LIVE NOW
Published : Jul 27, 2026, 07:48 AM ISTUpdated : Jul 27, 2026, 01:33 PM IST

ಸ್ಟಾರ್ ಹೊಟೆಲ್‌ನಲ್ಲಿ ರಾಜೀನಾಮೆ ಪಾರ್ಟಿ ವಿಡಿಯೋ, ಕಾಕ್ರೋಚ್ ಫಂಡಿಂಗ್ ಪ್ರಶ್ನಿಸಿದ ವಕೀಲ ಜೇಠ್ಮಲಾನಿ

ಸಾರಾಂಶ

ನವದೆಹಲಿ: 4 ದಿನ ನೀಟ್‌ ಸೋರಿಕೆ ವಿರೋಧಿ ಗದ್ದಲಕ್ಕೆ ಬಲಿಯಾದ ಮುಂಗಾರು ಅಧಿವೇಶನದ 5ನೇ ದಿನವಾದ ಸೋಮವಾರ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯವೆಸಗಿದ್ದಕ್ಕೆ ಸಂಬಂಧಿಸಿದಂತೆ ಕೋಲಾಹಲವೇಳುವ ಸಂಭವವಿದೆ. ಕಾಂಗ್ರೆಸ್ ಹಾಗೂ ಟಿಎಂಸಿ ಈ ವಿಷಯ ಪ್ರಸ್ತಾಪಿಸುವ ಸಂಭವವಿದೆ.

ಇದರ ಸುಳಿವು ನೀಡುವಂತೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದು, ‘ನ್ಯಾಯಯುತ ಶಿಕ್ಷಣ ವ್ಯವಸ್ಥೆಗೆ ಆಗ್ರಹಿಸಿ ಜು.20ರಂದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದರ ಹೊಣೆ ಹೊರಬೇಕು. ನಿಮ್ಮ ಅಡಿ ಬರುವ ದಿಲ್ಲಿ ಪೊಲೀಸರಿಗೆ ಪೆಲೆಟ್‌ ಗನ್‌ನಂತಹ ಮಾರಕ ಅಸ್ತ್ರಗಳನ್ನು ಬಳಸಲು ಅವಕಾಶ ಕೊಟ್ಟಿದ್ದಿರಾ? ನೀವಲ್ಲದಿದ್ದರೆ ಇನ್ಯಾರು ಕೊಟ್ಟಿದ್ದರು? ಮಫ್ತಿಯಲ್ಲಿದ್ದುಕೊಂಡು ಯುವಕರಿಗೆ ಹೊಡೆಯುತ್ತಿದ್ದವರು ಪೊಲೀಸರೇ ಅಥವಾ ಸ್ವಯಂಸೇವಕರೇ?’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆಲ್ಲ ಕಲಾಪದ ವೇಳೆ ಉತ್ತರಿಸುವಂತೆ ಆಗ್ರಹಿಸಿದ್ದಾರೆ.

01:33 PM (IST) Jul 27

ಸ್ಟಾರ್ ಹೊಟೆಲ್‌ನಲ್ಲಿ ರಾಜೀನಾಮೆ ಪಾರ್ಟಿ ವಿಡಿಯೋ, ಕಾಕ್ರೋಚ್ ಫಂಡಿಂಗ್ ಪ್ರಶ್ನಿಸಿದ ವಕೀಲ ಜೇಠ್ಮಲಾನಿ

ಸಿಜೆಪಿ ಪ್ರತಿಭಟನೆ, ಇಡೀ ಹೋರಾಟ, ಬಳಿಕ ಫೈವ್ ಸ್ಟಾರ್ ಹೊಟೆಲ್‌ನಲ್ಲಿ ಪಾರ್ಟಿ. ಇದಕ್ಕೆಲ್ಲಾ ಹಣದ ಮೂಲ ಎಲ್ಲಿಂದ? ಖ್ಯಾತ ವಕೀಲ ಮಹೇಶ್ ಜೇಠಲ್ಮಾನಿ ಪ್ರಶ್ನಿಸಿದ್ದಾರೆ. ವಿಡಿಯೋ ಪೋಸ್ಟ್ ಮಾಡಿರುವ ವಕೀರಲು ಹಲವು ಪ್ರಶ್ನೆ ಎತ್ತಿದ್ದಾರೆ.

Read Full Story

01:31 PM (IST) Jul 27

ಜೀವಾವಧಿ ಶಿಕ್ಷೆ ಪ್ರಸ್ತಾಪ, 10 ಕೋಟಿ ದಂಡ! Anti-Paper Leak ಮಸೂದೆಯಲ್ಲಿ 6 ಪ್ರಮುಖ ಬದಲಾವಣೆ!

ಇವತ್ತು ಲೋಕಸಭೆಯಲ್ಲಿ Anti-Paper Leak Bill ಮಂಡನೆಯಾಗಿದೆ. ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಈ ತಿದ್ದುಪಡಿ ಮಸೂದೆಯಲ್ಲಿ ಏನಿದೆ? ಏನೆಲ್ಲ ಬದಲಾವಣೆ ಮಾಡಲಾಗಿದೆ ಅನ್ನೋ ವಿವರ ಇಲ್ಲಿದೆ.

Read Full Story

01:18 PM (IST) Jul 27

ದುರ್ಬಲ ಜಿಂಬಾಬ್ವೆ ಎದುರು ಫೇಲ್; ಟೀಂ ಇಂಡಿಯಾದ ಈ ಐವರಿಗೆ ತಂಡದಿಂದ ಗೇಟ್‌ಪಾಸ್? ಮುಗಿಯಿತಾ ಇವರ ಕ್ರಿಕೆಟ್ ಬದುಕು

ಬೆಂಗಳೂರು: ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದೆ. ಇದರ ಹೊರತಾಗಿಯೂ ಈ ಸರಣಿಯಲ್ಲಿ ವೈಫಲ್ಯ ಅನುಭವಿಸಿದ ಐದು ಆಟಗಾರರು ಟೀಂ ಇಂಡಿಯಾದಿಂದ ಹೊರಬೀಳುವ ಭೀತಿಗೆ ಸಿಲುಕಿದ್ದಾರೆ. ಯಾರವರು? ನೋಡೋಣ ಬನ್ನಿ.

Read Full Story

11:50 AM (IST) Jul 27

ರಾಮಾಯಣ ಸಿನಿಮಾವನ್ನು 2 ಭಾಗಗಳಲ್ಲಿ ಮಾಡುತ್ತಿರೋದೇಕೆ? ಭಾರೀ ಗುಟ್ಟು ಬಿಚ್ಚಿಟ್ಟ ನಿರ್ಮಾಪಕರು!

ಮೊದಲ ಭಾಗವು ಪ್ರೇಕ್ಷಕರಲ್ಲಿ ಮುಂದೇನಾಗಬಹುದು ಎಂಬ ಕುತೂಹಲವನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಲಿದೆ. ಭಾಗ 1 ಮುಗಿದ ಕೂಡಲೇ ಪ್ರೇಕ್ಷಕರಿಗೆ ಭಾಗ 2 ನೋಡಲೇಬೇಕು ಎಂಬ ಹಪಾಹಪಿ ಶುರುವಾಗುವಂತೆ ಕಥೆಯನ್ನು ಅದ್ಭುತವಾಗಿ ಹೆಣೆಯಲಾಗಿದೆ ಎಂದು ತಂಡ ಹೇಳಿಕೊಂಡಿದೆ.

Read Full Story

11:41 AM (IST) Jul 27

ಕರ್ನಾಟಕ ಸೇರಿ 17 ರಾಜ್ಯಗಳಿಗೆ ಹವಾಮಾನ ಇಲಾಖೆ ಮಳೆ ಎಚ್ಚರಿಕೆ, ಹಲೆವೆಡೆ ರಜೆ ಘೋಷಣೆ

ಕರ್ನಾಟಕ ಸೇರಿದಂತೆ 17 ರಾಜ್ಯಗಳಲ್ಲಿ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ. ಈ ಪೈಕಿ ಕೆಲೆವೆಡೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಯಾವ ರಾಜ್ಯಗಳಿಗೆ ಯಾವ ಅಲರ್ಟ್?

Read Full Story

11:29 AM (IST) Jul 27

ಮುಂಬೈ ಟು ಟೀಮ್ ಇಂಡಿಯಾ.. ಸೂರ್ಯಂಶ್ ಶೆಡ್ಗೆ ಯಾರು? ಈ ಯುವ ಪ್ರತಿಭೆ ತಂಡಕ್ಕೆ ಯಾಕೆ ಮುಖ್ಯ?

23 ವರ್ಷದ ಮುಂಬೈ ಆಲ್‌ರೌಂಡರ್ ಸೂರ್ಯಂಶ್ ಶೆಡ್ಗೆ, ದೇಶೀಯ ಕ್ರಿಕೆಟ್‌ನಲ್ಲಿ ಸ್ಫೋಟಕ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಸೀಮ್ ಬೌಲಿಂಗ್ ಮೂಲಕ ಇದೀಗ ಭಾರತ ಟಿ20 ತಂಡಕ್ಕೆ ಪದಾರ್ಪಣೆ ಮಾಡಿದ್ದು, ತಂಡದ ಭವಿಷ್ಯದ ಭರವಸೆಯಾಗಿದ್ದಾರೆ.
Read Full Story

11:15 AM (IST) Jul 27

IND vs ZIM 3rd T20I - ನಿನ್ನೆ ನಡೆದ ಭಾರತ-ಜಿಂಬಾಬ್ವೆ ಮೂರನೇ ಮ್ಯಾಚ್ ಗೆದ್ದಿದ್ದು ಯಾರು? ಸರಣಿ ಶ್ರೇಷ್ಠ ಪ್ರಶಸ್ತಿ ಯಾರ ಪಾಲು?

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿದ ಭಾರತ, ಸೋಲಿನ ಸರಪಳಿಯಿಂದ ಹೊರಬಂದಿದೆ. ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಆಟ ಮತ್ತು ಮಯಾಂಕ್ ಯಾದವ್ ಅವರ ಬೌಲಿಂಗ್ ನೆರವಿನಿಂದ ಗೆದ್ದ ಟೀಂ ಇಂಡಿಯಾ, ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನವನ್ನು ಅಲಂಕರಿಸಿದೆ.

Read Full Story

10:34 AM (IST) Jul 27

Ramayana - 'ರಾಮಾಯಣ' ಕ್ಲೈಮ್ಯಾಕ್ಸ್ ಸೀಕ್ರೆಟ್ ಬಿಚ್ಚಿಟ್ಟ ರಣಬೀರ್ ಕಪೂರ್.. ಯಶ್ ಜೊತೆ ಮುಖಾಮುಖಿ ಬಗ್ಗೆ ಬಿಗ್ ಹೇಳಿದ್ದೇನು?

ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್, ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ.

Read Full Story

09:02 AM (IST) Jul 27

ಸೈಲೆಂಟಾಗಿ ಬೇರೆ ತಂಡ ಸೇರಿಕೊಂಡ ಆರ್‍‌ಸಿಬಿ ಸ್ಟಾರ್ ಯಶ್ ದಯಾಳ್..!

ವೈಯಕ್ತಿಕ ಕಾರಣಗಳಿಂದಾಗಿ ಭಾರೀ ಸುದ್ದಿಯಲ್ಲಿದ್ದ ಆರ್‍‌ಸಿಬಿ ಸ್ಟಾರ್ ಯಶ್ ದಯಾಳ್ ಅವರು ತಂಡ ಬದಲಿಸಿದ್ದಾರೆ. ಬೆನ್ನಲ್ಲೇ ಬೆಂಗಳೂರಿಗೆ ಅವರು ಆಗಮಿಸಿದ್ದು, ಯಾವ ತಂಡ ಸೇರಿದ್ದಾರೆ? ಯಾಕೆ ಈ ನಿರ್ಧಾರ ಕೈಗೊಂಡ್ರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

08:33 AM (IST) Jul 27

ಜಂತರ್‌ಮಂತರ್‌ ಸಿಜೆಪಿ ಪ್ರತಿಭಟನಾ ಸ್ಥಳದಲ್ಲಿ 60 ಮೆಟ್ರಿಕ್‌ ಟನ್ ಕಸ! ಎನ್‌ಡಿಎಂಸಿ ಸ್ವಚ್ಛತಾ ಕಾರ್ಯ

ಜಂತರ್‌ಮಂತರ್‌ನಲ್ಲಿ ತಿಂಗಳ ಕಾಲ ನಡೆದ ಪ್ರತಿಭಟನೆ ಮುಗಿದಿದ್ದು, 60 ಮೆಟ್ರಿಕ್‌ ಟನ್‌ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಮತ್ತೊಂದೆಡೆ, ನೀಟ್‌ ಪರೀಕ್ಷೆ ವಿರೋಧಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ಹೊಣೆಯನ್ನು ಅಮಿತ್ ಶಾ ಹೊರಬೇಕೆಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
Read Full Story

More Trending News