MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • ಗಣಪತಿ ಹುಂಡಿಯಲ್ಲಿ ಸೌಜನ್ಯಾ ಜಪ! ಧರ್ಮಸ್ಥಳವನ್ನು ಕಾಪಾಡಪ್ಪಾ ಎಂದು ಚೀಟಿ ಬರೆದ ಭಕ್ತರು!

ಗಣಪತಿ ಹುಂಡಿಯಲ್ಲಿ ಸೌಜನ್ಯಾ ಜಪ! ಧರ್ಮಸ್ಥಳವನ್ನು ಕಾಪಾಡಪ್ಪಾ ಎಂದು ಚೀಟಿ ಬರೆದ ಭಕ್ತರು!

ಚಿಕ್ಕಮಗಳೂರಿನ ಹಿಂದೂ ಮಹಾಸಭಾ ಗಣಪತಿಯ ಹುಂಡಿ ಎಣಿಕೆಯಲ್ಲಿ ಹಣದ ಜೊತೆಗೆ ಸೌಜನ್ಯಾ ಪ್ರಕರಣದ ನ್ಯಾಯ, ಧರ್ಮಸ್ಥಳದ ರಕ್ಷಣೆ ಕುರಿತ ಭಕ್ತರ ಪತ್ರಗಳು ಪತ್ತೆಯಾಗಿವೆ. ಹಲವು ಪತ್ರಗಳ ಬೇಡಿಕೆ ಇಲ್ಲಿವೆ ನೋಡಿ..

1 Min read
Sathish Kumar KH
Published : Sep 10 2025, 09:32 PM IST
Share this Photo Gallery
  • FB
  • TW
  • Linkdin
  • Whatsapp
16
ಚಿಕ್ಕನಗಳೂರು ಗಣೇಶ ಹುಂಡಿ ಎಣಿಕೆ
Image Credit : Asianet News

ಚಿಕ್ಕನಗಳೂರು ಗಣೇಶ ಹುಂಡಿ ಎಣಿಕೆ

ಚಿಕ್ಕಮಗಳೂರು (ಸೆ.10): ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿಯ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದ್ದು, ಹುಂಡಿಯಲ್ಲಿ ಹಣದ ಜೊತೆಗೆ ತರಹೇವಾರಿ ಬೇಡಿಕೆಗಳ ಪತ್ರಗಳು ಪತ್ತೆಯಾಗಿವೆ. ಕೆಲವು ಪತ್ರಗಳು ರಾಜಕೀಯ ಬೇಡಿಕೆಗಳನ್ನು ಒಳಗೊಂಡಿದ್ದರೆ, ಇನ್ನು ಕೆಲವು ಧರ್ಮಸ್ಥಳದ ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯದ ನಿರೀಕ್ಷೆಯನ್ನು ವ್ಯಕ್ತಪಡಿಸಿವೆ.

26
ಹುಂಡಿ ಎಣಿಕೆಯಲ್ಲಿ ಚೀಟಿ ಪತ್ತೆ
Image Credit : Asianet News

ಹುಂಡಿ ಎಣಿಕೆಯಲ್ಲಿ ಚೀಟಿ ಪತ್ತೆ

ಕಳೆದ ಶನಿವಾರ ಅದ್ದೂರಿಯಾಗಿ ವಿಸರ್ಜನಾ ಮಹೋತ್ಸವ ನಡೆದಿದ್ದ ಹಿಂದೂ ಮಹಾಸಭಾ ಗಣಪತಿ ಹುಂಡಿಯಲ್ಲಿ ಇಂದು ಎಣಿಕೆ ಕಾರ್ಯ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಪತ್ತೆಯಾದ ನಾಲ್ಕು ಪತ್ರಗಳು ಎಲ್ಲರ ಗಮನ ಸೆಳೆದವು.

Related Articles

Related image1
ಸಿಎಂ ಡಿಸಿಎಂ ಬೆನ್ನಿಗಿದ್ದಾರೆ ಎಂಬ ಭಂಡ ಧೈರ್ಯ, ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ, ಪಾಕಿಸ್ತಾನ ಜಿಂದಾಬಾದ್ ಘೋಷಣೆ: ಪ್ರಹ್ಲಾದ್ ಜೋಶಿ ಕಿಡಿ
Related image2
'ತಾಯಿ ಭುವನೇಶ್ವರಿಗೆ ಬುರ್ಖಾ ಹಾಕೋದಕ್ಕೆ ಆಗುತ್ತೇನ್ರೀ?..' ಸಿಂಧನೂರು ಹಿಂದೂ ಗಣಪತಿ ಉತ್ಸವದಲ್ಲಿ ಕಾಂಗ್ರೆಸ್ ವಿರುದ್ಧ ಸಿಟಿ ರವಿ ವಾಗ್ದಾಳಿ
36
ಭಕ್ತರ ಚೀಟಿಗಳಲ್ಲಿ ಏನಿದೆ?
Image Credit : Asianet News

ಭಕ್ತರ ಚೀಟಿಗಳಲ್ಲಿ ಏನಿದೆ?

ಭಕ್ತರು ಗಣಪತಿಗೆ ಬೇಡಿಕೊಂಡ ಪತ್ರಗಳಲ್ಲೇನಿದೆ?

  • * ಮುಂದಿನ ಸಲ ಸಿ.ಟಿ. ರವಿ ಅಣ್ಣ ಸಿಎಂ ಆಗಬೇಕು, ಗಣಪ ಕೃಪೆ ಸಿಗಲಿ
  • * ಅದಿತ್ಯನಾಥ ಯೋಗಿ ಮುಂದಿನ ಪ್ರಧಾನಿಯಾಗಬೇಕು, ಗಣೇಶ ಕಾಪಾಡಪ್ಪ
  • * ಬುರುಡೆ ಗ್ಯಾಂಗ್ ಕಥೆ ಬುರುಡೆಯಾಗಲಿ, ಧರ್ಮ ಸದಾ ಬೆಳಗುತಿರಲಿ, ಸತ್ಯಕ್ಕೆ ಜಯವಾಗಲಿ
  • * ಸೌಜನ್ಯಾಗೆ ನ್ಯಾಯ ಸಿಗಲಿ, ಧರ್ಮಸ್ಥಳ ಟಾರ್ಗೆಟ್ ಆಗದಿರಲಿ,
46
ಒಂದೇ ಹುಂಡಿಯಲ್ಲಿ ನಾಲ್ಕು ಚೀಟಿ
Image Credit : Asianet News

ಒಂದೇ ಹುಂಡಿಯಲ್ಲಿ ನಾಲ್ಕು ಚೀಟಿ

ಒಂದೇ ಹುಂಡಿಯಲ್ಲಿ ಇಂತಹ ವಿಭಿನ್ನ ಮತ್ತು ಸಂಕೀರ್ಣ ವಿಷಯಗಳ ಕುರಿತ ಬೇಡಿಕೆಗಳು ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ. ಇದನ್ನು ಯಾರೋ ಯೋಜನೆ ಮಾಡಿಕೊಂಡು ಚೀಟಿ ಬರೆದು ಹಾಕಿರಬಹುದು ಎಂದೂ ಹೇಳಲಾಗುತ್ತಿದೆ.

56
ಸೌಜನ್ಯಾಗೆ ನ್ಯಾಯ ಸಿಗಲೆಂದು ಮನವಿ
Image Credit : Asianet News

ಸೌಜನ್ಯಾಗೆ ನ್ಯಾಯ ಸಿಗಲೆಂದು ಮನವಿ

ಪ್ರಮುಖವಾಗಿ, ಹಲವು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿರುವ ಸೌಜನ್ಯಾ ಪ್ರಕರಣದ ಬಗ್ಗೆ ಭಕ್ತರು ಗಣಪತಿಯಲ್ಲಿ ನ್ಯಾಯ ಕೇಳಿರುವುದು ಸಾರ್ವಜನಿಕವಾಗಿ ಈ ಪ್ರಕರಣಕ್ಕಿರುವ ಮಹತ್ವವನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ.

66
60 ಸಾವಿರ ರೂ. ಹಣ ಸಂಗ್ರಹ
Image Credit : Asianet News

60 ಸಾವಿರ ರೂ. ಹಣ ಸಂಗ್ರಹ

ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು ಸರಿಸುಮಾರು ₹60,000 ಹಣ ಸಂಗ್ರಹವಾಗಿದೆ ಎಂದು ಹಿಂದೂ ಮಹಾಸಭಾ ಪದಾಧಿಕಾರಿಗಳು ತಿಳಿಸಿದ್ದಾರೆ. ರಾಜಕೀಯ ಹಾಗೂ ಸೂಕ್ಷ್ಮ ವಿಷಯಗಳ ಕುರಿತು ಪತ್ರಗಳು ಪತ್ತೆಯಾಗಿರುವುದು ಇದೀಗ ಸ್ಥಳೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಚಿಕ್ಕಮಗಳೂರು
ಕರ್ನಾಟಕ ಸುದ್ದಿ
ಗಣೇಶ ಚತುರ್ಥಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved