ, ನವರಂಗ ಮತ್ತು ತೆರದ ಮುಖ ಮಂಟಪಗಳನ್ನು ಒಳಗೊಂಡಿದೆ. 

ಎತ್ತರವಾದ ಮತ್ತು ಅಲಂಕರಿಸಿದ ಪಾಣಿ ಪೀಠದ ಗರ್ಭಗೃಹದಲ್ಲಿ ಬ್ರಹ್ಮ ಜನ ಎಂದು ಕರೆಯಲ್ಪಡುವ ನೇಮಿನಾಥನ ಪ್ರತಿಮೆಯು ಬಹಳ ಆಕರ್ಷಕವಾಗಿದೆ. ಈ ಹಸಿರು ಕಣ್ಣಿನ ಪ್ರತಿಮೆಯ ಹಿಂದೆ ಪ್ರಭಾವಳಿ ಇಂದ ಅಲಂಕರಿಸಲಾಗಿದೆ ಮತ್ತು ಎರಡೂ ಬದಿಗಳಲ್ಲಿ ಚಾಮರಧಾರರ ಪ್ರತಿಮೆಗಳನ್ನು ಕೆತ್ತಲಾಗಿದೆ. ಪ್ರವೇಶ ದ್ವಾರದ ಮೇಲೆ ಹಲವು ಅಲಂಕಾರಿಕ ಹೂವುಗಳು, ಬಣ್ಣಗಳನ್ನು ಕೆತ್ತಲಾಗಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಗದಗ
ಬಂಗಾರದ ನಿಧಿ
ಚಿನ್ನ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಅಪ್ರಾಪ್ತರಿಂದಲೇ ಅಪ್ರಾಪ್ತ ಬಾಲಕನ ಕೊಲೆ! ಇನ್ಸ್ಟಾಗ್ರಾಮ್ ‘ಡಾನ್’ ಗೀಳು, ಸೋಷಿಯಲ್ ಮೀಡಿಯಾ ಕಾರಣಕ್ಕೆ ಘೋರ ದುರಂತ!
Recommended image2
ಒಂದೇ ವರ್ಷದಲ್ಲಿ ಎಂಆರ್‌ಪಿಎಲ್‌ ಆದಾಯ 4,119 ಕೋಟಿ ಏರಿಕೆ: ದಾಖಲಿಸಿದ ಒಟ್ಟು ಹಣ ಎಷ್ಟು?
Recommended image3
ಕೋಲಾರದ ನರ್ಸ್ ಸುಜಾತಾ ಮರ್ಡರ್: 2 ಮಕ್ಕಳ ತಂದೆಯನ್ನು ಲವ್ ಮಾಡಿ ರಸ್ತೆ ಮಧ್ಯದಲ್ಲೇ ಹೆಣವಾದಳು!
Related Stories
Recommended image1
ಲಕ್ಕುಂಡಿ ನಿಧಿಗೆ ಉಂಟು ವಿಜಯನಗರ ಸಾಮ್ರಾಜ್ಯದ ನಂಟು; ಚಿನ್ನಾಭರಣಕ್ಕಿರುವ 300 ವರ್ಷ ಇತಿಹಾಸ ಬಿಚ್ಚಿಟ್ಟ ಡಿಸಿ!
Recommended image2
ಲಕ್ಕುಂಡಿ: ನಿಧಿ ಸಿಕ್ಕ ಜಾಗದಲ್ಲಿ ದೊಡ್ಡ ಸರ್ಪ ಎದ್ದಿದೆ, ಒಂದಲ್ಲ ಒಂದು ದಿನ ಕಚ್ಚುತ್ತೆ, ನಮಗೆ ಆ ಜಾಗ ಬೇಡವೆಂದ ಕುಟುಂಬ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved