Published : Nov 28, 2025, 07:36 AM ISTUpdated : Nov 28, 2025, 11:22 PM IST

Siddaramaiah Vs DK Shivakumar: ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಗೆ ಸಹಕಾರಿ ಈ ಹೆಲ್ತಿ ಜ್ಯೂಸ್, ಇಲ್ಲಿದೆ ರೆಸಿಪಿ

ಸಾರಾಂಶ

ಬೆಂಗಳೂರು (ನ.28): ಕಾಂಗ್ರೆಸ್ ಮುಖ್ಯಮಂತ್ರಿ ಕುರ್ಚಿಗಾಗಿ ಕೊನೆಗೂ ಒಕ್ಕಲಿಗ ವರ್ಸಸ್‌ ಅಹಿಂದ ಯುದ್ಧ ಶುರುವಾಗಿದೆ. ಆದಿಚುಂಚನಗಿರಿ ಮಠದ ಸ್ವಾಮೀಜಿ ಬಳಿಕ ಒಕ್ಕಲಿಗರ ಸಂಘದಿಂದ ಡಿಕೆಶಿ ಪರ ಸಿಎಂ ಸ್ಥಾನಕ್ಕೆ ಬಿಗಿಪಟ್ಟು ನೀಡಲಾಗಿದ್ದರೆ, ಅಹಿಂದ ವರ್ಗದ ಪ್ರಬಲಹಿಂದುಳಿದ ಸಮುದಾಯದಿಂದ ಸಿದ್ದು ಪರವಾಗಿ ಫೈಟ್‌ ಶುರುವಾಗಿದೆ. ಡಿಕೆಶಿ ಸಿಎಂ ಆಗದಿದ್ದರೆ ಒಕ್ಕಲಿಗರ ಶಾಸಕರ ರಾಜೀನಾಮೆ ಆಗಲಿದೆ ಎಂದು ಸಂಘ ಎಚ್ಚರಿಸಿದ್ದು, ಸಮಾಜದ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ಡಿಕೆಶಿ ಕಾಂಗ್ರೆಸ್‌ ಕೆಲಸಕ್ಕೆ ಕೂಲಿ ಕೊಡಿ ಎಂದು ಸಂಘದ ಅಧ್ಯಕ್ಷ ಎಲ್‌.ಶ್ರೀನಿವಾಸ್‌ ಹೇಳಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ 90 ಶಾಸಕರ ಪದತ್ಯಾಗ ಆಗಲಿದೆ ಎಂದು ಶೋಷಿತ ಒಕ್ಕೂಟ ಹೇಳಿದೆ. ಕಾಂಗ್ರೆಸ್‌ಗೆ ಶೇ. 20ರಷ್ಟು ಮಾತ್ರವೇ ಒಕ್ಕಲಿಗರ ಮತ ಬಿದ್ದಿದೆ. ಕೂಲಿ ಆಗಿ ಅಧ್ಯಕ್ಷತೆ ಕೊಟ್ಟಿಲ್ವಾ ಎಂದು ಶೋಷಿತ ಸಮುದಾಯಗಳ ಮಹಾಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ವಾಕ್‌ಪ್ರಹಾರ ನಡೆಸಿದ್ದಾರೆ.

 

11:22 PM (IST) Nov 28

ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಗೆ ಸಹಕಾರಿ ಈ ಹೆಲ್ತಿ ಜ್ಯೂಸ್, ಇಲ್ಲಿದೆ ರೆಸಿಪಿ

ABC juice recipe Kannada: ಕ್ಯಾರೆಟ್‌ನಲ್ಲಿರುವ ಬೀಟಾ-ಕ್ಯಾರೋಟಿನ್ ಮತ್ತು ಇತರ ಜೈವಿಕ ಸಂಯುಕ್ತಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ಜರ್ನಲ್ ಆಫ್ ಫಂಕ್ಷನಲ್ ಫುಡ್ಸ್ ಹೇಳುತ್ತದೆ.

Read Full Story

09:01 PM (IST) Nov 28

ಶಾಹೀನಾ ನನ್ನ ಪತ್ನಿ ಮಸೀದಿಯಲ್ಲಿ ನಿಖಾ ನಡೆದಿದೆ - ದೆಹಲಿ ಸ್ಪೋಟದ ಆರೋಪಿ ಮುಜಾಮಿಲ್ ಮದ್ವೆ ರಹಸ್ಯ

Delhi blast accused Muzammil wife: ದೆಹಲಿ ಸ್ಫೋಟ ಪ್ರಕರಣದ ಆರೋಪಿ ಮುಜಾಮಿಲ್, ತನ್ನ ಸಹಚಾರಿ ಶಾಹೀನಾ ಸೈಯದ್ ನನ್ನ ಪತ್ನಿ, ಗರ್ಲ್‌ಫ್ರೆಂಡ್ ಅಲ್ಲ, ಮಸೀದಿಯಲ್ಲಿ ನಾವಿಬ್ಬರು ಮದ್ವೆಯಾಗಿದ್ದೇವೆ ಎಂದು ಹೇಳಿಕೊಂಡಿದ್ದಾನೆ.

Read Full Story

08:46 PM (IST) Nov 28

ಥಾಯ್ಲೆಂಡ್ ಜಲಸಮಾಧಿ - ನಿಲ್ಲದ ಸಾವಿನ ಸರಣಿ, ರಣ ಭೀಕರ ಪ್ರವಾಹಕ್ಕೆ 145 ಮಂದಿ ಬಲಿ! ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ!

ಥಾಯ್ಲೆಂಡ್‌ನ ದಕ್ಷಿಣ ಭಾಗದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ 145 ಮಂದಿ ಬಲಿಯಾಗಿದ್ದು, 12 ಪ್ರಾಂತ್ಯಗಳಲ್ಲಿ ಸುಮಾರು 36 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಹವಾಮಾನ ಇಲಾಖೆ ಮತ್ತೊಂದು ಚಂಡಮಾರುತದ ಎಚ್ಚರಿಕೆ ನೀಡಿದೆ.

Read Full Story

08:35 PM (IST) Nov 28

ಅಧಿಕಾರ ಬದಲಾವಣೆಯಲ್ಲಿ ಬಿಗ್ ಟ್ವಿಸ್ಟ್, ನಾಳೆ ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಡಿಕೆಶಿ ಬ್ರೇಕ್‌ಫಾಸ್ಟ್ ಮೀಟಿಂಗ್

ಅಧಿಕಾರ ಬದಲಾವಣೆಯಲ್ಲಿ ಬಿಗ್ ಟ್ವಿಸ್ಟ್, ನಾಳೆ ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಡಿಕೆಶಿ ಬ್ರೇಕ್‌ಫಾಸ್ಟ್ ಮೀಟಿಂಗ್, ರಾಜ್ಯ ರಾಜಕಾರಣ ಕ್ಷಣಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದೆ. ದೆಹಲಿ ತೆರಳಬೇಕಿದ್ದ ಡಿಕೆ ಶಿವಕುಮಾರ್ , ನಾಳೆ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Read Full Story

08:15 PM (IST) Nov 28

ರೈತರಿಗೆ ಗುಡ್‌ನ್ಯೂಸ್ - KMF ಮೂಲಕ 50,000 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ, ನೋಂದಣಿ ಹೇಗೆ? ಎಲ್ಲೆಲ್ಲಿ ಖರೀದಿ ಕೇಂದ್ರ? ಇಲ್ಲಿದೆ ವಿವರ

ಬೆಲೆ ಇಳಿಕೆಯಿಂದ ಸಂಕಷ್ಟದಲ್ಲಿರುವ ಮೆಕ್ಕೆಜೋಳ ರೈತರಿಗೆ ನೆರವಾಗಲು ರಾಜ್ಯ ಸರ್ಕಾರವು ಮುಂದಾಗಿದೆ. ಕೆಎಂಎಫ್ ಮೂಲಕ 50,000 ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಪ್ರತಿ ಟನ್‌ಗೆ ₹2,400 ದರದಲ್ಲಿ ನೇರವಾಗಿ ರೈತರಿಂದ ಖರೀದಿಸಲು ನಿರ್ಧರಿಸಿದೆ. ರೈತರು ಎಲ್ಲಿ, ಹೇಗೆ ಮಾರಾಟ ಮಾಡಬೇಕು ಇಲ್ಲಿದೆ ವಿವರ.

Read Full Story

08:14 PM (IST) Nov 28

ಶ್ರೀಲಂಕಾ ನಲುಗಿಸಿದ ದಿತ್ವಾ, 56 ಮಂದಿ ಬಲಿ! ಭಾರತದ 2 ರಾಜ್ಯಗಳಿಗೆ ಚಂಡಮಾರುತ ಅಪ್ಪಳಿಸೋ ಸೂಚನೆ!

 ದಿತ್ವಾ ಚಂಡಮಾರುತವು ಶ್ರೀಲಂಕಾದಲ್ಲಿ ಭಾರಿ ವಿನಾಶವನ್ನುಂಟುಮಾಡಿದ್ದು, 56ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಭಾರತವು 'ಆಪರೇಶನ್ ಸಾಗರಬಂಧು' ಮೂಲಕ ನೆರವಿಗೆ ಧಾವಿಸಿದ್ದು, ಚಂಡಮಾರುತವು ತಮಿಳುನಾಡಿನತ್ತ ಚಲಿಸುತ್ತಿರುವುದರಿಂದ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Read Full Story

07:58 PM (IST) Nov 28

ಹಾಂಗ್‌ಕಾಂಗ್ - ಈ ಶತಮಾನದ ಭೀಕರ ಅಗ್ನಿ ದುರಂತಕ್ಕೆ ಬಲಿಯಾದವರ ಸಂಖ್ಯೆ 128ಕ್ಕೆ ಏರಿಕೆ, 280 ಮಂದಿ ನಾಪತ್ತೆ

ಹಾಂಗ್‌ಕಾಂಗ್‌ನ ತೈಪೊ ಜಿಲ್ಲೆಯ ವಸತಿ ಸಂಕೀರ್ಣದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಇದುವರೆಗೆ ಮೃತರಾದವರ ಸಂಖ್ಯೆ 128 ಕ್ಕೆ ಏರಿದೆ. 280ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ಘಟನೆ ಕಳೆದ 77 ವರ್ಷಗಳಲ್ಲಿ ನಗರದಲ್ಲಿ ನಡೆದ ಅತ್ಯಂತ ಭೀಕರ ಅಗ್ನಿ ದುರಂತ ಎನಿಸಿದೆ.

Read Full Story

07:53 PM (IST) Nov 28

ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಮುಸ್ಲಿಂ ರಾಷ್ಟ , ಪಾಕಿ ಪ್ರಜೆಗಳಿಗೆ ವೀಸಾ ತಿರಸ್ಕರಿಸಿದ ಯುಎಇ

ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಮುಸ್ಲಿಂ ರಾಷ್ಟ ಯುಎಇ, ಪಾಕಿಗಳಿಗೆ ವೀಸಾ ವಿತರಣೆ ಸ್ಥಗಿತ, ರೆಗ್ಯೂಲರ್ ವೀಸಾ ನೀಡುವ ಕಾರ್ಯಕ್ಕೆ ಯುಎಇ ಸರ್ಕಾರ ಬ್ರೇಕ್ ಹಾಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ತೀವ್ರ ಹಿನ್ನಡೆ ಅನುಭವಿಸಿದೆ.

Read Full Story

07:38 PM (IST) Nov 28

120 ಅಡಿ ಎತ್ತರದ ಸ್ಕೈ ಡೈನಿಂಗ್‌ನಲ್ಲಿ ಸಿಲುಕಿದ ಮಂಗಳೂರು ಪ್ರವಾಸಿಗರು; 2.5 ವರ್ಷದ ಮಗು ಸೇರಿ 6 ಜನರ ರಕ್ಷಣೆ!

ಕೇರಳದ ಮೂನ್ನಾರ್ ಬಳಿ ಸ್ಕೈ ಡೈನಿಂಗ್ ವೇಳೆ ಕ್ರೇನ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ, ಮಂಗಳೂರು ಮೂಲದ ಕುಟುಂಬ ಸೇರಿದಂತೆ ಐವರು 120 ಅಡಿ ಎತ್ತರದಲ್ಲಿ ಸಿಲುಕಿಕೊಂಡಿದ್ದರು. ಸುಮಾರು 3 ಗಂಟೆಗಳ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಎಲ್ಲರನ್ನೂ ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ.

Read Full Story

07:28 PM (IST) Nov 28

ಯಾರು ಸಿಎಂ ಅನ್ನೋದು ಹೈಕಮಾಂಡ್ ತೀರ್ಮಾನಿಸುತ್ತೆ, ಕಾಮೆಂಟ್ ಮಾಡೋ ಅಧಿಕಾರ ಯಾರಿಗೂ ಇಲ್ಲ - ಯತೀಂದ್ರ

ರಾಜ್ಯದಲ್ಲಿನ ಮುಖ್ಯಮಂತ್ರಿ ಬದಲಾವಣೆ ಚರ್ಚೆಯು ಕೇವಲ ಊಹಾಪೋಹವಾಗಿದ್ದು, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿರುವ ಅವರು, ಹಿಂದುಳಿದ ವರ್ಗಗಳು ರಾಜಕೀಯವಾಗಿ ಶೈಕ್ಷಣಿಕವಾಗಿ ಸಬಲರಾಗುವ  ಕರೆ ನೀಡಿದ್ದಾರೆ.

Read Full Story

07:07 PM (IST) Nov 28

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡ, ಯಾದಗಿರಿ ಮೂಲದ ವ್ಯಕ್ತಿಯನ್ನು ಪ್ರಿಯಕರನೊಂದಿಗೆ ಬೆಂಗಳೂರಲ್ಲಿ ಕೊಂದ ಪತ್ನಿ!

ಬೆಂಗಳೂರಿನ ಗಂಗೊಂಡಗಳ್ಳಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಯುವಕನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಬಸವರಾಜುನನ್ನು, ಪತ್ನಿ ಶರಣಮ್ಮ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ದೇಹವನ್ನು ಸುಟ್ಟುಹಾಕಿದ್ದಳು. 

Read Full Story

06:49 PM (IST) Nov 28

ಅರಣ್ಯ ಇಲಾಖೆಗೆ ಸವಾಲಾದ ಕಾಡೆಮ್ಮೆ ಸೆರೆ - ಅರವಳಿಕೆ ಇದ್ದರೆ ಕಾಡೆಮ್ಮೆ ಇಲ್ಲ, ಕಾಡೆಮ್ಮೆ ಇದ್ದರೆ ಅರವಳಿಕೆ ಇರಲಿಲ್ಲ!

ಆನೇಕಲ್ ಬಳಿ ಕಾಣಿಸಿಕೊಂಡ ಕಾಡೆಮ್ಮೆಯನ್ನು ಸೆರೆಹಿಡಿಯುವ ಅರಣ್ಯ ಇಲಾಖೆಯ ಎರಡು ದಿನಗಳ ಕಾರ್ಯಾಚರಣೆ ವಿಫಲವಾಗಿದೆ. ಮೊದಲ ದಿನ ಅರವಳಿಕೆ ಇಲ್ಲದ ಕಾರಣ ಮತ್ತು ಎರಡನೇ ದಿನ ಕಾಡೆಮ್ಮೆಯೇ ಪತ್ತೆಯಾಗದ ಕಾರಣ, ಸಿಬ್ಬಂದಿ ವಿಫಲರಾಗಿದ್ದು, ಸ್ಥಳೀಯರಲ್ಲಿ ಆತಂಕ ಮುಂದುವರೆದಿದೆ.
Read Full Story

06:01 PM (IST) Nov 28

ದೆವ್ವಗಳು ಊಟ, ನಿದ್ದೆ, ಸ್ನಾನ ಮಾಡುತ್ತವೆಯೇ? ಅಂಬಿಕಾ ಆತ್ಮಕ್ಕೆ ದುರ್ಗಾ ಕೇಳಿದ ಪ್ರಶ್ನೆಗೆ ಇಲ್ಲಿದೆ ಉತ್ತರ!

'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ, ದುರ್ಗಾ ತನ್ನ ಅಕ್ಕ ಅಂಬಿಕಾಳ ಆತ್ಮವನ್ನು ದೆವ್ವವೆಂದು ಭಾವಿಸಿ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾಳೆ. ದೆವ್ವಗಳು ನಿದ್ದೆ, ಸ್ನಾನ, ಊಟ ಮಾಡುತ್ತವೆಯೇ ಮತ್ತು ಅವುಗಳ ಸೌಂದರ್ಯದ ರಹಸ್ಯವೇನು ಎಂದು ದುರ್ಗಾ ಕೇಳಿದಾಗ, ಅಂಬಿಕಾ ಉತ್ತರಿಸಲಾಗದೆ ಪೇಚಾಡುತ್ತಾಳೆ.
Read Full Story

05:43 PM (IST) Nov 28

ಮುಂಡಗೋಡ - ಬಿಸಿಯೂಟ ಸೇವಿಸಿ 22 ಮಕ್ಕಳು ಅಸ್ವಸ್ಥ; ಆಹಾರದಲ್ಲಿ ಇಲಿ ಹಿಕ್ಕೆ ಪತ್ತೆ!

Mundgod school mid-day meal incident: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸೇವಿಸಿದ 22 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಆಹಾರದಲ್ಲಿ ಇಲಿ ಹಿಕ್ಕೆಗಳು ಪತ್ತೆಯಾಗಿದ್ದು, ಇದು ಮಕ್ಕಳ ಅಸ್ವಸ್ಥತೆಗೆ ಕಾರಣವೆಂದು ಶಂಕಿಸಲಾಗಿದೆ. 

Read Full Story

05:34 PM (IST) Nov 28

ನಡುರಸ್ತೆಯಲ್ಲಿ ಹುಲಿಯ ದರ್ಬಾರ್ - ಗಂಟೆಗಟ್ಟಲೆ ಸಂಚಾರ ಸ್ಥಗಿತ!

Tiger blocks road: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬಾ ಬಳಿ ಹುಲಿಯೊಂದು ನಡುರಸ್ತೆಯಲ್ಲಿ ಮಲಗಿ ವಿಶ್ರಾಂತಿ ಪಡೆದಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ಅಪರೂಪದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story

05:07 PM (IST) Nov 28

ನಟ-ನಿರ್ಮಾಪಕ ಕಡ್ಡಿಪುಡಿ ಚಂದ್ರು ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ - ಲವ್ ಬರ್ಡ್ಸ್ ನಿರ್ದೇಶಕರಿಗೆ ವಂಚನೆ ಆರೋಪ

ಸ್ಯಾಂಡಲ್‌ವುಡ್ ನಟ-ನಿರ್ಮಾಪಕ ಕಡ್ಡಿಪುಡಿ ಚಂದ್ರು ವಿರುದ್ಧ 'ಲವ್ ಬರ್ಡ್ಸ್' ಚಿತ್ರದ ನಿರ್ದೇಶಕ ಪಿ. ಚಂದ್ರಶೇಖರ್ ನೀಡಿದ ವಂಚನೆ ಮತ್ತು ಬೆದರಿಕೆ ದೂರಿನ ಅನ್ವಯ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಸಂಭಾವನೆ ನೀಡದೆ ವಂಚನೆ ಪ್ರಕರಣದಲ್ಲಿ, ವಿಚಾರಣೆಗೆ ಗೈರಾದ ಕಾರಣ ಈ ಆದೇಶ ಹೊರಬಿದ್ದಿದೆ.

Read Full Story

04:59 PM (IST) Nov 28

ರಾಯಚೂರು - ಹಾಡುಹಗಲೇ ಪತ್ರಕರ್ತನ ಮನೆಗೆ ಕನ್ನ, ಚಿನ್ನ, ನಗದು ಸೇರಿ ಲಕ್ಷಾಂತರ ರೂ ದೋಚಿದ ಖದೀಮರು

ರಾಯಚೂರು ಜಿಲ್ಲೆಯ ಲಿಂಗಸೂಗೂರಲ್ಲಿ ವರದಿಗಾರಿಕೆಗೆಂದು ಹೊರಗೆ ಹೋಗಿದ್ದ ಪತ್ರಕರ್ತರೊಬ್ಬರ ಮನೆಯ ಬೀಗ ಮುರಿದು ಖದೀಮರು ಕಳ್ಳತನ ಮಾಡಿದ್ದಾರೆ. ಸುಮಾರು 14 ಲಕ್ಷ ರೂ. ನಗದು ಮತ್ತು 95 ಗ್ರಾಂ ಚಿನ್ನಾಭರಣಗಳು ಕಳುವಾಗಿವೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Read Full Story

04:55 PM (IST) Nov 28

ಡಿಕೆ ಸುರೇಶ್ ದೆಹಲಿ ತಲುಪಿದ ಬೆನ್ನಲ್ಲೇ ಡಿಸಿಎಂ ಡಿಕೆಶಿ ಕೂಡ ಇಂದೇ ದಿಲ್ಲಿ ಪ್ರಯಾಣ, ಏರ್ ಇಂಡಿಯಾ ಟಿಕೆಟ್‌ ಬುಕ್!

ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿಕೆ ಸುರೇಶ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಅಧಿಕಾರ ಹಂಚಿಕೆ ಒಪ್ಪಂದದಂತೆ ಸಿಎಂ ಪಟ್ಟಕ್ಕಾಗಿ ಈ ಭೇಟಿ ನಡೆಯುತ್ತಿದೆ ಎಂಬ ಚರ್ಚೆಗಳ ನಡುವೆಯೇ, ರಾಜ್ಯದ ಯೋಜನೆಗಳ ಬಗ್ಗೆ ಚರ್ಚಿಸಲು ಹೋಗುತ್ತಿರುವುದಾಗಿ ಡಿಕೆಶಿ ಹೇಳಿದ್ದಾರೆ. 

Read Full Story

04:36 PM (IST) Nov 28

ಡಿಕೆಶಿ ಸಿಎಂ ಆಗಲೆಂದು ಯಡಿಯೂರು ದೇವಸ್ಥಾನದಲ್ಲಿ ಶತ್ರು ಸಂಹಾರ ಹೋಮ, ವಿಶೇಷ ಪೂಜೆ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂಬ ಉದ್ದೇಶದಿಂದ, ಅವರ ಸಂಬಂಧಿ ಹಾಗೂ ಕುಣಿಗಲ್ ಶಾಸಕ ಡಾ. ರಂಗನಾಥ್ ನೇತೃತ್ವದಲ್ಲಿ ತುಮಕೂರಿನ ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಹೋಮ-ಹವನ ನಡೆಸಲಾಯಿತು.  ಮೃತ್ಯುಂಜಯ, ಶತ್ರುಸಂಹಾರ ಸೇರಿದಂತೆ ದಶ ಪ್ರಕಾರದ ಹೋಮ ನಡೆದವು.

Read Full Story

04:02 PM (IST) Nov 28

ಉತ್ತರಕನ್ನಡಕ್ಕೆ ಟಿಬೆಟಿಯನ್ ಧರ್ಮಗುರು ದಲೈಲಾಮಾ ಪ್ರವಾಸ, ಭರದ ಸಿದ್ಧತೆ ಪ್ರವಾಸಿಗರಿಗೆ ನೋ ಎಂಟ್ರಿ!

ಟಿಬೆಟ್‌ ಧರ್ಮಗುರು ದಲೈಲಾಮಾ ಡಿ. 12 ರಂದು 45 ದಿನಗಳ ಪ್ರವಾಸಕ್ಕಾಗಿ ಉತ್ತರ ಕನ್ನಡದ ಮುಂಡಗೋಡಕ್ಕೆ ಆಗಮಿಸುತ್ತಿದ್ದಾರೆ. ಅವರ ಸ್ವಾಗತಕ್ಕೆ ಕಾಲನಿಯು ಶೃಂಗಾರಗೊಂಡಿದ್ದು,  ಈ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

Read Full Story

02:57 PM (IST) Nov 28

SSLC ಮತ್ತು PUC ಪರೀಕ್ಷಾ ವಿಧಾನ ಬದಲಿಸಿ ರಾಜ್ಯ ಸರ್ಕಾರ ಆದೇಶ, ಶಿಕ್ಷಕರ ಬಡ್ತಿಗೆ ಹೊಸ ಪರೀಕ್ಷೆ ಕಡ್ಡಾಯ!

ಕರ್ನಾಟಕದಲ್ಲಿ SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ವರ್ಷಕ್ಕೆ ಎರಡಕ್ಕೆ ಸೀಮಿತಗೊಳಿಸಲಾಗಿದೆ. ಜೊತೆಗೆ, ಪ್ರೌಢಶಾಲಾ ಶಿಕ್ಷಕರ ಬಡ್ತಿಗೆ ಅರ್ಹತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಿದ್ದು, ಈ ನಿರ್ಧಾರಗಳ ವಿರುದ್ಧ ಪಿಯು ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ.

Read Full Story

02:05 PM (IST) Nov 28

ಕಾರಿನ ಮೇಲೆ ಉರುಳಿ ಬಿದ್ದ ಜಲ್ಲಿಕಲ್ಲು ಸಾಗಿಸುತ್ತಿದ್ದ ಟ್ರಕ್ - ಒಂದೇ ಕುಟುಂಬದ 7 ಜನ ಸ್ಥಳದಲ್ಲೇ ಸಾವು

ಜಲ್ಲಿಕಲ್ಲು ತುಂಬಿದ ಡಂಪರ್ ಟ್ರಕ್ ನಿಯಂತ್ರಣ ತಪ್ಪಿ ಕಾರಿನ ಮೇಲೆ ಉರುಳಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ಮಗು ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

Read Full Story

01:57 PM (IST) Nov 28

ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ ಮಗಳ ಹೆಸರೇನು ಗೊತ್ತಾ? ಇದರ ಅರ್ಥ ಗೊತ್ತಾದ್ರೆ ಬೆರಗಾಗ್ತೀರಾ!

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಜುಲೈ 15, 2025 ರಂದು ಹೆಣ್ಣು ಮಗುವಿಗೆ ಪೋಷಕರಾಗಿದ್ದರು. ಸುಮಾರು ಐದು ತಿಂಗಳ ನಂತರ, ಅವರು ತಮ್ಮ ಮಗಳ ಮೊದಲ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Read Full Story

01:35 PM (IST) Nov 28

ಖಾಕಿ ಮೇಲೆ ಕೈ ಮಾಡಿದ ದರ್ಶನ್ ಲಾಕಪ್ ಡೆತ್; ಕೇಸು ಹಾಕದೇ ಜೈಲಲ್ಲಿ ಹಲ್ಲೆ, ರಿಹ್ಯಾಬ್‌ನಲ್ಲಿ ಸಾವು!

ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪದ ಮೇಲೆ ವಶಕ್ಕೆ ಪಡೆದಿದ್ದ ದರ್ಶನ್ ಎಂಬ ಯುವಕ, ಪೊಲೀಸ್ ಕಸ್ಟಡಿಯಲ್ಲಿದ್ದ ಬಳಿಕ ಪುನರ್ವಸತಿ ಕೇಂದ್ರದಲ್ಲಿ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆಯಾಗಿರುವುದು ದೃಢಪಟ್ಟಿದ್ದು, ವಿವೇಕನಗರ ಪೊಲೀಸರ ವಿರುದ್ಧ ಲಾಕಪ್ ಡೆತ್ ಆರೋಪ ಕೇಳಿಬಂದಿದೆ.

Read Full Story

01:26 PM (IST) Nov 28

ಮಾಜಿ ಸಚಿವೆ ರೋಜಾಗೆ ಶಾಕ್ ಕೊಟ್ಟ ನಟ ಸೂರ್ಯ - 51 ಜನರನ್ನು ಡಾಕ್ಟರ್ ಮಾಡಿದ ರೋಲೆಕ್ಸ್!

ನಟಿ ರೋಜಾ ಸೆಲ್ವಮಣಿ ಹೀರೋ ಸೂರ್ಯ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಸೂರ್ಯ ತನಗೆ ಸ್ಫೂರ್ತಿ ಎಂದು ಅವರು ಹೇಳಿದ್ದಾರೆ. ಸೂರ್ಯ ಮಾಡಿದ ಒಂದು ದೊಡ್ಡ ಕೆಲಸದ ಬಗ್ಗೆ ತಿಳಿದು ಆಶ್ಚರ್ಯವಾಯಿತು ಎಂದು ರೋಜಾ ಹೇಳಿದ್ದಾರೆ.

Read Full Story

12:57 PM (IST) Nov 28

ರಾಜಮೌಳಿಗೆ ಕೋಪ ಬಂದ್ರೆ ಏನ್ ಮಾಡ್ತಾರೆ? ಜಕ್ಕಣ್ಣನ ಏಕೈಕ ಕೆಟ್ಟ ಅಭ್ಯಾಸ ಬಿಚ್ಚಿಟ್ಟ ಎನ್‌ಟಿಆರ್, ರಾಮ್ ಚರಣ್!

ತೆಲುಗು ಚಿತ್ರರಂಗವನ್ನು ಆಸ್ಕರ್ ಮಟ್ಟಕ್ಕೆ ಕೊಂಡೊಯ್ದ ನಿರ್ದೇಶಕ ರಾಜಮೌಳಿ. ಟಾಲಿವುಡ್ ಸಿನಿಮಾದ ಬ್ರಾಂಡ್ ಅಂಬಾಸಿಡರ್ ಆಗಿರುವ ಜಕ್ಕಣ್ಣನಿಗೆ ಒಂದು ಸಣ್ಣ ಕೆಟ್ಟ ಅಭ್ಯಾಸವಿದೆಯಂತೆ. ಅವರಿಗೆ ಕೋಪ ಬಂದಾಗ ಅದು ಹೊರಬರುತ್ತದೆಯಂತೆ. ಅಷ್ಟಕ್ಕೂ ಅದೇನು ಗೊತ್ತಾ..?

Read Full Story

12:55 PM (IST) Nov 28

15 ದಿನ ಹಸುಗೂಸು, 5 ವರ್ಷದ ಮಗುವಿನೊಂದಿಗೆ ರಂಜಿತಾ ನಾಪತ್ತೆ; ಕಣ್ಣೀರಿಡುತ್ತಿರುವ ಕುಟುಂಬ!

ಬೆಂಗಳೂರಿನ ಹೆಚ್.ಎ.ಎಲ್ ಬಳಿ, 5 ವರ್ಷದ ಮಗ ಮತ್ತು 15 ದಿನದ ಹಸುಗೂಸಿನೊಂದಿಗೆ ರಂಜಿತಾ ಎಂಬ ತಾಯಿ ಕಾಣೆಯಾಗಿದ್ದಾರೆ. ಮಗನನ್ನು ಶಾಲೆಗೆ ಬಿಡಲು ಹೋದವರು ಮನೆಗೆ ಹಿಂತಿರುಗಿಲ್ಲ, ಕೌಟುಂಬಿಕ ಕಲಹದ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
Read Full Story

12:53 PM (IST) Nov 28

ಬೆಂಗಳೂರು ವಿದ್ಯಾರ್ಥಿನಿ ಕೊಲೆ ಪ್ರಕರಣ, ಪೊಲೀಸರಿಗೆ ಗುರುತು ಸಿಗದಂತೆ ತಿರುಪತಿಯಲ್ಲಿ ಮುಡಿಕೊಟ್ಟ ಆರೋಪಿ!

ಬೆಂಗಳೂರಿನಲ್ಲಿ ಬಿಬಿಎಂ ವಿದ್ಯಾರ್ಥಿನಿ ದೇವಿಶ್ರೀಯನ್ನು ಆಕೆಯ ಸ್ನೇಹಿತ ಪ್ರೇಮ್ ವರ್ಧನ್ ಅಸೂಯೆಯಿಂದ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ, ಆರೋಪಿಯು ಪೊಲೀಸರಿಂದ ತಪ್ಪಿಸಿಕೊಳ್ಳಲು ತಿರುಪತಿಗೆ ಹೋಗಿ ಮುಡಿ ಕೊಟ್ಟಿದ್ದನು, ಆದರೆ ಪೊಲೀಸರು ಆತನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Read Full Story

12:43 PM (IST) Nov 28

ತಂಗಿ ಶಿಮನ್ ಮಂದಣ್ಣ ಬಗ್ಗೆ ರಶ್ಮಿಕಾ ಹೇಳಿರೋ ಆ ಮಾತು ಅಷ್ಟೊಂದು ವೈರಲ್ ಆಗ್ತಿರೋದ್ಯಾಕೆ?

ಸದ್ಯಕ್ಕೆ ಹೆಚ್ಚಾಗಿ ಬಾಲಿವುಡ್ ಹಾಗೂ ತೆಲುಗು ಚಿತ್ರರಂಗಗಳಲ್ಲಿ ಕೆಲಸ ಮಾಡುತ್ತಿರುವ ರಶ್ಮಿಕಾ ಮಂದಣ್ಣ ಅವರು ಕನ್ನಡ, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಸಕ್ರಿಯರಾಗಿಲ್ಲ. ಇತ್ತೀಚೆಗೆ ಟಾಲಿವುಡ್ ನಟ ವಿಜಯ್‌ ದೇವರಕೊಂಡ ಜೊತೆ ನಿಶ್ಚಿತಾರ್ಥ ಆಗಿದೆ ಎಂಬ ಸುದ್ದಿ ವರದಿಯಾಗಿಸಾಕಷ್ಟು ವೈರಲ್ ಆಗಿದೆ.

Read Full Story

12:33 PM (IST) Nov 28

ಬಿಗ್ ಬಾಸ್ ಖ್ಯಾತಿಯ ನಟ ರಂಜಿತ್ ಕಾರಲ್ಲಿ ಶಾಸಕರ ಪಾಸ್ ಹಾಕಿಕೊಂಡಿದ್ದೇಕೆ? ರಹಸ್ಯ ಬಿಚ್ಚಿಟ್ಟ ನೆಟ್ಟಿಗರು!

ಬಿಗ್ ಬಾಸ್ ಖ್ಯಾತಿಯ ನಟ ರಂಜಿತ್ ತಮ್ಮ ಕಾರಿಗೆ ಶಾಸಕರ ಪಾಸ್ ಬಳಸಿಕೊಂಡು ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಮಡಿವಾಳ ಸಂಚಾರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದಕ್ಕೆ ನೆಟ್ಟಿಗರು ಉತ್ತರ ಕೊಟ್ಟಿದ್ದಾರೆ.

Read Full Story

12:32 PM (IST) Nov 28

ಆರ್‌ಟಿಐ ವ್ಯಾಪ್ತಿಗೆ ವಿಧಾನಮಂಡಲ ತರಲು ಒಪ್ಪುವೆ - ಬಸವರಾಜ ಹೊರಟ್ಟಿ ಮುಖಾಮುಖಿ ಸಂದರ್ಶನ

ವಿಧಾನಸಭೆ ಮಾಜಿ ಸ್ಪೀಕರ್ ಹಾಗೂ ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಖಾದರ್ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಅವರೊಂದಿಗೆ ‘ಕನ್ನಡಪ್ರಭ’ ಮುಖಾಮುಖಿಯಾಗಿದ್ದು ಹೀಗೆ.

Read Full Story

11:52 AM (IST) Nov 28

ದರ್ಶನ್‌ ಇದುವರೆಗೆ ಮಾಡಿರದ ಪಾತ್ರ ಮಾಡಿದ್ದಾರೆ - ಡೆವಿಲ್‌ನ ಆ ಸೀಕ್ರೆಟ್ ಬಿಚ್ಚಿಟ್ಟ ಮಿಲನ ಪ್ರಕಾಶ್!

ಶೂಟಿಂಗ್‌ ಇದ್ದಾಗ ದರ್ಶನ್‌ ಅವರು ಬೆನ್ನು ನೋವಿದ್ದರೂ ಸತತ 24 ಗಂಟೆ ಶೂಟಿಂಗ್‌ನಲ್ಲಿ ಪಾಲ್ಗೊಂಡು ತುಂಬಾ ಸಹಕಾರ ನೀಡಿದ್ದಾರೆ. ಅದ್ದೂರಿ ಲೊಕೇಷನ್‌ಗಳಲ್ಲಿ ಶೂಟಿಂಗ್‌ ಮಾಡಿದ್ದೇವೆ. ಹೀಗೆ ಹೇಳಿದ್ದು ಮಿಲನ ಪ್ರಕಾಶ್‌.

Read Full Story

11:21 AM (IST) Nov 28

ಮಿಸ್ಕಿನ್ ಅವರನ್ನು ನಂಬಿ ಬೋಲ್ಡ್ ಆಗಿ ನಟಿಸಿದೆ - ಆದ್ರೆ.. ಆ ರಹಸ್ಯ ಬಿಚ್ಚಿಟ್ಟ ನಟಿ ಆಂಡ್ರಿಯಾ

ಪಿಸಾಸು 2 ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ನಟಿ ಆಂಡ್ರಿಯಾ ಜೆರೆಮಿಯಾ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಸಿನಿಮಾ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

Read Full Story

10:47 AM (IST) Nov 28

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?

ನನಗೆ ಬಹಳ ವರ್ಷಗಳಿಂದ ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಆಸೆ ಇತ್ತು. ಆದರೆ ವಿಶ್ವಾಸ ಇರಲಿಲ್ಲ. ಮಜಾ ಟಾಕೀಸ್‌ ನಿರ್ದೇಶನ ಮಾಡಿದ ಮೇಲೆ ನಂಬಿಕೆ ಬಂತು. ನಾನು ಫಾರ್ಮಲ್‌ ಆಗಿ ನಿರ್ದೇಶನ ಕಲಿತವನಲ್ಲ ಎಂದರು ಸೃಜನ್‌ ಲೋಕೇಶ್‌.

Read Full Story

10:23 AM (IST) Nov 28

ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು - ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು

ಎರಡೂ ಕಡೆ ನಾನು ಹೆಚ್ಚು ಸ್ಟ್ರಗಲ್‌ ಮಾಡಲಿಲ್ಲ. ಕಿರುತೆರೆಯಲ್ಲಿ ಜನರೇ ನನ್ನ ಮೆರೆಸಿದ್ರು. ಹಿರಿತೆರೆಯಲ್ಲಿ ನನಗೆ ಒಳ್ಳೆಯ ಕತೆಗಳು ಬರಲಿಲ್ಲ ಎಂಬುದಷ್ಟೇ ಸಮಸ್ಯೆ. ಉಳಿದಂತೆ ಎರಡೂ ಕಡೆ ನಾನು ಹ್ಯಾಪಿ ಎಂದರು ಚಂದನ್ ಕುಮಾರ್.

Read Full Story

09:41 AM (IST) Nov 28

ಇನ್ಮುಂದೆ ‘ಬೃಹತ್‌ ಮೈಸೂರು ಮಹಾನಗರ ಪಾಲಿಕೆ’ - ಸಚಿವ ಸಂಪುಟ ಅನುಮೋದನೆಯಲ್ಲೇನಿದೆ?

‘ಮೈಸೂರು ಮಹಾನಗರ ಪಾಲಿಕೆ’ಯನ್ನು ‘ಬೃಹತ್‌ ಮೈಸೂರು ಮಹಾನಗರ ಪಾಲಿಕೆ’ಯಾಗಿ ಪರಿವರ್ತಿಸಲು ಹಾಗೂ ಆರು ಜಿಲ್ಲೆಗಳ ವಿವಿಧ 11 ಗ್ರಾಪಂಗಳನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದೆರ್ಜೆಗೇರಿಸಲು ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

Read Full Story

09:33 AM (IST) Nov 28

ಮಂಗ್ಳೂರಲ್ಲಿ ಮಳೆ ಮುನ್ಸೂಚನೆ ನೀಡುವ ಸ್ವದೇಶಿ ರಡಾರ್‌ ಸಿದ್ಧ - ಅತ್ಯಾಧುನಿಕ ಡಾಪ್ಲರ್‌ ರಡಾರ್‌ ಉದ್ಘಾಟನೆ

ಭಾರತದ ಹವಾಮಾನ ಮುನ್ಸೂಚನೆ ಸಾಮರ್ಥ್ಯವನ್ನು ವೃದ್ಧಿಸುವ ಮಿಷನ್‌ ಮೌಸಮ್‌ ಅಡಿಯಲ್ಲಿ ಮಂಗಳೂರಿನಲ್ಲಿ ಹಾಗೂ ಛತ್ತೀಸಗಢದ ರಾಯ್ಪುರದಲ್ಲಿ ಕೇಂದ್ರ ಭೂ ವಿಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಗುರುವಾರ ಉದ್ಘಾಟಿಸಿದ್ದಾರೆ.

Read Full Story

09:31 AM (IST) Nov 28

‘ಪತಿ’ ಸ್ಥಾನ ವಿವಾಹಿತನಿಗಷ್ಟೇ ಸೀಮಿತವಲ್ಲ - ಹೈ

ವಿವಾಹಿತೆ ಮೇಲಿನ ಕ್ರೌರ್ಯ (ಐಪಿಸಿ 498ಎ) ಅಪರಾಧವು ಕೇವಲ ವಿವಾಹಿತನಿಗಷ್ಟೇ ಸೀಮಿತವಾಗದೆ, ಮದುವೆಯ ಗುಣಲಕ್ಷಣಗಳನ್ನು ಹೊಂದಿರುವ ಹಾಗೂ ವಿವಾಹವಾಗದೆ ಮಹಿಳೆಯೊಂದಿಗೆ ಸಹಜೀವನ ನಡೆಸುತ್ತಿರುವ (ಲಿವ್‌-ಇನ್‌ ರಿಲೇಷನ್‌ ಹೊಂದಿರುವ) ವ್ಯಕ್ತಿಗೂ ಅನ್ವಯಿಸಲಿದೆ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

Read Full Story

09:23 AM (IST) Nov 28

ಸಿಎಂ ಕುರ್ಚಿ ಕಾದಾಟದ ಬಣ ರಾಜಕೀಯ ತೀವ್ರ - ಮಲ್ಲಿಕಾರ್ಜುನ ಖರ್ಗೆ ಮಧ್ಯಸ್ಥಿಕೆ ಘೋಷಣೆ

ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕಾದಾಟದ ಬಣ ರಾಜಕೀಯದ ಚಟುವಟಿಕೆ ಮತ್ತಷ್ಟು ತೀವ್ರಗೊಂಡಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಪರ ಶಾಸಕರು, ಸಚಿವರ ಜತೆಗೆ ವಿವಿಧ ಮಠಾಧೀಶರು, ಸಮುದಾಯದ ಸಂಘಟನೆಗಳು ಸಹ ಬ್ಯಾಟ್‌ ಬೀಸಿವೆ.

Read Full Story

08:46 AM (IST) Nov 28

ವಿಪಕ್ಷದಿಂದ ರಾಜ್ಯ ಸರ್ಕಾರ ಟೀಕಿಸುವ ಚಿಲ್ಲರೆ ಕೆಲಸ - ಸಚಿವ ಕೆ.ವೆಂಕಟೇಶ್ ವಾಗ್ದಾಳಿ

ರಾಜ್ಯ ಸರ್ಕಾರ ಸಾಕಷ್ಟು ರೀತಿಯಲ್ಲಿ ಜನಪರ, ರೈತಪರವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದರೂ ಸಹಾ ಇದನ್ನ ಸಹಿಸದ ವಿಪಕ್ಷಗಳು ಸರ್ಕಾರ ಟೀಕಿಸುವ ಚಿಲ್ಲರೆ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು.

Read Full Story

More Trending News