Published : Nov 09, 2025, 07:48 AM ISTUpdated : Nov 09, 2025, 10:32 PM IST

India News Live: ರಾಷ್ಟ್ರೀಯ ಕಾರ್ಟಿಂಗ್‌ - ಬೆಂಗಳೂರಿನ ಇಶಾನ್‌ ಮಾದೇಶ್‌ಗೆ ಗೆಲುವು

ಸಾರಾಂಶ

ನವದೆಹಲಿ (ನ.9): ಬಿಹಾರ 2ನೇ ಹಂತದ ಚುನಾವಣೆಗೆ ಸಿದ್ದವಾಗುತ್ತಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಡುವೆ ಗನ್‌ ಸಮರ ಶುರುವಾಗಿದೆ. 'ಕಾಂಗ್ರೆಸ್ಸಿಗರ ತಲೆಗೆ ನಾಡಬಂದೂಕು (ಕಟ್ಟಾ) ಇಟ್ಟು ಆರ್‌ಜೆಡಿಯು, ಬಿಹಾರದ ಸಿಎಂ ಅಭ್ಯರ್ಥಿ ಹುದ್ದೆ ಪಡೆದಿದೆ' ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬಿಹಾರ ಚುನಾವಣಾ ಕಣದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಕಾಂಗ್ರೆಸ್ ಇದೇ ರೀತಿಯ ಹೇಳಿಕೆ ಮೂಲಕ ತಿರುಗೇಟು ನೀಡಿದೆ. ಪ್ರಧಾನಿ ಆಡಿರುವ ಮಾತು ಅವರ ಹುದ್ದೆಯ ಘನತೆಗೆ ಕುಂದು ಎಂದು ಕಾಂಗ್ರೆಸ್‌ ನಾಯಕಿ ಹಾಗೂ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

10:32 PM (IST) Nov 09

ರಾಷ್ಟ್ರೀಯ ಕಾರ್ಟಿಂಗ್‌ - ಬೆಂಗಳೂರಿನ ಇಶಾನ್‌ ಮಾದೇಶ್‌ಗೆ ಗೆಲುವು

ರಾಷ್ಟ್ರೀಯ ಕಾರ್ಟಿಂಗ್‌: ಬೆಂಗಳೂರಿನ ಇಶಾನ್‌ ಮಾದೇಶ್‌ಗೆ ಗೆಲುವು, ಕೊನೆ 2 ಸುತ್ತು ಯಶಸ್ವಿ ಮುಕ್ತಾಯಗೊಂಡಿದೆ. ಕಿರಿಯರ ವಿಭಾಗದಲ್ಲಿ ಕಿಯಾನ್‌ ಶಾ, ಹಿರಿಯರ ವಿಭಾಗದಲ್ಲಿ ಕೃಷ್‌ ಗುಪ್ತಾಗೆ 2ನೇ ಸ್ಥಾನ ಪಡೆದುಕೊಂಡಿದ್ದಾರೆ.

Read Full Story

10:19 PM (IST) Nov 09

ಐರನ್ ಮ್ಯಾನ್ ರೇಸ್ ಪೂರ್ಣಗೊಳಿಸಿದ ತೇಜಸ್ವಿ ಸೂರ್ಯ-ಅಣ್ಣಾಮಲೈ, ಕನ್ನಡದಲ್ಲಿ ಮೋದಿ ಅಭಿನಂದನೆ

ಐರನ್ ಮ್ಯಾನ್ ರೇಸ್ ಪೂರ್ಣಗೊಳಿಸಿದ ತೇಜಸ್ವಿ ಸೂರ್ಯ-ಅಣ್ಣಾಮಲೈ, ಕನ್ನಡದಲ್ಲಿ ಮೋದಿ ಅಭಿನಂದನೆ, ಅತೀ ಕಠಿಣ ಹಾಗೂ ಸವಾಲಿನ ಈಜು, ಓಟ ಹಾಗೂ ಸೈಕ್ಲಿಂಗ್ ಮೂಲಕ ಟ್ರಯಥ್ಲಾನ್ ಪೂರ್ಣಗೊಳಿಸಿದ್ದಾರೆ.

 

Read Full Story

09:08 PM (IST) Nov 09

ನಾಲ್ಕು ಬಾರಿ ದೃಶ್ಯ ಸಿನಿಮಾ ನೋಡಿ ಪತ್ನಿ ಹತ್ಯೆಗೈದ ಗಂಡ, ಒಂದು ಕಾರಣದಿಂದ ತಗ್ಲಾಕೊಂಡ

ನಾಲ್ಕು ಬಾರಿ ದೃಶ್ಯ ಸಿನಿಮಾ ನೋಡಿ ಪತ್ನಿ ಹತ್ಯೆಗೈದ ಗಂಡ, ಒಂದು ಕಾರಣದಿಂದ ತಗ್ಲಾಕೊಂಡ, ದೃಶ್ಯ ಸಿನಿಮಾ ಶೈಲಿಯಲ್ಲಿ ಎಸ್ಕೇಪ್ ಆಗಲು ಎಲ್ಲಾ ಪ್ರಯತ್ನ ಮಾಡಿದ್ದಾನೆ. ಈತನ ಪ್ಲಾನ್ ಕೆಲ ದಿನಗಳಿಂದ ಯಶಸ್ವಿ ಕೂಡ ಆಗಿದೆ. ಆದರೆ ಒಂದು ಕಾರಣದಿಂದ ಅರೆಸ್ಟ್ ಆದ.

Read Full Story

07:17 PM (IST) Nov 09

ತಿಂಗಳ ಹಿಂದಿನ ಜಗಳಕ್ಕೆ ದ್ವೇಷ - ತಂದೆಯ ಪಿಸ್ತೂಲ್ ತಂದು ಕ್ಲಾಸ್‌ಮೇಟ್‌ಗೆ ಗುಂಡಿಕ್ಕಿದ್ದ ಪಿಯುಸಿ ವಿದ್ಯಾರ್ಥಿ

Gurugram student shooting: ಗುರುಗ್ರಾಮದಲ್ಲಿ, 17 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಪರವಾನಗಿ ಪಡೆದ ಪಿಸ್ತೂಲಿನಿಂದ ತನ್ನ ಸಹಪಾಠಿಗೆ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿ ಬದುಕುಳಿದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Read Full Story

06:29 PM (IST) Nov 09

ಮೊಬೈಲ್​ ಬಳಕೆದಾರರಿಗೆ ಮತ್ತೊಮ್ಮೆ ಶಾಕಿಂಗ್​ ನ್ಯೂಸ್​! ಡಿ.1ರಿಂದ ರೀಚಾರ್ಜ್ ದರ ಏರಿಕೆ? ಎಷ್ಟು ಹೆಚ್ಚಳ?

ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾದಂತಹ ಪ್ರಮುಖ ಟೆಲಿಕಾಂ ಕಂಪನಿಗಳು ಡಿಸೆಂಬರ್ 1 ರಿಂದ ತಮ್ಮ ರೀಚಾರ್ಜ್ ದರಗಳನ್ನು ಸುಮಾರು 10% ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಸಂಭಾವ್ಯ ದರ ಏರಿಕೆಯು ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳ ಮೇಲೆ ಪರಿಣಾಮ ಬೀರಲಿದೆ. 

Read Full Story

06:14 PM (IST) Nov 09

ನಾಥದ್ವಾರ, ಗುರುವಾಯೂರ್‌ಗೆ 30 ಕೋಟಿ, ತಿರುಪತಿ ಸೇರಿ ಹಲವು ಮಂದಿರಕ್ಕೆ ಅಂಬಾನಿ ಕೋಟ್ಯಂತರ ರೂ ದೇಣಿಗೆ

ನಾಥದ್ವಾರ, ಗುರುವಾಯೂರ್‌ಗೆ 30 ಕೋಟಿ, ತಿರುಪತಿ ಸೇರಿ ಹಲವು ಮಂದಿರಕ್ಕೆ ಅಂಬಾನಿ ಕೋಟ್ಯಂತರ ರೂ ದೇಣಿಗೆ ನೀಡಿದ್ದಾರೆ. ದೇವರ ದರ್ಶನ ಮಾಡಿ ದೇಣಿಗೆ ನೀಡಿರುವ ಮುಕೇಶ್ ಅಂಬಾನಿ ದೇಗುಲದ ಸೇವಾ ಸದನ, ಅನ್ನ ಛತ್ರ ಅಡುಗೆ ಮನೆ ಸೇರಿದಂತೆ ಹಲವು ನಿರ್ಮಾಣ ಕಾರ್ಯಗಳನ್ನು ಘೋಷಿಸಿದ್ದಾರೆ.

Read Full Story

05:32 PM (IST) Nov 09

ಭಾರತದ ಪ್ರಗತಿಯ ಏಟಿಗೆ ಚೀನಾ ವಿಲವಿಲ - 11 ಲಕ್ಷ ಕೋಟಿಗೆ ಏರಿದ ಎಲೆಕ್ಟ್ರಾನಿಕ್ಸ್​ ಉತ್ಪಾದನೆ! ಡಿಟೇಲ್ಸ್​ ಇಲ್ಲಿದೆ

ಕಳೆದ ದಶಕದಲ್ಲಿ ಭಾರತದ ಆರ್ಥಿಕತೆಯು 11ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿದಿದೆ. 'ಮೇಕ್ ಇನ್ ಇಂಡಿಯಾ'ದಂತಹ ಯೋಜನೆಗಳಿಂದಾಗಿ, ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು 11.3 ಲಕ್ಷ ಕೋಟಿಗೆ ಏರಿದ್ದು, ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿದೆ.  

Read Full Story

05:01 PM (IST) Nov 09

ಅಭಿಷೇಕ್ ಶರ್ಮಾಗೆ ಖಡಕ್ ವಾರ್ನಿಂಗ್ ಕೊಟ್ಟ ಇರ್ಫಾನ್ ಪಠಾಣ್! ಏನಾಯ್ತು?

ಅಗ್ರೆಸಿವ್ ಆಟಕ್ಕೂ ಒಂದು ಮಿತಿ ಇರಬೇಕು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಯುವ ಆಟಗಾರ ಅಭಿಷೇಕ್ ಶರ್ಮಾಗೆ ಎಚ್ಚರಿಕೆ ನೀಡಿದ್ದಾರೆ. ಆಕ್ರಮಣಕಾರಿ ಆಟಕ್ಕೆ ಮಿತಿ ಇರಬೇಕು, ಪ್ರತಿ ಬಾಲ್‌ಗೂ ಮುಂದೆ ಬಂದು ಆಡಬೇಡ ಎಂದು ಹೇಳಿದ್ದಾರೆ.

Read Full Story

04:40 PM (IST) Nov 09

ಟೀಂ ಇಂಡಿಯಾಗೆ ಇವನೇ ಲಕ್ಕಿ ಕ್ಯಾಪ್ಟನ್; ಇವನಿದ್ರೆ ವಿಶ್ವಕಪ್ ಗೆಲ್ಲೋದು ಪಕ್ಕಾ!

ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ನಾಯಕನಾಗಿ ಅಜೇಯ ಪ್ರದರ್ಶನ ನೀಡುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಸತತ ಗೆಲುವುಗಳೊಂದಿಗೆ ಮುನ್ನುಗ್ಗುತ್ತಿದೆ. 78.12ರ ಗೆಲುವಿನ ಶೇಕಡಾವಾರು ಪ್ರಮಾಣದೊಂದಿಗೆ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾದ ಲಕ್ಕಿ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.

Read Full Story

03:43 PM (IST) Nov 09

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ಟೀಂ ಇಂಡಿಯಾ ಆಯ್ಕೆ ಮಾಡಿದ ಹರ್ಷಾ ಬೋಗ್ಲೆ; ಜೈಸ್ವಾಲ್‌ಗಿಲ್ಲ ಸ್ಥಾನ!

ಪ್ರಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಷಾ ಬೋಗ್ಲೆ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ಸಂಭಾವ್ಯ 15ರ ಬಳಗವನ್ನು ಆಯ್ಕೆ ಮಾಡಿದ್ದಾರೆ. ಅವರ ತಂಡದಲ್ಲಿ ಸ್ಪೋಟಕ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ನಿತೀಶ್ ಕುಮಾರ್ ರೆಡ್ಡಿಗೆ ಸ್ಥಾನ ಸಿಕ್ಕಿಲ್ಲ.

Read Full Story

03:27 PM (IST) Nov 09

ಮುಸ್ಲಿಮರು ಆರೆಸ್ಸೆಸ್‌ ಸೇರಬಹುದೇ? ಪ್ರಶ್ನೆಗೆ ಮೋಹನ್‌ ಭಾಗವತ್‌ ನೀಡಿದ ಉತ್ತರವೇನು?

ಬ್ರಾಹ್ಮಣರು, ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ತಮ್ಮ 'ಪ್ರತ್ಯೇಕತೆಯನ್ನು' ಬಿಟ್ಟು 'ಭಾರತ ಮಾತೆಯ ಪುತ್ರರು' ಎಂದು ಬಂದರೆ ಆರ್‌ಎಸ್‌ಎಸ್ ಶಾಖೆಗಳಿಗೆ ಸೇರಲು ಸ್ವಾಗತ ಎಂದು ಭಾಗವತ್ ಹೇಳಿದರು.

 

Read Full Story

02:44 PM (IST) Nov 09

ಲವ್‌ ಜಿಹಾದ್‌ಗೆ ಒಳಗಾಗದಂತೆ ನಮ್ಮ ಹೆಣ್ಣು ಮಕ್ಕಳನ್ನು ಬೆಳೆಸೋದು ನಮ್ಮ ಕೈಲಿದೆ - ಮೋಹನ್‌ ಭಾಗವತ್‌

RSS Chief Mohan Bhagwat on Love Jihad ಬೆಂಗಳೂರಿನಲ್ಲಿ ಮಾತನಾಡಿದ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್ ಭಾಗವತ್, ಲವ್ ಜಿಹಾದ್ ತಡೆಯಲು ಹಿಂದೂ ಹೆಣ್ಣುಮಕ್ಕಳಿಗೆ ಮನೆಯಲ್ಲೇ ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದ್ದಾರೆ.

Read Full Story

01:52 PM (IST) Nov 09

ನಮ್ಮ ಪೂರ್ವಜರೆಲ್ಲರೂ ಒಂದೇ, ಭಾರತದಲ್ಲಿ ಅಹಿಂದು ಅನ್ನೋದೇ ಇಲ್ಲ ಎಂದ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಭಾರತದಲ್ಲಿ "ಅಹಿಂದು" (ಹಿಂದೂ ಅಲ್ಲದವರು) ಇಲ್ಲ, ಎಲ್ಲರೂ ಒಂದೇ ಪೂರ್ವಜರ ವಂಶಸ್ಥರು ಮತ್ತು ದೇಶದ ಮೂಲ ಸಂಸ್ಕೃತಿ ಹಿಂದೂ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

Read Full Story

01:46 PM (IST) Nov 09

ಸಂಜು ಸ್ಯಾಮ್ಸನ್ ಬೇಕಿದ್ರೆ, ಜಡೇಜಾ ಜತೆಗೆ ಈ ಬಿಗ್ ಹಿಟ್ಟರ್ ಕೊಡಿ ಎಂದು ಬೇಡಿಕೆಯಿಟ್ಟ ರಾಜಸ್ಥಾನ ರಾಯಲ್ಸ್!

ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟ್ರೇಡ್‌ ವಿಂಡೋ ಕೊನೆಯಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗಲೇ ಸಂಜು ಸ್ಯಾಮ್ಸನ್ ಟ್ರೇಡಿಂಗ್ ವಿಚಾರವಾಗಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಸಂಜು ಬೇಕಿದ್ರೆ ನಮಗೆ ಜಡೇಜಾ ಜತೆಗೆ ಈ ಸ್ಪೋಟಕ ಬ್ಯಾಟರ್ ಬೇಕು ಎಂದು ರಾಜಸ್ಥಾನ ಡಿಮ್ಯಾಂಡ್ ಇಟ್ಟಿದೆ.

Read Full Story

01:09 PM (IST) Nov 09

ಬರ್ತ್‌ಡೇ ಪಾರ್ಟಿಯಲ್ಲಿ ಗಾಂಜಾ ಸೇವನೆ - ಪಾಕಶಾಸ್ತ್ರದಲ್ಲಿ ಪದವಿ ಮಾಡ್ತಿದ್ದ ಆರು ವಿದ್ಯಾರ್ಥಿಗಳ ಬಂಧನ

ಹೈದರಾಬಾದ್‌ನ ಕಲಿನರಿ ಅಕಾಡೆಮಿ ಆಫ್ ಇಂಡಿಯಾದ ಆರು ವಿದ್ಯಾರ್ಥಿಗಳನ್ನು ಬರ್ತ್‌ಡೇ ಪಾರ್ಟಿಯಲ್ಲಿ ಗಾಂಜಾ ಸೇವಿಸಿದ್ದಕ್ಕಾಗಿ ಬಂಧಿಸಲಾಗಿದೆ. ತನಿಖೆ ವೇಳೆ 11 ವಿದ್ಯಾರ್ಥಿಗಳು ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿದ್ದರು.ಆದರೆ ನಿಷೇಧಿತ ಟಿಹೆಚ್‌ಸಿ ಸೇವಿಸಿದ್ದ  ಆರು ಮಂದಿಯನ್ನು ಬಂಧಿಸಲಾಗಿದೆ.

Read Full Story

12:55 PM (IST) Nov 09

ವಿಶ್ವಕಪ್ ಗೆದ್ದ ರಿಚಾ ಘೋಷ್‌ ಈಗ ಪಶ್ಚಿಮ ಬಂಗಾಳ DSP! ಪ್ರತಿ ರನ್‌ಗೆ ₹1 ಲಕ್ಷ ಪಡೆದ ಸ್ಟಾರ್ ವಿಕೆಟ್ ಕೀಪರ್!

ಮಹಿಳಾ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರ್ತಿ, ಬಂಗಾಳದ ರಿಚಾ ಘೋಷ್‌ಗೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಭರ್ಜರಿ ಗೌರವ ಸಲ್ಲಿಸಿವೆ. ಸರ್ಕಾರವು ಬಂಗಭೂಷಣ ಪ್ರಶಸ್ತಿ ಮತ್ತು ಡಿಎಸ್‌ಪಿ ಹುದ್ದೆ ನೀಡಿ ಗೌರವಿಸಲಾಗಿದೆ.

Read Full Story

12:26 PM (IST) Nov 09

ಜಲಪಾತ ನೋಡಲು ಹೋಗಿ 19, 20ರ ಹರೆಯದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು

NIT Silchar students drown: ಜಲಪಾತ ನೋಡಲು ಹೋಗಿದ್ದ ಎನ್‌ಐಟಿ ಸಿಲ್ಚಾರ್‌ನ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ.ಒಬ್ಬರ ಶವ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಶೋಧ ನಡೆದಿದೆ.

Read Full Story

11:41 AM (IST) Nov 09

ಈ ಆಟಗಾರ ಚೆನ್ನೈ ಸೇರೋದು ಫಿಕ್ಸ್! ವಿಡಿಯೋ ಮೂಲಕ ಗುಟ್ಟು ಬಿಟ್ಟುಕೊಟ್ಟ ಸಿಎಸ್‌ಕೆ ಫ್ರಾಂಚೈಸಿ

ಐಪಿಎಲ್ ಆಟಗಾರರ ವರ್ಗಾವಣೆ ಚರ್ಚೆಗಳ ನಡುವೆ, ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರುವ ವದಂತಿಗಳು ಹೆಚ್ಚಾಗಿವೆ. ಸಿಎಸ್‌ಕೆ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪರೋಕ್ಷ ಸುಳಿವು ನೀಡುವ ವಿಡಿಯೋ ಪೋಸ್ಟ್ ಮಾಡಿದೆ.

Read Full Story

11:34 AM (IST) Nov 09

ಅಮೆರಿಕಾದಲ್ಲಿ ಭಾರತಕ್ಕೆ ಬೇಕಾಗಿದ್ದ ಇಬ್ಬರು ಮೋಸ್ಟ್ ವಾಂಟೆಂಡ್ ಗ್ಯಾಂಗ್‌ಸ್ಟಾರ್‌ಗಳ ಬಂಧನ

Most wanted Gangsters arrested: ಭಾರತಕ್ಕೆ ಬೇಕಾಗಿದ್ದ ಹರ್ಯಾಣ ಮೂಲದ ಇಬ್ಬರು ಮೋಸ್ಟ್‌ ವಾಂಟೆಡ್ ಗ್ಯಾಂಗ್‌ಸ್ಟಾರ್‌ಗಳಾದ ವೆಂಕಟೇಶ್ ಗಾರ್ಗ್‌ ಮತ್ತು ಭಾನು ರಾಣಾನನ್ನು ಅಮೆರಿಕಾದಲ್ಲಿ ಬಂಧಿಸಲಾಗಿದೆ. ಇವರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಜೊತೆ ಸಂಪರ್ಕ ಹೊಂದಿದ್ದರು.

Read Full Story

10:55 AM (IST) Nov 09

ದೆಹಲಿಯದ್ದು ಗಾಳಿಯಲ್ಲ ವಿಷಾನಿಲ; ಶೇ. 50ರಷ್ಟು ನೌಕರರಿಗೆ ವರ್ಕ್‌ ಫ್ರಮ್‌ ಹೋಮ್‌!

Delhi Air Quality Crisis AQI Crosses 400; ದೆಹಲಿಯ ವಾಯುಗುಣಮಟ್ಟ 'ಅತ್ಯಂತ ಅಪಾಯಕಾರಿ' ಮಟ್ಟ ತಲುಪಿದ್ದು, ಸರ್ಕಾರವು 50% ನೌಕರರಿಗೆ ವರ್ಕ್ ಫ್ರಂ ಹೋಮ್ ಮತ್ತು ಕಚೇರಿ ಸಮಯ ಬದಲಾವಣೆಯಂತಹ ಕ್ರಮಗಳನ್ನು ಜಾರಿಗೊಳಿಸಿದೆ.

Read Full Story

10:22 AM (IST) Nov 09

WPL 2026 ಹರಾಜಿಗೂ ಮುನ್ನವೇ ಎದುರಾಳಿಗಳಿಗೆ ಬೆವರಿಳಿಸಿದ ಆರ್‌ಸಿಬಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡವು WPL 2026 ಗಾಗಿ ಸ್ಮೃತಿ ಮಂಧಾನ, ರಿಚಾ ಘೋಷ್ ಸೇರಿದಂತೆ ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸುವ ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

Read Full Story

10:05 AM (IST) Nov 09

IPL 2026 - ಐಪಿಎಲ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್! ಬಿಗ್ ಹಿಟ್ಟರ್ ಮೈದಾನಕ್ಕೆ

ಐಪಿಎಲ್ 2026ರ ಬಗ್ಗೆ ಚರ್ಚೆ ಶುರುವಾಗಿದೆ. ಈ ನಡುವೆ, ಲೆಜೆಂಡರಿ ಆಟಗಾರ ಎಂಎಸ್ ಧೋನಿ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಧೋನಿ ನಿವೃತ್ತಿ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಐಪಿಎಲ್ 2026ರಲ್ಲಿ ಆಡುವುದರ ಬಗ್ಗೆ ಸಿಎಸ್‌ಕೆ ಸಿಇಒ ಮಹತ್ವದ ಹೇಳಿಕೆ ನೀಡಿದ್ದಾರೆ.

Read Full Story

10:00 AM (IST) Nov 09

ಗುರುವಾಯೂರು ದೇವಸ್ಥಾನದ ಒಳಗಡೆ ರೀಲ್ಸ್‌, ಕಲಾವಿದೆ ಜಸ್ನಾ ಸಲೀಂ ವಿರುದ್ಧ ಮತ್ತೊಮ್ಮೆ ಕೇಸ್‌

ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ನಿಷೇಧಿತ ವಲಯವಾದ ಪಶ್ಚಿಮ ನಾಡಾದಲ್ಲಿ ವೀಡಿಯೊ ಚಿತ್ರೀಕರಿಸಿದ ಆರೋಪದ ಮೇಲೆ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಜಸ್ನಾ ಸಲೀಂ ವಿರುದ್ಧ ಎರಡನೇ ಬಾರಿಗೆ ಪ್ರಕರಣ ದಾಖಲಾಗಿದೆ.

Read Full Story

09:29 AM (IST) Nov 09

ಧ್ರುವ್ ಜುರೆಲ್ ಶತಕ - ರೋಚಕ ಘಟ್ಟದತ್ತ ಭಾರತ ಎ vs ದಕ್ಷಿಣ ಆಫ್ರಿಕಾ ಎ ಪಂದ್ಯ!

ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೇ ಚತುರ್ದಿನ ಟೆಸ್ಟ್‌ನಲ್ಲಿ, ಧ್ರುವ್ ಜುರೆಲ್ ಅವರ ಅಜೇಯ ಶತಕ ಮತ್ತು ರಿಷಭ್ ಪಂತ್, ಹರ್ಷ್ ದುಬೆ ಅವರ ಅರ್ಧಶತಕಗಳ ನೆರವಿನಿಂದ ಭಾರತ ಎ ತಂಡವು 417 ರನ್‌ಗಳ ಬೃಹತ್ ಗುರಿ ನೀಡಿದೆ. 3ನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ಎ ವಿಕೆಟ್ ನಷ್ಟವಿಲ್ಲದೆ 25 ರನ್ ಗಳಿಸಿದೆ

Read Full Story

09:08 AM (IST) Nov 09

ಆಳ ಸಮುದ್ರ ಮೀನುಗಾರಿಕೆಗೆ ಕೇಂದ್ರದ ಹೊಸ ನಿಯಮ; Tuna ಮೀನಿಗೆ ಬಲೆ ಬೀಸಿದ ಮೋದಿ ಸರ್ಕಾರ!

ಭಾರತದ ವಿಶೇಷ ಆರ್ಥಿಕ ವಲಯದಲ್ಲಿ (EEZ) ಆಳ ಸಮುದ್ರ ಮೀನುಗಾರಿಕೆಗಾಗಿ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳು ವಿದೇಶಿ ಹಡಗುಗಳನ್ನು ನಿಷೇಧಿಸಿ, ಸ್ಥಳೀಯ ಮೀನುಗಾರರು ಮತ್ತು ಸಹಕಾರಿ ಸಂಘಗಳಿಗೆ ಟ್ಯೂನ ಮೀನಿನಂತಹ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಆದ್ಯತೆ ನೀಡುತ್ತವೆ.

Read Full Story

08:11 AM (IST) Nov 09

ಚಂದ್ರಯಾನ-2ರಿಂದ ಚಂದ್ರನ ದಕ್ಷಿಣ ಧ್ರುವದ ಮಹತ್ವದ ಮಾಹಿತಿ ಸಂಗ್ರಹಿಸಿದ ಇಸ್ರೋ

Chandrayaan-2 Orbiter Collects Crucial Data on Moon's South Pole ಚಂದ್ರಯಾನ-2 ಆರ್ಬಿಟರ್‌ನಿಂದ ಚಂದ್ರನ ಭೌತಿಕ ಮತ್ತು ವಿದ್ಯುತ್ ಗುಣಲಕ್ಷಣಗಳ ಬಗ್ಗೆ ಮಹತ್ವದ ಮಾಹಿತಿ ಲಭಿಸಿದೆ. ಇಸ್ರೋ ವಿಜ್ಞಾನಿಗಳು ಚಂದ್ರನ ಧ್ರುವ ಪ್ರದೇಶಗಳ ಉನ್ನತ-ರೆಸಲ್ಯೂಶನ್ ನಕ್ಷೆಗಳನ್ನು ತಯಾರಿಸಿದ್ದಾರೆ.

Read Full Story

07:49 AM (IST) Nov 09

ವಂದೇ ಭಾರತ್‌ನಲ್ಲಿ ಮಕ್ಕಳಿಂದ ಆರೆಸ್ಸೆಸ್ ಗೀತೆ: ಕೇರಳ ಸಿಎಂ ಪಿಣರಾಯಿ ಕಿಡಿ

ಎರ್ನಾಕುಲಂ-ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಮಕ್ಕಳಿಂದ ಆರ್‌ಎಸ್‌ಎಸ್‌ ಗೀತೆ ಹಾಡಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯು ಸರ್ಕಾರಿ ಕಾರ್ಯಕ್ರಮದ ದುರ್ಬಳಕೆ ಮತ್ತು ಕೋಮು ಸಿದ್ಧಾಂತದ ಪ್ರಚಾರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆಕ್ರೋಶ.

 

Read Full Story

07:49 AM (IST) Nov 09

Parliament Winter Session 2025: ಸಂಸತ್ ಚಳಿಗಾಲದ ಅಧಿವೇಶನದ ದಿನಾಂಕ ಘೋಷಣೆ, ವಿವಾದದ ಸುಳಿವು?

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್ 1 ರಿಂದ 19 ರವರೆಗೆ ನಡೆಯಲಿದೆ ಎಂದು ಘೋಷಿಸಿದ್ದಾರೆ. ಮೂರು ವಾರಗಳ ಕಾಲ ನಡೆಯಲಿರುವ ಈ ಅಧಿವೇಶನವು ಕೇವಲ 15 ದಿನಗಳ ಕಲಾಪ ಎಂದು ಕಾಂಗ್ರೆಸ್ ಆಕ್ಷೇಪ

Read Full Story

More Trending News