Published : Nov 11, 2025, 07:49 AM ISTUpdated : Nov 11, 2025, 10:44 PM IST

India News Live: ದೆಹಲಿ ಸ್ಫೋಟದ ಶಂಕಿತ ಆರೋಪಿ ಶಾಹೀನ್ ಸಹೋದರ ಅರೆಸ್ಟ್, ನಾಳೆ ಲಾಲ್ ಕ್ವಿಲಾ ಮೆಟ್ರೋ ಬಂದ್

ಸಾರಾಂಶ

ನವದೆಹಲಿ (ನ.11): ದೆಹಲಿಯಲ್ಲಿ ನಡೆದ ಕಾರು ಸ್ಫೋಟದಲ್ಲಿ ಇಲ್ಲಿಯವರೆಗೂ 9 ಮಂದಿ ಬಲಿಯಾಗಿದ್ದಾರೆ. ಇದು ಆಕಸ್ಮಿಕ ಘಟನೆಯೋ ಅಥವಾ ಭಯೋತ್ಪಾದಕರ ಆತ್ಮಾಹುತಿ ದಾಳಿಯೋ? ಎನ್ನುವ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಐತಿಹಾಸಿಕ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿಯಲ್ಲಿಯೇ ಈ ಘಟನೆ ನಡೆದಿದೆ. ದೇಹಗಳು ಸಂಪೂರ್ಣ ಛಿದ್ರವಾಗಿದ್ದವು. 20 ಜನರಿಗೆ ಗಂಭೀರವಾಗಿ ಗಾಯವಾಗಿದ್ದರೆ, 9 ವಾಹನಗಳು ಸುಟ್ಟು ಭಸ್ಮವಾಗಿದೆ. ಇದರ ಬೆನ್ನಲ್ಲಿಯೇ ದೇಶಾದ್ಯಂತ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು, 3 ಟೆರರ್‌ ಡಾಕ್ಟರ್‌ಗಳು ಸೇರಿ 11 ಉಗ್ರರ ಬಂಧನವಾಗಿದೆ. 3 ಟನ್‌ ಸ್ಫೋಟಕ ವಶ ಬೆನ್ನಲ್ಲಿಯೇ ಈ ಘಟನೆ ನಡೆದಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

10:44 PM (IST) Nov 11

ದೆಹಲಿ ಸ್ಫೋಟದ ಶಂಕಿತ ಆರೋಪಿ ಶಾಹೀನ್ ಸಹೋದರ ಅರೆಸ್ಟ್, ನಾಳೆ ಲಾಲ್ ಕ್ವಿಲಾ ಮೆಟ್ರೋ ಬಂದ್

ದೆಹಲಿ ಸ್ಫೋಟದ ಶಂಕಿತ ಆರೋಪಿ ಶಾಹೀನ್ ಸಹೋದರ ಅರೆಸ್ಟ್,  ಸತತ ಐದು ಗಂಟೆ ವಿಚಾರಣೆ ನಡೆಸಿ ಪರ್ವೇಜ್‌ನ ಬಂಧಿಸಲಾಗಿದೆ. ದೆಹಲಿ ಸ್ಫೋಟದ ಹಿಂದೆ ಉಗ್ರರ ಕೈವಾಡದ ಹಲವು ಸಾಕ್ಷ್ಯಗಳು ತನಿಖಾ ತಂಡದ ಕೈಸೇರಿದೆ.

 

Read Full Story

09:07 PM (IST) Nov 11

ಬಾಂಬ್ ಸ್ಫೋಟಕ್ಕೆ ಭಾರತ ಕಾರಣ ಎಂದ ಪಾಕಿಸ್ತಾನ ಪ್ರಧಾನಿ, ಹೊಣೆ ಹೊತ್ತ ಟಿಟಿಪಿ ಉಗ್ರ ಸಂಘಟನೆ

ಬಾಂಬ್ ಸ್ಫೋಟಕ್ಕೆ ಭಾರತ ಕಾರಣ ಎಂದ ಪಾಕಿಸ್ತಾನ ಪ್ರಧಾನಿ, ಹೊಣೆ ಹೊತ್ತ ಟಿಟಿಪಿ ಉಗ್ರ ಸಂಘಟನೆ, 12 ಮಂದಿ ಸಾವಿಗೆ ಕಾರಣವಾಗಿರುವ ಬಾಂಬ ಸ್ಫೋಟದ ಕುರಿತು ಆರೋಪಗಳು ನಡೆಯುತ್ತಿದ್ದು, ಶಹೆಬಾಜ್ ಷರೀಪ್, ಭಾರತವೇ ಹೊಣೆ ಎಂದಿದ್ದಾರೆ.

Read Full Story

08:12 PM (IST) Nov 11

Bihar Exit Polls ಬಿಹಾರದಲ್ಲಿ ಮತ್ತೆ ಬಿಜೆಪಿ-ಜೆಡಿಯು ಸರ್ಕಾರ, ಮಹಾಘಟಬಂದನ್, ಪಿಕೆ ತಿರಸ್ಕಾರ

Bihar Exit Polls ಬಿಹಾರದಲ್ಲಿ ಮತ್ತೆ ಬಿಜೆಪಿ-ಜೆಡಿಯು ಸರ್ಕಾರ, ಮಹಾಘಟಬಂದನ್, ಪಿಕೆ ತಿರಸ್ಕಾರ , ಪ್ರಮುಖ ಎಜೆನ್ಸಿಗಳ ಸಮೀಕ್ಷೆ ಪ್ರಕಟಗೊಂಡಿದೆ. ಈ ಸಮೀಕ್ಷೆಗಳು ಬಿಜೆಪಿ-ಜೆಡಿಯು, ಮಹಾಘಟನಬಂದನ್ ಹಾಗೂ ಜನ ಸೂರಾಜ್‌ಗೆ ನೀಡಿದ ಸ್ಥಾನವೆಷ್ಟು?

 

Read Full Story

07:13 PM (IST) Nov 11

Red Fort Blast - 'ಪರೀಕ್ಷೆ ಇದೆ, ಮುಗಿಸಿ ಬರುವೆ' ಎಂದಿದ್ದ ಶಂಕಿತ ಡಾ.ಉಮರ್​! ಪತ್ನಿಗೆ ಕೊಟ್ಟಿದ್ದನಾ ಸೂಚನೆ? ಆಕೆ ಹೇಳಿದ್ದೇನು?

ದೆಹಲಿಯ ಕೆಂಪು ಕೋಟೆ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ 13 ಮಂದಿ ಸಾವನ್ನಪ್ಪಿದ್ದು, ಪ್ರಕರಣದ ಶಂಕಿತ ಆತ್ಮಾಹುತಿ ಬಾಂಬರ್ ಡಾ. ಉಮರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ.  ಸ್ಫೋಟದ ಬಗ್ಗೆ ತನ್ನ ಪತ್ನಿಗೆ ಮುನ್ಸೂಚನೆ ನೀಡಿದ್ದನೇ ಎಂಬ ಅನುಮಾನ ತನಿಖೆ ವೇಳೆ ವ್ಯಕ್ತವಾಗಿದೆ.

Read Full Story

07:00 PM (IST) Nov 11

Bihar Exit Polls ಬಿಹಾರ ಚುನಾವಣೆ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಗೆ ಗೆಲುವು

Bihar Exit Polls ಬಿಹಾರ ಚುನಾವಣೆ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಗೆ ಗೆಲುವು , ಬಹುತೇಕ ಎಜೆನ್ಸಿಗಳ ಎಕ್ಸಿಟ್ ಪೋಲ್ ಫಲಿತಾಂಶ ಬಹಿರಂಗವಾಗಿದ್ದು, ಎಲ್ಲಾ ಮತಗಟ್ಟೆ ಸಮೀಕ್ಷೆ ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದಿದೆ.

Read Full Story

06:33 PM (IST) Nov 11

Bihar Exit Poll ಬಿಹಾರ ಮತಗಟ್ಟೆ ಸಮೀಕ್ಷೆ ಬಹಿರಂಗ, 131 ಸ್ಥಾನದೊಂದಿಗೆ ಎನ್‌ಡಿಎಗೆ ಬಹುಮತ

Bihar Exit Poll ಬಿಹಾರ ಮತಗಟ್ಟೆ ಸಮೀಕ್ಷೆ ಬಹಿರಂಗ, 131 ಸ್ಥಾನದೊಂದಿಗೆ ಎನ್‌ಡಿಎಗೆ ಬಹುಮತ, ಬಿಹಾರದ ಎರಡು ಹಂತದ ವಿಧಾನಸಭೆ ಚುನಾವಣೆ ಅಂತ್ಯಗೊಂಡಿದೆ. ಇದರ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆಗಳು ಬಹಿರಂಗಗೊಂಡಿದೆ.

Read Full Story

06:05 PM (IST) Nov 11

ಶ್ರೇಯಸ್ ಅಯ್ಯರ್ ಆಕ್ಸಿಜನ್ ಲೆವೆಲ್ 50%ಗೆ ಕುಸಿದಿತ್ತು! ಮತ್ತೊಂದು ಸರಣಿಯಿಂದಲೂ ಔಟ್?

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರು. ಆ ಸಮಯದಲ್ಲಿ ಅವರ ಆಮ್ಲಜನಕದ ಮಟ್ಟ 50%ಕ್ಕೆ ಇಳಿದಿತ್ತು. ದಕ್ಷಿಣ ಆಫ್ರಿಕಾ ಏಕದಿನ ಸರಣಿಯಿಂದ ಅಯ್ಯರ್ ಹೊರಗುಳಿಯುವ ಸಾಧ್ಯತೆ ಇದೆ.

Read Full Story

05:17 PM (IST) Nov 11

ರಣಜಿ ಇತಿಹಾಸದಲ್ಲಿ ಹೊಸ ಶಕೆ - ದೆಹಲಿಯನ್ನು ಮೊದಲ ಬಾರಿಗೆ ಸೋಲಿಸಿದ ಜಮ್ಮು ಮತ್ತು ಕಾಶ್ಮೀರ!

ರಣಜಿ ಟ್ರೋಫಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ತಂಡವು ದೆಹಲಿಯನ್ನು ಮಣಿಸಿ ಐತಿಹಾಸಿಕ ಜಯ ದಾಖಲಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಕಮ್ರಾನ್ ಇಕ್ಬಾಲ್ ಅವರ ಅಜೇಯ ಶತಕದ ನೆರವಿನಿಂದ ಜಮ್ಮು ಮತ್ತು ಕಾಶ್ಮೀರ ತಂಡವು 179 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ತಲುಪಿತು.  

Read Full Story

05:08 PM (IST) Nov 11

ಶಾಲಾ ಮಕ್ಕಳಿಗೆ ಹೈಬ್ರಿಡ್ ಮಾಡೆಲ್ ಘೋಷಿಸಿದ ಸರ್ಕಾರ, 3 ದಿನ ಕ್ಲಾಸ್ ಇನ್ನುಳಿದ ದಿನ ಆನ್‌ಲೈನ್

ಶಾಲಾ ಮಕ್ಕಳಿಗೆ ಹೈಬ್ರಿಡ್ ಮಾಡೆಲ್ ಘೋಷಿಸಿದ ಸರ್ಕಾರ, 3 ದಿನ ಕ್ಲಾಸ್ ಇನ್ನುಳಿದ ದಿನ ಆನ್‌ಲೈನ್ ಕ್ಲಾಸ್ ನಡೆಸಲು ಸೂಚಿಸಲಾಗಿದೆ. ದಿಢೀರ್ ಸರ್ಕಾರ ಶಾಲಾ ಮಕ್ಕಳಿಗೆ ಆಫ್ ಲೈನ್ ಕ್ಲಾಸ್ ಘೋಷಿಸಿದ್ದೇಕೆ?

Read Full Story

05:05 PM (IST) Nov 11

ಭಾರತದಲ್ಲಿ ದತ್ತು ಪಡೆದ ಮಗಳಿಗೆ ಹಿಂಸೆ - ಅಮೆರಿಕನ್ ಪೋಷಕರಿಂದ ರಕ್ಷಿಸುವಂತೆ ಸಿಎಂಗೆ ಮನವಿ

Odisha girl tortured in USA: ಅಮೆರಿಕನ್ ದಂಪತಿಯಿಂದ 7 ವರ್ಷಗಳ ಹಿಂದೆ ದತ್ತು ಪಡೆಯಲ್ಪಟ್ಟ ಒಡಿಶಾದ ಯುವತಿಯೊಬ್ಬಳು, ತನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾಳೆ. ತನ್ನನ್ನು ರಕ್ಷಿಸಿ ಭಾರತಕ್ಕೆ ವಾಪಸ್ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾಳೆ.

Read Full Story

04:27 PM (IST) Nov 11

ದೆಹಲಿ ಸ್ಫೋಟದ ಕುರಿತು ಆಗಸ್ಟ್‌ನಲ್ಲೇ ಭವಿಷ್ಯ ನುಡಿದಿದ್ದ ಜ್ಯೋತಿಷಿ, ಆಪರೇಶನ್ ಸಿಂದೂರ್2 ಸುಳಿವು

ದೆಹಲಿ ಸ್ಫೋಟದ ಕುರಿತು ಆಗಸ್ಟ್‌ನಲ್ಲೇ ಭವಿಷ್ಯ ನುಡಿದಿದ್ದ ಜ್ಯೋತಿಷಿ, ಆಪರೇಶನ್ ಸಿಂದೂರ್2 ಸುಳಿವು ನೀಡಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಕೆಲ ತಿಂಗಳ ಹಿಂದೆ ಭವಿಷ್ಯ ನುಡಿದಿದ್ದರು.

 

Read Full Story

04:21 PM (IST) Nov 11

2026ರ ಐಸಿಸಿ ಟಿ20 ವಿಶ್ವಕಪ್ ತಂಡದಿಂದ ಇಬ್ಬರು ಆಟಗಾರರು ಔಟ್?

2026ರ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತೀಯ ತಂಡದ ಆಯ್ಕೆ ಬಗ್ಗೆ ಚರ್ಚೆ ಜೋರಾಗಿದೆ. ನಿತೀಶ್ ಕುಮಾರ್ ರೆಡ್ಡಿ ತಂಡದಿಂದ ಹೊರಗುಳಿಯುವುದು ಖಚಿತ ಎನ್ನುತ್ತಿದ್ದಾರೆ ತಜ್ಞರು, ಆದರೆ ಹರ್ಷಿತ್ ರಾಣಾಗೆ ತಂಡದಲ್ಲಿ ಸ್ಥಾನ ಸಿಗಬಹುದು ಎಂದು ಅಂದಾಜಿಸಲಾಗಿದೆ. ಆ ವಿವರಗಳು ಏನು ಗೊತ್ತಾ?

Read Full Story

03:32 PM (IST) Nov 11

ಪಾಕ್ ಕ್ರಿಕೆಟಿಗನ ಮನೆ ಮೇಲೆ ಯದ್ವಾತದ್ವಾ ಗುಂಡಿನ ದಾಳಿ! ಬಚಾವಾದ ಮಾರಕ ವೇಗಿ! ವಿಡಿಯೋ ವೈರಲ್

ಪಾಕಿಸ್ತಾನದ ವೇಗದ ಬೌಲರ್ ನಶೀಂ ಶಾ ಅವರ ಖೈಬರ್ ಫಖ್ತುನ್ಕ್ವಾ ಸಮೀಪದ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಮತ್ತು ಪೊಲೀಸರು ಐವರು ಶಂಕಿತರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
Read Full Story

03:15 PM (IST) Nov 11

ಇಸ್ಲಾಮಾಬಾದ್‌ ಕೋರ್ಟ್‌ ಬಳಿ ಆತ್ಮಾಹುತಿ ದಾಳಿ, 12 ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ

Pakistan blast: ಪಾಕಿಸ್ತಾನ ರಾಜಧಾನಿಯ ಹೃದಯಭಾಗದಲ್ಲಿ ಸಂಭವಿಸಿದ ಸ್ಫೋಟಕ್ಕೆ ಇಸ್ಲಾಮಾಬಾದ್ ನ್ಯಾಯಾಲಯ ಸಂಕೀರ್ಣದಲ್ಲಿ ನಿಲ್ಲಿಸಿದ್ದ ವಾಹನದೊಳಗೆ ಅಳವಡಿಸಲಾದ ಗ್ಯಾಸ್ ಸಿಲಿಂಡರ್ ಕಾರಣ ಎಂದು ಶಂಕಿಸಲಾಗಿದೆ.

 

Read Full Story

02:30 PM (IST) Nov 11

ಧನುಷ್ ಜೊತೆ ಚೊಚ್ಚಲ ಸಿನಿಮಾದಲ್ಲಿ ನಟಿಸಿದ್ದ ನಟ ಅಭಿನಯ್ ನಿಧನ

Thulluvadho Ilamai actor Abhinay death: ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ತಮಿಳಿನ ನಟ ಅಭಿನಯ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ ಕೇವಲ 44 ವರ್ಷ ವಯಸ್ಸಾಗಿತ್ತು. ಒಂಟಿಯಾಗಿ ವಾಸಿಸುತ್ತಿದ್ದ ಅಭಿನಯ್ ಸೋಮವಾರ ಮುಂಜಾನೆ ನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

Read Full Story

01:35 PM (IST) Nov 11

ನಿಥಾರಿಯಲ್ಲಿ ಮಕ್ಕಳ ಸರಣಿ ಹತ್ಯೆಗೆ ಸಿಗದ ನ್ಯಾಯ - ಕೊನೆಯ ಕೇಸ್‌ನಿಂದಲೂ ಆರೋಪಿಯ ಖುಲಾಸೆ ಮಾಡಿದ ಸುಪ್ರೀಂ ಕೋರ್ಟ್‌

Nithari Serial Killings Surender Koli Acquitted ದೇಶವನ್ನೆ ಬೆಚ್ಚಿ ಬೀಳಿಸಿದ್ದ 2005-2006ರ ನಿಥಾರಿ ಸರಣಿ ಹತ್ಯೆ ಪ್ರಕರಣದ ಆರೋಪಿ ಸುರೀಂದರ್‌ ಕೋಲಿಯನ್ನು ಸುಪ್ರೀಂ ಕೋರ್ಟ್ ಕೊನೆಯ ಪ್ರಕರಣದಲ್ಲೂ ದೋಷಮುಕ್ತಗೊಳಿಸಿದೆ. 

Read Full Story

01:28 PM (IST) Nov 11

ಫಿಟ್ ಆಗಿರುವ ಶಮಿಗೆ ಭಾರತ ತಂಡದಲ್ಲಿ ಯಾಕೆ ಚಾನ್ಸ್ ಸಿಕ್ತಿಲ್ಲ! ಕೊನೆಗೂ ಬಯಲಾಯ್ತು ರಿಯಲ್ ಕಾರಣ!

ನವದೆಹಲಿ: ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ಶಮಿ ಸಂಪೂರ್ಣ ಫಿಟ್ ಆಗಿದ್ದರೂ, ಭಾರತ ತಂಡದಿಂದ ಅವರನ್ನು ಹೊರಗಿಟ್ಟಿರುವುದೇಕೆ ಎನ್ನುವ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.

Read Full Story

01:08 PM (IST) Nov 11

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್‌ ಆಗಲು ಶೌಚಾಲಯದ ಹೊರಗೆ ರೈಲಿನ ಬೋಗಿಯೊಳಗೆ ಸ್ನಾನ ಮಾಡಿದ ಯುವಕ

Bathing in a moving train: ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿಯಾಗಲು ವ್ಯಕ್ತಿಯೊಬ್ಬ ಚಲಿಸುವ ರೈಲಿನ ಬೋಗಿಯೊಳಗೆ ಸ್ನಾನ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ನಂತರ ರೈಲ್ವೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Read Full Story

12:23 PM (IST) Nov 11

ಈ 5 ಆಟಗಾರರನ್ನು ರಿಲೀಸ್ ಮಾಡಲು ರೆಡಿಯಾದ ಹಾಲಿ ಚಾಂಪಿಯನ್ ಆರ್‌ಸಿಬಿ! ಪಟ್ಟಿಯಲ್ಲಿದೆ ಒಂದು ಅಚ್ಚರಿ ಹೆಸರು!

2026ರ ಐಪಿಎಲ್ ಮಿನಿ ಹರಾಜಿಗೂ ಮುನ್ನ, ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಕಳಪೆ ಪ್ರದರ್ಶನ ನೀಡಿದ ಲಿವಿಂಗ್‌ಸ್ಟೋನ್ ಮತ್ತು ಲುಂಗಿ ಎಂಗಿಡಿ ಸೇರಿದಂತೆ ಒಟ್ಟು 5 ಆಟಗಾರರನ್ನು ತಂಡದಿಂದ ಕೈಬಿಡುವ ಬಗ್ಗೆ ಫ್ರಾಂಚೈಸಿ ಚಿಂತನೆ ನಡೆಸುತ್ತಿದೆ.

Read Full Story

12:07 PM (IST) Nov 11

ದೆಹಲಿ ಕೆಂಪುಕೋಟೆ ಬ್ಲಾಸ್ಟ್‌ ಇಂಪ್ಯಾಕ್ಟ್‌, MTAR Tech ಸೇರಿದಂತೆ ರಕ್ಷಣಾ ವಲಯದ ಷೇರುಗಳ ಗೂಳಿ ಓಟ!

ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟದ ನಂತರ, ಭಯೋತ್ಪಾದಕ ಕೃತ್ಯದ ಶಂಕೆಯ ನಡುವೆ ಭಾರತೀಯ ರಕ್ಷಣಾ ವಲಯದ ಷೇರುಗಳು ಭಾರಿ ಏರಿಕೆ ಕಂಡಿವೆ. ಮಾರುಕಟ್ಟೆ ಕುಸಿದಿದ್ದರೂ, MTAR ಟೆಕ್ನಾಲಜೀಸ್, ಡೇಟಾ ಪ್ಯಾಟರ್ನ್ಸ್‌ನಂತಹ ಷೇರುಗಳು ಗಣನೀಯ ಲಾಭ ಗಳಿಸಿವೆ. 

Read Full Story

11:11 AM (IST) Nov 11

ಸಂಜು ಸ್ಯಾಮ್ಸನ್ ಹುಟ್ಟುಹಬ್ಬ - ಚೆನ್ನೈ ಸೂಪರ್ ಕಿಂಗ್ಸ್‌ ಕಡೆಯಿಂದ ಸಿಗುತ್ತಾ ಬಿಗ್ ಗಿಫ್ಟ್?

ಕ್ರಿಕೆಟಿಗ ಸಂಜು ಸ್ಯಾಮ್ಸನ್ ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ, ರಾಜಸ್ಥಾನ ರಾಯಲ್ಸ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಅವರ ವರ್ಗಾವಣೆಯ ಮಾತುಕತೆಗಳು ಅಂತಿಮ ಹಂತದಲ್ಲಿದ್ದು, ಹುಟ್ಟುಹಬ್ಬದ ದಿನವೇ ಸಿಎಸ್‌ಕೆ ಕಡೆಯಿಂದ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.

Read Full Story

10:44 AM (IST) Nov 11

ಕೆಂಪು ಕೋಟೆ ಬ್ಲಾಸ್ಟ್‌ ಶಂಕಿತ, ಡಾ.ಉಮರ್‌ನ ಮೊದಲ ಫೋಟೋ ಲಭ್ಯ

ಮೂಲಗಳ ಪ್ರಕಾರ, ಫರಿದಾಬಾದ್ ಭಯೋತ್ಪಾದಕ ಘಟಕದ ಶಂಕಿತ ಭಯೋತ್ಪಾದಕ ಮೊಹಮ್ಮದ್ ಉಮರ್, ಫರಿದಾಬಾದ್‌ನ ಅಲ್ ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಸೋಮವಾರ ರಾತ್ರಿ ನಡೆದ ಘಟನೆಯಲ್ಲಿ ಇಲ್ಲಿಯವರೆಗೂ 9 ಮಂದಿ ಸಾವು ಕಂಡಿದ್ದಾರೆ.

 

Read Full Story

10:03 AM (IST) Nov 11

ನಟ ಧರ್ಮೇಂದ್ರ ಸಾವಿನ ಸುದ್ದಿ, ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದ ರಾಜನಾಥ್‌ ಸಿಂಗ್‌ ನಂತರ ಡಿಲೀಟ್‌!

ಹಿರಿಯ ನಟ ಧರ್ಮೇಂದ್ರ ನಿಧನದ ಸುಳ್ಳು ಸುದ್ದಿ ಹರಡಿದ ಬೆನ್ನಲ್ಲೇ, ಅವರ ಪುತ್ರಿ ಇಶಾ ಡಿಯೋಲ್ ಸ್ಪಷ್ಟನೆ ನೀಡಿದ್ದಾರೆ. ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಧರ್ಮೇಂದ್ರ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

Read Full Story

09:39 AM (IST) Nov 11

ಐಪಿಎಲ್ 2026 ಹರಾಜಿಗೂ ಮುನ್ನ ಜಡೇಜಾ ಬದಲಿಗೆ ಸಿಎಸ್‌ಕೆ ಟಾರ್ಗೆಟ್ ಮಾಡಬಹುದಾದ 3 ಆಟಗಾರರಿವರು!

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2026ರ ಹರಾಜಿಗೂ ಮುನ್ನ ರವೀಂದ್ರ ಜಡೇಜಾರನ್ನು ಟ್ರೇಡ್ ಮಾಡುವ ಸಾಧ್ಯತೆ ಇದೆ. ಅವರ ಬದಲಿಗೆ ಮೂವರು ಆಟಗಾರರ ಪಟ್ಟಿ ಇಲ್ಲಿದೆ.

Read Full Story

08:57 AM (IST) Nov 11

ಬಾಲಿವುಡ್‌ನ ಹೀಮ್ಯಾನ್‌, ಹಿರಿಯ ನಟ ಧರ್ಮೇಂದ್ರ ನಿಧನ

ಹಿರಿಯ ನಟ ಧರ್ಮೇಂದ್ರ 89 ನೇ ವಯಸ್ಸಿನಲ್ಲಿ ನಿಧನರಾದರು. ಉಸಿರಾಟದ ಸಮಸ್ಯೆಯಿಂದಾಗಿ ಅವರು ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Read Full Story

08:49 AM (IST) Nov 11

ಶಮಿ ಆಯ್ಕೆ ವಿವಾದ - ಕೊನೆಗೂ ಮೌನ ಮುರಿದು ಅಚ್ಚರಿ ಹೇಳಿಕೆ ಕೊಟ್ಟ ಸೌರವ್ ಗಂಗೂಲಿ!

ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನು ಭಾರತೀಯ ತಂಡದಿಂದ ಹೊರಗಿಟ್ಟಿರುವುದಕ್ಕೆ ಸೌರವ್ ಗಂಗೂಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಫಿಟ್ನೆಸ್ ಸಾಬೀತುಪಡಿಸಿದರೂ ಶಮಿಯನ್ನು ಕಡೆಗಣಿಸಲು ಯಾವುದೇ ಕಾರಣವಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.
Read Full Story

07:54 AM (IST) Nov 11

ಬಿಹಾರ ಚುನಾವಣೆ ಗೆಲ್ಲೋರ್‍ಯಾರು?

ಎನ್‌ಡಿಎ ಮತ್ತು ಇಂಡಿಯಾ ಕೂಟದ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾಗಿದ್ದ ಬಿಹಾರದಲ್ಲಿ 2ನೆಯ ಹಾಗೂ ಕೊನೆಯ ಹಂತದ ಚುನಾವಣೆ ನ.11ರಂದು ನಡೆಯಲಿದೆ. ಈ ಹಂತದಲ್ಲಿ 122 ಕ್ಷೇತ್ರಗಳಲ್ಲಿ 1302 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

 

Read Full Story

07:54 AM (IST) Nov 11

ಆಕಸ್ಮಿಕವೋ? ಭಯೋತ್ಪಾದಕರ ಆತ್ಮಾಹುತಿ ದಾಳಿಯೋ? ದಿಲ್ಲಿ ಕಾರು ಸ್ಫೋಟಕ್ಕೆ 9 ಬಲಿ

ಭದ್ರತಾ ಪಡೆಗಳು ಭಾನುವಾರವಷ್ಟೇ ಗುಜರಾತ್‌ನಲ್ಲಿ ಮೂವರು ಮತ್ತು ಸೋಮವಾರ ಕಾಶ್ಮೀರದಲ್ಲಿ 8 ಉಗ್ರರನ್ನು ಬಂಧಿಸಿದ್ದರು. ಅದರ ಬೆನ್ನಲ್ಲೇ ಈ ಘಟನೆ ನಡೆದಿರುವುದು, ಇದು ಉಗ್ರ ಕೃತ್ಯವಿರಬಹುದು ಎಂಬ ಶಂಕೆಗೆ ಕಾರಣವಾಗಿದೆ.

 

Read Full Story

07:53 AM (IST) Nov 11

ರಸ್ತೆ ಮೇಲೆಲ್ಲಾ ರಕ್ತ, ದೇಹದ ಭಾಗ ಚೆಲ್ಲಾಪಿಲ್ಲಿ

ಇಲ್ಲಿನ ಕೆಂಪುಕೋಟೆಯ ಬಳಿ ಸಂಭವಿಸಿದ ಸ್ಫೋಟದ ಭೀಕರತೆಯನ್ನು ಕೆಲ ಪ್ರತ್ಯಕ್ಷದರ್ಶಿಗಳು ಬಿಚ್ಚಿಟ್ಟಿದ್ದಾರೆ. ‘ರಸ್ತೆಯ ಮೇಲೆಲ್ಲಾ ಕೆಲವರ ಶ್ವಾಸಕೋಶ, ತುಂಡಾದ ಕೈ ಸೇರಿದಂತೆ ದೇಹದ ಭಾಗಗಳು ಛಿದ್ರವಾಗಿ ಬಿದ್ದದ್ದು ಕಾಣಿಸಿತು.

 

 

Read Full Story

07:53 AM (IST) Nov 11

5 ವರ್ಷದಲ್ಲಿ ತಿರುಪತಿಗೆ 68 ಲಕ್ಷ ಕೆಜಿ ನಕಲಿ ತುಪ್ಪ ಪೂರೈಕೆ!

ಕಳೆದ ವರ್ಷ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ವಿಶ್ವಪ್ರಸಿದ್ಧ ತಿರುಪತಿ ದೇಗುಲಕ್ಕೆ ಕಲಬೆರಕೆ ತುಪ್ಪ ಪೂರೈಕೆ ಪ್ರಕರಣದ ತನಿಖೆ ವೇಳೆ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ. ಹಾಲನ್ನೇ ಖರೀದಿ ಮಾಡದ ಉತ್ತರಾಖಂಡ ಮೂಲದ ಕಂಪನಿ 68 ಲಕ್ಷ ಕೆಜಿಯಷ್ಟು ಭಾರೀ ಪ್ರಮಾಣದ ತುಪ್ಪ ನಕಲಿ ಪೂರೈಕೆ ಮಾಡಿತ್ತು.

 

Read Full Story

07:52 AM (IST) Nov 11

ಈಗ ಟ್ರಂಪ್‌ರಿಂದ ಗ್ಯಾರಂಟಿ ಘೋಷಣೆ

ಗ್ಯಾರಂಟಿ ಘೋಷಿಸಿ ಭಾರತೀಯ ಮೂಲದ ಮಮ್ದಾನಿ ಅಮೆರಿಕದ ನ್ಯೂಯಾರ್ಕ್‌ನ ಮೇಯರ್‌ ಹುದ್ದೆ ಗೆದ್ದ ಬೆನ್ನಲ್ಲೇ, ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡಾ ಗ್ಯಾರಂಟಿ ಭಾಗ್ಯ ಘೋಷಿಸಿದ್ದಾರೆ.

 

Read Full Story

07:52 AM (IST) Nov 11

ಬಾಂಗ್ಲಾ ಬಳಸಿ ಭಾರತದ ಮೇಲೆ ದಾಳಿಗೆ ಉಗ್ರ ಹಫೀಜ್‌ ಸಂಚು

ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನಸ್‌ ನೇತೃತ್ವದಲ್ಲಿ ಭಾರತದ ಪಾಲಿಗೆ ಮಗ್ಗುಲ ಮುಳ್ಳಾಗುತ್ತಿರುವ ಬಾಂಗ್ಲಾದೇಶ ಇದೀಗ ಭಾರತ ವಿರೋಧಿ ಉಗ್ರರಿಗೂ ನೆಲೆಯಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

 

 

Read Full Story

07:52 AM (IST) Nov 11

ಬೆಳ್ಳಿಗೂ ಸಿಗಲಿದೆ ಇನ್ಮುಂದೆ ಬ್ಯಾಂಕ್‌ ಸಾಲ

ಬ್ಯಾಂಕ್‌ಗಳಲ್ಲಿ ಚಿನ್ನ ಅಡ ಇಟ್ಟುಕೊಂಡು ಸಾಲ ನೀಡುವ ವ್ಯವಸ್ಥೆಯನ್ನು ಇದೀಗ ಬೆಳ್ಳಿಗೂ ಆರ್‌ಬಿಐ ವಿಸ್ತರಿಸಿದೆ. ಅಲ್ಲದೆ ಚಿನ್ನ ಮತ್ತು ಬೆಳ್ಳಿಯ ಸಾಲ ಮತ್ತು ಮರುಪಾವತಿಗೆ ಗಡುವು ವಿಧಿಸಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ. 2026ರ ಏ.1ರಿಂದ ಈ ಹೊಸ ನೀತಿ ಜಾರಿಗೆ ಬರಲಿದೆ.

 

Read Full Story

07:51 AM (IST) Nov 11

ಭಯೋತ್ಪಾದಕ ದಾಳಿಗೆ ಸಜ್ಜಾಗಿದ್ದ 3 ಡಾಕ್ಟರ್ಸ್‌ ಸೇರಿ 8 ಉಗ್ರರ ಅರೆಸ್ಟ್‌

ಕೆಮಿಕಲ್ ಬಾಂಬ್ ದಾಳಿಗೆ ಸಜ್ಜಾಗಿದ್ದ ಉಗ್ರನೊಬ್ಬ ಗುಜರಾತ್‌ನಲ್ಲಿ ಸೆರೆ ಸಿಕ್ಕ ಬೆನ್ನಲ್ಲೇ ದೇಶವ್ಯಾಪಿ ಕಂಡುಕೇಳರಿಯದ ರೀತಿಯ ಭಯೋತ್ಪಾದಕ ದಾಳಿಗೆ ಸಜ್ಜಾಗಿದ್ದ ಮೂವರು ಕಾಶ್ಮೀರಿ ವೈದ್ಯರು ಸೇರಿದಂತೆ 8 ಉಗ್ರರ ಜಾಲವನ್ನು ಭೇದಿಸುವಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಯಶಸ್ವಿಯಾಗಿದ್ದಾರೆ.

 

Read Full Story

07:51 AM (IST) Nov 11

ಭದ್ರತಾ ಲೋಪಕ್ಕೆ ಕಾರಣ ಆದವರ ಬಿಡಬೇಡಿ, ತನಿಖೆ ನಡೆಸಿ: ಮಲ್ಲಿಕಾರ್ಜುನ ಖರ್ಗೆ

ಕಾರು ಸ್ಫೋಟದಿಂದ ಹಲವರು ಮೃತರಾಗಿರುವುದು ತೀವ್ರ ಆಘಾತ ತಂದಿದೆ. ಹೆಚ್ಚಿನ ಭದ್ರತೆ ಹಾಗೂ ದಟ್ಟಣೆ ಇರುವ ಸ್ಥಳದಲ್ಲಿ ನಡೆದಿರುವ ಸ್ಫೋಟದ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

 

Read Full Story

07:50 AM (IST) Nov 11

ದೆಹಲಿಯಲ್ಲಿ ಸ್ಫೋಟ, ರಾಜ್ಯದಲ್ಲೂ ಹೈ ಅಲರ್ಟ್ ಘೋಷಣೆ: ಸಿಎಂ ಸಿದ್ದರಾಮಯ್ಯ

ಮೈಸೂರು-ಬೆಂಗಳೂರು ಪೊಲೀಸರ ಜೊತೆ ಮಾತನಾಡಿದ್ದೇನೆ. ದೆಹಲಿಯಲ್ಲಿ ಸ್ಫೋಟ ಸಂಭವಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಹೈ ಅಲರ್ಟ್ ಘೋಷಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

 

Read Full Story

More Trending News