Published : Aug 04, 2026, 06:52 AM ISTUpdated : Aug 04, 2026, 10:09 PM IST

India Latest News Live: BREAKING - ತಮಿಳಿನ ಗಜನಿ, ಕನ್ನಡದ ಗಜ, ಬಚ್ಛನ್‌ ಸಿನಿಮಾಗಳ ಫೇಮಸ್‌ ವಿಲನ್‌ ಪ್ರದೀಪ್ ರಾವತ್‌ ಇನ್ನಿಲ್ಲ

ಸಾರಾಂಶ

ನವದೆಹಲಿ: ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ವಿದೇಶಿ ಕೈವಾಡಗಳ ಶಂಕೆ ನಡುವೆಯೇ ಪಾಕಿಸ್ತಾನದ 400 ಸಾಮಾಜಿಕ ಜಾಲತಾಣಗಳ ಬಳಕೆದಾರರು ಡಿಜಿಟಲ್‌ ಅಭಿಯಾನ ನಡೆಸಿ ಗಲಾಟೆಗೆ ಪ್ರಚೋದನೆ ನೀಡಿದ್ದರು ಎನ್ನುವುದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ.

ನೀಟ್‌ ಪ್ರತಿಭಟನೆ ವೇಳೆ ನಡೆದ ವಿದ್ಯಾರ್ಥಿಗಳ ಗಲಭೆಗೆ ವಿದೇಶಿ ನಂಟು, ಹಣಕಾಸಿನ ಮೂಲದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಈ ಮಾಹಿತಿಗಳನ್ನು ಪತ್ತೆ ಹಚ್ಚಿದ್ದಾರೆ. ತನಿಖೆ ವೇಳೆ ಪೊಲೀಸರು 180 ಇನ್‌ಫ್ಲುಯೆನ್ಸರ್‌ಗಳು ಮತ್ತು ಯೂಟ್ಯೂಬ್‌ ಖಾತೆಗೆಳನ್ನು ಪರಿಶೀಲಿಸಿದ್ದಾರೆ. ಇದರ ಜತೆಗೆ ಮೂರು ಖಾಸಗಿ ಡಿಜಿಟಲ್‌ ಕಂಪನಿಗಳು ಹಾಗೂ ಪಾಕಿಸ್ತಾನದ್ದು ಎನ್ನಲಾದ 400 ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಪತ್ತೆ ಮಾಡಿದ್ದು, ಅವುಗಳನ್ನೂ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

10:09 PM (IST) Aug 04

BREAKING - ತಮಿಳಿನ ಗಜನಿ, ಕನ್ನಡದ ಗಜ, ಬಚ್ಛನ್‌ ಸಿನಿಮಾಗಳ ಫೇಮಸ್‌ ವಿಲನ್‌ ಪ್ರದೀಪ್ ರಾವತ್‌ ಇನ್ನಿಲ್ಲ

'ಲಗಾನ್', 'ಗಜನಿ' ಹಾಗೂ ಕನ್ನಡದ 'ಗಜ' ಚಿತ್ರಗಳ ಖ್ಯಾತ ಖಳನಟ ಪ್ರದೀಪ್ ರಾವತ್ (74) ಅವರು ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದು, ಅವರ ಅಗಲಿಕೆಗೆ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.
Read Full Story

09:50 PM (IST) Aug 04

ರಶ್ಮಿಕಾ ಮಂದಣ್ಣರಂತೆ ಗ್ಲಾಮರಸ್ ಆಗಿ ಕಾಣಬೇಕಾ? ಹಬ್ಬಕ್ಕೆ ಈ ದೇಸಿ ಔಟ್‌ಫಿಟ್‌ಗಳನ್ನು ಟ್ರೈ ಮಾಡಿ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಸ್ಟೈಲ್ ಇಷ್ಟಾನಾ? ಹಾಗಿದ್ರೆ, ಹಬ್ಬದ ಸೀಸನ್‌ಗೆ ಅವರ ಬೆಸ್ಟ್ ದೇಸಿ ಉಡುಪುಗಳ ಕಲೆಕ್ಷನ್ ಇಲ್ಲಿದೆ ನೋಡಿ. ಇನ್ನಷ್ಟು ತಿಳಿಯಲು ಮುಂದೆ ಓದಿ.

Read Full Story

08:14 PM (IST) Aug 04

Unbelievable Record - ಊಹಿಸಲಾಗದ ಹೊಸ ದಾಖಲೆ ಬರೆದ 'ರಾಮಾಯಣ'.. ಯಶ್ ಚಿತ್ರದ ಈ ಸಾಧನೆ ಎಂಥದ್ದು ಗೊತ್ತಾ?

‘ರಾಮಾಯಣ-1 ಚಿತ್ರವು 2026ರ ದೀಪಾವಳಿಗೆ ಮತ್ತು ಎರಡನೇ ಭಾಗವು 2027ರ ದೀಪಾವಳಿಗೆ ಅದ್ದೂರಿಯಾಗಿ ತೆರೆಕಾಣಲಿದೆ. ಕೇವಲ ಭಾರತೀಯರಷ್ಟೇ ಅಲ್ಲದೆ, ಇಡೀ ವಿಶ್ವದ ಸಿನಿಪ್ರಿಯರು ತುದಿಗಾಲಿನಲ್ಲಿ ಕಾಯುತ್ತಿರುವ 'ರಾಮಾಯಣ' ಚಿತ್ರವು ಅಂತರರಾಷ್ಟ್ರೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಖಚಿತವಾಗಿದೆ.

Read Full Story

07:01 PM (IST) Aug 04

‘ದೇಸಿ ಗರ್ಲ್’ನಿಂದ ‘ದೇಸಿ ಮಮ್ಮಾ’ವರೆಗೆ - ಮಗಳ ಜೊತೆ ಪ್ರಿಯಾಂಕಾ ಚೋಪ್ರಾ ಡಬಲ್ ಅವತಾರ ವೈರಲ್!

ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತಮ್ಮದೇ ಛಾಪು ಮೂಡಿಸಿರುವ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಬಾರಿ ಯಾವುದೇ ಸಿನಿಮಾ ಅಪ್‌ಡೇಟ್‌ಗಿಂತ..

Read Full Story

06:58 PM (IST) Aug 04

ರೈಲು ಪ್ರಯಾಣಿಕರ ಗಮನಕ್ಕೆ - ತತ್ಕಾಲ್​ ಟಿಕೆಟ್​ ನಿಯಮ ಬದಲು; ಕೂಡಲೇ ಜಾರಿ- ಏನಿದು ಹೊಸ ರೂಲ್ಸ್​

ಆಗಸ್ಟ್ 1, 2026 ರಿಂದ, ಭಾರತೀಯ ರೈಲ್ವೆಯು ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಕೌಂಟರ್‌ಗಳಲ್ಲಿ ಟೋಕನ್ ವ್ಯವಸ್ಥೆ ಮತ್ತು ಆನ್‌ಲೈನ್ ಬುಕಿಂಗ್‌ಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವುದು ಪ್ರಮುಖ ಬದಲಾವಣೆಗಳಾಗಿವೆ. ಈ ಬದಲಾವಣೆಗಳು ಪ್ರಯಾಣಿಕರ ಅನುಭವದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಈ ಲೇಖನವು ವಿವರಿಸುತ್ತದೆ.
Read Full Story

06:11 PM (IST) Aug 04

ಹೊಸ ಕಾರು, ಬೈಕ್‌ಗಳ ಇನ್ಶೂರೆನ್ಸ್ ಅವಧಿ ಒಂದು ವರ್ಷ ಹೆಚ್ಚಿಸಿದ ಸುಪ್ರೀಂ ಕೋರ್ಟ್‌!

ರಸ್ತೆ ಅಪಘಾತ ಸಂತ್ರಸ್ತರಿಗೆ ಪರಿಹಾರ ಖಚಿತಪಡಿಸಲು, ಸುಪ್ರೀಂ ಕೋರ್ಟ್ ಹೊಸ ಕಾರುಗಳಿಗೆ 4 ವರ್ಷ ಮತ್ತು ದ್ವಿಚಕ್ರ ವಾಹನಗಳಿಗೆ 6 ವರ್ಷಗಳ ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯಗೊಳಿಸಿದೆ. ದೇಶದಲ್ಲಿ ಶೇ. 56ರಷ್ಟು ವಾಹನಗಳು ವಿಮೆ ಇಲ್ಲದೆ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಮಹತ್ವದ ಆದೇಶವನ್ನು ನೀಡಲಾಗಿದೆ.

Read Full Story

06:02 PM (IST) Aug 04

10 Rupee Note - ₹10 ನೋಟಿನ ಮೇಲೆ ಆನೆ, ಜಿಂಕೆ, ಖಡ್ಗಮೃಗ ಯಾಕಿವೆ? ಇದರ ಹಿಂದಿನ ಕಾರಣ ಇಲ್ಲಿದೆ ನೋಡಿ!

ನಾವು ಪ್ರತಿದಿನ ಬಳಸುವ ₹10 ನೋಟಿನ ಹಿಂಭಾಗದಲ್ಲಿರುವ ಚಿತ್ರಗಳನ್ನು ಎಂದಾದರೂ ಗಮನಿಸಿದ್ದೀರಾ? ಆನೆ, ಜಿಂಕೆ ಮತ್ತು ಖಡ್ಗಮೃಗದ ಚಿತ್ರಗಳು ಅಲ್ಲಿ ಯಾಕಿವೆ? ಇದರ ಹಿಂದಿನ ಕಾರಣವೇನು? ಈ ಪ್ರಾಣಿಗಳ ಚಿತ್ರಗಳನ್ನೇ ಏಕೆ ಬಳಸಲಾಗಿದೆ?

Read Full Story

05:56 PM (IST) Aug 04

‘ನನ್ನ ಫೋಟೋ ಬಳಸಿ ಏನು ಮಾಡ್ತಿದ್ದೀರಿ?’ - ಡೀಪ್‌ಫೇಕ್ ವಿರುದ್ಧ ನಟಿ ಮೃಣಾಲ್ ಠಾಕೂರ್ ಕಿಡಿ

ನಟಿ ಮೃಣಾಲ್ ಠಾಕೂರ್ ತಮ್ಮ ಫೋಟೋ, ವಿಡಿಯೋ ಬಳಸಿ ಡೀಪ್‌ಫೇಕ್ ಕಂಟೆಂಟ್ ಸೃಷ್ಟಿಸುವವರ ವಿರುದ್ಧ ಗರಂ ಆಗಿದ್ದಾರೆ. ಇಂತಹ ಕೃತ್ಯಗಳನ್ನು ತಕ್ಷಣ ನಿಲ್ಲಿಸುವಂತೆ ಲೀಗಲ್ ನೋಟಿಸ್ ನೀಡಿದ್ದು, ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

Read Full Story

05:33 PM (IST) Aug 04

ಸ್ಟಾಲಿನ್​ ಬಾಯಲ್ಲಿ ಬಂದದ್ದು ಕಾವೇರಿ, ನಟಿ ತ್ರಿಶಾ ಎಲ್ಲಿ ಬಂದ್ರು? ತಮಿಳುನಾಡಲ್ಲಿ ಸಂಚಲನ ಸೃಷ್ಟಿಸಿದ ಅರೆಸ್ಟ್​ ವಿವಾದ

ಕಾವೇರಿ ಪ್ರತಿಭಟನೆಯಲ್ಲಿ ಉದಯನಿಧಿ ಸ್ಟಾಲಿನ್ ನೀಡಿದರೆನ್ನಲಾದ ಪರೋಕ್ಷ ಹೇಳಿಕೆ ನಟಿ ತ್ರಿಶಾ ಅವರ ಹೆಸರಿನೊಂದಿಗೆ ತಳುಕುಹಾಕಿಕೊಂಡು ವಿವಾದಕ್ಕೆ ಕಾರಣವಾಗಿದೆ. ತ್ರಿಶಾ ಹೆಸರನ್ನೇ ಉಲ್ಲೇಖಿಸದಿದ್ದರೂ ಸ್ಟಾಲಿನ್ ಅವರನ್ನು ಬಂಧಿಸಲಾಗಿದೆ ಎಂದು ಡಿಎಂಕೆ ಆರೋಪಿಸಿದ್ದು, ಅವರ ಭಾಷಣವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.
Read Full Story

05:10 PM (IST) Aug 04

ಟಾಟಾ ಸಮೂಹದ ಈ ಕಂಪನಿಯಲ್ಲಿ ಟಾಟಾಗಿಂತ ತಮಿಳುನಾಡು ಸರ್ಕಾರದ್ದೇ ಇದೆ ಹೆಚ್ಚಿನ ಪಾಲು, ಸಿಕ್ತು 371 ಕೋಟಿ ಡಿವಿಡೆಂಡ್‌!

ಟೈಟಾನ್ ಕಂಪನಿಯಲ್ಲಿ ಟಾಟಾ ಸಮೂಹಕ್ಕಿಂತಲೂ ತಮಿಳುನಾಡು ಸರ್ಕಾರದ 'ಟಿಡ್ಕೋ' ಸಂಸ್ಥೆಯು ಹೆಚ್ಚಿನ ಶೇರುಗಳನ್ನು ಹೊಂದಿದೆ. 1984ರಲ್ಲಿ ಜಂಟಿ ಉದ್ಯಮವಾಗಿ ಪ್ರಾರಂಭವಾದ ಈ ಕಂಪನಿಯಲ್ಲಿ, ಟಿಡ್ಕೋ ಇಂದು ಶೇ. 27.88ರಷ್ಟು ಪಾಲುದಾರಿಕೆ ಹೊಂದಿದೆ.

Read Full Story

05:08 PM (IST) Aug 04

ಅದು ಈಗ ಬಿಗ್ ಬಾಸ್‌ನಲ್ಲಿ ಆಗಲಿದೆ... ತಥಾಸ್ತು - ಕುದುರೆ ಮೇಲೆ ಬಂದಿದ್ಯಾಕೆ ಸಲ್ಮಾನ್ ಖಾನ್!

ಹಿಂದಿ ಬಿಗ್ ಬಾಸ್ ಸೀಸನ್ 20ರ ಮೊದಲ ಟೀಸರ್ ಹೊರಬಂದಿದೆ. ಸಲ್ಮಾನ್ ಖಾನ್ ಮತ್ತೊಮ್ಮೆ ಹೋಸ್ಟ್ ಆಗಿ ಕಂಬ್ಯಾಕ್ ಮಾಡಿದ್ದಾರೆ. ಈ ಶೋ ಸೆಪ್ಟೆಂಬರ್ 6 ರಿಂದ ಜಿಯೋಹಾಟ್‌ಸ್ಟಾರ್ ಮತ್ತು ಕಲರ್ಸ್‌ನಲ್ಲಿ ಪ್ರಸಾರವಾಗಲಿದೆ.

Read Full Story

04:48 PM (IST) Aug 04

iPhone ಕಳ್ಳಿ! ನೋಡಿ ನೋಡಿ ಹೆಂಗೆ ಐಫೋನ್-13 ಕದಿಯುತ್ತಾಳೆ ಅಂತಾ -VIDEO

ಕೊಯಮತ್ತೂರಿನ ಮೊಬೈಲ್ ಅಂಗಡಿಯೊಂದರಲ್ಲಿ, ಗ್ರಾಹಕಿಯಂತೆ ನಟಿಸಿದ ಯುವತಿಯೊಬ್ಬಳು ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಐಫೋನ್ 13 ಅನ್ನು ಕದ್ದಿದ್ದಾಳೆ. ಈಕೆಯ ಚಾಲಾಕಿ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ದೂರಿನ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ.
Read Full Story

04:38 PM (IST) Aug 04

ನಕ್ಷತ್ರವನ್ನು ಭಕ್ಷಿಸಿ ಅರ್ಧದಷ್ಟನ್ನು ಕಕ್ಕುವ ಕಪ್ಪು ಕುಳಿಗಳು! ವಿಜ್ಞಾನಿಗಳು ಕಂಡ ಖಗೋಳದ ವಿಸ್ಮಯಕಾರಿ ಸತ್ಯ!

ಖಗೋಳಶಾಸ್ತ್ರಜ್ಞರು 'ಸ್ವಿಫ್ಟ್ J1727.8-1613' ಎಂಬ ಕಪ್ಪು ಕುಳಿಯು ನಕ್ಷತ್ರವನ್ನು ಭಕ್ಷಿಸುವ ಪ್ರಕ್ರಿಯೆಯನ್ನು ಅಧ್ಯಯನ ಮಾಡಿದ್ದಾರೆ. ಈ ಅವಲೋಕನದ ಪ್ರಕಾರ, ಕಪ್ಪು ಕುಳಿಗಳು ತಮ್ಮತ್ತ ಸೆಳೆಯುವ ವಸ್ತುವಿನ ಬಹುಭಾಗವನ್ನು ಬಾಹ್ಯಾಕಾಶಕ್ಕೆ ವಾಪಸ್ ಎಸೆಯುತ್ತವೆ ಎಂಬುದು ತಿಳಿದುಬಂದಿದೆ. ಈ ಸಂಶೋಧನೆಯು ಕಪ್ಪು ಕುಳಿಗಳು ಅಂದುಕೊಂಡಷ್ಟು ಸಮರ್ಥ 'ಭಕ್ಷಕ'ಗಳಲ್ಲ ಎಂಬುದನ್ನು ಸಾಬೀತುಪಡಿಸಿದೆ.
Read Full Story

04:14 PM (IST) Aug 04

ಬಾಹ್ಯಾಕಾಶದಿಂದ ಭೂಮಿಯ ‘ಪ್ರೇಮ ಸಂದೇಶ’, ಹೃದಯಾಕಾರದ ಸರೋವರದ ಅಪರೂಪದ ಚಿತ್ರ ಕ್ಲಿಕ್ಕಿಸಿದ ಗಗನಯಾತ್ರಿ!

ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿ ಸೋಫಿ ಅಡೆನೋಟ್, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೆರೆಹಿಡಿದ ಹೃದಯಾಕಾರದ ಸರೋವರದ ಫೋಟೋವನ್ನು ಹಂಚಿಕೊಂಡಿದ್ದಾರೆ. ವೈಜ್ಞಾನಿಕವಾಗಿ ಇದು 'ಪ್ಯಾರಿಡೋಲಿಯಾ' ಎಂಬ ಭ್ರಮೆಯಾದರೂ, ಭೂಮಿಯು ನಮಗೆ ಪ್ರೀತಿಯ ಸಂದೇಶ ಕಳುಹಿಸುತ್ತಿದೆ ಎಂದು ಅವರು ಭಾವನಾತ್ಮಕವಾಗಿ ಬರೆದಿದ್ದು, ಈ ಚಿತ್ರವು ಭೂಮಿಯ ಸೌಂದರ್ಯವನ್ನು ರಕ್ಷಿಸುವ ಅಗತ್ಯವನ್ನು ನೆನಪಿಸುತ್ತದೆ.
Read Full Story

04:07 PM (IST) Aug 04

ಬಾಲಿಯಲ್ಲಿ ಭೇಟಿ, ಜರ್ಮನಿಯಲ್ಲಿ ಪ್ರೀತಿ! ಇಂಡಿಯನ್ ಯೂಟ್ಯೂಬರ್ ಲವ್ ಸ್ಟೋರಿ ವೈರಲ್

ಭಾರತದ ಯೂಟ್ಯೂಬರ್ ಅಭಿನವ್ ರೆಡ್ಡಿ ಮತ್ತು ಜರ್ಮನಿಯ ಪ್ರವಾಸಿಗ ಯುವತಿ ಸಫೀರಾ ಇಂಡೋನೇಷ್ಯಾದ ಬಾಲಿಯಲ್ಲಿ ಅಚಾನಕ್ಕಾಗಿ ಭೇಟಿಯಾಗುತ್ತಾರೆ. ಇವರ ಸ್ನೇಹ ಪ್ರೀತಿಗೆ ತಿರುಗಿ, ಇಬ್ಬರೂ ಒಟ್ಟಿಗೆ ಪ್ರಯಾಣಿಸುತ್ತಾ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜರ್ಮನಿಯ ಹಳ್ಳಿಯಲ್ಲಿನ ಅಭಿನವ್ ಅವರ ಅನುಭವ ಮತ್ತು ಇವರ ಪ್ರೇಮಕಥೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Read Full Story

03:37 PM (IST) Aug 04

LIC ಪಾಲು ಮಾರಾಟ ಮಾಡಿ 31 ಸಾವಿರ ಕೋಟಿ ಆದಾಯಕ್ಕೆ ಮುಂದಾದ ಕೇಂದ್ರ ಸರ್ಕಾರ, ಭಾರೀ ಪ್ರಮಾಣದಲ್ಲಿ ಕುಸಿದ ಷೇರು ಬೆಲೆ!

ಕೇಂದ್ರ ಸರ್ಕಾರವು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಶೇ. 6.5ರಷ್ಟು ಪಾಲನ್ನು ಆಫರ್ ಫಾರ್ ಸೇಲ್ (OFS) ಮೂಲಕ ಮಾರಾಟ ಮಾಡಲು ನಿರ್ಧರಿಸಿದೆ. ಈ ನಿರ್ಧಾರದಿಂದ ಎಲ್‌ಐಸಿ ಶೇರು ಮೌಲ್ಯದಲ್ಲಿ ಕುಸಿತ ಉಂಟಾಗಿದೆ.

Read Full Story

03:27 PM (IST) Aug 04

ಭಾರತೀಯ ರಿಯಲ್ ಎಸ್ಟೇಟ್‌ನಿಂದ NRIಗಳು ಹಿಂದಕ್ಕೆ - ಆಸ್ತಿ ಮಾರಾಟದಲ್ಲಿ ಮಹಾರಾಷ್ಟ್ರ ಪ್ರಥಮ, ಕರ್ನಾಟಕ 5ನೇ ಸ್ಥಾನ!

ಅನಿವಾಸಿ ಭಾರತೀಯರು (NRI) ಭಾರತದಲ್ಲಿನ ತಮ್ಮ ರಿಯಲ್ ಎಸ್ಟೇಟ್ ಆಸ್ತಿಗಳನ್ನು, ವಿಶೇಷವಾಗಿ ಮಹಾರಾಷ್ಟ್ರದಲ್ಲಿ, ಮಾರಾಟ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. 'ರೆಮಿಟರ್ ವಾರ್ಷಿಕ ಎನ್‌ಆರ್‌ಐ ವೆಲ್ತ್ ರಿಪೋರ್ಟ್ 2026' ಪ್ರಕಾರ, ಇದು ಆತಂಕದ ಮಾರಾಟವಲ್ಲ, ಬದಲಾಗಿ ವಿದೇಶಗಳಲ್ಲಿನ ತಮ್ಮ ಆರ್ಥಿಕ ಗುರಿಗಳನ್ನು ಪೂರೈಸಲು ಕೈಗೊಂಡ ಯೋಜಿತ ಸಂಪತ್ತು ಹಂಚಿಕೆಯಾಗಿದೆ.

Read Full Story

03:25 PM (IST) Aug 04

Udaynidhi stalin - ನಟಿ ತ್ರೀಷಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ, ಉದಯನಿಧಿ ಬಂಧನ ಕುರಿತಂತೆ ಮದ್ರಾಸ್ ಹೈಕೋರ್ಟ್ ಮಹತ್ವ ತೀರ್ಪು

ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಹಿನ್ನೆಲೆ ಬಂಧನಕ್ಕೊಳಗಾಗಿರುವ ತಮಿಳುನಾಡು ಮಾಜಿ ಉಪಮುಖ್ಯಮಂತ್ರಿ, ಮಾಜಿ ಸಚಿವ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಕುರಿತಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

Read Full Story

03:23 PM (IST) Aug 04

ದಶಗಳಿಂದ ಮುಳುಗಿದ್ದ ರಂಗನಾಥ ದೇವಸ್ಥಾನ ಬರಗಾಲದಿಂದ ಪ್ರತ್ಯಕ್ಷ, ಈಗಲೂ ಕೇಳಿಸುತ್ತಿದೆ ಗಂಟೆ ನಾದ

ದಶಕಗಳಿಂದ ಮುಳುಗಿದ್ದ ಪವಿತ್ರ ಬಾತು ಕಿ ಲಡಿ ದೇವಸ್ಥಾನ, ದೇಶದ ಬರಗಾಲ,ಮಳೆ ಕೊರತೆಯಿಂದ ಪ್ರತ್ಯಕ್ಷಗೊಂಡಿದೆ. ವಿಶೇಷ ಅಂದರೆ ಇಲ್ಲಿ ಪೂಜೆ ನಡೆಯದೇ ದಶಕಗಳೇ ಕಳೆದರೂ ಈಗಲೂ ಗಂಟೆ ಶಬ್ದ ಕೇಳಿಸುತ್ತಿದೆ.

Read Full Story

03:12 PM (IST) Aug 04

ತಮಿಳುನಾಡಿನಲ್ಲಿ ಮರುಕಳಿಸಿದ ಇತಿಹಾಸ! ಅಂದು ಕರುಣಾನಿಧಿ-ಜಯಲಲಿತಾ, ಇಂದು ವಿಜಯ್ vs ಉದಯನಿಧಿ!

ತಮಿಳುನಾಡು ರಾಜಕೀಯದಲ್ಲಿ ಕರುಣಾನಿಧಿ ಮತ್ತು ಜಯಲಲಿತಾ ನಡುವಿನ ಸೇಡಿನ ಇತಿಹಾಸ ಮತ್ತೆ ಮರುಕಳಿಸುತ್ತಿದೆ. ನಟ ವಿಜಯ್ ಮುಖ್ಯಮಂತ್ರಿಯಾದ ನಂತರ ಉದಯನಿಧಿ ಸ್ಟಾಲಿನ್ ಮತ್ತು ಅವರ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದೆ. ಇತ್ತೀಚಿನ ಉದಯನಿಧಿ ಬಂಧನ ಮತ್ತು ತ್ರಿಶಾ ಕಮೆಂಟ್ ವಿವಾದವು ದ್ರಾವಿಡ ನೆಲದಲ್ಲಿ ಹೊಸ ರಾಜಕೀಯ ಸಮರಕ್ಕೆ ಸಾಕ್ಷಿಯಾಗಿದೆ. ಪೂರ್ಣ ವಿವರಗಳಿಗಾಗಿ ಈ ಲೇಖನ ಓದಿ.

Read Full Story

03:03 PM (IST) Aug 04

ವೃದ್ಧ ದಂಪತಿಯ ಪ್ರೀತಿ - ಹೃದಯ ಕರಗಿಸಿದ ಆ ಒಂದು ಕ್ಷಣ, ನೆಟ್ಟಿಗರ ಮನಗೆದ್ದ ಹಿರಿ ಜೀವಗಳ ಹೃದಯಸ್ಪರ್ಶಿ ವೀಡಿಯೊ!

ರೆಸ್ಟೋರೆಂಟ್ ಒಂದರಲ್ಲಿ ವೃದ್ಧ ಪತಿಯೊಬ್ಬರು ತಮ್ಮ ಪತ್ನಿಗಾಗಿ ಪ್ರೀತಿಯಿಂದ ಆಹಾರದ ತಟ್ಟೆಯನ್ನು ಹೊತ್ತು ತರುವ ಸುಂದರ ಕ್ಷಣದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಸರಳವಾದ ಪ್ರೀತಿಯು, ಅನುದಿನದ ಪುಟ್ಟ ಪುಟ್ಟ ಕಾಳಜಿಗಳಲ್ಲಿ ಅಡಗಿರುವ ಸುಂದರ ಭಾವನೆ ಎಂಬುದನ್ನು ಸಾಬೀತುಪಡಿಸಿ, ಸಾವಿರಾರು ಜನರ ಹೃದಯ ಗೆದ್ದಿದೆ.
Read Full Story

01:36 PM (IST) Aug 04

ಭಾರತದಲ್ಲಿ ದಾಖಲೆ ಬರೆದ ʻಸ್ಪೈಡರ್‌ ಮ್ಯಾನ್‌ʼ ಸಿನಿಮಾ; ಕರ್ನಾಟಕದಲ್ಲೂ ಭಾರೀ ಕಲೆಕ್ಷನ್!

ಯಾವುದೇ ಸಿನಿಮಾಗೆ ಮೊದಲ ಸೋಮವಾರ ಎಂಬುದು ಬಹಳ ಮುಖ್ಯ. ವೀಕೆಂಡ್‌ನಲ್ಲಿ ಮೋಜು ಮಸ್ತಿ ಮಾಡುವ ಪ್ರೇಕ್ಷಕರು ವಾರದ ದಿನಗಳಲ್ಲೂ ಥಿಯೇಟರ್‌ಗೆ ಬರುತ್ತಾರಾ? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ, ಸದ್ಯದ ಟ್ರೆಂಡ್ ನೋಡಿದರೆ ಸ್ಪೈಡರ್ ಮ್ಯಾನ್ ಸೋಮವಾರವೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

Read Full Story

01:26 PM (IST) Aug 04

ಟೀಂ ಇಂಡಿಯಾ ಪಾದಾರ್ಪಣೆಗೂ ಮುನ್ನ ಪಾಕಿಸ್ತಾನ ಪರ ಫೀಲ್ಡಿಂಗ್ ಮಾಡಿದ್ದ ಸಚಿನ್ ತೆಂಡೂಲ್ಕರ್..! ಗ್ರೀನ್ ಜೆರ್ಸಿ ತೊಟ್ಟಿದ್ದೇಕೆ ಮಾಸ್ಟರ್ ಬ್ಲಾಸ್ಟರ್?

ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡುವ ಮುನ್ನ, 13 ವರ್ಷದ ಸಚಿನ್ ತೆಂಡೂಲ್ಕರ್ ಅವರು 1987ರಲ್ಲಿ ಮುಂಬೈನಲ್ಲಿ ನಡೆದ ಪ್ರದರ್ಶನ ಪಂದ್ಯವೊಂದರಲ್ಲಿ ಪಾಕಿಸ್ತಾನ ತಂಡದ ಪರ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡಿದ್ದರು. ಇಮ್ರಾನ್ ಖಾನ್ ಅವರ ಕೋರಿಕೆಯ ಮೇರೆಗೆ ನಡೆದ ಈ ಅಚ್ಚರಿಯ ಘಟನೆಯನ್ನು ಸಚಿನ್ ತಮ್ಮ 'ಪ್ಲೇಯಿಂಗ್ ಇಟ್ ಮೈ ವೇ' ಆತ್ಮಕಥನದಲ್ಲಿಯೂ ಉಲ್ಲೇಖಿಸಿದ್ದಾರೆ.
Read Full Story

01:20 PM (IST) Aug 04

ಭಾರತೀಯ ಶಿಕ್ಷಣ ಕ್ಷೇತ್ರದ ‘ದಾದಾ’, ಮಾಜಿ ರಾಜ್ಯಪಾಲ, ಪದ್ಮಶ್ರೀ ಡಾ. ಡಿ.ವೈ. ಪಾಟೀಲ್ ನಿಧನ!

ಪದ್ಮಶ್ರೀ ಪುರಸ್ಕೃತ, ಬಿಹಾರ, ತ್ರಿಪುರ ಮತ್ತು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಡಾ. ಡಿ.ವೈ. ಪಾಟೀಲ್ (91) ಅವರು ಕೊಲ್ಲಾಪುರದಲ್ಲಿ ನಿಧನರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಅವರು, 182ಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದರು. ಅವರ ಅಗಲಿಕೆಯು ಶೈಕ್ಷಣಿಕ ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
Read Full Story

12:57 PM (IST) Aug 04

ಬಾಲಿವುಡ್‌ ಸ್ಟಾರ್ ದಂಪತಿಯ ಪುತ್ರ ನಟ ಸುನೀಲ್ ಆನಂದ್ ಜುಲೈ 26ಕ್ಕೆ ನಿಧನ, ಲಂಡನ್‌ನಲ್ಲೇ ಆ.4ಕ್ಕೆ ಅಂತ್ಯಕ್ರಿಯೆ!

ಹಿರಿಯ ನಟ ದೇವ್ ಆನಂದ್ ಅವರ ಪುತ್ರ, ನಟ ಹಾಗೂ ನಿರ್ದೇಶಕ ಸುನೀಲ್ ಆನಂದ್ (70) ಲಂಡನ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಯು ಅವರ ತಂದೆಯ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ನಡೆಯಲಿದೆ. ಈ ಲೇಖನವು ಅವರ ವೃತ್ತಿಜೀವನ, ಕುಟುಂಬದ ನೋವು ಮತ್ತು ದೇವ್ ಆನಂದ್ ಅವರ ಆತ್ಮಚರಿತ್ರೆಯಲ್ಲಿನ ಮಗನ ಬಗೆಗಿನ ಅಪರೂಪದ ನೆನಪುಗಳನ್ನು ವಿವರಿಸುತ್ತದೆ.
Read Full Story

12:55 PM (IST) Aug 04

ಇನ್ನು ಆಯುಷ್ಮಾನ್ ಭಾರತ್ ಯೋಜನೆಯಡಿ ಮೂತ್ರಪಿಂಡ ಕಸಿ! ಕೇಂದ್ರ ಸರ್ಕಾರ ಈ ಹೊಸ ಯೋಜನೆ ಬಗ್ಗೆ ತಿಳಿದುಕೊಳ್ಳಿ!

ಭಾರತದಲ್ಲಿ ಅಂಗಾಂಗ ದಾನಕ್ಕೆ ಸರ್ಕಾರದ ಹೊಸ ಯೋಜನೆಗಳು. ಇ-ಟ್ರಾನ್ಸ್‌ಪ್ಲಾಂಟೇಶನ್ ಪೋರ್ಟಲ್, ಆಯುಷ್ಮಾನ್ ಭಾರತ್ ಅಡಿ ಮೂತ್ರಪಿಂಡ ಕಸಿ ಸೇರಿ ಸಂಪೂರ್ಣ ಮಾಹಿತಿ ತಿಳಿಯಲು ಇಲ್ಲಿ ಓದಿ.

Read Full Story

12:18 PM (IST) Aug 04

ಬೆಕ್ಕಿನ ಜೊತೆ ಆಟವಾಡ್ತಿದ್ದ ಬಾಲಕ ICU ಪಾಲು.. ಪೋಷಕರೇ ನಿಮ್ಮ ಮಗು ಜೋಪಾನ

ಇಂದಿನ ದಿನಗಳಲ್ಲಿ ಮನೆಯಲ್ಲಿ ನಾಯಿ, ಬೆಕ್ಕು ಸೇರಿದಂತೆ ಸಾಕುಪ್ರಾಣಿಗಳನ್ನು ಸಾಕುವುದು ಟ್ರೆಂಡ್ ಆಗಿದೆ. ಆದರೆ.. ಒಂದು ಪುಟ್ಟ ನಿರ್ಲಕ್ಷ್ಯವು ಪ್ರಾಣಕ್ಕೇ ಕಂಟಕವಾಗಬಹುದು ಎಂಬುದಕ್ಕೆ ಕೋಲ್ಕತ್ತಾದಲ್ಲಿ ನಡೆದ ಘಟನೆಯೇ ಸಾಕ್ಷಿ. ಬೆಕ್ಕು ಗೀರಿದ್ದರಿಂದ ಎಂಟು ವರ್ಷದ ಬಾಲಕನೊಬ್ಬ ಐಸಿಯು (ICU) ಸೇರಿದ್ದಾನೆ.

Read Full Story

11:55 AM (IST) Aug 04

ಸಿನಿಮಾ ನೋಡಿದ್ರೆ ಸುಮ್ಮನಿರಿ; ಇಲ್ಲಾ ಅಂದ್ರೆ 'ಈ ಸ್ಪಾಯ್ಲರ್' ದುರಂಥ ಕಥೆ ನಿಮ್ಮದೂ ಆಗಬಹುದು, ಎಚ್ಚರ!

ಟಾಮ್ ಹಾಲೆಂಡ್ ಮತ್ತು ಝೆಂಡಾಯಾ ನಟನೆಯ ಈ ಅದ್ಭುತ ಚಿತ್ರವನ್ನು ಶಾಂತಿಯಿಂದ ನೋಡೋಣ ಎಂದು ಬಂದವರಿಗೆ, ಈ ಯುವಕನ ಅತಿಬುದ್ಧಿವಂತಿಕೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಕೊನೆಗೆ ಸಿನಿಮಾ ನೋಡಲು ಬಂದವರು ಆ ಯುವಕನಿಗೆ ಮಾಡಿದ್ದೇನು ನೊಡಿ!

Read Full Story

11:55 AM (IST) Aug 04

ಮಾಜಿ ಸಚಿವ ಉದಯನಿಧಿ ಸ್ಟಾಲಿನ್ ಬಂಧನ, ನಟಿ ತ್ರಿಶಾ ವಿರುದ್ಧ ಅವಹೇಳನಕಾರಿ ಹೇಳಿಕೆಯಿಂದ ಸಂಕಷ್ಟ

ಡಿಎಂಕೆ ನಾಯಕ, ಮಾಜಿ ಸಚಿವ ಉದಯನಿಧಿ ಸ್ಟಾಲಿನ್ ಅರೆಸ್ಟ್ ಆಗಿದ್ದಾರೆ. ತಮಿಳುನಾಡು ಸಿಎಂ ವಿಜಯ್ ಹಾಗೂ ನಟಿ ತೃಷಾ ನಡುವಿನ ಗೆಳೆತನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಸ್ಟಾಲಿ‌ನನ್ನು ಮನೆಯಿಂದಲೇ ಅರೆಸ್ಟ್ ಮಾಡಲಾಗಿದೆ.

Read Full Story

11:35 AM (IST) Aug 04

ಓಲ್ಡ್ ಮಾಂಕ್ ಪ್ರಿಯರಿಗೆ ಶಾಕ್, ಭಾರತದಲ್ಲಿ ಜನಪ್ರಿಯ ರಮ್ ಸೇರಿ ಕೆಲ ವಿಸ್ಕಿ ಬ್ಯಾನ್

ಓಲ್ಡ್ ಮಾಂಕ್ ಭಾರತದಲ್ಲಿ ಬಹುತೇಕರ ನೆಚ್ಚಿನ ಬ್ರ್ಯಾಂಡ್. ಚಳಿಗಾಲ, ಮಳೆಗಾಲದಲ್ಲಿ ಒಲ್ಡ್ ಮಾಂಕ್ ಹಿಂದೆ ಬೀಳುತ್ತಾರೆ. ಇದೀಗ ಓಲ್ಡ್ ಮಾಂಕ್ ಸೇರಿದಂತೆ ಕೆಲ ವಿಸ್ಕಿ ಬ್ರ್ಯಾಂಡ್‌ಗಳನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ.

Read Full Story

11:20 AM (IST) Aug 04

ಜಿರಳೆ ಪಾರ್ಟಿ ರಾಜಕೀಯ ಪಕ್ಷವಲ್ಲ, ಅದು ಪ್ರೆಶರ್‌ ಗ್ರೂಪ್‌ | ಮುಂದಿನ ಹೋರಾಟದ ಬಗ್ಗ ಅಭಿಜಿತ್ ದೀಪ್ಕೆ ಹೇಳಿದ್ದೇನು?

ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ರಾಜಕೀಯ ಪಕ್ಷವಾಗದೆ, ಒತ್ತಡ ಗುಂಪಾಗಿ ಮುಂದುವರಿಯಲಿದೆ ಎಂದು ಸ್ಥಾಪಕ ಅಭಿಜೀತ್‌ ದೀಪ್ಕೆ ಹೇಳಿದ್ದಾರೆ. ನಿರುದ್ಯೋಗ, ಆರ್ಥಿಕ ಅಸಮಾನತೆಗಳ ಬಗ್ಗೆ ಧ್ವನಿ ಎತ್ತುವುದರ ಜೊತೆಗೆ, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಮುಂದುವರಿದರೆ ಮತ್ತೆ ಬೀದಿಗಿಳಿದು ಹೋರಾಟದ ಎಚ್ಚರಿಕೆ.

Read Full Story

10:13 AM (IST) Aug 04

₹45,000 ಕೋಟಿ ವೆಚ್ಚದಲ್ಲಿ ಪಾಕಿಸ್ತಾನ, ಚೀನಾ ಹಾಗೂ ಬಾಂಗ್ಲಾ ಗಡಿಗಳಲ್ಲಿ ರೈಲು ಜಾಲ ವಿಸ್ತರಣೆಗೆ ಭಾರತ ಚಿಂತನೆ

ಪ್ರಾದೇಶಿಕ ಭದ್ರತೆಯನ್ನು ಬಲಪಡಿಸಲು, ಭಾರತವು ಪಾಕಿಸ್ತಾನ, ಚೀನಾ ಮತ್ತು ಬಾಂಗ್ಲಾದೇಶದ ಗಡಿಗಳಲ್ಲಿ ಸುಮಾರು ₹45,000 ಕೋಟಿ ವೆಚ್ಚದಲ್ಲಿ ರೈಲ್ವೆ ಜಾಲವನ್ನು ವಿಸ್ತರಿಸಲು ಯೋಜಿಸಿದೆ. ಈ 'ದ್ವಿ-ಬಳಕೆ' ಮೂಲಸೌಕರ್ಯವು ನಾಗರಿಕ ಸಂಚಾರದ ಜೊತೆಗೆ, ತುರ್ತು ಸಂದರ್ಭಗಳಲ್ಲಿ ಸೇನಾಪಡೆಗಳ ಕ್ಷಿಪ್ರ ಚಲನವಲನಕ್ಕೂ ನೆರವಾಗಲಿದೆ. ಈ ಯೋಜನೆಯು ಚೀನಾದ ಗಡಿ ನಿರ್ಮಾಣ ಕಾರ್ಯಕ್ಕೆ ಭಾರತದ ಪ್ರತಿತಂತ್ರವಾಗಿದೆ.
Read Full Story

09:37 AM (IST) Aug 04

ಗ್ಲಾಸ್ಗೋದಲ್ಲಿ ಮೇಳೈಸಿದ ಭಾರತ ಸಂಸ್ಕೃತಿ, ಪರಂಪರೆ; 2030ರ ಗೇಮ್ಸ್‌ನ ಬ್ಯಾಟನ್‌, ಧ್ವಜ ಭಾರತಕ್ಕೆ ಹಸ್ತಾಂತರ

ಗ್ಲಾಸ್ಗೋದಲ್ಲಿ 2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ವೈಭವದ ತೆರೆ ಬಿದ್ದಿದ್ದು, 2030ರ ಗೇಮ್ಸ್ ಆತಿಥ್ಯವನ್ನು ಭಾರತ ಅಧಿಕೃತವಾಗಿ ಸ್ವೀಕರಿಸಿದೆ. ಸಮಾರೋಪ ಸಮಾರಂಭದಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಅದ್ಧೂರಿ ಕಾರ್ಯಕ್ರಮಗಳು ನಡೆದವು ಮತ್ತು ಗೇಮ್ಸ್‌ನ ಧ್ವಜವನ್ನು ಭಾರತೀಯ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಯಿತು.
Read Full Story

09:07 AM (IST) Aug 04

ಚಂದ್ರನ ಮೇಲೆ ನಾಳೆ ರಾಕೆಟ್‌ ಕ್ರ್ಯಾಶ್‌; 90 ಅಡಿ ಅಗಲ, 16 ಅಡಿ ಆಳ ಕುಳಿ ಸೃಷ್ಟಿ ಸಂಭವ

ಬಾಹ್ಯಾಕಾಶದಲ್ಲಿ ಅಲೆಯುತ್ತಿದ್ದ ಸ್ಪೇಸ್‌ಎಕ್ಸ್‌ ಫಾಲ್ಕನ್‌-9 ರಾಕೆಟ್‌ನ ಭಾಗವೊಂದು ಚಂದ್ರನ ಗುರುತ್ವಾಕರ್ಷಣೆಗೆ ಸಿಲುಕಿ ಅದರ ಮೇಲೆ ಅಪ್ಪಳಿಸುವ ನಿರೀಕ್ಷೆಯಿದೆ. ಈ ಘಟನೆಯು ಉದ್ದೇಶಪೂರ್ವಕವಲ್ಲದಿದ್ದರೂ, ಚಂದ್ರನ ಮೇಲೆ ಕುಳಿಗಳು ಹೇಗೆ ಸೃಷ್ಟಿಯಾಗುತ್ತವೆ ಮತ್ತು ಅದರ ಮೇಲ್ಮೈ ಧೂಳು ಹೇಗೆ ವರ್ತಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಒಂದು ಉಪಯುಕ್ತ ಅವಕಾಶವಾಗಿದೆ.
Read Full Story

08:50 AM (IST) Aug 04

ದಿಢೀರ್‌ ಶಾಕ್‌ ಕೊಟ್ಟ WhatsApp; ನಿಮ್ಮ ಅಕೌಂಟ್‌ ಬ್ಲಾಕ್‌ ಆಗಿದ್ಯಾ? ಈಗಲೇ ಚೆಕ್‌ ಮಾಡಿ..!

ಸೋಮವಾರ ರಾತ್ರಿ, ವಾಟ್ಸಾಪ್ ಯಾವುದೇ ಮುನ್ಸೂಚನೆ ಇಲ್ಲದೆ ಭಾರತ ಸೇರಿದಂತೆ ವಿಶ್ವಾದ್ಯಂತ ಲಕ್ಷಾಂತರ ಬಳಕೆದಾರರ ಖಾತೆಗಳನ್ನು 'ಪರಿಶೀಲನೆ'ಗೆ ಒಳಪಡಿಸಿ ನಿರ್ಬಂಧಿಸಿದೆ. ಈ ದಿಢೀರ್ ಕ್ರಮದಿಂದಾಗಿ ತೀವ್ರ ತೊಂದರೆಗೊಳಗಾದ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ವಾಟ್ಸಾಪ್ ಸ್ಪಷ್ಟನೆ ನೀಡಿದೆ.
Read Full Story

07:36 AM (IST) Aug 04

Brij Bhushan Verdict - ರೆಸ್ಲರ್‌ಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬ್ರಿಜ್‌ ದೋಷಮುಕ್ತ! ವಿನೇಶ್ ಫೋಗಟ್ ಪ್ರತಿಕ್ರಿಯೆ ವೈರಲ್

ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾರತ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ಅವರನ್ನು ದೆಹಲಿ ಹೈಕೋರ್ಟ್‌ ದೋಷಮುಕ್ತಗೊಳಿಸಿದೆ. ಈ ತೀರ್ಪಿನ ಬಗ್ಗೆಕುಸ್ತಿಪಟು ವಿನೇಶ್‌ ಫೋಗಟ್‌ ಅಸಮಾಧಾನ ವ್ಯಕ್ತಪಡಿಸಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Read Full Story

More Trending News