Published : Nov 29, 2025, 06:52 AM ISTUpdated : Nov 29, 2025, 11:34 PM IST

DK Shivakumar Vs Siddaramaiah: ಧಾರವಾಡ ಚಲೋ - ಡಿ.1ರಂದು ಪ್ರತಿಭಟನೆಗೆ ನಿರಾಕರಣೆ - ಪೊಲೀಸ್ ಆಯುಕ್ತರಿಂದ ಸ್ಪಷ್ಟನೆ

ಸಾರಾಂಶ

ಬೆಂಗಳೂರು: ಹೈಕಮಾಂಡ್‌ನವರು ಡಿಕೆ ಶಿವಕುಮಾರ್ ಮತ್ತು ನನಗೂ ಕಾಲ್ ಮಾಡಿದ್ದರು. ನೀವಿಬ್ಬರು ಭೇಟಿ ಮಾಡಿ ಅಂತಾ ಹೇಳಿದ್ದಾರೆ. ಅದಕ್ಕೆ ನಾನು ಅವನಿಗೆ ಬ್ರೇಕ್ ಫಾಸ್ಟ್ ಗೆ ಕರೆದಿದ್ದೇನೆ. ಅಲ್ಲಿಗೆ ಬಂದಾಗ ಇಬ್ಬರು ಚರ್ಚೆ ಮಾಡುತ್ತೇವೆ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್ ನವರು ಹೇಳಿದಂತೆ ನಾನು ಕೇಳ್ತೇನೆ ಎಂದಿದ್ದೇನೆ. ಇವಾಗ್ಲೂ ಅದೇ ಹೇಳ್ತೇನೆ, ನಾಳೆಗೂ ಅದೇ ಹೇಳ್ತೇನೆ. ಅವರು ಕೂಡ ಅನೇಕ ಬಾರಿ ಹೇಳಿದ್ದಾರೆ. ಒಂದು ವೇಳೆ ದೆಹಲಿಗೆ ಕರೆದರೆ ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ಶಾಸಕ ಬೇಲೂರು ಸುರೇಶ್‌ ಶುಕ್ರವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

Police Deny Permission for 'Dharwad Chalo' Protest Due to Public Inconvenience, Ambiguity

11:34 PM (IST) Nov 29

ಧಾರವಾಡ ಚಲೋ - ಡಿ.1ರಂದು ಪ್ರತಿಭಟನೆಗೆ ನಿರಾಕರಣೆ - ಪೊಲೀಸ್ ಆಯುಕ್ತರಿಂದ ಸ್ಪಷ್ಟನೆ

ಸರ್ಕಾರಿ ಉದ್ಯೋಗ, ವಯೋಮಿತಿ ಸಡಿಲಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಿದ್ಯಾರ್ಥಿಗಳು ಆಯೋಜಿಸಿದ್ದ 'ಧಾರವಾಡ ಚಲೋ' ಬೃಹತ್ ಪ್ರತಿಭಟನೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಪ್ರತಿಭಟನೆಯ ರೂಪುರೇಷೆಗಳಲ್ಲಿನ ಅಸ್ಪಷ್ಟತೆ ಉಲ್ಲೇಖಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Read Full Story

11:12 PM (IST) Nov 29

ಬೆಂಗಳೂರು - ಶೇಷಾದ್ರಿಪುರಂನಲ್ಲಿ ಕಟ್ಟಡ ಕಾರ್ಮಿಕ ಮಹಿಳೆಯ ಭೀಕರ ಕೊಲೆ!

ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಬಿಜಾಪುರ ಮೂಲದ ಶರಣಮ್ಮ (23) ಎಂಬ ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಕೃತ್ಯವನ್ನು ಆಕೆಯ ಪರಿಚಯಸ್ಥನೇ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ.
Read Full Story

10:29 PM (IST) Nov 29

ಸಿದ್ದರಾಮಯ್ಯ ಮುಖ ನೋಡಿ ಮುಸ್ಲಿಮರು ವೋಟ್ ಮಾಡಿಲ್ಲ; ಡಿಸಿಎಂ ಡಿಕೆಶಿ ಪರ ಬ್ಯಾಟ್ ಬೀಸಿದ ಮುಸ್ಲಿಂ ಮುಖಂಡ !

ಮುಸ್ಲಿಂ ಮುಖಂಡ ಸಾದಿಕ್, ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಮುಸ್ಲಿಂ ಸಮುದಾಯ ಡಿಕೆಶಿ ಮುಖ ನೋಡಿ ಮತ ಹಾಕಿದ್ದು, ಅಧಿಕಾರ ಹಸ್ತಾಂತರ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದಾರೆ.

Read Full Story

10:01 PM (IST) Nov 29

ಆಟೋ ಓಡಿಸುವ ಸಲುವಾಗಿ ಕಾರ್ಪೋರೇಟ್‌ ಕೆಲಸ ಬಿಟ್ಟ ಟೆಕ್ಕಿ!

ಬೆಂಗಳೂರು ಮೂಲದ ರಾಕೇಶ್ ಎಂಬುವವರು ತಮ್ಮ ಕಾರ್ಪೋರೇಟ್‌ ಕೆಲಸವನ್ನು ತೊರೆದು ಆಟೋ ರಿಕ್ಷಾ ಚಾಲಕರಾಗಿದ್ದಾರೆ. ಜೀವನದಲ್ಲಿ ಹತಾಶರಾಗಿ ಮತ್ತೆ ಹೊಸದಾಗಿ ಪ್ರಾರಂಭಿಸಿದ ತಮ್ಮ ಸ್ಪೂರ್ತಿದಾಯಕ ಕಥೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Read Full Story

10:01 PM (IST) Nov 29

'ದಬ್ಬಾಳಿಕೆ ಇರುವಲ್ಲೆಲ್ಲಾ ಜಿಹಾದ್ ಇರುತ್ತದೆ'- ಮುಲ್ಲಾ ಮದನಿ ಹೇಳಿಕೆಗೆ ದೇಶಾದ್ಯಂತ ಆಕ್ರೋಶ; 'ವೈಟ್-ಕಾಲರ್ ಟೆರರ್'ಎಂದ ಬಿಜೆಪಿ

ಜಮಿಯತ್ ಉಲಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಮಹಮೂದ್ ಮದನಿ ಅವರು ಭೋಪಾಲ್‌ನಲ್ಲಿ 'ದಬ್ಬಾಳಿಕೆ ನಡೆದಾಗಲೆಲ್ಲಾ ಜಿಹಾದ್ ಇರುತ್ತದೆ' ಎಂದು ನೀಡಿದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದೆ. ಇದನ್ನು 'ವೈಟ್-ಕಾಲರ್ ಭಯೋತ್ಪಾದನೆ' ಎಂದ ಬಿಜೆಪಿ

Read Full Story

09:35 PM (IST) Nov 29

'ರಾಹುಲ್‌ ಗಾಂಧಿಗೇ ಗೊತ್ತಿಲ್ಲ, ನನಗೆ ಹೇಗೆ ಗೊತ್ತಾಗಬೇಕು?' ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಕಾಂಗ್ರೆಸ್ ಸರ್ಕಾರದ ಆಂತರಿಕ ಜಗಳದಿಂದ ರಾಜ್ಯದ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದ್ದಾರೆ. ಆಡಳಿತ ನಡೆಸಲು ಸಾಧ್ಯವಾಗದಿದ್ದರೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ರಾಜೀನಾಮೆ ನೀಡಿ ಚುನಾವಣೆಗೆ ಬರಲಿ ಎಂದು ಅವರು ಸವಾಲು ಹಾಕಿದ್ದಾರೆ.
Read Full Story

09:06 PM (IST) Nov 29

ಭಾರತದ ಹೊಸ ಭೂಕಂಪ ನಕ್ಷೆ ರಿಲೀಸ್‌, ಇಡೀ ಹಿಮಾಲಯ ಸೇರಿ ದೇಶದ ಶೇ.61ರಷ್ಟು ಭಾಗ ಡೇಂಜರ್‌ ಝೋನ್‌ನಲ್ಲಿ!

ಭಾರತವು ತನ್ನ ಭೂಕಂಪ ವಲಯ ನಕ್ಷೆಯನ್ನು ನವೀಕರಿಸಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣ ಹಿಮಾಲಯವನ್ನು ಹೊಸದಾಗಿ ರಚಿಸಲಾದ ಅತಿ ಅಪಾಯಕಾರಿ 'ಆರನೇ ವಲಯ'ಕ್ಕೆ ಸೇರಿಸಿದೆ. ಈ ಹೊಸ ನಕ್ಷೆಯ ಪ್ರಕಾರ, ದೇಶದ 61% ಭೌಗೋಳಿಕ ಪ್ರದೇಶವು ಮಧ್ಯಮದಿಂದ ಹೆಚ್ಚಿನ ಭೂಕಂಪದ ಅಪಾಯದಲ್ಲಿದೆ.

Read Full Story

08:54 PM (IST) Nov 29

ಕಪ್ಪು ಸಮುದ್ರದಲ್ಲಿ ರಷ್ಯಾದ 'ಶ್ಯಾಡೋ ಫ್ಲೀಟ್' ಟ್ಯಾಂಕರ್‌ಗಳ ಮೇಲೆ ಡ್ರೋನ್ ದಾಳಿ - ಭಯಾನಕ ಸ್ಫೋಟ, ಸಿಬ್ಬಂದಿ ಕಿರುಚಾಟ!

Russian tanker attack Black Sea: ಕಪ್ಪು ಸಮುದ್ರದಲ್ಲಿ ರಷ್ಯಾದ 'ಶ್ಯಾಡೋ ಫ್ಲೀಟ್'ಗೆ ಸೇರಿದ 'ಕೈರೋಸ್' ಮತ್ತು 'ವಿರಾಟ್' ತೈಲ ಟ್ಯಾಂಕರ್‌ಗಳ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯ ಹೊಣೆ ಉಕ್ರೇನ್‌ ಹೊತ್ತುಕೊಂಡಿದ್ದು, ಇದು ರಷ್ಯಾದ ತೈಲ ರಫ್ತಿಗೆ ಗಮನಾರ್ಹ ಅಡ್ಡಿಯುಂಟುಮಾಡಿದೆ.

Read Full Story

08:37 PM (IST) Nov 29

ಮುಟ್ಟಿನ ರಜೆಗೆ ಸಾಕ್ಷಿ ಕೇಳಿದ ಹರ್ಯಾಣ ವಿವಿ! ಕರ್ನಾಟಕದಲ್ಲೂ ಮುಟ್ಟಿನ ರಜೆಗೆ ಸಾಕ್ಷಿ ಕೊಡಬೇಕೇ? - ಸುಪ್ರೀಂ ಗರಂ

ಹರ್ಯಾಣದ ವಿಶ್ವವಿದ್ಯಾಲಯವೊಂದರಲ್ಲಿ ನೈರ್ಮಲ್ಯ ಕಾರ್ಮಿಕರಿಗೆ ಮುಟ್ಟಿನ ರಜೆ ನೀಡಲು ಸಾಕ್ಷಿ ಕೇಳಿದ ಪ್ರಕರಣಕ್ಕೆ ಸುಪ್ರೀಂ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.   ಮಹಿಳೆಯರ ಘನತೆ, ಆರೋಗ್ಯ, ಗೌಪ್ಯತೆ ರಕ್ಷಿಸಲು ದೇಶಾದ್ಯಂತ ಮಾರ್ಗಸೂಚಿಗಳನ್ನು ರೂಪಿಸಲು ನ್ಯಾಯಾಲಯ ನಿರ್ಧರಿಸಿದೆ.

Read Full Story

08:22 PM (IST) Nov 29

ಮಂಡ್ಯ - ಭೂವರಹನಾಥ ದೇಗುಲದಲ್ಲಿ ಡಿಸಿಎಂ ವಿಶೇಷ ಪೂಜೆ - 'ದೇವರ ಪ್ರೇರಣೆ', ತಿಹಾರ್ ಜೈಲು ನೆನಪಿಸಿಕೊಂಡ ಡಿಕೆಶಿ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಡ್ಯದ ಪ್ರಸಿದ್ಧ ಭೂವರಹನಾಥ ದೇವಾಲಯಕ್ಕೆ ದಂಪತಿ ಸಮೇತ ಭೇಟಿ ನೀಡಿ, ಎರಡು ಗಂಟೆಗಳ ಕಾಲ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಮ್ಮ ತಿಹಾರ್ ಜೈಲಿನ ದಿನಗಳನ್ನು ನೆನಪಿಸಿಕೊಂಡ ಅವರು, ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
Read Full Story

08:05 PM (IST) Nov 29

ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುತ್ತಿದ್ದ ಬಸ್ ಆಂಧ್ರದಲ್ಲಿ ಅಪಘಾತ, ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ದುರಂತ

ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಸಾರಿಗೆ ಬಸ್ ಆಂಧ್ರಪ್ರದೇಶದ ಕರ್ನೂಲ್ ಬಳಿ ತಾಂತ್ರಿಕ ದೋಷದಿಂದ ಅಪಘಾತಕ್ಕೀಡಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದ್ದು, 29 ಪ್ರಯಾಣಿಕರ ಪೈಕಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Read Full Story

07:46 PM (IST) Nov 29

ದಾವಣಗೆರೆ - ರೈಫಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಡಿವೈಎಸ್‌ಪಿ ದುರಂತ ಅಂತ್ಯ!

ದಾವಣಗೆರೆಯ ಕೆಟಿಜೆ ನಗರದಲ್ಲಿ, ನಿವೃತ್ತ ಡಿವೈಎಸ್‌ಪಿ ಹೆಚ್.ವೈ. ತುರಾಯಿ (70) ಅವರು ತಮ್ಮ ವೈಯಕ್ತಿಕ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. 2014ರಲ್ಲಿ ನಿವೃತ್ತರಾಗಿದ್ದ ಅವರ ಈ ದುರಂತ ಅಂತ್ಯಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

06:02 PM (IST) Nov 29

ಡ್ರಿಂಕ್ & ಡ್ರೈವ್‌ ಚೆಕ್ಕಿಂಗ್ - ಕುಡುಕ ಚಾಲಕರಿದ್ದ ಬಸ್‌ ಕಂಪನಿ ಹೆಸರನ್ನು ಬಹಿರಂಗಪಡಿಸಿ!

ಬೆಂಗಳೂರು ಸಂಚಾರ ಪೊಲೀಸರು ಖಾಸಗಿ ಬಸ್ ಚಾಲಕರ ವಿರುದ್ಧ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ 16 ಚಾಲಕರು ಪತ್ತೆಯಾಗಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಚಾಲನಾ ಪರವಾನಿಗೆಯನ್ನು ಅಮಾನತುಗೊಳಿಸಲು ಆರ್‌ಟಿಒಗೆ ಶಿಫಾರಸು ಮಾಡಲಾಗಿದೆ.
Read Full Story

05:54 PM (IST) Nov 29

ಸಿದ್ದರಾಮಯ್ಯ-ಡಿಕೆಶಿ ಕದನ ವಿರಾಮ ತಾತ್ಕಾಲಿಕನಾ? ಅಧಿಕಾರ ಹಂಚಿಕೆ ಬದಲು ಒಗ್ಗಟ್ಟಾಗಲು 5 ಕಾರಣವಿದು!

ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ನಡುವಿನ ನಾಯಕತ್ವದ ಚರ್ಚೆಗೆ ಹೈಕಮಾಂಡ್ ತಾತ್ಕಾಲಿಕ ತೆರೆ ಎಳೆದಿದೆ. ಉಪಾಹಾರ ಸಭೆಯ ನಂತರ ಇಬ್ಬರೂ ನಾಯಕರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದು, ಈ ಕದನ ವಿರಾಮದ ಹಿಂದೆ ಐದು ಪ್ರಮುಖ ಕಾರಣಗಳಿವೆ ಎಂದು ವಿಶ್ಲೇಷಿಸಲಾಗಿದೆ.
Read Full Story

05:17 PM (IST) Nov 29

ವಿಜಯಪುರ - ಟ್ಯೂಷನ್ ಕ್ಲಾಸ್ ಮುಗಿಸಿ ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ಅಟ್ಯಾಕ್!

ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ, ಟ್ಯೂಷನ್‌ನಿಂದ ಮನೆಗೆ ಮರಳುತ್ತಿದ್ದ ಆರು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ. ಈ ಘಟನೆಯಿಂದ ಆತಂಕಗೊಂಡಿರುವ ಸ್ಥಳೀಯರು, ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಆಡಳಿತಕ್ಕೆ ಒತ್ತಾಯಿಸಿದ್ದಾರೆ.
Read Full Story

04:55 PM (IST) Nov 29

ಬೆಂಗಳೂರಿನ ಸೈಬರ್ ಸುಳಿಯಲ್ಲಿ ಮಾಯವಾದ ಸಾವಿರಾರು ಕೋಟಿ! 45 ತಿಂಗಳಲ್ಲಿ ಬರೋಬ್ಬರಿ 4,341 ಕೋಟಿ ವಂಚನೆ

ಕಳೆದ 45 ತಿಂಗಳಲ್ಲಿ ಬೆಂಗಳೂರಿನಲ್ಲಿ 53,252 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ವಂಚಕರು 4,341 ಕೋಟಿ ರೂ. ಲಪಟಾಯಿಸಿದ್ದಾರೆ. ಉದ್ಯಮಿಗಳು ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿದೆ. 

Read Full Story

04:55 PM (IST) Nov 29

ಕಲಬುರಗಿಯಲ್ಲಿ ಅಕ್ರಮ ಗೋ ಸಾಗಾಟ ತಡೆದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ಖಂಡಿಸಿ ಪ್ರತಿಭಟನೆ

ಕಲಬುರಗಿಯಲ್ಲಿ ಅಕ್ರಮ ಗೋ ಸಾಗಾಟ ತಡೆಯಲು ಯತ್ನಿಸಿದ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು. ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಆರೋಪಿಗಳನ್ನು ಗಡಿಪಾರು ಮಾಡುವಂತೆ ಒತ್ತಾಯಿಸಲಾಯಿತು.

Read Full Story

04:34 PM (IST) Nov 29

ಮಂಡ್ಯ - ಭೂವರಾಹನಾಥ ದೇವಸ್ಥಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ; ಆಗಮನಕ್ಕೂ ಮುನ್ನ ಜೇನು ದಾಳಿಯ ಆತಂಕ!

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಐತಿಹಾಸಿಕ ಭೂವರಾಹನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ಇಷ್ಟಾರ್ಥ ಸಿದ್ಧಿಗಾಗಿ ಮೃತ್ಯುಂಜಯ ಹೋಮದಲ್ಲಿ ಭಾಗಿಯಾಗಲಿದ್ದಾರೆ. ಅವರ ಆಗಮನಕ್ಕೂ ಮುನ್ನ ದೇಗುಲದ ಆವರಣದಲ್ಲಿ ಹೆಜ್ಜೇನು ದಾಳಿಯಿಂದಾಗಿ ಕೆಲಕಾಲ ಆತಂಕದ ವಾತಾವರಣ 

Read Full Story

04:07 PM (IST) Nov 29

ಶಬರಿಮಲೆ ಯಾತ್ರೆ ಹೋಗುತ್ತಿದ್ದ ಕನ್ನಡಿಗರ ಬಸ್ ಕೇರಳದಲ್ಲಿ ಕಮರಿಗೆ ಬಿದ್ದು ಭೀಕರ ಅಪಘಾತ!

ಶಬರಿಮಲೆಗೆ ತೆರಳುತ್ತಿದ್ದ ಕರ್ನಾಟಕದ ಮೈಸೂರು ಮೂಲದ ಅಯ್ಯಪ್ಪ ಭಕ್ತರ ಬಸ್ ಕೇರಳದ ಕಾಸರಗೋಡು ಬಳಿ ಕಮರಿಗೆ ಉರುಳಿ ಬಿದ್ದಿದೆ. ಈ ಭೀಕರ ಅಪಘಾತದಲ್ಲಿ ಹಲವು ಯಾತ್ರಿಕರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರವಾಗಿ ನಡೆಯುತ್ತಿದೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
Read Full Story

03:35 PM (IST) Nov 29

ರಾಮಾಯಣದ ರಾಮ, ಲಕ್ಷ್ಮಣ, ರಾವಣ ಕ್ರೂರಿಗಳು ಎಂದ ಬಂಡಾಯ ಸಾಹಿತಿ ಲಲಿತಾ ನಾಯಕ್ ವಿರುದ್ಧ ಎಫ್‌ಐಆರ್

ಬಂಡಾಯ ಸಾಹಿತಿ ಹಾಗೂ ಕಾಂಗ್ರೆಸ್ ಮುಖಂಡೆ ಬಿ.ಟಿ. ಲಲಿತಾ ನಾಯಕ್ ಅವರ ವಿರುದ್ಧ ದಾವಣಗೆರೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಚಾರ ಸಂಕಿರಣವೊಂದರಲ್ಲಿ ರಾಮ, ಲಕ್ಷ್ಮಣ ಮತ್ತು ರಾವಣರ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಯಿಂದಾಗಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read Full Story

02:39 PM (IST) Nov 29

ಬೆಂಗಳೂರಿನಲ್ಲಿ ನಾಳೆ ಕತ್ತಲು - ಬೆಸ್ಕಾಂ ಮಹತ್ವದ ಪ್ರಕಟಣೆ, ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ಚೆಕ್ ಮಾಡಿ!

ಕೆಪಿಟಿಸಿಎಲ್ ಕೈಗೊಂಡಿರುವ ತುರ್ತು ನಿರ್ವಹಣಾ ಕಾಮಗಾರಿಯಿಂದಾಗಿ ನವೆಂಬರ್ 30ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ಲಾಟಿನಮ್ ಸಿಟಿ ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Read Full Story

01:00 PM (IST) Nov 29

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಶುಲ್ಕ 1 ಲಕ್ಷ ರೂನಿಂದ ಬರೋಬ್ಬರಿ 2.15 ಲಕ್ಷಕ್ಕೆ ಏರಿಕೆ, ದುಬಾರಿಯಾದ ವೈಭವ!

ರಾಜ್ಯ ಸರ್ಕಾರವು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನ ಬಾಡಿಗೆ ಶುಲ್ಕವನ್ನು ₹1 ಲಕ್ಷದಿಂದ ₹2.15 ಲಕ್ಷಕ್ಕೆ ಹೆಚ್ಚಿಸಿದೆ. ನವೀಕರಣದ ಭಾಗವಾಗಿ ಎಲ್‌ಇಡಿ ಗೋಡೆಗಳು, ಅತ್ಯಾಧುನಿಕ ದೀಪಗಳು ಮತ್ತು ಹೊಸ ಪೀಠೋಪಕರಣಗಳಂತಹ ಸೌಲಭ್ಯಗಳನ್ನು ಅಳವಡಿಸಿರುವುದರಿಂದ ಈ ಏರಿಕೆ ಮಾಡಲಾಗಿದೆ.
Read Full Story

01:00 PM (IST) Nov 29

BBK 12 - ಈ ವಾರ ಕಿಚ್ಚ ಸುದೀಪ್‌ ಬೆಂಡೆತ್ತಿದ್ದು ಯಾರಿಗೆ? ಈ ವಿಷಯ ಮಾತ್ರ ಚರ್ಚೆ ಆಗ್ಲೇಬೇಕು!

BBK 12 Episode Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಈ ವಾರ ಕಿಚ್ಚ ಸುದೀಪ್‌ ಅವರು ಯಾವ ವಿಷಯದ ಬಗ್ಗೆ ಮಾತನಾಡುತ್ತಾರೆ ಎನ್ನುವ ಪ್ರಶ್ನೆ ಇದೆ. ಅತಿಥಿಗಳು ಬಂದಿದ್ದು, ಅವರ ವರ್ತನೆ ಅತಿರೇಕ ಆಗಿದೆಯಾ ಎಂಬ ಪ್ರಶ್ನೆ ಎದ್ದಿದೆ.

Read Full Story

12:59 PM (IST) Nov 29

ಆ ವಿಷಯದಲ್ಲಿ ನನಗೆ ಮೋಸ ಮಾಡಿಲ್ಲ.. ಸಂಬಂಧದ ಬಗ್ಗೆ ಪತ್ನಿ ಹೇಳಿದ ಮಾತು ಬಿಚ್ಚಿಟ್ಟ ಬಾಲಯ್ಯ!

ಬಾಲಕೃಷ್ಣ ಅವರು ತಮ್ಮ ಪತ್ನಿಯ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಇದೇ ಮೊದಲ ಬಾರಿಗೆ ತಮ್ಮ ಪತ್ನಿ ಹೇಳಿದ ಮಾತನ್ನು ಬಹಿರಂಗಪಡಿಸಿದ್ದಾರೆ. ತಾನು ಆಕೆಗೆ ಮಾತ್ರವೇ ನಿಷ್ಠನಾಗಿರುವುದಕ್ಕೆ ಆಕೆ ಖುಷಿಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

Read Full Story

12:28 PM (IST) Nov 29

Bigg Boss ಗಿಲ್ಲಿ ನಟನ ಬಗ್ಗೆ ಪ್ರಶ್ನೆ ಮಾಡಿದ್ರೆ ಹಾರಿಕೆ ಉತ್ತರ ಕೊಟ್ಟಿದ್ದೇಕೆ 'ಮಹಾನಟಿ' ಗಗನಾ?

Mahanati Gagana on Bigg Boss Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಎಂದರೆ ಗಿಲ್ಲಿ ನಟ ಎನ್ನುವ ಮಟ್ಟಕ್ಕೆ ಗಿಲ್ಲಿ ನಟ ಅವರು ಆಟ ಆಡುತ್ತಿದ್ದಾರೆ. ಪ್ರತಿ ದಿನವೂ 50% ಅವರ ಫುಟೇಜ್‌ ಪ್ರಸಾರ ಆಗುವುದು. ಪಕ್ಕಾ ಮನರಂಜನೆ ಕೊಡುವ ಸ್ಪರ್ಧಿ ಬಗ್ಗೆ ಗಗನಾ ಮಾತನಾಡಿಲ್ಲ.

Read Full Story

12:27 PM (IST) Nov 29

ನೂರು ಜನ್ಮ ಎತ್ತಿದ್ರೂ ರಜನಿಕಾಂತ್ ಆಗಿಯೇ ಹುಟ್ಟಬೇಕು... ವೈರಲ್ ಆಯ್ತು ಸೂಪರ್‌ಸ್ಟಾರ್ ಮಾತು!

ಗೋವಾದಲ್ಲಿ ಶುಕ್ರವಾರ ನಡೆದ 56ನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿದರು. ಆ ಬಳಿಕ ಅವರು ಏನು ಮಾತನಾಡಿದರು ಎಂಬುದನ್ನು ನೋಡೋಣ.

Read Full Story

11:30 AM (IST) Nov 29

ಬ್ರೇಕ್‌ಫಾಸ್ಟ್ ಹೇಗಿತ್ತು ಎಂಬುದನ್ನು ಜೊತೆಯಾಗಿ ವಿವರಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ, ತಮ್ಮ ನಡುವೆ ಯಾವುದೇ ಮನಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಒಟ್ಟಾಗಿ ಕೆಲಸ ಮಾಡುವುದಾಗಿ ಮತ್ತು ಮುಂದಿನ ಚುನಾವಣೆಗಳನ್ನು ಒಗ್ಗಟ್ಟಿನಿಂದ ಎದುರಿಸುವುದಾಗಿ ಅವರು ದೃಢಪಡಿಸಿದರು.
Read Full Story

10:59 AM (IST) Nov 29

ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ಅಂತ್ಯ; ಉಭಯ ನಾಯಕರ ನಿರ್ಧಾರ ಏನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನಡೆದ ಬ್ರೇಕ್‌ಫಾಸ್ಟ್ ಸಭೆ ಮುಕ್ತಾಯಗೊಂಡಿದೆ. ಹೈಕಮಾಂಡ್ ಸೂಚನೆಯಂತೆ ಮುಂದುವರಿಯಲು ಉಭಯ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Read Full Story

10:52 AM (IST) Nov 29

ಉಪಾಹಾರ ಸಭೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ

 

 

10:51 AM (IST) Nov 29

ಸಿಎಂ ಸಿದ್ದರಾಮಯ್ಯ ಟ್ವೀಟ್

 

 

10:36 AM (IST) Nov 29

Karnataka Politics - ಸಿಎಂ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ಆರಂಭ; ಹೈಕಮಾಂಡ್ ಸೂಚನೆ ಏನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಸಿಎಂ ನಿವಾಸದಲ್ಲಿ ಖಾಸಗಿ ಉಪಹಾರ ಸಭೆ ನಡೆಯಿತು. ಹೈಕಮಾಂಡ್ ಸೂಚನೆಯ ಮೇರೆಗೆ ನಡೆದ ಈ ಸಭೆಗೂ ಮುನ್ನ, ಡಿಕೆಶಿ ಬಣದ ಶಾಸಕರು ಡಿನ್ನರ್ ಮೀಟಿಂಗ್ ನಡೆಸಿರುವುದು ಕುತೂಹಲ ಮೂಡಿಸಿದೆ.
Read Full Story

09:54 AM (IST) Nov 29

ಅಭಿವೃದ್ಧಿ ಎಂದರೆ ಗುದ್ದಲಿ ಹಿಡಿದು ಬಡಾಯಿ ಕೊಚ್ಚಿಕೊಳ್ಳೋದಲ್ಲ - ಮಾಜಿ ಸಚಿವ ಬಿ.ಶಿವರಾಂ

ತಾಲೂಕಿನ ಅಭಿವೃದ್ಧಿ ಗುದ್ದಲಿ ಹಿಡಿದು ತಿರುಗಿ ಬಡಾಯಿ ಕೊಚ್ಚಿಕೊಂಡರೆ ಆಗುವುದಿಲ್ಲ. ನಿಮಗೆ ತಾಲೂಕಿನ ಅಭಿವೃದ್ಧಿ ಬಗ್ಗೆ ನಿಜವಾಗಿ ಚಿಂತೆ ಇದ್ದರೆ ಮೊದಲು ಬಿಕ್ಕೋಡು ರಸ್ತೆ ದುರಸ್ತಿ ಮಾಡಿಸಿ ಎಂದು ಮಾಜಿ ಸಚಿವ ಬಿ.ಶಿವರಾಂ ಗುಟುರು ಹಾಕಿದರು.

Read Full Story

09:36 AM (IST) Nov 29

ಬ್ರೇಕ್ ಫಾಸ್ಟ್ ಮೀಟಿಂಗ್ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದದಲ್ಲಿ ಮತ್ತೊಂದು ಬೆಳವಣಿಗೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬ್ರೇಕ್‌ಫಾಸ್ಟ್ ಮೀಟಿಂಗ್ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದೇ ವೇಳೆ, ಸುಮಾರು 10 ಶಾಸಕರು ರೆಸಾರ್ಟ್‌ನಲ್ಲಿ ಪ್ರತ್ಯೇಕ ಸಭೆ ಸೇರಿದ್ದು, ಈ ಬೆಳವಣಿಗೆಗಳು ಮುಂದಿನ ರಾಜಕೀಯ ನಡೆಗಳ ಬಗ್ಗೆ ಚರ್ಚೆಗೆ ಕಾರಣವಾಗಿವೆ.
Read Full Story

07:05 AM (IST) Nov 29

ನಾಳಿನ ದೆಹಲಿ ಸಭೆ ಬಗ್ಗೆ ಭಾರಿ ಕುತೂಹಲ - ಬ್ರೇಕ್‌ಫಾಸ್ಟ್‌ ಸಭೆ ಫಲಿತಾಂಶವೇ ನಿರ್ಣಾಯಕ

ರಾಜ್ಯದ ಅಧಿಕಾರ ಹಂಚಿಕೆ ತಿಕ್ಕಾಟ ಪರಿಹಾರಕ್ಕೆ ಕಾಂಗ್ರೆಸ್‌ ವರಿಷ್ಠರ ಸಭೆ ಭಾನುವಾರ ದೆಹಲಿಯಲ್ಲಿ ನಡೆಯಲಿದೆಯೇ ಅಥವಾ ಇಲ್ಲವೇ ಎಂಬುದು ಬ್ರೇಕ್ ಫಾಸ್ಟ್ ಮೀಟಿಂಗ್‌ ಫಲಿತಾಂಶವನ್ನು ಆಧರಿಸಿದೆ.

Read Full Story

More Trending News