ಕೊರೋನಾ ಆತಂಕದಲ್ಲಿ IPL ಟೂರ್ನಿ, ದುಬಾರಿ ಮನೆ ಖರೀದಿಸಿದ ಸನ್ನಿ; ಏ.6ರ ಟಾಪ್ 10 ಸುದ್ದಿ!

Published : Apr 06, 2021, 04:46 PM ISTUpdated : Apr 06, 2021, 04:48 PM IST
ಕೊರೋನಾ ಆತಂಕದಲ್ಲಿ IPL ಟೂರ್ನಿ, ದುಬಾರಿ ಮನೆ ಖರೀದಿಸಿದ ಸನ್ನಿ; ಏ.6ರ ಟಾಪ್ 10 ಸುದ್ದಿ!

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ ಪತ್ತೆಯಾಗಿದ್ದು, ವಲಯ ಅಧಿಕಾರಿ ಅಮಾನತಾಗಿದ್ದಾರೆ. ಕೊರೋನಾ ಹೆಚ್ಚಾಗುತ್ತಿರುವ ಕಾರಣ ಕರ್ನಾಟಕದಲ್ಲಿ ಲಾಕ್‌ಡೌನ್ ಎಚ್ಚರಿಕೆ ನೀಡಲಾಗಿದೆ. ಐಪಿಎಲ್ ಟೂರ್ನಿಗೆ ಕೆಲ ದಿನಗಳಿರುವಾಗಲೇ 15ಕ್ಕೂ ಹೆಚ್ಚು ಸಿಬ್ಬಂದಿಗೆ ಕೊರೋನಾ ವಕ್ಕರಿಸಿದೆ. 16 ಕೋಟಿ ರೂಪಾಯಿ ಮನೆ ಖರೀದಿಸಿದ ಸನ್ನಿ, ಮದನಿ ಡೇಂಜರ್ ಎಂದು ಸುಪ್ರೀಂ ಸೇರಿದಂತೆ ಏಪ್ರಿಲ್ 6ರ ಟಾಪ್ 10 ಸುದ್ದಿ ಇಲ್ಲಿವೆ.

ಚುನಾವಣೆಗೂ ಮುನ್ನ ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ, ವಿವಿ ಪ್ಯಾಟ್‌ ಪತ್ತೆ!...

ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ ಹಾಗೂ ವಿವಿ ಪ್ಯಾಟ್ ಪತ್ತೆಯಾಗಿರುವುದು ಭಾರೀ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಚುನಾವಣಾ ಆಯೋಗವು ವಲಯ ಅಧಿಕಾರಿ ಎಸಗಿದ ತಪ್ಪಿಗೆ ಅಮಾನತು ಶಿಕಗ್ಷೆ ವಿಧಿಸಿದೆ.

ಲಾಕ್‌ಡೌನ್‌ : ಎಚ್ಚರಿಕೆ ನೀಡಿದ ಆರೋಗ್ಯ ಸಚಿವ ಸುಧಾಕರ್...

 ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ವಿಧಿಸಲಾಗಿದೆ.  ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೂ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ. 

ಮದನಿ ಡೇಂಜರಸ್‌ ವ್ಯಕ್ತಿ: ಸುಪ್ರೀಂ ಕೋರ್ಟ್ ಕಿಡಿ!...

ಸೈಕಲ್​ನಲ್ಲಿ ಬಂದು ವೋಟ್​ ಹಾಕಿದ ತಮಿಳು ನಟ ವಿಜಯ್: ಏನಿದರ ಹಿಂದಿನ ಮರ್ಮ?...

ಐದು ರಾಜ್ಯಗಳ ಪೈಕಿ ತಮಿಳುನಾಡಿನ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಹೀಗಿರುವಾಗ ಇಲ್ಲಿ ನಡೆಯಲಿರುವ ಏಕ ಹಂತದ ಮತದಾನ ಪ್ರಕ್ರಿಯೆ ಮುಂದುವರೆದಿದೆ. ಈ ಮಧ್ಯೆ ತಮಿಳು ನಟ 'ದಳಪತಿ' ವಿಜಯ್ ಕೂಡಾ ಮತ ಚಲಾಯಿಸಿದ್ದು, ಇವರು ಪೋಲಿಂಗ್‌ ಬೂತ್‌ಗೆ ಸೈಕಲ್‌ನಲ್ಲಿ ಆಗಮಿಸಿರುವುದು ಭಾರೀ ಸದ್ದು ಮಾಡಿದೆ.

ಐಪಿಎಲ್‌ಗೆ ಮತ್ತಷ್ಟು ಕೊರೋನಾಂತಕ: 15 ಸಿಬ್ಬಂದಿಗೆ ಸೋಂಕು!...

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ದಿನದಿಂದ ದಿನಕ್ಕೆ ಕೊರೋನಾ ಕಂಟಕವಾಗಿ ಪರಿಣಮಿಸುತ್ತಿದೆ. 

ಮುಂಬೈನಲ್ಲಿ 16 ಕೋಟಿಯ ಅಪಾರ್ಟ್‌ಮೆಂಟ್ ಖರೀದಿಸಿದ ಸನ್ನಿ...

ಬಾಲಿವುಡ್ ನಟಿ ಸನ್ನಿ ಲಿಯೋನ್ ಮುಂಬೈನ ಅಂಧೇರಿ ಉಪನಗರದಲ್ಲಿ 4,365 ಚದರ ಅಡಿ ಅಪಾರ್ಟ್ಮೆಂಟ್ ಅನ್ನು 16 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಈ ವ್ಯವಹಾರವು 48 ಲಕ್ಷ ರೂ. ಸ್ಟಾಂಪ್ ಡ್ಯೂಟಿಯೊಂದಿಗೆ ನಡೆದಿದೆ. ಮಾರ್ಚ್ 28 ರಂದು ನೋಂದಾಯಿಸಲಾಗಿದೆ.

ವಿದ್ಯಾರ್ಥಿಗಳಿಗೆ ಎಚ್‌ಪಿ ಕ್ರೋಮ್‌ಬುಕ್ ಲ್ಯಾಪ್‌ಟ್ಯಾಪ್; 21,999 ರೂ.ನಿಂದ ಬೆಲೆ ಆರಂಭ...

ಲ್ಯಾಪ್‌ಟ್ಯಾಪ್ ಉತ್ಪಾದನೆಯ ಪ್ರಮುಖ ಕಂಪನಿಯಾಗಿರುವ ಎಚ್‌ಪಿ, ವಿದ್ಯಾರ್ಥಿಗಳಿಗೆ ನೆರವಾಗುವ ಅಗ್ಗದ ಬೆಲೆಯ ಕ್ರೋಮ್‌ಬುಕ್ 11ಎ  ಎಂಬ ಲ್ಯಾಪ್‌ಟ್ಯಾಪ್ ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ ಟ್ಯಾಪ್ ಹಲವು ವಿಶೇಷತೆಗಳನ್ನು ಹೊಂದಿದ್ದು, ಕಡಿಮೆ ಬೆಲೆಗೆ ಅತ್ಯುತ್ತಮ ಸೇವೆಯನ್ನು ಒದಗಿಸಲಿದೆ.

ಥಾರ್ ರಂಗೋಲಿ ಬಿಡಿಸಿ ಇಂಡಿಯಾ ಬುಕ್ ರೆಕಾರ್ಡ್ ಸೇರಿದ ಮಂಡ್ಯ ಕಲಾವಿದ...

ಕಳೆದ ವರ್ಷವಷ್ಟೇ ಮಹೀಂದ್ರಾ ಕಂಪನಿ ತನ್ನ ಎರಡನೇ ತಲೆಮಾರಿನ ಥಾರ್ ಎಸ್‌ಯುವಿ ಬಿಡುಗಡೆ ಮಾಡಿತ್ತು. ತನ್ನ ಅದ್ಭುತ ಚಾಲನಾ ಶಕ್ತಿಯಿಂದ ಚಾಲಕರಿಗೆ ಪ್ರೇರಣೆ ನೀಡುವ ಥಾರ್, ಕಲಾವಿದರಿಗೂ ಮೋಡಿ ಮಾಡಿದೆ. ಮಂಡ್ಯದ ಕಲಾವಿದರೊಬ್ಬರು 20 ಅಡಿ ಥಾರ್ ರಂಗೋಲಿ ಬಿಡಿಸಿ ಇಂಡಿಯಾ ಬುಕ್ ರೆಕಾರ್ಡ್ ಸೇರಿದ್ದಾರೆ.

ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದಲ್ಲಿ ನೇಮಕಾತಿ...

ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು 2021ನೇ ಸಾಲಿನ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ