Published : Aug 25, 2026, 07:17 AM ISTUpdated : Aug 25, 2026, 10:47 PM IST

India Latest News Live: ಪ್ರಾಣಕ್ಕೆ ಕುತ್ತು ತಂದ ಬೆಕ್ಕು.. ಆಸ್ಪತ್ರೆ ಸೇರಿದ 10 ಮಹಿಳೆಯರು..

ಸಾರಾಂಶ

ಅಯೋಧ್ಯಾ/ರಾಯ್‌ಬರೇಲಿ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯ 15 ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆಗೆ ನಿಷೇಧವಿದ್ದರೂ, ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಅಜಯ್‌ ರಾಯ್‌ ಮೀನು ತಿಂದಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆರೋಪಿಸಿದ್ದಾರೆ. ಈ ಆರೋಪವನ್ನು ತಳ್ಳಿಹಾಕಿರುವ ರಾಯ್‌, ಸಾಕ್ಷ್ಯಕೊಡಿ ಎಂದು ಸವಾಲು ಹಾಕಿದ್ದಾರೆ.

ರಾಯ್‌ ಅಯೋಧ್ಯೆಯ ಹನುಮಾನ್‌ ಗಢಿ ಹಾಗೂ ರಾಮಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿದ್ದರು. ಆ ಬಳಿಕ 30 ಕಿ.ಮೀ. ದೂರದ ತರುಣ್‌ಗೆ ತೆರಳಿ ನಿಷಾದ ಸಮುದಾಯ ಸಭೆಯಲ್ಲಿ ಭಾಗವಹಿಸಿ ಭೋಜನ ಮಾಡಿದ್ದರು. ಆ ವೇಳೆ ಅವರು ಮೀನೂಟ ಮಾಡಿದ್ದಾರೆ ಎಂದು ಆರೋಪಿಸಿರುವ ಯೋಗಿ, ‘ಕಾಂಗ್ರೆಸ್‌ ಅಧ್ಯಕ್ಷರು ದರ್ಶನಕ್ಕಾಗಿ ಹನುಮಾನ್‌ಗಢಿಗೆ ಹೋಗುತ್ತಾರೆ, ಹೊರಬಂದ ನಂತರ ಮೀನೂಟ ಸವಿಯುತ್ತಾರೆ. ನಂತರ ರಾಮ್-ರಾಮ್ ಎನ್ನುತ್ತಾರೆ. ನಿರ್ಲಜ್ಜತನಕ್ಕೂ ಒಂದು ಮಿತಿಯಿರುತ್ತದೆ’ ಎಂದಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ರಾಯ್‌, ‘ಸಿಎಂ ತಮ್ಮ ಆರೋಪಕ್ಕೆ ವಿಡಿಯೋ ಅಥವಾ ಫೋಟೊ ಸಾಕ್ಷ್ಯ ನೀಡಬೇಕು. ಹಾಗಾದರೆ ನಾನು ಅಧ್ಯಕ್ಷ ಸ್ಥಾನಕ್ಕೇ ರಾಜೀನಾಮೆ ಕೊಡುತ್ತೇನೆ’ ಎಂದಿದ್ದಾರೆ.

10:47 PM (IST) Aug 25

ಪ್ರಾಣಕ್ಕೆ ಕುತ್ತು ತಂದ ಬೆಕ್ಕು.. ಆಸ್ಪತ್ರೆ ಸೇರಿದ 10 ಮಹಿಳೆಯರು..

ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಬೆಕ್ಕು ಅಡ್ಡ ಬಂದ ಕಾರಣ ಚಾಲಕ ಹಠಾತ್ತಾಗಿ ಬ್ರೇಕ್ ಹಾಕಿದ್ದರಿಂದ ಕೂಲಿ ಕಾರ್ಮಿಕರಿದ್ದ ಆಟೋ ಪಲ್ಟಿಯಾಗಿ 10 ಮಹಿಳೆಯರು ಗಾಯಗೊಂಡಿದ್ದಾರೆ. ಬೆಕ್ಕನ್ನು ಉಳಿಸಲು ಹೋಗಿ ನಡೆದ ಈ ಅಪಘಾತದಲ್ಲಿ ಮೂವರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ.

Read Full Story

10:13 PM (IST) Aug 25

ಆಪರೇಷನ್‌ ಸಿಂದೂರ್‌ ವೇಳೆ ಪಾಕ್‌ ಅಣ್ವಸ್ತ್ರ ಕೇಂದ್ರ Kirana Hills ದಾಳಿ ಮಾಡಿದ್ದನ್ನು ಕಡೆಗೂ ಒಪ್ಪಿಕೊಂಡ ಭಾರತ!

ಪಾಕಿಸ್ತಾನದ ಕಿರಾನಾ ಹಿಲ್ಸ್ ಅಣ್ವಸ್ತ್ರ ತಾಣದ ಮೇಲಿನ ದಾಳಿ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಮಾಜಿ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ. 'ಆಪರೇಷನ್ ಸಿಂಧೂರ್' ವೇಳೆ ರಡಾರ್ ಪತ್ತೆಗಾಗಿ ಕಳುಹಿಸಿದ್ದ ಡ್ರೋನ್ ಇಂಧನ ಖಾಲಿಯಾಗಿ ಅಲ್ಲಿ ಅಪ್ಪಳಿಸಿತ್ತು ಎಂದು ಅವರು ವಿವರಿಸಿದ್ದಾರೆ.

Read Full Story

10:09 PM (IST) Aug 25

IND vs SL test - ಭಾರತದ ಗೆಲುವಿನಲ್ಲಿ ಮಳೆ ಪ್ರಮುಖ ಪಾತ್ರವಹಿಸುತ್ತದೆಯೇ? ಬುಧವಾರ ಏನಾಗಬಹುದು?

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತ ಗೆಲುವಿನ ಹಾದಿಯಲ್ಲಿದ್ದರೂ, ಕೊಲಂಬೊದಲ್ಲಿ ಬುಧವಾರ ಭಾರಿ ಮಳೆಯ ಮುನ್ಸೂಚನೆ ಇರುವುದು ಗೆಲುವಿಗೆ ಅಡ್ಡಿಯಾಗಬಹುದು. ಫಾಲೋ-ಆನ್ ತಪ್ಪಿಸಿಕೊಳ್ಳಲು ಲಂಕಾ ಪಡೆಗೆ ಇನ್ನೂ 39 ರನ್‌ಗಳ ಅಗತ್ಯವಿದ್ದು, ಸೋನಲ್ ದಿನುಶಾ ಅವರ ಬ್ಯಾಟಿಂಗ್ ಪಂದ್ಯವನ್ನು ಡ್ರಾ ಮಾಡುವತ್ತ ಕೊಂಡೊಯ್ಯುವ ಸಾಧ್ಯತೆಯಿದೆ.

Read Full Story

07:23 PM (IST) Aug 25

ಸ್ವಿಗ್ಗಿ ಡೆಲಿವರಿ ಕೆಲಸ ಮಾಡಿ ಕೂಡಿಟ್ಟ ದುಡ್ಡಲ್ಲಿ ಅಮ್ಮನಿಗೆ ಸ್ಮಾರ್ಟ್‌ ಟಿವಿ ಗಿಫ್ಟ್! ಮಗನ ಪ್ರೀತಿಗೆ ಕಣ್ಣೀರಾದ ಕುಟುಂಬ, ವಿಡಿಯೋ ವೈರಲ್

ಸ್ವಿಗ್ಗಿ ಡೆಲಿವರಿ ಏಜೆಂಟ್ ಆಗಿ ದುಡಿದ ಹಣದಲ್ಲಿ ಯುವಕನೊಬ್ಬ ತನ್ನ ತಾಯಿಗೆ ಹೊಸ ಟಿವಿ ಉಡುಗೊರೆಯಾಗಿ ನೀಡಿದ್ದಾನೆ. ಈ ಭಾವುಕ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಾಯಿ ಮತ್ತು ಅಜ್ಜಿಯ ಆನಂದಭಾಷ್ಪ ಲಕ್ಷಾಂತರ ಜನರ ಮನಗೆದ್ದಿದೆ.
Read Full Story

07:18 PM (IST) Aug 25

ಶಿವಭಕ್ತರಿಗೆ ಸದ್ಗುರು ಸರ್ಪ್ರೈಸ್ ಗಿಫ್ಟ್ - 2027ಕ್ಕೆ ಬೆಳ್ಳಿಪರದೆಗೆ ಬರಲಿದೆ ‘ಶಿವ - ದಿ ಆದಿಯೋಗಿ’ ಅನಿಮೇಷನ್ ಸಿನಿಮಾ

ಇಶಾ ಫೌಂಡೇಶನ್ ಮತ್ತು 'ದಿ ಲೆಜೆಂಡ್ ಆಫ್ ಹನುಮಾನ್' ಖ್ಯಾತಿಯ ಗ್ರಾಫಿಕ್ ಇಂಡಿಯಾ ಸಂಸ್ಥೆಯು 'ಶಿವ – ದಿ ಆದಿಯೋಗಿ' ಎಂಬ ಅನಿಮೇಷನ್ ಚಲನಚಿತ್ರವನ್ನು ನಿರ್ಮಿಸುತ್ತಿವೆ. ಸದ್ಗುರುಗಳ ಬೋಧನೆಗಳನ್ನು ಆಧರಿಸಿದ ಈ ಚಿತ್ರವು ಯೋಗದ ಉಗಮ ಮತ್ತು ಆದಿಯೋಗಿಯ ಜೀವನವನ್ನು ಚಿತ್ರಿಸಲಿದೆ.

Read Full Story

06:58 PM (IST) Aug 25

ಕೆಲಸದಿಂದ ನಿವೃತ್ತಿ? ಸಚಿವ ಗಡ್ಕರಿ ಹೇಳಿದ್ದೇ ಒಂದು, ವೈರಲ್​ ಆಗ್ತಿರೋದೇ ಇನ್ನೊಂದು! ಏನಿದರ ಅಸಲಿಯತ್ತು

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ನಿವೃತ್ತಿಯ ಕುರಿತು ನೀಡಿದರೆನ್ನಲಾದ ಹೇಳಿಕೆಯು ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆದರೆ, ಗಡ್ಕರಿ ಅವರು ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆಯೇ ಅಥವಾ ಅವರ ಹೇಳಿಕೆಯ ಹಿಂದಿನ ಅಸಲಿಯತ್ತು ಬೇರೆಯೇ ಎನ್ನುವುದನ್ನು ಈ ಲೇಖನವು ಸ್ಪಷ್ಟಪಡಿಸುತ್ತದೆ.
Read Full Story

06:54 PM (IST) Aug 25

ಬೆಂಗಳೂರು ಟ್ರಾಫಿಕ್ ಸಾವಾಸ ಬೇಡ ಅಂತ ದುಬೈನಲ್ಲಿ ಸೆಟ್ಲ್ ಆಗಿರೋ ರಾಬಿನ್ ಉತ್ತಪ್ಪರಿಂದ ಸಿಎಂ ಡಿಕೆಶಿ ಬಳಿ ಅಚ್ಚರಿ ಬೇಡಿಕೆ..!

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕೊಡಗಿನ ಕುವರ ರಾಬಿನ್ ಉತ್ತಪ್ಪ, ಇಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಚ್ಚರಿಯ ಬೇಡಿಕೆಯಿಟ್ಟಿದ್ದಾರೆ. ಅಷ್ಟಕ್ಕೂ ರಾಬಿನ್ ಉತ್ತಪ್ಪ ಬೇಡಿಕೆ ಏನು ಎನ್ನುವುದನ್ನು ನೋಡೋಣ ಬನ್ನಿ.

Read Full Story

06:41 PM (IST) Aug 25

ರೈತನ ಹೊಲದಲ್ಲಿ ಅಚ್ಚರಿ.. ಒಂದೇ ಜಾಗದಲ್ಲಿ ರಹಸ್ಯ ಹೊದ್ದು ಮಲಗಿದ್ದವು 32 ನಾಗಪಡಗ ಶಿಲೆಗಳು

ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ರೈತನೊಬ್ಬ ಹೊಲವನ್ನು ಸಮತಟ್ಟು ಮಾಡುವಾಗ ಬರೋಬ್ಬರಿ 32 ಪುರಾತನ ನಾಗಪಡಗ ಶಿಲೆಗಳು ಪತ್ತೆಯಾಗಿವೆ. ಭಾರೀ ಕುತೂಹಲ ಮೂಡಿಸಿರುವ ಶಿಲೆಗಳು ಒಂದಷ್ಟು ರಹಸ್ಯಗಳನ್ನು ಹೊದ್ದು ನಿಂತಿರುವ ಅನುಮಾನ ಸ್ಥಳೀಯರಲ್ಲಿ ಕಾಡಿದೆ.

Read Full Story

06:36 PM (IST) Aug 25

ಸಮವಸ್ತ್ರ ಇರುವುದು ಹಿಜಾಬ್​ ಧರಿಸಲು ಅಲ್ಲ- ಶಾಲಾ-ಕಾಲೇಜುಗಳಲ್ಲಿ ಅನುಮತಿ ಸಾಧ್ಯವಿಲ್ಲ ಎಂದ ಹೈಕೋರ್ಟ್​

ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ವಿದ್ಯಾರ್ಥಿನಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ವಿಫಲರಾಗಿದ್ದಾರೆ ಮತ್ತು ಶಾಲಾ ಸಮವಸ್ತ್ರವು ಶಿಸ್ತು ಮತ್ತು ಸಮಾನತೆಯನ್ನು ಉತ್ತೇಜಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Read Full Story

06:17 PM (IST) Aug 25

AI ಬರುವ ಮೊದಲು ಡೇಟಾ ಸೆಂಟರ್‌ಗಳ ಉದ್ದೇಶ ಏನಾಗಿತ್ತು? ನಿಮಗೆ ಅಚ್ಚರಿ ಮೂಡಿಸುವ ಮಾಹಿತಿ ಇಲ್ಲಿದೆ!

ಕೃತಕ ಬುದ್ಧಿಮತ್ತೆ (ಎಐ) ಬರುವ ಮುನ್ನವೇ ಡೇಟಾ ಸೆಂಟರ್‌ಗಳು ಅಸ್ತಿತ್ವದಲ್ಲಿದ್ದವು, ಇವು ವೆಬ್‌ಸೈಟ್‌ಗಳು, ಆನ್‌ಲೈನ್ ಸೇವೆಗಳು ಮತ್ತು ಸರ್ಕಾರಿ ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಪ್ರಕ್ರಿಯೆಗೊಳಿಸುತ್ತಿದ್ದವು.

Read Full Story

06:14 PM (IST) Aug 25

ವಿಶೇಷ ಚೇತನನ ಬದುಕನ್ನೇ ಬದಲಿಸಿದ 10 ಸೆಕೆಂಡ್​ ವಿಡಿಯೋ - 10 ವರ್ಷಗಳಿಂದ ಕಾಣೆಯಾದವನ ಮನಕಲುಕುವ ಸ್ಟೋರಿ

ಕೇರಳದ ಆಶ್ರಮವೊಂದರಲ್ಲಿ ಚಿತ್ರೀಕರಿಸಿದ 10 ಸೆಕೆಂಡಿನ ಇನ್‌ಸ್ಟಾಗ್ರಾಮ್ ರೀಲ್ಸ್ ಒಂದು ವೈರಲ್ ಆಗಿದೆ. ಈ ವಿಡಿಯೋದಿಂದಾಗಿ, 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಜಾರ್ಖಂಡ್ ಮೂಲದ ವಿಶೇಷ ಚೇತನ ಯುವಕ ತನ್ನ ಕುಟುಂಬವನ್ನು ಮತ್ತೆ ಸೇರಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಒಂದು ಸಣ್ಣ ವಿಡಿಯೋದಿಂದ ನಡೆದ ಈ ಭಾವುಕ ಘಟನೆ ಎಲ್ಲರ ಗಮನ ಸೆಳೆದಿದೆ.
Read Full Story

06:07 PM (IST) Aug 25

ನ್ಯೂಜಿಲೆಂಡ್, ಆಸ್ಟ್ರೇಲಿಯಾ ಸರಣಿ ಭಾರತದ WTC Final ಭವಿಷ್ಯ ನಿರ್ಧರಿಸುತ್ತಾ? ರಾಹುಲ್ ದ್ರಾವಿಡ್ ಹೇಳಿದ್ದೇನು?

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ರೇಸ್‌ನಲ್ಲಿ ಭಾರತ ಸದ್ಯ 5ನೇ ಸ್ಥಾನದಲ್ಲಿದ್ದರೂ, ಫೈನಲ್‌ಗೆ ಅರ್ಹತೆ ಪಡೆಯುವ ಸಾಮರ್ಥ್ಯ ಹೊಂದಿದೆ ಎಂದು ಮಾಜಿ ಕೋಚ್ ರಾಹುಲ್ ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಂತಹ ಕಠಿಣ ಸವಾಲುಗಳು ಮತ್ತು ಅನುಭವಿ ಆಟಗಾರರ ಅನುಪಸ್ಥಿತಿಯ ನಡುವೆಯೂ ಯುವ ತಂಡದ ಮೇಲೆ ಅವರು ಭರವಸೆ ಇಟ್ಟಿದ್ದಾರೆ.
Read Full Story

05:43 PM (IST) Aug 25

ಪೆಟ್ರೋಲ್​ ತುಂಬಿಸುವಾಗ ನೋಡಿ ಹೇಗೆ ಮೋಸ ಮಾಡ್ತಾರೆಂದು - ವಿಡಿಯೋ ಮಾಡಿದ್ದಕ್ಕೆ ಅಸಲಿಯತ್ತು ಗೊತ್ತಾಯ್ತು

ಪೆಟ್ರೋಲ್ ಬಂಕ್‌ನಲ್ಲಿ ಯುವಕನೊಬ್ಬನಿಗೆ ನಡೆದ ಮೋಸದ ಘಟನೆಯೊಂದು ವಿಡಿಯೋ ಮೂಲಕ ಬಯಲಾಗಿದೆ. 900 ರೂಪಾಯಿ ಪೆಟ್ರೋಲ್ ಹಾಕಲು ಹೇಳಿದಾಗ, ಬಂಕ್ ಸಿಬ್ಬಂದಿ ಮೀಟರ್ ರೀಡಿಂಗ್‌ನಲ್ಲಿ ಜಾಣ್ಮೆಯಿಂದ ವಂಚಿಸಿ 100 ರೂಪಾಯಿ ಕಡಿಮೆ ಪೆಟ್ರೋಲ್ ಹಾಕಿದ್ದಾನೆ. ವಿಡಿಯೋ ಸಾಕ್ಷಿ ಹಿಡಿದು ಪ್ರಶ್ನಿಸಿದಾಗ, ಬಂಕ್‌ನವರು ಹಣವನ್ನು ವಾಪಸ್ ನೀಡಿದ್ದಾರೆ.
Read Full Story

05:27 PM (IST) Aug 25

ಮಗನ ಸಾವಿನ ನೋವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು.. 17 ವರ್ಷದ ಪುತ್ರನ ಅಂಗಾಂಗ ದಾನ..

ಕೇರಳದಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟ 17 ವರ್ಷದ ಆದಿಲ್ ಎಂಬ ಬಾಲಕನ ಪೋಷಕರು, ಮಗನ ಸಾವಿನ ನೋವಿನ ನಡುವೆಯೂ ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಹೃದಯದ ಕವಾಟಿನ ದೋಷದಿಂದಾಗಿ ಹೃದಯ ದಾನ ಮಾಡಲು ಸಾಧ್ಯವಾಗದಿದ್ದರೂ, ಆತನ ಮೂತ್ರಪಿಂಡ ಹಾಗೂ ಯಕೃತ್ತನ್ನು ದಾನ ಮಾಡುವ ಮೂಲಕ ಇತರರಿಗೆ ಮರುಜೀವ ನೀಡಲು ಪೋಷಕರು ಮುಂದಾಗಿದ್ದಾರೆ.

Read Full Story

05:16 PM (IST) Aug 25

'ಸಂಸ್ಕೃತಿ ಇರೋದು ಮಹಿಳೆಯ ಹೃದಯದಲ್ಲಿ, ಆಕೆಯ ನೆಕ್‌ಲೈನ್‌ನಲ್ಲಲ್ಲ' ರಕ್ಷಾಬಂಧನ ಜಾಹೀರಾತು ಟ್ರೋಲ್‌ಗೆ ನಟಿ ತಿರುಗೇಟು!

ನಟಿ ಕೃತಿ ಸನೋನ್ ಅವರ ರಕ್ಷಾಬಂಧನ ಜಾಹೀರಾತು, ಅವರ ಉಡುಪು ಮತ್ತು ನಾಯಿಗೆ ರಾಖಿ ಕಟ್ಟಿದ್ದಕ್ಕಾಗಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೃತಿ, 'ಸಂಸ್ಕೃತಿ ಇರುವುದು ಮನಸ್ಸಿನಲ್ಲಿ, ಉಡುಪಿನ ನೆಕ್‌ಲೈನ್‌ನಲ್ಲಿ ಅಲ್ಲ' ಎಂದು ಟ್ರೋಲ್‌ಗಳಿಗೆ ತಿರುಗೇಟು ನೀಡಿದ್ದಾರೆ.

Read Full Story

04:49 PM (IST) Aug 25

ಮತ್ತೊಂದು ಅತೀ ದೊಡ್ಡ ಹಗರಣ - ನಕಲಿ ದಾಖಲೆ ಸೃಷ್ಟಿಸಿ ವಿದೇಶಕ್ಕೆ 2,395 ರೂಪಾಯಿ ಟ್ರಾನ್ಸ್‌ಫರ್

ಜೈಪುರದ ಸಿಎ ಒಬ್ಬರು 3,168 ನಕಲಿ 15CB ಪ್ರಮಾಣಪತ್ರಗಳನ್ನು ಬಳಸಿ 2,395 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ವಿದೇಶಕ್ಕೆ ವರ್ಗಾಯಿಸಿದ ಆರೋಪದ ಮೇಲೆ ಎಫ್‌ಐಆರ್ ಎದುರಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ ತನಿಖೆಯಲ್ಲಿ, ಯಾವುದೇ ವಹಿವಾಟು ನಡೆಸದ 40ಕ್ಕೂ ಹೆಚ್ಚು ಶಂಕಾಸ್ಪದ ಕಂಪನಿಗಳ ಮೂಲಕ ಈ ಹಣ ರವಾನೆಯಾಗಿರುವುದು ಬಯಲಾಗಿದೆ.

Read Full Story

04:44 PM (IST) Aug 25

ಭಾರತದಲ್ಲಿ ಜಂಕ್‌ಫುಡ್, ತಂಪಾನೀಯಕ್ಕೆ ರೆಡ್ ಸಿಗ್ನಲ್ ನೀಡಲು ಹಿಂದೇಟು - ಆಹಾರ ದೈತ್ಯರ ಒತ್ತಡಕ್ಕೆ ಮಣಿದ FSSAI?

ಜಾಗತಿಕ ಆಹಾರ ದೈತ್ಯ ಕಂಪನಿಗಳಾದ ಕೊಕಾ-ಕೋಲಾ, ನೆಸ್ಲೆ ಭಾರತದಲ್ಲಿ ಪ್ಯಾಕ್ ಮಾಡಿದ ಆಹಾರಗಳ ಮೇಲೆ ಆರೋಗ್ಯ ಮುನ್ನೆಚ್ಚರಿಕೆ ಲೇಬಲ್‌ಗಳನ್ನು ವಿರೋಧಿಸುತ್ತಿವೆ. ಯುರೋಪ್‌ಗೆ ಹೋಲಿಸಿದರೆ ಭಾರತದಲ್ಲಿ ಮಾರಾಟವಾಗುವ ಇಂಥ ಪ್ರಾಡಕ್ಟ್‌ಗಳಲ್ಲಿ ಮುನ್ನೆಚ್ಚರಿಕೆಗಳೂ ಇರೋದಿಲ್ಲ.

Read Full Story

04:37 PM (IST) Aug 25

ಭಾರತಕ್ಕೆ ಬಂದ್ರು ಸುಂದರ ಕ್ರಿಕೆಟ್‌ ಆಟಗಾರ್ತಿ; ರಾತ್ರೋರಾತ್ರಿ ಫ್ಯಾನ್ಸ್‌ ಕ್ರಶ್, ಸ್ಮೃತಿ ಮಂಧನಾರನ್ನೇ ಹಿಂದಿಕ್ಕಿದ ಚೆಲುವೆ..! ಯಾರೀಕೆ?

ಬೆಂಗಳೂರು: ಭಾರತದ ಮಹಿಳಾ ಕ್ರಿಕೆಟ್‌ ಇತ್ತೀಚಿಗಿನ ವರ್ಷಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟಿಗ ಕ್ರಶ್ ಆಗಿದ್ದ ಸ್ಮೃತಿ ಮಂಧನಾ ಅವರನ್ನೇ ಹಿಂದಿಕ್ಕುವಂತಹ ಸುಂದರಿ ಕ್ರಿಕೆಟ್‌ಗೆ ಎಂಟ್ರಿಕೊಟ್ಟಿದ್ದಾರೆ. ಅಷ್ಟಕ್ಕೂ ಯಾರೀಕೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

Read Full Story

04:08 PM (IST) Aug 25

BCCIನಲ್ಲಿ ಕೆಲಸ ಮಾಡಬೇಕಾ? ಇಲ್ಲಿದೆ ನೋಡಿ ಸುವರ್ಣಾವಕಾಶ, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೂನಿಯರ್ ಕ್ರಿಕೆಟ್ ಸಮಿತಿಯ ಐದು ಸ್ಥಾನಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಕನಿಷ್ಠ 25 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ, ಐದು ವರ್ಷಗಳ ಹಿಂದೆ ನಿವೃತ್ತರಾದ ಮಾಜಿ ಕ್ರಿಕೆಟಿಗರು ಸೆಪ್ಟೆಂಬರ್ 5, 2026 ರೊಳಗೆ ಅರ್ಜಿ ಸಲ್ಲಿಸಬಹುದು.

Read Full Story

03:02 PM (IST) Aug 25

ಯಾವ ರೀತಿಯ ಎಮ್ಮೆ ಹೆಚ್ಚು ಹಾಲು ಕೊಡುತ್ತದೆ..? ಹೈನುಗಾರಿಕೆ ಶುರು ಮಾಡುವಾಗ ಈ 5 ಟಿಪ್ಸ್ ಮರೆಯದೇ ಫಾಲೋ ಮಾಡಿ

ಹೈನುಗಾರಿಕೆ ವ್ಯವಹಾರದಲ್ಲಿ ಯಶಸ್ಸು ಗಳಿಸಲು ಉತ್ತಮ ಎಮ್ಮೆಗಳ ಆಯ್ಕೆ ಬಹಳ ಮುಖ್ಯ. ಈ ಲೇಖನದಲ್ಲಿ, ಎಮ್ಮೆಗಳ ಚುರುಕುತನ, ಕೆಚ್ಚಲು, ಕಾಲುಗಳು, ವಯಸ್ಸು ಮತ್ತು ಚರ್ಮವನ್ನು ಪರೀಕ್ಷಿಸಿ ಹೆಚ್ಚು ಹಾಲು ಕೊಡುವ ಆರೋಗ್ಯಕರ ಎಮ್ಮೆಗಳನ್ನು ಗುರುತಿಸಲು 5 ಪ್ರಮುಖ ಸಲಹೆಗಳನ್ನು ನೀಡಲಾಗಿದೆ.
Read Full Story

02:55 PM (IST) Aug 25

ಇವರು ಮಗು ಹೆತ್ತರೆ ಸರ್ಕಾರದಿಂದ ಸಿಗಲಿದೆ 8 ಲಕ್ಷ ರೂ! 17 ವರ್ಷವರೆಗೆ ಎಲ್ಲವೂ ಫ್ರೀ - ಪ್ರಧಾನಿ ಘೋಷಣೆ

ಭಾರತದಲ್ಲಿ ಕೆಲವು ವರ್ಗಗಳು ಕಡಿಮೆ ಮಕ್ಕಳನ್ನು ಹೊಂದುವತ್ತ ಸಾಗುತ್ತಿದ್ದರೆ, ಸಿಂಗಾಪುರದಲ್ಲಿ ಜನಸಂಖ್ಯಾ ಕುಸಿತ ತೀವ್ರವಾಗಿದೆ. ಈ ಸಮಸ್ಯೆಯನ್ನು ಎದುರಿಸಲು, ಸಿಂಗಾಪುರ ಸರ್ಕಾರವು ಪ್ರತಿ ಮಗುವಿನ ಜನನಕ್ಕೆ ಸುಮಾರು 8 ಲಕ್ಷ ರೂಪಾಯಿಗಳ ಪ್ರೋತ್ಸಾಹಧನ ಮತ್ತು ಇತರ ಸೌಲಭ್ಯಗಳನ್ನು ಘೋಷಿಸಿದೆ.

Read Full Story

02:38 PM (IST) Aug 25

Finance Investment ಪೋಷಕರೇ, ಹದಿಹರೆಯದ ಮಕ್ಕಳಿಗೆ ಹಣಕಾಸಿನ ಪಾಠ ಕಲಿಸಲು ಹೀಗೆ ಮಾಡಿ

ಹದಿಹರೆಯದ ಮಕ್ಕಳಿಗೆ ಹಣಕಾಸಿನ ಪಾಠ ಕಲಿಸಲು ಸ್ಟ್ರೀಕಿಂಗ್ ಆ್ಯಪ್‌ಗಳು, ಮೈನರ್ ಡಿಮ್ಯಾಟ್ ಖಾತೆಗಳ ಮೂಲಕ ಹೂಡಿಕೆ, ಮತ್ತು ಫ್ರಾಕ್ಷನಲ್ ಓನರ್‌ಶಿಪ್‌ನಂತಹ ಆಧುನಿಕ ವಿಧಾನಗಳನ್ನು ಬಳಸಬಹುದು. ಫ್ಯಾಮ್‌ ಪೇ, ಯುಪಿಐ ಸರ್ಕಲ್‌ನಂತಹ ಸಾಧನಗಳು ಸುರಕ್ಷಿತವಾಗಿ ಹಣದ ನಿರ್ವಹಣೆಯನ್ನು ಕಲಿಸಲು ಸಹಾಯ ಮಾಡುತ್ತವೆ.

Read Full Story

02:08 PM (IST) Aug 25

ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿ ಮಿಂಚಿದ ವೈಭವ್ ಸೂರ್ಯವಂಶಿ..! ವಿಡಿಯೋ ವೈರಲ್

ದುಲೀಪ್ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, 15 ವರ್ಷದ ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ನಲ್ಲಿ ವಿಫಲರಾದರೂ, ಬೌಲಿಂಗ್‌ನಲ್ಲಿ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದು ಮಿಂಚಿದ್ದಾರೆ. ಅವರ ಈ ಪ್ರದರ್ಶನದಿಂದ ಪೂರ್ವ ವಲಯ ತಂಡವು ಈಶಾನ್ಯ ವಲಯದ ವಿರುದ್ಧ 210 ರನ್‌ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.
Read Full Story

02:08 PM (IST) Aug 25

ಆರ್‌ಸಿಬಿ ಮಾಜಿ ಆಟಗಾರನ 'ಜೆನ್ ಝೀ' ಸೆಲೆಬ್ರೇಷನ್, ಕೌಂಟಿ ಅಂಗಳದಲ್ಲಿ ಚಹಲ್ ಹೊಸ ಅವತಾರ

ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ನಾರ್ಥಾಂಪ್ಟನ್‌ಶೈರ್ ಪರ ಆಡುತ್ತಿರುವ ಯಜುವೇಂದ್ರ ಚಹಲ್, 3 ವಿಕೆಟ್ ಪಡೆದು ಮಿಂಚಿದ್ದಾರೆ. ವಿಕೆಟ್ ಪಡೆದ ನಂತರ 'ಜೆನ್ ಝೀ' ಶೈಲಿಯಲ್ಲಿ ಸಂಭ್ರಮಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.
Read Full Story

01:52 PM (IST) Aug 25

Indian Banks - ಭಾರತದ ಬ್ಯಾಂಕುಗಳ ಭರ್ಜರಿ ಪರ್ಫಾರ್ಮೆನ್ಸ್! HDFC, ICICI ಮುಂಚೂಣಿಯಲ್ಲಿ

ಭಾರತದ ಬ್ಯಾಂಕುಗಳ ಸ್ಥಿತಿ ಸಖತ್ ಸ್ಟ್ರಾಂಗ್ ಆಗಿದೆ ಅಂತ ಬ್ಯಾಂಕ್ ಆಫ್ ಅಮೆರಿಕಾ ಗ್ಲೋಬಲ್ ರಿಸರ್ಚ್ ವರದಿ ಹೇಳಿದೆ. ಇದಕ್ಕೆ ಕಾರಣ, ಭರ್ಜರಿ ಸಾಲ ಬೆಳವಣಿಗೆ ಮತ್ತು ಸುಧಾರಿಸಿದ ಆಸ್ತಿ ಗುಣಮಟ್ಟ. HDFC ಮತ್ತು ICICI ಬ್ಯಾಂಕ್‌ಗಳು ಈ ರೇಸ್‌ನಲ್ಲಿ ಎಲ್ಲರಿಗಿಂತ ಮುಂದಿವೆ.ವಿವರಗಳಿಗೆ ಮುಂದೆ ಓದಿ..

Read Full Story

01:35 PM (IST) Aug 25

ಐ-ಫೋನ್​ ದುರ್ಘಟನೆಯಿಂದ Gen Zಗಳಿಗೆ ಫ್ರೀ ಫೋನ್​ ವಿತರಣೆ - ವೈರಲ್​ ಆಗ್ತಿರೋ ಈ ವಿಡಿಯೋದ ಸತ್ಯವೇನು

ಮಹಾರಾಷ್ಟ್ರದಲ್ಲಿ ಐ-ಫೋನ್ ವಿಚಾರಕ್ಕೆ ಮಗ ಆತ್ಮಹತ್ಯೆಗೆ ಯತ್ನಿಸಿ, ಪೋಷಕರೂ ಮೃತಪಟ್ಟ ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ಈ ದುರಂತದ ಬೆನ್ನಲ್ಲೇ, ಮಿಲೇನಿಯರ್ ಒಬ್ಬ ಐ-ಫೋನ್ ಹಂಚುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅದರ ಅಸಲಿಯತ್ತನ್ನು ಪರಿಶೀಲಿಸಿದಾಗ ಅದು ಕೇವಲ ಲೈಕ್ಸ್‌ಗಾಗಿ ಮಾಡಿದ ನಕಲಿ ವಿಡಿಯೋ ಎಂಬುದು ಬಯಲಾಗಿದೆ.
Read Full Story

01:28 PM (IST) Aug 25

ರಾಖಿ ಸಾವಂತ್, ಸೋನು ಸೂದ್‌ಗೆ ತರಾಟೆ.. ಬಾಲಿವುಡ್ 'ಕ್ವೀನ್' ಕಂಗನಾ ಹೇಳಿರೋ ಮಾತು ಅಂತಿಂಥದ್ದಲ್ಲ!

ಕಂಗನಾ ರನೌತ್ ಈಗ ಬಾಲಿವುಡ್‌ನ 'ಬಿಗ್ ಬಾಸ್' ರೀತಿ ವರ್ತಿಸುತ್ತಿದ್ದು, ತಪ್ಪು ಕಂಡಲ್ಲಿ ಯಾರನ್ನೂ ಬಿಡುತ್ತಿಲ್ಲ. ಸಿನಿಮಾ ಮತ್ತು ರಾಜಕೀಯ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುವ ಈ 'ಕ್ವೀನ್' ಮುಂದೆ ಸದ್ಯಕ್ಕೆ ಯಾರೂ ಬಾಯಿ ಬಿಡದ ಸ್ಥಿತಿ ನಿರ್ಮಾಣವಾಗಿದೆ. ಇಲ್ಲೇನು ಹೇಳಿದ್ದಾರೆ ನೋಡಿ..

Read Full Story

01:16 PM (IST) Aug 25

ರಾಜಕೀಯಕ್ಕೆ ಎಂಟ್ರಿ ಕೊಡೋ ಬಗ್ಗೆ ಚೆನ್ನೈನಲ್ಲಿ ಯಶ್ ಹೇಳಿದ್ದೇನು? ಸಿಎಂ ವಿಜಯ್ ಬಗ್ಗೆ 'ರಾಕಿ ಭಾಯ್' ಅಚ್ಚರಿಯ ಹೇಳಿಕೆ!

ಕೆವಿಎನ್ ಸಂಸ್ಥೆಯ ಚಿತ್ರದಲ್ಲಿ ನಟಿಸಿದ ವಿಜಯ್ ಅವರು ಬಳಿಕ ಮುಖ್ಯಮಂತ್ರಿಯಾದರು. ಈಗ ನೀವು ಕೂಡ ಅದೇ ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ಟಾಕ್ಸಿಕ್ ಸಿನಿಮಾ ಮಾಡುತ್ತಿದ್ದೀರಿ. ಕಟ್ ಮಾಡಿದರೆ ನೀವೂ ಮುಂದೆ ಸಿಎಂ ಆಗ್ತೀರಾ ಎಂದು ಕಾರ್ಯಕರ್ಮದಲ್ಲಿ ನಿರೂಪಕರು ಪ್ರಶ್ನಿಸಿದರು. ಅದಕ್ಕೆ ಯಶ್ ಉತ್ತರ ಇದು..

Read Full Story

01:04 PM (IST) Aug 25

ಸಿಜೆಪಿ ಪ್ರತಿಭಟನೆ ತನಿಖಾ ಸಮಿತಿ ವಿರುದ್ಧವೇ ಸುಪ್ರೀಂಗೆ ಅರ್ಜಿ - ಇದೊಂದು 'Mysterious' ಎಂದ ಸಾಲಿಸಿಟರ್ ಜನರಲ್

Cockroach janata party (ಸಿಜೆಪಿ) ನೇತೃತ್ವದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ತನಿಖೆ ನಡೆಸುತ್ತಿರುವ ಸಮಿತಿಯ ರಚನೆಗೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯನ್ನು 'Mysterious' ಎಂದು ಕರೆದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿರೋಧ

Read Full Story

12:43 PM (IST) Aug 25

ಲಿಪ್‌ಸ್ಟಿಕ್ ವಿಷ್ಯ ಬೇಡವೋ ಶಿಷ್ಯ.. ಲಿಪ್ಸ್‌ ಸೂಪರ್, ಆದ್ರೆ ಭಾರೀ ಡೇಂಜರ್.. ಅಂಥದ್ದೇನಾಯ್ತು ಈ ಹುಡ್ಗಂಗೆ?!

ಇತ್ತೀಚಿನ ದಿನಗಳಲ್ಲಿ ವೈರಲ್ ಆಗಲು ಅಥವಾ ಲೈಕ್ಸ್ ಗಳಿಸಲು ಯುವಜನತೆ ಇಂತಹ ಹುಚ್ಚಾಟಗಳಿಗೆ ಮುಂದಾಗುತ್ತಿದ್ದಾರೆ. ಈ ಘಟನೆ ಈಗ ಸಖತ್ ಟ್ರೋಲ್ ಆಗುತ್ತಿದ್ದು, "ಪ್ರೀತಿಯ ಮುತ್ತು ಇಷ್ಟೊಂದು ಕಾಸ್ಟ್ಲಿ ಆಗುತ್ತೆ ಅಂತ ಆ ಪ್ರೇಮಿ ಪಾಪ ಕನಸಿನಲ್ಲೂ ಅಂದುಕೊಂಡಿರಲಿಲ್ಲ" ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

Read Full Story

12:19 PM (IST) Aug 25

Irumudi Record - 105 ವರ್ಷಗಳ ದಾಖಲೆ ಬ್ರೇಕ್! ಬಾಹುಬಲಿ, RRR, ಪುಷ್ಪ ಸಿನಿಮಾಗಳಿಂದಲೇ ಆಗಲಿಲ್ಲ, ಇತಿಹಾಸ ಬರೆದ ರವಿತೇಜ ಸಿನಿಮಾ

ಟಾಲಿವುಡ್‌ನಲ್ಲಿ ಕಳೆದ ವಾರ ಬಿಡುಗಡೆಯಾದ 'ಇರುಮುಡಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಹಿಟ್ ಪಡೆದುಕೊಂಡಿದೆ. ಕಳೆದ ಮೂರು ದಿನಗಳಿಂದ ತೆಲುಗು ರಾಜ್ಯಗಳಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಜನರು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿದ್ದಾರೆ.

Read Full Story

11:33 AM (IST) Aug 25

Palakkad mangalore train row - ಮೈಸೂರು ವಿಭಾಗಕ್ಕೆ ಮಂಗಳೂರು ರೈಲು ಸೇರಿದ್ರೆ ಕಾಂಗ್ರೆಸ್‌ಗೇನು ಕಷ್ಟ? - ಆರ್‌ಸಿ

ಕೇರಳದ ಪಾಲಕ್ಕಾಡ್ ರೈಲ್ವೆ ವಿಭಾಗದಿಂದ ಮಂಗಳೂರನ್ನು ಬೇರ್ಪಡಿಸಿ ಮೈಸೂರು ವಿಭಾಗಕ್ಕೆ ಸೇರಿಸುವ ಪ್ರಸ್ತಾಪ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸಮರ್ಥಿಸಿಕೊಂಡಿದ್ದಾರೆ. ಇದು ಆಡಳಿತಾತ್ಮಕ ನಿರ್ಧಾರ, ಯುಡಿಎಫ್ ಸರ್ಕಾರ ತನ್ನ ವೈಫಲ್ಯ ಮುಚ್ಚಲು ವಿವಾದ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.

Read Full Story

11:00 AM (IST) Aug 25

MG ಹೆಕ್ಟರ್ ಟೋಮಹಾಕ್ EV ಲಾಂಚ್‌ಗೆ ದಿನಾಂಕ ಫಿಕ್ಸ್ - ಹೊಸ SUVಯ ವಿಶೇಷತೆಗಳೇನು?

JSW ಎಂಜಿ ಮೋಟಾರ್ ಇಂಡಿಯಾ ತನ್ನ ಹೊಚ್ಚ ಹೊಸ ಎಲೆಕ್ಟ್ರಿಕ್ SUV 'ಎಂಜಿ ಹೆಕ್ಟರ್ ಟೋಮಹಾಕ್' ಅನ್ನು ಆಗಸ್ಟ್ 26 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದು ಕಂಪನಿಯ ಹೊಸ 'ಅಡಾಪ್ಟ್' ಪ್ಲಾಟ್‌ಫಾರ್ಮ್ ಆಧಾರಿತ ಮೂರು ಸಾಲಿನ ಸೀಟುಗಳ ವಾಹನವಾಗಿದ್ದು, ಸುಮಾರು 530 ಕಿ.ಮೀ. ರೇಂಜ್ ನೀಡುವ ನಿರೀಕ್ಷೆಯಿದೆ. ಈ ಹೊಸ ಮಾಡೆಲ್ ಭಾರತದ EV ಮಾರುಕಟ್ಟೆಯಲ್ಲಿ ಮಹೀಂದ್ರಾ XUV900 ನಂತಹ ವಾಹನಗಳಿಗೆ ಪೈಪೋಟಿ ನೀಡಲಿದೆ.
Read Full Story

09:27 AM (IST) Aug 25

ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್‌ಗೆ ಮತ್ತೆ 21 ದಿನಗಳ ಪೆರೋಲ್! 2020-26 ರವರೆಗೆ ಎಷ್ಟು ಬಾರಿ ಜೈಲಿನಿಂದ ಹೊರಬಂದಿದ್ದಾರೆ ಗೊತ್ತಾ?

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ನ್ಯಾಯಾಲಯ ಮತ್ತೊಮ್ಮೆ 21 ದಿನಗಳ ಪೆರೋಲ್ ನೀಡಿದೆ. ಅತ್ಯಾ೧ಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ. 2020 ರಿಂದ 17ನೇ ಬಾರಿಗೆ ಬಿಡುಗಡೆಯಾಗುತ್ತಿದ್ದು, ಒಟ್ಟು 450 ದಿನಗಳಿಗೂ ಹೆಚ್ಚು ಕಾಲ ಜೈಲಿನಿಂದ ಹೊರಗೆ.

Read Full Story

08:48 AM (IST) Aug 25

50 ವರ್ಷದ ಅವಧಿಗೆ ಹುಬ್ಬಳ್ಳಿ ಸೇರಿ 11 ಏರ್‌ಪೋರ್ಟ್‌ ಖಾಸಗಿಗೆ ನೀಡಲು ನಿರ್ಧಾರ Hubballi

ಕೇಂದ್ರ ಸರ್ಕಾರವು ಕರ್ನಾಟಕದ ಹುಬ್ಬಳ್ಳಿ, ವಾರಾಣಸಿ ಮತ್ತು ತಿರುಪತಿ ಸೇರಿದಂತೆ ದೇಶದ 11 ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಡಿ (ಪಿಪಿಪಿ) ಗುತ್ತಿಗೆ ನೀಡಲು ಯೋಜಿಸಿದೆ. ಈ ವಿಮಾನ ನಿಲ್ದಾಣಗಳನ್ನು ಐದು ಗುಚ್ಛಗಳಾಗಿ ವಿಂಗಡಿಸಿ, 50 ವರ್ಷಗಳ ಅವಧಿಗೆ ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಲಾಗುವುದು.

Read Full Story

08:30 AM (IST) Aug 25

ಮಂಗಳೂರು ರೈಲ್ವೆಗಾಗಿ ಕೇರಳ ಬೀದಿ ಹೋರಾಟ; ಹಿಂಸಾ ರೂಪ ಪಡೆದ ಪ್ರತಿಭಟನೆ, ಪ್ರಧಾನಿಗೆ ಪತ್ರ

ಮಂಗಳೂರು ರೈಲ್ವೆ ವಿಭಾಗವನ್ನು ಮೈಸೂರು ವಿಭಾಗಕ್ಕೆ ಸೇರಿಸುವ ಕೇಂದ್ರದ ಪ್ರಸ್ತಾಪವು ಕೇರಳದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಆದಾಯ ನಷ್ಟದ ಕಾರಣ ನೀಡಿ ಕೇರಳ ಸರ್ಕಾರ ಈ ನಿರ್ಧಾರವನ್ನು ವಿರೋಧಿಸಿದರೆ, ಇದು ಕರ್ನಾಟಕದ 23 ವರ್ಷಗಳ ಹೋರಾಟದ ನ್ಯಾಯಯುತ ಹಕ್ಕು ಎಂದು ಕೇಂದ್ರ ಸಚಿವರು ಮತ್ತು ರಾಜ್ಯ ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ.
Read Full Story

07:28 AM (IST) Aug 25

ISRO ಉಡಾವಣಾ ವಾಹನ ತಯಾರಿಕೆ ಖಾಸಗಿ ವಲಯಕ್ಕೆ? ಕಾಂಗ್ರೆಸ್‌ ಕಿಡಿ, ಬಿಜೆಪಿ ಸಮರ್ಥನೆ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇನ್ನು ಮುಂದೆ ಉಡಾವಣಾ ವಾಹನಗಳನ್ನು ತಯಾರಿಸುವುದಿಲ್ಲ, ಬದಲಾಗಿ ಸಂಶೋಧನೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಲಿದೆ. ಈ ಉತ್ಪಾದನಾ ಕಾರ್ಯವನ್ನು ಖಾಸಗಿ ವಲಯಕ್ಕೆ ವಹಿಸಿಕೊಡುವ ನಿರ್ಧಾರವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
Read Full Story

More Trending News