LIVE NOW
Published : Jun 25, 2026, 07:16 AM ISTUpdated : Jun 25, 2026, 11:10 PM IST

India Latest News Live: ಹೋಟೆಲ್ ಮಾಲೀಕರು, ಉದ್ಯಮಿಗಳಿಗೆ ಕೇಂದ್ರದ ಬಿಗ್ ರಿಲೀಫ್; ವಾಣಿಜ್ಯ LPG ಸಿಲಿಂಡರ್ ಪೂರೈಕೆ ನಿಯಮ ಸಡಿಲಿಕೆ!

ಸಾರಾಂಶ

ಭಾರತದ ಪಾಸ್‌ಪೋರ್ಟ್ ಇದೆ ಎಂದರೆ ನೀವು ಭಾರತೀಯ ಪೌರರಾಗಲ್ಲ. ಸಿಟಿಜನ್‌ಶಿಪ್‌ಗೆ ಭಾರತದ ಪಾಸ್‌ಪೋರ್ಟ್ ದಾಖಲೆ ನೀಡಲು ಸಾಧ್ಯವಿಲ್ಲ. ಪಾಸ್‌ಪೋರ್ಟ್ ಪ್ರಯಾಣದ ದಾಖಲೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಭಾರತ ಸರ್ಕಾರದ ಸೌಲಭ್ಯ ಪಡೆಯಲು ಪೌರತ್ವ ದಾಖಲೆಯಾಗಿ ಪಾಸ್‌ಪೋರ್ಟ್ ಸಲ್ಲಿಕೆ ಕುರಿತು ಇದ್ದ ಗೊಂದಲಕ್ಕೆ ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ. ಭಾರತದ ಪಾಸ್‌ಪೋರ್ಟ್ ಭಾರತೀಯರ ವಿದೇಶ ಪ್ರಯಾಣಕ್ಕಾಗಿ ನೀಡುವ ದಾಖಲೆ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.

LPG Gas

11:10 PM (IST) Jun 25

ಹೋಟೆಲ್ ಮಾಲೀಕರು, ಉದ್ಯಮಿಗಳಿಗೆ ಕೇಂದ್ರದ ಬಿಗ್ ರಿಲೀಫ್; ವಾಣಿಜ್ಯ LPG ಸಿಲಿಂಡರ್ ಪೂರೈಕೆ ನಿಯಮ ಸಡಿಲಿಕೆ!

ಮಧ್ಯಪ್ರಾಚ್ಯದ ಬಿಕ್ಕಟ್ಟು ತಿಳಿಯಾದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ವಾಣಿಜ್ಯ ಮತ್ತು ಕೈಗಾರಿಕಾ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಈ ನಿರ್ಧಾರದಿಂದಾಗಿ ಹೋಟೆಲ್ ಮತ್ತು ಕೈಗಾರಿಕಾ ವಲಯಕ್ಕೆ ಶೇ. 50 ರಷ್ಟು ಗ್ಯಾಸ್ ಪೂರೈಕೆ ಮುಕ್ತವಾಗಲಿದೆ.

Read Full Story

10:53 PM (IST) Jun 25

Rajinikanth - ಟ್ರೋಲರ್‌ಗಳ ಅಸಲೀ ಮುಖ ಬಿಚ್ಚಿಟ್ಟು ಸೀರಿಯಸ್ಸಾಗಿಯೇ ಟಾಂಗ್ ಕೊಟ್ಟ 'ಡೆಡ್ಲಿ ಡಾಕ್ಟರ್'

ಕಳೆದ ಜೂನ್ 22ರಂದು ತಮಿಳುನಾಡು ಸಿಎಂ ವಿಜಯ್ ತಮ್ಮ 52ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಸಾರ್ವಜನಿಕವಾಗಿ ಶುಭ ಕೋರಿದ್ದರು. ಆದರೆ ರಜನಿ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿಲ್ಲ ಎಂಬ ಕಾರಣಕ್ಕೆ ಟ್ರೋಲರ್‌ಗಳು ಕಿಡಿಕಾರಿದ್ದರು.

Read Full Story

10:50 PM (IST) Jun 25

ICC Womens T20 World Cup - ಬಾಂಗ್ಲಾ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ಭರ್ಜರಿ ಜಯ!; ಸೆಮಿಫೈನಲ್ ಆಸೆ ಜೀವಂತ

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಶಫಾಲಿ ವರ್ಮಾ ಅವರ ಸ್ಫೋಟಕ ಅರ್ಧಶತಕ ಮತ್ತು ಜೆಮಿಮಾ ರೊಡ್ರಿಗಸ್ ಅವರ ಉಪಯುಕ್ತ ಇನ್ನಿಂಗ್ಸ್ ನೆರವಿನಿಂದ ಭಾರತ 137 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿತು.

Read Full Story

10:27 PM (IST) Jun 25

ಸೇನಾಧಿಕಾರಿಯ ವಾಹನ ಸೀಜ್‌ ಮಾಡಿದ್ದಕ್ಕೆ ಪೊಲೀಸ್‌ ಸ್ಟೇಷನ್‌ ಮೇಲೆ ದಾಳಿ, 40 ಆರ್ಮಿ ಅಧಿಕಾರಿಗಳ ವಿರುದ್ಧ FIR

ಜಮ್ಮು-ಕಾಶ್ಮೀರದ ಕಿಶ್ತ್ವಾಡ್‌ನಲ್ಲಿ, ಟ್ರಾಫಿಕ್ ನಿಯಮ ಉಲ್ಲಂಘನೆಗಾಗಿ ಸೇನಾ ಅಧಿಕಾರಿಯ ವಾಹನ ಜಪ್ತಿ ಮಾಡಿದ್ದಕ್ಕೆ ಪ್ರತಿಯಾಗಿ ಸೇನಾ ಯೋಧರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ.

Read Full Story

08:02 PM (IST) Jun 25

ಒಂದು ಫ್ಲೋರ್​ ಇಳಿಯಲು ಸೋಮಾರಿಯಾಗಿ ಪ್ರಾಣಕ್ಕೇ ಕುತ್ತು ತಂದುಕೊಂಡ! ಶಾಕಿಂಗ್​ ವಿಡಿಯೋ ವೈರಲ್​

ಉತ್ತರ ಪ್ರದೇಶದ ಸೋನಭದ್ರದಲ್ಲಿ, ವ್ಯಕ್ತಿಯೊಬ್ಬ ಮಹಡಿಯಿಂದ ಇಳಿದು ಬರಲು ಸೋಮಾರಿತನದಿಂದ, ಬಾಲ್ಕನಿಯಿಂದಲೇ ಐಸ್​ಕ್ರೀಮ್ ಪಡೆಯಲು ಯತ್ನಿಸಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story

07:36 PM (IST) Jun 25

ಚಿನ್ನ ಪ್ರಿಯರಿಗೆ ಬಂಪರ್​ - 8 ತಿಂಗಳಿನಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದ ಬಂಗಾರದ ರೇಟ್​- ಎಲ್ಲಿ ಎಷ್ಟಿದೆ

ಬೆಂಗಳೂರಿನಲ್ಲಿ 24, 22 ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಗಳು ಕಳೆದ ಮೂರು ದಿನಗಳಿಂದ ತೀವ್ರವಾಗಿ ಕುಸಿದು, 8 ತಿಂಗಳ ಕನಿಷ್ಠ ಮಟ್ಟವನ್ನು ತಲುಪಿವೆ. ಡಾಲರ್ ಮೌಲ್ಯ ಬಲಗೊಂಡಿರುವುದು ಮತ್ತು ಫೆಡರಲ್ ರಿಸರ್ವ್ ಬಡ್ಡಿ ದರ ಹೆಚ್ಚಳದ ನಿರೀಕ್ಷೆಯು ಈ ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ.
Read Full Story

07:36 PM (IST) Jun 25

ದೇಶದ ಮೊದಲ ಖಾಸಗಿ ಚಿನ್ನದ ಗಣಿ ಆಂಧ್ರದಲ್ಲಿ ಆರಂಭ, ಇದಕ್ಕಿದೆ ಮೌರ್ಯ ಸಾಮ್ರಾಜ್ಯದ ಅಶೋಕ ಚಕ್ರವರ್ತಿಯ ಕಾಲದ ನಂಟು!

ಆಂಧ್ರಪ್ರದೇಶದ ಜೊನ್ನಗಿರಿಯಲ್ಲಿ ದೇಶದ ಮೊದಲ ಖಾಸಗಿ ಚಿನ್ನದ ಗಣಿಗಾರಿಕೆ ಯೋಜನೆ ಅಧಿಕೃತವಾಗಿ ಆರಂಭವಾಗಿದೆ. ಜಿಯೋಮೈಸೋರ್ ಸರ್ವೀಸಸ್ ಸಂಸ್ಥೆಯು ಅಭಿವೃದ್ಧಿಪಡಿಸಿದ ಈ ಗಣಿಯು ವಾರ್ಷಿಕ 2 ಟನ್ ಚಿನ್ನ ಉತ್ಪಾದಿಸುವ ಗುರಿ ಹೊಂದಿದ್ದು, ಇದು ಸ್ಥಳೀಯ ಉದ್ಯೋಗ ಸೃಷ್ಟಿ .

Read Full Story

07:28 PM (IST) Jun 25

ಕೊನೆಗೂ ಕೈಬಿಟ್ಟ ವಿವಿ ಹೆಸರು ಬದಲಾವಣೆ ಪ್ರಸ್ತಾಪ; 'ಬರಕತುಲ್ಲಾ ವಿಶ್ವವಿದ್ಯಾಲಯ' ಹೆಸರೇ ಮುಂದುವರಿಕೆ

ಭೋಪಾಲ್‌ನ ಬರಕತುಲ್ಲಾ ವಿಶ್ವವಿದ್ಯಾಲಯದ ಹೆಸರನ್ನು 'ವಾಗ್ದೇವಿ ಭೋಜಪಾಲ್ ವಿಶ್ವವಿದ್ಯಾಲಯ' ಎಂದು ಬದಲಾಯಿಸುವ ಪ್ರಸ್ತಾಪವನ್ನು ಅಂತಿಮವಾಗಿ ಕೈಬಿಡಲಾಗಿದೆ. ವಿದ್ಯಾರ್ಥಿಗಳು, ಪ್ರಾಧ್ಯಾಪಕರ ತೀವ್ರ ವಿರೋಧ ಮತ್ತು ಉಪಕುಲಪತಿ ರಾಜೀನಾಮೆಯ ನಂತರ, ವಿಶ್ವವಿದ್ಯಾಲಯವು ತನ್ನ ಮೂಲ ಹೆಸರಿನಲ್ಲೇ ಮುಂದುವರಿಯಲಿದೆ.

Read Full Story

06:12 PM (IST) Jun 25

PM Narendra Modi ಭೇಟಿಯಾದ Amazon ಸಿಇಒ ಆಂಡಿ ಜಾಸ್ಸಿ, ಭಾರತದಲ್ಲಿ 48 ಬಿಲಿಯನ್ ಡಾಲರ್ ಹೂಡಿಕೆ ಘೋಷಣೆ!

ಅಮೆಜಾನ್ ಭಾರತದಲ್ಲಿ 100ಕ್ಕೂ ಹೆಚ್ಚು ಅರ್ಬನ್ ಫುಲ್‌ಫಿಲ್‌ಮೆಂಟ್ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ತನ್ನ ತ್ವರಿತ ವಾಣಿಜ್ಯ ಜಾಲವನ್ನು ವಿಸ್ತರಿಸುತ್ತಿದೆ. ಸಿಇಒ ಆಂಡಿ ಜಾಸ್ಸಿ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ, ದೇಶದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಕ್ಲೌಡ್ ಮೂಲಸೌಕರ್ಯಕ್ಕಾಗಿ ಬೃಹತ್ ಹೂಡಿಕೆ ಘೋಷಿಸಿದ್ದು, ಇದು ಉದ್ಯೋಗ ಸೃಷ್ಟಿ ಮತ್ತು ರಫ್ತಿಗೆ ಉತ್ತೇಜನ ನೀಡಲಿದೆ.
Read Full Story

05:40 PM (IST) Jun 25

ರಾಜ್ಯದ ಜನತೆಗೆ ಗುಡ್​ನ್ಯೂಸ್​​ - ರಾಮೇಶ್ವರಂ ಯಾತ್ರೆಗೆ ವಿಶೇಷ ರೈಲು- ಹುಬ್ಬಳ್ಳಿ ಸೇರಿ 20ಕ್ಕೂ ಅಧಿಕ ಕಡೆ ನಿಲುಗಡೆ

ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ, ದಕ್ಷಿಣ ರೈಲ್ವೆಯು ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವಿನ ವಿಶೇಷ ರೈಲು ಸೇವೆಯನ್ನು ವಿಸ್ತರಿಸಿದೆ. ಈ ರೈಲು ಜುಲೈ 2026 ರಲ್ಲಿ ನಿಗದಿತ ದಿನಾಂಕಗಳಲ್ಲಿ ಸಂಚರಿಸಲಿದ್ದು, ಕರ್ನಾಟಕದ ಯಾತ್ರಾರ್ಥಿಗಳಿಗೆ ರಾಮೇಶ್ವರಂ ದೇವಸ್ಥಾನಕ್ಕೆ  ಪ್ರಯಾಣ ಒದಗಿಸುತ್ತದೆ.

Read Full Story

05:23 PM (IST) Jun 25

ಹನಿಮೂನ್​ ಹಂತಕಿ ಸೋನಂ ರೀತಿಯೇ ಕೇತನ್​ ಮರ್ಡರ್​ ಕೇಸೂ ಆಗತ್ತಾ? ಸಾವಿಗೆ ಬೆಲೆಯೇ ಇಲ್ವಾ- ಗಂಭೀರ ಚರ್ಚೆ

ಹನಿಮೂನ್‌ಗೆಂದು ಕರೆದೊಯ್ದು ಪತಿಯನ್ನು ಕೊಂದ ಆರೋಪ ಹೊತ್ತ ಸೋನಮ್ ರಘುವಂಶಿ ಜಾಮೀನಿನ ಮೇಲೆ ಹೊರಗಿರುವಂತೆಯೇ, ಇದೀಗ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಆರೋಪಿ ಸಿಯಾ ಪ್ರಕರಣದಲ್ಲೂ ಇದೇ ರೀತಿ ಆಗಬಹುದೇ ಎಂಬ ಚರ್ಚೆ ಶುರುವಾಗಿದೆ. ಕಾನೂನು ವ್ಯವಸ್ಥೆಯಡಿ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುವುದು ಸಂತ್ರಸ್ತರ ಕುಟುಂಬಗಳಿಗೆ ಹೇಗೆ ನೋವು ತರಿಸುತ್ತಿದೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story

04:24 PM (IST) Jun 25

ಪ್ರೀತಿಯ 'ಬೆಲ್ಲಾ' ಅಗಲಿಕೆಗೆ ದಿಶಾ ಪಟಾನಿ ಕಣ್ಣೀರು; ಸೋಲ್‌ಮೇಟ್‌ನನ್ನು ಕಳೆದುಕೊಂಡು ನಟಿ ಕಂಗಾಲು!

ದಿಶಾ ಪಟಾನಿ ಅವರ ಈ ಪೋಸ್ಟ್ ಅಡಿಯಲ್ಲಿ ಅಭಿಮಾನಿಗಳು ಮತ್ತು ಬಾಲಿವುಡ್‌ನ ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ದಿಶಾ ಹಂಚಿಕೊಳ್ಳುತ್ತಿದ್ದ ವಿಡಿಯೋಗಳಲ್ಲಿ ಬೆಲ್ಲಾ ಆಗಾಗ ಕಾಣಿಸಿಕೊಳ್ಳುತ್ತಿದ್ದಳು. ಹೀಗಾಗಿ ದಿಶಾ ಅಭಿಮಾನಿಗಳಿಗೂ ಬೆಲ್ಲಾ ಅಚ್ಚುಮೆಚ್ಚಿನದಾಗಿತ್ತು!

Read Full Story

04:13 PM (IST) Jun 25

ದೀಪ್ತಿ ಶರ್ಮಾ ವಿಶ್ವದಾಖಲೆಗೆ ಬೇಕಿದೆ ಇನ್ನೊಂದು ವಿಕೆಟ್..! ಇಂದೇ ನಿರ್ಮಾಣವಾಗುತ್ತಾ ಮಹಿಳಾ ಕ್ರಿಕೆಟ್‌ನ ಹೊಸ ಮೈಲಿಗಲ್ಲು?

ಮ್ಯಾಂಚೆಸ್ಟರ್: ಭಾರತದ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ, ಇದೀಗ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಬಾಂಗ್ಲಾದೇಶ ಎದುರಿನ ಮಹತ್ವದ ಪಂದ್ಯದಲ್ಲಿ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಇದರ ಬೆನ್ನಲ್ಲೇ ವಿಶ್ವದಾಖಲೆ ಬರೆಯಲು ದೀಪ್ತಿ ಶರ್ಮಾ ಸಜ್ಜಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.

 

Read Full Story

03:16 PM (IST) Jun 25

ಸುಳ್ಳು ಹೇಳಿದ ನೀರವ್ ಮೋದಿಗೆ ಜಾಡಿಸಿದ ಲಂಡನ್ ಕೋರ್ಟ್‌, ಬ್ಯಾಂಕ್ ಆಫ್ ಇಂಡಿಯಾಗೆ ₹100 ಕೋಟಿ ಪಾವತಿಸುವಂತೆ ಆದೇಶ

ಲಂಡನ್ ಹೈಕೋರ್ಟ್‌ನಲ್ಲಿ ನೀರವ್ ಮೋದಿಗೆ ಕಾನೂನು ಹಿನ್ನಡೆಯಾಗಿದ್ದು, ಬ್ಯಾಂಕ್ ಆಫ್ ಇಂಡಿಯಾಗೆ ₹100 ಕೋಟಿಗೂ ಅಧಿಕ ಸಾಲ ಪಾವತಿಸುವಂತೆ ಆದೇಶಿಸಲಾಗಿದೆ. ತನಗೆ ನೋಟಿಸ್ ತಲುಪಿಲ್ಲ ಎಂಬ ಮೋದಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಅವರೇ ಬರೆದಿದ್ದ ಇ-ಮೇಲ್ ಸಾಕ್ಷ್ಯದ ಆಧಾರದ ಮೇಲೆ ಈ ತೀರ್ಪು ನೀಡಿದೆ.
Read Full Story

03:02 PM (IST) Jun 25

ಅಸ್ಲಂ ಹುಸೈನ್ ಜೊತೆ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಆಪ್ ಮಾಜಿ ಅಭ್ಯರ್ಥಿ ನಂದಿನಿ ಶವವಾಗಿ ಪತ್ತೆ

ಆಪ್ ಪಕ್ಷದ ಮುನ್ಸಿಪಲ್ ಚುನಾವಣೆಯ ಮಾಜಿ ಅಭ್ಯರ್ಥಿ 23 ವರ್ಷದ ನಂದಿನಿ ಬೊಸಮಿಯಾ ಶವವಾಗಿ ಪತ್ತೆಯಾಗಿದ್ದಾಳೆ. ಅಸ್ಲಂ ಸಾಮ ಜೊತೆ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಿದ ನಂದಿನಿ ಸಾವು ಕೊಲೆ ಎಂದು ಪೋಷಕರು ಆರೋಪಿಸಿದ್ದಾರೆ.

Read Full Story

01:22 PM (IST) Jun 25

ಆ ಮೂವರು ಮಹಿಳೆಯರ ಜತೆ ಅಕ್ರಮ ಸಂಬಂಧ ಹೊಂದಿದ್ದೆ, ಆದ್ರೆ...? ಎಫ್‌ಸ್ಟೀನ್ ಬ್ಲ್ಯಾಕ್‌ಮೇಲ್‌ ಬಗ್ಗೆ ಹೊಸ ಬಾಂಬ್ ಸಿಡಿಸಿದ ಬಿಲ್ ಗೇಟ್ಸ್

Bill Gates on Jeffrey Epstein: ಮೈಕ್ರೋಸಾಫ್ಟ್ ಸಂಸ್ಥಾಪಕ ಹಾಗೂ ಜಗತ್ತಿನ ಆಗರ್ಭ ಶ್ರೀಮಂತರಲ್ಲಿ ಒಬ್ಬರಾಗಿರುವ ಬಿಲ್ ಗೇಲ್ಸ್‌, ಜೆಫ್ರಿ ಎಫ್‌ಸ್ಟೀನ್ ಜತೆಗಿನ ಒಡನಾಟ ಹಾಗೂ ತಮ್ಮ ಅಕ್ರಮ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಅಷ್ಟಕ್ಕೂ ಬಿಲ್ ಗೇಟ್ಸ್ ಹೇಳಿದ್ದೇನು? ನೋಡೋಣ ಬನ್ನಿ 

Read Full Story

12:56 PM (IST) Jun 25

Obsession - ಭಾರತದಲ್ಲಿ ‘ಒಬ್ಸೆಷನ್’ ಕಲೆಕ್ಷನ್‌ ರಿಪೋರ್ಟ್‌ ಕೇಳಿ ದಂಗಾದ ನಿರ್ದೇಶಕ; ಕರ್ನಾಟಕದಲ್ಲೂ ಭಾರೀ ಗಳಿಕೆ!

"ಕಂಟೆಂಟ್ ಈಸ್ ಕಿಂಗ್" ಎಂಬುದನ್ನು 'ಒಬ್ಸೆಷನ್' ಸಿನಿಮಾ ಮತ್ತೊಮ್ಮೆ ಸಾಬೀತುಪಡಿಸಿದೆ. ಸಿನಿಮಾ ಮಾಡಲು ಕೋಟಿ ಕೋಟಿ ಹಣ ಬೇಕಿಲ್ಲ, ಗಟ್ಟಿಯಾದ ಕಥೆ ಮತ್ತು ನಿರೂಪಣೆ ಇದ್ದರೆ ಸಾಕು ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಈ ಚಿತ್ರದ ಗಳಿಕೆ ಎಷ್ಟು? ಈ ಸ್ಟೋರಿ ನೋಡಿ!

Read Full Story

11:54 AM (IST) Jun 25

ಕ್ವಿಕ್ ಕಾಮರ್ಸ್ ಜಗತ್ತಿನಲ್ಲಿ ಅಪ್ಡೇಟ್ - 300ಸಿಟಿಗಳಿಗೆ 'ಅಮೆಜಾನ್ ನೌ' ವಿಸ್ತರಣೆ, ಭಾರತಕ್ಕೆ ಬಂದ್ರು ಜಾಗತಿಕ ಸಿಇಒ!

ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಜಾನ್, ತನ್ನ ಕ್ವಿಕ್ ಕಾಮರ್ಸ್ ಸೇವೆಯಾದ 'ಅಮೆಜಾನ್ ನೌ' ಅನ್ನು ಭಾರತದ 300ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಲು ಸಜ್ಜಾಗಿದೆ. ಈ ಮೂಲಕ ಕೆಲವೇ ನಿಮಿಷಗಳಲ್ಲಿ ಗ್ರಾಹಕರಿಗೆ ವಸ್ತುಗಳನ್ನು ತಲುಪಿಸುವ ಗುರಿ ಹೊಂದಿದ್ದು, ಇದೇ ವೇಳೆ ತನ್ನ ಡೆಲಿವರಿ ಸಿಬ್ಬಂದಿಯ ಕಲ್ಯಾಣಕ್ಕಾಗಿ 'ಸಮ್ಮಾನ್' ಎಂಬ ವಿಶೇಷ ಯೋಜನೆಯನ್ನೂ ಜಾರಿಗೆ ತಂದಿದೆ.
Read Full Story

11:53 AM (IST) Jun 25

ಮೆಗಾ ಹವಾ - ಪ್ರಧಾನಿ ಮೋದಿಯಿಂದ ರಾಮ್ ಚರಣ್‌ಗೆ ಹೊಸ ಪಟ್ಟ! ಅಪ್ಪ ಚಿರಂಜೀವಿಗೆ ಖುಷಿ ತಡೆಯೋಕಾಗ್ತಿಲ್ಲ!

"ಮಗ ಬೆಳೆದಿದ್ದಾನೆ ಎಂದು ನಾನು ವಿಶ್ರಾಂತಿ ಪಡೆಯುವುದಿಲ್ಲ. ಕೆಲಸ ಮಾಡುವುದೇ ನಮಗೆ ಆನಂದ. ನಮ್ಮ ಕುಟುಂಬದಲ್ಲಿ ಸೋಮಾರಿತನಕ್ಕೆ ಜಾಗವೇ ಇಲ್ಲ" ಎನ್ನುವ ಮೂಲಕ ತಮ್ಮ ಸಿನಿಮಾ ಪಯಣ ಮುಂದುವರಿಯಲಿದೆ ಎಂಬ ಭರವಸೆ ನೀಡಿದರು. ಇನ್ನೂ ಏನ್ ಹೇಳಿದ್ರು? ಈ ಸ್ಟೋರಿ ನೋಡಿ..

Read Full Story

11:18 AM (IST) Jun 25

ಸಾವಿನ ಸಂಖ್ಯೆ 10 ಸಾವಿರದಿಂದ 1 ಲಕ್ಷಕ್ಕೆ ಏರಿಕೆ ಸಾಧ್ಯತೆ, ವೆನಿಜುವೆಲಾ ಭೀಕರ ಭೂಕಂಪದ ಚಿತ್ರಣ

ವೆನಿಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಸಾವಿನ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿದೆ. ಮೃತರ ಸಂಖ್ಯೆ 10 ಸಾವಿರಿಂದ 1 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ವೆನಿಜುವೆಲಾದ ಭೀಕರ ಭೂಕಂಪದ ಚಿತ್ರಗಳು ಇಲ್ಲಿವೆ.

Read Full Story

11:01 AM (IST) Jun 25

Unlimited Data ಬಳಸ್ತಿರೋರಿಗೆ ಬಿಗ್​ ಶಾಕಿಂಗ್​ ನ್ಯೂಸ್​ - ಇನ್ಮುಂದೆ ಸಿಗಲ್ಲ 5G ಸೇವೆ? ಏನಿದು ಸಲಹೆ

ಟೆಲಿಕಾಂ ಕಂಪೆನಿಗಳು ನೀಡುತ್ತಿರುವ ಉಚಿತ 5G ಅನ್ಲಿಮಿಟೆಡ್ ಡಾಟಾ ಶೀಘ್ರದಲ್ಲೇ ನಿಲ್ಲುವ ಸಾಧ್ಯತೆಯಿದೆ. ಹೆಚ್ಚುತ್ತಿರುವ ಡೇಟಾ ಬಳಕೆಯಿಂದ ಆದಾಯ ಗಳಿಸಲು, ಈ ಉಚಿತ ಕೊಡುಗೆಯನ್ನು ನಿಲ್ಲಿಸಿ, ಹೆಚ್ಚುವರಿ ಡೇಟಾಗೆ ಶುಲ್ಕ ವಿಧಿಸಲು ವಿಶ್ಲೇಷಕರು ಸಲಹೆ ನೀಡಿದ್ದಾರೆ. ಇದು ಜಾರಿಯಾದರೆ, ಬಳಕೆದಾರರು ಹೆಚ್ಚಿನ ಡೇಟಾಗಾಗಿ ಹೆಚ್ಚುವರಿ ಹಣ ಪಾವತಿಸಬೇಕಾಗಬಹುದು.
Read Full Story

10:58 AM (IST) Jun 25

World Cup 1983 - inspired generations! ಭಾರತದ ಐತಿಹಾಸಿಕ ವಿಶ್ವಕಪ್ ವಿಜಯಕ್ಕೆ 43 ವರ್ಷ!

ಭಾರತದ 1983ರ ವಿಶ್ವಕಪ್ ವಿಜಯದ 43ನೇ ವಾರ್ಷಿಕೋತ್ಸವದಂದು ಬಿಸಿಸಿಐ(BCCI) ಈ ಗೆಲುವನ್ನು 'ತಲೆಮಾರುಗಳಿಗೆ ಸ್ಫೂರ್ತಿ' ಎಂದು ಬಣ್ಣಿಸಿದೆ. ಕಪಿಲ್ ದೇವ್ ನಾಯಕತ್ವದ ತಂಡ, ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ  ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನ ಸೋಲಿಸಿ ಇತಿಹಾಸ ನಿರ್ಮಿಸಿತ್ತು.

 

Read Full Story

10:54 AM (IST) Jun 25

ಶಾಲಾ ಕಾಲೇಜಿಗೆ ರಜೆ, ವಿಮಾನ ನಿಲ್ದಾಣ ಕಚೇರಿ ಬಂದ್, ತುರ್ತು ಪರಿಸ್ಥಿತಿ ಘೋಷಿಸಿದ ವೆನಿಜುವೆಲಾ

ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವಿಮಾನ ನಿಲ್ದಾಣ, ಕಚೇರಿಗಳು ಬಂದ್ ಆಗಿದೆ. ಭೀಕರ ಭೂಕಂಪದ ಪರಿಣಾಮ ವೆನಿಜುವೆಲಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. 10 ಸಾವಿರ ದಿಂದ 1 ಲಕ್ಷ ಮಂದಿ ಮೃತಪಟ್ಟಿರುವ ಸಾಧ್ಯೆ ಇದೆ.

Read Full Story

09:31 AM (IST) Jun 25

3 ಬಾರಿ ಭಾವಿ ಪತಿಯ ಹತ್ಯೆಗೆ ಯತ್ನಿಸಿ ಕೊನೆಗೆ ಯಶ ಕಂಡ ಸಿಯಾ! ಸಿನಿಮೀಯ ರೀತಿಯಲ್ಲಿ ಸಿಕ್ಕಿಬಿದ್ದ ಪ್ರಿಯಕರ

ಪುಣೆಯ ಕೇತನ್‌ ಅಗರ್ವಾಲ್‌ ಕೊಲೆ ಪ್ರಕರಣದಲ್ಲಿ, ಆತನ ಭಾವಿ ಪತ್ನಿ ಸಿಯಾ ಗೋಯಲ್‌ ಪ್ರಿಯಕರನ ಜೊತೆಗೂಡಿ ಹತ್ಯೆಗೈದಿದ್ದಾಳೆ. ಲೋಹಗಢ ಕೋಟೆಯ ಪ್ರಪಾತಕ್ಕೆ ತಳ್ಳುವ ಮುನ್ನ ಆಕೆ ಎರಡು ಬಾರಿ ವಿಫಲ ಯತ್ನ ನಡೆಸಿದ್ದಳು ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಈ ಸಂಚನ್ನು ಬಯಲಿಗೆಳೆದಿದ್ದಾರೆ.
Read Full Story

08:58 AM (IST) Jun 25

FIFA World Cup 2026 - ಇಂಗ್ಲೆಂಡ್‌ಗೆ ಘಾನಾ ಶಾಕ್‌! ಇಂಗ್ಲೆಂಡ್‌ಗೆ ಘಾನಾ ಮಂತ್ರವಾದಿ ಕಾಟ?

ಘಾನಾ ವಿರುದ್ಧದ ಫುಟ್ಬಾಲ್ ಪಂದ್ಯದಲ್ಲಿ ಇಂಗ್ಲೆಂಡ್ ಗೋಲು ರಹಿತ ಡ್ರಾ ಸಾಧಿಸಿತು. ಘಾನಾದ ಮಂತ್ರವಾದಿಯೊಬ್ಬ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರ ಹ್ಯಾರಿ ಕೇನ್‌ರನ್ನು ಗೋಲು ಬಾರಿಸದಂತೆ ಕಟ್ಟಿಹಾಕಿದ್ದಾಗಿ ಹೇಳಿಕೊಂಡಿದ್ದು, ಇದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
Read Full Story

07:49 AM (IST) Jun 25

FIFA World Cup 2026 - ಕ್ರಿಸ್ಟಿಯಾನೋ ರೊನಾಲ್ಡೋ ಮಿಂಚಿನ ಆಟ; ಪೋರ್ಚುಗಲ್‌ಗೆ 5-0 ಜಯ

ಕ್ರಿಸ್ಟಿಯಾನೋ ರೊನಾಲ್ಡೋ ಅವರ 2 ಗೋಲುಗಳ ನೆರವಿನಿಂದ ಪೋರ್ಚುಗಲ್, ಉಜ್ಬೇಕಿಸ್ತಾನ ವಿರುದ್ಧ 5-0 ಅಂತರದ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಸತತ 6 ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ವಿಶ್ವದಾಖಲೆಯನ್ನು ರೊನಾಲ್ಡೋ ನಿರ್ಮಿಸಿದರು.
Read Full Story

07:32 AM (IST) Jun 25

ಮುಂಬೈ ಇಂಡಿಯನ್ಸ್ ಬಿಡ್ತಾರಾ ಹಾರ್ದಿಕ್ ಪಾಂಡ್ಯ? ಕ್ಯಾಪ್ಟನ್ಸಿ ಆಫರ್ ಕೊಟ್ಟ KKR, ಐಪಿಎಲ್‌ನಲ್ಲಿ ದೊಡ್ಡ ಟ್ವಿಸ್ಟ್!

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಕೋಲ್ಕತಾ ನೈಟ್ ರೈಡರ್ಸ್ ಭರ್ಜರಿ ಪ್ರಯತ್ನ ನಡೆಸುತ್ತಿದೆ. ನಾಯಕತ್ವದ ಭರವಸೆಯೊಂದಿಗೆ KKR, ಮುಂಬೈ ಇಂಡಿಯನ್ಸ್ ಜೊತೆ ಮಾತುಕತೆ ನಡೆಸುತ್ತಿದ್ದು, ಈ ಮಹಾ ಟ್ರೇಡಿಂಗ್ ಕುರಿತು ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.
Read Full Story

07:16 AM (IST) Jun 25

ಪಾಸ್‌ಪೋರ್ಟ್ ಪೌರತ್ವ ದಾಖಲೆ ಅಲ್ಲ ಸ್ಪಷ್ಟನೆಗೆ ತೀವ್ರ ವಿರೋಧ

ಭಾರತದಲ್ಲಿ ಪಾಸ್‌ಪೋರ್ಟ್ ಮಾಡುವ ಪ್ರಕ್ರಿಯೆ ಸರಳಗೊಳಿಸಲಾಗಿದೆ.ಗರಿಷ್ಠ 15 ದಿನದ ಒಳಗೆ ಪಾಸ್‌ಪೋರ್ಟ್ ಕೈಸೇರಲಿದೆ. ಆದರೆ ಇದೇ ಪಾಸ್‌ಪೋರ್ಟ್‌ ಹಿಡಿದು ಭಾರತೀಯ ಪೌರತ್ವ ದಾಖಲೆಯಾಗಿ ಬಳಸಲು ಸಾಧ್ಯವಿಲ್ಲ. ಪಾಸ್‌ಪೋರ್ಟ್ ಕೇವಲ ಪ್ರಯಾಣ ದಾಖಲೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಇದಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ.


More Trending News