ಅಯೋಧ್ಯಾ/ರಾಯ್ಬರೇಲಿ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯ 15 ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆಗೆ ನಿಷೇಧವಿದ್ದರೂ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರಾಯ್ ಮೀನು ತಿಂದಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ಈ ಆರೋಪವನ್ನು ತಳ್ಳಿಹಾಕಿರುವ ರಾಯ್, ಸಾಕ್ಷ್ಯಕೊಡಿ ಎಂದು ಸವಾಲು ಹಾಕಿದ್ದಾರೆ.
ರಾಯ್ ಅಯೋಧ್ಯೆಯ ಹನುಮಾನ್ ಗಢಿ ಹಾಗೂ ರಾಮಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿದ್ದರು. ಆ ಬಳಿಕ 30 ಕಿ.ಮೀ. ದೂರದ ತರುಣ್ಗೆ ತೆರಳಿ ನಿಷಾದ ಸಮುದಾಯ ಸಭೆಯಲ್ಲಿ ಭಾಗವಹಿಸಿ ಭೋಜನ ಮಾಡಿದ್ದರು. ಆ ವೇಳೆ ಅವರು ಮೀನೂಟ ಮಾಡಿದ್ದಾರೆ ಎಂದು ಆರೋಪಿಸಿರುವ ಯೋಗಿ, ‘ಕಾಂಗ್ರೆಸ್ ಅಧ್ಯಕ್ಷರು ದರ್ಶನಕ್ಕಾಗಿ ಹನುಮಾನ್ಗಢಿಗೆ ಹೋಗುತ್ತಾರೆ, ಹೊರಬಂದ ನಂತರ ಮೀನೂಟ ಸವಿಯುತ್ತಾರೆ. ನಂತರ ರಾಮ್-ರಾಮ್ ಎನ್ನುತ್ತಾರೆ. ನಿರ್ಲಜ್ಜತನಕ್ಕೂ ಒಂದು ಮಿತಿಯಿರುತ್ತದೆ’ ಎಂದಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ರಾಯ್, ‘ಸಿಎಂ ತಮ್ಮ ಆರೋಪಕ್ಕೆ ವಿಡಿಯೋ ಅಥವಾ ಫೋಟೊ ಸಾಕ್ಷ್ಯ ನೀಡಬೇಕು. ಹಾಗಾದರೆ ನಾನು ಅಧ್ಯಕ್ಷ ಸ್ಥಾನಕ್ಕೇ ರಾಜೀನಾಮೆ ಕೊಡುತ್ತೇನೆ’ ಎಂದಿದ್ದಾರೆ.
08:48 AM (IST) Aug 25
ಕೇಂದ್ರ ಸರ್ಕಾರವು ಕರ್ನಾಟಕದ ಹುಬ್ಬಳ್ಳಿ, ವಾರಾಣಸಿ ಮತ್ತು ತಿರುಪತಿ ಸೇರಿದಂತೆ ದೇಶದ 11 ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಡಿ (ಪಿಪಿಪಿ) ಗುತ್ತಿಗೆ ನೀಡಲು ಯೋಜಿಸಿದೆ. ಈ ವಿಮಾನ ನಿಲ್ದಾಣಗಳನ್ನು ಐದು ಗುಚ್ಛಗಳಾಗಿ ವಿಂಗಡಿಸಿ, 50 ವರ್ಷಗಳ ಅವಧಿಗೆ ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಲಾಗುವುದು.
08:30 AM (IST) Aug 25
07:28 AM (IST) Aug 25