Published : Mar 31, 2026, 07:04 AM ISTUpdated : Mar 31, 2026, 11:33 PM IST

India Latest News Live: IPL 2026 - ಗುಜರಾತ್‌ ಟೈಟಾನ್ಸ್‌ಗೆ ಶಾಕ್ ಕೊಟ್ಟ ಪಂಜಾಬ್ ಕಿಂಗ್ಸ್!

ಸಾರಾಂಶ

ಟೆಹ್ರಾನ್‌: ಇರಾನ್‌ಗೆ ಸಹಾಯಾರ್ಥವಾಗಿ ಭಾರತ ನೀಡುತ್ತಿರುವ ಮಾನವೀಯ ನೆರವನ್ನು ಸಂಗ್ರಹಿಸಲು ಈ ವಾರಾಂತ್ಯ ಭಾರತಕ್ಕೆ ಬರಲಿದ್ದ ಇರಾನ್‌ನ ವಿಮಾನವೊಂದರ ಮೇಲೆ ಅಮೆರಿಕ ದಾಳಿ ನಡೆಸಿದೆ. ಮಹಾನ್‌ ಏರ್‌ಲೈನ್ಸ್‌ಗೆ ಸೇರಿದ ಈ ವಿಮಾನವು ಈ ವಾರದ ಅಂತ್ಯದಲ್ಲಿ ಭಾರತಕ್ಕೆ ಬರಲು ನಿಗದಿಯಾಗಿತ್ತು. ಅದಕ್ಕೂ ಮುನ್ನವೇ ಅಮೆರಿಕದ ದಾಳಿಗೆ ಬಲಿಯಾಗಿದೆ. ಇತ್ತೀಚೆಗೆ ಕಾಶ್ಮೀರಿಗಳು ಇರಾನ್‌ಗೆ ಹಣ, ಆಭರಣಗಳು ಮತ್ತು ಇತರ ವಸ್ತುಗಳನ್ನು ದಾನ ಮಾಡಿದ್ದರು. ಅದಕ್ಕೆ ಇರಾನ್‌ ಧನ್ಯವಾದವನ್ನೂ ಅರ್ಪಿ

Cooper Connolly Punjab Kings

11:33 PM (IST) Mar 31

IPL 2026 - ಗುಜರಾತ್‌ ಟೈಟಾನ್ಸ್‌ಗೆ ಶಾಕ್ ಕೊಟ್ಟ ಪಂಜಾಬ್ ಕಿಂಗ್ಸ್!

ಕೂಪರ್ ಕೊನೊಲಿ ಅವರ ಅಜೇಯ ಅರ್ಧಶತಕ ಮತ್ತು ವೈಶಾಕ್ ವಿಜಯ್‌ಕುಮಾರ್ ಅವರ ಮಾರಕ ಬೌಲಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. 163 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್, ಕೊನೊಲಿ ಅವರ 72 ರನ್‌ಗಳ ಏಕಾಂಗಿ ಹೋರಾಟದಿಂದಾಗಿ ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು.
Read Full Story

10:47 PM (IST) Mar 31

ಪಿಂಕ್ ಫೋಟೋಶೂಟ್‌ನಲ್ಲಿ ಭಾಗಿಯಾದ ಆನೆ ನಾಲ್ಕೇ ತಿಂಗಳಿಗೆ ನಿಗೂಢ ಸಾವು - ಬಣ್ಣ ಹಾಕಿದ್ದಕ್ಕೆ ಪ್ರಾಣಿಪ್ರಿಯರ ತೀವ್ರ ಆಕ್ರೋಶ

ಜೈಪುರದಲ್ಲಿ ವಿದೇಶಿ ಕಲಾವಿದೆಯೊಬ್ಬರು ಆನೆಗೆ ಪಿಂಕ್ ಬಣ್ಣ ಬಳಿದು ನಡೆಸಿದ ಫೋಟೋಶೂಟ್ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಆ ಚಂಚಲ್ ಹೆಸರಿನ ಆನೆ ಸಾವನ್ನಪ್ಪಿದ್ದು,, ಅದರ ಸಾವಿಗೆ ಫೋಟೋಶೂಟ್ ಕಾರಣ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. 

Read Full Story

08:56 PM (IST) Mar 31

ಸಿಎಸ್‌ಕೆ ಸೋಲಿಸಲು ಬರ್ತ್‌ಡೇ ಕೇಕ್ ಕಟ್ಟಿಂಗ್ ತ್ಯಾಗ ಮಾಡಿದ ವೈಭವ್ ಸೂರ್ಯವಂಶಿ

ಸಿಎಸ್‌ಕೆ ಸೋಲಿಸಲು ಬರ್ತ್‌ಡೇ ಕೇಕ್ ಕಟ್ಟಿಂಗ್ ತ್ಯಾಗ ಮಾಡಿದ ವೈಭವ್ ಸೂರ್ಯವಂಶಿ, 15 ರ ಪೋರ ಮೊದಲ ಪಂದ್ಯದಲ್ಲೇ ಅತೀವೇಗದ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದು ಮಾತ್ರವಲ್ಲ, ರಾಜಸ್ಥಾನಕ್ಕೆ ಭರ್ಜರಿ ಗೆಲುವು ನೀಡಿದ್ದಾರೆ.

 

Read Full Story

08:27 PM (IST) Mar 31

ಹಾರ್ಮುಜ್ ಜಲಸಂಧಿಯಿಂದ ಭಾರತದ ಕರಾವಳಿಗೆ ಹಡಗು ತಲುಪಲು ಎಷ್ಟು ದಿನ ಬೇಕು? ಇಂಧನದ ಖರ್ಚು ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ!

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದಿಂದ ಹಾರ್ಮುಜ್ ಜಲಸಂಧಿಯ ಮಾರ್ಗವು ಅನಿಶ್ಚಿತವಾಗಿದೆ. ಈ ಲೇಖನವು ಹಾರ್ಮುಜ್‌ನಿಂದ ಭಾರತದ ಕರಾವಳಿಗೆ, ವಿಶೇಷವಾಗಿ ಗುಜರಾತ್ ಮತ್ತು ಮುಂಬೈಗೆ, ಹಡಗು ತಲುಪಲು ಬೇಕಾಗುವ ಸಮಯ, ಇಂಧನ ಬಳಕೆ ಮತ್ತು ಪ್ರಯಾಣದ ದುಬಾರಿ ವೆಚ್ಚದ ಬಗ್ಗೆ ವಿವರಿಸುತ್ತದೆ.
Read Full Story

08:11 PM (IST) Mar 31

'ಗುಣಪಡಿಸುವ' ಹೆಸರಲ್ಲಿ ಕಾಮದಾಟ - ಮಂತ್ರ ಪಠಿಸುತ್ತಲೇ ಮಹಿಳೆಯರ ಖಾಸಗಿ ಅಂಗ ಮುಟ್ಟುವ ಕಾಮುಕ ಬಾಬಾಗಳು!

ದಿವ್ಯಶಕ್ತಿ ಮತ್ತು ಪವಾಡದ ಹೆಸರಿನಲ್ಲಿ ನಕಲಿ ಬಾಬಾಗಳು ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುತ್ತಿರುವ ಕರಾಳ ಸತ್ಯವನ್ನು ಈ ಲೇಖನ ಅನಾವರಣಗೊಳಿಸುತ್ತದೆ. ಇಬ್ಬರು ಸಂತ್ರಸ್ತೆಯರ ಭಯಾನಕ ಅನುಭವವನ್ನು ಸುದ್ದಿವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ.

Read Full Story

07:29 PM (IST) Mar 31

ವಿದ್ಯಾ ಬಾಲನ್​ಗೆ 'ಪನೌತಿ' ಪಟ್ಟ! ಚಿತ್ರರಂಗದಿಂದಲೇ ಔಟ್​- ಹೊರಗೆ ಹಾಕಿದವರೇ ನಟಿಯ ಕಾಲಿಗೆ ಬಿದ್ದರು

ಬಾಲಿವುಡ್‌ನ ಖ್ಯಾತ ನಟಿ ವಿದ್ಯಾ ಬಾಲನ್, ತಮ್ಮ ವೃತ್ತಿಜೀವನದ ಆರಂಭದಲ್ಲಿ 'ಪನೌತಿ' ಅಥವಾ 'ಅಪಶಕುನಿ' ಎಂಬ ಪಟ್ಟವನ್ನು ಎದುರಿಸಿದ್ದರು. ಮಲಯಾಳಂ ಚಿತ್ರವೊಂದು ನಿಂತುಹೋದ ಕಾರಣ,  9 ಚಿತ್ರಗಳಿಂದ ಕೈಬಿಡಲಾಗಿತ್ತು.  ಅವರು 'ಪರಿಣೀತಾ' ಮತ್ತು 'ಡರ್ಟಿ ಪಿಕ್ಚರ್' ನಂತಹ ಚಿತ್ರಗಳ ಮೂಲಕ ಸ್ಟಾರ್ ಆಗಿ ಬೆಳೆದರು.

Read Full Story

06:30 PM (IST) Mar 31

ಸುತ್ತಲೂ ಸ್ನೇಹಿತರೇ ಇದ್ದರೂ ಆತ ಮುಳುಗಿದ್ದು ಒಬ್ಬರಿಗೂ ಗೊತ್ತಾಗೇ ಇಲ್ಲ - ಈಜುಕೊಳದಲ್ಲಿ ಮುಳುಗಿ ಯುವಕ ಸಾವು

ಗುಜರಾತ್‌ನ ಸೂರತ್‌ನಲ್ಲಿರುವ ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆಘಾತಕಾರಿ ಸಂಗತಿ ಎಂದರೆ, ಸ್ನೇಹಿತರು ಜೊತೆಯಲ್ಲಿದ್ದರೂ ಆತ ಮುಳುಗುತ್ತಿರುವುದು ಯಾರ ಗಮನಕ್ಕೂ ಬಂದಿಲ್ಲ, ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ.
Read Full Story

06:29 PM (IST) Mar 31

ಗ್ಯಾಸ್‌ ಸಿಲಿಂಡರ್ ಬೇಡವೇ ಬೇಡ! ವೇಸ್ಟ್ ಎಂಜಿನ್ ಆಯಿಲ್‌ನಲ್ಲೇ ಜಿಲೇಬಿ ಸುಡುವ 'ಮ್ಯಾಜಿಕ್ ಸ್ಟೌವ್' ಕಂಡುಹಿಡಿದ ವ್ಯಾಪಾರಿ

ಪ್ರಯಾಗ್‌ರಾಜ್‌ನ ಬೀದಿಬದಿ ವ್ಯಾಪಾರಿಯೊಬ್ಬರು ಅಡುಗೆ ಅನಿಲದ ಕೊರತೆಗೆ ಪರಿಹಾರವಾಗಿ, ಬಳಸಿ ಎಸೆದ ಎಂಜಿನ್ ಆಯಿಲ್‌ನಿಂದ ಉರಿಯುವ 'ಮ್ಯಾಜಿಕ್ ಸ್ಟೌವ್' ಅನ್ನು ಕಂಡುಹಿಡಿದಿದ್ದಾರೆ. ಗ್ಯಾಸ್ ಸಿಲಿಂಡರ್ ಅವಲಂಬನೆಯಿಲ್ಲದೆ ತಮ್ಮ ಜಿಲೇಬಿ ವ್ಯಾಪಾರವನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದಾರೆ.

Read Full Story

06:01 PM (IST) Mar 31

ಬಿಹಾರದ ನಳಂದಾ ದೇಗುಲದಲ್ಲಿ ಶೀತಲ ಅಷ್ಟಮಿ ಪೂಜೆಯ ವೇಳೆ ಭಾರಿ ಕಾಲ್ತುಳಿತ - 9 ಜನರು ಸಾವು

ಬಿಹಾರದ ನಳಂದ ಜಿಲ್ಲೆಯ ಶೀತಲಾ ಮಾತಾ ದೇವಾಲಯದಲ್ಲಿ ಶೀತಲ ಅಷ್ಟಮಿ ಪೂಜೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ನಿರೀಕ್ಷೆ ಮೀರಿ ಜನಸಂದಣಿ ಸೇರಿದ್ದರಿಂದ ಮತ್ತು ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದ ಕಾರಣ ಈ ದುರಂತ ಸಂಭವಿಸಿದೆ. 

Read Full Story

05:47 PM (IST) Mar 31

ಗಂಟೆಗಟ್ಟಲೆ ವರ್ಕೌಟ್, ಸಸ್ಯಾಹಾರದಲ್ಲೇ ದೈತ್ಯ ದೇಹ - ರಾಮ್ ಚರಣ್ ಲುಕ್ ನೋಡಿ ದಂಗಾದ ಫ್ಯಾನ್ಸ್!

'ಪೆದ್ದಿ' ಸಿನಿಮಾಗಾಗಿ ರಾಮ್ ಚರಣ್ ಸಂಪೂರ್ಣ ಸಸ್ಯಾಹಾರ ಸೇವಿಸಿ, 8 ತಿಂಗಳ ಕಠಿಣ ತಾಲೀಮಿನಿಂದ ದೈತ್ಯ ದೇಹವನ್ನು ಪಡೆದಿದ್ದಾರೆ. ಈ ಬಗ್ಗೆ ನಿರ್ದೇಶಕ ಬುಚಿ ಬಾಬು ಸನಾ ಮಾಹಿತಿ ಹಂಚಿಕೊಂಡಿದ್ದಾರೆ.

Read Full Story

05:38 PM (IST) Mar 31

ಸಂಜಯ್ ದತ್ ಬಾರ್ & ರೆಸ್ಟೋರೆಂಟ್ ಜೀವಂತ ಮೀನಿನ ಕಾಕ್‌ಟೇಲ್, ವಿವಾದ ಬೆನ್ನಲ್ಲೇ ರದ್ದು

ಸಂಜಯ್ ದತ್ ಬಾರ್ & ರೆಸ್ಟೋರೆಂಟ್ ಜೀವಂತ ಮೀನಿನ ಕಾಕ್‌ಟೇಲ್, ವಿವಾದ ಬೆನ್ನಲ್ಲೇ ರದ್ದು, ಜೀವಂತ ಬೆಟ್ಟಾ ಮೀನುನ್ನು ಕಾಕ್‌ಟೇಲ್‌ನಲ್ಲಿ ಹಾಕಿ ಕೊಡಲಾಗುತ್ತಿತ್ತು. ಕಾಕ್‌ಟೇಲ್‌ನಲ್ಲಿ ಮೀನು ಹಾಕಿ ನೀಡುವುದೇಕೆ?

 

Read Full Story

05:25 PM (IST) Mar 31

ಜಾಹೀರಾತಲ್ಲಿ ಕಾಣಿಸಿಕೊಂಡು ನಿಮ್ಮನ್ನೂ ಪ್ರೇರೇಪಿಸುವ ಸೆಲೆಬ್ರಿಟಿಗಳು ಆಮೇಲೆ ಮಾಡೋದು ಇದನ್ನೇ ನೋಡಿ

ಕೋಟ್ಯಂತರ ರೂಪಾಯಿ ಪಡೆದು ಚಿತ್ರತಾರೆಯರು ಮತ್ತು ಕ್ರಿಕೆಟಿಗರು ಪಾನ್ ಮಸಾಲಾ, ಪಾನೀಯಗಳಂತಹ ಹಾನಿಕಾರಕ ಉತ್ಪನ್ನಗಳಿಗೆ ಜಾಹೀರಾತು ನೀಡುತ್ತಾರೆ. ಈ ಜಾಹೀರಾತುಗಳನ್ನು ನಂಬಿ ವಿಷಕಾರಿ ವಸ್ತುಗಳನ್ನು ಸೇವಿಸುವ ಅಭಿಮಾನಿಗಳು ಕ್ಯಾನ್ಸರ್‌ನಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದರೆ, ಈ ಸೆಲೆಬ್ರಿಟಿಗಳು ತಾವು ಪ್ರಚಾರ ಮಾಡುವ ಉತ್ಪನ್ನಗಳನ್ನು ಬಳಸುವುದಿಲ್ಲ ಎನ್ನುವ ಸತ್ಯವನ್ನು ಈ ಲೇಖನ ಬಯಲು ಮಾಡುತ್ತದೆ.
Read Full Story

05:15 PM (IST) Mar 31

Kayadu Lohar - 'ಸ್ವಲ್ಪ ಟೈಮ್ ಕೊಡಿ, ಆ 2 ಭಾಷೆಯನ್ನು ಚೆನ್ನಾಗಿ ಮಾತಾಡ್ತೀನಿ' - ಮುಗಿಲ್‌ಪೇಟೆ ಬ್ಯೂಟಿ ಉತ್ತರ ವೈರಲ್!

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು, "ನೀವು ಈಗಾಗಲೇ ಮೂರು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದೀರಿ, ಆದರೂ ಯಾಕೆ ಇನ್ನೂ ಇಂಗ್ಲಿಷ್‌ನಲ್ಲೇ ಉತ್ತರಿಸುತ್ತಿದ್ದೀರಿ?" ಎಂದು ಕಯಾದುಗೆ ಪ್ರಶ್ನೆ ಕೇಳಿದರು.

Read Full Story

04:59 PM (IST) Mar 31

UAE ಬೇಸ್‌ನಲ್ಲಿದ್ದ 200 ಸಿಬ್ಬಂದಿಗಳ ಯುಎಸ್‌ ಕಮಾಂಡ್‌ ಸೆಂಟರ್‌ ಮೇಲೆ ಡ್ರೋನ್‌ ದಾಳಿ ಮಾಡಿದ ಇರಾನ್‌

ಯುಎಇಯಲ್ಲಿರುವ ಅಮೆರಿಕದ ಹಿರಿಯ ಕಮಾಂಡರ್‌ಗಳ ಸಭೆಯನ್ನು ಗುರಿಯಾಗಿಸಿ ಇರಾನ್ ಡ್ರೋನ್ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ. ಇದಕ್ಕೂ ಮುನ್ನ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಈ ಸಂಘರ್ಷವು ಕೊಲ್ಲಿ ರಾಷ್ಟ್ರಗಳಲ್ಲಿ ತೀವ್ರ ಉದ್ವಿಗ್ನತೆ ಸೃಷ್ಟಿಸಿದೆ.

Read Full Story

04:53 PM (IST) Mar 31

ಹಿಮಾಚಲದ ಗಾಳಿಯನ್ನು ಬಾಟಲ್‌ನಲ್ಲಿ ತುಂಬಿಸಿ ತಂದು ದೆಹಲಿಯಲ್ಲಿ ಮಾರಾಟ ಮಾಡಿದ ಯುವಕ - ವೀಡಿಯೋ ಭಾರಿ ವೈರಲ್

ದೆಹಲಿಯ ತೀವ್ರ ವಾಯು ಮಾಲಿನ್ಯವನ್ನೇ ಬಂಡವಾಳವಾಗಿಸಿಕೊಂಡ ಯುವಕನೊಬ್ಬ, ಹಿಮಾಲಯದ ಶುದ್ಧ ಗಾಳಿಯನ್ನು ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದಾನೆ. ಈತನ ವಿಶಿಷ್ಟ ಬ್ಯುಸಿನೆಸ್ ಐಡಿಯಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Read Full Story

04:51 PM (IST) Mar 31

ಬಿರಿಯಾನಿ ಮಾಡ್ತಿದ್ದ ನಟ ಅಜಿತ್ ಕುಮಾರ್ ಪತ್ನಿ ಶಾಲಿನಿ ತಮಾಷೆ - ವೈರಲ್ ಆಯ್ತು ಕ್ಯೂಟ್ ವಿಡಿಯೋ!

ಅಜಿತ್ ಕುಮಾರ್ 'ಕಪಲ್ ಗೋಲ್ಸ್' ಎನಿಸುವಂತಹ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅಜಿತ್ ತಮ್ಮ ಸ್ಪೆಷಲ್ ಬಿರಿಯಾನಿ ಮಾಡುತ್ತಿದ್ದಾಗ, ಪತ್ನಿ ಶಾಲಿನಿ ಅವರನ್ನು ತಮಾಷೆ ಮಾಡಿದ ವಿಡಿಯೋ ಒಂದು ಸಖತ್ ವೈರಲ್ ಆಗಿದೆ.

Read Full Story

04:36 PM (IST) Mar 31

ಇಂಡಿಗೋಗೆ ಹೊಸ ಬಾಸ್ - ಬ್ರಿಟಿಷ್ ಏರ್‌ವೇಸ್ ಮಾಜಿ ಮುಖ್ಯಸ್ಥ ವಿಲಿಯಂ ವಾಲ್ಷ್ ನೂತನ ಸಿಇಒ

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ 'ಇಂಡಿಗೋ' (IndiGo), ಜಾಗತಿಕ ವಾಯುಯಾನ ಕ್ಷೇತ್ರದ ದಿಗ್ಗಜ ವಿಲಿಯಂ ವಾಲ್ಷ್ ಅವರನ್ನು ತನ್ನ ನೂತನ ಸಿಇಒ (CEO) ಆಗಿ ನೇಮಕ ಮಾಡಿದೆ.ಇಂಡಿಗೋದ ಹಿಂದಿನ ಸಿಇಒ ಪೀಟರ್ ಎಲ್ಬರ್ಸ್ ಅವರು ಹಠಾತ್ ಆಗಿ ರಾಜೀನಾಮೆ ನೀಡಿದ ಮೂರು ವಾರಗಳ ಒಳಗೇ ಈ ಮಹತ್ವದ ಘೋಷಣೆ ಹೊರಬಿದ್ದಿದೆ.

 

Read Full Story

03:32 PM (IST) Mar 31

ಶಿರಸಿಯ ಗೌರಿ ಬಾವಿ ತೆಗೆದಂತೆ ಏಕಾಂಗಿಯಾಗಿ ನದಿ ಸ್ವಚ್ಛಗೊಳಿಸಿದ ಬಿಟ್ಟು - ಟೀಕಿಸಿದವರೇ ಮೆಚ್ಚಿದರು

ಮಧ್ಯಪ್ರದೇಶದ 20 ವರ್ಷದ ಯುವಕ ಬಿಟ್ಟು ತಬಾಹಿ, ತೀವ್ರ ಕಲುಷಿತಗೊಂಡಿದ್ದ ಅಜ್ನರ್ ನದಿಯನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸಿದ್ದಾರೆ. ಟೀಕೆಗಳನ್ನು ಮೆಟ್ಟಿನಿಂತ, ಅವರ ದೃಢ ಸಂಕಲ್ಪದಿಂದ ನದಿಗೆ ಮರುಜೀವ ಬಂದಿದ್ದು, ಟೀಕಿಸಿದವರೇ ಹೊಗಳುತ್ತಿದ್ದಾರೆ.

Read Full Story

03:16 PM (IST) Mar 31

'ಆ ಪ್ಲಾನ್ ಫೇಲ್ ಆಗಿದ್ರೆ ನಾನು ದಡ್ಡ ಆಗ್ತಿದ್ದೆ'; ಸಂಜು ಸ್ಯಾಮ್ಸನ್ ವಿಕೆಟ್ ರಹಸ್ಯ ಬಿಚ್ಚಿಟ್ಟ ರಿಯಾನ್ ಪರಾಗ್!

ರಾಜಸ್ಥಾನ ರಾಯಲ್ಸ್ ನಾಯಕ ರಿಯಾನ್ ಪರಾಗ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಗೆಲುವಿಗೆ ಸಂಜು ಸ್ಯಾಮ್ಸನ್‌ರನ್ನು ಔಟ್ ಮಾಡಲು ರೂಪಿಸಿದ್ದ ವಿಶೇಷ ತಂತ್ರವನ್ನು ಬಹಿರಂಗಪಡಿಸಿದ್ದಾರೆ. ಸಂಜು ಅವರ ನೆಚ್ಚಿನ ಶಾಟ್‌ಗಳನ್ನು ಆಡಲು ಬಿಡದೆ, ಬೇರೆ ಶಾಟ್ ಆಡುವಂತೆ ಮಾಡಿ ವಿಕೆಟ್ ಪಡೆಯಲಾಯಿತು ಎಂದು ಅವರು ವಿವರಿಸಿದ್ದಾರೆ. ಈ ಪಂದ್ಯದಲ್ಲಿ ಸಿಎಸ್‌ಕೆ 127 ರನ್‌ಗಳಿಗೆ ಆಲೌಟ್ ಆಗಿದ್ದು, ರಾಜಸ್ಥಾನ ಸುಲಭವಾಗಿ ಜಯ ಸಾಧಿಸಿತು.
Read Full Story

03:13 PM (IST) Mar 31

ಗುರೂಜಿಯ 150 ಮಹಿಳೆಯರ ರಾಸಲೀಲೆ ಕೇಸ್‌ನಲ್ಲಿ ಮತ್ತೊಂದು ಟ್ವಿಸ್ಟ್, ಪತ್ನಿಯರ ಸ್ವಾಪಿಂಗ್ ಬಯಲು

ಗುರೂಜಿಯ 150 ಮಹಿಳೆಯರ ರಾಸಲೀಲೆ ಕೇಸ್‌ನಲ್ಲಿ ಮತ್ತೊಂದು ಟ್ವಿಸ್ಟ್, ಪತ್ನಿಯರ ಸ್ವಾಪಿಂಗ್ ಬಯಲು, ಪೂಜೆ, ಆಧ್ಯಾತ್ಮದ ಹೆಸರಿನಲ್ಲಿ ಮಹಿಳೆಯರನ್ನು ಕಚೇರಿಯಲ್ಲೇ ಬಳಸಿಕೊಂಡ ಪ್ರಕರಣದಲ್ಲಿ ಇದೀಗ ಮತ್ತೊಂದ ಗಂಭೀರ ಆರೋಪ ಕೇಳಿಬಂದಿದೆ.

 

Read Full Story

02:46 PM (IST) Mar 31

ರಾಜಸ್ಥಾನಕ್ಕೆ ಪಂಜಾಬ್‌ನಿಂದ 'ವಾಟರ್ ಶಾಕ್' - 6 ದಶಕಗಳ ಬಾಕಿ ₹1.44 ಲಕ್ಷ ಕೋಟಿ ಪಾವತಿಗೆ ಭಗವಂತ್ ಮಾನ್ ಪಟ್ಟು!

1920ರ ತ್ರಿಪಕ್ಷೀಯ ಒಪ್ಪಂದವನ್ನು ಉಲ್ಲೇಖಿಸಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜಸ್ಥಾನದಿಂದ ₹1.44 ಲಕ್ಷ ಕೋಟಿ ನೀರಿನ ರಾಯಲ್ಟಿ ಪಾವತಿಸುವಂತೆ ಬೇಡಿಕೆ ಇಟ್ಟಿದ್ದಾರೆ. 1960ರಿಂದ ರಾಜಸ್ಥಾನ ಹಣ ಪಾವತಿಸಿಲ್ಲ ಎಂದು ಪಂಜಾಬ್ ಆರೋಪಿಸಿದೆ.

Read Full Story

01:53 PM (IST) Mar 31

ಜೈಶ್ ಸಂಘಟನೆಯ ಮತ್ತೊಬ್ಬ ಉಗ್ರನ ನಿಗೂಢ ಸಾವು! ಪಾಕಿಸ್ತಾನದಲ್ಲಿ ನಡೆದದ್ದೇನು? ಯಾರೀ ಭಯೋತ್ಪಾದಕ

ಪಾಕಿಸ್ತಾನದಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಪಾಕಿಸ್ತಾನದಲ್ಲಿ ಸರಣಿ ಉಗ್ರರ ಹತ್ಯೆಗಳ ಮುಂದುವರೆದ ಭಾಗವಾಗಿ ಈ ಘಟನೆ ನಡೆದಿದ್ದು, ಈತನೂ ತನ್ನ ಸಹೋದರನಂತೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ.
Read Full Story

01:52 PM (IST) Mar 31

CSK ಮೇಲೆ ಸೇಡು ತೀರಿಸಿಕೊಂಡ್ರಾ ರವೀಂದ್ರ ಜಡೇಜಾ? ದುಬೆ ವಿಕೆಟ್ ಪಡೆದು ಜಡ್ಡು ಗನ್ ಫೈರ್ ಸೆಲಿಬ್ರೇಷನ್ ಮಾಡಿದ್ದೇಕೆ?

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶಿವಂ ದುಬೆ ವಿಕೆಟ್ ಪಡೆದ ಬಳಿಕ ರವೀಂದ್ರ ಜಡೇಜಾ ತಮ್ಮ 'ಗನ್ ಫೈರ್' ಶೈಲಿಯಲ್ಲಿ ಸಂಭ್ರಮಿಸಿದರು. ಇದು ತಮ್ಮ ಹಳೆಯ ಸಂಭ್ರಮಾಚರಣೆಯಾಗಿದ್ದು, ಹೊಸ ತಂಡವಾದ ರಾಜಸ್ಥಾನ ರಾಯಲ್ಸ್ ಪರ ಅದನ್ನು ಮುಂದುವರಿಸಿದ್ದಾಗಿ ಜಡೇಜಾ ಕಾರಣ ಬಿಚ್ಚಿಟ್ಟಿದ್ದಾರೆ. ಈ ಪಂದ್ಯದಲ್ಲಿ ಜಡೇಜಾ ಎರಡು ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವಾದರು.
Read Full Story

01:28 PM (IST) Mar 31

2021ರಲ್ಲಿ 3.2 ಲಕ್ಷ ವೇತನಕ್ಕೆ TCSಗೆ ಕೆಲಸಕ್ಕೆ ಸೇರಿದ ಯುವಕನಿಗೆ ಈಗ ಗೂಗಲ್‌ನಲ್ಲಿ 80 ಲಕ್ಷದ ಉದ್ಯೋಗ

Software engineer salary jump: ತಮ್ಮ 23ರ ಹರೆಯದಲ್ಲಿ ಟಿಸಿಎಸ್ ಕಂಪನಿಗೆ ವಾರ್ಷಿಕ 3.2 ಲಕ್ಷ ವೇತನಕ್ಕೆ ಕೆಲಸಕ್ಕೆ ಸೇರಿದ ಬೆಂಗಳೂರಿನ ಸಾಫ್ಟ್‌ವೇರ್ ಡೆವಲಪರ್ ಹೇಗೆ 80 ಲಕ್ಷದ ಗೂಗಲ್ ಉದ್ಯೋಗ ಗಿಟ್ಟಿಸಿದೆ ಎಂಬುದನ್ನು ಹೇಳಿಕೊಂಡಿದ್ದು ಅವರ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.

Read Full Story

01:28 PM (IST) Mar 31

ಚುಪ್ ಚಾಪ್, ಏನಿಲ್ಲ ಏನಿಲ್ಲ.. ಗೆಲುವನ್ನು ಸಂಭ್ರಮಿಸೋ ಬದಲು 'ಲೆಫ್ಟು-ರೈಟು' ಲೆಕ್ಕಾಚಾರದಲ್ಲಿ ಕಳೆದುಹೋಯ್ತಾ ಬಾಲಿವುಡ್?

ಸದ್ಯ ಧುರಂಧರ್ 2 ಸಿನಿಮಾ ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುತ್ತ ಹೊಸಹೊಸ ದಾಖಲೆ ಸೃಷ್ಟಿಸುತ್ತ ಸಾಗುತ್ತಿದೆ. 12ನೇ ದಿನಕ್ಕೆ ಇಷ್ಟೊಂದು ಕಲೆಕ್ಷನ್ ಮಾಡಿರುವ ಈ ಸಿನಿಮಾ ಮುಂದೆ ಇನ್ನೂ ಹೆಚ್ಚಿನ ಗಳಿಕೆ ಮಾಡೋದಂತೂ ಖಂಡಿತ. ಈ ಚಿತ್ರದ ಗಳಿಕೆ ಸದ್ಯಕ್ಕಂತೂ ಯಾವುದೇ ಬ್ರೇಕ್ ಇಲ್ಲದೇ ನಾಗಾಲೋಟ ಮುಂದುವರಿಸಿದೆ. ಆದರೆ ಏನಿದು ಲೆಫ್ಟ್-ರೈಟ್? 

Read Full Story

01:23 PM (IST) Mar 31

Azad Bharath - ರೂಪಾ ಅಯ್ಯರ್ ನಿರ್ದೇಶಿಸಿರುವಚಿತ್ರ ನಾಳೆ ಸಂಸತ್ತಲ್ಲಿ ಪ್ರದರ್ಶನ! ಪ್ರತಿಯೊಬ್ಬ ಭಾರತೀಯ ಯಾಕೆ ಈ ಸಿನಿಮಾ ನೋಡಲೇಬೇಕು ಗೊತ್ತಾ?

ನಟಿ-ನಿರ್ದೇಶಕಿ ರೂಪಾ ಅಯ್ಯರ್ ಅವರ ನೇತಾಜಿ ಸುಭಾಷ್‌ಚಂದ್ರ ಬೋಸ್ ಕುರಿತ 'ಆಜಾದ್‌ ಭಾರತ್‌' ಹಿಂದಿ ಚಿತ್ರವು ಸಂಸತ್ ಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಚಿತ್ರವು ಬೋಸ್ ಸ್ಥಾಪಿಸಿದ ಮೊದಲ ಮಹಿಳಾ ಸೈನ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ ನೀರಾ ಆರ್ಯ ಅವರ ಕಥೆಯನ್ನು ಹೇಳುತ್ತದೆ.

Read Full Story

01:11 PM (IST) Mar 31

3 ಸಾವಿರದಿಂದ GRB ಫುಡ್ಸ್ ಸಾಮ್ರಾಜ್ಯ ಕಟ್ಟಿದರು! ಶಾಲೆಗೆ ಹೋಗಲಾಗದ ಬಾಲಕನ ಇಂಟರೆಸ್ಟಿಂಗ್​ ಸ್ಟೋರಿ ಇದು

ತಮಿಳುನಾಡಿನ ಸಣ್ಣ ಹಳ್ಳಿಯಲ್ಲಿ ಬಡತನದಲ್ಲಿ ಬೆಳೆದ ಜಿ.ಆರ್. ಬಾಲಸುಬ್ರಮಣ್ಯಂ, 8ನೇ ತರಗತಿಗೆ ಶಾಲೆ ಬಿಟ್ಟು ಬೆಂಗಳೂರಿಗೆ ಬಂದರು. ಕೇವಲ 3,000 ರೂಪಾಯಿ ಬಂಡವಾಳದಿಂದ ಸೈಕಲ್​ನಲ್ಲಿ ಬೆಣ್ಣೆ ಮಾರಾಟ ಆರಂಭಿಸಿ, ಗುಣಮಟ್ಟದ ತುಪ್ಪ ತಯಾರಿಕೆಯ ಮೂಲಕ ಇಂದು 1,400 ಕೋಟಿ ರೂಪಾಯಿ ವಹಿವಾಟು ನಡೆಸುವ GRB ಎಂಬ ಬೃಹತ್ ಸಾಮ್ರಾಜ್ಯವನ್ನು ಕಟ್ಟಿದ್ದಾರೆ.
Read Full Story

01:10 PM (IST) Mar 31

ನಗದು ವ್ಯವಹಾರಕ್ಕೆ ಹೊಸ ನಿಯಮ - ಕೈಸಾಲಕ್ಕೂ ಇನ್ನು ಕಂಡೀಷನ್‌; ಒಂದು ತಪ್ಪು, 100% ದಂಡ

ಆದಾಯ ತೆರಿಗೆ ಇಲಾಖೆಯು ನಗದು ವ್ಯವಹಾರಗಳ ಮೇಲೆ ಕಠಿಣ ಮಿತಿಗಳನ್ನು ವಿಧಿಸಿದೆ. ದಿನನಿತ್ಯದ ವ್ಯವಹಾರ, ಆಸ್ತಿ ಖರೀದಿ, ಕೈಸಾಲ, ಮತ್ತು ಬಾಡಿಗೆ ಅಡ್ವಾನ್ಸ್ ಸೇರಿದಂತೆ ಹಲವು ವಹಿವಾಟುಗಳಿಗೆ ಮಿತಿ ನಿಗದಿಪಡಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ 100% ದಂಡ ತೆರಬೇಕಾಗುತ್ತದೆ.

Read Full Story

12:50 PM (IST) Mar 31

ಹೆಚ್ಚಿನ ಜೀವನಾಂಶ ಬರಲಿ ಎನ್ನುವ ಕಾರಣಕ್ಕೆ ಪತಿಯ ಆದಾಯ ಹೆಚ್ಚಿದೆ ಎಂದು ಪತ್ನಿ ಹೇಳೋದು ಸಾಮಾನ್ಯ ಎಂದ ಕೋರ್ಟ್‌!

ಜೀವನಾಂಶ ಪಡೆಯಲು ಪತಿಯ ಆದಾಯವನ್ನು ಹೆಚ್ಚಿಸಿ ಹೇಳಿದ ಪತ್ನಿಯ ವಿರುದ್ಧಸುಳ್ಳು ಸಾಕ್ಷ್ಯದ ಆರೋಪದಡಿ ಕ್ರಿಮಿನಲ್ ಕ್ರಮಜರುಗಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

Read Full Story

12:38 PM (IST) Mar 31

IPL 2026 ಟೂರ್ನಿಯಲ್ಲಿ ಈ ನಾಲ್ಕು ತಂಡಗಳು ಪ್ಲೇ ಆಫ್ ಪ್ರವೇಶಿಸುತ್ತವೆ - ಮತ್ತೊಮ್ಮೆ ಅಚ್ಚರಿ ಭವಿಷ್ಯ ನುಡಿದ ಶಶಾಂಕ್ ಸಿಂಗ್

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದೆ. ಹೀಗಿರುವಾಗಲೇ ಪಂಜಾಬ್ ಕಿಂಗ್ಸ್ ತಂಡದ ಯುವ ಆಟಗಾರ ಶಶಾಂಕ್ ಸಿಂಗ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯಾವೆಲ್ಲಾ ತಂಡಗಳು ಪ್ಲೇ ಆಫ್ ಪ್ರವೇಶಿಸಲಿವೆ ಎನ್ನುವ ಬಗ್ಗೆ ಭವಿಷ್ಯ ನುಡಿದಿದ್ದಾರೆ.

Read Full Story

12:23 PM (IST) Mar 31

ಇರಾನ್ ಯುದ್ಧ - ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಗ್ಯಾಲನ್‌ಗೆ 4 ಡಾಲರ್‌ಗೆ ಏರಿಕೆ - 1 ಲೀಟರ್ ಪೆಟ್ರೋಲ್ ಬೆಲೆ ಎಷ್ಟು?

Fuel price hike in America: ಇರಾನ್, ಅಮೆರಿಕಾ ಮತ್ತು ಇಸ್ರೇಲ್ ನಡುವಿನ ಯುದ್ಧವು 32ನೇ ದಿನಕ್ಕೆ ಕಾಲಿಟ್ಟಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಸಂಘರ್ಷದಿಂದಾಗಿ, ಅಮೆರಿಕಾದಲ್ಲಿ ಮೂರು ವರ್ಷಗಳಲ್ಲೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಪ್ರತಿ ಗ್ಯಾಲನ್‌ಗೆ 4 ಡಾಲರ್‌ಗೆ ಏರಿಕೆಯಾಗಿದೆ.

Read Full Story

12:17 PM (IST) Mar 31

Dhurandhar 2 - 'ಬಾಹುಬಲಿ 2' ದಾಖಲೆ ಮುರಿದು ಭಾರತದ ನಂ.1 ಪಟ್ಟ ಪಡೆದ 'ಧುರಂಧರ್ 2'.. ಕಲೆಕ್ಷನ್‌ ಎಷ್ಟು ನೋಡಿ!

ಒಂದು ಕಾಲದಲ್ಲಿ 'ಬಾಹುಬಲಿ 2' ಬರೆದಿದ್ದ ದಾಖಲೆಗಳು ಅಳಿಸಲಾಗದ ಮೈಲಿಗಲ್ಲು ಎನ್ನಲಾಗುತ್ತಿತ್ತು. ಆದರೆ, 'ಧುರಂಧರ್ 2' (Dhurandhar 2) ಈಗ ಆ ಇತಿಹಾಸವನ್ನು ತಿರುಗಿ ಬರೆದಿದೆ. ಪುಷ್ಪ 2, ಬಾಹುಬಲಿ 2 ಮತ್ತು ದಂಗಲ್‌ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಹಿಂದಿಕ್ಕಿದೆ ಈ ಸಿನಿಮಾ 'ಧುರಂಧರ್ 2'.

Read Full Story

11:59 AM (IST) Mar 31

ಐವರು ಮಕ್ಕಳಿಗೆ ನಿದ್ದೆ ಮಾತ್ರೆ ಕೊಟ್ಳು, ಬೀಗ ಹಾಕಿ 10 ವರ್ಷ ಚಿಕ್ಕವನೊಂದಿಗೆ ಐನಾತಿ ಆಂಟಿ ಜೂಟ್!

ಐವರು ಮಕ್ಕಳಿಗೆ ನಿದ್ದೆ ಮಾತ್ರೆ ನೀಡಿ, ತನಗಿಂತ 10 ವರ್ಷ ಚಿಕ್ಕವನಾದ ಪ್ರಿಯಕರನೊಂದಿಗೆ ಮಹಿಳೆಯೊಬ್ಬಳು ಪರಾರಿಯಾಗಿದ್ದಾಳೆ. ಪತಿಯ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು 24 ಗಂಟೆಗಳಲ್ಲಿ ಪ್ರಣಯಜೋಡಿಯನ್ನು ಪತ್ತೆಹಚ್ಚಿದ್ದು, ಮಕ್ಕಳನ್ನು ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ.
Read Full Story

10:53 AM (IST) Mar 31

ರಂಗಸ್ಥಳಂಗೆ ಸಮಂತಾ ಬೇಡ ಅಂದಿದ್ದೆ; ರಾಮ್ ಚರಣ್ ಜತೆಗಿನ ಲಿಪ್‌ಲಾಕ್ ಸೀನ್ ಹಿಂದಿನ ಸತ್ಯ ಬಿಚ್ಚಿಟ್ಟ ಸುಕುಮಾರ್

ಸುಕುಮಾರ್ ನಿರ್ದೇಶನದ, ರಾಮ್ ಚರಣ್ ಮತ್ತು ಸಮಂತಾ ನಟನೆಯ 'ರಂಗಸ್ಥಳಂ' ಸಿನಿಮಾ ಬಿಡುಗಡೆಯಾಗಿ 8 ವರ್ಷಗಳಾಗಿವೆ. ಈ ಚಿತ್ರವು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಈ ಸಿನಿಮಾದ ಮೂಲಕ ನಟನಾಗಿ ರಾಮ್ ಚರಣ್ ಬೇರೆಯೇ ಹಂತಕ್ಕೆ ತಲುಪಿದರು.
Read Full Story

10:22 AM (IST) Mar 31

ಅಮೆರಿಕಾ ಯುದ್ಧ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧಿಸಿದ ಸ್ಪೇನ್ - ಇರಾನ್ ಯುದ್ಧ ಬೆಂಬಲಿಸದ ನ್ಯಾಟೋ ರಾಷ್ಟ್ರಗಳ ವಿರುದ್ಧ ಅಮೆರಿಕಾ ಕಿಡಿ

ಅಮೆರಿಕಾ-ಇಸ್ರೇಲ್‌ನ ಇರಾನ್ ಮೇಲಿನ ಯುದ್ಧ ಮುಂದುವರಿದಿದ್ದು, ಸ್ಪೇನ್‌ನಂತಹ ನ್ಯಾಟೋ ಮಿತ್ರರಾಷ್ಟ್ರಗಳು ಬೆಂಬಲ ನಿರಾಕರಿಸಿವೆ. ಇದರಿಂದ ಅಸಮಾಧಾನಗೊಂಡಿರುವ ಟ್ರಂಪ್, ನ್ಯಾಟೋ ವಿರುದ್ಧ ಕಿಡಿಕಾರಿದ್ದಾರೆ. ಈ ನಡುವೆ, ಪರ್ಶಿಯನ್ ಕೊಲ್ಲಿಯಲ್ಲಿ 18 ಭಾರತೀಯ ಹಡಗುಗಳು ಸಿಲುಕಿಕೊಂಡಿವೆ.
Read Full Story

10:21 AM (IST) Mar 31

ಪಾಕ್‌ ಲೀಗ್‌ನಲ್ಲಿ ಮತ್ತೆ ವಿವಾದ - ಫಖರ್ ಜಮಾನ್‌ರಿಂದ ಬಾಲ್ ಟ್ಯಾಂಪರಿಂಗ್? ವಿಡಿಯೋ ವೈರಲ್

ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ (ಪಿಎಸ್‌ಎಲ್‌) ಚೆಂಡು ವಿರೂಪದ ಗಂಭೀರ ಆರೋಪ ಕೇಳಿಬಂದಿದೆ. ಕರಾಚಿ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್‌ ತಂಡದ ಫಖರ್ ಜಮಾನ್‌ ಚೆಂಡನ್ನು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ತಂಡಕ್ಕೆ 5 ರನ್‌ ಪೆನಾಲ್ಟಿ ವಿಧಿಸಲಾಗಿದೆ. ಜಮಾನ್‌ ಆರೋಪ ನಿರಾಕರಿಸಿದ್ದು, ತನಿಖೆ ಮುಂದುವರೆದಿದೆ.
Read Full Story

09:31 AM (IST) Mar 31

ಅವಕಾಶ ಇಲ್ಲದಿರೋ ಕಾರಣ ಬಿಜೆಪಿ ಸಿಎಂ ಪುತ್ರ ಬೆಂಗ್ಳೂರಲ್ಲಿ ಓದ್ತಿರೋದು - ಡಿಕೆ ಶಿವಕುಮಾರ್

ಅಸ್ಸಾಂನಲ್ಲಿ ಯುವಕರಿಗೆ ಉತ್ತಮ ಅವಕಾಶಗಳಿಲ್ಲದ ಕಾರಣ, ಸ್ವತಃ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪುತ್ರ ಬೆಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ. 

Read Full Story

09:11 AM (IST) Mar 31

ವಿಜಯ್ ದೇವರಕೊಂಡ ಮೇಲೆ ಈ ಬಾಲಿವುಡ್ ನಟಿಗೆ ಸೀಕ್ರೆಟ್ ಕ್ರಶ್ ಇತ್ತಂತೆ! ಬಹಿರಂಗವಾಗಿಯೇ ಒಪ್ಪಿಕೊಂಡ 'ಟಾಕ್ಸಿಕ್ ನಟಿ'

ಬಾಲಿವುಡ್ ನಟಿ ಕಿಯಾರಾ ಅಡ್ವಾನಿ, ನಟ ವಿಜಯ್ ದೇವರಕೊಂಡ ಮೇಲೆ ತಮಗೆ ಕ್ರಶ್ ಇತ್ತು ಎಂದು ರಾಣಾ ದಗ್ಗುಬಾಟಿ ಅವರೊಂದಿಗಿನ ಚಿಟ್‌ಚಾಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಇದಲ್ಲದೆ, ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದಲ್ಲಿ ಕಿಯಾರಾ ನಟಿಸಿದ್ದು, ಅದರ ಬಿಡುಗಡೆ ದಿನಾಂಕದ ಬಗ್ಗೆಯೂ ಲೇಖನದಲ್ಲಿ ಮಾಹಿತಿ ಇದೆ.
Read Full Story

09:01 AM (IST) Mar 31

ಬಿರಿಯಾನಿಯಲ್ಲಿ ಚಿಕನ್ ಲೆಗ್‌ಪೀಸ್ ಸಿಗ್ತಿಲ್ಲ ಅಂತ ಮದುವೆ ಮನೆಯಾಯ್ತು ರಣಾಂಗಣ

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದ ಮದುವೆಯೊಂದರಲ್ಲಿ, ಬಿರಿಯಾನಿಯಲ್ಲಿ ಚಿಕನ್ ಲೆಗ್‌ಪೀಸ್ ಕಡಿಮೆ ಇದೆ ಎಂಬ ಕಾರಣಕ್ಕೆ ವರನ ಕಡೆಯವರು ಗಲಾಟೆ ಆರಂಭಿಸಿದ್ದಾರೆ. ಈ ಸಣ್ಣ ಜಗಳವು ವಿಕೋಪಕ್ಕೆ ತಿರುಗಿ, ಮದುವೆ ಮನೆಯೇ ರಣರಂಗವಾಯ್ತು, ಕೊನೆಗೆ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಬೇಕಾಯಿತು.

Read Full Story

08:33 AM (IST) Mar 31

ಏಪ್ರಿಲ್ 1ರಿಂದಲೇ ಆಗಲಿದೆ ಅದಾಯ ತೆರಿಗೆ, ಬ್ಯಾಂಕಿಂಗ್, ಸಂಬಳದಲ್ಲಿ ಮಹತ್ವದ ಬದಲಾವಣೆ

2025ರಿಂದ ಆದಾಯ ತೆರಿಗೆ, ಸಂಬಳ, ಬ್ಯಾಂಕಿಂಗ್, ಮತ್ತು ಹೂಡಿಕೆಗಳಿಗೆ ಸಂಬಂಧಿಸಿದಂತೆ ಹಲವಾರು ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ತೆರಿಗೆ ವಿನಾಯಿತಿ, ಪಿಎಫ್ ಕಡಿತ, ಎಟಿಎಂ ಶುಲ್ಕಗಳು ಮತ್ತು ಡಿಜಿಟಲ್ ವಹಿವಾಟುಗಳ ಮೇಲೆ ನೇರ ಪರಿಣಾಮ ಬೀರಲಿವೆ.
Read Full Story

More Trending News