Published : Jul 03, 2026, 07:37 AM ISTUpdated : Jul 03, 2026, 09:09 PM IST

National News Live: ದಾಳಿ ವೇಳೆ ಸೀಜ್ ಮಾಡಿದ ಖಾಸಗಿ ಜೆಟ್ ಹರಾಜು ಹಾಕಿದ ಇಡಿ, ಕೈಗೆಟುಕವ ದರದಲ್ಲಿ ವಿಮಾನ ಖರೀದಿಗೆ ಅವಕಾಶ

ಸಾರಾಂಶ

ನವದೆಹಲಿ (ಜು.3): ರಾಮಮಂದಿರ ದೇಣಿಗೆ ಕದ್ದ ಆರೋಪಿಗಳ ಪರ ವಕಾಲತ್ತಿನಿಂದ ಹಿಂದೆ ಸರಿದಿದ್ದ ಫೈಜಾಬಾದ್ (ಅಯೋಧ್ಯೆ) ಜಿಲ್ಲಾ ವಕೀಲರು ಗುರುವಾರ ಭಾರೀ ಪ್ರತಿಭಟನೆ ನಡೆಸಿದ್ದಾರೆ ಹಾಗೂ ರಾಮ ಜನ್ಮಭೂಮಿ ಟ್ರಸ್ಟ್‌ನ ನಿರ್ಗಮಿತ ಪ್ರಧಾನ ಕಾರ್ಯದರ್ಶಿ -ಚಂಪತ್ ರಾಯ್, ನಿರ್ಗಮಿತ ಟ್ರಸ್ಟಿ ಅನಿಲ್ ಮಿಶ್ರಾ ಹಾಗೂ ಕನ್ನಡಿಗ ಟ್ರಸ್ಟಿ ಗೋಪಾಲ್ ರಾವ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆಗ್ರಹಿಸಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

09:09 PM (IST) Jul 03

ದಾಳಿ ವೇಳೆ ಸೀಜ್ ಮಾಡಿದ ಖಾಸಗಿ ಜೆಟ್ ಹರಾಜು ಹಾಕಿದ ಇಡಿ, ಕೈಗೆಟುಕವ ದರದಲ್ಲಿ ವಿಮಾನ ಖರೀದಿಗೆ ಅವಕಾಶ

ಐಡಿ ಅಧಿಕಾರಿಗಳು ದಾಳಿ ವೇಳೆ ದುಬಾರಿ ಮೌಲ್ಯದ ಖಾಸಗಿ ಜೆಟ್ ಜಪ್ತಿ ಮಾಡಿದ್ದರು. ಇದೀಗ ಈ ವಿಮಾನವನ್ನು ಇಡಿ ಅಧಿಕಾರಿಗಳು ಮಾರಾಟ ಮಾಡುತ್ತಿದ್ದಾರೆ. ಅತೀ ಕಡಿಮೆ ಬೆಲೆಯಲ್ಲಿ ವಿಮಾನ ಖರೀದಿಗೆ ಅವಕಾಶ ನೀಡಿದೆ.

 

Read Full Story

06:48 PM (IST) Jul 03

36 ವರ್ಷಗಳಲ್ಲಿ 300+ ಹೋಟೆಲ್‌ಗಳಿಗೆ ನಾಮ! ಚಾರ್ಲ್ಸ್ ಶೋಭರಾಜ್ ಹಾದಿ ತುಳಿದಿದ್ದ ವೃದ್ಧನ ಕಥೆ ಭಯಾನಕ

ಚಾರ್ಲ್ಸ್ ಶೋಭರಾಜ್‌ನಿಂದ ಪ್ರೇರಿತನಾಗಿ, 69 ವರ್ಷದ ಬಿಂಗ್ಸನ್ ಜಾನ್ ಎಂಬ ವೃದ್ಧ ಕಳೆದ ಮೂರು ದಶಕಗಳಲ್ಲಿ ದೇಶದ 300ಕ್ಕೂ ಹೆಚ್ಚು ಐಷಾರಾಮಿ ಹೋಟೆಲ್‌ಗಳಿಗೆ ವಂಚಿಸಿದ್ದಾನೆ. ರಾಯಪುರದ ಹೋಟೆಲ್‌ವೊಂದಕ್ಕೆ ಮೋಸ ಮಾಡಿ ಪರಾರಿಯಾಗಿದ್ದ ಈತನನ್ನು ಪೊಲೀಸರು ಭುವನೇಶ್ವರದಲ್ಲಿ ಬಂಧಿಸಿದ್ದಾರೆ.
Read Full Story

06:46 PM (IST) Jul 03

Nagabandham X Review - ನಭಾ, ಕೆಜಿಎಫ್ ಗರುಡ 'ನಾಗಬಂಧಂ'ಗೆ ಪ್ರೇಕ್ಷಕರು ಏನಂದ್ರು? ಇಲ್ಲಿದೆ ಟ್ವಿಟರ್ ವಿಮರ್ಶೆ

Nagabandham Twitter Review: ವಿರಾಟ್ ಕರ್ಣ ನಟನೆಯ 'ನಾಗಬಂಧಂ' ಸಿನಿಮಾ ಜುಲೈ 3 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಿದೆ.

Read Full Story

06:44 PM (IST) Jul 03

ಅಮೆರಿಕದಲ್ಲಿ ಶಾರುಖ್ ಖಾನ್​​ ಮಾಲೀಕತ್ವದ ಸ್ಟೇಡಿಯಂ - 200 ಕೋಟಿ ರೂ. ಕ್ರೀಡಾಂಗಣದಲ್ಲಿ ಏನೆಲ್ಲಾ ಇವೆ ನೋಡಿ

ನೈಟ್ ರೈಡರ್ಸ್ ಗ್ರೂಪ್‌ನ ಸಹ-ಮಾಲೀಕರಾದ ಶಾರುಖ್ ಖಾನ್, ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ 'ಎಲ್ಎ ನೈಟ್ ರೈಡರ್ಸ್' ಕ್ರಿಕೆಟ್ ಮೈದಾನ ನಿರ್ಮಿಸಿದ್ದಾರೆ. ಅಂತರರಾಷ್ಟ್ರೀಯ ಗುಣಮಟ್ಟದ ಪಿಚ್‌ಗಳು, ಫ್ಲಡ್‌ಲೈಟ್‌ಗಳು ಮತ್ತು 5,000 ಆಸನ ಸಾಮರ್ಥ್ಯ ಹೊಂದಿದೆ

Read Full Story

06:27 PM (IST) Jul 03

ರಿಕ್ಷಾ ಹತ್ತಿದ 13ರ ಬಾಲಕಿಯ ಮಾರಾಟ ಮಾಡಿದ ಡ್ರೈವರ್​! 30 ಕಾಮುಕರ ಅಟ್ಟಹಾಸ - 4 ಹೋಟೆಲ್​ ನೆಲಸಮ

ರಾಜಸ್ಥಾನದ ಶ್ರೀಗಂಗಾನಗರದಲ್ಲಿ, ಆಟೋ ಚಾಲಕನೊಬ್ಬ 13 ವರ್ಷದ ಬಾಲಕಿಯನ್ನು ₹1000ಕ್ಕೆ ಹೋಟೆಲ್‌ಗೆ ಮಾರಾಟ ಮಾಡಿದ್ದಾನೆ. ಅಲ್ಲಿ ಐದು ದಿನಗಳ ಕಾಲ 30ಕ್ಕೂ ಹೆಚ್ಚು ಮಂದಿ ಆಕೆಯ ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆಸಿದ್ದಾರೆ. ಈ ಘೋರ ಕೃತ್ಯದ ನಂತರ, ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಆಡಳಿತವು ಆರೋಪಕ್ಕೆ ಗುರಿಯಾದ ಹೋಟೆಲ್‌ಗಳನ್ನು ಬುಲ್ಡೋಜರ್ ಬಳಸಿ ಕೆಡವಿದೆ.

Read Full Story

05:29 PM (IST) Jul 03

ನಾನು ಭಾರತೀಯ, ಪೌರತ್ವ ಸಾಬೀತುಪಡಿಸಲು 16 ದಾಖಲೆ ನೀಡಿದರೂ ವಿದೇಶಿ ಎಂದು ಹೈಕೋರ್ಟ್ ತೀರ್ಪು

ಅಮಿನಲ್ ಹಖ್ ತಾನು ಭಾರತೀಯ ಎಂದು ಸಾಬೀತು ಪಡಿಸಲು ಕೋರ್ಟ್‌ಗೆ 16 ದಾಖಲೆ ನೀಡಿದ್ದಾರೆ. ಆದರೆ ಹೈಕೋರ್ಟ್ ವಿದೇಶಿ ಎಂದು ಐತಿಹಾಸಿಕ ತೀರ್ಪು ನೀಡಿದೆ. ಕೋರ್ಟ್ ತೀರ್ಪಿಗೆ ಭಾರಿ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಏನಿದು ಪ್ರಕರಣ?

Read Full Story

05:21 PM (IST) Jul 03

ಗರ್ಭಿಣಿಯರಿಗೆ ಟ್ರಂಪ್​ ಶಾಕ್! ಅಮೆರಿಕದ ಕನಸಿಗೆ ಬಿತ್ತು ಬ್ರೇಕ್​- ಕೋರ್ಟ್​ ತೀರ್ಪಿನ ವಿರುದ್ಧ No Entry Plan

ಅಮೆರಿಕದಲ್ಲಿ ಮಗುವಿಗೆ ಜನ್ಮ ನೀಡಿ ಪೌರತ್ವ ಪಡೆಯುವ 'ಪ್ರೆಗ್ನೆನ್ಸಿ ಟೂರಿಸಂ' ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಜನ್ಮಸಿದ್ಧ ಪೌರತ್ವವನ್ನು ರದ್ದುಗೊಳಿಸಲು ವಿಫಲರಾದ ಡೊನಾಲ್ಡ್ ಟ್ರಂಪ್, ಇದೀಗ ಹೆರಿಗೆಗಾಗಿ ಅಮೆರಿಕಕ್ಕೆ ಬರುವ ಗರ್ಭಿಣಿಯರನ್ನು ಗುರಿಯಾಗಿಸಿಕೊಂಡು ವೀಸಾ ವಂಚನೆಯಂತಹ ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ.
Read Full Story

04:58 PM (IST) Jul 03

'ವೈಭವ್‌ ಸೂರ್ಯವಂಶಿ ಭವಿಷ್ಯ ಹಾಳು ಮಾಡಬೇಡಿ' - ಟೀಂ ಇಂಡಿಯಾ ಕೋಚ್ ಮೇಲೆ ತಿರುಗಿಬಿದ್ದ ಆರ್‌ಸಿಬಿ ಆಪತ್ಬಾಂಧವ..!

15 ವರ್ಷದ ಪ್ರತಿಭಾನ್ವಿತ ಆಟಗಾರ ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಅವಕಾಶ ನೀಡದ ಬಗ್ಗೆ ಚರ್ಚೆಗಳು ಜೋರಾಗಿವೆ. ವೈಭವ್ ಅವರನ್ನು ಬೆಂಚ್ ಕಾಯಿಸುತ್ತಿರುವ ಕೋಚ್ ನಿರ್ಧಾರದ ವಿರುದ್ಧ ಎಬಿ ಡಿವಿಲಿಯರ್ಸ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಕ್ರಿಕೆಟ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
Read Full Story

04:45 PM (IST) Jul 03

ಗಂಡ ತುಂಬಾ ಒಳ್ಳೆಯವ, ಆದ್ರೆ ತುಂಬಾ ಗೊರಕೆ ಹೊಡೀತಾನೆ - ಡಿವೋರ್ಸ್​ ಕೋರಿ ಪತ್ನಿ ಹೈಕೋರ್ಟ್​ ಮೊರೆ

ಭೋಪಾಲ್‌ನಲ್ಲಿ ಗಂಡನ ತೀವ್ರ ಗೊರಕೆಯಿಂದ ಬೇಸತ್ತ ಪತ್ನಿ ವಿಚ್ಛೇದನಕ್ಕೆ ಮುಂದಾದ ನೈಜ ಘಟನೆಯನ್ನು ಈ ಲೇಖನ ವಿವರಿಸುತ್ತದೆ. ಗೊರಕೆಯು ಕೇವಲ ಒಂದು ಅಭ್ಯಾಸವಲ್ಲ, ಅದು ಸ್ಲೀಪ್ ಅಪ್ನಿಯಾ ಮತ್ತು ಹೃದಯಾಘಾತದಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು ಎಂಬುದನ್ನು ಇದು ಎತ್ತಿ ತೋರಿಸುತ್ತದೆ.  

Read Full Story

04:09 PM (IST) Jul 03

ಭಾರತದ ಮೊದಲ ಪೆಟ್ರೋಲ್ ಬಂಕ್‌ನ ರೋಚಕ ಇತಿಹಾಸ, ಅಂದು ಇಂಧನ ಕೈನಲ್ಲೇ ಹಾಕಲಾಗ್ತಿತ್ತು! ಡ್ರಮ್‌ ನಲ್ಲಿ ಇಡಲಾಗ್ತಿತ್ತು

ಭಾರತದ ಮೊದಲ ಪೆಟ್ರೋಲ್ ಬಂಕ್ 1928ರಲ್ಲಿ ಮುಂಬೈನಲ್ಲಿ 'ಬರ್ಮಾ ಶೆಲ್' ಕಂಪನಿಯಿಂದ ಸ್ಥಾಪನೆಯಾಯಿತು. ಅಂದು ಡ್ರಮ್‌ಗಳಿಂದ ಇಂಧನ ತುಂಬುವ ಕಷ್ಟಕರ ಪದ್ಧತಿಯಿಂದ, ಹಸ್ತಚಾಲಿತ ಪಂಪ್‌ಗಳ ಮೂಲಕ ವ್ಯವಸ್ಥಿತ ಮಾರಾಟಕ್ಕೆ ನಾಂದಿ ಹಾಡಲಾಯಿತು.  

Read Full Story

03:53 PM (IST) Jul 03

Sathish Ninasam-Rachita Ram - ಸತೀಶ್-ರಚಿತಾ ಜೋಡಿಯ ಟಿಪಿಕಲ್ ನಾಟಿ ಸ್ಟೈಲ್ ಸಿನಿಮಾ 'ಅಯೋಗ್ಯ 2' ರಿಲೀಸ್‌ಗೆ ಕೌಂಟ್‌ಡೌನ್!

ಮುನೇಗೌಡ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಅಯೋಗ್ಯ-2 ಪಕ್ಕಾ ಹಳ್ಳಿ ಸೊಗಡಿನ, ಟಿಪಿಕಲ್ ನಾಟಿ ಸ್ಟೈಲ್ ಸಿನಿಮಾವಾಗಿದ್ದು, ಮತ್ತದೇ ಮಂಡ್ಯದ ಸುತ್ತಮುತ್ತ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡಿದೆ. ಸದ್ಯ ಈ ಸಿನಿಮಾದ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ಸದ್ಯವೇ ತೆರೆಗೆ ಕಾಲಿಡಲಿದೆ.

Read Full Story

03:41 PM (IST) Jul 03

ಅಂತಾರಾಷ್ಟ್ರೀಯ T20 ಪಂದ್ಯದಲ್ಲಿ ಒಂದೇ ಒಂದು ಪ್ಲೇಯರ್ ಆಫ್‌ ದಿ ಮ್ಯಾಚ್ ಪ್ರಶಸ್ತಿ ಗೆಲ್ಲದ ಟಾಪ್-5 ದಿಗ್ಗಜ ಕ್ರಿಕೆಟಿಗರಿವರು!

ಬೆಂಗಳೂರು: ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಟಿ20 ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಪಂದ್ಯದ ದಿಕ್ಕು ಬದಲಾಗಿ ಹೋಗುತ್ತೆ. ಆದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ 'ಪ್ಲೇಯರ್ ಆಫ್‌ ದಿ ಮ್ಯಾಚ್' ಪ್ರಶಸ್ತಿ ಗೆಲ್ಲದ ಟಾಪ್ 5 ದಿಗ್ಗಜ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.

 

Read Full Story

03:29 PM (IST) Jul 03

ಹೊಟೆಲ್ ರೂಂ, ವಿಡಿಯೋ ಕಾಲ್,ಫಾರುಖ್ ಜೊತೆ ಮಾತನಾಡುತ್ತಲೇ ದುರಂತ ಅಂತ್ಯಕಂಡ ಯುವತಿ ರೇಣುಕಾ

ಹೊಟೆಲ್ ರೂಂಗೆ ಬಂದ 26ರ ಹರೆಯದ ಯುವತಿ ರೇಣುಕಾ ಗೆಳೆಯನಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾಳೆ. ಮಾತನಾಡುತ್ತಿದ್ದ ಯುವತಿ ಬುದುಕು ಅಂತ್ಯಗೊಳಿಸಿದ್ದಾರೆ. ಈ ದುರಂತಕ್ಕೆ ಕಾರಣವೇನು?

Read Full Story

03:04 PM (IST) Jul 03

ಬಾಲ್ಯದ ಕಹಿ ನೆನಪುಗಳು ನಿಮ್ಮನ್ನ ಹೇಗೆ ಕಾಡುತ್ತವೆ? ಮೈಗ್ರೇನ್‌ನಿಂದ ಗಂಭೀರ ಕಾಯಿಲೆವರೆಗೆ ಕನೆಕ್ಷನ್!

ಬಾಲ್ಯದ ನೆನಪುಗಳು ಕೆಲವರಿಗೆ ಕಹಿ, ಇನ್ನ ಕೆಲವರಿಗೆ ಸುಮಧುರ. ಕೆಲವು ಮಕ್ಕಳಿಗೆ ಬಾಲ್ಯ ಎನ್ನುವುದು ಭಯ, ಹಿಂಸೆ ಅಥವಾ ನಿರ್ಲಕ್ಷ್ಯದ ಕರಾಳ ಅಧ್ಯಾಯ. ಈ ಕಹಿ ಘಟನೆಗಳು ಕೇವಲ ನೆನಪುಗಳಾಗಿ ಉಳಿಯಲ್ಲ. ಬದಲಾಗಿ ಅವರು ದೊಡ್ಡವರಾದ ಮೇಲೆ ಮೈಗ್ರೇನ್, ಬೆನ್ನು ನೋವು , ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ

Read Full Story

02:49 PM (IST) Jul 03

ಜೂನ್‌ ಮುಗಿದ್ರೂ ಈ ವರ್ಷ 40% ಮಳೆ ಕಡಿಮೆ; ಜುಲೈ, ಆಗಸ್ಟ್‌ನಲ್ಲಿ ಮಳೆ ಆಗುತ್ತಾ? ಸಮಸ್ಯೆ ತಂದಿಟ್ಟ El Nino

Rain in india this week: ಭಾರತದಲ್ಲಿ ಕೃಷಿಗೆ ಮುಂಗಾರು ಮಳೆ ತುಂಬ ಮುಖ್ಯ. ಜೂನ್ ತಿಂಗಳ ಕೊನೆ ಆದರೂ ಕೂಡ ಹೆಚ್ಚು ಮಳೆ ಆಗಿಲ್ಲ. ನಮ್ಮ ದೇಶದಲ್ಲಿ ಶೇಕಡಾ 40 ರಷ್ಟು ಮಳೆ ಕೊರತೆಯಾಗಿದೆ. 'ಎಲ್ ನಿನೋ' (El Nino - ಜಾಗತಿಕ ಹವಾಮಾನ ಬದಲಾವಣೆ) ಪ್ರಭಾವದಿಂದಾಗಿ ಮಳೆ ಮತ್ತಷ್ಟು ಕಡಿಮೆಯಾಗಲಿದೆ.

Read Full Story

02:44 PM (IST) Jul 03

Operation Amistad - ವೆನಿಜುವೆಲಾದಲ್ಲಿ ಭಾರತದ 'ಆಪರೇಷನ್ ಅಮಿಸ್ಟಾಡ್'ಗೆ ಭಾರಿ ಮೆಚ್ಚುಗೆ!

ಭೂಕಂಪದಿಂದ ತತ್ತರಿಸಿದ ವೆನಿಜುವೆಲಾದಲ್ಲಿ ಭಾರತ 'ಆಪರೇಷನ್ ಅಮಿಸ್ಟಾಡ್' ಕಾರ್ಯಾಚರಣೆ ನಡೆಸುತ್ತಿದೆ. ಭಾರತೀಯ ಸೇನೆಯ ಫೀಲ್ಡ್ ಆಸ್ಪತ್ರೆಯು ಅಲ್ಲಿನ ಜನರಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
Read Full Story

02:22 PM (IST) Jul 03

Last Indian Railway Station - ಭಾರತದ ಕೊನೆಯ ರೈಲ್ವೆ ನಿಲ್ದಾಣವಿದು! ಇಲ್ಲಿಂದ ಶುರುವಾಗುತ್ತೆ ಇನ್ನೊಂದು ದೇಶ

ಭಾರತೀಯ ರೈಲ್ವೆ ದೇಶದ ಪ್ರಮುಖ ಸಾರಿಗೆ ವ್ಯವಸ್ಥೆ. ನಮ್ಮ ದೇಶದಲ್ಲಿ ಸಾವಿರಾರು ರೈಲ್ವೆ ನಿಲ್ದಾಣಗಳಿವೆ. ಆದರೆ, ಭಾರತದ ಕೊನೆಯ ರೈಲ್ವೆ ನಿಲ್ದಾಣ ಯಾವುದು ಗೊತ್ತೇ? ಆ ನಿಲ್ದಾಣದ ನಂತರ ಬೇರೊಂದು ದೇಶವೇ ಆರಂಭವಾಗುತ್ತದೆ.

Read Full Story

01:43 PM (IST) Jul 03

ಎರಡು ವಾರದಲ್ಲೇ ಭಾರಿ ಏರಿಕೆ ಕಂಡ ಚಿನ್ನದ ದರ - ಬೆಂಗಳೂರಿನಲ್ಲಿ ರೇಟ್​ ಎಷ್ಟಾಗಿದೆ ನೋಡಿ

ಜೂನ್‌ನಲ್ಲಿ ಕುಸಿತ ಕಂಡಿದ್ದ ಚಿನ್ನದ ದರವು ಕಳೆದ ಹತ್ತು ದಿನಗಳಲ್ಲಿ ಮತ್ತೆ ಗಣನೀಯವಾಗಿ ಏರಿಕೆಯಾಗಿದೆ. ಯುಎಸ್ ಫೆಡರಲ್ ರಿಸರ್ವ್ ಹೇಳಿಕೆಯ ನಂತರ, 24, 22, ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಗಳು ಭಾರತದಾದ್ಯಂತ, ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚಳವನ್ನು ಕಂಡಿವೆ.
Read Full Story

01:31 PM (IST) Jul 03

ಭಾರತ, ಮಲೇಷ್ಯಾ, ಸಿಂಗಾಪುರ ನಡುವೆ ಬೃಹತ್ ಕಡಲಾಳದ ಕೇಬಲ್ ಯೋಜನೆ; ಮೈಕ್ರೋಸಾಫ್ಟ್, ಟಾಟಾದಿಂದ ಜಂಟಿ ನಿರ್ಮಾಣ

ಮೈಕ್ರೋಸಾಫ್ಟ್, ಟಾಟಾ ಕಮ್ಯುನಿಕೇಷನ್ಸ್ ಒಳಗೊಂಡ ಜಾಗತಿಕ ಒಕ್ಕೂಟವು ಭಾರತ, ಮಲೇಷ್ಯಾ ಮತ್ತು ಸಿಂಗಾಪುರವನ್ನು ಸಂಪರ್ಕಿಸುವ 'ಐ-2ಎಸ್‌ಇಎ' ಎಂಬ ಹೊಸ ಸಬ್‌ಮರೀನ್ ಕೇಬಲ್ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. .

Read Full Story

01:15 PM (IST) Jul 03

ಜು.4ರಿಂದ Amazon Prime Day Sale, ಭರ್ಜರಿ ಆಫರ್‌ನೊಂದಿಗೆ ನಿಮ್ಮ ನೆಚ್ಚಿನ 'ಯೆಜ್ಡಿ ಸ್ಕ್ರಾಂಬ್ಲರ್' ಎಂಟ್ರಿ!

ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್, ತನ್ನ ಜನಪ್ರಿಯ 'ಯೆಜ್ಡಿ ಸ್ಕ್ರಾಂಬ್ಲರ್' ಬೈಕ್ ಅನ್ನು ಅಮೆಜಾನ್ ಪ್ರೈಮ್ ಡೇ 2026 ಸೇಲ್‌ನಲ್ಲಿ ಮಾರಾಟಕ್ಕಿಟ್ಟಿದೆ. ಜುಲೈ 4 ರಿಂದ 6 ರವರೆಗೆ ಲಭ್ಯವಿರುವ ಈ ಬೈಕ್ ಅನ್ನು ಗ್ರಾಹಕರು ನೋ ಕಾಸ್ಟ್ ಇಎಂಐ ಮತ್ತು ಇನ್‌ಸ್ಟಂಟ್ ಡಿಸ್ಕೌಂಟ್‌ನಂತಹ ಆಕರ್ಷಕ ಆಫರ್‌ .

Read Full Story

01:07 PM (IST) Jul 03

ಟೆಲಿಗ್ರಾಮ್‌ಗೆ ಮತ್ತೊಂದು ಬಿಗ್ ಶಾಕ್, ಮತ್ತೇನು ಮಾಡ್ತು ಕೇಂದ್ರ ಸರ್ಕಾರ?

Username ಫೀಚರ್ ವಿಚಾರವಾಗಿ ಕೇಂದ್ರ ಸರ್ಕಾರವು ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸಿಗ್ನಲ್ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ. ಈ ವೈಶಿಷ್ಟ್ಯದಿಂದಾಗಬಹುದಾದ ಆನ್‌ಲೈನ್ ವಂಚನೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸರ್ಕಾರ, ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ವಿವರಣೆ ಕೇಳಿದೆ. ಆದರೆ, ಈ ಫೀಚರ್ ಐಚ್ಛಿಕವಾಗಿದ್ದು, ಬಳಕೆದಾರರ ಖಾಸಗಿತನವನ್ನು ರಕ್ಷಿಸುತ್ತದೆ ಎಂದು ವಾಟ್ಸಾಪ್ ಸ್ಪಷ್ಟಪಡಿಸಿದೆ.

Read Full Story

12:52 PM (IST) Jul 03

Samantha-Anushka Shetty - ಅನುಷ್ಕಾ ಶೆಟ್ಟಿ ಹೆಸರಿನಲ್ಲಿದ್ದ ದಾಖಲೆ ಅಳಿಸಿಹಾಕಿ ಹೊಸ ದಾಖಲೆ ಬರೆದ ಸಮಂತಾ!

ಸಮಂತಾ ರುತ್ ಪ್ರಭು ಅಭಿನಯದ 'ಮಾ ಇಂಟಿ ಬಂಗಾರಂ' ಸಿನಿಮಾ ಅತಿ ಹೆಚ್ಚು ಗಳಿಕೆ ಮಾಡಿದ ಮಹಿಳಾ ಪ್ರಧಾನ ತೆಲುಗು ಚಿತ್ರವಾಗಿ ಹೊಸ ದಾಖಲೆ ಬರೆದಿದೆ. ಈ ಚಿತ್ರವು ಅಧಿಕೃತವಾಗಿ ಅನುಷ್ಕಾ ಶೆಟ್ಟಿ ಅಭಿನಯದ 'ಅರುಂಧತಿ' ಸಿನಿಮಾವನ್ನು ಮೀರಿಸಿದೆ. ಎಲ್ಲಿ ಎಷ್ಟು ಕಲೆಕ್ಷನ್?

Read Full Story

12:29 PM (IST) Jul 03

Ram mandir Donation theft case - ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ - ಆರೋಪಿ ಲವ್‌ಕುಶ್ ಮನೆಗೆ ಬುಲ್ಡೋಜರ್‌ ಭೀತಿ!

ಅಯೋಧ್ಯಾ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದ ಪ್ರಮುಖ ಆರೋಪಿ ಲವ್‌ಕುಶ್ ಮಿಶ್ರಾ ನಿರ್ಮಿಸುತ್ತಿರುವ ಐಷಾರಾಮಿ ಕಟ್ಟಡಕ್ಕೆ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ. ₹20 ಸಾವಿರ ಸಂಬಳ ಪಡೆಯುವ ಆರೋಪಿ ₹1.5 ಕೋಟಿ ಮೌಲ್ಯದ ಮನೆ ನಿರ್ಮಿಸುತ್ತಿದ್ದು, ಹಣದ ಮೂಲದ ವಿಚಾರವಾಗಿ ನೋಟಿಸ್ ಜಾರಿ. 

Read Full Story

12:22 PM (IST) Jul 03

ಮನೆಯಲ್ಲೇ ಕುಳಿತು SIR ಫಾರ್ಮ್​ ತುಂಬೋದು ಹೇಗೆ? ಮತದಾರರ ಪರಿಷ್ಕರಣೆಯ ಹಂತ ಹಂತದ ಮಾಹಿತಿ

ಕರ್ನಾಟಕದಲ್ಲಿ 24 ವರ್ಷಗಳ ನಂತರ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಆರಂಭವಾಗಿದೆ. ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ತೆಗೆದುಹಾಕುವುದನ್ನು ತಪ್ಪಿಸಲು, ಜುಲೈ 29ರೊಳಗೆ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಎನ್ಯುಮರೇಶನ್‌ ಅರ್ಜಿಯನ್ನು ಕಡ್ಡಾಯವಾಗಿ ತುಂಬಬೇಕು.
Read Full Story

12:14 PM (IST) Jul 03

RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಮಾರುಕಟ್ಟೆಗೆ ಬರ್ತಿದೆ ವಿಶೇಷ ಫೋನ್! ಬೆಲೆ ಎಷ್ಟು?

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ನಥಿಂಗ್, ತನ್ನ ಮುಂಬರುವ Nothing Phone 4b ಸರಣಿಯಲ್ಲಿ ಆರ್‌ಸಿಬಿ ಆಧಾರಿತ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆರ್‌ಸಿಬಿ ತಂಡದ ಬಣ್ಣಗಳು, ಲೋಗೋ ಮತ್ತು ವಿಶೇಷ ಥೀಮ್‌ಗಳನ್ನು ಹೊಂದಿರುವ ಈ ಫೋನ್, ಕ್ರಿಕೆಟ್ ಪ್ರೇಮಿಗಳಿಗೆ ವಿಶಿಷ್ಟ ಅನುಭವ ನೀಡಲಿದೆ. ಇದರ ಹಾರ್ಡ್‌ವೇರ್ ಹಾಗೂ ತಾಂತ್ರಿಕ ಸಾಮರ್ಥ್ಯಗಳು ಸಾಮಾನ್ಯ ಆವೃತ್ತಿಯಂತೆಯೇ ಇರಲಿವೆ.
Read Full Story

12:03 PM (IST) Jul 03

90 ವರ್ಷದ ಅಜ್ಜಿಯ ಆಸ್ತಿ ಮೇಲೆ ಪ್ರಿಯಾಂಕಾ ಗಾಂಧಿ ಕಣ್ಣು, ವಾದ್ರಾ ಕುಟುಂಬದ ಮೇಲೆ ಗಂಭೀರ ಆರೋಪ

ಉತ್ತರಾಖಂಡದಲ್ಲಿ 90 ವರ್ಷದ ವೃದ್ಧೆಯೊಬ್ಬರ ಜಮೀನನ್ನು ಕಾನೂನುಬಾಹಿರವಾಗಿ ವಶಪಡಿಸಿಕೊಳ್ಳಲು ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ಕುಟುಂಬ ಯತ್ನಿಸುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ವಾದ್ರಾ ಕುಟುಂಬದ ಪರವಾಗಿ ಸ್ಥಳೀಯ ಕಾಂಗ್ರೆಸ್ ಶಾಸಕರು ವೃದ್ಧೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ದೂರಿದೆ.
Read Full Story

08:37 AM (IST) Jul 03

ಅಯೋಧ್ಯ ಅಕ್ರಮ - ಬೀದಿಗಿಳಿದ ವಕೀಲರು; ಕನ್ನಡಿಗ ಗೋಪಾಲ್ ಸೇರಿ ಮೂವರ ವಿರುದ್ಧ ಎಫ್‌ಐಆರ್‌ಗೆ ಪಟ್ಟು! ಪ್ರತಿಭಟನೆ ವೇಳೆ ಜೈ ಶ್ರೀರಾಂ ಘೋಷಣೆ

ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಆರೋಪಕ್ಕೆ ಸಂಬಂಧಿಸಿದಂತೆ, ಫೈಜಾಬಾದ್‌ ಜಿಲ್ಲಾ ವಕೀಲರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕನ್ನಡಿಗ ಗೋಪಾಲ್ ರಾವ್ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆಗ್ರಹ. ಪ್ರತಿಭಟನೆ ವೇಳೆ ಬ್ಯಾರಿಕೇಡ್ ಜಿಗಿದು ಜೈ ಶ್ರೀರಾಂ ಘೋಷಣೆ. 

Read Full Story

08:27 AM (IST) Jul 03

'ಟೀಂ ಇಂಡಿಯಾ ಕೇವಲ...' - ಐರ್ಲೆಂಡ್ ಎದುರಿನ ಸೋಲಿನ ಬೆನ್ನಲ್ಲೇ ಭಾರತ ತಂಡದ ಬಗ್ಗೆ ಪಾಕ್ ಕೋಚ್ ಅಚ್ಚರಿಯ ಹೇಳಿಕೆ..!

ಬೆಂಗಳೂರು: ಇತ್ತೀಚೆಗಷ್ಟೇ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ಟಿ20 ತಂಡವು ಕ್ರಿಕೆಟ್ ಶಿಶು ಐರ್ಲೆಂಡ್ ಎದುರು ಟಿ20 ಸರಣಿ ವೈಟ್‌ವಾಷ್ ಅನುಭವಿಸಿತ್ತು. ಇದರ ನಡುವೆ ಪಾಕಿಸ್ತಾನ ಕ್ರಿಕೆಟ್ ಹೆಡ್ ಕೋಚ್ ಮೈಕ್ ಹೆಸ್ಸನ್, ಟೀಂ ಇಂಡಿಯಾ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ.

 

Read Full Story

08:09 AM (IST) Jul 03

ಬೆಂಗಳೂರಿನ ನರ್ಸ್‌ ಸೇರಿ ಇಬ್ಬರಿಂದ ಹೃದಯಾಘಾತ ಆದವನ ರಕ್ಷಣೆ

ಕೇರಳದ ಎರ್ನಾಕುಲಂನಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಹೃದಯಾಘಾತಕ್ಕೊಳಗಾದ ವ್ಯಕ್ತಿಯೊಬ್ಬರ ಜೀವವನ್ನು ಇಬ್ಬರು ದಾದಿಯರು ಸಮಯಪ್ರಜ್ಞೆಯಿಂದ ಉಳಿಸಿದ್ದಾರೆ. ಬೆಂಗಳೂರಿನ ನರ್ಸಿಂಗ್ ವಿದ್ಯಾರ್ಥಿನಿ ಮತ್ತು ಸ್ಥಳೀಯ ಆಸ್ಪತ್ರೆಯ ನರ್ಸ್, ಕೆಎಸ್‌ಆರ್‌ಟಿಸಿ ಬಸ್‌ನಿಂದ ಇಳಿದು ಬಂದು ಸಿಪಿಆರ್ ನೀಡಿ ವ್ಯಕ್ತಿಯ ಪ್ರಾಣ ರಕ್ಷಿಸಿದ್ದಾರೆ.
Read Full Story

07:56 AM (IST) Jul 03

FIFA World Cup 2026: 0-2ರಿಂದ 3-2ಕ್ಕೆ! ಸೆನೆಗಲ್‌ಗೆ ಶಾಕ್ ನೀಡಿ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟ ಬೆಲ್ಜಿಯಂ

ಸೆನೆಗಲ್‌ ವಿರುದ್ಧ 0-2 ಗೋಲುಗಳಿಂದ ಹಿನ್ನಡೆಯಲ್ಲಿದ್ದ ಬೆಲ್ಜಿಯಂ, ಪಂದ್ಯದ ಕೊನೆಯ ನಿಮಿಷಗಳಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್‌ ಮಾಡಿ 3-2 ಅಂತರದಲ್ಲಿ ಜಯಗಳಿಸಿ ಪ್ರಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿತು. ಇನ್ನೊಂದು ಪಂದ್ಯದಲ್ಲಿ, ಬೋಸ್ನಿಯಾ ವಿರುದ್ಧ 2-0 ಅಂತರದಲ್ಲಿ ಗೆದ್ದ ಅಮೆರಿಕ ಕೂಡ ಅಂತಿಮ 16ರ ಸುತ್ತಿಗೆ ಲಗ್ಗೆ ಇಟ್ಟಿದೆ.

 

Read Full Story

More Trending News