LIVE NOW
Published : Aug 05, 2026, 07:06 AM ISTUpdated : Aug 05, 2026, 11:01 AM IST

India Latest News Live: ರೋಹಿತ್‌ ಶರ್ಮಾಗೆ ಖೆಡ್ಡಾ ತೋಡಲು ಹೋಗಿ ತಾವೇ ಬಿದ್ರಾ ಅಜಿತ್ ಅಗರ್ಕರ್? ಚೀಫ್ ಸೆಲೆಕ್ಟರ್ ಹುದ್ದೆಯಿಂದ ಶೀಘ್ರದಲ್ಲೇ ಗೇಟ್‌ಪಾಸ್!

ಸಾರಾಂಶ

ನವದೆಹಲಿ: ಯೆಮೆನ್‌ ಕರಾವಳಿಯ ಕೆಂಪು ಸಮುದ್ರದಲ್ಲಿ ಭಾರತದ ಮೊದಲ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಈ ವೇಳೆ ನೌಕೆಯಲ್ಲಿದ್ದ ಎಲ್ಲಾ 14 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಭಾರತೀಯ ಧ್ವಜವನ್ನು ಹೊಂದಿದ್ದ ವಾಣಿಜ್ಯ ಹಡಗು ಎಂಎಸ್‌ವಿ ಫೈಜ್ ನೂರ್ ಒಲಿಯಾ ಹಡಗಿನ ಮೇಲೆ ದಾಳಿ ನಡೆದಿದೆ.

ಘಟನೆ ಸಂಭವಿಸುತ್ತಿದ್ದಂತೆ ಯೆಮೆನ್‌ನ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಿ ಮೊಖಾ ಬಂದರಿಗೆ ಕರೆತಂದಿದ್ದಾರೆ. ಘಟನೆಯ ಹೊಣೆಯನ್ನು ಇದುವರೆಗೂ ಯಾರೂ ಹೊತ್ತುಕೊಂಡಿಲ್ಲ. ಕೆಂಪು ಸಮುದ್ರದಲ್ಲಿ ನಡೆದ ಈ ಘಟನೆಯನ್ನು ಭಾರತ ಖಂಡಿಸಿದ್ದು, ಇದು ಅತ್ಯಂತ ಕಳವಳಕಾರಿ ಎಂದು ಆತಂಕ ವ್ಯಕ್ತಪಡಿಸಿದೆ.

11:01 AM (IST) Aug 05

ರೋಹಿತ್‌ ಶರ್ಮಾಗೆ ಖೆಡ್ಡಾ ತೋಡಲು ಹೋಗಿ ತಾವೇ ಬಿದ್ರಾ ಅಜಿತ್ ಅಗರ್ಕರ್? ಚೀಫ್ ಸೆಲೆಕ್ಟರ್ ಹುದ್ದೆಯಿಂದ ಶೀಘ್ರದಲ್ಲೇ ಗೇಟ್‌ಪಾಸ್!

ರೋಹಿತ್ ಶರ್ಮಾ ವಿವಾದದ ಬೆನ್ನಲ್ಲೇ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರ ಕುರ್ಚಿ ಅಲುಗಾಡುತ್ತಿದೆ. ಬಿಸಿಸಿಐ, ಅಗರ್ಕರ್ ಅವರನ್ನು ಬದಲಿಸಿ ಎನ್‌ಸಿಎ ಮುಖ್ಯಸ್ಥ ವಿ.ವಿ.ಎಸ್. ಲಕ್ಷ್ಮಣ್ ಅವರನ್ನು ಹೊಸ ಮುಖ್ಯ ಆಯ್ಕೆಗಾರರನ್ನಾಗಿ ನೇಮಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಈ ಬದಲಾವಣೆಯಾದರೆ ಅನುಭವಿ ಆಟಗಾರರಿಗೆ ಮತ್ತೆ ಅವಕಾಶ ಸಿಗುವ ನಿರೀಕ್ಷೆಯಿದೆ.
Read Full Story

10:47 AM (IST) Aug 05

ರಾಪಿಡೋ ರೈಡ್‌ಗೆ ಪೊಲೀಸ್‌ ಬೈಕ್‌ ಬಳಸಿದ ಸಬ್‌ಇನ್ಸ್‌ಪೆಕ್ಟರ್‌ ಮಗ, ಅಪ್ಪನ ವಿರುದ್ಧ ಶಿಸ್ತುಕ್ರಮ!

ವರಂಗಲ್‌ನಲ್ಲಿ ಸಬ್‌ಇನ್‌ಸ್ಪೆಕ್ಟರ್ ಒಬ್ಬರ ಪುತ್ರ, ತುರ್ತು ಸೇವೆಗೆ ಮೀಸಲಾದ 'ಬ್ಲೂ ಕಾಲ್ಟ್' ಪೊಲೀಸ್ ಬೈಕನ್ನು ಖಾಸಗಿ ರ‍್ಯಾಪಿಡೋ ರೈಡ್‌ಗೆ ಬಳಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

Read Full Story

10:19 AM (IST) Aug 05

ಮದರಸದಲ್ಲಿ ವಂದೇ ಮಾತರಂನ ಹಾಡಿದರೆ ಆಕಾಶ ಏನೂ ಕಳಚಿ ಬೀಳೋದಿಲ್ಲ - ಹೈಕೋರ್ಟ್‌

ಮದರಸಾಗಳಲ್ಲಿ 'ವಂದೇ ಮಾತರಂ' ಕಡ್ಡಾಯಗೊಳಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕಲ್ಕತ್ತಾ ಹೈಕೋರ್ಟ್ ಮಹತ್ವದ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

Read Full Story

09:53 AM (IST) Aug 05

ಕೆಲವೇ ಗಂಟೆಗಳಲ್ಲಿ ಚಂದ್ರನಿಗೆ ಅಪ್ಪಳಿಸಲಿದೆ ಸ್ಪೇಸ್ ಎಕ್ಸ್ ರಾಕೆಟ್ ಭಾಗ - ಗಂಟೆಗೆ 8,690 ಕಿ.ಮೀ ವೇಗದಲ್ಲಿ ಡಿಕ್ಕಿ!

ಸ್ಪೇಸ್ ಎಕ್ಸ್ ಸಂಸ್ಥೆಯ ರಾಕೆಟ್‌ನ 4 ಟನ್ ತೂಕದ ಭಾಗವೊಂದು ಚಂದ್ರನ ಮೇಲ್ಮೈಗೆ ಅಪ್ಪಳಿಸಲಿದೆ. ಈ ಡಿಕ್ಕಿಯಿಂದ ಚಂದ್ರನ ಮೇಲೆ ಹೊಸ ಕುಳಿಯೊಂದು ನಿರ್ಮಾಣವಾಗಲಿದ್ದು, ಇದು ವಿಜ್ಞಾನಿಗಳಿಗೆ ಸಂಶೋಧನೆ ನಡೆಸಲು ಅವಕಾಶ ಕಲ್ಪಿಸಲಿದೆ ಹಾಗೂ ಇದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲ.
Read Full Story

09:40 AM (IST) Aug 05

ಮೆಡಲ್‌ ಗೆಲ್ಲೋಕೆ ಹರ್ಯಾಣ, ಗೇಮ್ಸ್‌ ಆತಿಥ್ಯಕ್ಕೆ ಗುಜರಾತ್ಯಾಕೆ? - ಪಾರ್ಲಿಮೆಂಟ್‌ನಲ್ಲಿ ಹರ್‍ಯಾಣ ಸಂಸದ ಪ್ರತಿಭಟನೆ

ಹರ್ಯಾಣದ ಕ್ರೀಡಾಪಟುಗಳು ದೇಶಕ್ಕೆ ಪದಕಗಳನ್ನು ಗೆದ್ದರೂ, ಪ್ರಮುಖ ಕ್ರೀಡಾಕೂಟಗಳ ಆತಿಥ್ಯವನ್ನು ಗುಜರಾತ್‌ಗೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಸಂಸದ ದೀಪೆಂದರ್‌ ಹೂಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕ್ರೀಡಾ ಮೂಲಸೌಕರ್ಯ ಹರ್ಯಾಣಕ್ಕೆ ಸಿಗಬೇಕು ಮತ್ತು 2030ರ ಕಾಮನ್‌ವೆಲ್ತ್‌ ಗೇಮ್ಸ್‌ ಆತಿಥ್ಯವನ್ನು ಹರ್ಯಾಣಕ್ಕೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Read Full Story

09:17 AM (IST) Aug 05

ಕಾಮನ್‌ವೆಲ್ತ್‌ ಗೇಮ್ಸ್ - ತವರಿಗೆ ಮರಳಿದ ಕ್ರೀಡಾಪಟುಗಳಿಗೆ ಆತ್ಮೀಯ ಸ್ವಾಗತ

ಗ್ಲಾಸ್ಗೋ ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಮರಳಿದ ಭಾರತೀಯ ಕ್ರೀಡಾಪಟುಗಳಿಗೆ ನವದೆಹಲಿಯಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ಕರ್ನಾಟಕದ ಪ್ಯಾರಾ ಅಥ್ಲೀಟ್‌ ಶಿಲ್ಪಾ ಶೈಲಾ ಮತ್ತು ಕೋಚ್ ಸತ್ಯನಾರಾಯಣ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಇದೀಗ ಕ್ರೀಡಾಪಟುಗಳು ವಿಶ್ರಾಂತಿಯಿಲ್ಲದೆ ಮುಂದಿನ ಏಷ್ಯನ್‌ ಗೇಮ್ಸ್‌ಗೆ ಸಿದ್ಧತೆ ಆರಂಭಿಸಿದ್ದಾರೆ.
Read Full Story

08:43 AM (IST) Aug 05

ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ - ಗ್ರಾಹಕರಿಗೆ ಪೇ-ಇನ್-3 ಸೌಲಭ್ಯ, ಭಾರಿ ರಿಯಾಯಿತಿ

ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ ಆಗಸ್ಟ್ 7 ರಿಂದ 12ರವರೆಗೆ ನಡೆಯಲಿದ್ದು, ಅಮೆಜಾನ್ ಪೇ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಇದರಲ್ಲಿ ₹1,500 ಮೇಲಿನ ಖರೀದಿಗೆ ಬಡ್ಡಿರಹಿತ 'ಪೇ-ಇನ್-3' ಸೌಲಭ್ಯ, ಪ್ರವಾಸ ಬುಕಿಂಗ್‌ಗಳ ಮೇಲೆ ಭಾರಿ ರಿಯಾಯಿತಿ ಹಾಗೂ ಯುಪಿಐ ಪಾವತಿಗಳಿಗೆ ಕ್ಯಾಶ್‌ಬ್ಯಾಕ್ ಆಫರ್‌ಗಳು ಸೇರಿವೆ.
Read Full Story

08:23 AM (IST) Aug 05

60 ದಿನದಲ್ಲಿ 110 ಕೆಜಿಯಿಂದ 88 ಕೆಜಿ! ಈ ಉದ್ಯಮಿ ತೂಕ ಇಳಿಸಿದ ಕತೆ ಹೇಗಿದೆ ಅಂದ್ರೆ..

ಕೇರಳದ ಉದ್ಯಮಿ ಡಾ. ಶಿಬಿನ್ ಮ್ಯಾಥ್ಯೂ ಕೇವಲ 60 ದಿನಗಳಲ್ಲಿ 22 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಕಟ್ಟುನಿಟ್ಟಾದ ಕ್ಯಾಲೋರಿ ನಿಯಂತ್ರಣ ಮತ್ತು ಹೈ-ಪ್ರೋಟೀನ್ ಆಹಾರ ಕ್ರಮದಿಂದ ಇದು ಸಾಧ್ಯವಾಗಿದ್ದು, ಈ ಕಠಿಣ ಡಯಟ್ ಅನ್ನು ತಜ್ಞರ ಸಲಹೆಯಿಲ್ಲದೆ ಅನುಸರಿಸಬಾರದು ಎಂದು ಅವರು ಎಚ್ಚರಿಸಿದ್ದಾರೆ.
Read Full Story

07:59 AM (IST) Aug 05

WTC ಫೈನಲ್ ಕನಸು ಭಗ್ನಗೊಂಡರೆ.. ಟೆಸ್ಟ್ ತಂಡಕ್ಕೆ ಈ ಮೂವರು ಹೊಸ ವೇಗಿಗಳ ಸೇರ್ಪಡೆಗೆ BCCI ಮಾಸ್ಟರ್ ಪ್ಲಾನ್

ಜಸ್ಪ್ರೀತ್ ಬುಮ್ರಾ ಮೇಲಿನ ಕಾರ್ಯಭಾರ ಮತ್ತು ಗಾಯದ ಸಮಸ್ಯೆಗಳನ್ನು ಕಡಿಮೆ ಮಾಡಲು ಬಿಸಿಸಿಐ ಟೆಸ್ಟ್ ತಂಡಕ್ಕಾಗಿ ಹೊಸ ವೇಗದ ಬೌಲರ್‌ಗಳನ್ನು ಹುಡುಕುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪದಿದ್ದರೆ, ನ್ಯೂಜಿಲೆಂಡ್ ಪ್ರವಾಸದಲ್ಲಿ ತುಷಾರ್ ದೇಶಪಾಂಡೆ, ಗುರ್ಜಪ್ನೀತ್ ಸಿಂಗ್ ಮತ್ತು ನಚಿಕೇತ್ ಭೂತೆ ಅವರಂತಹ ಯುವ ಆಟಗಾರರಿಗೆ ಅವಕಾಶ ನೀಡಲು ಯೋಜಿಸಲಾಗಿದೆ.
Read Full Story

07:34 AM (IST) Aug 05

ಇನ್ಮುಂದೆ ವಿಮೆ ಇಲ್ಲದಿದ್ರೆ ಪೆಟ್ರೋಲ್ ಸಿಗೋಲ್ಲ; ಪ್ರಾಯೋಗಿಕ ಜಾರಿಗೆ ಸುಪ್ರೀಂ ನಿರ್ದೇಶನ, ಹೊಸ ವಾಹನ ಖರೀದಿಸಿದವರು ಈ ವಿಷ್ಯ ತಿಳಿದಿರಲಿ!

No Insurance No Fuel: ದೇಶದಲ್ಲಿ ವಿಮೆ ಇಲ್ಲದೆ ಸಂಚರಿಸುತ್ತಿರುವ ಶೇ.56ರಷ್ಟು ವಾಹನಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ನಿರಾಕರಿಸುವ ಪ್ರಾಯೋಗಿಕ ಯೋಜನೆ ರೂಪಿಸಲು ಕೇಂದ್ರಕ್ಕೆ ನಿರ್ದೇಶಿಸಿದೆ.

Read Full Story

07:16 AM (IST) Aug 05

ತೆಲಂಗಾಣದಲ್ಲಿ ಮಳೆ ತಡೆಗೆ ಶಿವಮೊಗ್ಗದಲ್ಲಿ ಮಾಟಮಂತ್ರ - ಶಾಸಕನ ವಿರುದ್ಧ ಗಂಭೀರ ಆರೋಪ

ತೆಲಂಗಾಣದಲ್ಲಿ ಮಳೆ ಬಾರದಿರಲು ರಾಜಕೀಯ ಷಡ್ಯಂತ್ರದ ಶಂಕೆ ವ್ಯಕ್ತವಾಗಿದೆ. ರಾಜಕೀಯ ಲಾಭಕ್ಕಾಗಿ ಬಿಆರ್‌ಎಸ್‌ ಶಾಸಕ ಹರೀಶ್‌ ರಾವ್‌ ಅವರು ಕರ್ನಾಟಕದ ಶಿವಮೊಗ್ಗದಲ್ಲಿ ಮಾಟಮಂತ್ರ ಮಾಡಿಸಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್‌ ಅಧ್ಯಕ್ಷ ಮಹೇಶ್‌ ಕುಮಾರ್‌ ಗೌಡ್‌ ಆರೋಪಿಸಿದ್ದಾರೆ. ಈ ಆರೋಪವನ್ನು ಹರೀಶ್‌ ರಾವ್‌ ತಳ್ಳಿಹಾಕಿದ್ದಾರೆ.
Read Full Story

More Trending News