ಮಡಿಕೇರಿ: ಬಿಜೆಪಿಯಲ್ಲಿ ಇರುವ ಶ್ರೀರಾಮುಲು ಅವರಿಗೆ ಕಾಂಗ್ರೆಸ್ ಬಗ್ಗೆ ಆಸಕ್ತಿ ಏಕೆ ಎಂದು ಸಚಿವ ಎಚ್.ಸಿ. ಮಹದೇವಪ್ಪ ಪ್ರಶ್ನಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು, ನವೆಂಬರ್ ಕ್ರಾಂತಿ ನಡೆಯುತ್ತೋ ಇಲ್ಲೋ, ಹಾಗೇ ಸಂಕ್ರಾಂತಿ ನಡೆಯುತ್ತೋ ಇಲ್ಲೋ ಆದರೆ ಸಿಎಂ ಸ್ಥಾನ ಬದಲಾವಣೆ ಆಗುವುದು ಖಚಿತ ಎನ್ನುವ ಮಾಜಿ ಸಚಿವ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ನಲ್ಲಿ ಏನು ನಡೆಯುತ್ತದೆ ಎನ್ನುವುದು ಅವರಿಗೆ ಗೊತ್ತಿಲ್ಲ. ಇದು ಶ್ರೀರಾಮುಲು ಅವರಿಗೆ ಬೇಕಿಲ್ಲದ ವಿಚಾರ ಎಂದರು. ಸಚಿವ ಸಂಪುಟ ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಚಿವ ಸಂಪುಟ ಪುನಾರಚನೆ ವಿಚಾರ ಹೈಕಮಾಂಡ್, ಸಿಎಂಗೆ ಬಿಟ್ಟ ವಿಚಾರ ಎಂದು ಹೇಳಿದರು.

11:29 PM (IST) Oct 13
Bigg Boss Kannada 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಇಷ್ಟುದಿನ ಸೈಲೆಂಟ್ ಆಗಿದ್ದ ಧ್ರುವಂತ್, ಸ್ಪಂದನಾ ಸೋಮಣ್ಣ ಜೊತೆಗೆ ಜಗಳ ಆಡಿದ್ದಾರೆ. ಇದು ಎಲ್ಲರಿಗೂ ಆಶ್ಚರ್ಯ ತಂದಿದೆ. ಇಷ್ಟುದಿನ ಒಳ್ಳೆಯವನು ಎಂದು ನಾಟಕ ಮಾಡ್ತಿದ್ದೆ, ಈಗ ಒಳ್ಳೆಯತನ ಏನು ಎಂದು ತೋರಿಸ್ತೀನಿ ಎಂದಿದ್ದಾರೆ.
10:50 PM (IST) Oct 13
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮಲ್ಲಮ್ಮ ಈ ಸೀಸನ್ನ ಹಿರಿಯ ಸ್ಪರ್ಧಿ. ಕೆಲ ವಿಷಯಗಳು ಅರ್ಥ ಆಗೋದಿಲ್ಲ ಎಂದು ಮುಗ್ಧವಾಗಿ ಕಾಣಿಸಿಕೊಳ್ಳುವ ಮಲ್ಲಮ್ಮ ಆಗಾಗ ಕೂಗಿದ್ದು ಉಂಟು. ಇವರ ಮಕ್ಕಳು ಯಾರು? ಏನು ಮಾಡುತ್ತಿದ್ದಾರೆ ಎಂದು ಅನೇಕರಿಗೆ ಕುತೂಹಲ ಇದೆ.
10:35 PM (IST) Oct 13
10:01 PM (IST) Oct 13
ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಶೂಟಿಂಗ್ ಸೆಟ್ನಿಂದ ವಿಡಿಯೋವೊಂದು ಲೀಕ್ ಆಗಿದೆ. ಇದರಲ್ಲಿ ಯಶ್ ಅವರ ಸಿಕ್ಸ್ ಪ್ಯಾಕ್ ಹಾಗೂ ಧೂಮಪಾನ ಮಾಡುವ ಲುಕ್ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.
09:30 PM (IST) Oct 13
ರತನ್ ಟಾಟಾ ಅವರ ಮಲಸಹೋದರ ನೋಯೆಲ್ ಟಾಟಾ, ಟಾಟಾ ಟ್ರಸ್ಟ್ನ ಮಂಡಳಿ ಹೋರಾಟದಲ್ಲಿ ಸೋಲು ಕಂಡಿದ್ದಾರೆ. ಮೆಹ್ಲಿ ಮಿಸ್ತ್ರಿ ಬಣದ ವಿರೋಧದಿಂದಾಗಿ ಈ ಭಿನ್ನಾಭಿಪ್ರಾಯ ಭುಗಿಲೆದ್ದಿದ್ದು, ಟಾಟಾ ಸನ್ಸ್ ಅನ್ನು ಷೇರುಪೇಟೆಯಲ್ಲಿ ಪಟ್ಟಿ ಮಾಡುವ ಒತ್ತಡ ಹೆಚ್ಚಾಗಿದೆ.
09:30 PM (IST) Oct 13
Expert Committee Flags Major Flaws in DPR of Bengaluru Tunnel Road ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ನಡುವಿನ ಪ್ರಸ್ತಾವಿತ ಸುರಂಗ ಮಾರ್ಗದ ವಿವರವಾದ ಯೋಜನಾ ವರದಿಯಲ್ಲಿ (ಡಿಪಿಆರ್) ಗಂಭೀರ ಲೋಪಗಳಿವೆ ಎಂದು ತಜ್ಞರ ಸಮಿತಿಯು ಕಳವಳ ವ್ಯಕ್ತಪಡಿಸಿದೆ.
09:29 PM (IST) Oct 13
Amruthadhaare Tv Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್, ಭೂಮಿಕಾ ದೂರ ಆಗಿರೋದು ವೀಕ್ಷಕರಿಗೆ ಬೇಸರ ತಂದಿದೆ. ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ಗಳಿಗೆ ಕೆಲವರು ನೆಗೆಟಿವ್ ಕಾಮೆಂಟ್ಗಳನ್ನು ಹಾಕುತ್ತಿದ್ದರು, ಅದಕ್ಕೆ ಛಾಯಾ ಸಿಂಗ್ ತಿರುಗೇಟು ಕೊಟ್ಟಿದ್ದಾರೆ.
09:25 PM (IST) Oct 13
09:21 PM (IST) Oct 13
ಸಚಿವ ಸಂತೋಷ್ ಲಾಡ್ ಅವರು ಬಿಜೆಪಿಯನ್ನು 'ತಾಲಿಬಾನ್ ಮನಸ್ಥಿತಿ'ಗೆ ಹೋಲಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರಿ ಪ್ರದೇಶಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳನ್ನು ನಿಷೇಧಿಸುವ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡ ಅವರು, ಈ ಹಿಂದೆ ಸರ್ದಾರ್ ಪಟೇಲ್ ಅವರೇ ಆರ್ಎಸ್ಎಸ್ ಅನ್ನು ನಿಷೇಧಿಸಿದ್ದರು.
08:59 PM (IST) Oct 13
Bigg Boss Kannada Season 12 Mid week Finale: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ಬಾರಿ ಮಿಡ್ ಎಲಿಮಿನೇಶನ್ ನಡೆಯಲಿದೆ. ದೊಡ್ಡ ಸಂಖ್ಯೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಆಗಲಿದೆ. ಅಂದಹಾಗೆ ಈಗ ವಿನ್ನರ್ ಆಗುವವರಿಗೆ ಸಿಗೋ ಬಹುಮಾನ ಏನು?
08:44 PM (IST) Oct 13
'ಕಾಂತಾರ ಚಾಪ್ಟರ್-1' ಚಿತ್ರದಲ್ಲಿ ಮ್ಯೂಟಂಟ್ ರಘು ಖ್ಯಾತಿಯ ರಾಘವೇಂದ್ರ ಹೊಂಡದಕೇರಿ ತಮ್ಮ ಪಾತ್ರದ ಮೇಕಪ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಪ್ರತಿದಿನ ನಾಲ್ಕೈದು ಗಂಟೆಗಳ ಮೇಕಪ್, ಭಾರವಾದ ವೇಷಭೂಷಣಗಳೊಂದಿಗೆ ಚಿತ್ರೀಕರಣದ ಸವಾಲುಗಳನ್ನು ವಿವರಿಸಿದ್ದಾರೆ.
08:32 PM (IST) Oct 13
ಬ್ರಹ್ಮಗಂಟು ಧಾರಾವಾಹಿಯಲ್ಲಿ, ದೀಪಾ ಈಗ ದಿಶಾಳಾಗಿ ಸೌಂದರ್ಯಗೆ ಸವಾಲು ಹಾಕುತ್ತಿದ್ದಾಳೆ. ತನ್ನ ಸಹೋದರಿ ರೂಪಾಳನ್ನು ಸೌಂದರ್ಯ ಅವಮಾನಿಸಿದಾಗ, ದೀಪಾ ಅವಳನ್ನು ತಡೆದು ಬುದ್ಧಿ ಹೇಳುತ್ತಾಳೆ. ಆದರೆ, ದಿಶಾಳೇ ತನ್ನ ತಂಗಿ ದೀಪಾ ಎಂಬ ಸತ್ಯ ರೂಪಾಳಿಗೆ ಗೊತ್ತಾಗತ್ತಾ?
08:24 PM (IST) Oct 13
ರಾಜು ತಾಳಿಕೋಟೆ ಅವರು ಉಡುಪಿಯ ಹೆಬ್ರಿಯಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಪುತ್ರ ಭರತ್ ತಾಳಿಕೋಟೆ ಈ ಸುದ್ದಿಯನ್ನು ಖಚಿತಪಡಿಸಿದ್ದು, ಅಂತಿಮ ಸಂಸ್ಕಾರವು ವಿಜಯಪುರ ಜಿಲ್ಲೆಯ ಚಿಕ್ಕಸಿಂಧಗಿ ಗ್ರಾಮದ ಅವರ ತೋಟದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
08:18 PM (IST) Oct 13
ಸಿನಿಮಾ ಶೂಟಿಂಗ್ ನಡುವೆ ರಾಜು ತಾಳಿಕೋಟೆ ನಿಧನ, ಆಸ್ಪತ್ರೆ ಮುಂದೆ ಶೈನ್ ಶೆಟ್ಟಿ ಕಣ್ಣೀರು ಹಾಕಿದ್ದಾರೆ. ತಮ್ಮದೇ ಸಿನಿಮಾದಲ್ಲಿ ನಟಿಸುತ್ತಿದ್ದ ರಾಜು ತಾಳಿಕೋಟೆ ಅಗಲಿಕೆ ನಾಯಕ ನಟ ಶೈನ್ ಶೆಟ್ಟಿಗೆ ತೀವ್ರ ನೋವುಂಟು ಮಾಡಿದೆ.
07:54 PM (IST) Oct 13
ಜಪಾನ್ನಲ್ಲಿ ಫ್ಲೂ ಸಾಂಕ್ರಾಮಿಕವು ನಿಗದಿತ ಸಮಯಕ್ಕಿಂತ ಐದು ವಾರಗಳ ಮುಂಚಿತವಾಗಿ ಪ್ರಾರಂಭವಾಗಿದ್ದು, ದೇಶಾದ್ಯಂತ ಆತಂಕ ಸೃಷ್ಟಿಸಿದೆ. ಸಾವಿರಾರು ಪ್ರಕರಣಗಳು ವರದಿಯಾಗಿದ್ದು, ಶಾಲೆಗಳನ್ನು ಮುಚ್ಚಲಾಗುತ್ತಿದೆ. ಈ H3N2 ವೈರಸ್ ಹರಡುವಿಕೆಯು, ಮುಂಬರುವ ಚಳಿಗಾಲದಲ್ಲಿ ಭಾರತಕ್ಕೂ ಎಚ್ಚರಿಕೆಯ ಗಂಟೆಯಾಗಿದೆ.
07:45 PM (IST) Oct 13
ಉತ್ತರ ಕರ್ನಾಟಕದ ಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಟಕ ಮತ್ತು ಸಿನಿಮಾ ಮೂಲಕ ನಗಿಸುತ್ತಿದ್ದ ರಾಜು ಅವರ ಕುಟುಂಬದಲ್ಲಿ ನಗುವೇ ಇರಲಿಲ್ಲ. ರಾಜರಾಣಿ ರಿಯಾಲಿಟಿ ಶೋನಲ್ಲಿ ನಟಿ ತಾರಾ ಮಧ್ಯಸ್ಥಿಕೆಯಲ್ಲಿ ರಾಜು ಅವರ ಒಡೆದ ಕುಟುಂಬವನ್ನು ಒಂದುಗೂಡಿಸಲಾಗಿತ್ತು.
07:44 PM (IST) Oct 13
ಸಿನಿಮಾ ಶೂಟಿಂಗ್ ವೇಳೆ ಕಾಣಿಸಿಕೊಂಡಿದ್ದ ಎದೆನೋವು, ರಾಜು ತಾಳಿಕೋಟೆ ಅಂತಿಮ ಕ್ಷಣ ಮಾಹಿತಿ ಬಹಿರಂಗವಾಗಿದೆ. ಎಲ್ಲರ ನಗಿಸುತ್ತಿದ್ದ ರಾಜು ತಾಳಿಕೋಟೆ ಮನಸ್ಸಿನಲ್ಲಿ ನೋವೇ ತುಂಬಿಕೊಂಡಿತ್ತು. ಉಡುಪಿಯಲ್ಲಿ ಶೂಟಿಂಗ್ ಪ್ರಕ್ರಿಯೆಯಲ್ಲಿದ್ದ ರಾಜು ತಾಳಿಕೋಟೆ ಅಂತಿಮ ಕ್ಷಣದಲ್ಲಿ ಏನಾಯ್ತು?
06:56 PM (IST) Oct 13
Veteran Kannada Actor Raju Talikote Passes Away ಪ್ರಸಿದ್ಧ ರಂಗಭೂಮಿ ಕಲಾವಿದ ಮತ್ತು ನಟ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನರಾದರು. 'ಮನಸಾರೆ' ಚಿತ್ರದ ಪಾತ್ರದಿಂದ ಜನಪ್ರಿಯರಾಗಿದ್ದ ಅವರು, ಬಿಗ್ಬಾಸ್ನಲ್ಲಿ ತಮ್ಮ ಇಬ್ಬರು ಪತ್ನಿಯರ ಕುಟುಂಬವನ್ನು ಪರಿಚಯಿಸಿ ಅಚ್ಚರಿ ಮೂಡಿಸಿದ್ದರು.
06:55 PM (IST) Oct 13
ನಾನು ಸಿಎಂ ಆಗಿದ್ದರೆ ಗ್ಯಾರಂಟಿ ಯೋಜನೆ ಜಾರಿಗೆ ತರುತ್ತಿರಲಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಶಾಸಕ ಆರ್.ವಿ. ದೇಶಪಾಂಡೆ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಜನಪರ ನಿಲುವು ಶ್ಲಾಘಿಸಿದ್ದಾಗಿ, ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಎಲ್ಲಿಯೂ ಹೇಳಿಲ್ಲ ಎಂದರು.
06:35 PM (IST) Oct 13
How Rajesaba Maktumasab Yankanchi Became Raju Talikote ಕನ್ನಡದ ಪ್ರಸಿದ್ಧ ಹಾಸ್ಯ ನಟ ಹಾಗೂ ರಂಗಕರ್ಮಿ ರಾಜು ತಾಳಿಕೋಟೆ ನಿಧನರಾಗಿದ್ದಾರೆ. ಮನಸಾರೆ, ಪಂಚರಂಗಿ ಚಿತ್ರಗಳಲ್ಲಿನ ಪಾತ್ರಗಳಿಂದ ಜನಪ್ರಿಯರಾಗಿದ್ದ ಅವರು, ನಟನೆಗೆ ಬರುವ ಮುನ್ನ ಲಾರಿ ಕ್ಲೀನರ್ ಆಗಿ ಕೆಲಸ ಮಾಡಿದ್ದರು.
06:28 PM (IST) Oct 13
ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆ ಕಾರಣದಿಂದಾಗಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದು, ಸಮೀಕ್ಷೆಯ ಗಡುವನ್ನು ಅಕ್ಟೋಬರ್ 18ರವರೆಗೆ ವಿಸ್ತರಿಸಲಾಗಿದೆ
06:21 PM (IST) Oct 13
ಹಿರಿಯ ರಂಗ ಕಲಾವಿದ ಮತ್ತು ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟೆ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ 'ಖಾಸ್ಗತೇಶ್ವರ' ನಾಟಕ ಮಂಡಳಿಯ ಮಾಲೀಕರಾಗಿ, ಕುಡುಕನ ಪಾತ್ರಗಳ ಮೂಲಕ ಮನೆಮಾತಾಗಿದ್ದರು.
05:52 PM (IST) Oct 13
'ಡೆವಿಲ್' ಸಿನಿಮಾದ 'ಒಂದೇ ಒಂದು ಸಲ' ಹಾಡಿನ ಯಶಸ್ಸಿನ ಬೆನ್ನಲ್ಲೇ, ಸಹನಟಿ ರಚನಾ ರೈ ಅವರು ದರ್ಶನ್ ಜೊತೆಗಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ದರ್ಶನ್ ಅವರ ವೃತ್ತಿಪರತೆ, ತಾಳ್ಮೆ ಮತ್ತು ಸೌಜನ್ಯವನ್ನು ಶ್ಲಾಘಿಸಿದ್ದಾರೆ.
05:41 PM (IST) Oct 13
ಕಾರ್ಪೋರೇಟ್ ಕೆಲಸ ಬಿಟ್ಟು ಉಬರ್ ಡ್ರೈವರ್ ಆದ ಬೆಂಗಳೂರಿಗ, ನಿಮ್ಮನ್ನೂ ಕಾಡಲಿದೆ ಕಾರಣ, ಈತನಿಗೆ ತಿಂಗಳಿಗೆ 40 ಸಾವಿರ ರೂ ವೇತನ, ಖಾಯಂ ಕೆಲಸವಿದ್ದರೂ ಅದೆಲ್ಲಾ ಬಿಟ್ಟು ಉಬರ್ ಚಾಲಕನಾಗಿ ಕೆಲಸ ಮಾಡುತ್ತಿರುವುದೇಕೆ?
05:27 PM (IST) Oct 13
ಡಿಸೈನರ್ ಮನಿಷ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿಯಲ್ಲಿ ಉದ್ಯಮಿ ನೀತಾ ಅಂಬಾನಿ ತಮ್ಮ 15 ಕೋಟಿ ರೂಪಾಯಿ ಮೌಲ್ಯದ ಹರ್ಮಿಸ್ ಬಿರ್ಕಿನ್ ಬ್ಯಾಗ್ನೊಂದಿಗೆ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಈ ಬ್ಯಾಗ್ನ ವಿಶೇಷತೆ ಏನು ಇಲ್ಲಿದೆ ಮಾಹಿತಿ.
05:04 PM (IST) Oct 13
04:36 PM (IST) Oct 13
ದೀಪಾವಳಿ ಹಬ್ಬದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ಕರಾರಸಾ ನಿಗಮವು ಅಕ್ಟೋಬರ್ 17 ರಿಂದ 20, 2025 ರವರೆಗೆ ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯಗಳಿಗೆ 2,500 ಹೆಚ್ಚುವರಿ ಬಸ್ಗಳನ್ನು ಓಡಿಸಲಿದೆ. ಈ ವಿಶೇಷ ಸಾರಿಗೆಗಳಿಗೆ ಆನ್ಲೈನ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸುವ ಸೌಲಭ್ಯವಿದೆ.
04:14 PM (IST) Oct 13
protest in Pakistan: ಪಾಕಿಸ್ತಾನದ ಲಾಹೋರ್ನಲ್ಲಿ ಪ್ಯಾಲೇಸ್ತೀನ್ ಬೆಂಬಲಿಸಿ ನಡೆದ ಇಸ್ರೇಲ್ ವಿರೋಧಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಟಿಎಲ್ಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸೇರಿದಂತೆ ಹಲವರು ಸಾವನ್ನಪ್ಪಿದ್ದಾರೆ.
04:08 PM (IST) Oct 13
ಯೂಟ್ಯೂಬರ್ ಮುಕಳೆಪ್ಪ ಅಲಿಯಾಸ್ ಕ್ವಾಜಾ, ಹಿಂದೂ ಯುವತಿ ಗಾಯತ್ರಿಯವರನ್ನು ನಕಲಿ ದಾಖಲೆಗಳನ್ನು ಬಳಸಿ ಮದುವೆಯಾಗಿದ್ದಾನೆ. ಈ ರಿಜಿಸ್ಟರ್ ಮದುವೆಯನ್ನು ರದ್ದುಗೊಳಿಸುವಂತೆ ಶ್ರೀರಾಮ ಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದು, ಅಧಿಕಾರಿಗಳ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾರೆ.
03:30 PM (IST) Oct 13
ಎತ್ತಿನಗಾಡಿಯಲ್ಲಿ ಬಂದು 1.3 ಕೋಟಿ ರೂ ವೆಲ್ಫೈರ್ ಕಾರು ಖರೀದಿಸಿದ ಬೆಂಗಳೂರು ರೈತ, ವಿಡಿಯೋ ವೈರಲ್ ಆಗುತ್ತಿದೆ. ಈ ಕುರಿತು ಖುದ್ದು ವಿಡಿಯೋ ಹರಿಬಿಟ್ಟಿರುವ ಈ ರೈತ, ಇದೀಗ ಬೆಂಗಳೂರಿನಲ್ಲಿ ಭಾರಿ ಸೆನ್ಸೇಶನ್ ಸೃಷ್ಟಿಸಿದ್ದಾನೆ.
02:51 PM (IST) Oct 13
02:51 PM (IST) Oct 13
ಬಿಗ್ ಬಾಸ್ ಮನೆಯಲ್ಲಿ ಜಂಟಿ-ಒಂಟಿ ಆಟಕ್ಕೆ ಪೂರ್ಣ ವಿರಾಮ ಬಿದ್ದಿದೆ. ಜಂಟಿ ಬಂಧದಿಂದ ಮುಕ್ತಿ ಪಡೆಯಲು ಸ್ಪರ್ಧಿಗಳು ಪರಸ್ಪರ ಆರೋಪಗಳನ್ನು ಮಾಡಿದ್ದಾರೆ. ಜಂಟಿಗಳಿಗೆ ಸ್ವತಂತ್ರ ಕೊಡುವ ಮುನ್ನ ಬೆಂಕಿ ಜೋರಾಗಿ ಹೊತ್ತಿಕೊಂಡಿದೆ.
02:33 PM (IST) Oct 13
ಆರೆಸ್ಸೆಸ್ ನಿಷೇಧಿಸುವಂತೆ ಸಿಎಂಗೆ ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ರಾಜೂ ಗೌಡ ವಾಗ್ದಾಳಿ. ಇದು ಜನಪ್ರಿಯತೆ ಗಳಿಸುವ ತಂತ್ರ., ಆರೆಸ್ಸೆಸ್ ಬ್ಯಾನ್ ಮಾಡುವುದು ಯಾರಿಂದಲೂ ಸಾಧ್ಯವಿಲ್ಲ ನೆರೆ ಹಾನಿ ವಿಷಯವನ್ನು ಮರೆಮಾಚುವ ಬದಲು, ಕೆಲಸ ಮಾಡಿ ಹೀರೋ ಆಗಿ ಎಂದು ಖರ್ಗೆಗೆ ತರಾಟೆ.
02:30 PM (IST) Oct 13
01:58 PM (IST) Oct 13
01:46 PM (IST) Oct 13
ಕನ್ನಡ ನಟ, ಪ್ಯಾನ್ ಇಂಡಿಯಾ ಸ್ಟಾರ್ಗೆ ಹೋದಲ್ಲಿ ಬಂದಲ್ಲಿ ಕೇಳೋದು ಒಂದೇ ಪ್ರಶ್ನೆ! ಅದು ಬೇರೇನೂ ಅಲ್ಲ, ನಿಮ್ಮ 'ಕೆಜಿಎಫ್ 3' ಯಾವಾಗ ಬರುತ್ತೆ ಅನ್ನೋ ಪ್ರಶ್ನೆ. ಈ ಮೊದಲೆಲ್ಲಾ ಈ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೆ ಮಾತನ್ನಾಡುತ್ತಿದ್ದ ನಟ ಯಶ್ ಅವರಿ ಇದೀಗ ಕ್ಲಿಯರ್ ಪಿಕ್ಚರ್ ಕೊಟ್ಟಿದ್ದಾರೆ..
01:44 PM (IST) Oct 13
EV bike explosion in Bengaluru : ಬೆಂಗಳೂರಿನ ಬಸವೇಶ್ವರನಗರದಲ್ಲಿ ಚಾರ್ಜಿಂಗ್ಗೆ ಇಟ್ಟಿದ್ದ ಇವಿ ಬೈಕ್ ಮಧ್ಯರಾತ್ರಿ ಸ್ಫೋಟಗೊಂಡಿದೆ. ಈ ಅವಘಡದಲ್ಲಿ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತ ತಪ್ಪಿದೆ.
01:25 PM (IST) Oct 13
ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜ್ವರ ಮತ್ತು ಮೂತ್ರನಾಳದ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಮೂರು ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.
01:16 PM (IST) Oct 13
ಬಿಜೆಪಿ ಶಾಸಕ ಮುನಿರತ್ನಗೆ 'ಏಯ್ ಕರಿ ಟೋಪಿ ಎಂಎಲ್ಲೆ' ಎಂದ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ. ಡಿಕೆಶಿಯವರ ಮಾತುಗಳು ರೌಡಿಗಳಂತಿವೆ, ಈ ವರ್ತನೆ ಅವರ ಸಿಎಂ ಆಗುವ ಕನಸಿಗೆ ಅಡ್ಡಿಯಾಗಬಹುದು ಇದೇ ರೀತಿ ಮುಂದುವರೆದರೆ 2028ಕ್ಕೆ ಅವರೂ 'ಜಾಬ್ಲೆಸ್' ಆಗುತ್ತಾರೆ
01:11 PM (IST) Oct 13
ಹಿರಿಯ ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ಅವರು, ತಾನು ಸಿಎಂ ಆಗಿದ್ದರೆ ಗ್ಯಾರಂಟಿ ಜಾರಿ ಮಾಡುತ್ತಿರಲಿಲ್ಲ ಎಂದು ಹೇಳುವ ಮೂಲಕ ಸ್ವಪಕ್ಷದ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದಿದ್ದು ಇದಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ತಿರುಗೇಟು .