ಮುಂಬೈ: ‘ಡ್ರಗ್ಸ್ ವ್ಯಾಪಾರದ ಆರೋಪದಲ್ಲಿ ವೆನಿಜುವೆಲಾ ಅಧ್ಯಕ್ಷರನ್ನು ಟ್ರಂಪ್ ಹಿಡಿದು ದೇಶಕ್ಕೆ ಕರೆತಂದಂತೆ ಉಗ್ರ ಮಸೂದ್ ಅಜರ್ನನ್ನೂ ಪ್ರಧಾನಿ ಮೋದಿ ಪಾಕ್ನಿಂದ ಹಿಡಿದು ತರಲಿ ಎಂದು ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸಲಹೆ ನೀಡಿದ್ದಾರೆ. ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಒವೈಸಿ, ‘ಟ್ರಂಪ್ಗೆ ವೆನಿಜುವೆಲಾದ ಅಧ್ಯಕ್ಷ ಮಡುರೋ ಅವರನ್ನು ಅಪಹರಿಸಲು ಸಾಧ್ಯವಾದರೆ ನೀವು ( ಪ್ರಧಾನಿ ಮೋದಿ) ಪಾಕಿಸ್ತಾನಕ್ಕೆ ಹೋಗಿ 26/11 ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ನ್ನು ಭಾರತಕ್ಕೆ ಕರೆ ತರಬಹುದು. ನೀವು ಪಾಕಿಸ್ತಾನಕ್ಕೆ ಹೋಗಿ ಮುಂಬೈ ದಾಳಿ ನಡೆಸಿದ ಕ್ರೂರ ಜನರನ್ನು ಮರಳಿ ಕರೆತರಬಹುದು. ಅದು ಮಸೂದ್ ಅಜರ್ ಆಗಿರಬಹುದು ಅಥವಾ ಎಲ್ಇಟಿಯ ಕ್ರೂರ ರಾಕ್ಷಸರಾಗಿರಬಹುದು’ ಎಂದಿದ್ದಾರೆ.

11:53 PM (IST) Jan 05
Shikhar Dhawan to Marry Sophie Shine in Feb 2026; Details Inside ಮೂಲಗಳ ಪ್ರಕಾರ, ವಿವಾಹವು ಅದ್ದೂರಿಯಾಗಿ ನಡೆಯಲಿದ್ದು, ದೆಹಲಿ NCR ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ.
11:03 PM (IST) Jan 05
ಅಮೆರಿಕವು ವೆನುಜುವೇಲದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ದಾಳಿಯ ಹಿಂದಿನ ನಿಜವಾದ ಕಾರಣ ಕೇವಲ ತೈಲವಲ್ಲ, ಬದಲಾಗಿ ತನ್ನ 'ಪೆಟ್ರೋಡಾಲರ್' ವ್ಯವಸ್ಥೆಯನ್ನು ರಕ್ಷಿಸಿಕೊಳ್ಳುವ ಅಮೆರಿಕದ ತಂತ್ರವಾಗಿದೆ.
10:46 PM (IST) Jan 05
ಗಂಡು ಕಪ್ಪೆಗಳು ಸಂಯೋಗಕ್ಕೆ ಬಂದಾಗ, ಇಷ್ಟವಿಲ್ಲದ ಹೆಣ್ಣು ಕಪ್ಪೆಗಳು ಸತ್ತಂತೆ ನಟಿಸಿ ತಪ್ಪಿಸಿಕೊಳ್ಳುತ್ತವೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಸಂಶೋಧನೆಯಲ್ಲಿ, ಹೆಣ್ಣು ಕಪ್ಪೆಗಳು ನಿಸ್ತೇಜವಾಗಿ ಬಿದ್ದು, ಗಂಡು ಕಪ್ಪೆಗಳು ದೂರ ಹೋದ ನಂತರ ಮತ್ತೆ ಚಲಿಸುತ್ತವೆ ಎಂಬುದು ತಿಳಿದುಬಂದಿದೆ.
10:08 PM (IST) Jan 05
ಕೃತಕ ಉಗುರುಗಳ ಬಳಕೆಯಿಂದ 35 ವರ್ಷದ ಮಹಿಳೆಯೊಬ್ಬರಲ್ಲಿ ಅಪರೂಪದ ಚರ್ಮದ ಕ್ಯಾನ್ಸರ್ (ಸುಬುಂಗುವಲ್ ಮೆಲನೋಮಾ) ಪತ್ತೆಯಾಗಿದೆ. ಅಕ್ರಿಲಿಕ್ ಉಗುರುಗಳನ್ನು ಅಂಟಿಸಲು ಬಳಸುವ ಯುವಿ ದೀಪಗಳು ಮತ್ತು ರಾಸಾಯನಿಕಗಳು ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
09:16 PM (IST) Jan 05
ವಿವಾಹಿತ ಮಹಿಳೆಗೆ ಅಕ್ರಮ ಸಂಬಂಧದಿಂದ ಮಗು ಜನಿಸಿದರೆ, ಆ ಮಗುವಿನ ಕಾನೂನುಬದ್ಧ ತಂದೆ ಆಕೆಯ ಪತಿಯೇ ಆಗಿರುತ್ತಾನೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112ರ ಅಡಿಯಲ್ಲಿ, ಮಗುವಿನ ಘನತೆಯನ್ನು ಕಾಪಾಡಲು ಕೋರ್ಟ್ ಹೇಳಿದ್ದೇನು?
08:32 PM (IST) Jan 05
5th Hindu Killed in 3 Weeks: Rana Pratap Shot Dead in Bangladesh ಮೃತರನ್ನು ಕೇಶಬಪುರದ ಅರುವಾ ಗ್ರಾಮದ ತುಷಾರ ಕಾಂತಿ ಬೈರಾಗಿ ಅವರ ಪುತ್ರ ರಾಣಾ ಪ್ರತಾಪ್ (45) ಎಂದು ಗುರುತಿಸಲಾಗಿದೆ.
08:01 PM (IST) Jan 05
ಬಿಜೆಪಿ ನಾಯಕಿ ನವನೀತ್ ರಾಣಾ ಅವರ 'ಹಿಂದೂಗಳು ನಾಲ್ಕು ಮಕ್ಕಳನ್ನು ಹೊಂದಬೇಕು' ಎಂಬ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ. ತಮಗೆ ಆರು ಮಕ್ಕಳಿದ್ದು, ನಾಲ್ಕು ಮಕ್ಕಳನ್ನು ಹೊಂದಲು ಯಾರು ತಡೆಯುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
07:03 PM (IST) Jan 05
ಸೆಲೆಕ್ಷನ್ ಕಮಿಟಿ ಬಳಿಕ ಎಲೆಕ್ಷನ್ ಕಮಿಷನ್ನಿಂದಲೂ ಶಮಿಗೆ ಶಾಕ್, SIR ಸಂಬಂಧ ಸಮನ್ಸ್ ನೀಡಲಾಗಿದೆ. ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕುರಿತು ಮೊಹಮ್ಮದ್ ಶಮಿ ಹಾಗೂ ಶಮಿ ಸಹೋದರನಿಗೂ ಸಮನ್ಸ್ ನೀಡಲಾಗಿದೆ.
06:32 PM (IST) Jan 05
ದೇಶಾದ್ಯಂತ ಅಬ್ಬರಿಸಿದ ಈ ಭಾರತೀಯ ಸಿನಿಮಾ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ, ಸಂಭ್ರಮ ಡಬಲ್ ಆಗಿದೆ. 2000 ಸಿನಿಮಾ ಅರ್ಜಿಗಳ ಪೈಕಿ ಗರಿಷ್ಠ 250 ಸಿನಿಮಾ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಭಾರತದ ಸಿನಿಮಾ ಕೂಡ ಸೇರಿಕೊಂಡಿದೆ.
06:31 PM (IST) Jan 05
06:20 PM (IST) Jan 05
ಹಸನ್ ಎಂಬ ವ್ಯಕ್ತಿ ಯಾವುದೇ ಜಿಮ್ ಅಥವಾ ತಜ್ಞರ ಸಹಾಯವಿಲ್ಲದೆ, ಕೇವಲ ಚಾಟ್ ಜಿಪಿಟಿ ಬಳಸಿ 3 ತಿಂಗಳಲ್ಲಿ 27 ಕೆಜಿ ತೂಕ ಇಳಿಸಿಕೊಂಡಿದ್ದಾರೆ.ಅವರು ತಮ್ಮ ಡಯಟ್ ಪ್ಲಾನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಡಿಟೇಲ್ ಸ್ಟೋರಿ ಇಲ್ಲಿದೆ.
05:36 PM (IST) Jan 05
India vs New Zealand ODI Streaming: ಭಾರತ-ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಇದೇ ಜನವರಿ 11ರಿಂದ ಆರಂಭವಾಗಲಿದೆ. ಬನ್ನಿ ನಾವಿಂದು ಎಲ್ಲಿ ಉಚಿತವಾಗಿ ಈ ಪಂದ್ಯವನ್ನು ವೀಕ್ಷಿಸಬಹುದು ಎನ್ನುವುದನ್ನು ತಿಳಿಯೋಣ.
05:31 PM (IST) Jan 05
ಸ್ಪ್ಲಿಟ್ಸ್ವಿಲ್ಲಾ 13ರ ವಿಜೇತ ಜೇ ದುಧಾನೆ ಅವರನ್ನು ₹5 ಕೋಟಿ ವಂಚನೆ ಆರೋಪದ ಮೇಲೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಹನಿಮೂನ್ಗೆ ತೆರಳುತ್ತಿದ್ದ ವೇಳೆ, ನಕಲಿ ದಾಖಲೆ ನೀಡಿ ಅಂಗಡಿಗಳನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ
04:57 PM (IST) Jan 05
ಸದ್ದಿಲ್ಲದೆ ಎಂಗೇಜ್ಮೆಂಟ್ ಮುಗಿಸಿ ಅಚ್ಚರಿಕೊಟ್ಟ ಬಿಗ್ ಬಾಸ್ ಮಾಜಿ ಸ್ಪರ್ಧಿ, ಗೆಳೆಯ ಮಂಡಿಯೂರಿ ಮಾಡಿದ ಪ್ರಪೋಸಲ್ಗೆ ಕಣ್ಮುಚ್ಚಿ ಯೆಎಸ್ ಎಂದ ಈಕೆ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಂತಸವನ್ನು ಮಾಜಿ ಸ್ಪರ್ಧಿ ಹಂಚಿಕೊಂಡಿದ್ದಾಳೆ.
04:29 PM (IST) Jan 05
ಗ್ರೇಟರ್ ನೋಯ್ಡಾದಲ್ಲಿ, ತನ್ನ ಜೊತೆ ಲೀವಿಂಗ್ ರಿಲೇಷನ್ಶಿಪ್ನಲ್ಲಿದ್ದ ದಕ್ಷಿಣ ಕೊರಿಯಾದ ಪ್ರಜೆಯನ್ನು ಮಣಿಪುರದ ಯುವತಿಯೊಬ್ಬಳು ಹತ್ಯೆ ಮಾಡಿದ್ದಾಳೆ.
03:42 PM (IST) Jan 05
ಖ್ಯಾತ ಗಾಯಕಿ ಚಿತ್ರಾ ಅಯ್ಯರ್ ಅವರ ಸೋದರಿ, 52 ವರ್ಷದ ಶಾರದಾ ಅಯ್ಯರ್, ಒಮನ್ನ ಜೆಬೆಲ್ ಶಾಮ್ಸ್ ಪ್ರದೇಶದಲ್ಲಿ ಟ್ರಕ್ಕಿಂಗ್ ಮಾಡುವಾಗ ಸಂಭವಿಸಿದ ದುರಂತದಲ್ಲಿ ನಿಧನರಾಗಿದ್ದಾರೆ. ತಂದೆಯ ಮರಣದ ಒಂದು ತಿಂಗಳೊಳಗೆ ನಡೆದ ಈ ಘಟನೆಯು ಕುಟುಂಬಕ್ಕೆ ಆಘಾತ ತಂದಿದೆ.
03:30 PM (IST) Jan 05
ಶಾಂತಗೊಂಡಿದ್ದ ಮಣಿಪುರದಲ್ಲಿ ಮೂರು ಐಇಡಿ ಬಾಂಬ್ ಸ್ಫೋಟ, ಇಬ್ಬರಿಗೆ ಗಾಯ, ಬೆಳಗಿನ ಜಾವ 2 ಸ್ಫೋಟ ಸಂಭವಿಸಿದರೆ, ಎರಡೂವರೆ ಗಂಟೆ ಬಳಿಕ ಮತ್ತೊಂದು ಐಇಡಿ ಸ್ಫೋಟಗೊಂಡಿದೆ. ಮಣಿಪುರದಲ್ಲಿ ಮತ್ತೆ ಆತಂಕ ಮನೆ ಮಾಡಿದೆ.
03:21 PM (IST) Jan 05
ಚೆನ್ನೈ: ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಕೆಲವೊಂದು ಅಚ್ಚರಿ ತೀರ್ಮಾನ ತೆಗೆದುಕೊಂಡಿದೆ. ಈ ಪೈಕಿ ಋತುರಾಜ್ ಗಾಯಕ್ವಾಡ್ ಕೈಬಿಟ್ಟಿದ್ದಕ್ಕೆ ಮಾಜಿ ಕ್ರಿಕೆಟಿಗ ಆಕ್ರೋಶ ಹೊರಹಾಕಿದ್ದಾರೆ.
02:55 PM (IST) Jan 05
ಪಾಕಿಸ್ತಾನದ ರಾಜತಾಂತ್ರಿಕ ಗ್ಯಾಂಬ್ಲಿಂಗ್, ಅಮೆರಿಕ ಜೊತೆಗಿನ ಸ್ನೇಹದಿಂದ ಪ್ರಾದೇಶಿಕ ರಾಜಕಾರಣದ ಮೇಲಿನ ಪರಿಣಾಮ ಏನು? ಇಸ್ಲಾಮಾಬಾದ್ನ ಹೊಸ ವಿದೇಶಾಂಗ ನೀತಿಯಿಂದ ನೆರೆಹೊರೆಯ ರಾಷ್ಟ್ರಗಳಲ್ಲಿ ಆತಂಕ?
02:26 PM (IST) Jan 05
ಅಮೆರಿಕದಿಂದ ಮಡುರೊ ಅರೆಸ್ಟ್, ಭಾರತದಿಂದ ಹಫೀದ್ ಬಂಧನ ಆಗಲ್ವಾ? ಓವೈಸಿ ಪ್ರಶ್ನೆಗೆ ಬಿಜೆಪಿ ವಿಶ್ವವೇ ಮೆಚ್ಚುವ ಉತ್ತರ ನೀಡಿದೆ. ವೆನಿಜುವೆಲಾಗೆ ನುಗ್ಗಿ ಅಧ್ಯಕ್ಷರ ಬಂಧಿಸಿದ ನಡೆ ಉಲ್ಲೇಖಿಸಿ ಅಸಾದುದ್ದೀನ್ ಓವೈಸಿ ಮಹತ್ವದ ಪ್ರಶ್ನೆ ಎತ್ತಿದ್ದಾರೆ.
02:22 PM (IST) Jan 05
ಹೈದರಾಬಾದ್ನಲ್ಲಿ ಡ್ರಿಂಕ್ & ಡ್ರೈವ್ ತಪಾಸಣೆ ವೇಳೆ ಸಿಕ್ಕಿಬಿದ್ದ ಆಟೋ ಚಾಲಕನೊಬ್ಬ, ಕೇಸ್ನಿಂದ ತಪ್ಪಿಸಿಕೊಳ್ಳಲು ಸತ್ತ ಹಾವನ್ನು ತೋರಿಸಿ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ. ಪೊಲೀಸರು ಆತಂಕಗೊಂಡ ಸಮಯವನ್ನು ಬಳಸಿಕೊಂಡು, ಚಾಲಕ ತನ್ನ ಆಟೋ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.
01:32 PM (IST) Jan 05
ಸಿಡ್ನಿ ಟೆಸ್ಟ್ನಲ್ಲಿ ಜೋ ರೂಟ್ (160) ಭರ್ಜರಿ ಶತಕ ಸಿಡಿಸಿದ್ದಾರೆ. ಇದು ಅವರ 41ನೇ ಟೆಸ್ಟ್ ಶತಕವಾಗಿದ್ದು, ಈ ಮೂಲಕ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದರೊಂದಿಗೆ ರೂಟ್, ಸಚಿನ್ ಮತ್ತು ಕಾಲಿಸ್ ದಾಖಲೆ ಮುರಿಯುವತ್ತ ಹೆಜ್ಜೆ ಹಾಕಿದ್ದಾರೆ.
01:01 PM (IST) Jan 05
ಜನವರಿ 27ಕ್ಕೆ ರಾಷ್ಟ್ರವ್ಯಾಪಿ ಮುಷ್ಕರದ ಎಚ್ಚರಿಕೆ, ಬೇಡಿಕೆ ಈಡೇರಿಸಲು ಬ್ಯಾಂಕ್ ನೌಕರರ ಪಟ್ಟು, ವಾರದಲ್ಲಿ 2 ದಿನ ರಜೆ ಸೇರಿದಂತೆ ಹಲವು ಬೇಡಿಕೆ ಈಡೇರಿಕಾಗಿ ಬ್ಯಾಂಕ್ ನೌಕರರು ಮುಷ್ಕರದ ಎಚ್ಚರಿಕ ನೀಡಿದ್ದಾರೆ.
12:47 PM (IST) Jan 05
12:24 PM (IST) Jan 05
ಬೆಂಗಳೂರು: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ಭಾರತದ ಮೇಲೆ ಎಲ್ಲರ ಕಣ್ಣಿದೆ. ಈ ನಡುವೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಭಾರತದ ಈ ಆಟಗಾರ ಎಕ್ಸ್ ಫ್ಯಾಕ್ಟರ್ ಆಗಬಹುದು ಎಂದು ಎಚ್ಚರಿಸಿದ್ದಾರೆ.
12:21 PM (IST) Jan 05
ಈ ಬಿಗ್ ಬಾಸ್ ವಿನ್ನರ್ಗೆ ಇನ್ನೂ ಸಿಕ್ಕಲ್ಲ ಕಾರು, ತಮಾಷೆ ಮಾಡುತ್ತಲೇ ನೋವು ತೋಡಿಕೊಂಡ ಸ್ಪರ್ಧಿ, ಗೆದ್ದ ಸ್ಪರ್ಧಿಗೆ 50 ಲಕ್ಷ ರೂಪಾಯಿ ಬಹುಮಾನ ಜೊತೆಗೆ ಕಾರು ಕೂಡ ಆಫರ್ ಮಾಡಲಾಗಿತ್ತು. ಆದರೆ ಇದುವರೆಗೂ ಕಾರು ಸಿಕ್ಕಿಲ್ಲ ಎಂದು ಸ್ವತಃ ವಿನ್ನರ್ ಹೇಳಿದ್ದಾರೆ.
11:58 AM (IST) Jan 05
ಪಂಜಾಬ್ನಲ್ಲಿ ಅಪರಿಚಿತರ ಗುಂಡಿನ ದಾಳಿ ಮುಂದುವರೆದಿದೆ. ಅಮೃತ್ಸರದಲ್ಲಿ ಎಎಪಿ ನಾಯಕ ಸರಪಂಚ್ ಜರ್ನೈಲ್ ಸಿಂಗ್ ಅವರನ್ನು ಮದುವೆ ಸಮಾರಂಭದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದೇವಿಂದರ್ ಬಂಬಿಹಾ ಗ್ಯಾಂಗ್ ಈ ಕೃತ್ಯದ ಹೊಣೆ ಹೊತ್ತಿದೆ.
11:31 AM (IST) Jan 05
ತುಕಡೆ ತುಕಡೆ ಗ್ಯಾಂಗ್ಗೆ ಜೈಲೇ ಗತಿ, ಉಮರ್ ಖಾಲಿದ್, ಶಾರ್ಜಿಲ್ ಇಮಾಮ್ ಅರ್ಜಿ ತಿರಸ್ಕರಿಸಿದ ಸುಪ್ರೀಂ, ದೆಹಲಿ ಗಲಭೆ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್, ಉಮರ್ ಹಾಗೂ ಶಾರ್ಜಿಲ್ಗೆ ಬೇಲ್ ನಿರಾಕರಿಸಿದೆ.
10:37 AM (IST) Jan 05
ಅಮೆರಿಕಾದ ಮೇರಿಲ್ಯಾಂಡ್ನಲ್ಲಿ ಹೊಸವರ್ಷದ ದಿನದಂದು ನಾಪತ್ತೆಯಾಗಿದ್ದ 27 ವರ್ಷದ ಭಾರತೀಯ ಯುವತಿ ನಿಕಿತಾ ಗೊದಿಶಾಲಾ, ತನ್ನ ಬಾಯ್ಫ್ರೆಂಡ್ನ ಅಪಾರ್ಟ್ಮೆಂಟ್ನಲ್ಲಿ ಇರಿತದ ಗಾಯಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾಳೆ.
10:16 AM (IST) Jan 05
ಬೆಂಗಳೂರು: ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ಜನವರಿ 11ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಶಮಿ ಹೆಸರು ನಾಪತ್ತೆಯಾಗಿದೆ. ಅಷ್ಟಕ್ಕೂ ಶಮಿ ಕೈಬಿಟ್ಟಿದ್ದೇಕೆ ಎನ್ನುವ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.
09:44 AM (IST) Jan 05
ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ, ಸತ್ಯ ಸಾಯಿಬಾಬಾರ ಪರಮ ಭಕ್ತರಾಗಿದ್ದರು. ಅಮೆರಿಕವು ಡ್ರೋನ್, ಉಪಗ್ರಹ ಮತ್ತು ಆಂತರಿಕ ಮಾಹಿತಿದಾರರನ್ನು ಬಳಸಿ, ಮಡುರೋ ಮನೆ ಮಾದರಿ ನಿರ್ಮಿಸಿ ದಾಳಿಯ ತಾಲೀಮು ನಡೆಸಿತ್ತು..
09:31 AM (IST) Jan 05
ಐಪಿಎಲ್ನಿಂದ ಮುಸ್ತಾಫಿಜುರ್ ರೆಹಮಾನ್ರನ್ನು ಕೈಬಿಟ್ಟಿದ್ದಕ್ಕೆ ಪ್ರತಿಯಾಗಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಆಟಗಾರರ ಸುರಕ್ಷತೆಯ ಕಾರಣ ನೀಡಿ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಐಸಿಸಿಗೆ ಅಧಿಕೃತವಾಗಿ ಮನವಿ ಮಾಡಿದೆ.
08:28 AM (IST) Jan 05
2036ರ ಒಲಿಂಪಿಕ್ ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸಲು ಸರ್ಕಾರ ಸಕಲ ಪ್ರಯತ್ನ ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವಾರಣಸಿಯಲ್ಲಿ ನಡೆದ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ ಉದ್ಘಾಟಿಸಿ ಮಾತನಾಡಿದ ಅವರು, ಖೇಲೋ ಇಂಡಿಯಾದಂತಹ ಯೋಜನೆಗಳು ಪ್ರತಿಭೆಗಳನ್ನು ಪೋಷಿಸುತ್ತಿವೆ ಎಂದರು.