ನವದೆಹಲಿ (ಏ.13): ಇಡೀ ವಿಶ್ವದ ಗಮನ ಸೆಳೆದಿದ್ದ, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಭರವಸೆ ಮೂಡಿಸಿದ್ದ ಇರಾನ್-ಅಮೆರಿಕ ನಡುವಿನ ಸಂಧಾನ ಮಾತುಕತೆ ಯಾವುದೇ ಒಪ್ಪಂದವಿಲ್ಲದೆ ಭಾನುವಾರ ಅಂತ್ಯಗೊಂಡಿದೆ. ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಸುಮಾರು 21 ಗಂಟೆಗಳಿಂದ ನಡೆಯುತ್ತಿದ್ದ ಮ್ಯಾರಥಾನ್ ಮಾತುಕತೆ ಅರ್ಧಕ್ಕೇ ಮೊಟಕುಗೊಳಿಸಿ ಅಮೆರಿಕ ಮತ್ತು ಇರಾನ್ ನಿಯೋಗ ಸ್ವದೇಶಕ್ಕೆ ವಾಪಸಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:28 PM (IST) Apr 13
11:05 PM (IST) Apr 13
ತಮಿಳುನಾಡಿನ ಚುನಾವಣಾ ಪ್ರಚಾರದಲ್ಲಿ ವಿನೂತನ ಪ್ರಯೋಗ ನಡೆದಿದ್ದು, ಟಿವಿಕೆ ಪಕ್ಷದ ಅಭ್ಯರ್ಥಿಯೊಬ್ಬರು ತಮ್ಮ ಪಕ್ಷದ ನಾಯಕ ನಟ ವಿಜಯ್ ಅವರ ಹೊಲೊಗ್ರಾಫಿಕ್ ಎಐ ಚಿತ್ರವನ್ನು ಬಳಸಿ ಮತಯಾಚನೆ ಮಾಡುತ್ತಿದ್ದಾರೆ. ಈ ತಂತ್ರಜ್ಞಾನವು ವಿಜಯ್ ಅವರೇ ನೇರವಾಗಿ ಬಂದು ಭಾಷಣ ಮಾಡಿದಂತೆ ಭಾಸವಾಗುತ್ತದೆ.
10:53 PM (IST) Apr 13
10:53 PM (IST) Apr 13
10:32 PM (IST) Apr 13
09:24 PM (IST) Apr 13
ಮೃಣಾಲ್ ಠಾಕೂರ್ ಬಗ್ಗೆ ಆಗಾಗ ಲವ್ ಗಾಸಿಪ್ಗಳು ಹರಿದಾಡುತ್ತಲೇ ಇರುತ್ತವೆ. ಕಳೆದ ವರ್ಷ, ಐಶ್ವರ್ಯಾಗೆ ವಿಚ್ಛೇದನ ನೀಡಿದ ನಂತರ ಧನುಷ್, ಮೃಣಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
09:16 PM (IST) Apr 13
ನಿತೀಶ್ ಕುಮಾರ್ ರಾಜೀನಾಮೆ ಬಳಿಕ ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸಿಎಂ ಸ್ಥಾನಕ್ಕಾಗಿ ಪಕ್ಷದ ಐವರು ಪ್ರಬಲ ನಾಯಕರಾದ ಐವರ ಹೆಸರುಗಳು ರೇಸ್ನಲ್ಲಿವೆ.
08:44 PM (IST) Apr 13
08:26 PM (IST) Apr 13
ವಧುವೊಬ್ಬಳು ಮೊದಲರಾತ್ರಿಯಲ್ಲಿ ತನ್ನ ಪತಿಯಿಂದ 90 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದಾಳೆ. ಈ ಘಟನೆಯು ಎರಡೂ ಕುಟುಂಬಗಳ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಿ, ಪ್ರಕರಣವು ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ.
07:52 PM (IST) Apr 13
ನಟಿ ತೃಪ್ತಿ ದಿಮ್ರಿ ಅವರು ಬ್ಲಶ್ ಪಿಂಕ್ ಬಣ್ಣದ ಸುಂದರವಾದ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದರು. ಸರಳತೆ ಮತ್ತು ಸೌಂದರ್ಯವನ್ನು ಸಮತೋಲನಗೊಳಿಸಿದ ಈ ಡ್ರೆಸ್ನಲ್ಲಿ ಅವರು ಕಂಗೊಳಿಸಿದರು.
07:31 PM (IST) Apr 13
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ನಾಪತ್ತೆಯಾಗಿದ್ದಾಳೆಂದು ಆಕೆಯ ಪತಿ ಎಂದು ಹೇಳಲಾದ ವ್ಯಕ್ತಿಯ ವಿಡಿಯೋ ವೈರಲ್ ಆಗಿತ್ತು. ಆದರೆ, ಆ ವಿಡಿಯೋ ಮಾಡಿದ ವ್ಯಕ್ತಿ ಪತಿ ಫರ್ಮಾನ್ ಖಾನ್ ಅಲ್ಲ, ಬದಲಿಗೆ ಆಗಿದ್ದೇನು? ಇಲ್ಲಿದೆ ಕುತೂಹಲದ ಸ್ಟೋರಿ
07:30 PM (IST) Apr 13
ಬಾಲಿವುಡ್ ಸೂಪರ್ಸ್ಟಾರ್, ಖಿಲಾಡಿ ಅಕ್ಷಯ್ ಕುಮಾರ್ 'ವೀಲ್ ಆಫ್ ಫಾರ್ಚೂನ್' ಶೋನ ಲೈವ್ ಎಪಿಸೋಡ್ನಲ್ಲಿ ತಮ್ಮ ಬಾಲ್ಯದ ಗೆಳೆಯನನ್ನು ಪರಿಚಯಿಸಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದರು.
07:09 PM (IST) Apr 13
ರಣವೀರ್ ಅಲ್ಲಾಬಾಡಿಯಾ ಜೊತೆಗಿನ ಸಂವಾದದಲ್ಲಿ, ಮೃಣಾಲ್ ಠಾಕೂರ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ರಣವೀರ್ ಸಿಂಗ್ ಜೊತೆ ಕೆಲಸ ಮಾಡಿದ್ದು ಹೇಗೆ ಒಂದು ಪ್ರಮುಖ ಘಟ್ಟವಾಯಿತು ಎಂದು ಹಂಚಿಕೊಂಡಿದ್ದಾರೆ.
06:41 PM (IST) Apr 13
06:32 PM (IST) Apr 13
ಮಾಸ್ ಆಕ್ಷನ್ ಚಿತ್ರಗಳಿಗೆ ಪ್ರಶಾಂತ್ ನೀಲ್ ಹೆಸರುವಾಸಿ. ಇನ್ನು ಜೂ.ಎನ್ಟಿಆರ್ಗೆ ಇರುವ ಮಾಸ್ ಇಮೇಜ್ ಬಗ್ಗೆ ಹೇಳಬೇಕಾಗಿಲ್ಲ. ಇವರಿಬ್ಬರ ಕಾಂಬೋದಲ್ಲಿ ಬರುವ ಈ ಸಿನಿಮಾ ಹೇಗಿರಬಹುದು ಎಂದು ಊಹಿಸಿದರೆ ಕುತೂಹಲ ಹೆಚ್ಚುತ್ತಿದೆ.
06:12 PM (IST) Apr 13
ನಟಿ ತಮನ್ನಾ ಈಗ ಸಖತ್ ಸೆಲೆಕ್ಟಿವ್ ಆಗಿ ಸಿನಿಮಾ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಅವಕಾಶಗಳು ಕಡಿಮೆಯಾಗಿವೆ. ಆದರೆ, ಹಿಂದೆ ಪ್ರಭಾಸ್ ಜೊತೆಗಿನ ಒಂದು ಸಿನಿಮಾ ತಿರಸ್ಕರಿಸಿದ್ದರ ಬಗ್ಗೆ ಈಗಲೂ ಬೇಸರವಿದೆ ಎಂದು ಹೇಳಿಕೊಂಡಿದ್ದಾರೆ.
05:36 PM (IST) Apr 13
ವಿಷ್ಣು ಪ್ರಿಯಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅರೆಬೆತ್ತಲೆ ಹಾಗೂ ಅಶ್ಲೀಲತೆಯನ್ನು ಪ್ರಚೋದಿಸುವಂತಹ ಕಂಟೆಂಟ್ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ.
05:30 PM (IST) Apr 13
05:23 PM (IST) Apr 13
ದೊಡ್ಡ ಕಂಪನಿಗಳಲ್ಲಿ ನಡೆಯುತ್ತಿದೆಯಾ ಕಾರ್ಪೋರೇಟ್ ಜಿಹಾದ್? ಹಿಂದೂ ಹೆಣ್ಣುಮಕ್ಕಳೇ ಟಾರ್ಗೆಟ್, ನಾಸಿಕ್ ಟಿಸಿಎಸ್ ಕಂಪನಿಯಲ್ಲಿ ನಡೆದ ಲವ್ ಜಿಹಾದ್, ಮತಾಂತರ ಪ್ರಕರಣದಿಂದ ಕಾರ್ಪೋರೇಟ್ ಜಿಹಾದ್ ಕೇಸ್ ಬೆಳಕಿಗೆ ಬಂದಿದೆ.
05:06 PM (IST) Apr 13
04:23 PM (IST) Apr 13
ಪ್ರಿಯದರ್ಶನ್ ನಿರ್ದೇಶನದ ಮೋಹನ್ಲಾಲ್ ನಟನೆಯ 'ಗೀತಾಂಜಲಿ' ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಕೀರ್ತಿ ಸುರೇಶ್, ಇಂದು ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ.
03:57 PM (IST) Apr 13
ಅಮೆರಿಕ ಇರಾನ್ ಮಾತುಕತೆ ಹೊಟೆಲ್ ಬಿಲ್ ಭರಿಸುವುದು ಯಾರು? ಪಾಕಿಸ್ತಾನ ಕಂಗಾಲು, ಸಂಧಾನ ಮಾತುಕತೆ ವಿಫಲವಾಗಿದೆ. ಆದರೆ ಪಾಕಿಸ್ತಾನಕ್ಕೆ ತಲೆನೋವಿಗೆ ನಟ ಪರೇಶ್ ರಾವಲ್ ನೀಡಿದ ಉತ್ತರ ಭಾರಿ ವೈರಲ್ ಆಗಿದೆ.
03:57 PM (IST) Apr 13
ಐಪಿಎಲ್ ಈಗ 19ನೇ ಸೀಸನ್ನಲ್ಲಿದೆ. ಮುಂದಿನ ವರ್ಷ ಈ ಮೆಗಾ ಲೀಗ್ 20ನೇ ವರ್ಷಕ್ಕೆ ಕಾಲಿಡಲಿದೆ. ಈ ಹಿನ್ನೆಲೆಯಲ್ಲಿ, ಐಪಿಎಲ್ ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ, ಮೊದಲ ಬೌಲ್ ಯಾರು ಮಾಡಿದ್ದು, ಯಾರು ಎದುರಿಸಿದ್ದು, ಮೊದಲ ಸೆಂಚುರಿ ಯಾರು ಬಾರಿಸಿದ್ದು ಎಂಬಂತಹ ಸ್ವಾರಸ್ಯಕರ ಸಂಗತಿಗಳನ್ನು ತಿಳಿಯೋಣ.
03:17 PM (IST) Apr 13
03:00 PM (IST) Apr 13
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತೆಲುಗಿನಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ಆದರೆ, ತನಗೆ ಇಷ್ಟವಾದ ನಟ ಯಾರೆಂದು ಕೇಳಿದರೆ ಬಾಲಿವುಡ್ ನಟನ ಹೆಸರನ್ನು ಹೇಳಿದ್ದಾರೆ. ಅವರ ಸಿನಿಮಾಗಳನ್ನು ಎಷ್ಟು ಬಾರಿ ನೋಡಿದ್ದಾರೋ ಲೆಕ್ಕವೇ ಇಲ್ಲವಂತೆ.
02:58 PM (IST) Apr 13
ನಶೆಯಲ್ಲಿ ಕಾರು ಚಲಾಯಿಸಿ ಸಿಕ್ಕಿ ಬಿದ್ದ ಡಾಕ್ಟರ್, ತಪ್ಪಿಸಿಕೊಳ್ಳಲು ಮಾಡಿದ ಮ್ಯಾಜಿಕ್ಗೆ ದಂಗಾದ ಪೊಲೀಸ್, ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡುವಾಗ ಸಿಕ್ಕಿ ಬಿದ್ದ ಡಾಕ್ಟರ್ ಮಾಡಿದ ಮಂತ್ರ ಏನು?
02:27 PM (IST) Apr 13
ನಿರ್ದೇಶಕ ನಿರ್ಮಾಣ ಸಂಸ್ಥೆ ಹಾಗೂ ಪ್ರಾದೇಶಿಕ ಸೆನ್ಸಾರ್ ಮಂಡಳಿ ಗಮನಕ್ಕೆ ತರದೇ ರಿವೈಸಿಂಗ್ ಕಮಿಟಿಗೆ ಬರೆದ ಮುಂಬೈನ ಸೆಂಟರ್ ಸೆನ್ಸಾರ್ ಬೋರ್ಡ್ ನಡೆ ಈ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಈಗಾಗ್ಲೇ ಕೆಡಿ ಸಿನಿಮಾ ವೀಕ್ಷಿಸಿ ರಕ್ತಪಾತ ಇರೋದ್ರಿಂದ ಚಿತ್ರಕ್ಕೆ ಎ ಸರ್ಫಿಟಿಕೇಟ್ ನೀಡುವುದಾಗಿ ಹೇಳಿದೆ.
01:54 PM (IST) Apr 13
ಇತ್ತೀಚೆಗಷ್ಟೇ ಬಿಡುಗಡೆಯಾದ ರಜನಿಕಾಂತ್ ಅಭಿನಯದ 'ವೇಟ್ಟೈಯನ್' ಸಿನಿಮಾದಲ್ಲೂ ಅಮಿತಾಭ್ ಅವರ ಅಭಿನಯಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದರ ಜೊತೆಗೆ, ನಿರ್ದೇಶಕ ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ಸಿನಿಮಾ 'ರಾಮಾಯಣ: ಭಾಗ 1' ರಲ್ಲೂ ಬಿಗ್ ಬಿ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಜೋರಾಗಿದೆ.
01:39 PM (IST) Apr 13
01:07 PM (IST) Apr 13
'ಧುರಂಧರ್' ಸಿನಿಮಾದ ಮೂಲಕ ಅಬ್ಬರಿಸುತ್ತಿರುವ ನಿರ್ದೇಶಕ ಆದಿತ್ಯ ಧರ್, ರಾಮ್ ಚರಣ್ ಅವರಿಗೆ ಒಂದು ಬೃಹತ್ ಕಥೆಯನ್ನು ಸಿದ್ಧಪಡಿಸಿದ್ದಾರಂತೆ. ಇದು ಒಂದು ಹೈ-ವೋಲ್ಟೇಜ್ ಮಲ್ಟಿ-ಸ್ಟಾರರ್ ಸಿನಿಮಾವಾಗಿದ್ದು, ಬಾಲಿವುಡ್ನ ಬೇರೆ ಸ್ಟಾರ್ ನಟರು ಕೂಡ ಇದರಲ್ಲಿ ಇರಲಿದ್ದಾರಂತೆ. ಏನೆಲ್ಲಾ ಸುದ್ದಿ ಇದೆ ನೋಡಿ..
12:32 PM (IST) Apr 13
12:05 PM (IST) Apr 13
ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೆ, ನಾಯಕ ಪ್ರಧಾನ ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್ ಧೂಳಿಪಟ ಮಾಡುವ ತಾಕತ್ತು ಅವರಿಗಿದೆ. ಸದ್ಯ ನಯನತಾರಾ ಅವರ ಡೈರಿ ಮುಂದಿನ ಎರಡು-ಮೂರು ವರ್ಷಗಳವರೆಗೆ ಭರ್ತಿಯಾಗಿದ್ದು, ಅಕ್ಷರಶಃ ಅವರು 'ಬ್ಯುಸಿ ಆಕ್ಟ್ರೆಸ್' ಆಗಿದ್ದಾರೆ.
11:42 AM (IST) Apr 13
ವಿವಾಹಿತ ಮಹಿಳೆಯನ್ನು ಆಕೆಯ ಗಂಡನ ಮನೆಯ ಅಡುಗೆ ಮನೆಗೆ ಪ್ರವೇಶಿಸದಂತೆ ತಡೆಯುವುದು ಐಪಿಸಿ ಸೆಕ್ಷನ್ 498A ಅಡಿಯಲ್ಲಿ 'ಮಾನಸಿಕ ಕ್ರೌರ್ಯ' ಎಂದು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠವು ಮಹತ್ವದ ತೀರ್ಪು ನೀಡಿದೆ.
11:25 AM (IST) Apr 13
ಸುಮಾರು 12,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದ ಆಶಾ ಭೋಸ್ಲೆ ಅವರಿಗೆ ದಾದಾಸಾಹೇಬ್ ಫಾಲ್ಕೆ ಸೇರಿದಂತೆ ನೂರಾರು ಗೌರವಗಳು ಸಂದಿವೆ. ಕೇವಲ ಹಿಂದಿಯಷ್ಟೇ ಅಲ್ಲದೆ, ಭಾರತದ ಹಲವು ಭಾಷೆಗಳಲ್ಲಿ, ವಿದೇಶಿ ಭಾಷೆಗಳಲ್ಲಿ ಕೂಡ ಆಶಾ ಭೋಸ್ಲೆ ಹಾಡಿದ್ದರು.
11:21 AM (IST) Apr 13
ಜಾರ್ಖಂಡ್ನಲ್ಲಿ 9 ತಿಂಗಳಿನಿಂದ ನಾಪತ್ತೆಯಾಗಿದ್ದ ಯುವತಿಯ ಪ್ರಕರಣವನ್ನು ಹೈಕೋರ್ಟ್ ಎಚ್ಚರಿಸಿದ 24 ಗಂಟೆಗಳಲ್ಲಿ ಪೊಲೀಸರು ಭೇದಿಸಿದ್ದಾರೆ. ಪ್ರಿಯಕರನಿಂದಲೇ ಹತ್ಯೆಯಾಗಿದ್ದ ಯುವತಿಯ ಅಸ್ಥಿಪಂಜರ ಪತ್ತೆಯಾಗಿದೆ.
10:35 AM (IST) Apr 13
09:21 AM (IST) Apr 13
08:41 AM (IST) Apr 13
08:31 AM (IST) Apr 13
07:56 AM (IST) Apr 13
ಅರುಣಾಚಲ ಪ್ರದೇಶದ 27 ಸ್ಥಳಗಳಿಗೆ ಚೀನಾ ಹೊಸ ಹೆಸರುಗಳನ್ನು ಇಟ್ಟಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತ, ಅರುಣಾಚಲ ಪ್ರದೇಶವು ದೇಶದ ಅವಿಭಾಜ್ಯ ಅಂಗವಾಗಿದ್ದು, ಇಂತಹ ದುರುದ್ದೇಶಪೂರಿತ ಪ್ರಯತ್ನಗಳಿಂದ ವಾಸ್ತವ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.