ಭಾರತದ ಐತಿಹಾಸಿಕ ಗೆಲುವಿಗೆ 5 ಕೋಟಿ, ಸನ್ನಿಗೆ ಯಾರು ಸರಿಸಾಟಿ?ಜ.19ರ ಟಾಪ್ 10 ಸುದ್ದಿ!

By Suvarna NewsFirst Published Jan 19, 2021, 5:05 PM IST
Highlights

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸಿದೆ. ಇದೀಗ ಬಿಸಿಸಿಐ ಭರ್ಜರಿ ಬಹುಮಾನ ಘೋಷಿಸಿದೆ. ಸಿಎಂ ಯಡಿಯೂರಪ್ಪನವರಿಗೆ, ಹೆಚ್ ಡಿ ಕುಮಾರಸ್ವಾಮಿ ವಾರ್ನಿಂಗ್ ನೀಡಿದ್ದಾರೆ. 2020ರಲ್ಲಿ ಚೀನಾದ ಆರ್ಥಿಕತೆ ಶೇ.2.3 ಬೆಳವಣಿಗೆಯಾಗಿದೆ. ಗಣರಾಜ್ಯೋತ್ಸವಕ್ಕೆ ಅಟ್ಟಾರಿ ಗಡಿಯಲ್ಲಿ ಭಾರತ- ಪಾಕ್‌ ಸೇನೆ ಪ್ರದರ್ಶನ ಇಲ್ಲ. ಸಾಜಿದ್ ಖಾನ್ ಕಾಮಪುರಾಣ ಬಯಲು, ಕರ್ನಾಕದ ವ್ಯಕ್ತಿಗೆ ಲವ್ ಜಿಹಾದ್ ಸಂಕಟ ಸೇರಿದಂತೆ ಜನವರಿ 19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ನನ್ನ ತಂಟೆಗೆ ಬಂದರೆ ಹುಷಾರ್‌: ಬಿಎಸ್‌ವೈಗೆ ಎಚ್‌ಡಿಕೆ ಎಚ್ಚರಿಕೆ...

ಈಗೇನೋ ಸುಭದ್ರವಾಗಿದ್ದೀರಿ ನನ್ನ ತಂಟೆಗೆ ಬಂದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ. ಹೀಗೆಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬಿ ಎಸ್ ಯಡಿಯೂರಪ್ಪಗೆ ವಾರ್ನಿಂಗ್ ನೀಡಿದ್ದಾರೆ. 

ಆಸೀಸ್‌ ನಾಡಲ್ಲಿ ಟೆಸ್ಟ್‌ ದಿಗ್ವಿಜಯ; ಟೀಂ ಇಂಡಿಯಾಗೆ ಭರ್ಜರಿ ಬೋನಸ್ ಘೋಷಿಸಿದ ದಾದಾ..!...

ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಂಪರ್ ಬಹುಮಾನ ಘೋಷಿಸಿದ್ದಾರೆ.

ಟೀಂ ಇಂಡಿಯಾ ಸರಣಿ ಗೆಲುವಿನ ಬಳಿಕ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ ಹೇಗಿದೆ?...

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಭಾರತದ ಕೈವಶವಾಗಿದೆ. ಮೊದಲ ಪಂದ್ಯದಲ್ಲಿ  ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾ ಬಳಕಿ ಭರ್ಜರಿ ಕಮ್‌ಬ್ಯಾಕ್ ಮಾಡಿತು. ಜನಾಂಗೀಯ ನಿಂದನೆ ಸೇರಿದಂತೆ ಹಲವು ಅಡೆ ತಡೆ ಎದುರಿಸಿದ ಟೀಂ ಇಂಡಿಯಾ, ಕಾಂಗರೂ ನಾಡಿನಲ್ಲಿ ಸತತ 2ನೇ ಬಾರಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ರಚಿಸಿದೆ.  ಈ ಗೆಲುವಿನ ಬಳಿಕ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಆದ ಬದಲಾವಣೆಗಳೇನು? ಇಲ್ಲಿದೆ. 

'ಪ್ಯಾಂಟ್‌ನಿಂದ ಶಿಶ್ನ ತೆಗೆದು ಫೀಲ್ ಮಾಡು ಎಂದಿದ್ದ ನಿರ್ದೇಶಕ'...

ಬಾಲಿವುಡ್ ನಲ್ಲಿ ಮಿಂಚಿ ಇದೀಗ ಅಡಲ್ಟ್ ಮನರಂಜನೆ ನೀಡುತ್ತಿರುವ ನಟಿ ಶೆರ್ಲಿನ್ ಚೋಪ್ರಾ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಜಿಯಾ  ಖಾನ್ ಬಳಿ ಟಾಪ್ ತೆಗೆದು ನಗ್ನವಾಗು ಎಂದು ಸಾಜಿದ್ ಖಾನ್  ಹೇಳಿದ್ದರು ಎಂಬ ವಿಚಾರ ದೊಡ್ಡ ಮಟ್ಟದ ಚರ್ಚೆ ವಸ್ತುವಾಗಿದೆ.

ಮದುವೆ ನಂತ್ರ ಬುರ್ಖಾ ಮಾತ್ರ ಧರಿಸ್ಬೇಕು: ರಿಸೆಪ್ಶನ್ ದಿನ ಹಿಂದೂ ಪತ್ನಿಗೆ ಶಾಕ್ ಕೊಟ್ಟ ನಟ...

ಭಿನ್ನ ಮತದ ಇಬ್ಬರು ಪ್ರೀತಿಸಿ ಮದುವೆಯಾಗಿ ನಂತರ ಮತಾಂತರವಾಗು, ಹಾಗೇ ಇರು, ಹೀಗೆ ಇರು ಎಂದರೆ ಹೇಗಾಗಬಹುದು ಹೇಳಿ..? ನಂಬಿ ಮದುವೆಯಾದ ಹುಡುಗಿಗೆ ಇನ್ಮುಂದೆ ಬುರ್ಖಾ ಮಾತ್ರ ಧರಿಸ್ಬೇಕು ಎಂದು ಶಾಕ್ ಕೊಟ್ಟಿದ್ದರು ಈ ನಟ

2020ರಲ್ಲಿ ಚೀನಾದ ಆರ್ಥಿಕತೆ ಶೇ.2.3 ಬೆಳವಣಿಗೆ: ಭಾರತ ಸೇರಿದಂತೆ ಎಲ್ಲಾ ಪ್ರಮುಖ ಆರ್ಥಿಕತೆ ಕುಸಿತ!...

ಕೊರೋನಾ ವೈರಸ್‌ನಿಂದಾಗಿ 2020ರಲ್ಲಿ ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ಎಲ್ಲಾ ಪ್ರಮುಖ ಆರ್ಥಿಕತೆಗಳು ಕುಸಿತ ಕಂಡಿದ್ದರೆ, ವೈರಸ್‌ನ ಜನಕನೆಂಬ ಕುಖ್ಯಾತಿ ಪಡೆದಿರುವ ಚೀನಾದ ಆರ್ಥಿಕತೆ ಮಾತ್ರ ಶೇ.2.3ರಷ್ಟುಏರಿಕೆ ಕಂಡಿದೆ. ಇದು ಚೀನಾದ 45 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಕಡಿಮೆ ಬೆಳವಣಿಗೆಯ ದರವಾಗಿದ್ದರೂ, ಕೊರೋನಾ ಅವಧಿಯಲ್ಲಿ ದಾಖಲಿಸಿದ ಅತ್ಯುತ್ತಮ ಅಭಿವೃದ್ಧಿ ದರವೆಂದು ತಜ್ಞರು ವಿಶ್ಲೇಷಿಸಿದ್ದಾರೆ.

ತಳಮಟ್ಟದಿಂದ ಪಕ್ಷ ಸಂಘಟನೆಗೆ ಜೆಡಿಎಸ್ ಒತ್ತು, ಇಲ್ಲಿದೆ ದಳಪತಿಗಳ ಪಕ್ಕಾ ಪ್ಲಾನ್..!...

ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಜಾತ್ಯತೀತ ಜನತಾದಳಕ್ಕೆ ಸಂಜೀವಿನಿಯಾಗಿ ಪರಿಣಮಿಸಿದ್ದು, ಜೆಡಿಎಸ್ ಮೇಲೆ ಜನರ  ಒಲವಿನ ಅಲೆ ಅರಿತಿರುವ ದಳಪತಿಗಳು ಈಗ ಪಕ್ಷ ಸಂಘಟನೆಗೆ ಭಾರೀ ಒತ್ತು ನೀಡುತ್ತಿದ್ದಾರೆ. 

ಈ ಬಾರಿ ಗಣರಾಜ್ಯೋತ್ಸವಕ್ಕೆ ಅಟ್ಟಾರಿ ಗಡಿಯಲ್ಲಿ ಭಾರತ- ಪಾಕ್‌ ಸೇನೆ ಪ್ರದರ್ಶನ ಇಲ್ಲ!...

ಕೊರೋನಾ ಕಾರಣದಿಂದಾಗಿ ಭಾರತ-ಪಾಕಿಸ್ತಾನದ ಗಡಿ ಬಳಿಯಿರುವ ಅಟ್ಟಾರಿಯಲ್ಲಿ ಈ ಬಾರಿಯ ಗಣರಾಜ್ಯೋತ್ಸವದ ಪ್ರಯುಕ್ತ ಉಭಯ ದೇಶಗಳ ಜಂಟಿ ಸೇನಾ ಯೋಧರ ತಾಲೀಮು ಪ್ರದರ್ಶನ ನಡೆಯಲ್ಲ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಜನವರಿ 26ರ ಗಣರಾಜ್ಯೋತ್ಸವಕ್ಕೆ ಏನು ಮಾಡಬೇಕೆಂಬ ಕುರಿತಾಗಿ ಈ ವಾರ ಸಭೆ ನಿಗದಿಯಾಗಿದೆ ಎನ್ನಲಾಗಿದೆ.

ಯು.ಪಿ ಲವ್‌ ಜಿಹಾದ್‌ ಕೇಸಲ್ಲಿ ಕರ್ನಾಟಕದ ಮುಸ್ಲಿಂ ವ್ಯಕ್ತಿ ಬಂಧನ...

 19 ವರ್ಷದ ಹಿಂದೂ ಯುವತಿಯನ್ನು ಅಪಹರಣ ಮಾಡಿದ ಆರೋಪ| ಕರ್ನಾಟಕ ಮೂಲದ ಮುಸ್ಲಿಂ ಯುವಕನ ಬಂಧನ| ಯುವತಿಯ ತಂದೆ ದೂರಿನ ಮೇರೆಗೆ ಆರೋಪಿ ವಿರುದ್ಧ ನೂತನ ಲವ್‌ ಜಿಹಾದ್‌ ಕಾಯ್ದೆಯಡಿ ಕೇಸ್‌ ದಾಖಲು

ಸನ್ನಿ ಲಿಯೋನಿ ಬ್ಯೂಟಿ ಸೀಕ್ರೆಟ್‌ ಹಿಂದಿನ ಗುಟ್ಟು ರಟ್ಟಾಯ್ತು!...

ಭಾರತೀಯರ ಮೋಸ್ಟ್‌ ಫೇವರೆಟ್‌ ಚಾಟ್ ಪಾನಿಪೂರಿ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಬಾಲಿವುಡ್ ಹಾಟ್‌ ಚೆಲುವೆ ಸನ್ನಿ ಬರೋಬ್ಬರಿ 12 ಪಾನಿಪೂರಿ ಸೇವಿಸಿ ಇದೀಗ ಮತ್ತೊಂದು ರೌಂಡ್ ಶುರು ಮಾಡಲು ಮುಂದಾಗಿದ್ದಾರೆ. ಆದರೆ ವಿಡಿಯೋದಲ್ಲಿ ಏನು ಹೇಳಿದ್ದಾರೆ ಕೇಳಿ...

click me!