Published : Jul 27, 2026, 07:48 AM ISTUpdated : Jul 27, 2026, 11:36 PM IST

ವಿಜಯ್ ದೇವರಕೊಂಡ ಕೆರಿಯರ್ ಬದಲಿಸಬಹುದಾಗಿದ್ದ ಎರಡು ಸಿನಿಮಾಗಳು ಯಾಕೆ ನಿಂತವು? ಅಸಲಿ ಕಾರಣ ಇಲ್ಲಿದೆ

ಸಾರಾಂಶ

ನವದೆಹಲಿ: 4 ದಿನ ನೀಟ್‌ ಸೋರಿಕೆ ವಿರೋಧಿ ಗದ್ದಲಕ್ಕೆ ಬಲಿಯಾದ ಮುಂಗಾರು ಅಧಿವೇಶನದ 5ನೇ ದಿನವಾದ ಸೋಮವಾರ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯವೆಸಗಿದ್ದಕ್ಕೆ ಸಂಬಂಧಿಸಿದಂತೆ ಕೋಲಾಹಲವೇಳುವ ಸಂಭವವಿದೆ. ಕಾಂಗ್ರೆಸ್ ಹಾಗೂ ಟಿಎಂಸಿ ಈ ವಿಷಯ ಪ್ರಸ್ತಾಪಿಸುವ ಸಂಭವವಿದೆ.

ಇದರ ಸುಳಿವು ನೀಡುವಂತೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದು, ‘ನ್ಯಾಯಯುತ ಶಿಕ್ಷಣ ವ್ಯವಸ್ಥೆಗೆ ಆಗ್ರಹಿಸಿ ಜು.20ರಂದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದರ ಹೊಣೆ ಹೊರಬೇಕು. ನಿಮ್ಮ ಅಡಿ ಬರುವ ದಿಲ್ಲಿ ಪೊಲೀಸರಿಗೆ ಪೆಲೆಟ್‌ ಗನ್‌ನಂತಹ ಮಾರಕ ಅಸ್ತ್ರಗಳನ್ನು ಬಳಸಲು ಅವಕಾಶ ಕೊಟ್ಟಿದ್ದಿರಾ? ನೀವಲ್ಲದಿದ್ದರೆ ಇನ್ಯಾರು ಕೊಟ್ಟಿದ್ದರು? ಮಫ್ತಿಯಲ್ಲಿದ್ದುಕೊಂಡು ಯುವಕರಿಗೆ ಹೊಡೆಯುತ್ತಿದ್ದವರು ಪೊಲೀಸರೇ ಅಥವಾ ಸ್ವಯಂಸೇವಕರೇ?’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆಲ್ಲ ಕಲಾಪದ ವೇಳೆ ಉತ್ತರಿಸುವಂತೆ ಆಗ್ರಹಿಸಿದ್ದಾರೆ.

11:36 PM (IST) Jul 27

ವಿಜಯ್ ದೇವರಕೊಂಡ ಕೆರಿಯರ್ ಬದಲಿಸಬಹುದಾಗಿದ್ದ ಎರಡು ಸಿನಿಮಾಗಳು ಯಾಕೆ ನಿಂತವು? ಅಸಲಿ ಕಾರಣ ಇಲ್ಲಿದೆ

ವಿಜಯ್ ದೇವರಕೊಂಡ ಕೆರಿಯರ್‌ನಲ್ಲಿ ಸೂಪರ್‌ ಹಿಟ್‌ ಸಿನಿಮಾಗಳ ಜೊತೆಗೆ, ದೊಡ್ಡ ಮಟ್ಟದಲ್ಲಿ ಶುರುವಾಗಿ ಅರ್ಧಕ್ಕೆ ನಿಂತುಹೋದ ಚಿತ್ರಗಳೂ ಇವೆ. ಆ ಎರಡು ಸಿನಿಮಾಗಳು ಯಾವುವು? ಅವು ನಿಲ್ಲಲು ಕಾರಣವೇನು?

Read Full Story

10:53 PM (IST) Jul 27

ಸಿಜೆಪಿ ಪ್ರತಿಭಟನೆ ಎಫೆಕ್ಟ್‌ - 635K followers ಇದ್ದ ಇನ್ಸ್‌ಟಾಗ್ರಾಮ್‌ ಅಕೌಂಟ್‌ ಕಳೆದುಕೊಂಡ ವೈರಲ್‌ ಹುಡುಗ!

'ಕಾಕ್ರೋಚ್ ಜನತಾ ಪಾರ್ಟಿ' ಪ್ರತಿಭಟನೆಯ ವಿಡಿಯೋಗಳಿಂದ ಖ್ಯಾತರಾದ ಕಂಟೆಂಟ್ ಕ್ರಿಯೇಟರ್ ಅಭಿನವ್ ಬಿಷ್ಟ್ ಅವರ 6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದ ಇನ್‌ಸ್ಟಾಗ್ರಾಮ್ ಖಾತೆಯನ್ನು ಮೆಟಾ ಅಮಾನತುಗೊಳಿಸಿದೆ.

Read Full Story

10:38 PM (IST) Jul 27

ಟಾಲಿವುಡ್‌ನಲ್ಲಿ ಗಾಯದ ಪರ್ವ.. ಫ್ಯಾನ್ಸ್‌ಗೆ ಶಾಕ್! ಜೂ.ಎನ್‌ಟಿಆರ್‌ಗೆ ಗಾಯ, 8 ವಾರ ಬೆಡ್ ರೆಸ್ಟ್ - ಆಗಿದ್ದೇನು?

ನಟ ಜೂ.ಎನ್‌ಟಿಆರ್‌ಗೆ ಗಾಯಗಳಾಗಿವೆ. ಅವರ ಭುಜಕ್ಕೆ ಗಾಯವಾಗಿದೆ ಎಂದು ಅವರ ತಂಡ ಮಾಹಿತಿ ನೀಡಿದೆ. ವೈದ್ಯಕೀಯ ಪರೀಕ್ಷೆಗಳ ನಂತರ ಎಂಟು ವಾರಗಳ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.

Read Full Story

10:36 PM (IST) Jul 27

ಕಾಕ್ರೋಚ್‌ಗೆ ಈಗ ಕಾನೂನು ಸಂಕಷ್ಟ, ₹1 ಕೋಟಿ ದೇಣಿಗೆ ನೀಡಿದ ಹಿರಿಯ ವಕೀಲ, ಮಾಜಿ ಕಾಂಗ್ರೆಸ್ಸಿಗ ಕಪಿಲ್ ಸಿಬಲ್!

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟಿಸಿದ್ದಕ್ಕೆ ಎಫ್‌ಐಆರ್ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಕಾನೂನು ನೆರವು ನೀಡಲು 'ಕಾಕ್ರೋಚ್ ಜನತಾ ಪಾರ್ಟಿ' ಸ್ಥಾಪಿಸಿದ ನಿಧಿಗೆ ಹಿರಿಯ ವಕೀಲ ಕಪಿಲ್ ಸಿಬಲ್ ₹1 ಕೋಟಿ ದೇಣಿಗೆ ನೀಡಿದ್ದಾರೆ.

Read Full Story

09:46 PM (IST) Jul 27

ವಿಶ್ವದ ಶ್ರೇಷ್ಠ ವೈದ್ಯರ ತಂಡದಿಂದ ರಾಮ್ ಚರಣ್‌ಗೆ ಸರ್ಜರಿ - ಈಗ ಪೆದ್ದಿ ಆರೋಗ್ಯ ಹೇಗಿದೆ?

Ram Charan Health: ರಾಮ್ ಚರಣ್ ಅವರ ಮಣಿಕಟ್ಟು ಸರ್ಜರಿ ಯಶಸ್ವಿಯಾಗಿ ನಡೆದಿದೆ. ವಿಶ್ವದ ಖ್ಯಾತ ವೈದ್ಯರು ಈ ಸರ್ಜರಿ ಮಾಡಿರುವುದು ವಿಶೇಷ. ಹಾಗಾದರೆ ಈಗ ಚರಣ್ ಆರೋಗ್ಯ ಹೇಗಿದೆ? ಇಲ್ಲಿದೆ ವಿವರ.

Read Full Story

09:06 PM (IST) Jul 27

ಜೂ.ಎನ್‌ಟಿಆರ್‌ 'ದೇವರ' ಕಲೆಕ್ಷನ್ ನಿಜಾನಾ, ಸುಳ್ಳಾ? ದುಬೈ ಪಾರ್ಟಿ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ನಿರ್ಮಾಪಕ!

ಜೂ.ಎನ್‌ಟಿಆರ್‌‌ ನಟನೆಯ 'ದೇವರ' ಚಿತ್ರದ ಕಲೆಕ್ಷನ್ ನಿಜವೇ ಅಥವಾ ಫೇಕ್ ಎಂಬ ಚರ್ಚೆ ಟಾಲಿವುಡ್‌ನಲ್ಲಿ ಇನ್ನೂ ನಡೆಯುತ್ತಿದೆ. ನೆಗೆಟಿವ್ ಟಾಕ್ ನಡುವೆಯೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ಹೇಳಿದ್ದರು.

Read Full Story

08:37 PM (IST) Jul 27

ಹೆದ್ದಾರಿಯಲ್ಲಿ ಸ್ಕಿಡ್‌ ಆಗಿ ಎರಡು ತುಂಡಾದ ಬಸ್‌, ಭೀಕರ ಘಟನೆಯ ವಿಡಿಯೋ ವೈರಲ್‌!

ಕೇರಳದ ಮಲಪ್ಪುರಂ ಜಿಲ್ಲೆಯ ಕುಟ್ಟಿಪ್ಪುರಂ ಬಳಿ ಖಾಸಗಿ ಬಸ್‌ವೊಂದು ನಿಯಂತ್ರಣ ತಪ್ಪಿ ಆಟೋರಿಕ್ಷಾಗೆ ಡಿಕ್ಕಿ ಹೊಡೆದು, ಕಾರಿನ ಮೇಲೆ ಮಗುಚಿಬಿದ್ದಿದೆ. ಈ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Read Full Story

08:18 PM (IST) Jul 27

'ಪಿಚ್ಚರ್​ ಅಭೀ ಭೀ ಬಾಕಿ ಹೈ' ಎಂದಿದ್ದ CJP ದೀಪ್ಕೆ ಪಿಚ್ಚರ್​ ಬಿಟ್ಟೋಯ್ತು - ಕೇಳಿದ ಈ ಪ್ರಶ್ನೆಗೆ ಉತ್ತರವಿಲ್ಲದೇ ಸುಸ್ತಾದ್ರು

ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾಯಿತು. ಆದರೆ, ಪಂಜಾಬ್‌ನಲ್ಲಿ ಇದೇ ರೀತಿಯ ಪೇಪರ್ ಲೀಕ್ ಆದಾಗ, ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಪ್ರತಿಭಟನೆಯ ನಾಯಕ ಅಭಿಜೀತ್ ದೀಪ್ಕೆ, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೆ ತಬ್ಬಿಬ್ಬಾದರು, ಇದು ಅವರ ಹೋರಾಟದ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story

08:17 PM (IST) Jul 27

ಸತತ 7 ಫ್ಲಾಪ್! ವಿಜಯ್ ಚಿತ್ರವೂ ಕೈ ಹಿಡಿಯಲಿಲ್ಲ - 'ಬುಟ್ಟಬೊಮ್ಮ' ಪೂಜಾ ಹೆಗ್ಡೆಗೆ ಸಂಕಷ್ಟ

ನಟಿ ಪೂಜಾ ಹೆಗ್ಡೆ ಇತ್ತೀಚೆಗೆ 'ಜನ ನಾಯಗನ್' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಸಿನಿಮಾ ಸೋಲಿನತ್ತ ಸಾಗುತ್ತಿದ್ದು, ಪೂಜಾ ಇಟ್ಟಿದ್ದ ಭರವಸೆ ಹುಸಿಯಾಗಿದೆ. ಸತತ ಸೋಲುಗಳಿಂದ ಅವರ ವೃತ್ತಿಜೀವನ ಸಂಕಷ್ಟದಲ್ಲಿದೆ.

Read Full Story

07:38 PM (IST) Jul 27

'ಬಾಹುಬಲಿ'ಗಾಗಿ ನಾಸರ್‌ಗೆ ಸಿಕ್ಸ್ ಪ್ಯಾಕ್ ಮಾಡಲು ಹೇಳಿದ್ದರಾ ರಾಜಮೌಳಿ? ಇಲ್ಲಿದೆ ಕುತೂಹಲಕಾರಿ ಕಥೆ

Baahubali Movie Secrets: ತಮಗೆ ಬೇಕಾದ ಔಟ್‌ಪುಟ್ ಬರುವವರೆಗೂ ರಾಜಮೌಳಿ ಕಲಾವಿದರನ್ನು ಬಿಡುವುದಿಲ್ಲ. ಚಿಕ್ಕ ಪಾತ್ರವೇ ಇರಲಿ, ದೊಡ್ಡ ಪಾತ್ರವೇ ಇರಲಿ, ಪರ್ಫೆಕ್ಷನ್ ಇರಲೇಬೇಕು ಎನ್ನುವ ನಿರ್ದೇಶಕ ಅವರು.

Read Full Story

07:24 PM (IST) Jul 27

'ಹೌದು ನಾವಿರೋದೇ ಹಿಂಗೆ..' ರೆಸಿಗ್ನೇಶನ್‌ ಪಾರ್ಟಿ ವಿಡಿಯೋಗೆ ಟೀಕೆ ಬಂದ ಬೆನ್ನಲ್ಲೇ ಸಮರ್ಥಿಸಿಕೊಂಡ ಸಿಜೆಪಿಯ ಸೌರವ್‌ ದಾಸ್‌

ದೆಹಲಿಯ ಜಂತರ್ ಮಂತರ್‌ನಲ್ಲಿ 37 ದಿನಗಳ ಪ್ರತಿಭಟನೆಯನ್ನು ಹಿಂಪಡೆದ 'ಕಾಕ್ರೋಚ್ ಜನತಾ ಪಾರ್ಟಿ' (CJP), ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಪಾರ್ಟಿ ಮಾಡಿ ಸಂಭ್ರಮಿಸಿದೆ. ಈ ವಿಡಿಯೋ ವೈರಲ್ ಆಗಿ ತೀವ್ರ ಟೀಕೆಗೆ ಗುರಿಯಾಗಿದೆ.

Read Full Story

06:55 PM (IST) Jul 27

Salary Hike - ಸಂಬಳ ಜಾಸ್ತಿಯಾದ್ರೂ ಕೈಯಲ್ಲಿ ಹಣ ಉಳೀತಿಲ್ವಾ? ಹಾಗಿದ್ರೆ ಈ ತಪ್ಪನ್ನಂತೂ ಮಾಡಲೇಬೇಡಿ!

ವರ್ಷಗಟ್ಟಲೆ ಕಷ್ಟಪಟ್ಟು ದುಡಿದಿದ್ದಕ್ಕೆ ಸಂಬಳ ಜಾಸ್ತಿಯಾದ್ರೆ ಸಿಗೋ ಖುಷಿಯೇ ಬೇರೆ. ತಿಂಗಳ ಬಜೆಟ್, ಖರ್ಚು ಕಡಿತ ಅಂತ ಕಸರತ್ತು ಮಾಡಿದ ಮೇಲೆ ಕೈಯಲ್ಲಿ ಸ್ವಲ್ಪ ಹೆಚ್ಚು ಹಣ ಬರೋದು ದೊಡ್ಡ ರಿಲೀಫ್ ಕೊಡುತ್ತೆ. ಈ ಟೈಮ್‌ನಲ್ಲಿ ಖರ್ಚು ಮಾಡಲು ಹೊಸ ಹೊಸ ಆಸೆ ಬರೋದು ಸಹಜ.

Read Full Story

06:53 PM (IST) Jul 27

ಮದುವೆಗೂ ಮುನ್ನವೇ ಗೊತ್ತಿತ್ತು.. - ಪತ್ನಿ ಜೈನಬ್ ಟ್ರೋಲ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಅಖಿಲ್

ನಟ ಅಖಿಲ್ ಅಕ್ಕಿನೇನಿ ತಮ್ಮ ಪತ್ನಿ ಜೈನಬ್ ವಿರುದ್ಧ ನಡೆಯುತ್ತಿರುವ ಟ್ರೋಲಿಂಗ್ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಮದುವೆಗೂ ಮುನ್ನವೇ ಈ ಬಗ್ಗೆ ನಮಗೆ ತಿಳಿದಿತ್ತು ಎಂದು ಅಖಿಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story

06:51 PM (IST) Jul 27

LOVE STORY - ಕುಚ್‌ಕುಚ್ ಹೋಗಯಾ.. ಕಾಶ್ಮೀರದ ಸುಂದರಿ ಸಮ್ರೀನ್ ಕೌರ್ ಲವ್ವಲ್ಲಿ ಬಿದ್ರಾ ಅರ್ಷ್‌ದೀಪ್ ಸಿಂಗ್?

ಮೈದಾನದಲ್ಲಿ ಬ್ಯಾಟರ್‌ಗಳನ್ನು ನಡುಗಿಸುವ ಅರ್ಶದೀಪ್ ಈಗ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ. ಅಭಿಮಾನಿಗಳಂತೂ ಈ ಹೊಸ ಜೋಡಿಯನ್ನು ನೋಡಿ "ಪರ್ಫೆಕ್ಟ್ ಮ್ಯಾಚ್" ಎಂದು ಸಂಭ್ರಮಿಸುತ್ತಿದ್ದಾರೆ! ಆದರೆ, ಈ ಲವ್‌ ಸ್ಟೋರಿಯಿಂದ ಈ ಇಬ್ಬರ ಕೆರಿಯರ್ ಸಮಸ್ಯೆ ಎದುರಿಸದೇ ಇರಲಿ ಎಂದೂ ಕೂಡ ಹಲವರು ಹಾರೈಸುತ್ತಿದ್ದಾರೆ.

Read Full Story

06:27 PM (IST) Jul 27

ಬದಲಾಗುತ್ತಿದೆ 10ರೂ 20 ರೂ ನೋಟು, ಡಿಮಾನಿಟೈಸೇಶನ್ ಬಳಿಕ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

ಡಿಮಾನಿಟೈಸೇಶನ್ ಬಳಿಕ ನೋಟಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. 10 ರೂಪಾಯಿ ಹಾಗೂ 20 ರೂಪಾಯಿ ನೋಟುಗಳ ರೂಪ, ಸ್ವರೂಪ ಎಲ್ಲವೂ ಬದಲಾಗುತ್ತಿದೆ. ಏನಿದು?

Read Full Story

05:25 PM (IST) Jul 27

"ಅಭಿಷೇಕ್‌ಗೆ ಸಿಗೋ ಚಾನ್ಸ್‌ ಸಂಜುಗೆ ಯಾಕಿಲ್ಲ?" - ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ ವಿರುದ್ಧ ಕೆಂಡವಾದ ಕೃಷ್ಣಮಾಚಾರಿ ಶ್ರೀಕಾಂತ್!

ಟಿ20 ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಕೈಬಿಟ್ಟಿರುವುದನ್ನು ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರವಾಗಿ ಖಂಡಿಸಿದ್ದಾರೆ. ಸತತವಾಗಿ ವಿಫಲವಾಗುತ್ತಿರುವ ಅಭಿಷೇಕ್ ಶರ್ಮಾಗೆ ನೀಡುತ್ತಿರುವ ಅವಕಾಶಗಳನ್ನು ಸಂಜುಗೆ ಯಾಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿ, ಸಂಜುರನ್ನು ತಕ್ಷಣವೇ ತಂಡಕ್ಕೆ ಮರಳಿ ಕರೆತರಬೇಕೆಂದು ಅವರು ಆಗ್ರಹಿಸಿದ್ದಾರೆ.
Read Full Story

05:11 PM (IST) Jul 27

ರಾಷ್ಟ್ರ ಪ್ರಶಸ್ತಿ ವಿವಾದಕ್ಕೆ ನಟ ಧನುಷ್ ಖಡಕ್ ಕೌಂಟರ್.. 'ಆವತ್ತು ಸಿಗದಿದ್ದಾಗ ಏಕೆ ಚರ್ಚೆ ಆಗಿಲ್ಲ?' ಎಂದ ನಟ!

ಧನುಷ್ ಅವರ ಈ ಪ್ರಾಮಾಣಿಕ ಮಾತುಗಳು ಈಗ ಅಭಿಮಾನಿಗಳ ಹೃದಯ ಗೆದ್ದಿವೆ. ಟ್ರೋಲ್ ಮಾಡುವವರಿಗೆ ತಮ್ಮ ಕೆಲಸದ ಮೂಲಕವೇ ಉತ್ತರ ನೀಡುವ ಧನುಷ್, ಈಗ ರಾಷ್ಟ್ರ ಪ್ರಶಸ್ತಿಯ ವಿವಾದವನ್ನೂ ತಮ್ಮ ಚಾಣಾಕ್ಷತನದಿಂದ ತಣ್ಣಗಾಗಿಸಿದ್ದಾರೆ. ನಿಜಕ್ಕೂ ಧನುಷ್ ಅಂದ್ರೆ ಸುಮ್ನೇನಾ? ಈ ಸ್ಟೋರಿ ನೋಡಿ..

Read Full Story

04:07 PM (IST) Jul 27

ಮಾರುಕಟ್ಟೆಯಲ್ಲಿ ತೀವ್ರ ದರ ಸಮರ, 3 ಬೃಹತ್‌ ಜಾಗತಿಕ ಒಪ್ಪಂದ ಕಳೆದುಕೊಂಡ ಇನ್ಫೋಸಿಸ್‌

ಜಾಗತಿಕ ದರ ಸಮರ ಮತ್ತು ವೆಂಡರ್ ಕನ್ಸಾಲಿಡೇಶನ್‌ನಿಂದಾಗಿ ಇನ್ಫೋಸಿಸ್ ಮೂರು ಪ್ರಮುಖ ಕ್ಲೈಂಟ್ ಒಪ್ಪಂದಗಳನ್ನು ಕಳೆದುಕೊಂಡಿದೆ. ಈ ಸವಾಲುಗಳ ನಡುವೆಯೂ, ಸಂಸ್ಥೆಯು ಜೂನ್ ತ್ರೈಮಾಸಿಕದಲ್ಲಿ $3.6 ಬಿಲಿಯನ್ ಮೌಲ್ಯದ ಹೊಸ ಬೃಹತ್ ಒಪ್ಪಂದಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
Read Full Story

04:02 PM (IST) Jul 27

Mint Growing - ಹೊರಗೆ ಹೋಗಬೇಕಿಲ್ಲ, ಅಡುಗೆಮನೆಯಲ್ಲೇ ಖರ್ಚಿಲ್ಲದೇ ಸುಲಭವಾಗಿ ಪುದೀನಾ ಬೆಳೆಯಿರಿ!

ಪುದೀನಾವನ್ನು ಮನೆಯ ಅಡುಗೆಮನೆಯಲ್ಲಿ ಅಥವಾ ಬಾಲ್ಕನಿಯಲ್ಲಿ ತುಂಬಾ ಸುಲಭವಾಗಿ ಬೆಳೆಸಬಹುದು. ಸಮೃದ್ಧವಾಗಿ ಪುದೀನಾ ಬೆಳೆಯಲು ಇಲ್ಲಿವೆ ಕೆಲವು ಸರಳ ಟಿಪ್ಸ್.

Read Full Story

03:44 PM (IST) Jul 27

EPFO ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ - UPI ಆಧಾರಿತ ಕ್ಲೈಮ್ ಸೇವೆ ಆಗಸ್ಟ್‌ಗೆ ಮುಂದೂಡಿಕೆ!

ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಜಾರಿಗೆ ತರಲು ಉದ್ದೇಶಿಸಿದ್ದ ಯುಪಿಐ ಆಧಾರಿತ ಪಿಎಫ್ ಸೇವಾ ಸೌಲಭ್ಯವು ತಾಂತ್ರಿಕ ದೋಷಗಳಿಂದಾಗಿ ವಿಳಂಬವಾಗಿದೆ. ನವೀಕರಿಸಿದ ಪೋರ್ಟಲ್‌ನಲ್ಲಿನ ಸಮಸ್ಯೆಗಳನ್ನು ಸರಿಪಡಿಸಿದ ನಂತರ, ಈ ಸೌಲಭ್ಯವು ಆಗಸ್ಟ್ ತಿಂಗಳಿನಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.
Read Full Story

03:40 PM (IST) Jul 27

ಇನ್ಫೋಸಿಸ್‌ಗೆ ಸಂಕಷ್ಟ ತಂದ ಕೆಲಸದ ಸಮಯ, ಲೋಪ ಪತ್ತೆಯಾಗುತ್ತಿದ್ದಂತೆ 2 ಕೋಟಿ ರೂಪಾಯಿ ದಂಡ

ಇನ್ಫೋಸಿಸ್ ನಾರಾಯಣಮೂರ್ತಿ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಭಾರಿ ವಿವಾದ ಸೃಷ್ಟಿಸಿದ ಬಳಿಕ ಇದೀಗ ಕೆಲಸದ ಸಮಯದಲ್ಲಿ ಲೋಪ ಮಾಡಿದ ಪರಿಣಾಮ ಇದೀಗ 2 ಕೋಟಿ ರೂಪಾಯಿ ದಂಡಕ್ಕೆ ಗುರಿಯಾಗಿದೆ.

Read Full Story

03:34 PM (IST) Jul 27

ವಿಜ್ಞಾನ ಜಗತ್ತಿನಲ್ಲಿ ಹೊಸ ಸಂಚಲ - ಅತಿಯಾದ ಮೀನುಗಾರಿಕೆ ಪರಿಣಾಮ ಹೆಣ್ಣಾಗಿ ಜನಿಸಿದ ಮೀನು ಗಂಡಾಗಿ ಪರಿವರ್ತನೆ!

ಅತಿಯಾದ ಮೀನುಗಾರಿಕೆಯು ಮೀನುಗಳ ಸಂಖ್ಯೆಯನ್ನು ಕಡಿಮೆ ಮಾಡುವುದಲ್ಲದೆ, ಅವುಗಳ ಜೀನ್‌ಗಳು ಕಾರ್ಯನಿರ್ವಹಿಸುವ ವಿಧಾನವನ್ನೇ ಬದಲಾಯಿಸುತ್ತಿದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಸಂರಕ್ಷಿತ ಮತ್ತು ಮೀನುಗಾರಿಕೆ ವಲಯದ 'ಮುತ್ತಿನ ರೇಜರ್‌ಫಿಶ್'ಗಳ ಮೇಲೆ ನಡೆಸಿದ ಸಂಶೋಧನೆಯು, ಮೀನುಗಾರಿಕೆಯ ಒತ್ತಡವು ಮೀನುಗಳಲ್ಲಿ 'ಎಪಿಜೆನೆಟಿಕ್' ಬದಲಾವಣೆಗಳನ್ನು ಉಂಟುಮಾಡುತ್ತದೆ ಎಂಬುದಕ್ಕೆ ಬಲವಾದ ಪುರಾವೆ ಒದಗಿಸಿದೆ.
Read Full Story

03:28 PM (IST) Jul 27

ಸೂರ್ಯವಂಶಿ ವಿಚಾರದಲ್ಲಿ ಭುಗಿಲೆದ್ದ ಮತ್ತೊಂದು ಆಗ್ರಹ.. ಗಿಲ್‌ ಸ್ಥಾನಕ್ಕೆ ಬಂತಾ ಆಪತ್ತು..?

15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಭಾರತದ ಏಕದಿನ ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಮಾಜಿ ಕ್ರಿಕೆಟಿಗ ಫರೋಖ್ ಇಂಜಿನಿಯರ್ ಸಲಹೆ ನೀಡಿದ್ದಾರೆ. 2027ರ ವಿಶ್ವಕಪ್ ದೃಷ್ಟಿಯಿಂದ, ರೋಹಿತ್ ಶರ್ಮಾ ಜೊತೆ ವೈಭವ್ ಇನ್ನಿಂಗ್ಸ್ ಆರಂಭಿಸಬೇಕು ಮತ್ತು ಶುಭಮನ್ ಗಿಲ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.
Read Full Story

02:40 PM (IST) Jul 27

2027ರ ಏಕದಿನ ವಿಶ್ವಕಪ್ ಟೂರ್ನಿಗೆ ಅಚ್ಚರಿಯ ಭಾರತ ತಂಡವನ್ನು ಆಯ್ಕೆ ಮಾಡಿದ ರವಿಚಂದ್ರನ್ ಅಶ್ವಿನ್! ಇಬ್ಬರು ಆರ್‌ಸಿಬಿ ಚಾಂಪಿಯನ್ ಅಟಗಾರರಿಗೆ ಸ್ಥಾನ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, 2027ರ ಏಕದಿನ ವಿಶ್ವಕಪ್ ಟೂರ್ನಿಗೆ ತಮ್ಮ ಬಲಿಷ್ಠ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಅನುಭವಿ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್‌ಗೆ ಅಚ್ಚರಿಯ ಸ್ಥಾನ ನೀಡಿದ್ದು, ಆರ್‌ಸಿಬಿಯ ಇಬ್ಬರು ಆಟಗಾರರಿಗೆ ಮಣೆ ಹಾಕಿದ್ದಾರೆ.
Read Full Story

01:33 PM (IST) Jul 27

ಸ್ಟಾರ್ ಹೊಟೆಲ್‌ನಲ್ಲಿ ರಾಜೀನಾಮೆ ಪಾರ್ಟಿ ವಿಡಿಯೋ, ಕಾಕ್ರೋಚ್ ಫಂಡಿಂಗ್ ಪ್ರಶ್ನಿಸಿದ ವಕೀಲ ಜೇಠ್ಮಲಾನಿ

ಸಿಜೆಪಿ ಪ್ರತಿಭಟನೆ, ಇಡೀ ಹೋರಾಟ, ಬಳಿಕ ಫೈವ್ ಸ್ಟಾರ್ ಹೊಟೆಲ್‌ನಲ್ಲಿ ಪಾರ್ಟಿ. ಇದಕ್ಕೆಲ್ಲಾ ಹಣದ ಮೂಲ ಎಲ್ಲಿಂದ? ಖ್ಯಾತ ವಕೀಲ ಮಹೇಶ್ ಜೇಠಲ್ಮಾನಿ ಪ್ರಶ್ನಿಸಿದ್ದಾರೆ. ವಿಡಿಯೋ ಪೋಸ್ಟ್ ಮಾಡಿರುವ ವಕೀರಲು ಹಲವು ಪ್ರಶ್ನೆ ಎತ್ತಿದ್ದಾರೆ.

Read Full Story

01:31 PM (IST) Jul 27

ಜೀವಾವಧಿ ಶಿಕ್ಷೆ ಪ್ರಸ್ತಾಪ, 10 ಕೋಟಿ ದಂಡ! Anti-Paper Leak ಮಸೂದೆಯಲ್ಲಿ 6 ಪ್ರಮುಖ ಬದಲಾವಣೆ!

ಇವತ್ತು ಲೋಕಸಭೆಯಲ್ಲಿ Anti-Paper Leak Bill ಮಂಡನೆಯಾಗಿದೆ. ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಈ ತಿದ್ದುಪಡಿ ಮಸೂದೆಯಲ್ಲಿ ಏನಿದೆ? ಏನೆಲ್ಲ ಬದಲಾವಣೆ ಮಾಡಲಾಗಿದೆ ಅನ್ನೋ ವಿವರ ಇಲ್ಲಿದೆ.

Read Full Story

01:18 PM (IST) Jul 27

ದುರ್ಬಲ ಜಿಂಬಾಬ್ವೆ ಎದುರು ಫೇಲ್; ಟೀಂ ಇಂಡಿಯಾದ ಈ ಐವರಿಗೆ ತಂಡದಿಂದ ಗೇಟ್‌ಪಾಸ್? ಮುಗಿಯಿತಾ ಇವರ ಕ್ರಿಕೆಟ್ ಬದುಕು

ಬೆಂಗಳೂರು: ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದೆ. ಇದರ ಹೊರತಾಗಿಯೂ ಈ ಸರಣಿಯಲ್ಲಿ ವೈಫಲ್ಯ ಅನುಭವಿಸಿದ ಐದು ಆಟಗಾರರು ಟೀಂ ಇಂಡಿಯಾದಿಂದ ಹೊರಬೀಳುವ ಭೀತಿಗೆ ಸಿಲುಕಿದ್ದಾರೆ. ಯಾರವರು? ನೋಡೋಣ ಬನ್ನಿ.

Read Full Story

11:50 AM (IST) Jul 27

ರಾಮಾಯಣ ಸಿನಿಮಾವನ್ನು 2 ಭಾಗಗಳಲ್ಲಿ ಮಾಡುತ್ತಿರೋದೇಕೆ? ಭಾರೀ ಗುಟ್ಟು ಬಿಚ್ಚಿಟ್ಟ ನಿರ್ಮಾಪಕರು!

ಮೊದಲ ಭಾಗವು ಪ್ರೇಕ್ಷಕರಲ್ಲಿ ಮುಂದೇನಾಗಬಹುದು ಎಂಬ ಕುತೂಹಲವನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಲಿದೆ. ಭಾಗ 1 ಮುಗಿದ ಕೂಡಲೇ ಪ್ರೇಕ್ಷಕರಿಗೆ ಭಾಗ 2 ನೋಡಲೇಬೇಕು ಎಂಬ ಹಪಾಹಪಿ ಶುರುವಾಗುವಂತೆ ಕಥೆಯನ್ನು ಅದ್ಭುತವಾಗಿ ಹೆಣೆಯಲಾಗಿದೆ ಎಂದು ತಂಡ ಹೇಳಿಕೊಂಡಿದೆ.

Read Full Story

11:41 AM (IST) Jul 27

ಕರ್ನಾಟಕ ಸೇರಿ 17 ರಾಜ್ಯಗಳಿಗೆ ಹವಾಮಾನ ಇಲಾಖೆ ಮಳೆ ಎಚ್ಚರಿಕೆ, ಹಲೆವೆಡೆ ರಜೆ ಘೋಷಣೆ

ಕರ್ನಾಟಕ ಸೇರಿದಂತೆ 17 ರಾಜ್ಯಗಳಲ್ಲಿ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ. ಈ ಪೈಕಿ ಕೆಲೆವೆಡೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಯಾವ ರಾಜ್ಯಗಳಿಗೆ ಯಾವ ಅಲರ್ಟ್?

Read Full Story

11:29 AM (IST) Jul 27

ಮುಂಬೈ ಟು ಟೀಮ್ ಇಂಡಿಯಾ.. ಸೂರ್ಯಂಶ್ ಶೆಡ್ಗೆ ಯಾರು? ಈ ಯುವ ಪ್ರತಿಭೆ ತಂಡಕ್ಕೆ ಯಾಕೆ ಮುಖ್ಯ?

23 ವರ್ಷದ ಮುಂಬೈ ಆಲ್‌ರೌಂಡರ್ ಸೂರ್ಯಂಶ್ ಶೆಡ್ಗೆ, ದೇಶೀಯ ಕ್ರಿಕೆಟ್‌ನಲ್ಲಿ ಸ್ಫೋಟಕ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಸೀಮ್ ಬೌಲಿಂಗ್ ಮೂಲಕ ಇದೀಗ ಭಾರತ ಟಿ20 ತಂಡಕ್ಕೆ ಪದಾರ್ಪಣೆ ಮಾಡಿದ್ದು, ತಂಡದ ಭವಿಷ್ಯದ ಭರವಸೆಯಾಗಿದ್ದಾರೆ.
Read Full Story

11:15 AM (IST) Jul 27

IND vs ZIM 3rd T20I - ನಿನ್ನೆ ನಡೆದ ಭಾರತ-ಜಿಂಬಾಬ್ವೆ ಮೂರನೇ ಮ್ಯಾಚ್ ಗೆದ್ದಿದ್ದು ಯಾರು? ಸರಣಿ ಶ್ರೇಷ್ಠ ಪ್ರಶಸ್ತಿ ಯಾರ ಪಾಲು?

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿದ ಭಾರತ, ಸೋಲಿನ ಸರಪಳಿಯಿಂದ ಹೊರಬಂದಿದೆ. ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಆಟ ಮತ್ತು ಮಯಾಂಕ್ ಯಾದವ್ ಅವರ ಬೌಲಿಂಗ್ ನೆರವಿನಿಂದ ಗೆದ್ದ ಟೀಂ ಇಂಡಿಯಾ, ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನವನ್ನು ಅಲಂಕರಿಸಿದೆ.

Read Full Story

10:34 AM (IST) Jul 27

Ramayana - 'ರಾಮಾಯಣ' ಕ್ಲೈಮ್ಯಾಕ್ಸ್ ಸೀಕ್ರೆಟ್ ಬಿಚ್ಚಿಟ್ಟ ರಣಬೀರ್ ಕಪೂರ್.. ಯಶ್ ಜೊತೆ ಮುಖಾಮುಖಿ ಬಗ್ಗೆ ಬಿಗ್ ಹೇಳಿದ್ದೇನು?

ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್, ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ.

Read Full Story

09:02 AM (IST) Jul 27

ಸೈಲೆಂಟಾಗಿ ಬೇರೆ ತಂಡ ಸೇರಿಕೊಂಡ ಆರ್‍‌ಸಿಬಿ ಸ್ಟಾರ್ ಯಶ್ ದಯಾಳ್..!

ವೈಯಕ್ತಿಕ ಕಾರಣಗಳಿಂದಾಗಿ ಭಾರೀ ಸುದ್ದಿಯಲ್ಲಿದ್ದ ಆರ್‍‌ಸಿಬಿ ಸ್ಟಾರ್ ಯಶ್ ದಯಾಳ್ ಅವರು ತಂಡ ಬದಲಿಸಿದ್ದಾರೆ. ಬೆನ್ನಲ್ಲೇ ಬೆಂಗಳೂರಿಗೆ ಅವರು ಆಗಮಿಸಿದ್ದು, ಯಾವ ತಂಡ ಸೇರಿದ್ದಾರೆ? ಯಾಕೆ ಈ ನಿರ್ಧಾರ ಕೈಗೊಂಡ್ರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

08:33 AM (IST) Jul 27

ಜಂತರ್‌ಮಂತರ್‌ ಸಿಜೆಪಿ ಪ್ರತಿಭಟನಾ ಸ್ಥಳದಲ್ಲಿ 60 ಮೆಟ್ರಿಕ್‌ ಟನ್ ಕಸ! ಎನ್‌ಡಿಎಂಸಿ ಸ್ವಚ್ಛತಾ ಕಾರ್ಯ

ಜಂತರ್‌ಮಂತರ್‌ನಲ್ಲಿ ತಿಂಗಳ ಕಾಲ ನಡೆದ ಪ್ರತಿಭಟನೆ ಮುಗಿದಿದ್ದು, 60 ಮೆಟ್ರಿಕ್‌ ಟನ್‌ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಮತ್ತೊಂದೆಡೆ, ನೀಟ್‌ ಪರೀಕ್ಷೆ ವಿರೋಧಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ಹೊಣೆಯನ್ನು ಅಮಿತ್ ಶಾ ಹೊರಬೇಕೆಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
Read Full Story

More Trending News