LIVE NOW
Published : Apr 13, 2026, 07:11 AM ISTUpdated : Apr 13, 2026, 12:32 PM IST

India News Live: ಹಾರ್ದಿಕ್ ಪಾಂಡ್ಯ ಔಟಾಗುತ್ತಿದ್ದಂತೆಯೇ ಕುಣಿದು ಕುಪ್ಪಳಿಸಿದ ಕೃನಾಲ್ ಪಾಂಡ್ಯ! ದಾಯಾದಿಗಳಾದ್ರಾ ಅಣ್ತಮ್ಮಾಸ್? ವಿಡಿಯೋ ವೈರಲ್

ಸಾರಾಂಶ

ನವದೆಹಲಿ (ಏ.13): ಇಡೀ ವಿಶ್ವದ ಗಮನ ಸೆಳೆದಿದ್ದ, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಭರವಸೆ ಮೂಡಿಸಿದ್ದ ಇರಾನ್‌-ಅಮೆರಿಕ ನಡುವಿನ ಸಂಧಾನ ಮಾತುಕತೆ ಯಾವುದೇ ಒಪ್ಪಂದವಿಲ್ಲದೆ ಭಾನುವಾರ ಅಂತ್ಯಗೊಂಡಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸುಮಾರು 21 ಗಂಟೆಗಳಿಂದ ನಡೆಯುತ್ತಿದ್ದ ಮ್ಯಾರಥಾನ್‌ ಮಾತುಕತೆ ಅರ್ಧಕ್ಕೇ ಮೊಟಕುಗೊಳಿಸಿ ಅಮೆರಿಕ ಮತ್ತು ಇರಾನ್‌ ನಿಯೋಗ ಸ್ವದೇಶಕ್ಕೆ ವಾಪಸಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

12:32 PM (IST) Apr 13

ಹಾರ್ದಿಕ್ ಪಾಂಡ್ಯ ಔಟಾಗುತ್ತಿದ್ದಂತೆಯೇ ಕುಣಿದು ಕುಪ್ಪಳಿಸಿದ ಕೃನಾಲ್ ಪಾಂಡ್ಯ! ದಾಯಾದಿಗಳಾದ್ರಾ ಅಣ್ತಮ್ಮಾಸ್? ವಿಡಿಯೋ ವೈರಲ್

ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವಿನ ಐಪಿಎಲ್ ಪಂದ್ಯದಲ್ಲಿ, ಹಾರ್ದಿಕ್ ಪಾಂಡ್ಯ ಔಟಾದಾಗ ಅವರ ಅಣ್ಣ ಕೃನಾಲ್ ಪಾಂಡ್ಯ ಅತಿಯಾಗಿ ಸಂಭ್ರಮಿಸಿದ್ದಾರೆ. ಈ ಘಟನೆ ಮತ್ತು ಹಾರ್ದಿಕ್ ಅವರ ಕೋಪದ ನೋಟವು, ಇಬ್ಬರು ಸಹೋದರರ ಸಂಬಂಧದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ.
Read Full Story

12:05 PM (IST) Apr 13

ತಮಿಳು ಲೇಡಿ ಸೂಪರ್ ಸ್ಟಾರ್ ನಯನತಾರಾ ಕೈನಲ್ಲಿ ಇಷ್ಟೊಂದು ಬಿಗ್ ಬಜೆಟ್ ಸಿನಿಮಾಗಳಿರೋದು ಹೇಗೆ? ಸೀಕ್ರೆಟ್ ರಿವೀಲ್!

ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೆ, ನಾಯಕ ಪ್ರಧಾನ ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್ ಧೂಳಿಪಟ ಮಾಡುವ ತಾಕತ್ತು ಅವರಿಗಿದೆ. ಸದ್ಯ ನಯನತಾರಾ ಅವರ ಡೈರಿ ಮುಂದಿನ ಎರಡು-ಮೂರು ವರ್ಷಗಳವರೆಗೆ ಭರ್ತಿಯಾಗಿದ್ದು, ಅಕ್ಷರಶಃ ಅವರು 'ಬ್ಯುಸಿ ಆಕ್ಟ್ರೆಸ್' ಆಗಿದ್ದಾರೆ.

Read Full Story

11:42 AM (IST) Apr 13

ಪತ್ನಿಯನ್ನ ಅಡುಗೆ ಮನೆಗೆ ಸೇರಿಸದಿದ್ದರೆ ಅದು 'ಮಾನಸಿಕ ಕ್ರೌರ್ಯ' - ಪತಿ ವಿರುದ್ಧದ FIR ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ

ವಿವಾಹಿತ ಮಹಿಳೆಯನ್ನು ಆಕೆಯ ಗಂಡನ ಮನೆಯ ಅಡುಗೆ ಮನೆಗೆ ಪ್ರವೇಶಿಸದಂತೆ ತಡೆಯುವುದು ಐಪಿಸಿ ಸೆಕ್ಷನ್ 498A ಅಡಿಯಲ್ಲಿ 'ಮಾನಸಿಕ ಕ್ರೌರ್ಯ' ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಮಹತ್ವದ ತೀರ್ಪು ನೀಡಿದೆ. 

Read Full Story

11:25 AM (IST) Apr 13

ಆಶಾ ಭೋಸ್ಲೆ ಕೊನೆಯ ಆಸೆ ಇದಾಗಿತ್ತು.. ಆದರೆ ಈ ಮಹಾನ್ ಗಾಯಕಿ ಬಯಕೆ ಈಡೇರಿತಾ?

ಸುಮಾರು 12,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದ ಆಶಾ ಭೋಸ್ಲೆ ಅವರಿಗೆ ದಾದಾಸಾಹೇಬ್ ಫಾಲ್ಕೆ ಸೇರಿದಂತೆ ನೂರಾರು ಗೌರವಗಳು ಸಂದಿವೆ. ಕೇವಲ ಹಿಂದಿಯಷ್ಟೇ ಅಲ್ಲದೆ, ಭಾರತದ ಹಲವು ಭಾಷೆಗಳಲ್ಲಿ, ವಿದೇಶಿ ಭಾಷೆಗಳಲ್ಲಿ ಕೂಡ ಆಶಾ ಭೋಸ್ಲೆ ಹಾಡಿದ್ದರು. 

Read Full Story

11:21 AM (IST) Apr 13

ಜಾರ್ಖಂಡ್ ಹೈಕೋರ್ಟ್ ಚಾಟಿ - ಇಡೀ ಪೊಲೀಸ್ ಠಾಣೆಯ 28 ಸಿಬ್ಬಂದಿ ಸಸ್ಪೆಂಡ್‌

ಜಾರ್ಖಂಡ್‌ನಲ್ಲಿ 9 ತಿಂಗಳಿನಿಂದ ನಾಪತ್ತೆಯಾಗಿದ್ದ ಯುವತಿಯ ಪ್ರಕರಣವನ್ನು ಹೈಕೋರ್ಟ್ ಎಚ್ಚರಿಸಿದ 24 ಗಂಟೆಗಳಲ್ಲಿ ಪೊಲೀಸರು ಭೇದಿಸಿದ್ದಾರೆ. ಪ್ರಿಯಕರನಿಂದಲೇ ಹತ್ಯೆಯಾಗಿದ್ದ ಯುವತಿಯ ಅಸ್ಥಿಪಂಜರ ಪತ್ತೆಯಾಗಿದೆ.

Read Full Story

10:35 AM (IST) Apr 13

ಕನ್ನಡಿಗನ ಪಾಲಾದ ಪರ್ಪಲ್ ಕ್ಯಾಪ್; ಆರೆಂಜ್ ಕ್ಯಾಪ್ ಪಡೆಯುಲು ಶುರುವಾಯ್ತು ಬಿಗ್ ಫೈಟ್

ಐಪಿಎಲ್ ಸೂಪರ್ ಸಂಡೇ ಪಂದ್ಯಗಳಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಜಯಭೇರಿ ಬಾರಿಸಿವೆ. ಈ ಫಲಿತಾಂಶದಿಂದ ಅಂಕಪಟ್ಟಿಯಲ್ಲಿ ಬದಲಾವಣೆಯಾಗಿದ್ದು, ಗುಜರಾತ್‌ನ ಪ್ರಸಿದ್ಧ್ ಕೃಷ್ಣ ಪರ್ಪಲ್ ಕ್ಯಾಪ್ ಪಡೆದರೆ, ಆರೆಂಜ್ ಕ್ಯಾಪ್‌ಗಾಗಿ ಪೈಪೋಟಿ ತೀವ್ರಗೊಂಡಿದೆ.
Read Full Story

09:21 AM (IST) Apr 13

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌; ಕನ್ನಡಿಗ ಆಯುಶ್ ಶೆಟ್ಟಿಗೆ ಐತಿಹಾಸಿಕ ಬೆಳ್ಳಿ!

ಚೀನಾದ ನಿಂಗ್ಬೊದಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಕಾರ್ಕಳದ ಆಯುಷ್ ಶೆಟ್ಟಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ಚೀನಾದ ಶಿ ಯು ಕಿ ವಿರುದ್ಧ ಸೋತರೂ, ಈ ಕೂಟದಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಶಟ್ಲರ್‌ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
Read Full Story

08:41 AM (IST) Apr 13

ರಾಜಸ್ಥಾನ ರಾಯಲ್ಸ್‌ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಸನ್‌ರೈಸರ್ಸ್‌ ಹೈದರಾಬಾದ್?

ಈ ಬಾರಿಯ ಐಪಿಎಲ್‌ನಲ್ಲಿ ಆಡಿದ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿರುವ ರಾಜಸ್ಥಾನ ರಾಯಲ್ಸ್, ಸೋಮವಾರ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಸೆಣಸಲಿದೆ. ಯುವ ಆಟಗಾರ ವೈಭವ್‌ ಸೂರ್ಯವಂಶಿ ಬ್ಯಾಟಿಂಗ್ ಹಾಗೂ ರವಿ ಬಿಷ್ಣೋಯ್ ಬೌಲಿಂಗ್ ರಾಯಲ್ಸ್‌ ತಂಡದ ಬಲವಾಗಿದ್ದರೆ, ಹೈದರಾಬಾದ್ ತಂಡವು ಬಲಿಷ್ಠ ಬ್ಯಾಟಿಂಗ್ ಹೊಂದಿದ್ದರೂ ಮಧ್ಯಮ ಕ್ರಮಾಂಕ ಹಾಗೂ ಬೌಲಿಂಗ್ ವೈಫಲ್ಯದಿಂದ ಸೋಲನುಭವಿಸುತ್ತಿದೆ.
Read Full Story

08:31 AM (IST) Apr 13

IPL 2026 - ವಾಂಖೆಡೆಯಲ್ಲಿ ನಿನ್ನೆ ನಡೆದ ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಸಾಲ್ಟ್‌, ರಜತ್ ಮತ್ತು ಕೊಹ್ಲಿಯವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 240 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ ಆರ್‌ಸಿಬಿ, ಮುಂಬೈ ತಂಡವನ್ನು 222 ರನ್‌ಗಳಿಗೆ ಕಟ್ಟಿಹಾಕಿ ಗೆಲುವಿನ ಹಳಿಗೆ ಮರಳಿತು.
Read Full Story

07:56 AM (IST) Apr 13

ಅರುಣಾಚಲದ 27 ಸ್ಥಳಗಳಿಗೆ ಚೀನಾದಿಂದ ಹೊಸ ಹೆಸರು - ಭಾರತದ ತೀಕ್ಷ್ಣ ತಿರುಗೇಟು

ಅರುಣಾಚಲ ಪ್ರದೇಶದ 27 ಸ್ಥಳಗಳಿಗೆ ಚೀನಾ ಹೊಸ ಹೆಸರುಗಳನ್ನು ಇಟ್ಟಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತ, ಅರುಣಾಚಲ ಪ್ರದೇಶವು ದೇಶದ ಅವಿಭಾಜ್ಯ ಅಂಗವಾಗಿದ್ದು, ಇಂತಹ ದುರುದ್ದೇಶಪೂರಿತ ಪ್ರಯತ್ನಗಳಿಂದ ವಾಸ್ತವ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Read Full Story

07:40 AM (IST) Apr 13

ಇರಾನ್‌-ಅಮೆರಿಕ ಮಾತುಕತೆ ವಿಫಲವಾಗಿದ್ದು ಯಾಕೆ?

ಪಾಕಿಸ್ತಾನದಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ ಬಹುನಿರೀಕ್ಷಿತ ಸಂಧಾನ ಮಾತುಕತೆ ವಿಫಲಗೊಂಡಿದೆ. ಅಣ್ವಸ್ತ್ರ ಯೋಜನೆ, ಆಸ್ತಿ ಬಿಡುಗಡೆ, ಹೋರ್ಮುಜ್ ಜಲಸಂಧಿ ಮತ್ತು ಪರಸ್ಪರ ವಿಶ್ವಾಸದ ಕೊರತೆಯಂತಹ ಹಲವು ವಿಚಾರಗಳಲ್ಲಿನ ಭಿನ್ನಾಭಿಪ್ರಾಯಗಳು ಮಾತುಕತೆ ಮುರಿದುಬೀಳಲು ಕಾರಣವಾಗಿವೆ.
Read Full Story

07:27 AM (IST) Apr 13

ಡಿಎಂಕೆ ಪರ ಡಿಕೆಶಿ ಪ್ರಚಾರ ಪ್ರಶ್ನಿಸಿದ ಪಳನಿಸ್ವಾಮಿ, ತಮಿಳುನಾಡು ಚುನಾವಣೆಲೂ ಮೇಕೆದಾಟು ಡ್ಯಾಂ ಗದ್ದಲ

ಎಐಎಡಿಎಂಕೆ ನಾಯಕ ಪಳನಿಸ್ವಾಮಿ ಅವರು ಡಿಎಂಕೆ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿಗೆ ಮಾರಕವಾದ ಮೇಕೆದಾಟು ಯೋಜನೆಗೆ ಮುಂದಾಗಿರುವ ಕರ್ನಾಟಕದ ಡಿಸಿಎಂ ಡಿಕೆಶಿ ಜೊತೆ ಡಿಎಂಕೆ ಜಂಟಿ ಪ್ರಚಾರ ನಡೆಸಿರುವುದು ಜನರ ಹಿತಕ್ಕೆ ವಿರುದ್ಧ ಎಂದಿದ್ದಾರೆ.

Read Full Story

07:12 AM (IST) Apr 13

ಅಮೆರಿಕ-ಇರಾನ್‌ ಸಂಧಾನ ಮಾತುಕತೆ ವಿಫಲ: ಜಗತ್ತಿಗೆ ಮತ್ತೆ ಯುದ್ಧ ಭೀತಿ

ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಇರಾನ್‌-ಅಮೆರಿಕ ಸಂಧಾನ ಮಾತುಕತೆ ವಿಫಲಗೊಂಡಿದೆ. ಅಣ್ವಸ್ತ್ರ ಯೋಜನೆ ವಿಚಾರದಲ್ಲಿ ಉಭಯ ದೇಶಗಳು ಪಟ್ಟು ಸಡಿಲಿಸದ ಕಾರಣ ಮಾತುಕತೆ ಮುರಿದುಬಿದ್ದಿದ್ದು, ಇದು ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಭೀತಿ ಸೃಷ್ಟಿಸಿದೆ.

 

Read Full Story

More Trending News