ವಿಜಯಪುರ: ಮಾಟಗಾತಿಯ ಮಾತು ನಂಬಿ, ಗಂಡು ಮಗುವಿಗಾಗಿ ತನ್ನ ಪತ್ನಿಯ ತಲೆ ಕೂದಲನ್ನೇ ಪತಿ ಕತ್ತರಿಸಿದ ಅಮಾನವೀಯ ಘಟನೆ ತಾಲೂಕಿನ ಹೊನ್ನುಟಗಿ ಗ್ರಾಮದಲ್ಲಿನ.25ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 8 ವರ್ಷ ಹಿಂದೆ ಮದುವೆಯಾದ ಹೊನ್ನುಟಗಿ ಗ್ರಾಮದ ದುಂಡೇಶ್ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗು ಬೇಕೆಂಬ ಆಸೆ ಹೊಂದಿದ್ದ ದುಂಡೇಶ್ ಹಾಗೂ ಕುಟುಂಬಸ್ಥರು, ಕೊಲ್ದಾರ ತಾಲೂಕಿನ ಮುಳಗಾಡ ಮೂಲದ ಮಂಗಳಾ ಎಂಬ ಮಾಟಗಾತಿ ಬಳಿ ಹೋಗಿ ಸಲಹೆ ಕೇಳಿದ್ದರು. ನಿನ್ನ ಪತ್ನಿಗೆ ಗಾಳಿಯಾಗಿದೆ (ಭೂತ ಮೆಟ್ಟಿಕೊಂಡಿದೆ). ಅದಕ್ಕಾಗಿ ಆಕೆಯ ತಲೆಯಲ್ಲಿ ರಕ್ತ ಬರುವಂತೆ ತಲೆಯ ಕೂದಲನ್ನು ಕತ್ತರಿಸಿಕೊಂಡು ಬಂದು ಅದನ್ನು ಸ್ಮಶಾನದಲ್ಲಿ ಸುಡಬೇಕು ಎಂದು ಮಾಟಗಾತಿ ಸೂಚಿಸಿದ್ದಳು ಎನ್ನಲಾಗಿದೆ.

11:12 PM (IST) Dec 10
11:07 PM (IST) Dec 10
2019ರ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧದ ಇಲಾಖಾ ತನಿಖೆಯನ್ನು CAT ರದ್ದುಗೊಳಿಸಿದೆ. ನ್ಯಾಯಾಲಯದ ಆದೇಶದ ಅನ್ವಯ, 8 ತಿಂಗಳ ಕಾನೂನು ಹೋರಾಟದ ನಂತರ ರಾಜ್ಯ ಸರ್ಕಾರವು ಅಲೋಕ್ ಕುಮಾರ್ ಅವರಿಗೆ ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ಬಡ್ತಿ ನೀಡಿದೆ.
10:44 PM (IST) Dec 10
'ಕನಸಿನ ರಾಣಿ' ಮಾಲಾಶ್ರೀ ತಮ್ಮ ಯಶಸ್ಸಿಗೆ ಕಾರಣರಾದ ಶಿರಡಿ ಸಾಯಿಬಾಬಾಗೆ ಕೃತಜ್ಞತಾಪೂರ್ವಕವಾಗಿ ಚಿನ್ನದ ಕಿರೀಟವನ್ನು ಸಮರ್ಪಿಸಿದ್ದಾರೆ. ತಮ್ಮ ಮೊದಲ ಚಿತ್ರ 'ನಂಜುಂಡಿ ಕಲ್ಯಾಣ'ಕ್ಕೂ ಮುನ್ನ ಬಾಬಾರ ಆಶೀರ್ವಾದ ಪಡೆದಿದ್ದ ಅವರು, ಇದೀಗ ಮಗಳು ಆರಾಧನಾ ಜೊತೆಗೂಡಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.
10:31 PM (IST) Dec 10
ರಾಮನಗರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ, ರಸ್ತೆಗೆ ಅಡ್ಡಬಂದ ಕುರಿಗಳಿಗೆ ಹಾರ್ನ್ ಮಾಡಿದ್ದಕ್ಕೆ ಕೆಎಸ್ಆರ್ಟಿಸಿ ಬಸ್ ಚಾಲಕನ ಮೇಲೆ ಕುರಿಗಳ ಮಾಲೀಕ ಮತ್ತು ಗ್ರಾಮಸ್ಥರು ಸೇರಿ ಹಲ್ಲೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡ ಚಾಲಕ ಮಂಜುನಾಥ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು.
10:16 PM (IST) Dec 10
10:10 PM (IST) Dec 10
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದಕ ಸ್ವೀಕರಿಸಿದ ಬಾಲಕನೊಬ್ಬ ಅದನ್ನು ತಕ್ಷಣವೇ ತೆಗೆದುಹಾಕಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಕಾರಾತ್ಮಕ ಚರ್ಚೆಗೆ ಕಾರಣವಾದ ಈ ಘಟನೆಯ ಸತ್ಯಾಸತ್ಯತೆ ನಂತರ ಬಹಿರಂಗವಾಗಿದ್ದು, ಆ ಬಾಲಕ ಮಾನಸಿಕವಾಗಿ ಅಸ್ವಸ್ಥನಾಗಿದ್ದ ವಿಶೇಷ ಮಗು ಎನ್ನಲಾಗಿದೆ.
09:55 PM (IST) Dec 10
ಕನ್ನಡ ಧಾರಾವಾಹಿಗಳು ಸ್ತ್ರೀಪ್ರಧಾನವಾಗಿದ್ದು, ನಾಯಕಿ ಮತ್ತು ವಿಲನ್ ನಡುವಿನ ಸಂಘರ್ಷವೇ ಮುಖ್ಯವಾಗಿರುತ್ತದೆ. ಬಹುತೇಕ ಸೀರಿಯಲ್ಗಳಲ್ಲಿ ಗಂಡ-ಹೆಂಡತಿಯ ಬೆಡ್ರೂಮ್ ಬಾಗಿಲು ತೆರೆದಿರುವುದೇಕೆ ಎಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತಿದೆ.
09:40 PM (IST) Dec 10
ಲೋಕಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ನೆಹರೂ ಕಾಲದಿಂದ ಇಂದಿನವರೆಗೆ ಕಾಂಗ್ರೆಸ್ ಪಕ್ಷವು 'ಮತಗಳ್ಳತನ'ದಲ್ಲಿ ತೊಡಗಿದೆ ಎಂದು ಐತಿಹಾಸಿಕ ಉದಾಹರಣೆಗಳೊಂದಿಗೆ ಆರೋಪಿಸಿದರು. ಕಾಂಗ್ರೆಸ್ನ ಸೋಲಿಗೆ ಇವಿಎಂ ಅಥವಾ ಮತದಾರರ ಪಟ್ಟಿಯಲ್ಲ, ಬದಲಾಗಿ ಅದರ ನಾಯಕತ್ವವೇ ಕಾರಣ ಎಂದು ಟೀಕಿಸಿದರು.
09:17 PM (IST) Dec 10
09:00 PM (IST) Dec 10
ಕರ್ನಾಟಕದಲ್ಲಿ ಸುಮಾರು 2.84 ಲಕ್ಷ ಸರ್ಕಾರಿ ಮತ್ತು ಅರೆ-ಸರ್ಕಾರಿ ಹುದ್ದೆಗಳು ಖಾಲಿಯಿದ್ದು, ಸರ್ಕಾರ ಕೇವಲ 24,300 ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿದೆ. ಈ ಅಲ್ಪ ನೇಮಕಾತಿಯನ್ನೇ ದೊಡ್ಡ ಸಾಧನೆ ಎಂದು ಪ್ರಚಾರ ಮಾಡುತ್ತಿದೆ.
08:22 PM (IST) Dec 10
ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ಡಾಗ್ ಸತೀಶ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಗಿಲ್ಲಿಯಷ್ಟು ಕೊಳಕು ವ್ಯಕ್ತಿಯನ್ನು ನೋಡಿಲ್ಲ ಎಂದಿರುವ ಸತೀಶ್, ಗಿಲ್ಲಿ ಬೈಗುಳನ್ನು ಜನರಿಗೆ ತೋರಿಸಲ್ಲ ಎಂದು ಹೇಳಿದ್ದಾರೆ.
08:14 PM (IST) Dec 10
07:33 PM (IST) Dec 10
07:17 PM (IST) Dec 10
ಯಕ್ಷಗಾನ ಕಲಾವಿದರ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಶಾಸಕ ಸುನೀಲ್ ಕುಮಾರ್ ಸರ್ಕಾರದ ಕ್ರಮ ಪ್ರಶ್ನಿಸಿದರೆ, ಸಚಿವ ತಂಗಡಗಿ ಆ ವಿಷಯ ದೊಡ್ಡದು ಮಾಡೋದು ಸರಿಯಲ್ಲ ಎಂದರು.ಕೊಂಡರು.
07:16 PM (IST) Dec 10
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ಗೆ ನ್ಯಾಯಾಲಯದ ಆದೇಶದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಟಿವಿ ಸೌಲಭ್ಯ ಒದಗಿಸಲಾಗಿದೆ. ಅವರ 'ಡೆವಿಲ್' ಸಿನಿಮಾ ಬಿಡುಗಡೆಯ ಹಿಂದಿನ ದಿನವೇ ಈ ಸೌಲಭ್ಯ ದೊರೆತಿದೆ.
07:05 PM (IST) Dec 10
ಲೈಂಗಿಕ ಸಮಸ್ಯೆ ಪರಿಹಾರದ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 40 ಲಕ್ಷ ರೂ. ವಂಚಿಸಿದ್ದ 'ವಿಜಯ್ ಚಿತ್ತೋಡಿಯಾ ಗುರೂಜಿ' ಎಂಬ ನಕಲಿ ಸ್ವಾಮೀಜಿ ಮತ್ತು ಆತನ ಸಹಚರನನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿದ್ದಾರೆ.
06:48 PM (IST) Dec 10
06:25 PM (IST) Dec 10
Belagavi session: ವಿಧಾನಸಭೆಯಲ್ಲಿ ವಿಪಕ್ಷದ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ನಾಯಕತ್ವ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿ, ಆಡಳಿತ ಯಂತ್ರ ಕುಸಿದಿದೆ ಎಂದು ಆರೋಪಿಸಿದರು. 'ಕಿಂಗ್ ಅಲೈವ್' ಹೇಳಿಕೆ ಉಲ್ಲೇಖಿಸಿದಾಗ, ಸಚಿವ ಬೈರತಿ ಸುರೇಶ್, ಪ್ರಿಯಾಂಕ್ ಖರ್ಗೆ ತೀವ್ರ ತಿರುಗೇಟು ನೀಡಿದರು,
06:08 PM (IST) Dec 10
ಬೆಂಗಳೂರಿನಲ್ಲಿ BMTC ಬಸ್ ಡ್ರೈವರ್ ಮತ್ತು ಕ್ಯಾಬ್ ಡ್ರೈವರ್ ನಡುವೆ ಚಲಿಸುತ್ತಿರುವ ಬಸ್ಸಿನಲ್ಲಿ ರೋಡ್ ರೇಜ್ ಘರ್ಷಣೆ ನಡೆದಿದೆ. ಕ್ಯಾಬ್ ಡ್ರೈವರ್ ಸ್ಟೀರಿಂಗ್ನಿಂದ ಚಾಲಕನ ಕೈ ಎಳೆದು ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ. ಪ್ರಯಾಣಿಕರಿಗೆ ಪ್ರಾಣ ಸಂಕಟ ಎದುರಾಗಿತ್ತು.
05:46 PM (IST) Dec 10
ಉತ್ತರ ಕರ್ನಾಟಕದ ಅಪ್ಪರ್ ಕೃಷ್ಣಾ ನೀರಾವರಿ ಯೋಜನೆ ಕುರಿತ ಚರ್ಚೆಯು ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಗದ್ದಲಕ್ಕೆ ಕಾರಣವಾಯಿತು. ಶಾಸಕ ಶಿವಲಿಂಗೇಗೌಡರ ಮಾತಿಗೆ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದು ವೈಯಕ್ತಿಕ ವಾಕ್ಸಮರಕ್ಕೆ ಕಾರಣವಾಯಿತು.
04:53 PM (IST) Dec 10
ಕೊಡಗು ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ, ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದಿದ್ದ ಆರೋಪಿಗೆ ವಿರಾಜಪೇಟೆ ಸೆಷನ್ಸ್ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ಕೇರಳ ಮೂಲದ ಆರೋಪಿ ಗಿರೀಶ್ ಎಂಬಾತನಿಗೆ ಈ ಮರಣದಂಡನೆ ವಿಧಿಸಿದೆ.
04:24 PM (IST) Dec 10
Savanurಹಾವೇರಿ ಜಿಲ್ಲೆಯ ಸವಣೂರಿನ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷಕನೊಬ್ಬನಿಗೆ ಪೋಷಕರು ಮತ್ತು ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಆರೋಪಿ ಶಿಕ್ಷಕ ಜಗದೀಶ್ನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
04:03 PM (IST) Dec 10
ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ವಿಲನ್ ಟಾಸ್ಕ್ನ ಭಾಗವಾಗಿ ಇಡೀ ಮನೆ ಕಗ್ಗತ್ತಲಲ್ಲಿ ಮುಳುಗಿದೆ. ಇದರ ನಡುವೆ, ಗಿಲ್ಲಿ ನಟನಿಗೆ ನೀಡಲಾದ ಸೀಕ್ರೆಟ್ ಟಾಸ್ಕ್ನಂತೆ 'ಕಿಚ್ಚನ ಚಪ್ಪಾಳೆ' ಫೋಟೋಗಳನ್ನು ಕದಿಯಲಾಗಿದ್ದು, ಮನೆಯ ಸದಸ್ಯರು ಆತಂಕಕ್ಕೊಳಗಾಗಿದ್ದಾರೆ.
03:30 PM (IST) Dec 10
ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಯಜಮಾನ ಧಾರಾವಾಹಿಯಲ್ಲಿ ರಾಘು-ಝಾನ್ಸಿ ದೂರ ದೂರ ಆಗಿದ್ದಾರೆ. ಎಲ್ಲ ಸಂಘರ್ಷ, ಸಮಸ್ಯೆ ದೂರಾದ ಬಳಿಕ ಒಂದಾಗಬೇಕಿದ್ದ ಈ ಜೋಡಿಗೆ ಆಘಾತವಾಗಿದೆ. ಝಾನ್ಸಿಗೆ ಅಪಘಾತ ಆದ ಬೆನ್ನಲ್ಲೇ ಹೊಸ ಟ್ವಿಸ್ಟ್ ಸಿಕ್ಕಿದೆ.
03:12 PM (IST) Dec 10
ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಕಳ್ಳತನ ಮಾಡಿದ ಕಳ್ಳನೊಬ್ಬ, ಪರಾರಿಯಾಗುವಾಗ ಮತ್ತೊಂದು ಗ್ಯಾಂಗ್ನಿಂದ ದರೋಡೆಗೀಡಾಗಿದ್ದಾನೆ. ದರೋಡೆಕೋರರು ಆತನಿಗೆ ಹಣ ನೀಡಿ ಕಳುಹಿಸಿದ್ದು, ಆ ಹಣದಿಂದ ಆತ ಮತ್ತೆರಡು ಕಳ್ಳತನ ಮಾಡಿದ್ದಾನೆ.
03:07 PM (IST) Dec 10
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈಗಾಗಲೇ ಧ್ರುವಂತ್ ಹಾಗೂ ರಜತ್ ಮಧ್ಯೆ ಸಾಕಷ್ಟು ಜಗಳ ಆಗಿದೆ. ಹೀಗಿರುವಾಗ ನಾಮಿನೇಶನ್ ಟಾಸ್ಕ್ ವೇಳೆ ಇನ್ನೊಂದಿಷ್ಟು ಜಗಳ ಆಗಿದೆ.
02:40 PM (IST) Dec 10
Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ಸಂಜಯ್ ಮಾಡಿದ ಕೆಲಸದಿಂದ ಕರ್ಣ ಹಾಗೂ ನಿತ್ಯಾ ಮದುವೆ ಆಗಲೇಬೇಕಾದ ಪರಿಸ್ಥಿತಿ ಬಂದಿದೆ. ಹೀಗಿರುವಾಗ ತೇಜಸ್ ಆಗಮನವಾಗಿದೆ. ಹೌದು, ನಿಧಿ ಕಣ್ಣಿಗೆ ತೇಜಸ್ ಕಾಣಿಸಿದ್ದಾನೆ.
02:26 PM (IST) Dec 10
Why Eggs Are Refrigerated: ಫ್ರಿಡ್ಜ್ನಲ್ಲಿಡುವ ಮೊಟ್ಟೆಗಳು ಕೊಳೆಯುತ್ತವೆಯೇ? ಅವುಗಳ ರುಚಿಯಲ್ಲಿ ಬದಲಾವಣೆ ಆಗುತ್ತಾ ಎಂಬ ಚರ್ಚೆಗಳು ನಡೆಯುತ್ತಿರುತ್ತವೆ. ಮೊಟ್ಟೆಗಳನ್ನು ಫ್ರಿಡ್ಜ್ನಲ್ಲಿಟ್ಟರೆ ಏನಾಗುತ್ತೆ ಎಂದು ನೋಡೋಣ ಬನ್ನಿ.
01:59 PM (IST) Dec 10
ಪವನ್ ಕಲ್ಯಾಣ್ ಅಭಿನಯದ 'ಬದ್ರಿ' ಚಿತ್ರದಲ್ಲಿ ನಟಿಸಿ ಮನಗೆದ್ದಿದ್ದ ಅಮೀಶಾ ಪಟೇಲ್ ಮದುವೆಗೆ ಸಿದ್ಧ ಎನ್ನುತ್ತಿದ್ದಾರೆ. ತಮ್ಮ ಅರ್ಧ ವಯಸ್ಸಿನವರೂ ಡೇಟಿಂಗ್ಗೆ ಕರೆಯುತ್ತಿದ್ದಾರಂತೆ.
01:33 PM (IST) Dec 10
ನಂದಮೂರಿ ಬಾಲಕೃಷ್ಣ ನಾಯಕರಾಗಿ ನಟಿಸಿರುವ 'ಅಖಂಡ 2' ಸಿನಿಮಾ ಮುಂದೂಡಲ್ಪಟ್ಟಿದ್ದು ಗೊತ್ತೇ ಇದೆ. ಇದೀಗ ಚಿತ್ರತಂಡ ಹೊಸ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಎಲ್ಲರೂ ನಿರೀಕ್ಷಿಸಿದ ದಿನಾಂಕದಂದೇ ಸಿನಿಮಾ ಬರುತ್ತಿದೆ.
01:14 PM (IST) Dec 10
Amruthadhaare Serial Actor Rajesh Nataranga ಸ್ಯಾಂಡಲ್ವುಡ್ ಹಾಗೂ ಕಿರುತೆರೆಯಲ್ಲಿ ವಿಶಿಷ್ಟ ನಟನೆಯ ಮೂಲಕ ಮನೆಮಾತಾಗಿರುವ ನಟ ರಾಜೇಶ್ ನಟರಂಗ ಅವರು ಇತ್ತೀಚೆಗೆ ತಮ್ಮ ಕನಸಿನ ಹೊಸ ಕಾರನ್ನು ಖರೀದಿಸಿದ್ದಾರೆ. ಕಾರ್ ಶೋರೂಮ್ ಈ ವಿಡಿಯೋವನ್ನು ಹಂಚಿಕೊಂಡಿದೆ.
01:08 PM (IST) Dec 10
ನಟ ದರ್ಶನ್ ಅಂಡ್ ಗ್ಯಾಂಗ್ನಿಂದ ಭೀಕರ ಹೊಡೆತಗಳಿಂದ ಚಿತ್ರಹಿಂಸೆ ಅನುಭವಿಸಿ ಕೊಲೆಗೀಡಾದ ರೇಣುಕಾಸ್ವಾಮಿಯವರ ಚಿತ್ರದುರ್ಗದ ಸಮಾಧಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಾಗಿರಲು ಬಿಡದ ಡೆವಿಲ್ ಗ್ಯಾಂಗ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
01:03 PM (IST) Dec 10
ಮಜುಲಿ ಭಾರತದ ಅಸ್ಸಾಂನಲ್ಲಿರುವ ಬ್ರಹ್ಮಪುತ್ರ ನದಿಯಲ್ಲಿರುವ ಒಂದು ಉದ್ದ ಮತ್ತು ತೆಳ್ಳಗಿನ ನದಿ ದ್ವೀಪವಾಗಿದೆ. ಪ್ರವಾಹ ಮತ್ತು ನದಿ ಮಾರ್ಗಗಳ ಬದಲಾವಣೆಯಿಂದ ಉಂಟಾದ ಭೂರೂಪಶಾಸ್ತ್ರೀಯ ಬದಲಾವಣೆಗಳ ಪರಿಣಾಮವಾಗಿ ಇದು ಅಭಿವೃದ್ಧಿಗೊಂಡಿತು.
12:50 PM (IST) Dec 10
Bigg Boss Kannada Season 12: ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಈ ಬಾರಿ ಗಿಲ್ಲಿ ನಟ ಅವರು ಅಡುಗೆ ಮನೆ ಸೇರಿಕೊಂಡಿದ್ದಾರೆ. ಗಿಲ್ಲಿ ನಟ ಅಡುಗೆ ಮಾಡಿದರೆ ಮಾತ್ರ ಅವರಿಗೆ ಇಡೀ ಸೀಸನ್ ಪೂರ್ತಿ ಲಕ್ಷುರಿ ಐಟಮ್ ಸಿಗುತ್ತಿತ್ತು. ಈಗ ಅವರು ಅಶ್ವಿನಿ ಜೊತೆ ಸೇರಿ ಅಡುಗೆ ಮಾಡಲು ಒಪ್ಪಿಗೆ ನೀಡಿದ್ದರು.
12:46 PM (IST) Dec 10
ಮಹೇಶ್ ಬಾಬು ನಾಯಕರಾಗಿದ್ದ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಸ್ಟಾರ್ ನಟಿಯೊಬ್ಬರು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ತನಗೆ ಅವರು ಯಾರೆಂದು ತಿಳಿದಿರಲಿಲ್ಲ ಮತ್ತು ಪ್ರಭಾಸ್ ಹೊರತುಪಡಿಸಿ ಉಳಿದವರೆಲ್ಲ ಕುಳ್ಳಗಿದ್ದರು ಎಂದು ಹೇಳಿದ್ದಾರೆ.
12:15 PM (IST) Dec 10
ಧರ್ಮಸ್ಥಳದಲ್ಲಿ ನೂರಾರು ಶವಗಳ ಸುಳ್ಳು ಆರೋಪದ ಹಿಂದಿನ ಷಡ್ಯಂತ್ರವನ್ನು SIT ಪ್ರಾಥಮಿಕ ವರದಿ ಬಯಲು ಮಾಡಿದೆ. ಆರು ಮಂದಿ ಆರೋಪಿಗಳ 'ಬುರುಡೆ ಗ್ಯಾಂಗ್' ಹಣದ ಆಮಿಷ ನೀಡಿ ಸುಳ್ಳು ಹೇಳಿಸಿರುವುದು ದೃಢ. ಈ ಕೇಸಿನಲ್ಲಿ ಒಬ್ಬರಿಗೆ ಕ್ಲೀನ್ಚಿಟ್ ನೀಡಲಾಗಿದೆ.
12:07 PM (IST) Dec 10
Gujarat man killed friend: ಮಹಿಳೆಯ ವಿಚಾರಕ್ಕೆ ಸಂಬಂಧಿಸಿದಂತೆ ಗೆಳೆಯರಿಬ್ಬರ ಮಧ್ಯೆ ಕಾದಾಟ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಮಾಡಿದ ನಂತರ ಆರೋಪಿ ಸ್ನೇಹಿತನ ಶವವನ್ನು ಹಲವು ಭಾಗಗಳಾಗಿ ಕತ್ತರಿಸಿ ಮೃತದೇಹದ ಭಾಗಗಳನ್ನು ಬೋರ್ವೆಲ್ಗೆ ಎಸೆದಿದ್ದಾನೆ. ಡಿಟೇಲ್ ಸ್ಟೋರಿ ಇಲ್ಲಿದೆ
12:05 PM (IST) Dec 10
ಚಿಕ್ಕಬಳ್ಳಾಪುರದ ಕನ್ನಡಭವನದಲ್ಲಿ 1000ಕ್ಕೂ ಹೆಚ್ಚು ಸಮುದಾಯ ಸದಸ್ಯರನ್ನು ಒಟ್ಟಿಗೆ ಸಂಘಟಿಸಿ ಮಾನವೀಯ ಹಕ್ಕುಗಳ ಅರಿವನ್ನು ಅರ್ಥಪೂರ್ಣವಾಗಿ ಮಾನವ ಹಕ್ಕುಗಳ ದಿನಾಚರಣೆ ಮತ್ತು ಸಂಸ್ಥಾಪಕರ ದಿನಾಚರಣೆ ಮುಖೇನಾ ನೀಡಲಾಗಿದೆ.
11:19 AM (IST) Dec 10
Amruthadhaare Kannada Tv Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್-ಭೂಮಿಕಾ ಇದ್ದ ಬಂಗಲೆಗೆ ಅಜ್ಜಿ ಆಗಮನವಾಗಿದೆ. ತಮಗೆ ಹೇಗೆ ಬೇಕೋ ಹಾಗೆ ದುಡ್ಡಿನ ಮದದಲ್ಲಿ ಮೆರೆಯುತ್ತಿದ್ದ ಜಯದೇವ್-ಶಕುಂತಲಾಗೆ ಈಗ ಅವಳು ಬುದ್ಧಿ ಕಲಿಸಬೇಕಿದೆ. ಹೀಗಿರುವಾಗಲೇ ಆಘಾತಕಾರಿ ವಿಷಯ ಹೊರಬಿದ್ದಿದೆ.
11:06 AM (IST) Dec 10
ಭಾರತದಲ್ಲಿ ಹಿಂದೂಗಳು ಒಂದಾಗದಿದ್ದರೆ ದೇಶವೂ ಉಳಿಯುವದಿಲ್ಲ, ಸಂವಿಧಾನವೂ ಉಳಿಯುವದಿಲ್ಲ. ಈ ಬಗ್ಗೆ ದೇಶದ ಹಿಂದೂಗಳು ಎಚ್ಚರಿಕೆ ವಹಿಸಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು.