ನವದೆಹಲಿ (ಮಾ.16): ಭಾರೀ ಜಿದ್ದಾಜಿದ್ದಿಗೆ ಸಾಕ್ಷಿಯಾಗುವ ನಿರೀಕ್ಷೆ ಇರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಭಾನುವಾರ ಘೋಷಿಸಿದೆ. ಏ.9ರಂದು ಮೊದಲ ಹಂತದ ಮತದಾನ ನಡೆಯಲಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:13 PM (IST) Mar 16
ಟಿ20 ವಿಶ್ವಕಪ್ ಗೆಲುವಿನಿಂದ ನಿವೃತ್ತಿಗೆ ಸಜ್ಜಾದ ಟೀಂ ಇಂಡಿಯಾದ ಐವರು ಕ್ರಿಕೆಟರ್ಸ್, ಅದ್ಭುತ ಗೆಲುವಿನ ಸಂಭ್ರಮ ಇನ್ನೂ ಮುಗಿದಿಲ್ಲ, ಅಷ್ಟರಲ್ಲೇ ಕೆಲ ಪ್ರಮುಖ ಕ್ರಿಕೆಟಿಗರು ವಿದಾಯಕ್ಕೆ ಸಜ್ಜಾಗಿದ್ದಾರಾ?
11:03 PM (IST) Mar 16
ಗ್ಲಾಮರಸ್ ಡ್ರೆಸ್ಗಳಿಂದ ಟ್ರೋಲ್ ಆಗುತ್ತಿರುವ ನಟಿ ಖುಷಿ ಮುಖರ್ಜಿ, ತಮ್ಮ ಫೋಟೋ ಮತ್ತು ವಿಡಿಯೋಗಳು ಪೋರ್ನ್ ವೆಬ್ಸೈಟ್ಗಳಲ್ಲಿ ದುರ್ಬಳಕೆಯಾಗುತ್ತಿವೆ ಎಂದು ಕಣ್ಣೀರು ಹಾಕಿದ್ದಾರೆ. ಗ್ಲಾಮರ್ ಲೋಕದಲ್ಲಿ ಇದೆಲ್ಲಾ ಮಾಮೂಲು ಎಂದಿದ್ದ ನಟಿ, ಈಗ ಸೌಂದರ್ಯ ಪ್ರದರ್ಶನವೇ ತಪ್ಪೇ ಎಂದು ಪ್ರಶ್ನಿಸುತ್ತಿದ್ದಾರೆ
10:26 PM (IST) Mar 16
10:14 PM (IST) Mar 16
ಬಿಗ್ ಬಾಸ್ ವಿನ್ನರ್ಗೆ ವಿಧಾನಸಭೆ ಚುನಾವಣೆ ಟಿಕೆಟ್, ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ, ನಿರ್ದೇಶಕ, ನಟ ಹಾಗೂ ಬಿಗ್ ಬಾಸ್ ವಿನ್ನರ್ ಚನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಈಗಾಗಲೇ ಭರ್ಜರಿ ಗೆಲುವಿಗೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
10:12 PM (IST) Mar 16
ವಿಮಾನ ದುರಂತದಲ್ಲಿ ಅಜಿತ್ ಪವಾರ್ ನಿಧನರಾದ ಹಿನ್ನೆಲೆಯಲ್ಲಿ ತೆರವಾದ ಬಾರಾಮತಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯಲ್ಲಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ವಿರುದ್ಧ ಎನ್ಸಿಪಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲಎಂದು ಶರದ್ ಪವಾರ್ ಬಣದ ಸುಪ್ರಿಯಾ ಸುಳೆ ಸ್ಪಷ್ಟಪಡಿಸಿದ್ದಾರೆ.
09:38 PM (IST) Mar 16
09:29 PM (IST) Mar 16
nor ’wester tornado: ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಸುಂಟರಗಾಳಿಗೆ ಇಬ್ಬರು ಬಲಿಯಾಗಿದ್ದು, 29ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ನೈಸರ್ಗಿಕ ವಿಕೋಪದಿಂದಾಗಿ 70ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ಮುಖ್ಯಮಂತ್ರಿಗಳು ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.
08:41 PM (IST) Mar 16
ಇರಾನ್ನಿಂದ ಹರ್ಮುಜ್ ಜಲಸಂಧಿ ಬಂದ್ ಆಗಿದ್ದು, ಜಾಗತಿಕ ತೈಲ ಬೆಲೆಗಳು ಗಗನಕ್ಕೇರಿವೆ. ಇದನ್ನು ತೆರೆಯಲು ಸಹಾಯ ಮಾಡುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್, ನ್ಯಾಟೋ ಮತ್ತು ಚೀನಾವನ್ನು ಒತ್ತಾಯಿಸುತ್ತಿದ್ದು, ಬೆದರಿಕೆ ತಂತ್ರವನ್ನೂ ಬಳಸುತ್ತಿದ್ದಾರೆ.
08:25 PM (IST) Mar 16
ಕೂದಲಿನಲ್ಲಿ ಈಗಲೂ ಇದೆ ಕೆಂಪು ಬಣ್ಣ, ಮದ್ವೆ ಹಿಂದಿನ ಸಂಭ್ರಮ ಬಹಿರಂಗಪಡಿಸಿದ ರಶ್ಮಿಕಾ ಮಂದಣ್ಣ, ನಟಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸಂಭ್ರಮದ ಕ್ಷಣದಲ್ಲಿ ಕೆಲ ಮಾಹಿತಿಯನ್ನೂ ನೀಡಿದ್ದಾರೆ.
07:53 PM (IST) Mar 16
07:33 PM (IST) Mar 16
ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ವಿಕೆಟ್ ಪತನ, ಕೆಪಿಸಿಸಿ ಕಾರ್ಯದರ್ಶಿ ಬಿಜೆಪಿ ಸೇರ್ಪಡೆ, ಅಧಿಕಾರಿ ತಳಮಳ ನಡುವೆ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ದಿಢೀರ್ ಬೆಳವಣಿಗೆ ಕಾರಣವೇನು?
06:47 PM (IST) Mar 16
ನಟ ವಿಕ್ರಮ್ ಪ್ರಭು ತಮ್ಮ ಸಿನಿಮಾ ಪಯಣದಲ್ಲಿ ಎದುರಿಸಿದ ಒಂಟಿತನ ಮತ್ತು ನೋವಿನ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಸ್ಟಾರ್ ನಟನ ಮಗನಾಗಿದ್ದರೂ ಅವರು ಎದುರಿಸಿದ ಸವಾಲುಗಳೇನು? ಇಲ್ಲಿದೆ ವಿವರ.
06:41 PM (IST) Mar 16
ಅಪಾರ್ಟ್ಮೆಂಟ್ ಲಿಫ್ಟ್ನಲ್ಲಿ ವಿವಾಹಿತ ಮಹಿಳೆಯ ರೊಮ್ಯಾನ್ಸ್, ವಿಡಿಯೋ ಹರಿಬಿಟ್ಟವನ ವಿರುದ್ಧ ಕೇಸ್, ಅದೇ ಹೌಸಿಂಗ್ ಸೊಸೈಟಿ ವ್ಯಕ್ತಿ ಜೊತೆ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಕೋಲಾಹಲ ಸೃಷ್ಟಿಸಿದೆ.
06:29 PM (IST) Mar 16
06:02 PM (IST) Mar 16
ಟ್ರೆಂಡ್ ಟ್ರ್ಯಾಕಿಂಗ್ ವೆಬ್ಸೈಟ್ sacnilk.com ವರದಿ ಪ್ರಕಾರ, 'ಧುರಂಧರ್ 2' ಚಿತ್ರದ ಮೊದಲ ದಿನ, ಅಂದರೆ ಮಾರ್ಚ್ 19ರಂದು, ಈವರೆಗೆ 6.1 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ.
05:39 PM (IST) Mar 16
ಸೋಮವಾರ ನಡೆದ ವಿಶ್ವದ ಅತಿದೊಡ್ಡ ಪ್ರಶಸ್ತಿ ಪ್ರದಾನ ಸಮಾರಂಭವಾದ ಆಸ್ಕರ್ 2026ಕ್ಕೆ ಪ್ರಿಯಾಂಕಾ ಚೋಪ್ರಾ ಹಾಜರಾಗಿದ್ದರು. ಈ ಕಾರ್ಯಕ್ರಮದ ರೆಡ್ ಕಾರ್ಪೆಟ್ನಲ್ಲಿ ಅವರ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದರಲ್ಲೂ ಪ್ರಿಯಾಂಕಾ ಕುತ್ತಿಗೆಯಲ್ಲಿ ಧರಿಸಿದ್ದ ನೆಕ್ಲೇಸ್ ಎಲ್ಲರ ಕಣ್ಣು ಕುಕ್ಕಿದೆ.
05:35 PM (IST) Mar 16
ಹರೀಶ್ ರಾಣಾಗೆ ಮಾರ್ಚ್ 11ರಂದು ಸುಪ್ರೀಂಕೋರ್ಟ್ ದಯಾಮರಣ ನೀಡುವುದಕ್ಕೆ ಅನುಮತಿ ನೀಡಿದ ನಂತರ ನೋಡುಗರ ಕಣ್ಣನ್ನು ತೇವಗೊಳಿಸುವ ವೀಡಿಯೋವೊಂದು ವೈರಲ್ ಆಗ್ತಿದೆ. 22 ಸೆಕೆಂಡ್ಗಳ ವೀಡಿಯೋದಲ್ಲಿ ಹರೀಶ್ ರಾಣಾ ಅವರ ತಾಯಿ ಅವರ ಪಕ್ಕದಲೇ ಕುಳಿತು ಮಗನೊಂದಿಗೆ ಕೊನೆಯ ಕ್ಷಣಗಳನ್ನು ಕಳೆಯುತ್ತಿದ್ದಾರೆ.
05:20 PM (IST) Mar 16
'ಉಸ್ತಾದ್ ಭಗತ್ ಸಿಂಗ್' ತೆಲುಗು ಚಿತ್ರರಂಗದ ಮಟ್ಟಿಗೆ 2026ರ ಬಹುನಿರೀಕ್ಷಿತ ಸಿನಿಮಾ. ಪವನ್ ಕಲ್ಯಾಣ್ ಮುಖ್ಯಭೂಮಿಕೆಯಲ್ಲಿ ನಟಿಸಿರುವುದು ಈ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
05:06 PM (IST) Mar 16
ವಿಧಾನಸಭೆ ಚುನಾವಣೆಗೆ 47 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಕೇರಳಂ ಬಿಜೆಪಿ, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ಪ್ರಮುಖ ನಾಯಕಿ ಶೋಭಾ ಸುರೇಂದ್ರನ್ ಸೇರಿದಂತೆ ಹಲವರಿಗೆ ಬಿಜೆಪಿ ಟಿಕೆಟ್ ನೀಡಿದೆ
04:54 PM (IST) Mar 16
ತಮಿಳು ಸಿನಿಮಾವೊಂದರ ಶೂಟಿಂಗ್ ವೇಳೆ ನಿರ್ದೇಶಕ ಕೆಟ್ಟದಾಗಿ ನಡೆದುಕೊಂಡಿದ್ದರಿಂದ ತಾನು ಆ ಚಿತ್ರದಿಂದ ಹೊರಬಂದೆ. ಇದಕ್ಕಾಗಿ ನನ್ನ ಮೇಲೆ ಕೇಸ್ ಹಾಕಲಾಯ್ತು ಎಂದು ನಟಿ ಲಾವಣ್ಯ ತ್ರಿಪಾಠಿ ಬಹಿರಂಗಪಡಿಸಿದ್ದಾರೆ.
04:48 PM (IST) Mar 16
04:25 PM (IST) Mar 16
ಅವನಿಂದ ಅವಳಾದ ಅನನ್ಯಾ ಬಂಗಾರ್ಗೆ ಯಶಸ್ವಿ ಲಿಂಗ ದೃಢೀಕರಣ ಸರ್ಜರಿ, ಏನಿದು ವ್ಯಜಿನೋಪ್ಲಾಸ್ಟಿ? ತಮ್ಮ ಯಶಸ್ವಿ ಸರ್ಜರಿ ಕುರಿತು ಅನಯ ಬಂಗಾರ್ ಹೇಳಿಕೊಂಡಿದ್ದಾರೆ. ಏನಿದು ಜನನಾಂಗವನ್ನು ಸ್ತ್ರೀಲಿಂಗಕ್ಕೆ ಬದಲಾವಣೆ ಮಾಡುವ ಈ ಸರ್ಜರಿ?
04:07 PM (IST) Mar 16
ಎಕ್ಸ್ಪ್ರೆಸ್ ರೈಲೊಂದರ ಶೌಚಾಲಯವು ಸುಮಾರು ಒಂದೂವರೆ ಗಂಟೆಗಳ ಕಾಲ ಲಾಕ್ ಆಗಿತ್ತು. ಅನುಮಾನಗೊಂಡ ಪ್ರಯಾಣಿಕರು ಬಾಗಿಲು ತೆರೆಸಿದಾಗ, ಒಳಗಿನಿಂದ ಯುವಕ ಮತ್ತು ಯುವತಿಯೊಬ್ಬಳು ಹೊರಬಂದಿದ್ದಾರೆ. ಈ ಘಟನೆಯನ್ನು ವಿಡಿಯೋ ಮಾಡುತ್ತಿದ್ದ ಪ್ರಯಾಣಿಕರು ಮತ್ತು ಜೋಡಿಯ ನಡುವೆ ತೀವ್ರ ವಾಗ್ವಾದ ನಡೆದಿದೆ.
03:53 PM (IST) Mar 16
ಹಾರ್ಡ್ ರಾಕ್ ಇಂಟರ್ನ್ಯಾಷನಲ್, JSM ಕಾರ್ಪೊರೇಷನ್ ಜೊತೆಗಿನ ಲೈಸೆನ್ಸ್ ಒಪ್ಪಂದವನ್ನು ರದ್ದುಗೊಳಿಸಿದೆ. ಇದರಿಂದಾಗಿ ಬೆಂಗಳೂರಿನ ಮೂರು ಕೆಫೆಗಳು ಸೇರಿದಂತೆ ಭಾರತದಾದ್ಯಂತ ಎಲ್ಲಾ ಹಾರ್ಡ್ ರಾಕ್ ಕೆಫೆಗಳು ಮತ್ತು ರಾಕ್ ಶಾಪ್ಗಳು ಮುಚ್ಚಲಿವೆ.
03:37 PM (IST) Mar 16
ಯುಎಐನಲ್ಲಿ ಯುದ್ಧ ಕುರಿತು ಸುಳ್ಳು ಸುದ್ದಿ ಹರಡಿದ 17 ಭಾರತೀಯರು ಸೇರಿ 35 ಮಂದಿ ಅರೆಸ್ಟ್, ಎಲ್ಲರೂ ವಿದೇಶಿಗರಾಗಿದ್ದಾರೆ. ಎಐ, ಹಳೇ ವಿಡಿಯೋಗಳನ್ನು ಬಳಸಿ ದೇಶದ ಭದ್ರತೆಗೆ ಧಕ್ಕೆ ಆರೋಪಿಗಳು ತರಲು ಯತ್ನಿಸಿದ್ದಾರೆ.
03:30 PM (IST) Mar 16
03:15 PM (IST) Mar 16
ಪತಿಗೆ ಡಿವೋರ್ಸ್ ಬದಲು ಆತನ ಪ್ರೇಯಿಸಿಗೆ ಬಾಡಿಗೆ ನೀಡಲು ಮುಂದಾದ ಪತ್ನಿ, ತಿಂಗಳಿಗೆ 85000 ರೂ, ಇದಕ್ಕೆ ಗಂಡನ ಪ್ರೇಯಸಿ ಒಪ್ಪಿಕೊಂಡಿದ್ದಾಳೆ. ಹಣ ಎಷ್ಟುಬೇಕಾದರೂ ಕೊಡ್ತಿನಿ ಎಂದಿದ್ದಾಳೆ
03:12 PM (IST) Mar 16
ಮೊರಾದಾಬಾದ್ನಲ್ಲಿ ನವವಿವಾಹಿತೆಯೊಬ್ಬಳು ಪತಿ ಹಾಗೂ ಕುಟುಂಬಸ್ಥರಿಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಬೆರೆಸಿ, ಅವರು ಪ್ರಜ್ಞೆ ತಪ್ಪಿದ ನಂತರ ಲಕ್ಷಾಂತರ ಮೌಲ್ಯದ ನಗದು, ಆಭರಣಗಳೊಂದಿಗೆ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.
03:04 PM (IST) Mar 16
03:01 PM (IST) Mar 16
ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ನಟ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ಮತ್ತು ಬಿಜೆಪಿ ನಡುವೆ ಮೈತ್ರಿ ಮಾತುಕತೆ ನಡೆದಿದೆ. ಈ ಮೈತ್ರಿಕೂಟ ಗೆದ್ದರೆ ವಿಜಯ್ಗೆ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಯ ಆಫರ್ ನೀಡಲಾಗಿದೆಯಂತೆ.
02:29 PM (IST) Mar 16
ರಂಜಾನ್ ಹಬ್ಬಕ್ಕೆ ಬಟ್ಟೆ ಕೊಡಿಸದ ಗಂಡನ ಮೇಲೆ ಸಿಟ್ಟಾದ ಮಹಿಳೆಯೊಬ್ಬಳು, ಹೈದರಾಬಾದ್ನಲ್ಲಿ ತನ್ನ 14 ತಿಂಗಳ ಹೆಣ್ಣು ಮಗುವನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಘಟನೆಯ ನಂತರ, ಮಹಿಳೆ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ.
02:04 PM (IST) Mar 16
01:20 PM (IST) Mar 16
ಬೆಂಗಳೂರು: 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇದೇ ಮಾರ್ಚ್ 28ರಿಂದ ಆರಂಭವಾಗಲಿದೆ. ಈ ಟೂರ್ನಿ ಆರಂಭಕ್ಕೂ ಮೊದಲು ಅತಿಹೆಚ್ಚು ಐಪಿಎಲ್ ಪಂದ್ಯಗಳನ್ನಾಡಿಯೂ ಟ್ರೋಫಿ ಗೆಲ್ಲದ ಆರು ದಿಗ್ಗಜ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.
12:15 PM (IST) Mar 16
ಮದುವೆ ರದ್ದುಗೊಂಡಿದ್ದಕ್ಕೆ ಕೋಪಗೊಂಡ 24 ವರ್ಷದ ಯುವಕ, ತನ್ನ ಎಚ್ಐವಿ ಸೋಂಕಿತ ರಕ್ತವನ್ನು 24 ವರ್ಷದ ಯುವತಿಗೆ ಸಿರಿಂಜ್ ಮೂಲಕ ಚುಚ್ಚಿದ್ದಾನೆ. ಬಾಲ್ಯದಿಂದಲೇ ಎಚ್ಐವಿ ಸೋಂಕಿತನಾಗಿದ್ದ ಈತನ ವಿಷಯ ತಿಳಿದು ಯುವತಿ ಮನೆಯವರು ಮದುವೆ ನಿರಾಕರಿಸಿದ್ದರು.
12:11 PM (IST) Mar 16
11:43 AM (IST) Mar 16
ಬೆಂಗಳೂರು: ಕಳೆದ ಕೆಲ ತಿಂಗಳಿನಿಂದ ಬೇಡದ ವಿಚಾರಕ್ಕೆ ಹೆಚ್ಚು ಸುದ್ದಿಯಾಗಿದ್ದ ಆರ್ಸಿಬಿ ವೇಗಿ ಯಶ್ ದಯಾಳ್ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಷ್ಟಕ್ಕೂ ಯಶ್ ದಯಾಳ್ ಕೈಹಿಡಿದ ಹುಡುಗಿ ಯಾರು? ಯಾವಾಗ ಮದುವೆಯಾಗಿದ್ದು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
11:26 AM (IST) Mar 16
11:15 AM (IST) Mar 16
ಅಸ್ಸಾಂ ಚುನಾವಣೆ: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಆಡಳಿತಾರೂಢ ಬಿಜೆಪಿಯು ಹಿಮಾಂತ ಬಿಸ್ವ ಶರ್ಮಾ ಅವರ ವರ್ಚಸ್ಸು ಮತ್ತು ಕಲ್ಯಾಣ ಯೋಜನೆಗಳನ್ನು ನೆಚ್ಚಿಕೊಂಡಿದ್ದರೆ, ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಮತ್ತು ಅಲ್ಪಸಂಖ್ಯಾತರ ಅಸಮಾಧಾನವನ್ನು ಬಳಸಿಕೊಳ್ಳಲು ಯತ್ನಿಸುತ್ತಿದೆ
11:02 AM (IST) Mar 16
Kerala political parties SWOT: ಕೇರಳದ ತ್ರಿಕೋನ ಚುನಾವಣಾ ಹೋರಾಟದಲ್ಲಿ ಬಿಜೆಪಿ, ಯುಡಿಎಫ್ ಮತ್ತು ಎಲ್ಡಿಎಫ್ ಪಕ್ಷಗಳ ಬಲ, ದೌರ್ಬಲ್ಯ, ಅವಕಾಶಗಳು ಮತ್ತು ಸವಾಲುಗಳನ್ನು ಈ ಲೇಖನ ವಿಶ್ಲೇಷಿಸುತ್ತದೆ.
10:49 AM (IST) Mar 16
ಮಧ್ಯಪ್ರಾಚ್ಯ ಮಹಾಯುದ್ಧದಲ್ಲಿ ಇರಾನ್ ತನ್ನ ಅತ್ಯಾಧುನಿಕ 'ಸೆಜ್ಜಿಲ್-2' ಕ್ಷಿಪಣಿಯನ್ನು ಇಸ್ರೇಲ್ ಮತ್ತು ಅಮೆರಿಕದ ನೆಲೆಗಳ ವಿರುದ್ಧ ಪ್ರಯೋಗಿಸಿದೆ. 'ಡ್ಯಾನ್ಸಿಂಗ್ ಮಿಸೈಲ್' ಎಂದೇ ಖ್ಯಾತವಾದ ಇದು, 'ಐರನ್ ಡೋಮ್' ರಕ್ಷಣಾ ವ್ಯವಸ್ಥೆಯನ್ನು ಭೇದಿಸುವ ಸಾಮರ್ಥ್ಯ ಹೊಂದಿದೆ.