ಭದ್ರಾವತಿ : ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದವರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ. ನಿಮ್ಮ ಈ ಪ್ರೀತಿ ನೋಡುತ್ತಿದ್ದರೆ ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುವ ಆಸೆ ಉಂಟಾಗುತ್ತಿದೆ ಎಂದು ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದ್ದಾರೆ. ಸದ್ಯ ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಆದರೆ ಸಂಗಮೇಶ್ವರ್ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ‘ಸಂಗಮೇಶ್ ಅವರೇ, ಮುಂದಿನ ಜನ್ಮಕ್ಕೆ ಕಾಯಬೇಡಿ. ಈಗಲೇ ಹೋಗಿ ಬಿಡಿ. ನಿಮ್ಮ ಕ್ಷೇತ್ರದ ಉಳಿದ ಮತದಾರರಿಗೆ ಯಾಕೆ ಅವಮಾನ ಮಾಡುತ್ತೀರಿ. ನಿಮ್ಮದೇ ಸಮುದಾಯಕ್ಕೆ ಏಕೆ ಅವಮಾನ ಮಾಡುತ್ತೀರಿ ಎಂದು ಟಾಂಗ್ ನೀಡಿದ್ದಾರೆ.

11:52 PM (IST) Sep 10
ಎದುರು ಮನೆ, ಪಕ್ಕದ ಮನೆ ಹೆಂಗಸರಲ್ಲಿ ಶೀತಲ ಸಮರ ಶುರುವಾಗಿರುತ್ತದೆ. ಗಂಡ ಮನೆಗೆ ಬರೋದೆ ತಡ, ಮನೆಯಲ್ಲಿ ಟಿವಿ ಸದಾ ಆನ್ ಇರುತ್ತದೆ. ಜಾಹಿರಾತು ಬರುವುದೇ ತಡ, ಹೆಂಡತಿ ದೊಡ್ಡ ದನಿಯಲ್ಲಿ ,ಪಕ್ಕದ ಮನೆ ಪದ್ಮಕ್ಕನ ಮನೆಲ್ಲಿರೋದು ಇದೆ ಫ್ರಿಜ್..ಎದುರುಗಡೆ ಮನೆ ಹೇಮನ ಮನೆಯಲ್ಲಿರೋದು..
11:21 PM (IST) Sep 10
ದಾವಣಗೆರೆಯ ವಾಟರ್ ಟ್ಯಾಂಕ್ ಪಾರ್ಕ್ನಲ್ಲಿ ಯುವಕ-ಯುವತಿಯರ ಜಗಳದ ವಿಡಿಯೋ ವೈರಲ್ ಆಗಿದೆ. ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಈ ಜಗಳ ನಡೆದಿದೆ ಎನ್ನಲಾಗಿದ್ದು, ಯುವಕ ಯುವತಿಯ ಚಿನ್ನಾಭರಣ ಅಡವಿಟ್ಟು ಸಾಲ ಪಡೆದಿದ್ದ ಎನ್ನಲಾಗಿದೆ. ಪೂರ್ತಿ ಮಾಹಿತಿಗಾಗಿ ವಿಡಿಯೋ ನೋಡಿ.
10:59 PM (IST) Sep 10
ನಮ್ಮ ರಾಜ್ಯ ಎಷ್ಟೇ ಅಭಿವೃದ್ಧಿ ಆಗಿದೆ ಎಂದು ನಾವು ಹೇಳಿಕೊಂಡರೂ, 100ಕ್ಕೆ 63ರಷ್ಟು ಜನ ಸರ್ಕಾರಿ ಕಚೇರಿ ಕೆಲಸ ಮಾಡಿಸಿಕೊಳ್ಳಲು ಲಂಚ ಕೊಡುತ್ತಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವೇ? ಎಂದು ಸಚಿವ ಎಚ್.ಕೆ. ಪಾಟೀಲ್ ಬೇಸರ ವ್ಯಕ್ತಪಡಿಸಿದರು.
10:28 PM (IST) Sep 10
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬೇಕಾದ ಎಲ್ಲ ಕ್ರಮವನ್ನೂ ಸರ್ಕಾರ ಕೈಗೊಂಡಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
10:24 PM (IST) Sep 10
ಧರ್ಮಸ್ಥಳ ಪ್ರಕರಣದಲ್ಲಿ ಯೂಟ್ಯೂಬರ್ ಚಂದನ್ ಗೌಡ ಬುರುಡೆ ಗ್ಯಾಂಗ್ನಿಂದ ಹಣ ಪಡೆದಿದ್ದಾನೆ ಎಂದು ಸುಮಂತ್ ಹೇಳಿದ್ದನು. ಆದರೆ, ಇದೀಗ ಚಂದನ್ರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ ಎಂದು ಸುಮಂತ್ ಹೇಳಿರುವ ಆಡಿಯೋ ಒಂದು ವೈರಲ್ ಆಗಿದ್ದು, ಇದೀಗ ಧರ್ಮಸ್ಥಳದ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
10:07 PM (IST) Sep 10
ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮುಸಲ್ಮಾನರು ದೂರ ಇರುವುದು ಒಳ್ಳೆಯದು. ಪ್ರಚೋದನೆ ನೀಡುವವರನ್ನೂ ಪೊಲೀಸರಿಗೆ ಹಿಡಿದುಕೊಡುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
09:40 PM (IST) Sep 10
ರಾಜ್ಯದಲ್ಲಿ ಔರಂಗಜೇಬ ಸರ್ಕಾರ ಇದ್ದಂತಿದೆ. ಚಿತ್ರದುರ್ಗ ಜಿಲ್ಲೆಯೇನೂ ಪಾಕಿಸ್ತಾನ ಅಲ್ಲ ಎಂದು ಶರಣ್ ಪಂಪ್ವೆಲ್ಗೆ ಜಿಲ್ಲೆಗೆ ಪ್ರವೇಶ ನಿರ್ಬಂಧ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.
09:32 PM (IST) Sep 10
ಚಿಕ್ಕಮಗಳೂರಿನ ಹಿಂದೂ ಮಹಾಸಭಾ ಗಣಪತಿಯ ಹುಂಡಿ ಎಣಿಕೆಯಲ್ಲಿ ಹಣದ ಜೊತೆಗೆ ಸೌಜನ್ಯಾ ಪ್ರಕರಣದ ನ್ಯಾಯ, ಧರ್ಮಸ್ಥಳದ ರಕ್ಷಣೆ ಕುರಿತ ಭಕ್ತರ ಪತ್ರಗಳು ಪತ್ತೆಯಾಗಿವೆ. ಹಲವು ಪತ್ರಗಳ ಬೇಡಿಕೆ ಇಲ್ಲಿವೆ ನೋಡಿ..
09:15 PM (IST) Sep 10
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಸ್ವಚ್ಛಂದವಾಗಿ ನಡೆಯುತ್ತಿರುವ ದೇಶ ವಿರೋಧಿ ಚಟುವಟಿಕೆಗಳು ಅತ್ಯಂತ ಆತಂಕಕಾರಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
09:09 PM (IST) Sep 10
ಇತ್ತೀಚೆಗೆ ಘಟಿಸಿದ ರಾಹು ಗ್ರಸ್ಥ ಚಂದ್ರಗ್ರಹಣ ಬಹುತೇಕರು ನೋಡಿದ್ದಾರೆ. ಈ ಚಂದ್ರಗ್ರಹಣವನ್ನು ವಿಜ್ಞಾನಿಗಳು ಟೆಲಿಸ್ಕೋಪ್ ಮೂಲಕ ಅಧ್ಯಯನಕ್ಕಾಗಿ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಆದರೆ ಈ ಗ್ರಹಣದ ವೇಳೆ ಆಗಸದಲ್ಲಿ ನಿಗೂಢ ವಸ್ತುವೊಂದು ಪತ್ತೆಯಾಗಿದೆ.
08:58 PM (IST) Sep 10
ಕಳೆದ ಎರಡು ವರ್ಷ ವಾಡಿಗೆಗಿಂತ ಹೆಚ್ಚು ಮಳೆ ಆಗಿದೆ.ರೈತರ ಬೆಳೆ ನಷ್ಟ ವಾಗಿದೆ, ಬಡವರ ಮನೆ ಬಿದ್ದಿವೆ. ಇಷ್ಟೆಲ್ಲಾ ಆದರೂ ಸರ್ಕಾರ ಕಣ್ಣು ಮುಚ್ಚಿಕೊಂಡು ಕೂತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
08:58 PM (IST) Sep 10
ಸಿ.ಪಿ. ರಾಧಾಕೃಷ್ಣನ್ ಅವರು ಭಾರತದ 15 ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಮಾಸಿಕ ಸಂಬಳ, ಐಷಾರಾಮಿ ನಿವಾಸ, ಭದ್ರತೆ ಸೇರಿದಂತೆ ಹಲವು ಸವಲತ್ತುಗಳು ಲಭ್ಯವಾಗಲಿವೆ. ಹಾಗಾದರೆ, ಉಪರಾಷ್ಟ್ರಪತಿಗೆ ಮಾಸಿಕವಾಗಿ ಎಷ್ಟು ಸಂಬಳ ಇರುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
08:33 PM (IST) Sep 10
ಮದ್ದೂರಿನಲ್ಲಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಯಾರು ಕಾರಣಕರ್ತರಾಗಿದ್ದಾರೋ, ಯಾರು ತಪ್ಪಿತಸ್ಥರಿದ್ದಾರೋ ಅವರನ್ನು ಯಾವುದೇ ಕಾರಣಕ್ಕೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ.
08:17 PM (IST) Sep 10
2025ರ ನೈಋತ್ಯ ಮುಂಗಾರು ಹಂಗಾಮಿನಲ್ಲಿ ಕರ್ನಾಟಕದಲ್ಲಿ ಸಾಮಾನ್ಯ ಮಳೆಯಾಗಿದೆ ಎಂದು KSNDMC ವರದಿ ಮಾಡಿದೆ. ಜೂನ್ ನಿಂದ ಸೆಪ್ಟೆಂಬರ್ 10ರವರೆಗೆ ವಾಡಿಕೆಯಂತೆ ಮಳೆಯಾಗಿದೆ. ಆಗಸ್ಟ್ನಲ್ಲಿ ಹೆಚ್ಚು ಸೆಪ್ಟೆಂಬರ್ನಲ್ಲಿ ಕೊರತೆಯಾಗಿದೆ. ಒಟ್ಟಾರೆ ಮಳೆ ಪ್ರಮಾಣವು ಸಾಮಾನ್ಯಕ್ಕಿಂತ ಶೇ.3ರಷ್ಟು ಹೆಚ್ಚಾಗಿದೆ.
08:13 PM (IST) Sep 10
ಆ್ಯಪಲ್ ಐಫೋನ್ ಇರಲಿ ಯಾವುದೇ ಉತ್ಪನ್ನ ಇರಲಿ. ಲಾಂಚ್ ಅಥವಾ ಡಿಸ್ಪ್ಲೇ ಸಮಯ 9.41. ವರ್ಷ ಅದೆಷ್ಟೇ ಉರುಳಿದರೂ ಈ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಸಮಯದ ಹಿಂದಿನ ರಹಸ್ಯ ಬಯಲಾಗಿದೆ.
07:34 PM (IST) Sep 10
ಹಿಂದೂಸ್ತಾನದ ಅನ್ನ ತಿಂದು ಪಾಕಿಸ್ತಾನಕ್ಕೆ ಜೈಕಾರ ಹಾಕ್ತಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕುವುದಾದರೆ ದೇಶ ಬಿಟ್ಟು ತೊಲಗಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಗುಡುಗಿದರು.
07:26 PM (IST) Sep 10
ಬಿಹಾರದಲ್ಲಿ ಕೋಲಾಹಲ ಎಬ್ಬಿಸಿದ ಮತದಾರರ ಪಟ್ಟಿ ಪರಿಷ್ಕರಣೆ (SIR) ಇದೀಗ ದೇಶ್ಯಾದ್ಯಂತ ನಡೆಯಲಿದೆ. ಅಕ್ಟೋಬರ್ ತಿಂಗಳಿನಿಂದ ದೇಶದಲ್ಲೇ ನಕಲಿ ಮತದಾರರು ಪಟ್ಟಿಯಿಂದ ಡಿಲೀಟ್ ಆಗಲಿದೆ.
06:52 PM (IST) Sep 10
ನಟ ದರ್ಶನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ನಟ ಪ್ರಥಮ್ಗೆ ಡ್ರ್ಯಾಗರ್ ತೋರಿಸಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ರೌಡಿಶೀಟರ್ ಬೇಕರಿ ರಘು ಮತ್ತು ಯಶಸ್ವಿನಿಯನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಈ ಬಂಧನ ನಡೆದಿದೆ.
06:47 PM (IST) Sep 10
'ದೈವ' ಎಂದ ಕೂಡಲೇ ಇದು ಪೌರಾಣಿಕ ಚಿತ್ರವಲ್ಲ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿರುವ ಒಂದು ಕಮರ್ಷಿಯಲ್ ಸಿನಿಮಾ. ಈಗಾಗಲೇ ಚಿತ್ರೀಕರಣ ಮುಗಿದಿರುವ ಈ ಚಿತ್ರ ಈಗ ರೀರೆಕಾರ್ಡಿಂಗ್ನಿಂದ ಸಿಂಗಾರಗೊಳ್ಳುತ್ತಿದೆ.
06:17 PM (IST) Sep 10
ಸಂಗೀತ ಮಾಂತ್ರಿಕ ಇಳಯರಾಜ ಅವರು ಕೊಲ್ಲೂರು ಮೂಕಾಂಬಿಕಾ ದೇವಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರಖಚಿತ ಕಿರೀಟ ಮತ್ತು ಆಭರಣಗಳನ್ನು ಸಮರ್ಪಿಸಿದ್ದಾರೆ. ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗವನ್ನೂ ಅರ್ಪಿಸಿ, ದೇವಿಯ ಅನುಗ್ರಹದಿಂದ ತಮ್ಮ ಜೀವನದಲ್ಲಿ ನಡೆದ ಪವಾಡಗಳನ್ನು ಸ್ಮರಿಸಿಕೊಂಡರು.
06:17 PM (IST) Sep 10
ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆಯಲ್ಲಿ ಎಸ್.ಐ.ಟಿ ತಂಡವು ಪ್ರಮುಖ ಸಾಕ್ಷಿದಾರರಾದ ವಿಠಲ್ ಗೌಡ, ಪ್ರದೀಪ್, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ., ಯೂಟ್ಯೂಬರ್ ಅಭಿಷೇಕ್, ಮನಾಫ್ ಅವರನ್ನು ವಿಚಾರಣೆ ನಡೆಸಿದೆ. ಸ್ಥಳ ಮಹಜರು ಮತ್ತು CrPC ಸೆಕ್ಷನ್ 161 ಅಡಿ ಹೇಳಿಕೆಗಳನ್ನು ದಾಖಲಿಸಲಾಗಿದೆ.
05:21 PM (IST) Sep 10
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿನ ಸಿನಿಮಾ ಡಿಸ್ಟ್ರಿಬ್ಯೂಷನ್ ಕುರಿತ ಮಾಹಿತಿಯನ್ನು ಹೊಂಬಾಳೆ ಫಿಲಂಸ್ ನೀಡಿದ್ದು, ಡ್ರೀಮ್ ಸ್ಕ್ರೀನ್ಸ್ ಇಂಟರ್ನ್ಯಾಷನಲ್ ಈ ಎರಡು ದೇಶಗಳಲ್ಲಿ ಸಿನಿಮಾ ವಿತರಣೆ ಮಾಡಲಿದೆ.
05:19 PM (IST) Sep 10
ರಿಷಬ್ ಶೆಟ್ಟಿಯ ಕಾಂತಾರಾ ಚಾಪ್ಟರ್ 1 ಸಿನಿಮಾಗಾಗಿ ದೇಶವೇ ಕಾಯುತ್ತಿದೆ. ಇದರ ನಡುವೆ ಕನ್ನಡ ಸಿನಿಮಾ ಇದೀಗ ಪ್ಯಾನ್ ವರ್ಲ್ಡ್ ಸಿನಿಮಾ ಆಗಿ ಬಿಡುಗಡೆಯಾಗುತ್ತಿರುವ ಮಾಹಿತಿ ಹೊರಬಿದ್ದಿದೆ. ಕಾಂತಾರಾ 1 ಸಿನಿಮಾ 30ಕ್ಕೂ ಹೆಚ್ಚು ದೇಶ 7 ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.
05:09 PM (IST) Sep 10
ದೆಹಲಿಯ ಕರ್ನಾಟಕ ಭವನದಲ್ಲಿ ಸಂಸದ ಈರಣ್ಣ ಕಡಾಡಿ ಅವರು ರೂಮು ಕೇಳಿದರೆ, ಅಲ್ಲಿನ ಸಿಬ್ಬಂದಿ ನೀವ್ಯಾರು ಎಂದು ಕೇಳಿದ್ದಕ್ಕೆ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂಲಸೌಕರ್ಯಗಳ ಕೊರತೆ, ಅಸಮರ್ಪಕ ಆಹಾರ ಮತ್ತು ವಸತಿ ವ್ಯವಸ್ಥೆಗಳ ಬಗ್ಗೆ ಸಿಬ್ಬಂದಿಗಳ ನಿರ್ಲಕ್ಷ್ಯವನ್ನು ಟೀಕಿಸಿದ್ದಾರೆ.
04:25 PM (IST) Sep 10
04:17 PM (IST) Sep 10
ಸೆಪ್ಟೆಂಬರ್ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲಬುರಗಿಗೆ ಭೇಟಿ ನೀಡಲಿದ್ದು, ಸೆ.17 ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯ 'ಮದ್ದೂರು ಚಲೋ' ಕಾರ್ಯಕ್ರಮವನ್ನು ಟೀಕಿಸಿದ್ದಾರೆ
04:09 PM (IST) Sep 10
ಹೊಸ ಐಫೋನ್ 17 ಬಿಡುಗಡೆಯಾಗಿದೆ. ಕಡಿಮೆ ಬೆಲೆಗೆ ಐಫೋನ್ 17 ಖರೀದಿಸಲು ಒಂದು ಉಪಾಯವಿದೆ. ಭಾರತದಿಂದ ವಿಮಾನ ಹತ್ತಿ ದುಬೈಗೆ ತೆರಳಿ ಐಫೋನ್ ಖರೀದಿಸಿ ಭಾರತಕ್ಕೆ ಮರಳಿದರೂ ಹಣ ಉಳಿತಾಯ ಮಾಡಲು ಸಾಧ್ಯವಿದೆ.
04:05 PM (IST) Sep 10
ಕೊಪ್ಪಳದಲ್ಲಿ ಮುಕಂದ ಸುಮಿ ಜೊತೆಗೂಡಿ ₹2,345 ಕೋಟಿ ಹೂಡಿಕೆಯ ಉಕ್ಕು ಘಟಕ ಸ್ಥಾಪಿಸುವುದಾಗಿ ಸುಮಿಟೊಮೊ ಖಚಿತಪಡಿಸಿದೆ. ಯಸ್ಕಾವಾ ಬೆಂಗಳೂರಿನಲ್ಲಿ ಮೋಷನ್ ಕಂಟ್ರೋಲ್ ಘಟಕ ಸ್ಥಾಪಿಸಲಿದೆ. ಹುಬ್ಬಳ್ಳಿ ಎನ್ಜಿಇಎಫ್ ಪುನಶ್ಚೇತನಕ್ಕೆ ಜೆಎಫ್ಇ ಷೋಜಿ ಜೊತೆ ಸರ್ಕಾರ ಮಾತುಕತೆ ನಡೆಸಿದೆ.
03:55 PM (IST) Sep 10
ಅಮೆರಿಕದ ಅಧ್ಯಕ್ಷ ಟ್ರಂಪ್ ಮತ್ತೆ ರಷ್ಯಾ ವಿರುದ್ಧ ತಮ್ಮ ನಿಲುವನ್ನು ಕಠಿಣಗೊಳಿಸಿದ್ದಾರೆ. ಈ ಬಾರಿ ಅವರ ಗುರಿ ರಷ್ಯಾದಿಂದ ತೈಲ ಖರೀದಿಸುವ ಮೂಲಕ ರಷ್ಯಾದ ಆರ್ಥಿಕತೆಯನ್ನು ಬಲಪಡಿಸುವ ದೇಶಗಳ ಮೇಲೆ ನೇರ ದಾಳಿ ನಡೆಸಿದ್ದಾರೆ.
03:11 PM (IST) Sep 10
ಪ್ರಧಾನಿ ಸೇರಿದಂತೆ ಹಲವು ನಾಯಕರ ಸುದ್ದಿಗೋಷ್ಠಿಯಲ್ಲಿ ನಿಂತಿದ್ದ ಆರೋಗ್ಯ ಸಚಿವೆ ಏಕಾಏಕಿ ಕುಸಿದು ಬಿದ್ದ ಘಟನೆ ನಡೆದಿದೆ. ಬಿಪಿ ಸಮಸ್ಯೆಯಿಂದ ಅಸ್ವಸ್ಥಗೊಂಡ ಆರೋಗ್ಯ ಸಚಿವೆ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ಪೆ ದಾಖಲಿಸಲಾಗಿದೆ.
03:00 PM (IST) Sep 10
ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಕನ್ನಡಿಗರು ಸರ್ಕಾರದ ಸೂಚನೆ ಪಾಲಿಸುವಂತೆ ಸಲಹೆ ನೀಡಿದ್ದಾರೆ.
02:53 PM (IST) Sep 10
02:24 PM (IST) Sep 10
02:18 PM (IST) Sep 10
ಭಾರತದ ನೆರೆ ರಾಷ್ಟ್ರಗಳು ಒಂದೊಂದಾಗಿ ಹೊತ್ತಿ ಉರಿಯುತ್ತಿದೆ ಶ್ರೀಲಂಕಾ, ಬಾಂಗ್ಗಾದೇಶ ಇದೀಗ ನೇಪಾಳ. ಸೋಶಿಯಲ್ ಮೀಡಿಯಾ ನಿಷೇಧ ಈ ಮಟ್ಟಕ್ಕೆ ಹಿಂಸಾಚಾರಕ್ಕೆ ಕಾರಣವಾಯಿತಾ?
01:48 PM (IST) Sep 10
ಮದ್ದೂರಿನ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಘಟನೆ ಬಗ್ಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಂಧಿತರು ನಿಜವಾದ ಅಪರಾಧಿಗಳಲ್ಲ, ಬಿಜೆಪಿ ಒತ್ತಡಕ್ಕೆ ಮಣಿದು ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
01:13 PM (IST) Sep 10
ಆಧಾರ್ ಕಾರ್ಡ್ನಲ್ಲಿ ಜನ್ಮ ದಿನಾಂಕವನ್ನು ಬದಲಾಯಿಸಲು, ನೀವು ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ, ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಬೇಕು. ಆಧಾರ್ ಬದಲಾಯಿಸಲು ನೀವು ಎಷ್ಟು ಪಾವತಿಸಬೇಕೆಂದು ನೋಡೋಣ.
12:59 PM (IST) Sep 10
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿವಾದಕ್ಕೆ ಪ್ರತಿಕ್ರಿಯೆಯಾಗಿ, ಪ್ರಮುಖ ಲೇಖಕಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಆಯ್ಕೆಯ ಸಮರ್ಥನೆ, ಬಾನು ಅವರ ಸಾಹಿತ್ಯ ಕೊಡುಗೆ ಮತ್ತು ಸಾಮಾಜಿಕ ಹೋರಾಟದ ಬಗ್ಗೆ ವಿವರಿಸಲಿದ್ದಾರೆ.
12:39 PM (IST) Sep 10
11:41 AM (IST) Sep 10
‘ಸುಂದರ ಸ್ವಪ್ನಗಳು’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಮೇಶ್ ಅರವಿಂದ್ಗೆ ಇಂದು ಜನ್ಮದಿನದ ಸಂಭ್ರಮ. 60ನೇ ವಯಸ್ಸಿಗೆ ಕಾಲಿಟ್ಟಿರೋ ರಮೇಶ್ 140 ಸಿನಿಮಾಗಳಲ್ಲಿ ನಟಿಸಿದ್ದು, 10 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಎಮೋಶನಲ್ ದೃಶ್ಯಗಳಿಗೆ ಜೀವ ತುಂಬುವ ರಮೇಶ್ ಅರವಿಂದ್, ಅದ್ಭುತವಾದ ನಟ
11:41 AM (IST) Sep 10
ಮಸೀದಿಯಿಂದ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಘಟನೆ ಕುರಿತು ಪ್ರಹ್ಲಾದ್ ಜೋಶಿ ಮತ್ತು ಸುಧಾಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ನ ತುಷ್ಟೀಕರಣ ನೀತಿಯೇ ಇದಕ್ಕೆಲ್ಲ ಕಾರಣ ಎಂದು ಆರೋಪಿಸಿದ್ದಾರೆ.