Published : Aug 05, 2026, 07:06 AM ISTUpdated : Aug 05, 2026, 08:22 PM IST

India Latest News Live: ಸಂಸದರು ಶಾಸಕರಿಗಾಗಿ ಹವಾಮಾನ- ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರ

ಸಾರಾಂಶ

ನವದೆಹಲಿ: ಯೆಮೆನ್‌ ಕರಾವಳಿಯ ಕೆಂಪು ಸಮುದ್ರದಲ್ಲಿ ಭಾರತದ ಮೊದಲ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಈ ವೇಳೆ ನೌಕೆಯಲ್ಲಿದ್ದ ಎಲ್ಲಾ 14 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಭಾರತೀಯ ಧ್ವಜವನ್ನು ಹೊಂದಿದ್ದ ವಾಣಿಜ್ಯ ಹಡಗು ಎಂಎಸ್‌ವಿ ಫೈಜ್ ನೂರ್ ಒಲಿಯಾ ಹಡಗಿನ ಮೇಲೆ ದಾಳಿ ನಡೆದಿದೆ.

ಘಟನೆ ಸಂಭವಿಸುತ್ತಿದ್ದಂತೆ ಯೆಮೆನ್‌ನ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಿ ಮೊಖಾ ಬಂದರಿಗೆ ಕರೆತಂದಿದ್ದಾರೆ. ಘಟನೆಯ ಹೊಣೆಯನ್ನು ಇದುವರೆಗೂ ಯಾರೂ ಹೊತ್ತುಕೊಂಡಿಲ್ಲ. ಕೆಂಪು ಸಮುದ್ರದಲ್ಲಿ ನಡೆದ ಈ ಘಟನೆಯನ್ನು ಭಾರತ ಖಂಡಿಸಿದ್ದು, ಇದು ಅತ್ಯಂತ ಕಳವಳಕಾರಿ ಎಂದು ಆತಂಕ ವ್ಯಕ್ತಪಡಿಸಿದೆ.

08:22 PM (IST) Aug 05

ಸಂಸದರು ಶಾಸಕರಿಗಾಗಿ ಹವಾಮಾನ- ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರ

ಕೃಷಿ ಸ್ಥೈರ್ಯವನ್ನು ಬಲಪಡಿಸಲು ಹಾಗೂ ದೀರ್ಘಕಾಲೀನ ಬೆಳವಣಿಗೆಗೆ ಬೆಂಬಲ ನೀಡಲು ತಂತ್ರಜ್ಞಾನ, ಬೆಳೆ ವಿಮೆ, ನೀರಾವರಿ ಯೋಜನೆಗಳು ಹಾಗೂ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ ಕುರಿತು ಕಾರ್ಯಗಾರದಲ್ಲಿ ಮಾಹಿತಿ ನೀಡಲಾಯಿತು.

Read Full Story

08:14 PM (IST) Aug 05

1000 ವರ್ಷಗಳ ಹಳೇ ಮರ.. ಅದರೊಳಗೆ ರೆಸ್ಟೋರೆಂಟ್‌ನಂಥ ಬಾರ್‌! ಇದು ಪೊಟರೆಯೊಳಗಿನ ಲೋಕ..!

ದಕ್ಷಿಣ ಆಫ್ರಿಕಾದಲ್ಲಿ 1000 ವರ್ಷಕ್ಕೂ ಹಳೆಯ ಬಾಬಾಬ್ ಮರದ ಪೊಟರೆಯೊಳಗೆ 'ಸನ್‌ಲ್ಯಾಂಡ್ ಬಾಬಾಬ್ ಟ್ರೀ ಬಾರ್' ಎಂಬ ವಿಶಿಷ್ಟ ಬಾರ್ ಇದೆ. 1993ರಲ್ಲಿ ಮರದೊಳಗಿನ ಖಾಲಿ ಜಾಗವನ್ನು ಬಳಸಿ ನಿರ್ಮಿಸಲಾದ ಈ ಬಾರ್, ಏಕಕಾಲದಲ್ಲಿ 15-20 ಜನರಿಗೆ ಆಸನ ವ್ಯವಸ್ಥೆ ಕಲ್ಪಿಸುತ್ತದೆ ಮತ್ತು ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಒಂದು ಅದ್ಭುತ ತಾಣವಾಗಿದೆ.
Read Full Story

07:18 PM (IST) Aug 05

ಹಣ ಪಡೆದು ಕಾನೂನು ಬಾಹಿರ, ಪ್ರೊಪಗಾಂಡ ಕಂಟೆಂಟ್ ಪ್ರಮೋಟ್, ತಪ್ಪು ಒಪ್ಪಿಕೊಂಡ ಮೆಟಾ

ಕೆಲ ಕಂಟೆಂಟ್ ಪ್ರಮೋಶನ್ ಮಾಡಲು ಮೆಟಾ ಸಂಸ್ಥೆಗೆ ವಿಪರೀತ ಹಣ ಬಂದಿದೆ. ಪ್ರಪೋಗಾಂಡ, ಕಾನೂನು ಬಾಹಿರ ಕಂಟೆಂಟ್‌ಗಳನ್ನು ಪ್ರಮೋಟ್ ಮಾಡಲಾಗಿದೆ ಎಂದು ಮೆಟಾ ತನ್ನ ಕ್ಷಮಾಪಣಾ ಪತ್ರದಲ್ಲಿ ಹೇಳಿದೆ.

Read Full Story

06:44 PM (IST) Aug 05

ಪನೀರ್ ಪ್ರಿಯರಿಗೆ ಶಾಕ್​ - ಇನ್ಮುಂದೆ ಮಾರಿದ್ರೆ ಜೈಲು ಶಿಕ್ಷೆ! 'ಮಹಾ' ನಿರ್ಧಾರ- ಏನಿದು Analogue Paneer

ಮಾರುಕಟ್ಟೆಯಲ್ಲಿ 'ಅನಲಾಗ್ ಪನೀರ್' ಹೆಸರಿನಲ್ಲಿ ನಕಲಿ ಪನೀರ್ ಹಾವಳಿ ಹೆಚ್ಚಾಗಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಇದನ್ನು ನಿಷೇಧಿಸಿದ್ದು, ಅಸಲಿ ಮತ್ತು ನಕಲಿ ಪನೀರ್ ಅನ್ನು ಗುರುತಿಸುವ ಸುಲಭ ವಿಧಾನಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story

06:06 PM (IST) Aug 05

ಪತ್ನಿಯ ಓದಿಗಾಗಿ ಕೂಲಿಯನ್ನೂ ಮಾಡಿದ, ಜಮೀನೂ ಮಾರಿದ - ಕೆಲಸ ಸಿಕ್ಕ ಮೇಲೆ ಸತಿ ಶಿರೋಮಣಿ ಮಾಡಿದ್ದೇನು

ಪತ್ನಿಯ ಓದಿನ ಕನಸಿಗಾಗಿ ಕೂಲಿ ಮಾಡಿ, ಜಮೀನು ಮಾರಿ ತ್ಯಾಗ ಮಾಡಿದ ಗಂಡ ಅಮನ್ ಕುಮಾರ್. ಆದರೆ, ಉನ್ನತ ಉದ್ಯೋಗ ಸಿಕ್ಕ ಬಳಿಕ ಪತ್ನಿ ಗುಂಜನ್ ಕುಮಾರಿ, ಗಂಡನನ್ನೇ ತಿರಸ್ಕರಿಸಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡಳು. ಪತ್ನಿಯ ವಂಚನೆಯನ್ನು ಕಣ್ಣಾರೆ ಕಂಡ ಪತಿ ಇದೀಗ ನ್ಯಾಯಕ್ಕಾಗಿ ಹೋರಾಡುತ್ತಿದ್ದಾನೆ.
Read Full Story

04:52 PM (IST) Aug 05

ಚೊಚ್ಚಲ ಪಂದ್ಯದಲ್ಲೇ ಬೊಂಬಾಟ್‌ ಫಿಫ್ಟಿ, ನಂತ್ರ ಟೀಂ ಇಂಡಿಯಾದಲ್ಲಿ ಎಂದೂ ಕಾಣಿಸಿಕೊಳ್ಳದ ನತದೃಷ್ಟ ಕ್ರಿಕೆಟಿಗ!

ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಫೈಝ್ ಫಝಲ್, ತಮ್ಮ ಮೊದಲ ಪಂದ್ಯದಲ್ಲೇ ಅಜೇಯ ಅರ್ಧಶತಕ ಸಿಡಿಸಿದ್ದರು. ಆದರೆ ದುರದೃಷ್ಟವಶಾತ್, 2016ರ ಜಿಂಬಾಬ್ವೆ ವಿರುದ್ಧದ ಆ ಪಂದ್ಯವೇ ಅವರ ವೃತ್ತಿಜೀವನದ ಏಕೈಕ ಅಂತರಾಷ್ಟ್ರೀಯ ಪಂದ್ಯವಾಗಿ ಉಳಿಯಿತು.
Read Full Story

04:36 PM (IST) Aug 05

ಭಾರತದಲ್ಲಿ ಫೇಸ್‌ಬುಕ್ ಬ್ಯಾನ್ ಆಗುತ್ತಾ? ಮೂರು ದಿನದ ಡೆಡ್ ಲೈನ್ ನೀಡಿದ ಸಂಸದೀಯ ಸಮಿತಿ

ಭಾರತದಲ್ಲಿ ಫೇಸ್‌ಬುಕ್ ಬ್ಯಾನ್ ಆಗುತ್ತಾ? ಪ್ರಧಾನಿ ಮೋದಿ ವಿಡಿಯೋ ಡಿಲೀಟ್ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಮೆಟಾಗೆ ಇದೀಗ ಸಂಸದೀಯ ಸಮಿತಿ ಕೇವಲ 3 ದಿನದ ಡೆಡ್‌ಲೈನ್ ನೀಡಿದೆ. ಮೂರು ದಿನ ಬಳಿಕ ಫೇಸ್‌ಬುಕ್ ಬಂದ್ ಆಗುತ್ತಾ?

Read Full Story

04:12 PM (IST) Aug 05

ಕಾರುಗಳಲ್ಲಿ ಚೀನಾ ಬ್ಯಾಟರಿ ಬಳಸೋದಿಲ್ಲ ಎಂದ ಟಾಟಾ, ಸ್ವದೇಶಿ LFP ತಂತ್ರಜ್ಞಾನ ಅಭಿವೃದ್ಧಿಗೆ ಬಿಗ್ ಪ್ಲಾನ್, ಬೆಂಗಳೂರಲ್ಲಿ R&D ಕೇಂದ್ರ!

ಚೀನಾ ಸರ್ಕಾರದ ಬ್ಯಾಟರಿ ತಂತ್ರಜ್ಞಾನ ರಫ್ತು ನಿರ್ಬಂಧದ ಹಿನ್ನೆಲೆಯಲ್ಲಿ, ಟಾಟಾ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ವಾಹನಗಳಲ್ಲಿ ಚೀನೀ ಬ್ಯಾಟರಿಗಳ ಬಳಕೆಯನ್ನು ನಿಲ್ಲಿಸಲು ನಿರ್ಧರಿಸಿದೆ.

Read Full Story

04:06 PM (IST) Aug 05

ಗೋವಾ ಕ್ಯಾಸಿನೋ ಪ್ಲಾನ್ ಮಾಡಿದ್ದೀರಾ? ಹೊಸ ನಿಯಮ ಜಾರಿ, ಯಾರಿಗೆಲ್ಲಾ ಪ್ರವೇಶ ಬ್ಯಾನ್?

ಮಳೆಗಾಲ ಮುಗಿಯುತ್ತಿದ್ದಂತೆ ಗೋವಾ ಪ್ರವಾಸಕ್ಕೆ ಪ್ಲಾನ್ ಮಾಡಿದ್ದೀರಾ? ಗೋವಾ ಹೋದಾಗ ಕ್ಯಾಸಿನೋಗೆ ಭೇಟಿ ನೀಡದೆ ಬರುವುದು ಹೇಗೆ ಎಂದು ಆಲೋಚಿಸುತ್ತಿದ್ದೀರಾ?ಪ್ರವೇಶ ಬ್ಯಾನ್ ಸೇರಿದಂತೆ ಹಲವು ನಿರ್ಬಂಧಗಳು ಜಾರಿಯಾಗಿದೆ. ಯಾರಿಗೆಲ್ಲಾ ಬ್ಯಾನ್?

Read Full Story

03:40 PM (IST) Aug 05

ಆಗಸ್ಟ್ 28ಕ್ಕೆ MG ನೂತನ SUV ರಿಲೀಸ್‌ - ಮಹೀಂದ್ರಾ XUV 7XO, ಟಾಟಾ ಸಫಾರಿಗೆ ಶುರುವಾಯ್ತು ನಡುಕ!

ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ತನ್ನ ಹೊಸ 'ಹೆಕ್ಟರ್ ಹ್ಯಾಕ್' ಎಸ್‌ಯುವಿಯನ್ನು ಆಗಸ್ಟ್ 28 ರಂದು ಬಿಡುಗಡೆ ಮಾಡಲಿದೆ. 'ಎಡಾಪ್ಟ್' ಪ್ಲಾಟ್‌ಫಾರ್ಮ್ ಆಧಾರಿತ ಈ ಕಾರು, ಸಂಪೂರ್ಣ ಎಲೆಕ್ಟ್ರಿಕ್ (EV) ಮತ್ತು ಪ್ಲಗ್-ಇನ್ ಹೈಬ್ರಿಡ್ (PHEV) ಆವೃತ್ತಿಗಳಲ್ಲಿ ಲಭ್ಯವಿರಲಿದೆ.

Read Full Story

03:29 PM (IST) Aug 05

ಗಂಭೀರ್‌ ಅಲ್ಲ, ದ್ರಾವಿಡ್ ಕೂಡಾ ಅಲ್ಲ, ಇವರೇ ನೋಡಿ ಮೊಹಮ್ಮದ್ ಶಮಿ ಪಾಲಿನ ಟೀಂ ಇಂಡಿಯಾ ಫೇವರೇಟ್ ಕೋಚ್..!

ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ, ರವಿಶಾಸ್ತ್ರಿಯವರೇ ತಮ್ಮ ನೆಚ್ಚಿನ ಕೋಚ್ ಎಂದು ಬಹಿರಂಗಪಡಿಸಿದ್ದಾರೆ. 2023ರ ವಿಶ್ವಕಪ್ ಸೋಲಿನ ನೋವನ್ನು ಹಂಚಿಕೊಂಡಿರುವ ಅವರು, ಸದ್ಯ ತಂಡದಲ್ಲಿನ ತಮ್ಮ ಭವಿಷ್ಯದ ಬಗ್ಗೆಯೂ ಮಾತನಾಡಿದ್ದಾರೆ.
Read Full Story

02:44 PM (IST) Aug 05

ಇಎಫ್‌ಪಿಒ ಸೇವೆಗಳು ವಾರಗಳ ಕಾಲ ವಿಳಂಬವಾಗುವುದಕ್ಕೆ ಕೊನೆಗೂ ಸಿಕ್ಕಿತು ಉತ್ತರ - ಹೊರಬಿತ್ತು ಅಸಲಿ ಕಾರಣ!

ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ತೀವ್ರ ಸಿಬ್ಬಂದಿ ಕೊರತೆ, ವಿಶೇಷವಾಗಿ ಐಟಿ ವಿಭಾಗದಲ್ಲಿ ಹಲವು ವರ್ಷಗಳಿಂದ ನೇಮಕಾತಿ ನಡೆಯದಿರುವುದು ಆನ್‌ಲೈನ್ ಸೇವೆಗಳ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.

Read Full Story

01:46 PM (IST) Aug 05

2 ಸಾವಿರ ರೂ.ಗಿಂತ ಹೆಚ್ಚು UPI ವಹಿವಾಟಿಗೆ ಇನ್ಮುಂದೆ ಶುಲ್ಕ? ಯಾರಿಗೆಲ್ಲಾ ಅನ್ವಯ? ಇಲ್ಲಿದೆ ಡಿಟೇಲ್ಸ್​

ಭವಿಷ್ಯದಲ್ಲಿ, ಯುಪಿಐ ಮೂಲಕ ಪಾವತಿ ಸ್ವೀಕರಿಸುವ ವ್ಯಾಪಾರಿಗಳು ನಿರ್ದಿಷ್ಟ ಮಿತಿಯ ನಂತರ ಶುಲ್ಕ ಪಾವತಿಸಬೇಕಾಗಬಹುದು. ಹಣಕಾಸು ಸಚಿವಾಲಯವು ಲೋಕಸಭೆಯಲ್ಲಿ ಮಂಡಿಸಿದ ಮಸೂದೆಯು, ದೊಡ್ಡ ವ್ಯಾಪಾರಿಗಳ ಮೇಲೆ ಮಾತ್ರ ಈ ಶುಲ್ಕವನ್ನು ವಿಧಿಸಲು ಪ್ರಸ್ತಾಪಿಸಿದೆ. ಇದು ಸಾಮಾನ್ಯ ಜನರ ದೈನಂದಿನ ವಹಿವಾಟುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
Read Full Story

01:23 PM (IST) Aug 05

Costume Controversy - 'ರಾಮಾಯಣ' ಕಾಸ್ಟ್ಯೂಮ್‌ ಬಗ್ಗೆ ಭಾರೀ ಟ್ರೋಲ್; ನೆಟ್ಟಿಗರಿಗೆ ಖಡಕ್‌ ಡೋಸ್ ಕೊಟ್ಟ ವಸ್ತ್ರ-ವಿನ್ಯಾಸಕರು!

‘ಕೇವಲ ಅರ್ಧಂಬರ್ಧ ಲೀಕ್ ಆದ ಫೋಟೋಗಳನ್ನು ನೋಡಿ ಸಿನಿಮಾ ಬಗ್ಗೆ ತೀರ್ಮಾನಕ್ಕೆ ಬರಬೇಡಿ’ ಎಂದು ಚಿತ್ರತಂಡ ವಿನಂತಿಸಿದೆ. ‘ಸಿನಿಮಾ ಎಂಬುದು ಒಂದು ಅನುಭವ. ಬೆಳ್ಳಿತೆರೆಯ ಮೇಲೆ ಆ ಪಾತ್ರಗಳು ಜೀವತಳೆದು ಬಂದಾಗ ನೀವು ಈ ಉಡುಪುಗಳ ಸೌಂದರ್ಯವನ್ನು ಕಣ್ಣುಂಬಿಕೊಳ್ಳುತ್ತೀರಿ. ಅಲ್ಲಿಯವರೆಗೆ ಸ್ವಲ್ಪ ತಾಳ್ಮೆಯಿರಲಿ’ ಎಂದು ಡಿಸೈನರ್‌ಗಳು ಹೇಳಿದ್ದಾರೆ.

Read Full Story

01:11 PM (IST) Aug 05

ಅಮೆರಿಕದಲ್ಲಿ 28,000 ವಲಸಿಗ ಟ್ರಕ್ ಚಾಲಕರ ಲೈಸೆನ್ಸ್ ರದ್ದು! ಭಾರತೀಯರ ಉದ್ಯೋಗಕ್ಕೂ ಕುತ್ತು?

ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು ಸುಮಾರು 28,000 ವಲಸಿಗ ಟ್ರಕ್ ಚಾಲಕರ ಪರವಾನಗಿಯನ್ನು ರದ್ದುಗೊಳಿಸಿದೆ. ಈ ಕಠಿಣ ನಿರ್ಧಾರವು ಅಮೆರಿಕದ ಟ್ರಕ್ಕಿಂಗ್ ಉದ್ಯಮದಲ್ಲಿರುವ ಭಾರತೀಯ ಚಾಲಕರ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದ್ದು, ಅವರ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ.
Read Full Story

01:02 PM (IST) Aug 05

​"ತಾಕತ್ ಇದ್ರೆ ನನ್ನನ್ನು ತಂಡದಿಂದ ಕೈಬಿಡಿ!" - ಬಿಸಿ‌ಸಿಐ ಸೆಲೆಕ್ಟರ್ಸ್‌ಗೆ ರೋಹಿತ್ ಶರ್ಮಾ ಕೊಟ್ಟ ಖಡಕ್ ವಾರ್ನಿಂಗ್ ರಹಸ್ಯ ಬಿಚ್ಚಿಟ್ಟ ಮಾಜಿ ಆಟಗಾರ!

ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ ರೋಹಿತ್ ಶರ್ಮಾ, ತಮ್ಮ 2027ರ ವಿಶ್ವಕಪ್ ಆಡುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಈ ಶತಕದ ಬಗ್ಗೆ ಮಾತನಾಡಿರುವ ಮೊಹಮ್ಮದ್ ಕೈಫ್, ಇದು 'ಧೈರ್ಯವಿದ್ದರೆ ನನ್ನನ್ನು ಕೈಬಿಟ್ಟು ನೋಡಿ' ಎಂದು ಆಯ್ಕೆ ಸಮಿತಿಗೆ ರೋಹಿತ್ ನೀಡಿದ ಸವಾಲು ಎಂದು ವಿಶ್ಲೇಷಿಸಿದ್ದಾರೆ.
Read Full Story

01:00 PM (IST) Aug 05

'ಇದು ನನ್ನ ಕೊನೆಯ ಪೋಸ್ಟ್'​ - CJP ಪ್ರತಿಭಟನೆ ವೇಳೆ ವಿವಾದಕ್ಕೀಡಾಗಿದ್ದ ಇನ್​ಫ್ಲುಯೆನ್ಸರ್​ ಶ್ರದ್ಧಾ ಸಿಂಗ್ ಮಾತು

ಕಂಟೆಂಟ್ ಕ್ರಿಯೇಟರ್ ಶ್ರದ್ಧಾ ಸಿಂಗ್, ಜಂತರ್ ಮಂತರ್ ಪ್ರತಿಭಟನೆಯಲ್ಲಿ RAF ಸಿಬ್ಬಂದಿಯನ್ನು ಅಣಕಿಸಿ ವಿವಾದಾತ್ಮಕ ರೀಲ್ ಹಂಚಿಕೊಂಡಿದ್ದರು. ಈ ವಿಡಿಯೋದಿಂದಾಗಿ ತೀವ್ರ ಟ್ರೋಲಿಂಗ್, ಬೆದರಿಕೆಗಳನ್ನು ಎದುರಿಸಿದ ಅವರು, ಕ್ಷಮೆಯಾಚಿಸಿದರೂ ಕಿರುಕುಳ ನಿಲ್ಲದ ಕಾರಣ, ಇದೇ ನನ್ನ ಕೊನೆಯ ಪೋಸ್ಟ್ ಎಂದು ಹೇಳಿ ಈ ಅಧ್ಯಾಯವನ್ನು ಮುಗಿಸುವ ನಿರ್ಧಾರ ಪ್ರಕಟಿಸಿದ್ದಾರೆ.
Read Full Story

12:12 PM (IST) Aug 05

Non-dairy paneer ಬ್ಯಾನ್ ಮಾಡಿದ ಸರ್ಕಾರ.. ಪನೀರ್‌ ಪ್ರಿಯರಿಗೆ ಶಾಕ್!‌ ಆರೋಗ್ಯಕ್ಕೆ ಎಷ್ಟು ಹಾನಿಕಾರಕ?

ಗ್ರಾಹಕರ ಆರೋಗ್ಯ ಮತ್ತು ತಪ್ಪು ಲೇಬಲಿಂಗ್ ತಡೆಯಲು ಮಹಾರಾಷ್ಟ್ರ ಸರ್ಕಾರವು 'ಅನಲಾಗ್ ಪನೀರ್' ಅನ್ನು ನಿಷೇಧಿಸಿದೆ. ಅಸಲಿ ಪನೀರ್ ಎಂದು ಹೇಳಿ ಮಾರಾಟವಾಗುತ್ತಿದ್ದ ಈ ಕೃತಕ ಪನೀರ್ ಎಂದರೇನು, ಅದರ ಅಪಾಯಗಳೇನು ಮತ್ತು ಅದನ್ನು ಗುರುತಿಸುವುದು ಹೇಗೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story

11:29 AM (IST) Aug 05

NEET Paper Leak - ಎನ್‌ಟಿಎ ಕಚೇರಿಗಳ 24x7 ಭದ್ರತೆಗೆ ₹7.5 ಕೋಟಿ ಟೆಂಡರ್!

ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನ್ನ ಕಚೇರಿಗಳು ಮತ್ತು ಗೌಪ್ಯ ಸಾಮಗ್ರಿಗಳ ಭದ್ರತೆಗಾಗಿ ₹7.5 ಕೋಟಿ ಮೌಲ್ಯದ ಟೆಂಡರ್ ಕರೆದಿದೆ.

Read Full Story

11:01 AM (IST) Aug 05

ರೋಹಿತ್‌ ಶರ್ಮಾಗೆ ಖೆಡ್ಡಾ ತೋಡಲು ಹೋಗಿ ತಾವೇ ಬಿದ್ರಾ ಅಜಿತ್ ಅಗರ್ಕರ್? ಚೀಫ್ ಸೆಲೆಕ್ಟರ್ ಹುದ್ದೆಯಿಂದ ಶೀಘ್ರದಲ್ಲೇ ಗೇಟ್‌ಪಾಸ್!

ರೋಹಿತ್ ಶರ್ಮಾ ವಿವಾದದ ಬೆನ್ನಲ್ಲೇ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರ ಕುರ್ಚಿ ಅಲುಗಾಡುತ್ತಿದೆ. ಬಿಸಿಸಿಐ, ಅಗರ್ಕರ್ ಅವರನ್ನು ಬದಲಿಸಿ ಎನ್‌ಸಿಎ ಮುಖ್ಯಸ್ಥ ವಿ.ವಿ.ಎಸ್. ಲಕ್ಷ್ಮಣ್ ಅವರನ್ನು ಹೊಸ ಮುಖ್ಯ ಆಯ್ಕೆಗಾರರನ್ನಾಗಿ ನೇಮಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಈ ಬದಲಾವಣೆಯಾದರೆ ಅನುಭವಿ ಆಟಗಾರರಿಗೆ ಮತ್ತೆ ಅವಕಾಶ ಸಿಗುವ ನಿರೀಕ್ಷೆಯಿದೆ.
Read Full Story

10:47 AM (IST) Aug 05

ರಾಪಿಡೋ ರೈಡ್‌ಗೆ ಪೊಲೀಸ್‌ ಬೈಕ್‌ ಬಳಸಿದ ಸಬ್‌ಇನ್ಸ್‌ಪೆಕ್ಟರ್‌ ಮಗ, ಅಪ್ಪನ ವಿರುದ್ಧ ಶಿಸ್ತುಕ್ರಮ!

ವರಂಗಲ್‌ನಲ್ಲಿ ಸಬ್‌ಇನ್‌ಸ್ಪೆಕ್ಟರ್ ಒಬ್ಬರ ಪುತ್ರ, ತುರ್ತು ಸೇವೆಗೆ ಮೀಸಲಾದ 'ಬ್ಲೂ ಕಾಲ್ಟ್' ಪೊಲೀಸ್ ಬೈಕನ್ನು ಖಾಸಗಿ ರ‍್ಯಾಪಿಡೋ ರೈಡ್‌ಗೆ ಬಳಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

Read Full Story

10:19 AM (IST) Aug 05

ಮದರಸದಲ್ಲಿ ವಂದೇ ಮಾತರಂನ ಹಾಡಿದರೆ ಆಕಾಶ ಏನೂ ಕಳಚಿ ಬೀಳೋದಿಲ್ಲ - ಹೈಕೋರ್ಟ್‌

ಮದರಸಾಗಳಲ್ಲಿ 'ವಂದೇ ಮಾತರಂ' ಕಡ್ಡಾಯಗೊಳಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕಲ್ಕತ್ತಾ ಹೈಕೋರ್ಟ್ ಮಹತ್ವದ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

Read Full Story

09:53 AM (IST) Aug 05

ಕೆಲವೇ ಗಂಟೆಗಳಲ್ಲಿ ಚಂದ್ರನಿಗೆ ಅಪ್ಪಳಿಸಲಿದೆ ಸ್ಪೇಸ್ ಎಕ್ಸ್ ರಾಕೆಟ್ ಭಾಗ - ಗಂಟೆಗೆ 8,690 ಕಿ.ಮೀ ವೇಗದಲ್ಲಿ ಡಿಕ್ಕಿ!

ಸ್ಪೇಸ್ ಎಕ್ಸ್ ಸಂಸ್ಥೆಯ ರಾಕೆಟ್‌ನ 4 ಟನ್ ತೂಕದ ಭಾಗವೊಂದು ಚಂದ್ರನ ಮೇಲ್ಮೈಗೆ ಅಪ್ಪಳಿಸಲಿದೆ. ಈ ಡಿಕ್ಕಿಯಿಂದ ಚಂದ್ರನ ಮೇಲೆ ಹೊಸ ಕುಳಿಯೊಂದು ನಿರ್ಮಾಣವಾಗಲಿದ್ದು, ಇದು ವಿಜ್ಞಾನಿಗಳಿಗೆ ಸಂಶೋಧನೆ ನಡೆಸಲು ಅವಕಾಶ ಕಲ್ಪಿಸಲಿದೆ ಹಾಗೂ ಇದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲ.
Read Full Story

09:40 AM (IST) Aug 05

ಮೆಡಲ್‌ ಗೆಲ್ಲೋಕೆ ಹರ್ಯಾಣ, ಗೇಮ್ಸ್‌ ಆತಿಥ್ಯಕ್ಕೆ ಗುಜರಾತ್ಯಾಕೆ? - ಪಾರ್ಲಿಮೆಂಟ್‌ನಲ್ಲಿ ಹರ್‍ಯಾಣ ಸಂಸದ ಪ್ರತಿಭಟನೆ

ಹರ್ಯಾಣದ ಕ್ರೀಡಾಪಟುಗಳು ದೇಶಕ್ಕೆ ಪದಕಗಳನ್ನು ಗೆದ್ದರೂ, ಪ್ರಮುಖ ಕ್ರೀಡಾಕೂಟಗಳ ಆತಿಥ್ಯವನ್ನು ಗುಜರಾತ್‌ಗೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಸಂಸದ ದೀಪೆಂದರ್‌ ಹೂಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕ್ರೀಡಾ ಮೂಲಸೌಕರ್ಯ ಹರ್ಯಾಣಕ್ಕೆ ಸಿಗಬೇಕು ಮತ್ತು 2030ರ ಕಾಮನ್‌ವೆಲ್ತ್‌ ಗೇಮ್ಸ್‌ ಆತಿಥ್ಯವನ್ನು ಹರ್ಯಾಣಕ್ಕೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Read Full Story

09:17 AM (IST) Aug 05

ಕಾಮನ್‌ವೆಲ್ತ್‌ ಗೇಮ್ಸ್ - ತವರಿಗೆ ಮರಳಿದ ಕ್ರೀಡಾಪಟುಗಳಿಗೆ ಆತ್ಮೀಯ ಸ್ವಾಗತ

ಗ್ಲಾಸ್ಗೋ ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಮರಳಿದ ಭಾರತೀಯ ಕ್ರೀಡಾಪಟುಗಳಿಗೆ ನವದೆಹಲಿಯಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ಕರ್ನಾಟಕದ ಪ್ಯಾರಾ ಅಥ್ಲೀಟ್‌ ಶಿಲ್ಪಾ ಶೈಲಾ ಮತ್ತು ಕೋಚ್ ಸತ್ಯನಾರಾಯಣ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಇದೀಗ ಕ್ರೀಡಾಪಟುಗಳು ವಿಶ್ರಾಂತಿಯಿಲ್ಲದೆ ಮುಂದಿನ ಏಷ್ಯನ್‌ ಗೇಮ್ಸ್‌ಗೆ ಸಿದ್ಧತೆ ಆರಂಭಿಸಿದ್ದಾರೆ.
Read Full Story

08:43 AM (IST) Aug 05

ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ - ಗ್ರಾಹಕರಿಗೆ ಪೇ-ಇನ್-3 ಸೌಲಭ್ಯ, ಭಾರಿ ರಿಯಾಯಿತಿ

ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ ಆಗಸ್ಟ್ 7 ರಿಂದ 12ರವರೆಗೆ ನಡೆಯಲಿದ್ದು, ಅಮೆಜಾನ್ ಪೇ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಇದರಲ್ಲಿ ₹1,500 ಮೇಲಿನ ಖರೀದಿಗೆ ಬಡ್ಡಿರಹಿತ 'ಪೇ-ಇನ್-3' ಸೌಲಭ್ಯ, ಪ್ರವಾಸ ಬುಕಿಂಗ್‌ಗಳ ಮೇಲೆ ಭಾರಿ ರಿಯಾಯಿತಿ ಹಾಗೂ ಯುಪಿಐ ಪಾವತಿಗಳಿಗೆ ಕ್ಯಾಶ್‌ಬ್ಯಾಕ್ ಆಫರ್‌ಗಳು ಸೇರಿವೆ.
Read Full Story

08:23 AM (IST) Aug 05

60 ದಿನದಲ್ಲಿ 110 ಕೆಜಿಯಿಂದ 88 ಕೆಜಿ! ಈ ಉದ್ಯಮಿ ತೂಕ ಇಳಿಸಿದ ಕತೆ ಹೇಗಿದೆ ಅಂದ್ರೆ..

ಕೇರಳದ ಉದ್ಯಮಿ ಡಾ. ಶಿಬಿನ್ ಮ್ಯಾಥ್ಯೂ ಕೇವಲ 60 ದಿನಗಳಲ್ಲಿ 22 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಕಟ್ಟುನಿಟ್ಟಾದ ಕ್ಯಾಲೋರಿ ನಿಯಂತ್ರಣ ಮತ್ತು ಹೈ-ಪ್ರೋಟೀನ್ ಆಹಾರ ಕ್ರಮದಿಂದ ಇದು ಸಾಧ್ಯವಾಗಿದ್ದು, ಈ ಕಠಿಣ ಡಯಟ್ ಅನ್ನು ತಜ್ಞರ ಸಲಹೆಯಿಲ್ಲದೆ ಅನುಸರಿಸಬಾರದು ಎಂದು ಅವರು ಎಚ್ಚರಿಸಿದ್ದಾರೆ.
Read Full Story

07:59 AM (IST) Aug 05

WTC ಫೈನಲ್ ಕನಸು ಭಗ್ನಗೊಂಡರೆ.. ಟೆಸ್ಟ್ ತಂಡಕ್ಕೆ ಈ ಮೂವರು ಹೊಸ ವೇಗಿಗಳ ಸೇರ್ಪಡೆಗೆ BCCI ಮಾಸ್ಟರ್ ಪ್ಲಾನ್

ಜಸ್ಪ್ರೀತ್ ಬುಮ್ರಾ ಮೇಲಿನ ಕಾರ್ಯಭಾರ ಮತ್ತು ಗಾಯದ ಸಮಸ್ಯೆಗಳನ್ನು ಕಡಿಮೆ ಮಾಡಲು ಬಿಸಿಸಿಐ ಟೆಸ್ಟ್ ತಂಡಕ್ಕಾಗಿ ಹೊಸ ವೇಗದ ಬೌಲರ್‌ಗಳನ್ನು ಹುಡುಕುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪದಿದ್ದರೆ, ನ್ಯೂಜಿಲೆಂಡ್ ಪ್ರವಾಸದಲ್ಲಿ ತುಷಾರ್ ದೇಶಪಾಂಡೆ, ಗುರ್ಜಪ್ನೀತ್ ಸಿಂಗ್ ಮತ್ತು ನಚಿಕೇತ್ ಭೂತೆ ಅವರಂತಹ ಯುವ ಆಟಗಾರರಿಗೆ ಅವಕಾಶ ನೀಡಲು ಯೋಜಿಸಲಾಗಿದೆ.
Read Full Story

07:34 AM (IST) Aug 05

ಇನ್ಮುಂದೆ ವಿಮೆ ಇಲ್ಲದಿದ್ರೆ ಪೆಟ್ರೋಲ್ ಸಿಗೋಲ್ಲ; ಪ್ರಾಯೋಗಿಕ ಜಾರಿಗೆ ಸುಪ್ರೀಂ ನಿರ್ದೇಶನ, ಹೊಸ ವಾಹನ ಖರೀದಿಸಿದವರು ಈ ವಿಷ್ಯ ತಿಳಿದಿರಲಿ!

No Insurance No Fuel: ದೇಶದಲ್ಲಿ ವಿಮೆ ಇಲ್ಲದೆ ಸಂಚರಿಸುತ್ತಿರುವ ಶೇ.56ರಷ್ಟು ವಾಹನಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ನಿರಾಕರಿಸುವ ಪ್ರಾಯೋಗಿಕ ಯೋಜನೆ ರೂಪಿಸಲು ಕೇಂದ್ರಕ್ಕೆ ನಿರ್ದೇಶಿಸಿದೆ.

Read Full Story

07:16 AM (IST) Aug 05

ತೆಲಂಗಾಣದಲ್ಲಿ ಮಳೆ ತಡೆಗೆ ಶಿವಮೊಗ್ಗದಲ್ಲಿ ಮಾಟಮಂತ್ರ - ಶಾಸಕನ ವಿರುದ್ಧ ಗಂಭೀರ ಆರೋಪ

ತೆಲಂಗಾಣದಲ್ಲಿ ಮಳೆ ಬಾರದಿರಲು ರಾಜಕೀಯ ಷಡ್ಯಂತ್ರದ ಶಂಕೆ ವ್ಯಕ್ತವಾಗಿದೆ. ರಾಜಕೀಯ ಲಾಭಕ್ಕಾಗಿ ಬಿಆರ್‌ಎಸ್‌ ಶಾಸಕ ಹರೀಶ್‌ ರಾವ್‌ ಅವರು ಕರ್ನಾಟಕದ ಶಿವಮೊಗ್ಗದಲ್ಲಿ ಮಾಟಮಂತ್ರ ಮಾಡಿಸಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್‌ ಅಧ್ಯಕ್ಷ ಮಹೇಶ್‌ ಕುಮಾರ್‌ ಗೌಡ್‌ ಆರೋಪಿಸಿದ್ದಾರೆ. ಈ ಆರೋಪವನ್ನು ಹರೀಶ್‌ ರಾವ್‌ ತಳ್ಳಿಹಾಕಿದ್ದಾರೆ.
Read Full Story

More Trending News