ವಾಷಿಂಗ್ಟನ್: ಅಮೆರಿಕವು ಚೀನಾದ ಒಂದು ಪ್ರಮುಖ ತೈಲ ಸಂಸ್ಕರಣಾಗಾರ ಮತ್ತು ಇರಾನ್ ತೈಲ ಸಾಗಣೆಯಲ್ಲಿ ತೊಡಗಿರುವ ಸುಮಾರು 40 ಹಡಗು ಕಂಪನಿಗಳು ಹಾಗೂ ಟ್ಯಾಂಕರ್ಗಳ ಮೇಲೆ ಶುಕ್ರವಾರ ಆರ್ಥಿಕ ನಿರ್ಬಂಧಗಳನ್ನು ಹೇರಿದೆ. ಇವುಗಳಲ್ಲಿ ಚೀನಾದ ದಾಲಿಯನ್ ಬಂದರಿನಲ್ಲಿರುವ ಹೆಂಗ್ಲಿ ಪೆಟ್ರೋಕೆಮಿಕಲ್ ಸಂಸ್ಕರಣಾ ಕೇಂದ್ರವೂ ಸೇರಿದೆ. ಇದು ದಿನಕ್ಕೆ ಸುಮಾರು 4 ಲಕ್ಷ ಬ್ಯಾರಲ್ ಕಚ್ಚಾ ತೈಲ ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದು, ಇರಾನ್ಗೆ ನೂರಾರು ಮಿಲಿಯನ್ ಡಾಲರ್ ಆದಾಯ ಒದಗಿಸಿದೆ ಎನ್ನಲಾಗಿದೆ. ಇರಾನ್ನ ಪ್ರಮುಖ ಆದಾಯ ಮೂಲವಾದ ತೈಲ ರಫ್ತನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

10:24 PM (IST) Apr 25
15 ಎಸೆತದಲ್ಲಿ ಫಿಫ್ಟಿ, 36ಕ್ಕೆ ಶತಕ, ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದ ವೈಭವ್ ಸೂರ್ಯವಂಶಿ, ಮೊದಲ ಓವರ್ನಲ್ಲಿ 4 ಸಿಕ್ಸರ್ ಸಿಡಿಸಿ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ. ಸೆಂಚುರಿ ಅಬ್ಬರದಲ್ಲಿ ಹಲವು ದಾಖಲೆ ನಿರ್ಮಾಣವಾಗಿದೆ.
10:04 PM (IST) Apr 25
ಬಂಗಾಳದ ಮೊದಲ ಹಂತ ಚುನಾವಣೆಯಲ್ಲಿ 110 ಸ್ಥಾನ ಬಿಜೆಪಿ ತೆಕ್ಕೆಗೆ, ಅಮಿತ್ ಶಾ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದಿದ್ದಾರೆ. ಇತ್ತ ಟಿಎಂಸಿ ಕೂಡ ಭವಿಷ್ಯ ಹೇಳಿದೆ.
08:25 PM (IST) Apr 25
ಸೋಷಿಯಲ್ ಮೀಡಿಯಾ ಮೂಲಕ ಶ್ರೀಮಂತ ಪುರುಷರನ್ನು ಪರಿಚಯಿಸಿಕೊಂಡು, ಹೋಟೆಲ್ಗೆ ಕರೆದೊಯ್ದು ವಿವಸ್ತ್ರಗೊಳಿಸಿ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ 'ಜಾಸ್ಮಿನ್ ಗ್ಯಾಂಗ್' ಎಂಬ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಈ ಸಂಬಂಧ ನಾಲ್ವರು ಮಹಿಳೆಯರು ಸೇರಿದಂತೆ ಹಲವರನ್ನು ಬಂಧಿಸಲಾಗಿದ್ದು, ಕಿಂಗ್ಪಿನ್ಗಾಗಿ ಹುಡುಕಾಟ ಮುಂದುವರೆದಿದೆ.
08:14 PM (IST) Apr 25
265 ರನ್ ಟಾರ್ಗೆಟ್ ಚೇಸ್, ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪಂಜಾಬ್, ಡೆಲ್ಲಿ ಬೃಹತ್ ಮೊತ್ತ ಸಿಡಿಸಿ ನಿರಾಳರಾಗಿದ್ದರೆ, ಪಂಜಾಬ್ ಕಿಂಗ್ಸ್ ಗುರಿ ಚೇಸ್ ಮಾಡಿ ಹೊಸ ಇತಿಹಾಸ ರಚಿಸಿದೆ.
07:44 PM (IST) Apr 25
71ರ ಹರೆಯದಲ್ಲೂ ಸೌಂದರ್ಯದಿಂದ ಮಿಂಚುತ್ತಿರುವ ನಟಿ ರೇಖಾ, ಅಮಿತಾಭ್ ಬಚ್ಚನ್ ಮೇಲಿನ ತಮ್ಮ ಪ್ರೀತಿಯಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ಕೇಳಿದ ಪ್ರಶ್ನೆಗೆ ಅಮಿತಾಭ್ ಹೆಸರನ್ನು ಹೇಳದೆ ಉತ್ತರಿಸಿದರೂ, ಅವರ ಪ್ರತಿಕ್ರಿಯೆ ಹಳೆಯ ಪ್ರೀತಿಯನ್ನು ನೆನಪಿಸಿತು.
07:38 PM (IST) Apr 25
ಈ ಮೊದಲು ಕನ್ನಡ ಚಿತ್ರಗಳಲ್ಲೂ ನಟಿಸಿರುವ ಈ ನಟಿ, ಇದೀಗ ಮತ್ತೆ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದಾರೆ. 8 ವರ್ಷಗಳ ಕಾಲ ಪ್ರೀತಿಸಿ ಹಸೆಮಣೆ ಏರಿದ ಈ ನಟಿಗೆ ಈಗ ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆಯ ನಂತರ ಸುದೀರ್ಘ ಕಾಲ ಚಿತ್ರರಂಗದಿಂದ ದೂರವಿದ್ದು, ಈಗ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಯಾರು ನೋಡಿ..
07:32 PM (IST) Apr 25
'ಅಲ್ಲಾಡಿಪೋತುನ್ನಾಡಮ್ಮಾ' ಎಂಬ ಒಂದೇ ಒಂದು ವಿಡಿಯೋದಿಂದ ಸಿಕ್ಕಾಪಟ್ಟೆ ಫೇಮಸ್ ಆದ ಗಾಯಕಿ ಸಮೀರಾ ಭಾರದ್ವಾಜ್, ಸದ್ಯ ಗಾಯಕಿಯಾಗಿ ಸಖತ್ ಬ್ಯುಸಿಯಾಗಿದ್ದಾರೆ. ಹಾಗಾದರೆ, ಒಂದು ಹಾಡಿಗೆ ಅವರು ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಗೊತ್ತಾ? ಇಲ್ಲಿದೆ ವಿವರ.
07:01 PM (IST) Apr 25
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ವೇಗಿ ಎನ್ಗಿಡಿಗೆ ತಲೆಗೆ ಗಂಭೀರ ಗಾಯ, ಆಸ್ಪತ್ರೆ ದಾಖಲು, ಮೈದಾನದಲ್ಲೇ ಬಿದ್ದ ಎನ್ಗಿಡಿಯನ್ನು ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆ ದಾಖಿಸಲಾಗಿದೆ.
07:00 PM (IST) Apr 25
06:22 PM (IST) Apr 25
ದಯಾಬೆನ್ ಪಾತ್ರಕ್ಕೆ ಬಣ್ಣ ಹಚ್ಚುವ ಮುನ್ನ ದಿಶಾ ವಕಾನಿ ಬಾಲಿವುಡ್ನ ದೊಡ್ಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 2008 ರಲ್ಲಿ ತೆರೆಕಂಡ 'ಜೋಧಾ ಅಕ್ಬರ್'ನಲ್ಲಿ ಅವರು ಐಶ್ವರ್ಯಾ ರೈ ಆತ್ಮೀಯ ಗೆಳತಿ, ಸಹಾಯಕಿ 'ಮಾಧವಿ' ಎಂಬ ಪಾತ್ರವನ್ನು ನಿರ್ವಹಿಸಿದ್ದರು.
05:57 PM (IST) Apr 25
ಗುಜುರಿ ಸೇರಿದ್ದ ವಸ್ತುಗಳನ್ನು ಬಳಸಿ ಈ ಕಾರು ತಯಾರಿಸಲಾಗಿದೆ. ಸಂಪೂರ್ಣವಾಗಿ ಸೋಲಾರ್ನಿಂದ ಕಾರು ಓಡುತ್ತಿದೆ. ಕೇವಲ 30 ಸಾವಿರ ರೂಗೆ ಸೋಲಾರ್ ಚಾಲಿತ ಕಾರು ತಯಾರಿಸಿದ ಕುಗ್ರಾಮದ ವ್ಯಕ್ತಿಗೆ ಈಗ ಹಲವು ಕಂಪನಿಗಳಿಂದ ಬೇಡಿಕೆ
05:44 PM (IST) Apr 25
05:37 PM (IST) Apr 25
ಸಲ್ಮಾನ್ ಖಾನ್ ಸಿನಿಮಾ 2027ರ ಈದ್ ಹಬ್ಬಕ್ಕೆ ರಿಲೀಸ್ ಆಗಲಿದೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಇದೇ ವೇಳೆ, 2027ರ ಈದ್ಗೆ ಬಾಕ್ಸ್ ಆಫೀಸ್ನಲ್ಲಿ ಅತಿದೊಡ್ಡ ಕ್ಲ್ಯಾಶ್ ನಡೆಯಲಿದೆ. ಏಕೆಂದರೆ ಇದೇ ದಿನ ಪ್ರಭಾಸ್ ಸಿನಿಮಾ ಸಹ ರಿಲೀಸ್ ಆಗಲಿದೆ.
05:34 PM (IST) Apr 25
ನಟ ಸಂಜಯ್ ದತ್ ತಮ್ಮ ಐಕಾನಿಕ್ 'ಖಳ್ ನಾಯಕ್' ಪಾತ್ರಕ್ಕೆ ಮರಳಿದ್ದಾರೆ. 'ಖಳ್ ನಾಯಕ್ ರಿಟರ್ನ್ಸ್' ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿ ಅವರ ರಗಡ್ ಮತ್ತು ಗಂಭೀರ ಅವತಾರ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
05:25 PM (IST) Apr 25
ರಿಯಲ್ ಧುರಂಧರ್ ಸೀನ್, ದಾವುದ್ ಇಬ್ರಾಹಿಂ ಆಪ್ತ ಸಲೀಂ ದೋಲಾ ಅರೆಸ್ಟ್,ಪಾಕಿಸ್ತಾನ ಗಲಿಬಿಲಿ, ಭಾರತದ ಮೇಲೆ ಭಯೋತ್ಪಾದಕರ ಬಿಟ್ಟು ಖುಷಿಪಡುವ ಒಬ್ಬೊಬ್ಬರನ್ನೇ ಹೊಸಕಿ ಹಾಕುವ ಕೆಲಸ ಮುಂದುವರಿದಿದೆ.
05:18 PM (IST) Apr 25
ವಿಜಯ್ ನಟನೆಯ 'ಬಿಗಿಲ್' ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನಟಿ ಇಂದ್ರಜಾ ಶಂಕರ್, ತಮ್ಮ ಮೊದಲ ಸಿನಿಮಾ ಹಾಗೂ ಇತ್ತೀಚಿನ ಚಿತ್ರದ ಸಂಭಾವನೆಯಲ್ಲಿನ ವ್ಯತ್ಯಾಸವನ್ನು ಬಹಿರಂಗಪಡಿಸಿದ್ದಾರೆ.
04:55 PM (IST) Apr 25
04:31 PM (IST) Apr 25
04:26 PM (IST) Apr 25
ಡಿಗ್ರಿಯೇ ಇಲ್ಲದಿದ್ದರೂ ಆರ್ಥಿಕ ತಜ್ಞರಂತೆ ಸಲಹೆ, ಯೂಟ್ಯೂಬರ್ಗೆ 11 ಲಕ್ಷ ರೂ ದಂಡ ವಿಧಿಸಲಾಗಿದೆ. ಯೂಟ್ಯೂಬ್ನಲ್ಲಿ ಫಿನಾನ್ಸ್, ವೈದ್ಯಕೀಯ, ಶಿಕ್ಷಣ ಸೇರಿದಂತೆ ಕೆಲ ವಿಚಾರಗಳ ಕುರಿತು ಕಂಟೆಂಟ್ ಮಾಡಲು ಕನಿಷ್ಠ ಅರ್ಹತೆ ಬೇಕು ಎಂಬ ಎಚ್ಚರಿಕೆಯನ್ನು ರವಾನಿಸಲಾಗಿದೆ.
03:43 PM (IST) Apr 25
ಹೆಚ್ಚಾಯ್ತು ವಯಾಗ್ರ ಡೋಸ್, ಆಹ್ವಾನಿಸಿದ ಗೆಳತಿ ಕೋಣೆಗೆ ಬರುವ ಮೊದಲೇ ಯುವಕ ಸಾವು, ಕಾಂಡೋಮ್ ಸೇರಿದಂತೆ ಕೆಲ ವಸ್ತುಗಳು ಮೃತದೇಹ ಬಳಿ ಪತ್ತೆಯಾಗಿದೆ. ಏನಿದು ಘಟನೆ, ಯುವಕ ಸಾವು ಕಂಡಿದ್ದು ಹೇಗೆ?
03:18 PM (IST) Apr 25
ಒಳ್ಳೆಯ ಕೊಲೆಸ್ಟ್ರಾಲ್, ಅಂದರೆ HDL, ನಮ್ಮ ದೇಹಕ್ಕೆ ಬಹಳ ಮುಖ್ಯ. ಇದು ರಕ್ತನಾಳಗಳಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರಹಾಕಿ, ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
02:40 PM (IST) Apr 25
1993ರಲ್ಲಿ ಬಿಡುಗಡೆಯಾಗಿದ್ದ ‘ಖಲ್ನಾಯಕ್’ ಚಿತ್ರದಲ್ಲಿ ಸಂಜಯ್ ದತ್ ‘ಬಲ್ಲು’ ಎಂಬ ಪಾತ್ರದಲ್ಲಿ ನಟಿಸಿದ್ದರು. ಮಾಧುರಿ ದೀಕ್ಷಿತ್ ಮತ್ತು ಜಾಕಿ ಶ್ರಾಫ್ ಅವರ ಪ್ರಮುಖ ಪಾತ್ರಗಳಿದ್ದ ಈ ಚಿತ್ರವು ಅಂದು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಈಗ 30 ವರ್ಷಗಳ ನಂತರ ಮತ್ತೆ ಅದೇ ‘ಖಲ್ನಾಯಕ್’ ಅಬ್ಬರಿಸಲು ಸಿದ್ಧವಾಗುತ್ತಿದೆ.
01:47 PM (IST) Apr 25
01:44 PM (IST) Apr 25
ರಾಘವ್ ಚಡ್ಡಾ ಸೇರಿದಂತೆ ಆಮ್ ಆದ್ಮಿ ಪಕ್ಷದ ಏಳು ರಾಜ್ಯಸಭಾ ಸಂಸದರು ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾ ಹಜಾರೆ, ಪಕ್ಷವು ಸರಿಯಾದ ದಾರಿಯಲ್ಲಿದ್ದರೆ ನಾಯಕರು ಪಕ್ಷ ಬಿಡುತ್ತಿರಲಿಲ್ಲ, ಅವರಿಗೆ ಪಕ್ಷದೊಳಗೆ ಸಮಸ್ಯೆಗಳಾಗಿರಬಹುದು ಎಂದಿದ್ದಾರೆ.
01:12 PM (IST) Apr 25
ಭಾರತದಲ್ಲಿ 'AI' (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಸಂಬಂಧಿತ ಬೆಳವಣಿಗೆಗಳು ಕಡಿಮೆ ಎಂಬ ಕಾರಣಕ್ಕೆ ಜಾಗತಿಕ ಹೂಡಿಕೆದಾರರು ಇಲ್ಲಿ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆಎಂದು ಮಿರೇ ಅಸೆಟ್ನ ಸ್ವರೂಪ್ ಮೊಹಂತಿ ಹೇಳಿದ್ದಾರೆ.
12:55 PM (IST) Apr 25
ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಆಪ್ ಪಕ್ಷ ತೊರೆದು ಇತರ 6 ಸಂಸದರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ರಾಜಕೀಯ ಬೆಳವಣಿಗೆಯ ನಂತರ, ರಾಘವ್ ಚಡ್ಡಾ ಅವರಿಗೆ ದೊಡ್ಡ ಆಘಾತ ನೀಡಿದೆ.
12:53 PM (IST) Apr 25
ಆಪ್ ಸಂಸದ ರಾಘವ್ ಚಡ್ಡಾ ಬಿಜೆಪಿ ಸೇರಿದ್ದಕ್ಕೆ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯನ್ನು 'ನಾಚಿಕೆಗೇಡಿ' ಮತ್ತು 'ಬಕಾಸುರ' ರಾಕ್ಷಸನಿಗೆ ಹೋಲಿಸಿರುವ ಅವರು, ಪಕ್ಷಾಂತರಿಗಳು 'ಗೂಂಡಾಗಳ ಪಕ್ಷ' ಸೇರಿದ್ದಾರೆ ರಾಘವ್ ಚಡ್ಡಾ ವಿರುದ್ಧವೂ ಕಿಡಿ ಕಾರಿದ್ದಾರೆ.
12:43 PM (IST) Apr 25
ಶ್ರೀಲೀಲಾಗೆ ಸಾಲು ಸಾಲು ಅವಕಾಶಗಳು ಬಂದಿದ್ದು ಸುಳ್ಳಲ್ಲ. ಒಂದು ಹಂತದಲ್ಲಿ ಈಕೆ ಟಾಲಿವುಡ್ ಟಾಪ್ ಹೀರೋಯಿನ್ ಆಗ್ತಾಳೆ ಅನ್ನೋ ಮಾತು ಕೇಳಿಬಂದ್ವು. ಆದ್ರೆ ಅದ್ಯಾಕೋ ರಶ್ಮಿಕಾಗಿದ್ದಂಥ ಅದೃಷ್ಟ ಈಕೆಗಿಲ್ಲ ಅನ್ನೋದು ಬಹುಬೇಗ ಪ್ರೂವ್ ಆಗೋಯ್ತು. ಯಾಕೆ ಹೀಗೆ?
12:24 PM (IST) Apr 25
ಇಂಡೋನೇಷ್ಯಾ ರಫ್ತು ನೀತಿಯನ್ನು ಬದಲಾಯಿಸುತ್ತಿರುವುದರಿಂದ ಭಾರತದಲ್ಲಿ ಅಡುಗೆ ಎಣ್ಣೆಯಿಂದ ಹಿಡಿದು ಸೋಪು, ಶಾಂಪೂ, ಬಿಸ್ಕತ್ತುಗಳಂತಹ ಅನೇಕ ದೈನಂದಿನ ಬಳಕೆಯ ವಸ್ತುಗಳ ಬೆಲೆ ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆಯಿದೆ.
12:14 PM (IST) Apr 25
ಪ ಬಂಗಾಳದಲ್ಲಿ ಹೆಚ್ಚಿನ ಮತದಾನದಿಂದಾಗಿ ಬಿಜೆಪಿ ಗೆಲ್ಲಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಲ್ಲಿಕಾರ್ಜುನ್ ಖರ್ಗೆಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಕ್ಷಮೆ ಕೇಳಬೇಕು ಎಂದು ಹೇಳಿದ್ದು, ಉಪಚುನಾವಣೆಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ತಿಳಿಸಿದ್ದಾರೆ.
12:13 PM (IST) Apr 25
ಜೊಸೆಫ್ ವಿಜಯ್ಗಾಗಿ ತ್ರಿಷಾ ಕೂಡ ಕ್ರಿಶ್ಚಿಯನ್ ಆದ್ರಾ ಅನ್ನೋ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಈಗಾಗ್ಲೇ ವಿಜಯ್ ಪತ್ನಿ ಡಿವೋರ್ಸ್ ಗೆ ಅಪ್ಲೈ ಮಾಡಿದ್ದು, ವಿಚ್ಛೇದನದ ಬಳಿಕ ವಿಜಯ್ - ತ್ರಿಷಾ ಮದುವೆಯಾಗ್ತಾರೆ ಅನ್ನೋ ಸುದ್ದಿ ಇದೆ. ಈ ನಡುವೆ ತ್ರಿಷಾ ಧರ್ಮಾಂತರ ಸುದ್ದಿ ಬೇರೆ ಕಿಚ್ಚು ಹಚ್ಚಿದೆ. ಆದ್ರೆ ಮದ್ವೆ ಆಗೋಗಿದ್ಯಾ?
11:45 AM (IST) Apr 25
11:11 AM (IST) Apr 25
09:53 AM (IST) Apr 25
09:37 AM (IST) Apr 25
Bengaluru devotee donation to Tirupati ಬೆಂಗಳೂರಿನ ಭಕ್ತರೊಬ್ಬರು ತಿರುಪತಿ ವೆಂಕಟೇಶ್ವರ ಸ್ವಾಮಿಗೆ ₹95 ಲಕ್ಷ ಮೌಲ್ಯದ 7 ಚಿನ್ನದ ಪದಕಗಳನ್ನು ದಾನವಾಗಿ ನೀಡಿದ್ದಾರೆ. ಎಂ.ಮಹದೇವಮ್ಮ ಎಂಬ ಭಕ್ತೆಯು ಟಿಟಿಡಿ ಅಧಿಕಾರಿಗಳ ಸಮ್ಮುಖದಲ್ಲಿ ಈ ಬೃಹತ್ ದೇಣಿಗೆಯನ್ನು ಸಮರ್ಪಿಸಿದ್ದಾರೆ.
09:01 AM (IST) Apr 25
ಕಾಠ್ಮಂಡು: ನೇಪಾಳ ಸರ್ಕಾರ ತನ್ನ ನೌಕರರಿಗೆ ಸಂಬಳ ನೀಡುವ ವಿಚಾರದಲ್ಲಿ ಒಂದು ದೊಡ್ಡ ಬದಲಾವಣೆ ತಂದಿದೆ. ಇನ್ಮುಂದೆ ತಿಂಗಳಿಗೊಮ್ಮೆ ಸಂಬಳ ಕೊಡುವ ಬದಲು, ಪ್ರತಿ 15 ದಿನಕ್ಕೊಮ್ಮೆ ಸಂಬಳ ನೀಡಲು ನಿರ್ಧರಿಸಿದೆ.
07:52 AM (IST) Apr 25
Monsoon 2026 ಯುರೋಪ್ ಹವಾಮಾನ ಮುನ್ಸೂಚನೆ ಕೇಂದ್ರದ ಪ್ರಕಾರ, ಈ ವರ್ಷ ಕೇರಳಕ್ಕೆ ಮಾನ್ಸೂನ್ ವಾಡಿಕೆಗಿಂತ ಮುಂಚಿತವಾಗಿ, ಅಂದರೆ ಮೇ ಕೊನೆಯ ವಾರದಲ್ಲೇ ಪ್ರವೇಶಿಸುವ ಸಾಧ್ಯತೆಯಿದೆ. ದಕ್ಷಿಣ ಭಾರತವು ಬೇಸಿಗೆಯ ಬಿಸಿಲಿನಿಂದ ಶೀಘ್ರದಲ್ಲೇ ಮುಕ್ತಿ ಪಡೆಯಲಿದೆ ಎಂದು ವರದಿ ತಿಳಿಸಿದೆ.
07:48 AM (IST) Apr 25