Published : Dec 10, 2025, 07:05 AM ISTUpdated : Dec 10, 2025, 11:13 PM IST

Karnataka News Live: Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​

ಸಾರಾಂಶ

ವಿಜಯಪುರ: ಮಾಟಗಾತಿಯ ಮಾತು ನಂಬಿ, ಗಂಡು ಮಗುವಿಗಾಗಿ ತನ್ನ ಪತ್ನಿಯ ತಲೆ ಕೂದಲನ್ನೇ ಪತಿ ಕತ್ತರಿಸಿದ ಅಮಾನವೀಯ ಘಟನೆ ತಾಲೂಕಿನ ಹೊನ್ನುಟಗಿ ಗ್ರಾಮದಲ್ಲಿನ.25ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 8 ವರ್ಷ ಹಿಂದೆ ಮದುವೆಯಾದ ಹೊನ್ನುಟಗಿ ಗ್ರಾಮದ ದುಂಡೇಶ್ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗು ಬೇಕೆಂಬ ಆಸೆ ಹೊಂದಿದ್ದ ದುಂಡೇಶ್ ಹಾಗೂ ಕುಟುಂಬಸ್ಥರು, ಕೊಲ್ದಾರ ತಾಲೂಕಿನ ಮುಳಗಾಡ ಮೂಲದ ಮಂಗಳಾ ಎಂಬ ಮಾಟಗಾತಿ ಬಳಿ ಹೋಗಿ ಸಲಹೆ ಕೇಳಿದ್ದರು. ನಿನ್ನ ಪತ್ನಿಗೆ ಗಾಳಿಯಾಗಿದೆ (ಭೂತ ಮೆಟ್ಟಿಕೊಂಡಿದೆ). ಅದಕ್ಕಾಗಿ ಆಕೆಯ ತಲೆಯಲ್ಲಿ ರಕ್ತ ಬರುವಂತೆ ತಲೆಯ ಕೂದಲನ್ನು ಕತ್ತರಿಸಿಕೊಂಡು ಬಂದು ಅದನ್ನು ಸ್ಮಶಾನದಲ್ಲಿ ಸುಡಬೇಕು ಎಂದು ಮಾಟಗಾತಿ ಸೂಚಿಸಿದ್ದಳು ಎನ್ನಲಾಗಿದೆ.

Bigg Boss Abhishek Srikant

11:12 PM (IST) Dec 10

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​

ಮಾಜಿ ಸ್ಪರ್ಧಿ ಅಭಿಷೇಕ್ ಶ್ರೀಕಾಂತ್ ಬಿಗ್ ಬಾಸ್ ಮನೆಯೊಳಗಿನ ಹಲವು ಗುಟ್ಟುಗಳನ್ನು ಬಹಿರಂಗಪಡಿಸಿದ್ದಾರೆ. ಸಮಯ ತಿಳಿಯದಂತೆ ಇರುವುದು, 24/7 ಲೈಟಿಂಗ್, ವಿಪರೀತ ಎಸಿ, ಸೀಮಿತ ಆಹಾರ ಮತ್ತು ಕ್ಯಾಮೆರಾದ ಮುಂದೆಯೇ ಸಮಸ್ಯೆ ಹೇಳಿಕೊಳ್ಳುವಂತಹ ನಿಯಮಗಳ ಬಗ್ಗೆ ಅವರು ವಿವರಿಸಿದ್ದಾರೆ.
Read Full Story

11:07 PM (IST) Dec 10

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!

2019ರ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧದ ಇಲಾಖಾ ತನಿಖೆಯನ್ನು CAT ರದ್ದುಗೊಳಿಸಿದೆ. ನ್ಯಾಯಾಲಯದ ಆದೇಶದ ಅನ್ವಯ, 8 ತಿಂಗಳ ಕಾನೂನು ಹೋರಾಟದ ನಂತರ ರಾಜ್ಯ ಸರ್ಕಾರವು ಅಲೋಕ್ ಕುಮಾರ್ ಅವರಿಗೆ ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ಬಡ್ತಿ ನೀಡಿದೆ.

Read Full Story

10:44 PM (IST) Dec 10

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ - ಕಾರಣವೂ ರಿವೀಲ್​!

'ಕನಸಿನ ರಾಣಿ' ಮಾಲಾಶ್ರೀ ತಮ್ಮ ಯಶಸ್ಸಿಗೆ ಕಾರಣರಾದ ಶಿರಡಿ ಸಾಯಿಬಾಬಾಗೆ ಕೃತಜ್ಞತಾಪೂರ್ವಕವಾಗಿ ಚಿನ್ನದ ಕಿರೀಟವನ್ನು ಸಮರ್ಪಿಸಿದ್ದಾರೆ. ತಮ್ಮ ಮೊದಲ ಚಿತ್ರ 'ನಂಜುಂಡಿ ಕಲ್ಯಾಣ'ಕ್ಕೂ ಮುನ್ನ ಬಾಬಾರ ಆಶೀರ್ವಾದ ಪಡೆದಿದ್ದ ಅವರು, ಇದೀಗ ಮಗಳು ಆರಾಧನಾ ಜೊತೆಗೂಡಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.

Read Full Story

10:31 PM (IST) Dec 10

ರಾಮನಗರ - ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!

ರಾಮನಗರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ, ರಸ್ತೆಗೆ ಅಡ್ಡಬಂದ ಕುರಿಗಳಿಗೆ ಹಾರ್ನ್ ಮಾಡಿದ್ದಕ್ಕೆ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಕುರಿಗಳ ಮಾಲೀಕ ಮತ್ತು ಗ್ರಾಮಸ್ಥರು ಸೇರಿ ಹಲ್ಲೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡ ಚಾಲಕ ಮಂಜುನಾಥ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು.

Read Full Story

10:16 PM (IST) Dec 10

Karna Serial - ಮೋಸಗಾತಿಯ ಬಲೆಗೆ ಬಿದ್ದ ನಿಧಿ Red Light ಏರಿಯಾದಲ್ಲಿ ಸಿಕ್ಕಾಕ್ಕೊಂಡ್ಲು! ಮುಂದೇನು?

ಕರ್ಣ ಸೀರಿಯಲ್‌ನಲ್ಲಿ ಕರ್ಣ-ನಿತ್ಯಾ ಮದುವೆಯಿಂದ ತಪ್ಪಿಸಿಕೊಳ್ಳಲು ಯೋಚಿಸುತ್ತಿದ್ದರೆ, ಇತ್ತ ನಿಧಿ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಕುರುಡಿಯೊಬ್ಬಳಿಗೆ ಸಹಾಯ ಮಾಡಲು ಹೋಗಿ, ಆಕೆಯ ಮೋಸದ ಬಲೆಗೆ ಬಿದ್ದು ಅಪಾಯಕಾರಿ ಜಾಗದಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ.
Read Full Story

10:10 PM (IST) Dec 10

ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದಕ ಸ್ವೀಕರಿಸಿದ ಬಾಲಕನೊಬ್ಬ ಅದನ್ನು ತಕ್ಷಣವೇ ತೆಗೆದುಹಾಕಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.  ನಕಾರಾತ್ಮಕ ಚರ್ಚೆಗೆ ಕಾರಣವಾದ ಈ ಘಟನೆಯ ಸತ್ಯಾಸತ್ಯತೆ ನಂತರ ಬಹಿರಂಗವಾಗಿದ್ದು, ಆ ಬಾಲಕ ಮಾನಸಿಕವಾಗಿ ಅಸ್ವಸ್ಥನಾಗಿದ್ದ ವಿಶೇಷ ಮಗು ಎನ್ನಲಾಗಿದೆ.

Read Full Story

09:55 PM (IST) Dec 10

ಗಂಡ-ಹೆಂಡ್ತಿ ಮಲಗಿದ್ರೂ ಬೆಡ್​ರೂಂ ಯಾವಾಗ್ಲೂ ಯಾಕೆ ಓಪನ್​ ಇರ್ಬೇಕು ಗೊತ್ತಾ? ಸೀರಿಯಲ್​ ಪ್ರೇಮಿಗಳು ಉತ್ತರಿಸ್ತಾರೆ ಕೇಳಿ!

ಕನ್ನಡ ಧಾರಾವಾಹಿಗಳು ಸ್ತ್ರೀಪ್ರಧಾನವಾಗಿದ್ದು, ನಾಯಕಿ ಮತ್ತು ವಿಲನ್ ನಡುವಿನ ಸಂಘರ್ಷವೇ ಮುಖ್ಯವಾಗಿರುತ್ತದೆ. ಬಹುತೇಕ ಸೀರಿಯಲ್‌ಗಳಲ್ಲಿ ಗಂಡ-ಹೆಂಡತಿಯ ಬೆಡ್‌ರೂಮ್ ಬಾಗಿಲು ತೆರೆದಿರುವುದೇಕೆ ಎಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತಿದೆ.

Read Full Story

09:40 PM (IST) Dec 10

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ಶಾ ವಾಗ್ದಾಳಿ

ಲೋಕಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ನೆಹರೂ ಕಾಲದಿಂದ ಇಂದಿನವರೆಗೆ ಕಾಂಗ್ರೆಸ್ ಪಕ್ಷವು 'ಮತಗಳ್ಳತನ'ದಲ್ಲಿ ತೊಡಗಿದೆ ಎಂದು ಐತಿಹಾಸಿಕ ಉದಾಹರಣೆಗಳೊಂದಿಗೆ ಆರೋಪಿಸಿದರು. ಕಾಂಗ್ರೆಸ್‌ನ ಸೋಲಿಗೆ ಇವಿಎಂ ಅಥವಾ ಮತದಾರರ ಪಟ್ಟಿಯಲ್ಲ, ಬದಲಾಗಿ ಅದರ ನಾಯಕತ್ವವೇ ಕಾರಣ ಎಂದು ಟೀಕಿಸಿದರು.

Read Full Story

09:17 PM (IST) Dec 10

ನಟಿ ಮಂಜು ಭಾಷಿಣಿ ಫ್ಯಾನ್ಸ್​ ಕಣ್ಣಿಗೆ ಕಾಣಿಸಿದ್ರೆ ನಿಮ್​ ಕಥೆ ಗೋವಿಂದ - Bigg Boss ಡಾಗ್​ ಸತೀಶ್​ಗೆ ಯಾಕಿಂತ ಎಚ್ಚರಿಕೆ?

ಬಿಗ್​ಬಾಸ್​ನಿಂದ ಹೊರಬಂದ ನಂತರ ಡಾಗ್​ ಸತೀಶ್​ ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಸಹ ಸ್ಪರ್ಧಿ ಮಂಜು ಭಾಷಿಣಿ, ತನ್ನ ಖ್ಯಾತಿ ತಿಳಿದ ನಂತರ ಮಾಲ್​ವೊಂದರಲ್ಲಿ ತನ್ನ ಹಿಂದೆ ಓಡಾಡಿದರು ಎಂದು ಹೇಳಿದ್ದಾರೆ. ಸತೀಶ್ ಅವರ ಈ ಹೇಳಿಕೆಗೆ ಮಂಜು ಭಾಷಿಣಿ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story

09:00 PM (IST) Dec 10

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!

ಕರ್ನಾಟಕದಲ್ಲಿ ಸುಮಾರು 2.84 ಲಕ್ಷ ಸರ್ಕಾರಿ ಮತ್ತು ಅರೆ-ಸರ್ಕಾರಿ ಹುದ್ದೆಗಳು ಖಾಲಿಯಿದ್ದು, ಸರ್ಕಾರ ಕೇವಲ 24,300 ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿದೆ. ಈ ಅಲ್ಪ ನೇಮಕಾತಿಯನ್ನೇ ದೊಡ್ಡ ಸಾಧನೆ ಎಂದು ಪ್ರಚಾರ ಮಾಡುತ್ತಿದೆ.

Read Full Story

08:22 PM (IST) Dec 10

ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!

ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ಡಾಗ್ ಸತೀಶ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಗಿಲ್ಲಿಯಷ್ಟು ಕೊಳಕು ವ್ಯಕ್ತಿಯನ್ನು ನೋಡಿಲ್ಲ ಎಂದಿರುವ ಸತೀಶ್, ಗಿಲ್ಲಿ ಬೈಗುಳನ್ನು ಜನರಿಗೆ ತೋರಿಸಲ್ಲ ಎಂದು ಹೇಳಿದ್ದಾರೆ.

Read Full Story

08:14 PM (IST) Dec 10

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!

ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ದಾಖಲಾಗಿದ್ದ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ದೀಪೋತ್ಸವ ಕಾರ್ಯಕ್ರಮವೊಂದರಲ್ಲಿ ನೀಡಿದ್ದ ಹೇಳಿಕೆಗಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
Read Full Story

07:33 PM (IST) Dec 10

Uttara Kannada - ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನಲ್ಲಿ, ಹುಟ್ಟುಹಬ್ಬದ ದಿನದಂದೇ ಗರ್ಭಿಣಿಯೊಬ್ಬರು ಹೆರಿಗೆಗೆ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದಾಂಡೇಲಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
Read Full Story

07:17 PM (IST) Dec 10

ಯಕ್ಷಗಾನ ಕಲಾವಿದರ ಅಪಮಾನ - 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಸರ್ಕಾರಕ್ಕೆ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ

ಯಕ್ಷಗಾನ ಕಲಾವಿದರ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಶಾಸಕ ಸುನೀಲ್ ಕುಮಾರ್ ಸರ್ಕಾರದ ಕ್ರಮ ಪ್ರಶ್ನಿಸಿದರೆ, ಸಚಿವ ತಂಗಡಗಿ ಆ ವಿಷಯ ದೊಡ್ಡದು ಮಾಡೋದು ಸರಿಯಲ್ಲ ಎಂದರು.ಕೊಂಡರು.

Read Full Story

07:16 PM (IST) Dec 10

ಡೆವಿಲ್ ಸಿನಿಮಾ ಬಿಡುಗಡೆಗೂ ಮುನ್ನವೇ ದರ್ಶನ್‌ಗೆ ಗುಡ್ ನ್ಯೂಸ್; ಅಭಿಮಾನಿಗಳೂ ಫುಲ್ ಖುಷ್!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ಗೆ ನ್ಯಾಯಾಲಯದ ಆದೇಶದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಟಿವಿ ಸೌಲಭ್ಯ ಒದಗಿಸಲಾಗಿದೆ. ಅವರ 'ಡೆವಿಲ್' ಸಿನಿಮಾ ಬಿಡುಗಡೆಯ ಹಿಂದಿನ ದಿನವೇ ಈ ಸೌಲಭ್ಯ ದೊರೆತಿದೆ.

Read Full Story

07:05 PM (IST) Dec 10

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!

ಲೈಂಗಿಕ ಸಮಸ್ಯೆ ಪರಿಹಾರದ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 40 ಲಕ್ಷ ರೂ. ವಂಚಿಸಿದ್ದ 'ವಿಜಯ್ ಚಿತ್ತೋಡಿಯಾ ಗುರೂಜಿ' ಎಂಬ ನಕಲಿ ಸ್ವಾಮೀಜಿ ಮತ್ತು ಆತನ ಸಹಚರನನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿದ್ದಾರೆ.

Read Full Story

06:48 PM (IST) Dec 10

ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ - ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ!

ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆಗಾಗಿ ಸೀಲ್ ಡೌನ್ ಆಗಿದ್ದ ಬಿಡದಿಯ ಜಾಲಿವುಡ್ ಸ್ಟುಡಿಯೋಗೆ ಪುನರ್ ಆರಂಭಕ್ಕೆ ಅನುಮತಿ ಸಿಕ್ಕಿದೆ. ಸ್ಟುಡಿಯೋ ಆಡಳಿತ ಮಂಡಳಿಯ ಮನವಿ ಮೇರೆಗೆ, ಮಂಡಳಿಯು ಪರಿಶೀಲನೆ ನಡೆಸಿ ಅನುಮತಿ ನೀಡಿದ್ದು, ಇದರಿಂದ 'ಬಿಗ್ ಬಾಸ್ ಕನ್ನಡ' ಶೋ ಮುಂದುವರಿಯುವ ಸಾಧ್ಯತೆ ಇದೆ.
Read Full Story

06:25 PM (IST) Dec 10

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ - ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!

Belagavi session: ವಿಧಾನಸಭೆಯಲ್ಲಿ ವಿಪಕ್ಷದ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ನಾಯಕತ್ವ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿ, ಆಡಳಿತ ಯಂತ್ರ ಕುಸಿದಿದೆ ಎಂದು ಆರೋಪಿಸಿದರು. 'ಕಿಂಗ್ ಅಲೈವ್' ಹೇಳಿಕೆ ಉಲ್ಲೇಖಿಸಿದಾಗ, ಸಚಿವ ಬೈರತಿ ಸುರೇಶ್, ಪ್ರಿಯಾಂಕ್ ಖರ್ಗೆ ತೀವ್ರ ತಿರುಗೇಟು ನೀಡಿದರು,

Read Full Story

06:08 PM (IST) Dec 10

Video - ಚಲಿಸುವ BMTC ಬಸ್ಸಲ್ಲಿ ಸ್ಟೇರಿಂಗ್ ಹಿಡಿದು ಡ್ರೈವರ್‌ಗಳ ಕಿತ್ತಾಟ; ಪ್ರಯಾಣಿಕರಿಗೆ ಪ್ರಾಣ ಸಂಕಟ!

ಬೆಂಗಳೂರಿನಲ್ಲಿ BMTC ಬಸ್ ಡ್ರೈವರ್ ಮತ್ತು ಕ್ಯಾಬ್ ಡ್ರೈವರ್ ನಡುವೆ ಚಲಿಸುತ್ತಿರುವ ಬಸ್ಸಿನಲ್ಲಿ ರೋಡ್ ರೇಜ್ ಘರ್ಷಣೆ ನಡೆದಿದೆ. ಕ್ಯಾಬ್ ಡ್ರೈವರ್ ಸ್ಟೀರಿಂಗ್‌ನಿಂದ ಚಾಲಕನ ಕೈ ಎಳೆದು ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ. ಪ್ರಯಾಣಿಕರಿಗೆ ಪ್ರಾಣ ಸಂಕಟ ಎದುರಾಗಿತ್ತು.

Read Full Story

05:46 PM (IST) Dec 10

ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ - ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!

ಉತ್ತರ ಕರ್ನಾಟಕದ ಅಪ್ಪರ್ ಕೃಷ್ಣಾ ನೀರಾವರಿ ಯೋಜನೆ ಕುರಿತ ಚರ್ಚೆಯು ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಗದ್ದಲಕ್ಕೆ ಕಾರಣವಾಯಿತು. ಶಾಸಕ ಶಿವಲಿಂಗೇಗೌಡರ ಮಾತಿಗೆ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದು ವೈಯಕ್ತಿಕ ವಾಕ್ಸಮರಕ್ಕೆ ಕಾರಣವಾಯಿತು.

Read Full Story

04:53 PM (IST) Dec 10

ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?

ಕೊಡಗು ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ, ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದಿದ್ದ ಆರೋಪಿಗೆ ವಿರಾಜಪೇಟೆ ಸೆಷನ್ಸ್‌ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ಕೇರಳ ಮೂಲದ ಆರೋಪಿ ಗಿರೀಶ್ ಎಂಬಾತನಿಗೆ ಈ ಮರಣದಂಡನೆ ವಿಧಿಸಿದೆ.

Read Full Story

04:24 PM (IST) Dec 10

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ - ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!

Savanurಹಾವೇರಿ ಜಿಲ್ಲೆಯ ಸವಣೂರಿನ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷಕನೊಬ್ಬನಿಗೆ ಪೋಷಕರು ಮತ್ತು ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಆರೋಪಿ ಶಿಕ್ಷಕ ಜಗದೀಶ್‌ನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

Read Full Story

04:03 PM (IST) Dec 10

ಬಿಗ್ ಬಾಸ್ ಮನೆಗೆ ಪವರ್ ಕಟ್, ಕಗ್ಗಲತ್ತಲ್ಲಿ ಕಂಟೆಸ್ಟೆಂಟ್‌ಗಳು; ಇದು ಬೆಸ್ಕಾಂ ಕಿತಾಪತಿ ಅಲ್ವೇ ಅಲ್ಲ!

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ವಿಲನ್ ಟಾಸ್ಕ್‌ನ ಭಾಗವಾಗಿ ಇಡೀ ಮನೆ ಕಗ್ಗತ್ತಲಲ್ಲಿ ಮುಳುಗಿದೆ. ಇದರ ನಡುವೆ, ಗಿಲ್ಲಿ ನಟನಿಗೆ ನೀಡಲಾದ ಸೀಕ್ರೆಟ್ ಟಾಸ್ಕ್‌ನಂತೆ 'ಕಿಚ್ಚನ ಚಪ್ಪಾಳೆ' ಫೋಟೋಗಳನ್ನು ಕದಿಯಲಾಗಿದ್ದು, ಮನೆಯ ಸದಸ್ಯರು ಆತಂಕಕ್ಕೊಳಗಾಗಿದ್ದಾರೆ.

Read Full Story

03:30 PM (IST) Dec 10

Yajamana Serial - ಝಾನ್ಸಿ-ರಾಘು ಒಂದಾಗ್ತಾರಾ ಇಲ್ಲವೋ ಚಿಂತೆ ಮಧ್ಯೆ ಹೊಸ ಪಾತ್ರದ ಎಂಟ್ರಿಯಾಯ್ತು!

ಸದ್ಯ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಯಜಮಾನ ಧಾರಾವಾಹಿಯಲ್ಲಿ ರಾಘು-ಝಾನ್ಸಿ ದೂರ ದೂರ ಆಗಿದ್ದಾರೆ. ಎಲ್ಲ ಸಂಘರ್ಷ, ಸಮಸ್ಯೆ ದೂರಾದ ಬಳಿಕ ಒಂದಾಗಬೇಕಿದ್ದ ಈ ಜೋಡಿಗೆ ಆಘಾತವಾಗಿದೆ. ಝಾನ್ಸಿಗೆ ಅಪಘಾತ ಆದ ಬೆನ್ನಲ್ಲೇ ಹೊಸ ಟ್ವಿಸ್ಟ್‌ ಸಿಕ್ಕಿದೆ.

 

Read Full Story

03:12 PM (IST) Dec 10

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಕಳ್ಳತನ ಮಾಡಿದ ಕಳ್ಳನೊಬ್ಬ, ಪರಾರಿಯಾಗುವಾಗ ಮತ್ತೊಂದು ಗ್ಯಾಂಗ್‌ನಿಂದ ದರೋಡೆಗೀಡಾಗಿದ್ದಾನೆ. ದರೋಡೆಕೋರರು ಆತನಿಗೆ ಹಣ ನೀಡಿ ಕಳುಹಿಸಿದ್ದು, ಆ ಹಣದಿಂದ ಆತ ಮತ್ತೆರಡು ಕಳ್ಳತನ ಮಾಡಿದ್ದಾನೆ.

Read Full Story

03:07 PM (IST) Dec 10

ಶೂವೊಳಗಡೆ ಊಟ ಇಟ್ಟು ತಿಂತೀನಿ ಎನ್ನೋನಿಗೆ Bigg Boss ಸ್ಟ್ಯಾಂಡರ್ಟ್‌ ಗೊತ್ತಾ? ಧ್ರುವಂತ್‌ ಚಳಿ ಬಿಡಿಸಿದ ರಜತ್

Bigg Boss Kannada Season 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಈಗಾಗಲೇ ಧ್ರುವಂತ್‌ ಹಾಗೂ ರಜತ್‌ ಮಧ್ಯೆ ಸಾಕಷ್ಟು ಜಗಳ ಆಗಿದೆ. ಹೀಗಿರುವಾಗ ನಾಮಿನೇಶನ್‌ ಟಾಸ್ಕ್‌ ವೇಳೆ ಇನ್ನೊಂದಿಷ್ಟು ಜಗಳ ಆಗಿದೆ.

 

Read Full Story

02:40 PM (IST) Dec 10

Karna Serial - ತೇಜಸ್‌ ತಪ್ಪಿಸ್ಕೊಂಡು ಹೊರಬಂದಾಯ್ತು; ಈಗ ಸಮಸ್ಯೆ ಬಗೆಹರಿಯೋದಿಲ್ಲ, ಅಸಲಿಗೆ ಶುರುವಾಗತ್ತೆ

Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ಸಂಜಯ್‌ ಮಾಡಿದ ಕೆಲಸದಿಂದ ಕರ್ಣ ಹಾಗೂ ನಿತ್ಯಾ ಮದುವೆ ಆಗಲೇಬೇಕಾದ ಪರಿಸ್ಥಿತಿ ಬಂದಿದೆ. ಹೀಗಿರುವಾಗ ತೇಜಸ್‌ ಆಗಮನವಾಗಿದೆ. ಹೌದು, ನಿಧಿ ಕಣ್ಣಿಗೆ ತೇಜಸ್‌ ಕಾಣಿಸಿದ್ದಾನೆ.

Read Full Story

02:26 PM (IST) Dec 10

ಫ್ರಿಡ್ಜ್‌ನಲ್ಲಿಟ್ಟ ಮೊಟ್ಟೆಗಳು ಕೊಳೆಯುತ್ತವೆಯೇ? ಗೃಹಿಣಿಯರು ತಿಳಿದುಕೊಳ್ಳಬೇಕಾದ ವಿಷಯವಿದು!

Why Eggs Are Refrigerated: ಫ್ರಿಡ್ಜ್‌ನಲ್ಲಿಡುವ ಮೊಟ್ಟೆಗಳು ಕೊಳೆಯುತ್ತವೆಯೇ? ಅವುಗಳ ರುಚಿಯಲ್ಲಿ ಬದಲಾವಣೆ ಆಗುತ್ತಾ ಎಂಬ ಚರ್ಚೆಗಳು ನಡೆಯುತ್ತಿರುತ್ತವೆ. ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ಏನಾಗುತ್ತೆ ಎಂದು ನೋಡೋಣ ಬನ್ನಿ.

Read Full Story

01:59 PM (IST) Dec 10

ನನ್ನ ಅರ್ಧ ವಯಸ್ಸಿನ ಹುಡುಗರು ಡೇಟಿಂಗ್‌ಗೆ ಕರೀತಿದ್ದಾರೆ.. 50 ಆದ್ರೂ ಮದುವೆಗೆ ರೆಡಿ - ನಟಿ ಅಮೀಶಾ ಪಟೇಲ್

ಪವನ್ ಕಲ್ಯಾಣ್ ಅಭಿನಯದ 'ಬದ್ರಿ' ಚಿತ್ರದಲ್ಲಿ ನಟಿಸಿ ಮನಗೆದ್ದಿದ್ದ ಅಮೀಶಾ ಪಟೇಲ್ ಮದುವೆಗೆ ಸಿದ್ಧ ಎನ್ನುತ್ತಿದ್ದಾರೆ. ತಮ್ಮ ಅರ್ಧ ವಯಸ್ಸಿನವರೂ ಡೇಟಿಂಗ್‌ಗೆ ಕರೆಯುತ್ತಿದ್ದಾರಂತೆ.

Read Full Story

01:33 PM (IST) Dec 10

ಬಾಲಯ್ಯರಿಂದ ಅನಿರೀಕ್ಷಿತ ಸರ್ಪ್ರೈಸ್.. ಅಖಂಡ 2 ಹೊಸ ರಿಲೀಸ್ ಡೇಟ್ ಫಿಕ್ಸ್ - ಈ ಚಿತ್ರಗಳಿಗೆ ದೊಡ್ಡ ಹೊಡೆತ

ನಂದಮೂರಿ ಬಾಲಕೃಷ್ಣ ನಾಯಕರಾಗಿ ನಟಿಸಿರುವ 'ಅಖಂಡ 2' ಸಿನಿಮಾ ಮುಂದೂಡಲ್ಪಟ್ಟಿದ್ದು ಗೊತ್ತೇ ಇದೆ. ಇದೀಗ ಚಿತ್ರತಂಡ ಹೊಸ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಎಲ್ಲರೂ ನಿರೀಕ್ಷಿಸಿದ ದಿನಾಂಕದಂದೇ ಸಿನಿಮಾ ಬರುತ್ತಿದೆ.

Read Full Story

01:14 PM (IST) Dec 10

ಪತ್ನಿ, ಮಗಳ ಜೊತೆ ಹೋಗಿ ಮನೆಗೆ ಹೊಸ ಕಾರ್‌ ತಂದ Amruthadhaare Serial ನಟ ರಾಜೇಶ್‌ ನಟರಂಗ!

Amruthadhaare Serial Actor Rajesh Nataranga ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯಲ್ಲಿ ವಿಶಿಷ್ಟ ನಟನೆಯ ಮೂಲಕ ಮನೆಮಾತಾಗಿರುವ ನಟ ರಾಜೇಶ್ ನಟರಂಗ ಅವರು ಇತ್ತೀಚೆಗೆ ತಮ್ಮ ಕನಸಿನ ಹೊಸ ಕಾರನ್ನು ಖರೀದಿಸಿದ್ದಾರೆ. ಕಾರ್‌ ಶೋರೂಮ್‌ ಈ ವಿಡಿಯೋವನ್ನು ಹಂಚಿಕೊಂಡಿದೆ.

 

Read Full Story

01:08 PM (IST) Dec 10

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!

ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಭೀಕರ ಹೊಡೆತಗಳಿಂದ ಚಿತ್ರಹಿಂಸೆ ಅನುಭವಿಸಿ ಕೊಲೆಗೀಡಾದ ರೇಣುಕಾಸ್ವಾಮಿಯವರ ಚಿತ್ರದುರ್ಗದ ಸಮಾಧಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಾಗಿರಲು ಬಿಡದ ಡೆವಿಲ್ ಗ್ಯಾಂಗ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

Read Full Story

01:03 PM (IST) Dec 10

ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?

ಮಜುಲಿ ಭಾರತದ ಅಸ್ಸಾಂನಲ್ಲಿರುವ ಬ್ರಹ್ಮಪುತ್ರ ನದಿಯಲ್ಲಿರುವ ಒಂದು ಉದ್ದ ಮತ್ತು ತೆಳ್ಳಗಿನ ನದಿ ದ್ವೀಪವಾಗಿದೆ. ಪ್ರವಾಹ ಮತ್ತು ನದಿ ಮಾರ್ಗಗಳ ಬದಲಾವಣೆಯಿಂದ ಉಂಟಾದ ಭೂರೂಪಶಾಸ್ತ್ರೀಯ ಬದಲಾವಣೆಗಳ ಪರಿಣಾಮವಾಗಿ ಇದು ಅಭಿವೃದ್ಧಿಗೊಂಡಿತು.

Read Full Story

12:50 PM (IST) Dec 10

BBK 12 - ಟೈಮ್‌ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ದ್ವೇಷ ತೀರಿಸಿಕೊಂಡ ಗಿಲ್ಲಿ ನಟ

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಈ ಬಾರಿ ಗಿಲ್ಲಿ ನಟ ಅವರು ಅಡುಗೆ ಮನೆ ಸೇರಿಕೊಂಡಿದ್ದಾರೆ. ಗಿಲ್ಲಿ ನಟ ಅಡುಗೆ ಮಾಡಿದರೆ ಮಾತ್ರ ಅವರಿಗೆ ಇಡೀ ಸೀಸನ್‌ ಪೂರ್ತಿ ಲಕ್ಷುರಿ ಐಟಮ್‌ ಸಿಗುತ್ತಿತ್ತು. ಈಗ ಅವರು ಅಶ್ವಿನಿ ಜೊತೆ ಸೇರಿ ಅಡುಗೆ ಮಾಡಲು ಒಪ್ಪಿಗೆ ನೀಡಿದ್ದರು.

 

Read Full Story

12:46 PM (IST) Dec 10

ಮಹೇಶ್ ಬಾಬು ಯಾರೆಂದು ನನಗೆ ಗೊತ್ತಿಲ್ಲ, ಪ್ರಭಾಸ್ ಬಿಟ್ಟರೆ ಎಲ್ಲರೂ ಕುಳ್ಳರು.. ಸ್ಟಾರ್ ನಟಿಯ ಹೇಳಿಕೆ ವೈರಲ್!

ಮಹೇಶ್ ಬಾಬು ನಾಯಕರಾಗಿದ್ದ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಸ್ಟಾರ್ ನಟಿಯೊಬ್ಬರು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ತನಗೆ ಅವರು ಯಾರೆಂದು ತಿಳಿದಿರಲಿಲ್ಲ ಮತ್ತು ಪ್ರಭಾಸ್ ಹೊರತುಪಡಿಸಿ ಉಳಿದವರೆಲ್ಲ ಕುಳ್ಳಗಿದ್ದರು ಎಂದು ಹೇಳಿದ್ದಾರೆ.

Read Full Story

12:15 PM (IST) Dec 10

ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್ - ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!

ಧರ್ಮಸ್ಥಳದಲ್ಲಿ ನೂರಾರು ಶವಗಳ ಸುಳ್ಳು ಆರೋಪದ ಹಿಂದಿನ ಷಡ್ಯಂತ್ರವನ್ನು SIT ಪ್ರಾಥಮಿಕ ವರದಿ ಬಯಲು ಮಾಡಿದೆ. ಆರು ಮಂದಿ ಆರೋಪಿಗಳ 'ಬುರುಡೆ ಗ್ಯಾಂಗ್' ಹಣದ ಆಮಿಷ ನೀಡಿ ಸುಳ್ಳು ಹೇಳಿಸಿರುವುದು ದೃಢ. ಈ ಕೇಸಿನಲ್ಲಿ ಒಬ್ಬರಿಗೆ ಕ್ಲೀನ್‌ಚಿಟ್ ನೀಡಲಾಗಿದೆ.

Read Full Story

12:07 PM (IST) Dec 10

ನನ್ನ ಜೊತೆಗೂ ಬಾ - ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ - ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ

Gujarat man killed friend: ಮಹಿಳೆಯ ವಿಚಾರಕ್ಕೆ ಸಂಬಂಧಿಸಿದಂತೆ ಗೆಳೆಯರಿಬ್ಬರ ಮಧ್ಯೆ ಕಾದಾಟ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಮಾಡಿದ ನಂತರ ಆರೋಪಿ ಸ್ನೇಹಿತನ ಶವವನ್ನು ಹಲವು ಭಾಗಗಳಾಗಿ ಕತ್ತರಿಸಿ ಮೃತದೇಹದ ಭಾಗಗಳನ್ನು ಬೋರ್‌ವೆಲ್‌ಗೆ ಎಸೆದಿದ್ದಾನೆ. ಡಿಟೇಲ್‌ ಸ್ಟೋರಿ ಇಲ್ಲಿದೆ

Read Full Story

12:05 PM (IST) Dec 10

ಚಿಕ್ಕಬಳ್ಳಾಪುರದಲ್ಲಿ ಮಾನವ ಹಕ್ಕುಗಳ ದಿನಾಚರಣೆ - ಸಾವಿರಾರು ಜನರಲ್ಲಿ ನಾಯಕತ್ವ ಬಿತ್ತಿದ ನವಶಕ್ತಿ ನಾಟಕ

ಚಿಕ್ಕಬಳ್ಳಾಪುರದ ಕನ್ನಡಭವನದಲ್ಲಿ 1000ಕ್ಕೂ ಹೆಚ್ಚು ಸಮುದಾಯ ಸದಸ್ಯರನ್ನು ಒಟ್ಟಿಗೆ ಸಂಘಟಿಸಿ ಮಾನವೀಯ ಹಕ್ಕುಗಳ ಅರಿವನ್ನು ಅರ್ಥಪೂರ್ಣವಾಗಿ ಮಾನವ ಹಕ್ಕುಗಳ ದಿನಾಚರಣೆ ಮತ್ತು ಸಂಸ್ಥಾಪಕರ ದಿನಾಚರಣೆ ಮುಖೇನಾ ನೀಡಲಾಗಿದೆ.

Read Full Story

11:19 AM (IST) Dec 10

Amruthadhaare Serial - ಜಯದೇವ್‌ ಕುತಂತ್ರಕ್ಕೆ ಗೌತಮ್‌-ಭೂಮಿಕಾ ಕುಟುಂಬದಲ್ಲಿ ಸಾವಾಯ್ತಾ?

Amruthadhaare Kannada Tv Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್-ಭೂಮಿಕಾ ಇದ್ದ ಬಂಗಲೆಗೆ ಅಜ್ಜಿ ಆಗಮನವಾಗಿದೆ. ತಮಗೆ ಹೇಗೆ ಬೇಕೋ ಹಾಗೆ ದುಡ್ಡಿನ ಮದದಲ್ಲಿ ಮೆರೆಯುತ್ತಿದ್ದ ಜಯದೇವ್-ಶಕುಂತಲಾಗೆ ಈಗ ಅವಳು ಬುದ್ಧಿ ಕಲಿಸಬೇಕಿದೆ. ಹೀಗಿರುವಾಗಲೇ ಆಘಾತಕಾರಿ ವಿಷಯ ಹೊರಬಿದ್ದಿದೆ.

Read Full Story

11:06 AM (IST) Dec 10

ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ - ಶಾಸಕ ಬಸನಗೌಡ ಪಾಟೀಲ ಯತ್ನಾಳ

ಭಾರತದಲ್ಲಿ ಹಿಂದೂಗಳು ಒಂದಾಗದಿದ್ದರೆ ದೇಶವೂ ಉಳಿಯುವದಿಲ್ಲ, ಸಂವಿಧಾನವೂ ಉಳಿಯುವದಿಲ್ಲ. ಈ ಬಗ್ಗೆ ದೇಶದ ಹಿಂದೂಗಳು ಎಚ್ಚರಿಕೆ ವಹಿಸಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು.

Read Full Story

More Trending News