LIVE NOW
Published : Apr 04, 2026, 06:20 AM ISTUpdated : Apr 04, 2026, 09:30 AM IST

India Latest News Live: IPL 2026 - ಸತತ ಎರಡನೇ ಗೆಲುವಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ ಹೋರಾಟ!

ಸಾರಾಂಶ

ನವದೆಹಲಿ: ಭಾರತದ ಕ್ರೀಡಾಪಟುಗಳಲ್ಲಿ ವರ್ಷದಿಂದ ವರ್ಷಕ್ಕೆ ನಿಷೇಧಿತ ಮದ್ದು ಸೇವನೆ(ಡೋಪಿಂಗ್‌) ಪ್ರಮಾಣ ಹೆಚ್ಚುತ್ತಿದ್ದು, ಅನರ್ಹ ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತ ಈಗ ಕೀನ್ಯಾಕ್ಕಿಂತಲೂ ಕಳಪೆ ಸಾಧನೆ ಮಾಡಿ ವಿಶ್ವದಲ್ಲೇ ನಂ.1 ಸ್ಥಾನದಲ್ಲಿದೆ. ಆಫ್ರಿಕಾ ದೇಶ ಕೀನ್ಯಾ ಈಗ 2ನೇ ಸ್ಥಾನದಲ್ಲಿದೆ.

ವಿಶ್ವ ಅಥ್ಲೆಟಿಕ್ ಸಂಸ್ಥೆಯ ಅಥ್ಲೆಟಿಕ್ಸ್‌ ಸಮಗ್ರತಾ ಘಟಕ(ಎಐಯು) ವರದಿ ಪ್ರಕಾರ, ಭಾರತದಲ್ಲಿ ಈಗ ಬರೋಬ್ಬರಿ 148 ಕ್ರೀಡಾಪಟುಗಳು ಸ್ಪರ್ಧೆಗೆ ಅನರ್ಹಗೊಂಡಿದ್ದಾರೆ. ಇದರಲ್ಲಿ ಅಗ್ರ ಅಥ್ಲೀಟ್‌ಗಳಾದ ದ್ಯುತೀ ಚಂದ್‌, ಶೇಕರ್‌ ಧನಲಕ್ಷ್ಮಿ, ಫರ್ವೇಜ್‌ ಖಾನ್‌ ಸೇರಿ ಪ್ರಮುಖರಿದ್ದಾರೆ. ಇನ್ನು, ಕೀನ್ಯಾದಲ್ಲಿ ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದು ಅನರ್ಹಗೊಂಡ ಅಥ್ಲೀಟ್‌ಗಳ ಸಂಖ್ಯೆ 146. ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ ಒಟ್ಟು 66 ಕ್ರೀಡಾಪಟುಗಳು ಅನರ್ಹಗೊಂಡಿದ್ದಾರೆ.

09:30 AM (IST) Apr 04

IPL 2026 - ಸತತ ಎರಡನೇ ಗೆಲುವಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ ಹೋರಾಟ!

ಐಪಿಎಲ್‌ನಲ್ಲಿ ಶುಭಾರಂಭ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ತಮ್ಮ ಎರಡನೇ ಗೆಲುವಿಗಾಗಿ ಶನಿವಾರ ಸೆಣಸಾಡಲಿವೆ. 13 ವರ್ಷಗಳ ಬಳಿಕ ಮೊದಲ ಪಂದ್ಯ ಗೆದ್ದಿರುವ ಮುಂಬೈಗೆ ಸ್ಯಾಂಟ್ನರ್‌ ಬಲ ಬಂದಿದ್ದರೆ, ಅಕ್ಷರ್‌ ಪಟೇಲ್ ನಾಯಕತ್ವದ ಡೆಲ್ಲಿ ತಂಡದಲ್ಲಿ ಕೆ.ಎಲ್. ರಾಹುಲ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
Read Full Story

09:03 AM (IST) Apr 04

IPL 2026 - ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್‌- ಪಂಜಾಬ್ ಕಿಂಗ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್‌ಗಳಿಂದ ಸೋತಿದೆ. ಆಯುಶ್ ಮ್ಹಾತ್ರೆ (73) ಅವರ ಉತ್ತಮ ಬ್ಯಾಟಿಂಗ್ ಹೊರತಾಗಿಯೂ, ಚೆನ್ನೈ ನೀಡಿದ 210 ರನ್‌ಗಳ ಗುರಿಯನ್ನು ಶ್ರೇಯಸ್ ಅಯ್ಯರ್ (50) ನಾಯಕತ್ವದ ಪಂಜಾಬ್ ತಂಡ ಯಶಸ್ವಿಯಾಗಿ ಬೆನ್ನಟ್ಟಿತು. ಇದು ಚೆಪಾಕ್‌ನಲ್ಲಿ ಸಿಎಸ್‌ಕೆಗೆ ಸತತ 6ನೇ ಸೋಲಾಗಿದೆ.
Read Full Story

08:13 AM (IST) Apr 04

ದಿವಾಳಿ ಪಾಕಿಸ್ತಾನದಲ್ಲಿ ಎಮ್ಮೆ ಸಾಕಿದರಿಗೆ ಸೆಗಣಿ ತೆರಿಗೆ ವಸೂಲಿ; ರೈತರು ದಿನಕ್ಕೆ ಎಷ್ಟು ಹಣ ನೀಡಬೇಕು?

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಸರ್ಕಾರವು 'ಸ್ವಚ್ಛ ಪಂಜಾಬ್‌' ಯೋಜನೆಯಡಿ ಎಮ್ಮೆ ಸಾಕಿದವರಿಂದ 'ಸೆಗಣಿ ಕರ' ವಸೂಲಿ ಮಾಡಲು ಮುಂದಾಗಿದೆ. ತ್ಯಾಜ್ಯ ನಿರ್ವಹಣೆ ಮತ್ತು ಜೈವಿಕ ಅನಿಲ ಉತ್ಪಾದನೆಗೆ ಹಣ ಸಂಗ್ರಹಿಸುವ ಈ ಯೋಜನೆಗೆ, ಈಗಾಗಲೇ ಸಂಕಷ್ಟದಲ್ಲಿರುವ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
Read Full Story

08:01 AM (IST) Apr 04

West Asia crisis - ಇಂಡಕ್ಷನ್‌ ಸ್ಟವ್‌, ಪಾತ್ರೆ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಚಿಂತನೆ

ಕೊಲ್ಲಿ ಯುದ್ಧದಿಂದ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ, ಕೇಂದ್ರ ಸರ್ಕಾರವು ಇಂಡಕ್ಷನ್‌ ಸ್ಟವ್‌ ಅದಕ್ಕೆ ಬೇಕಾದ ಪಾತ್ರೆಗಳ ಉತ್ಪಾದನೆಗೆ ಪ್ರೋತ್ಸಾಹ ನೀಡಲು ನಿರ್ಧರ ದೇಶದಲ್ಲಿ ವಿದ್ಯುತ್ ಆಧಾರಿತ ಅಡುಗೆ ಉಪಕರಣಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಉತ್ಪಾದನೆ ಹೆಚ್ಚಿಸುವ ಕುರಿತು ಚರ್ಚೆ ನಡೆದಿದೆ.

Read Full Story

07:38 AM (IST) Apr 04

ಪ್ರೀತಿಯಲ್ಲಿ ಸೋಲು, ಬಾಲ್ಯದ ನೆರಳಿನಾಟ! ಪ್ಪಾದ ಸಂಗಾತಿಯನ್ನು ಆಯ್ಕೆ ಮಾಡೋದ್ಯಾಕೆ?

ಪದೇ ಪದೇ ಸಂಬಂಧಗಳು ಮುರಿದು ಬೀಳಲು ನಿಮ್ಮ ಕೆಟ್ಟ ಸಮಯ ಕಾರಣವಲ್ಲ, ಬದಲಿಗೆ ನಿಮ್ಮ ಬಾಲ್ಯದ ಅನುಭವಗಳು ಮತ್ತು ಮನಸ್ಥಿತಿಯೇ ಕಾರಣವೆಂದು ಮನೋವಿಜ್ಞಾನ ಹೇಳುತ್ತದೆ. ಬಾಲ್ಯದಲ್ಲಿ ಪ್ರೀತಿ, ಗೌರವ ಕಾಣದವರು, ತಮಗರಿವಿಲ್ಲದಂತೆಯೇ ದೊಡ್ಡವರಾದ ಮೇಲೆ ಅಂಥದ್ದೇ ಅಶಾಂತ ಸಂಬಂಧಗಳ ಕಡೆಗೆ ಆಕರ್ಷಿತರಾಗುತ್ತಾರೆ.

Read Full Story

06:53 AM (IST) Apr 04

ಚಾಮರಾಜನಗರ ಸಮೀಪದ ಮೆಟ್ಟೂರು ಕ್ಷೇತ್ರದಿಂದ ವೀರಪ್ಪನ್‌ಪುತ್ರಿ ವಿದ್ಯಾರಾಣಿ ಕಣಕ್ಕೆ

ನರಹಂತಕ ವೀರಪ್ಪನ್ ಪುತ್ರಿ ವಿದ್ಯಾರಾಣಿ, ತಮಿಳುನಾಡು ಚುನಾವಣೆಯಲ್ಲಿ ಮೆಟ್ಟೂರು ಕ್ಷೇತ್ರದಿಂದ ನಾಮ್ ತಮಿಳರ್ ಕಚ್ಚಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ತಂದೆಯ ಸಮಾಧಿಗೆ ಪೂಜೆ ಸಲ್ಲಿಸಿದ್ದು, ಈ ಹಿಂದೆ ಅವರು ಬಿಜೆಪಿ ಯುವ ಘಟಕದ ಉಪಾಧ್ಯಕ್ಷರಾಗಿದ್ದರು.
Read Full Story

More Trending News