LIVE NOW
Published : Aug 04, 2026, 06:52 AM ISTUpdated : Aug 04, 2026, 10:13 AM IST

India Latest News Live: ₹45,000 ಕೋಟಿ ವೆಚ್ಚದಲ್ಲಿ ಪಾಕಿಸ್ತಾನ, ಚೀನಾ ಹಾಗೂ ಬಾಂಗ್ಲಾ ಗಡಿಗಳಲ್ಲಿ ರೈಲು ಜಾಲ ವಿಸ್ತರಣೆಗೆ ಭಾರತ ಚಿಂತನೆ

ಸಾರಾಂಶ

ನವದೆಹಲಿ: ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ವಿದೇಶಿ ಕೈವಾಡಗಳ ಶಂಕೆ ನಡುವೆಯೇ ಪಾಕಿಸ್ತಾನದ 400 ಸಾಮಾಜಿಕ ಜಾಲತಾಣಗಳ ಬಳಕೆದಾರರು ಡಿಜಿಟಲ್‌ ಅಭಿಯಾನ ನಡೆಸಿ ಗಲಾಟೆಗೆ ಪ್ರಚೋದನೆ ನೀಡಿದ್ದರು ಎನ್ನುವುದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ.

ನೀಟ್‌ ಪ್ರತಿಭಟನೆ ವೇಳೆ ನಡೆದ ವಿದ್ಯಾರ್ಥಿಗಳ ಗಲಭೆಗೆ ವಿದೇಶಿ ನಂಟು, ಹಣಕಾಸಿನ ಮೂಲದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಈ ಮಾಹಿತಿಗಳನ್ನು ಪತ್ತೆ ಹಚ್ಚಿದ್ದಾರೆ. ತನಿಖೆ ವೇಳೆ ಪೊಲೀಸರು 180 ಇನ್‌ಫ್ಲುಯೆನ್ಸರ್‌ಗಳು ಮತ್ತು ಯೂಟ್ಯೂಬ್‌ ಖಾತೆಗೆಳನ್ನು ಪರಿಶೀಲಿಸಿದ್ದಾರೆ. ಇದರ ಜತೆಗೆ ಮೂರು ಖಾಸಗಿ ಡಿಜಿಟಲ್‌ ಕಂಪನಿಗಳು ಹಾಗೂ ಪಾಕಿಸ್ತಾನದ್ದು ಎನ್ನಲಾದ 400 ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಪತ್ತೆ ಮಾಡಿದ್ದು, ಅವುಗಳನ್ನೂ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

10:13 AM (IST) Aug 04

₹45,000 ಕೋಟಿ ವೆಚ್ಚದಲ್ಲಿ ಪಾಕಿಸ್ತಾನ, ಚೀನಾ ಹಾಗೂ ಬಾಂಗ್ಲಾ ಗಡಿಗಳಲ್ಲಿ ರೈಲು ಜಾಲ ವಿಸ್ತರಣೆಗೆ ಭಾರತ ಚಿಂತನೆ

ಪ್ರಾದೇಶಿಕ ಭದ್ರತೆಯನ್ನು ಬಲಪಡಿಸಲು, ಭಾರತವು ಪಾಕಿಸ್ತಾನ, ಚೀನಾ ಮತ್ತು ಬಾಂಗ್ಲಾದೇಶದ ಗಡಿಗಳಲ್ಲಿ ಸುಮಾರು ₹45,000 ಕೋಟಿ ವೆಚ್ಚದಲ್ಲಿ ರೈಲ್ವೆ ಜಾಲವನ್ನು ವಿಸ್ತರಿಸಲು ಯೋಜಿಸಿದೆ. ಈ 'ದ್ವಿ-ಬಳಕೆ' ಮೂಲಸೌಕರ್ಯವು ನಾಗರಿಕ ಸಂಚಾರದ ಜೊತೆಗೆ, ತುರ್ತು ಸಂದರ್ಭಗಳಲ್ಲಿ ಸೇನಾಪಡೆಗಳ ಕ್ಷಿಪ್ರ ಚಲನವಲನಕ್ಕೂ ನೆರವಾಗಲಿದೆ. ಈ ಯೋಜನೆಯು ಚೀನಾದ ಗಡಿ ನಿರ್ಮಾಣ ಕಾರ್ಯಕ್ಕೆ ಭಾರತದ ಪ್ರತಿತಂತ್ರವಾಗಿದೆ.
Read Full Story

09:37 AM (IST) Aug 04

ಗ್ಲಾಸ್ಗೋದಲ್ಲಿ ಮೇಳೈಸಿದ ಭಾರತ ಸಂಸ್ಕೃತಿ, ಪರಂಪರೆ; 2030ರ ಗೇಮ್ಸ್‌ನ ಬ್ಯಾಟನ್‌, ಧ್ವಜ ಭಾರತಕ್ಕೆ ಹಸ್ತಾಂತರ

ಗ್ಲಾಸ್ಗೋದಲ್ಲಿ 2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ವೈಭವದ ತೆರೆ ಬಿದ್ದಿದ್ದು, 2030ರ ಗೇಮ್ಸ್ ಆತಿಥ್ಯವನ್ನು ಭಾರತ ಅಧಿಕೃತವಾಗಿ ಸ್ವೀಕರಿಸಿದೆ. ಸಮಾರೋಪ ಸಮಾರಂಭದಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಅದ್ಧೂರಿ ಕಾರ್ಯಕ್ರಮಗಳು ನಡೆದವು ಮತ್ತು ಗೇಮ್ಸ್‌ನ ಧ್ವಜವನ್ನು ಭಾರತೀಯ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಯಿತು.
Read Full Story

09:07 AM (IST) Aug 04

ಚಂದ್ರನ ಮೇಲೆ ನಾಳೆ ರಾಕೆಟ್‌ ಕ್ರ್ಯಾಶ್‌; 90 ಅಡಿ ಅಗಲ, 16 ಅಡಿ ಆಳ ಕುಳಿ ಸೃಷ್ಟಿ ಸಂಭವ

ಬಾಹ್ಯಾಕಾಶದಲ್ಲಿ ಅಲೆಯುತ್ತಿದ್ದ ಸ್ಪೇಸ್‌ಎಕ್ಸ್‌ ಫಾಲ್ಕನ್‌-9 ರಾಕೆಟ್‌ನ ಭಾಗವೊಂದು ಚಂದ್ರನ ಗುರುತ್ವಾಕರ್ಷಣೆಗೆ ಸಿಲುಕಿ ಅದರ ಮೇಲೆ ಅಪ್ಪಳಿಸುವ ನಿರೀಕ್ಷೆಯಿದೆ. ಈ ಘಟನೆಯು ಉದ್ದೇಶಪೂರ್ವಕವಲ್ಲದಿದ್ದರೂ, ಚಂದ್ರನ ಮೇಲೆ ಕುಳಿಗಳು ಹೇಗೆ ಸೃಷ್ಟಿಯಾಗುತ್ತವೆ ಮತ್ತು ಅದರ ಮೇಲ್ಮೈ ಧೂಳು ಹೇಗೆ ವರ್ತಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಒಂದು ಉಪಯುಕ್ತ ಅವಕಾಶವಾಗಿದೆ.
Read Full Story

08:50 AM (IST) Aug 04

ದಿಢೀರ್‌ ಶಾಕ್‌ ಕೊಟ್ಟ WhatsApp; ನಿಮ್ಮ ಅಕೌಂಟ್‌ ಬ್ಲಾಕ್‌ ಆಗಿದ್ಯಾ? ಈಗಲೇ ಚೆಕ್‌ ಮಾಡಿ..!

ಸೋಮವಾರ ರಾತ್ರಿ, ವಾಟ್ಸಾಪ್ ಯಾವುದೇ ಮುನ್ಸೂಚನೆ ಇಲ್ಲದೆ ಭಾರತ ಸೇರಿದಂತೆ ವಿಶ್ವಾದ್ಯಂತ ಲಕ್ಷಾಂತರ ಬಳಕೆದಾರರ ಖಾತೆಗಳನ್ನು 'ಪರಿಶೀಲನೆ'ಗೆ ಒಳಪಡಿಸಿ ನಿರ್ಬಂಧಿಸಿದೆ. ಈ ದಿಢೀರ್ ಕ್ರಮದಿಂದಾಗಿ ತೀವ್ರ ತೊಂದರೆಗೊಳಗಾದ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ವಾಟ್ಸಾಪ್ ಸ್ಪಷ್ಟನೆ ನೀಡಿದೆ.
Read Full Story

07:36 AM (IST) Aug 04

Brij Bhushan Verdict - ರೆಸ್ಲರ್‌ಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬ್ರಿಜ್‌ ದೋಷಮುಕ್ತ! ವಿನೇಶ್ ಫೋಗಟ್ ಪ್ರತಿಕ್ರಿಯೆ ವೈರಲ್

ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾರತ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ಅವರನ್ನು ದೆಹಲಿ ಹೈಕೋರ್ಟ್‌ ದೋಷಮುಕ್ತಗೊಳಿಸಿದೆ. ಈ ತೀರ್ಪಿನ ಬಗ್ಗೆಕುಸ್ತಿಪಟು ವಿನೇಶ್‌ ಫೋಗಟ್‌ ಅಸಮಾಧಾನ ವ್ಯಕ್ತಪಡಿಸಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Read Full Story

More Trending News