LIVE NOW
Published : Mar 31, 2026, 07:04 AM ISTUpdated : Mar 31, 2026, 10:22 AM IST

India Latest News Live: ಅಮೆರಿಕಾ ಯುದ್ಧ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧಿಸಿದ ಸ್ಪೇನ್ - ಇರಾನ್ ಯುದ್ಧ ಬೆಂಬಲಿಸದ ನ್ಯಾಟೋ ರಾಷ್ಟ್ರಗಳ ವಿರುದ್ಧ ಅಮೆರಿಕಾ ಕಿಡಿ

ಸಾರಾಂಶ

ಟೆಹ್ರಾನ್‌: ಇರಾನ್‌ಗೆ ಸಹಾಯಾರ್ಥವಾಗಿ ಭಾರತ ನೀಡುತ್ತಿರುವ ಮಾನವೀಯ ನೆರವನ್ನು ಸಂಗ್ರಹಿಸಲು ಈ ವಾರಾಂತ್ಯ ಭಾರತಕ್ಕೆ ಬರಲಿದ್ದ ಇರಾನ್‌ನ ವಿಮಾನವೊಂದರ ಮೇಲೆ ಅಮೆರಿಕ ದಾಳಿ ನಡೆಸಿದೆ. ಮಹಾನ್‌ ಏರ್‌ಲೈನ್ಸ್‌ಗೆ ಸೇರಿದ ಈ ವಿಮಾನವು ಈ ವಾರದ ಅಂತ್ಯದಲ್ಲಿ ಭಾರತಕ್ಕೆ ಬರಲು ನಿಗದಿಯಾಗಿತ್ತು. ಅದಕ್ಕೂ ಮುನ್ನವೇ ಅಮೆರಿಕದ ದಾಳಿಗೆ ಬಲಿಯಾಗಿದೆ. ಇತ್ತೀಚೆಗೆ ಕಾಶ್ಮೀರಿಗಳು ಇರಾನ್‌ಗೆ ಹಣ, ಆಭರಣಗಳು ಮತ್ತು ಇತರ ವಸ್ತುಗಳನ್ನು ದಾನ ಮಾಡಿದ್ದರು. ಅದಕ್ಕೆ ಇರಾನ್‌ ಧನ್ಯವಾದವನ್ನೂ ಅರ್ಪಿ

us airstrike mashhad airport iran plane india humanitarian mission damage war crime claim news

10:22 AM (IST) Mar 31

ಅಮೆರಿಕಾ ಯುದ್ಧ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧಿಸಿದ ಸ್ಪೇನ್ - ಇರಾನ್ ಯುದ್ಧ ಬೆಂಬಲಿಸದ ನ್ಯಾಟೋ ರಾಷ್ಟ್ರಗಳ ವಿರುದ್ಧ ಅಮೆರಿಕಾ ಕಿಡಿ

ಅಮೆರಿಕಾ-ಇಸ್ರೇಲ್‌ನ ಇರಾನ್ ಮೇಲಿನ ಯುದ್ಧ ಮುಂದುವರಿದಿದ್ದು, ಸ್ಪೇನ್‌ನಂತಹ ನ್ಯಾಟೋ ಮಿತ್ರರಾಷ್ಟ್ರಗಳು ಬೆಂಬಲ ನಿರಾಕರಿಸಿವೆ. ಇದರಿಂದ ಅಸಮಾಧಾನಗೊಂಡಿರುವ ಟ್ರಂಪ್, ನ್ಯಾಟೋ ವಿರುದ್ಧ ಕಿಡಿಕಾರಿದ್ದಾರೆ. ಈ ನಡುವೆ, ಪರ್ಶಿಯನ್ ಕೊಲ್ಲಿಯಲ್ಲಿ 18 ಭಾರತೀಯ ಹಡಗುಗಳು ಸಿಲುಕಿಕೊಂಡಿವೆ.
Read Full Story

10:21 AM (IST) Mar 31

ಪಾಕ್‌ ಲೀಗ್‌ನಲ್ಲಿ ಮತ್ತೆ ವಿವಾದ - ಫಖರ್ ಜಮಾನ್‌ರಿಂದ ಬಾಲ್ ಟ್ಯಾಂಪರಿಂಗ್? ವಿಡಿಯೋ ವೈರಲ್

ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ (ಪಿಎಸ್‌ಎಲ್‌) ಚೆಂಡು ವಿರೂಪದ ಗಂಭೀರ ಆರೋಪ ಕೇಳಿಬಂದಿದೆ. ಕರಾಚಿ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್‌ ತಂಡದ ಫಖರ್ ಜಮಾನ್‌ ಚೆಂಡನ್ನು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ತಂಡಕ್ಕೆ 5 ರನ್‌ ಪೆನಾಲ್ಟಿ ವಿಧಿಸಲಾಗಿದೆ. ಜಮಾನ್‌ ಆರೋಪ ನಿರಾಕರಿಸಿದ್ದು, ತನಿಖೆ ಮುಂದುವರೆದಿದೆ.
Read Full Story

09:31 AM (IST) Mar 31

ಅವಕಾಶ ಇಲ್ಲದಿರೋ ಕಾರಣ ಬಿಜೆಪಿ ಸಿಎಂ ಪುತ್ರ ಬೆಂಗ್ಳೂರಲ್ಲಿ ಓದ್ತಿರೋದು - ಡಿಕೆ ಶಿವಕುಮಾರ್

ಅಸ್ಸಾಂನಲ್ಲಿ ಯುವಕರಿಗೆ ಉತ್ತಮ ಅವಕಾಶಗಳಿಲ್ಲದ ಕಾರಣ, ಸ್ವತಃ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪುತ್ರ ಬೆಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ. 

Read Full Story

09:11 AM (IST) Mar 31

ವಿಜಯ್ ದೇವರಕೊಂಡ ಮೇಲೆ ಈ ಬಾಲಿವುಡ್ ನಟಿಗೆ ಸೀಕ್ರೆಟ್ ಕ್ರಶ್ ಇತ್ತಂತೆ! ಬಹಿರಂಗವಾಗಿಯೇ ಒಪ್ಪಿಕೊಂಡ 'ಟಾಕ್ಸಿಕ್ ನಟಿ'

ಬಾಲಿವುಡ್ ನಟಿ ಕಿಯಾರಾ ಅಡ್ವಾನಿ, ನಟ ವಿಜಯ್ ದೇವರಕೊಂಡ ಮೇಲೆ ತಮಗೆ ಕ್ರಶ್ ಇತ್ತು ಎಂದು ರಾಣಾ ದಗ್ಗುಬಾಟಿ ಅವರೊಂದಿಗಿನ ಚಿಟ್‌ಚಾಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಇದಲ್ಲದೆ, ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದಲ್ಲಿ ಕಿಯಾರಾ ನಟಿಸಿದ್ದು, ಅದರ ಬಿಡುಗಡೆ ದಿನಾಂಕದ ಬಗ್ಗೆಯೂ ಲೇಖನದಲ್ಲಿ ಮಾಹಿತಿ ಇದೆ.
Read Full Story

09:01 AM (IST) Mar 31

ಬಿರಿಯಾನಿಯಲ್ಲಿ ಚಿಕನ್ ಲೆಗ್‌ಪೀಸ್ ಸಿಗ್ತಿಲ್ಲ ಅಂತ ಮದುವೆ ಮನೆಯಾಯ್ತು ರಣಾಂಗಣ

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದ ಮದುವೆಯೊಂದರಲ್ಲಿ, ಬಿರಿಯಾನಿಯಲ್ಲಿ ಚಿಕನ್ ಲೆಗ್‌ಪೀಸ್ ಕಡಿಮೆ ಇದೆ ಎಂಬ ಕಾರಣಕ್ಕೆ ವರನ ಕಡೆಯವರು ಗಲಾಟೆ ಆರಂಭಿಸಿದ್ದಾರೆ. ಈ ಸಣ್ಣ ಜಗಳವು ವಿಕೋಪಕ್ಕೆ ತಿರುಗಿ, ಮದುವೆ ಮನೆಯೇ ರಣರಂಗವಾಯ್ತು, ಕೊನೆಗೆ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಬೇಕಾಯಿತು.

Read Full Story

08:33 AM (IST) Mar 31

ಏಪ್ರಿಲ್ 1ರಿಂದಲೇ ಆಗಲಿದೆ ಅದಾಯ ತೆರಿಗೆ, ಬ್ಯಾಂಕಿಂಗ್, ಸಂಬಳದಲ್ಲಿ ಮಹತ್ವದ ಬದಲಾವಣೆ

2025ರಿಂದ ಆದಾಯ ತೆರಿಗೆ, ಸಂಬಳ, ಬ್ಯಾಂಕಿಂಗ್, ಮತ್ತು ಹೂಡಿಕೆಗಳಿಗೆ ಸಂಬಂಧಿಸಿದಂತೆ ಹಲವಾರು ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ತೆರಿಗೆ ವಿನಾಯಿತಿ, ಪಿಎಫ್ ಕಡಿತ, ಎಟಿಎಂ ಶುಲ್ಕಗಳು ಮತ್ತು ಡಿಜಿಟಲ್ ವಹಿವಾಟುಗಳ ಮೇಲೆ ನೇರ ಪರಿಣಾಮ ಬೀರಲಿವೆ.
Read Full Story

More Trending News