ವಾಷಿಂಗ್ಟನ್: ‘ಇರಾನ್ ವಿರುದ್ಧದ ಯುದ್ಧದಲ್ಲಿ ನಮಗೆ ಬ್ರಿಟನ್ ಸಹಾಯ ಬೇಕಿಲ್ಲ. ಈಗಾಗಲೇ ಯುದ್ಧವನ್ನು ಗೆದ್ದ ನಂತರ ಯಾರೂ ಕೈಜೋಡಿಸುವ ಅಗತ್ಯವಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ರಿಟನ್ ಪ್ರಧಾನಿಗೆ ಟಾಂಗ್ ನೀಡಿದ್ದಾರೆ.
ಅಮೆರಿಕಕ್ಕೆ ನೆರವು ನೀಡಲು ತಮ್ಮ ಯುದ್ಧನೌಕೆ ಸರ್ವಸನ್ನದ್ಧವಾಗಿದೆ ಎಂದು ಶನಿವಾರ ಬ್ರಿಟನ್ ರಕ್ಷಣಾ ಸಚಿವಾಲಯ ಹೇಳಿತ್ತು. ಇದನ್ನು ತಿರಸ್ಕರಿಸಿರುವ ಟ್ರಂಪ್, ‘ಒಂದು ಕಾಲದಲ್ಲಿ ನಮಗೆ ಎಲ್ಲರಿಗಿಂತ ಶ್ರೇಷ್ಠ ಮಿತ್ರನಾಗಿದ್ದ ಬ್ರಿಟನ್, ಮಧ್ಯಪ್ರಾಚ್ಯಕ್ಕೆ 2 ಯುದ್ಧವಾಹಕ ನೌಕೆಗಳನ್ನು ಕಳಿಸಲು ಚಿಂತನೆ ನಡೆಸುತ್ತಿದೆ. ಆದರೆ ಇನ್ನು ನಮಗೆ ಅವುಗಳ ಅಗತ್ಯವಿಲ್ಲ. ಯುದ್ಧ ಗೆದ್ದ ನಂತರ ಕೈಜೋಡಿಸುವ ಜನ ನಮಗೆ ಬೇಕಿಲ್ಲ’ ಎಂದು ಟ್ರುತ್ ಸೋಶಿಯಲ್ನಲ್ಲಿ ಬರೆದುಕೊಂಡಿದ್ದಾರೆ.
10:24 PM (IST) Mar 09
ರಂಜಾನ್ ತಿಂಗಳಲ್ಲೇ 3ನೇ ಪವಿತ್ರ ಅಲ್ ಅಕ್ಸಾ ಮಸೀದಿ ಬಂದ್ ಮಾಡಿಸಿದ ಇಸ್ರೇಲ್, ಕಾರಣವೇನು? ಜೆರುಸಲೇಂನಲ್ಲಿರುವ ಈ ಮಸೀದಿ ಇಸ್ರೇಲ್ ಸರ್ಕಾರದ ವ್ಯಾಪ್ತಿಯಲ್ಲಿದೆ. ಇದೀಗ ಈ ಮಸೀದಿಯನ್ನು ಇಸ್ರೇಲ್ ಬಂದ್ ಮಾಡಿಸಿದೆ.
09:58 PM (IST) Mar 09
09:55 PM (IST) Mar 09
ಜ್ಯೋತಿಷ ಶಾಸ್ತ್ರದ ಪ್ರಕಾರ, ಒಂದು ಬೆರಳು ಶನಿ ಮಹಾತ್ಮನಿಗೆ ಸಂಬಂಧಿಸಿದ್ದಾಗಿದ್ದು, ಈ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಕೆಲಸ ಕಾರ್ಯಗಳಲ್ಲಿ ವಿಳಂಬ, ನಿರಾಸೆ ಮತ್ತು ನಿಧಾನಗತಿಯ ಪ್ರಗತಿ ಉಂಟಾಗಬಹುದು. 21 ದಿನಗಳ ಕಾಲ ಉಂಗುರವನ್ನು ತೆಗೆದು ವ್ಯತ್ಯಾಸವನ್ನು ಗಮನಿಸಿ ಎನ್ನುತ್ತಾರೆ ಅವರು.
08:44 PM (IST) Mar 09
08:22 PM (IST) Mar 09
ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರು ತಮ್ಮ ಕಿರಿಯ ಮಗ ಅನಂತ್ ಮತ್ತು ಸೊಸೆ ರಾಧಿಕಾ ಮರ್ಚೆಂಟ್ ಅವರೊಂದಿಗೆ ಮುಂಬೈನ 'ರಾಮೇಶ್ವರಂ ಕೆಫೆ'ಗೆ ಭೇಟಿ ನೀಡಿದ್ದರು. ಶತಕೋಟ್ಯಾಧಿಪತಿಯಾದರೂ ಸಾಮಾನ್ಯರಂತೆ ಕೆಫೆಗೆ ಬಂದ ಅವರ ಸರಳತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
07:55 PM (IST) Mar 09
'ತಮಿಳಿಗ ವೆಟ್ರಿ ಕಳಗಂ' ಪಕ್ಷದ ಮೂಲಕ 'ಅಣ್ಣನ್ ಸೀರ್' ಎಂಬ ವಿಶೇಷ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ ಮದುವೆಗೆ 8 ಗ್ರಾಂ ಚಿನ್ನ, ವರ್ಷಕ್ಕೆ 6 ಉಚಿತ ಸಿಲಿಂಡರ್ಗಳು ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯದಂತಹ ಹಲವು ಉಚಿತ ಕೊಡುಗೆಗಳನ್ನು ನೀಡುವ ಭರವಸೆ ನೀಡಿದ್ದಾರೆ.
07:55 PM (IST) Mar 09
ಶಾರ್ಕ್ ಟ್ಯಾಂಕ್ ಇಂಡಿಯಾದ ಪ್ರಮುಖ ಹೂಡಿಕೆದಾರ ಅಮಾನ್ ಗುಪ್ತಾ, ತಾವು ಬೆಂಬಲಿಸಿದ ಸ್ಟಾರ್ಟ್ಅಪ್ಗಳ ಯಶೋಗಾಥೆಯನ್ನು ಹಂಚಿಕೊಂಡಿದ್ದಾರೆ. 'ಲೆಟ್ಸ್ ಟ್ರೈ' ಮತ್ತು 'EM5 ಪರ್ಫ್ಯೂಮ್' ನಂತಹ ಕಂಪನಿಗಳು ಅವರ ಹೂಡಿಕೆಯ ನಂತರ ಮೌಲ್ಯ ಮತ್ತು ಆದಾಯದಲ್ಲಿ ಅಗಾಧ ಬೆಳವಣಿಗೆ ಕಂಡಿವೆ.
07:38 PM (IST) Mar 09
07:31 PM (IST) Mar 09
07:24 PM (IST) Mar 09
ಸಲ್ಮಾನ್ ಖಾನ್ ಅವರ 90 ವರ್ಷದ ತಂದೆ ಸಲೀಂ ಖಾನ್, ಸಣ್ಣ ಬ್ರೈನ್ ಹೆಮರೇಜ್ ಕಾರಣ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 14 ದಿನಗಳಿಂದ ಅವರು ಆಸ್ಪತ್ರೆಯಲ್ಲಿದ್ದಾರೆ. ಇದೀಗ ಅವರ ಆರೋಗ್ಯದ ಬಗ್ಗೆ ಹೊಸ ಅಪ್ಡೇಟ್ ಬಂದಿದೆ.
07:06 PM (IST) Mar 09
ನಟಿ ಐಶ್ವರ್ಯ ಲಕ್ಷ್ಮಿ ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಹಾಕಿದ್ದ ಡ್ರೆಸ್ನಿಂದಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಹಳದಿ ಬಣ್ಣದ ಸ್ಟ್ರಾಪ್ಲೆಸ್, ಸ್ಲೀವ್ಲೆಸ್ ಡ್ರೆಸ್ ಹಾಕಿಕೊಂಡು ಅವರು ಒಂದು ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದರು.
06:56 PM (IST) Mar 09
06:34 PM (IST) Mar 09
ನಟ ವಿಜಯ್ ಮತ್ತು ಅವರ ಪತ್ನಿ ಸಂಗೀತ ಡೈವೋರ್ಸ್ ಪಡೆಯುತ್ತಿದ್ದಾರೆ, ಇದಕ್ಕೆ ನಟಿ ತ್ರಿಷಾ ಜೊತೆಗಿನ ಸಂಬಂಧವೇ ಕಾರಣ ಅಂತ ಸುದ್ದಿ ಹಬ್ಬಿತ್ತು. ಈಗ ಈ ಗಾಸಿಪ್ಗಳ ಬಗ್ಗೆ ಅಭಿಮಾನಿಯೊಬ್ಬರು ಗರಂ ಆಗಿದ್ದು, ಅವರ ಖಾಸಗಿ ಜೀವನದ ಚರ್ಚೆ ಮಾಡುವುದನ್ನು ವಿರೋಧಿಸಿದ್ದಾರೆ.
06:22 PM (IST) Mar 09
ನವವಧು ರಶ್ಮಿಕಾ ಮಂದಣ್ಣ ಅವರಿಗೆ 'ದಿ ಗರ್ಲ್ ಫ್ರೆಂಡ್' ಚಿತ್ರದ ಮನೋಜ್ಞ ನಟನೆಗಾಗಿ ತೆಲಂಗಾಣ ಸರ್ಕಾರದ ಗದ್ದರ್ ಫಿಲ್ಮ್ ಅವಾರ್ಡ್ಸ್ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ವಿಜಯ್ ದೇವರಕೊಂಡ ಜೊತೆಗಿನ ಮದುವೆಯ ನಂತರ ಬಂದ ಈ ಗೌರವ ಅವರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
06:19 PM (IST) Mar 09
ರೆಬಲ್ ಸ್ಟಾರ್ ಪ್ರಭಾಸ್ ಅವರ ಚೊಚ್ಚಲ ಚಿತ್ರ 'ಈಶ್ವರ್'ಗೆ ಅಲ್ಲು ಅರ್ಜುನ್ ಕೂಡ ಆಡಿಷನ್ ಕೊಟ್ಟಿದ್ದರು ಅನ್ನೋದು ನಿಮಗೆ ಗೊತ್ತಾ? ಮಾಸ್ ಕಟೌಟ್ ಮತ್ತು ಫಿಸಿಕ್ ಸರಿಹೊಂದಲ್ಲ ಎಂಬ ಕಾರಣಕ್ಕೆ ನಿರ್ದೇಶಕರು ಅಲ್ಲು ಅರ್ಜುನ್ ಅವರನ್ನು ತಿರಸ್ಕರಿಸಿ, ಪ್ರಭಾಸ್ ಅವರನ್ನು ಆಯ್ಕೆ ಮಾಡಿದ್ದರಂತೆ.
06:16 PM (IST) Mar 09
ಮೂರನೇ ಬಾರಿಗೆ 5 ಮರಿಗಳಿಗೆ ಜನ್ಮ ನೀಡಿದ ಆಫ್ರಿಕಾದಿಂದ ತಂದ ಚೀತಾ ಜ್ವಾಲಾ, 50 ದಾಟಿದ ಸಂಖ್ಯೆ, ಕುನೋ ರಾಷ್ಟ್ರೀಯ ಅಭಯಾರಣ್ಯದಲ್ಲಿ ಇದೀಗ ಜ್ವಾಲಾ ಚೀತಾ ಮರಿಗಳ ಸದ್ದು ಕೇಳಿಸುತ್ತಿದೆ. ಕೇಂದ್ರ ಸಚಿವ ವಿಡಿಯೋ ಪೋಸ್ಟ್ ಮಾಡಿದ್ದಾರೆ.
05:19 PM (IST) Mar 09
ಟಿ20 ವಿಶ್ವಕಪ್ ಗೆದ್ದ ನಂತರ, ಟೀಂ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್ ತಮ್ಮ ಯಶಸ್ಸಿನ ಶ್ರೇಯವನ್ನು ಪತ್ನಿ ಚಾರುಲತಾಗೆ ಸಲ್ಲಿಸಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ 321 ರನ್ ಗಳಿಸಿ, ಅತಿ ಹೆಚ್ಚು ಸಿಕ್ಸರ್ಗಳ ದಾಖಲೆ ಬರೆದ ಸಂಜು ಸ್ಯಾಮ್ಸನ್.
05:14 PM (IST) Mar 09
ರಾಧಿಕಾ ಶರತ್ಕುಮಾರ್ ನಟನೆಯ 'ತಾಯಿ ಕಿಳವಿ' ಸಿನಿಮಾ ಥಿಯೇಟರ್ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಕೇವಲ 10 ದಿನಗಳಲ್ಲಿ ಬಾಕ್ಸಾಫೀಸ್ನಲ್ಲಿ ದೊಡ್ಡ ಮೊತ್ತವನ್ನು ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.
05:02 PM (IST) Mar 09
ಮಹಿಳಾ ಸ್ಕೂಬಾ ಡೈವರ್ನ ಎಲ್ಲೆಂದರಲ್ಲಿ ಮುಟ್ಟಿ ಕಿರುಕುಳ ಕೊಟ್ಟ ತರಬೇತುದಾರ, ವಿಡಿಯೋ ಬಹಿರಂಗವಾಗಿದೆ. ಯುವತಿ ಸ್ಕೂಬಾ ಡೈವಿಂಗ್ ಮಾಡುವ ವೇಳೆ ಈ ಘಟನೆ ನಡೆದಿದೆ. ಇದೀಗ ಭಾರಿ ಆಕ್ರೋಶಗಳು ವ್ಯಕ್ತವಾಗಿದೆ.
04:59 PM (IST) Mar 09
04:45 PM (IST) Mar 09
ಸದ್ಯಕ್ಕೆ ಬಾಕ್ಸಾಫೀಸ್ನಲ್ಲಿ ಎರಡು ಸಿನಿಮಾಗಳದ್ದೇ ಸುದ್ದಿ. ಒಂದು ರಣವೀರ್ ಸಿಂಗ್ ನಟನೆಯ 'ಧುರಂಧರ್ 2', ಇನ್ನೊಂದು ಯಶ್ ಅಭಿನಯದ 'ಟಾಕ್ಸಿಕ್'. ಎರಡೂ ಚಿತ್ರಗಳು ಮಾರ್ಚ್ 19 ರಂದು ಒಂದೇ ದಿನ ರಿಲೀಸ್ ಆಗ್ತಿವೆ. ವಿಶ್ವಾದ್ಯಂತ ತೆರೆ ಕಾಣುತ್ತಿರುವ ಈ ಸಿನಿಮಾಗಳ ಅಡ್ವಾನ್ಸ್ ಬುಕಿಂಗ್ ಕೂಡ ಶುರುವಾಗಿದೆ.
04:40 PM (IST) Mar 09
ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ, ಶಕೂನ್ ಗ್ರೂಪ್ ಎಂಡಿ ಸಾವು, BMW ಕಾರು ಪುಡಿ ಪುಡಿ, ವೇಗವಾಗಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದೆ. ಮಾಜಿ ಸಿಎಂ ಸೇರಿ ಹಲವರು ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ.
04:28 PM (IST) Mar 09
ಡಾನ್, ಕ್ಯಾಪ್ಟನ್ ಮಿಲ್ಲರ್ ಅಂತಹ ಹಿಟ್ ಸಿನಿಮಾಗಳ ಮೂಲಕ ಸೌತ್ ಇಂಡಿಯಾದಲ್ಲಿ ಫೇಮಸ್ ಆದ ನಟಿ ಪ್ರಿಯಾಂಕಾ ಮೋಹನ್, ತಮ್ಮ ವೃತ್ತಿಜೀವನದ ಒಂದು ಹಂತದಲ್ಲಿ ಎದುರಿಸಿದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ.
04:03 PM (IST) Mar 09
ಪಾಡ್ಕಾಸ್ಟ್ನಲ್ಲಿ ಮಾತನಾಡುತ್ತಾ ಗರ್ಭಿಣಿ ಪತ್ನಿಗೆ ಡಿವೋರ್ಸ್ ಕೊಟ್ಟ ಯೂಟ್ಯೂಬರ್, ಯೂಟ್ಯೂಬರ್ ತನ್ನ ಯೂಟ್ಯೂಬ್ ಶೈಲಿಯಲ್ಲೇ ಡಿವೋರ್ಸ್ ನೀಡಿದ ಘಟನೆ ನಡೆದಿದೆ. ಅತ್ತ ಪತ್ನಿಗೂ ಡಿವೋರ್ಸ್ ಕೊಟ್ಟಿರುವುದು ವಿಡಿಯೋ ನೋಡಿಯೇ ಗೊತ್ತಾಗಿದೆ.
03:59 PM (IST) Mar 09
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಪತ್ನಿ ರಿತಿಕಾ ಸಜ್ದೇ ಮೈದಾನದಲ್ಲಿ ಗಂಭೀರವಾಗಿ ಚರ್ಚಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಟಿ20 ವಿಶ್ವಕಪ್ ವೇಳೆ ನಡೆದ ಈ ಘಟನೆಯು ಇಬ್ಬರ ನಡುವೆ ಜಗಳ ನಡೆದಿದೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
03:57 PM (IST) Mar 09
03:22 PM (IST) Mar 09
ಪಶ್ಚಿಮ ಬಂಗಾಳ ಪ್ರವಾಸದ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭದ್ರತೆ ಮತ್ತು ಶಿಷ್ಟಾಚಾರದಲ್ಲಿ ಗಂಭೀರ ಲೋಪಗಳು ಕಂಡುಬಂದಿವೆ. ಈ 'ಬ್ಲೂ ಬುಕ್' ಉಲ್ಲಂಘನೆಗಳ ಬಗ್ಗೆ ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿ ವರದಿ ಕೇಳಿದೆ.
03:04 PM (IST) Mar 09
ಬಿಸಿಯೂಟದ ಮಹಿಳಾ ಕುಕ್ ಜೊತೆ ಹೆಡ್ ಮಾಸ್ಟರ್ ಕುಚ್ ಕುಚ್, ಶಾಲಾ ಅಧ್ಯಕ್ಷ ಸೇರಿ ಗ್ರಾಮಸ್ಥರಿಂದ ಗೂಸ, ಕರ್ತವ್ಯದಲ್ಲಿದ್ದಾಗಲೇ ಹೆಡ್ ಮಾಸ್ಟರ್ ಮೇಲೆ ದಾಳಿ ನಡೆಸಲಾಗಿದೆ. ಬಳಿಕ ಚಪ್ಪಲಿ ಹಾರ ಹಾಕಿ ಪರೇಡ್ ನಡೆಸಿದ ಘಟನೆ ನಡೆದಿದೆ.
02:31 PM (IST) Mar 09
02:11 PM (IST) Mar 09
ಕೋಮಲ್ ಜಮಾವಲ್ ಎಂಬ ಮಹಿಳೆ ಗ್ವಿಲೆನ್-ಬಾರ್ ಸಿಂಡ್ರೋಮ್ನಿಂದಾಗಿ ವೈದ್ಯರಿಂದ ಮೃತಪಟ್ಟಿದ್ದಾರೆಂದು ಘೋಷಿಸಲ್ಪಟ್ಟರು. ಆದರೆ, ಅವರ ಪತಿ 35 ನಿಮಿಷಗಳ ಕಾಲ ಸಿಪಿಆರ್ ಮಾಡಿ ಅವರನ್ನು ಬದುಕಿಸಿದ್ದು, ಕುಟುಂಬದ ಬೆಂಬಲದಿಂದ ಚೇತರಿಸಿಕೊಂಡ ತಮ್ಮ ಸ್ಪೂರ್ತಿದಾಯಕ ಕತೆಯನ್ನು ಅವರು ಹಂಚಿಕೊಂಡಿದ್ದಾರೆ.
02:05 PM (IST) Mar 09
01:44 PM (IST) Mar 09
ಯುವಕನೊಬ್ಬ ಮಧ್ಯವರ್ತಿಗಳಿಗೆ ಹಣ ನೀಡಿ ದೇವಸ್ಥಾನದಲ್ಲಿ ಮದುವೆಯಾಗುತ್ತಾನೆ. ಆದರೆ, ಮದುವೆಯಾದ ಐದನೇ ದಿನಕ್ಕೆ ನವವಧು ಮನೆಯಲ್ಲಿದ್ದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ. ಈ ಮೂಲಕ ತಾನು ದೊಡ್ಡ ವಂಚನೆಗೆ ಒಳಗಾಗಿರುವುದಾಗಿ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ.
01:31 PM (IST) Mar 09
2026ರ ಟಿ20 ವಿಶ್ವಕಪ್ನಲ್ಲಿ ಅದ್ಭುತ ಆಟವಾಡಿ 'ಟೂರ್ನಿ ಶ್ರೇಷ್ಠ' ಪ್ರಶಸ್ತಿ ಗೆದ್ದ ಸಂಜು ಸ್ಯಾಮ್ಸನ್, ತಮ್ಮ ಕಷ್ಟದ ದಿನಗಳಲ್ಲಿ ಸಚಿನ್ ತೆಂಡೂಲ್ಕರ್ ನೀಡಿದ ಬೆಂಬಲದ ಬಗ್ಗೆ ಭಾವುಕ ಮಾತುಗಳನ್ನಾಡಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.
01:02 PM (IST) Mar 09
ಬಿಹಾರ ಶಾಸಕಿ, ಗಾಯಕಿ ಮೈಥಿಲಿ ಠಾಕೂರ್ ಅವರ ಭಾವುಕ ವಿಡಿಯೋವೊಂದು ವೈರಲ್ ಆಗಿದೆ. ದೇವಸ್ಥಾನವೊಂದರಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಕಾಣಬಹುದು. 'ನನ್ನ ಜೀವನದಲ್ಲಿ ಹೀಗಾಗಿದ್ದು ಇದೇ ಮೊದಲು, ನನ್ನನ್ನು ನಾನೇ ನಿಯಂತ್ರಿಸಿಕೊಳ್ಳಲು ಆಗಲಿಲ್ಲ' ಎಂದು ಮೈಥಿಲಿ ಠಾಕೂರ್ ಹೇಳದ್ದಾರೆ.
12:20 PM (IST) Mar 09
12:14 PM (IST) Mar 09
ಕೋಚ್ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಿದೆ. ಈ ಐತಿಹಾಸಿಕ ಗೆಲುವನ್ನು ಗಂಭೀರ್ ಅವರು ತಮ್ಮ ಹಿಂದಿನ ಕೋಚ್ಗಳಾದ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ಗೆ ಅರ್ಪಿಸಿದ್ದಾರೆ. ತಂಡವನ್ನು ಬಲಿಷ್ಠವಾಗಿ ರೂಪಿಸಿದ & ಯುವ ಆಟಗಾರರನ್ನು ಬೆಳೆಸಿದ ಅವರ ಕೊಡುಗೆ ಸ್ಮರಿಸಿದ್ದಾರೆ.
11:30 AM (IST) Mar 09
ಬಂಗಾಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅವಮಾನ ಮಾಡಲಾಗಿದೆ ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಟಿಎಂಸಿ ತಿರುಗೇಟು ನೀಡಿದೆ. ರಾಷ್ಟ್ರಪತಿ ನಿಂತಿದ್ದರೆ, ಪ್ರಧಾನಿ ಮತ್ತು ಅಡ್ವಾಣಿ ಕುಳಿತಿರುವ ಹಳೆಯ ಫೋಟೋವನ್ನು ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
11:05 AM (IST) Mar 09
10:05 AM (IST) Mar 09
09:02 AM (IST) Mar 09