LIVE NOW
Published : Jan 23, 2026, 07:37 AM ISTUpdated : Jan 23, 2026, 10:42 PM IST

India Latest News Live: ಬಾಯ್‌ಫ್ರೆಂಡ್‌ ಜೊತೆ OYO ರೂಮ್‌ಗೆ ಹೋದ 22 ವರ್ಷದ ಯುವತಿ, ಸಿಕ್ಕಿದ್ದು ಹೆಣವಾಗಿ!

ಸಾರಾಂಶ

ವಿಶ್ವದಲ್ಲೇ ಹವಾಮಾನದಲ್ಲಿ ಭಾರಿ ಬದಲಾವಣೆಯಾಗುತ್ತಿದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಇದೀಗ ಭಾರತೀಯ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ದೆಹಲಿಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ದೆಹಲಿ ಹಾಗೂ ಸುತ್ತ ಮುತ್ತ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಎರಡು ದಿನಗಳ ಕಾಲ ಗಾಳಿ ಸಹಿತ ಮಳೆಯಾಗು ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ವಾಯುಭಾರ ಕುಸಿತದ ಪರಿಣಾಮ ದೇಶದ ಕೆಲ ರಾಜ್ಯಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದಿದೆ

 

10:42 PM (IST) Jan 23

ಬಾಯ್‌ಫ್ರೆಂಡ್‌ ಜೊತೆ OYO ರೂಮ್‌ಗೆ ಹೋದ 22 ವರ್ಷದ ಯುವತಿ, ಸಿಕ್ಕಿದ್ದು ಹೆಣವಾಗಿ!

Nagpur Crime: ನಾಗ್ಪುರದಲ್ಲಿ ನಡೆದ ಘಟನೆಯೊಂದು ಇಡೀ ಮಹಾರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ಕಲ್ಮೇಶ್ವರ ರಸ್ತೆಯ ಫೆಟಾರಿ ಗ್ರಾಮದ ಬಳಿಯ ಓಯೋ ಹೋಟೆಲ್‌ನಲ್ಲಿ ಪ್ರೇಮಿಯೊಬ್ಬ ತನ್ನ ಗೆಳತಿಯನ್ನು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

 

Read Full Story

10:16 PM (IST) Jan 23

ಪಿಎಫ್ ಸದಸ್ಯರಿಗೆ ಭರ್ಜರಿ ಸಿಹಿಸುದ್ದಿ - ನಿಮ್ಮ ಖಾತೆಗೆ ಬರಲಿದೆಯಾ ₹46,000 ಬೋನಸ್‌? ಚೆಕ್ ಮಾಡುವ ಸುಲಭ ವಿಧಾನ ಇಲ್ಲಿದೆ!

ಇತ್ತೀಚಿನ ಇಪಿಎಫ್‌ಒ ನಿರ್ಧಾರದ ಪ್ರಕಾರ, ನೀವು ಸಲ್ಲಿಸಿರುವ ಹಣ ಮತ್ತು ಖಾತೆಯ ಬಾಕಿ ಮೊತ್ತವನ್ನು ಅವಲಂಬಿಸಿ ನಿಮ್ಮ ಪಿಎಫ್ ಖಾತೆಗೆ ಸುಮಾರು 46,000 ರೂ.ಗಳ ಬೋನಸ್ ಅಥವಾ ಹೆಚ್ಚುವರಿ ಮೊತ್ತ ಸೇರಬಹುದು.

Read Full Story

09:43 PM (IST) Jan 23

ಕೇರಳ ವಿಧಾನಸಭೆ ಚುನಾವಣೆಗೆ ನಿಲ್ತಾರಾ ಕರ್ನಾಟಕದ ಸೊಸೆ ಜಾಕಿ ಭಾವನಾ? ವೈರಲ್‌ ಸುದ್ದಿಗೆ ನಟಿ ಹೇಳಿದ್ದೇನು..

Actress Bhavana Menon Reacts to Kerala Election Contest Rumors "ಈ ಸುದ್ದಿ ಎಲ್ಲಿಂದ ಬಂತು ಎಂದು ನನಗೆ ತಿಳಿದಿಲ್ಲ, ಅದರಲ್ಲಿ ಯಾವುದೇ ಸತ್ಯವಿಲ್ಲ" ಎಂದು ನಟಿ ಪುನರುಚ್ಚರಿಸಿದ್ದಾರೆ.

 

Read Full Story

09:19 PM (IST) Jan 23

ಇಡೀ ಥಿಯೇಟರ್‌ನಲ್ಲಿ ಒಂದು ಸೀಟು ಬಿಟ್ಟು ಮತ್ತೊಂದು ಸೀಟ್ ಬುಕ್‌ - ಪ್ರೇಮಿಗಳ ದಿನದಂದು ಪ್ರೇಮಿಗಳಿಗೆ ಸಿಂಗಲ್ಸ್‌ಗಳ ಶಾಕ್

 ಪ್ರೇಮಿಗಳ ದಿನದಂದು, ಸಿಂಗಲ್ಸ್‌ಗಳ ಗುಂಪೊಂದು ಪ್ರೇಮಿಗಳು ಜೊತೆಯಾಗಿ ಸಿನಿಮಾ ನೋಡಬಾರದೆಂಬ ಉದ್ದೇಶದಿಂದ ಥಿಯೇಟರ್‌ನ ಎಲ್ಲಾ ಬೆಸ ಸಂಖ್ಯೆಯ ಸೀಟುಗಳನ್ನು ಬುಕ್ ಮಾಡಿದ್ದಾರೆ. ಈ ವಿಚಿತ್ರ ರಿವೇಂಜ್‌ನಿಂದ ಪ್ರೇಮಿಗಳು ಬೇರೆ ಬೇರೆಯಾಗಿ ಕುಳಿತು ಸಿನಿಮಾ ನೋಡಬೇಕಾದ ಪ್ರಸಂಗ ಎದುರಾಗಿದೆ.

Read Full Story

08:57 PM (IST) Jan 23

ಕೇಂದ್ರ ಬಜೆಟ್‌ ಕುರಿತಾಗಿ 10 ಸ್ವಾರಸ್ಯದ ಸಂಗತಿಗಳು, 100ರಲ್ಲಿ 99 ಮಂದಿಗೆ ಇದು ತಿಳಿದಿಲ್ಲ..

Budget History: ಫೆಬ್ರವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ ಕುರಿತಾದ ಆಸಕ್ತಿದಾಯಕ ಮತ್ತು ಅಪರೂಪದ ಸಂಗತಿಗಳ ವಿವರ ಇಲ್ಲಿದೆ. ಈ ಬಾರಿಯ ಕೇಂದ್ರ ಬಜೆಟ್‌ ಫೆಬ್ರವರಿ 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿದ್ದಾರೆ.

Read Full Story

08:17 PM (IST) Jan 23

ಉಚಿತ ನೀರು ಕೊಡದೇ 40 ರೂ ಪಡೆದ ಹೊಟೇಲ್ ಮೇಲೆ ಕೇಸ್ ಹಾಕಿ ಗೆದ್ದ ಗ್ರಾಹಕ - ಸಿಕ್ಕಿದ ಪರಿಹಾರ ಎಷ್ಟು?

ರೆಸ್ಟೋರೆಂಟ್‌ನಲ್ಲಿ ಉಚಿತ ನೀರು ನೀಡಲು ನಿರಾಕರಿಸಿದ್ದಕ್ಕಾಗಿ ಗ್ರಾಹಕರೊಬ್ಬರು ಹೊಟೇಲ್ ವಿರುದ್ಧ ಕೇಸು ಹಾಕಿ ಗೆದ್ದಿದ್ದಾರೆ. ಹೊಟೇಲ್‌ನಲ್ಲಿ ಉಚಿತ ನೀರು ನೀಡುವುದು ಕಡ್ಡಾಯವೇ ಕಾನೂನು ಏನಿದೆ ಇಲ್ಲಿದೆ ಡಿಟೇಲ್ ಸ್ಟೋರಿ..

Read Full Story

08:04 PM (IST) Jan 23

ಆರ್‌ಸಿಬಿ ದೋಖಾ? ಹೊತ್ತು ಮೆರೆಸಿದ ಕನ್ನಡಿಗರಿಗೇ ಅನ್ಯಾಯ ಮಾಡಲು ಹೊರಟಿದೆ RCB!

ಕನ್ನಡಿಗರ ಹೆಮ್ಮೆಯ ತಂಡವಾದ ಆರ್‌ಸಿಬಿ, ತನ್ನ ತವರು ನೆಲವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಡಲು ಹಿಂದೇಟು ಹಾಕುತ್ತಿದೆ. ಸರ್ಕಾರ ಮತ್ತು ಕೆ.ಎಸ್.ಸಿ.ಎ ಅನುಮತಿ ನೀಡಿದ್ದರೂ, ಫ್ರಾಂಚೈಸಿಯು ಬೇರೆಡೆ ಪಂದ್ಯಗಳನ್ನು ಆಯೋಜಿಸಲು ಮುಂದಾಗಿದ್ದು ಆಘಾತಕಾರಿ ಸಂಗತಿಯಾಗಿದೆ.

Read Full Story

07:41 PM (IST) Jan 23

ವರ್ಕ್ ಫ್ರಮ್ ಹೋಮ್ ವಿದ್ಯುತ್ ಬಿಲ್ ಮೇಲೆ ಇನ್ಫೋಸಿಸ್ ಕಣ್ಣು; ಮನೆಯ ವಿದ್ಯುತ್ ಬಳಕೆಯ ಡೇಟಾ ಕೇಳಿದ ಐಟಿ ದೈತ್ಯ!

Infosys Maps WFH Electricity Data to Achieve Carbon Neutrality Goals ಐಟಿ ದೈತ್ಯ ಇನ್ಫೋಸಿಸ್, ತನ್ನ ಸುಸ್ಥಿರತಾ ಕಾರ್ಯಕ್ರಮದ ಭಾಗವಾಗಿ, ಹೈಬ್ರಿಡ್ ಕೆಲಸದ ನೀತಿಯ ಅಡಿಯಲ್ಲಿ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳ ವಿದ್ಯುತ್ ಬಳಕೆಯ ಡೇಟಾವನ್ನು ಸಂಗ್ರಹಿಸುತ್ತಿದೆ.

Read Full Story

07:32 PM (IST) Jan 23

ಗಣರಾಜ್ಯೋತ್ಸವದಂದು ದೆಹಲಿಯ ಪಹರೆಗೆ ಎಐ ಕನ್ನಡಕ! ಇನ್ಮೇಲೆ ಪೋಲಿಸ್ ಡ್ಯೂಟಿ ಫುಲ್ ಡಿಜಿಟಲ್!

ಗಣರಾಜ್ಯೋತ್ಸವದ ಭದ್ರತೆಗಾಗಿ ದೆಹಲಿ ಪೊಲೀಸರು ಇದೇ ಮೊದಲ ಬಾರಿಗೆ ಎಐ ಚಾಲಿತ ಸ್ಮಾರ್ಟ್ ಕನ್ನಡಕಗಳನ್ನು ಬಳಸುತ್ತಿದ್ದಾರೆ. ಫೇಶಿಯಲ್ ರೆಕಗ್ನಿಶನ್ ಮತ್ತು ಥರ್ಮಲ್ ಇಮೇಜಿಂಗ್ ಹೊಂದಿರುವ ಈ ಕನ್ನಡಕಗಳು, ಪೊಲೀಸ್ ಡೇಟಾಬೇಸ್‌ಗೆ ಸಂಪರ್ಕ ಹೊಂದಿ ಶಂಕಿತರು ಆಯುಧಗಳನ್ನು ಸುಲಭವಾಗಿ ಗುರುತಿಸಲು ಸಹಾಯ ಮಾಡುತ್ತವೆ.

Read Full Story

07:19 PM (IST) Jan 23

ಮಸಾಜ್ ಮಾಡಲು ಬಂದು ಗ್ರಾಹಕಿಯ ಮನೆಯಲ್ಲೇ ಆಕೆಯ ಮೇಲೆ ಹಲ್ಲೆ ಮಾಡಿದ ಅರ್ಬನ್ ಕಂಪನಿ ಉದ್ಯೋಗಿ

ಮುಂಬೈನಲ್ಲಿ ಅರ್ಬನ್ ಕಂಪನಿ ಮೂಲಕ ಮಸಾಜ್ ಬುಕ್ ಮಾಡಿದ ಮಹಿಳೆಯೊಬ್ಬರು, ಕಳಪೆ ಮಸಾಜ್ ಬೆಡ್ ಕಾರಣಕ್ಕೆ ಸೇವೆಯನ್ನು ರದ್ದುಗೊಳಿಸಿದ್ದಾರೆ. ಇದರಿಂದ ಕೋಪಗೊಂಡ ಮಸಾಜ್ ಸಿಬ್ಬಂದಿ ಗ್ರಾಹಕಿಯ ಮನೆಯಲ್ಲೇ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಈ ಘಟನೆಯ ವೀಡಿಯೋ ವೈರಲ್ ಆಗಿದೆ.
Read Full Story

06:42 PM (IST) Jan 23

ಅಧ್ಯಕ್ಷರಾದ ಮೇಲೆ ಕುಬೇರನಾದ ಟ್ರಂಪ್‌ - ಒಂದೇ ವರ್ಷದಲ್ಲಿ 12,800 ಕೋಟಿ ರೂ. ಸಂಪತ್ತು ಏರಿಕೆ!

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಪತ್ತು ₹12,810 ಕೋಟಿಗಳಷ್ಟು ಹೆಚ್ಚಾಗಿದೆ. ಈ ಆದಾಯವು ವಿದೇಶಿ ರಿಯಲ್ ಎಸ್ಟೇಟ್ ಯೋಜನೆಗಳು, ಕ್ರಿಪ್ಟೋಕರೆನ್ಸಿ ಮತ್ತು ದೇಣಿಗೆಗಳಿಂದ ಬಂದಿದ್ದು, ಅವರು ತಮ್ಮ ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ.

Read Full Story

06:28 PM (IST) Jan 23

ತಿರುಮಲ ಭಕ್ತರಿಗೆ ಗುಡ್ ನ್ಯೂಸ್; ತಿರುಪತಿ ಸುತ್ತಮುತ್ತಲಿನ ಸ್ಥಳಗಳ ಭೇಟಿಗೆ ವಿಶೇಷ ಪ್ಯಾಕೇಜ್! ಈ ಅವಕಾಶ ಮಿಸ್ ಮಾಡ್ಕೋಬೇಡಿ

ತಿರುಪತಿ: ತಿರುಮಲ ಶ್ರೀವಾರಿಯ ದರ್ಶನ ಪಡೆದ ಭಕ್ತರು ತಿರುಪತಿಯ ಸಮೀಪದ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಆದರೆ, ಸರಿಯಾದ ಮಾಹಿತಿ ಇಲ್ಲದೆ ತೊಂದರೆ ಅನುಭವಿಸುತ್ತಾರೆ. ಅಂತಹವರಿಗಾಗಿಯೇ ಆಂಧ್ರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಉತ್ತಮ ಪ್ಯಾಕೇಜ್ ಒಂದನ್ನು ತಂದಿದೆ.

 

Read Full Story

06:06 PM (IST) Jan 23

'ನಮ್ಮ ಕಾಲದ ಧೀರ ಮಹಿಳೆ..' ಸುನೀತಾ ವಿಲಿಯಮ್ಸ್‌ ಭೇಟಿಯಾದ ನಟ ಪ್ರಕಾಶ್‌ ರಾಜ್‌!

ಕೋಝಿಕ್ಕೋಡ್‌ನಲ್ಲಿ ನಡೆದ ಕೇರಳ ಸಾಹಿತ್ಯ ಉತ್ಸವದಲ್ಲಿ ನಟ ಪ್ರಕಾಶ್ ರಾಜ್ ಅವರು ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರನ್ನು ಭೇಟಿಯಾದರು. ಈ ಸಂಭ್ರಮದ ಕ್ಷಣವನ್ನು ಹಂಚಿಕೊಂಡ ಪ್ರಕಾಶ್ ರಾಜ್, 'ಚಂದ್ರನ ಮೇಲಿದ್ದಂತೆ' ಭಾಸವಾಯಿತು ಎಂದು ಬಣ್ಣಿಸಿದ್ದಾರೆ.

Read Full Story

05:49 PM (IST) Jan 23

ಅಂಗವಿಕಲರ ಕೋಟಾದಡಿ ಎಂಬಿಬಿಎಸ್ ಸೀಟು ಪಡೆಯಲು ತನ್ನದೇ ಕಾಲಿನ ಬೆರಳಗಳನ್ನು ಕತ್ತರಿಸಿದ ಯುವಕ

ಉತ್ತರ ಪ್ರದೇಶದ ಯುವಕನೊಬ್ಬ ಅಂಗವಿಕಲರ ಕೋಟಾದಡಿ ಎಂಬಿಬಿಎಸ್ ಸೀಟು ಪಡೆಯುವ ಉದ್ದೇಶದಿಂದ ತನ್ನ ಕಾಲಿನ ಬೆರಳುಗಳನ್ನು ತಾನೇ ಕತ್ತರಿಸಿಕೊಂಡಿದ್ದಾನೆ. ವೈದ್ಯಕೀಯ ಸೀಟು ಪಡೆಯುವ ತನ್ನ ಮಹತ್ವಾಕಾಂಕ್ಷೆಗಾಗಿ ಆತ ಈ ಕೃತ್ಯ ಎಸಗಿದ್ದಾನೆ.

Read Full Story

05:12 PM (IST) Jan 23

ಟಾಪ್ 10 ಬ್ಯಾಂಕ್‌ಗಳು - ಭಾರತದ ಅತಿದೊಡ್ಡ ಬ್ಯಾಂಕ್ ಯಾವುದು ಗೊತ್ತಾ? SBI, ಕೆನರಾ ಬ್ಯಾಂಕ್‌ಗೆ ಎಷ್ಟನೇ ಸ್ಥಾನ?

ಭಾರತದ ಟಾಪ್ 10 ಅತಿದೊಡ್ಡ ಬ್ಯಾಂಕ್‌ಗಳು: ಸದ್ಯ ಮಾರುಕಟ್ಟೆ ಮೌಲ್ಯದ ಪ್ರಕಾರ ಭಾರತದ ಅತಿದೊಡ್ಡ ಬ್ಯಾಂಕ್ ಯಾವುದು? ಟಾಪ್ 10 ಬ್ಯಾಂಕ್‌ಗಳು ಯಾವುವು? ಯಾವ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯ ಎಷ್ಟಿದೆ? ನೋಡೋಣ ಬನ್ನಿ

Read Full Story

05:02 PM (IST) Jan 23

ಸ್ನೇಹಿತೆಯರ ಒಳಉಡುಪು ಕದಿಯುತ್ತಿದ್ದ ಪತಿ; ಮೂರು ದಶಕಗಳ ಬಳಿಕ ವಿಕೃತ ಹವ್ಯಾಸದಿಂದ ನಡುಬೀದಿಗೆ ಬಂದ ಸಂಸಾರ!

ಮದುವೆಯಾದ 30 ವರ್ಷಗಳ ಬಳಿಕ, ಮಹಿಳೆಯೊಬ್ಬರು ತಮ್ಮ ಪತಿಯ ಆಘಾತಕಾರಿ ದುರಭ್ಯಾಸವನ್ನು ಪತ್ತೆಹಚ್ಚುತ್ತಾರೆ. ತನ್ನ ಸ್ನೇಹಿತರು ಮತ್ತು ಸಂಬಂಧಿಕರ ಒಳುಡುಪುಗಳನ್ನು ಕದಿಯುತ್ತಿದ್ದ ಗಂಡನ ಸತ್ಯ ತಿಳಿದು, ನಂಬಿಕೆ ದ್ರೋಹದಿಂದ ನೊಂದ ಆಕೆ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ.
Read Full Story

04:53 PM (IST) Jan 23

ನಿರಪರಾಧಿ ಎಂದು ಸಾಬೀತು ಮಾಡಲು ಸಾಯಲೇಬೇಕಾ? ಮಾಸ್ಟರ್​ ಆನಂದ್ ನೋವಿನ ನುಡಿ​!

ಕೇರಳದಲ್ಲಿ ಇನ್​ಫ್ಲುಯೆನ್ಸರ್ ಒಬ್ಬರ ನಕಲಿ ವಿಡಿಯೋದಿಂದ ಮನನೊಂದು ದೀಪಕ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಘಟನೆಯ ಬಗ್ಗೆ ನಟ ಮಾಸ್ಟರ್ ಆನಂದ್ ನೋವು ವ್ಯಕ್ತಪಡಿಸಿದ್ದಾರೆ.  ಒಬ್ಬರನ್ನು ತಪ್ಪಿತಸ್ಥರೆಂದು ತೀರ್ಮಾನಿಸುವುದರಿಂದ ಅಮಾಯಕರ ಜೀವ ಹೋಗುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ. 

Read Full Story

04:41 PM (IST) Jan 23

ವೆನಿಜುವೆಲ್ಲಾದ ಅಧ್ಯಕ್ಷರಿಗೆ ಜೊತೆಗಿದ್ದವರೇ ಬೆನ್ನಿಗೆ ಇರಿದರಾ? - ಗಾರ್ಡಿಯನ್ ವರದಿಯಲ್ಲಿ ಏನಿದೆ?

ವ್ಯಕ್ತಿಯ ಅತ್ಯಂತ ದೊಡ್ಡ ಶತ್ರುಗಳು ಯಾವಾಗಲೂ ಆ ವ್ಯಕ್ತಿಯ ಆಪ್ತರೇ ಆಗಿರುತ್ತಾರೆ ಎಂಬ ಮಾತಿದೆ, ದುಷ್ಮನ್ ಬಗಲ್‌ ಮೇಲೆ ಹೈ ಎಂಬ ಮಾತಿನಂತೆ ಈಗ ವೆನಿಜುವೆಲಾದ ಮಾಜಿ ನಿರ್ಗಮಿತ ಅಧ್ಯಕ್ಷ ನಿಕೋಲಸ್ ಮಡುರೊ ಅವರ ವಿಷಯದಲ್ಲೂ ಇದೇ ಆಯ್ತಾ ? ಹೌದು ಅಂತಿದೆ ದಿ ಗಾರ್ಡಿಯನ್‌ನ ಇತ್ತೀಚಿನ ವರದಿ.

Read Full Story

04:39 PM (IST) Jan 23

ಅಕ್ರಮ ಸಂಬಂಧ ಹೊಂದಿದ್ದ ಪ್ರಿಯತಮನ ಜೊತೆ ಹೆಂಡ್ತಿಗೆ ಮದ್ವೆ ಮಾಡಿಸಿದ ಗಂಡ! ಮಕ್ಕಳು ಹೋಗಿದ್ದು ಯಾರ ಜೊತೆ?

ಆಶಿಶ್ ತಿವಾರಿ ಎಂಬಾತ ತನ್ನ ಪತ್ನಿ ಪಿಂಕಿಯನ್ನು ಆಕೆಯ ಪ್ರಿಯಕರನೊಂದಿಗೆ ನೋಡಬಾರದ ಸ್ಥಿತಿಯಲ್ಲಿ ನೋಡುತ್ತಾನೆ. ನಂತರ ಗ್ರಾಮಸ್ಥರ ಸಮ್ಮುಖದಲ್ಲಿ, ಪತಿಯೇ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ದೇವಸ್ಥಾನದಲ್ಲಿ ಮದುವೆ ಮಾಡಿಸುತ್ತಾನೆ.  

Read Full Story

04:28 PM (IST) Jan 23

ಅವಳಿ ಸೋದರರ ಜೊತೆ ಹುಡುಗಿಯ ಡೇಟಿಂಗ್‌, ಯಾರ ಮಗುವಿಗೆ ಪ್ರಗ್ನೆಂಟ್‌ ಅನ್ನೋದನ್ನ ತಿಳಿಯಲು ಡಿಎನ್‌ಎ ಟೆಸ್ಟ್‌!

Unique Relationship: ಥಾಯ್ಲೆಂಡ್‌ನ 24 ವರ್ಷದ ಫಾಹ್ ಎಂಬ ಯುವತಿ, ಸುವಾ ಮತ್ತು ಸಿಂಗ್ ಎಂಬ ಅವಳಿ ಸೋದರರೊಂದಿಗೆ ಏಕಕಾಲದಲ್ಲಿ ಡೇಟಿಂಗ್ ಮಾಡುತ್ತಿದ್ದಾರೆ. ತಮ್ಮ ಈ ವಿಶಿಷ್ಟ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾದರೂ, ಅವರು ತಮ್ಮ ಪ್ರಣಯ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Read Full Story

03:11 PM (IST) Jan 23

ಚಿರಂಜೀವಿ ಹಿಟ್ ಸಿನಿಮಾ 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾ ಬಗ್ಗೆ ಆಚಾರ್ಯ ಡೈರೆಕ್ಟರ್ ಕೊರಟಾಲ ಶಿವ ಹೇಳಿದ್ದೇನು?

ಮೆಗಾಸ್ಟಾರ್ ಚಿರಂಜೀವಿ ಅವರ 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾ ಬಗ್ಗೆ ಕೊರಟಾಲ ಶಿವ ಪ್ರತಿಕ್ರಿಯಿಸಿದ್ದಾರೆ. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆದ ಹಿನ್ನೆಲೆಯಲ್ಲಿ ಕೊರಟಾಲ ಅವರು ಆಸಕ್ತಿಕರ ಕಾಮೆಂಟ್‌ಗಳನ್ನು ಮಾಡಿದ್ದಾರೆ.  

Read Full Story

02:32 PM (IST) Jan 23

ಮಣಿಪುರ - ಕುಕಿ ಸಮುದಾಯದ ಪ್ರೇಯಸಿ ನೋಡಲು ಬಂದ ಮೈಥಿ ಸಮುದಾಯದ ಯುವಕನ ಕೊಲೆ

ಮಣಿಪುರದಲ್ಲಿ ಕುಕಿ ಸಮುದಾಯದ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದ ಮೈಥಿಯೀ ಸಮುದಾಯದ ರಿಷಿಕಾಂತ್ ಎಂಬ ಯುವಕನನ್ನು ಅಪಹರಿಸಿ, ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಅಮಾನುಷ ಕೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಈ ಘಟನೆಯು ರಾಜ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ನಿರ್ಮಿಸಿದೆ.

Read Full Story

01:02 PM (IST) Jan 23

ಬೆಂಗಳೂರಲ್ಲಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು ದಿಢೀರ್ ಸ್ಫೋಟ, ಕಂಗಾಲಾದ ಜನ

ಬೆಂಗಳೂರಲ್ಲಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು ದಿಢೀರ್ ಸ್ಫೋಟ, ಕಂಗಾಲಾದ ಜನ, ಕಾರಣ ಇದೀಗ ಚಿನ್ನದ ಬೆಲೆ 10 ಗ್ರಾಂಗೆ 1.6 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಈ ಮೂಲಕ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದಿದೆ.

Read Full Story

12:00 PM (IST) Jan 23

ಮಂಗಳೂರಿಗೆ ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲು, ಇಂದು ಮೋದಿ ಉದ್ಘಾಟನೆ

ಮಂಗಳೂರಿಗೆ ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲು, ಇಂದು ಮೋದಿ ಉದ್ಘಾಟನೆ ಮಾಡಲಿದ್ದಾರೆ. ಮೂರು ಅಮೃತ ಭಾರತ್ ರೈಲು ಹಾಗೂ ಮತ್ತೊಂದು ನೂತನ ರೈಲಿಗೆ ಮೋದಿ ಚಾಲನೆ ನೀಡಲಿದ್ದಾರೆ. ಯಾವ ಮಾರ್ಗದಲ್ಲಿ ಸಂಚಾರ?

Read Full Story

10:29 AM (IST) Jan 23

ಎರಡನೇ ಭಾರಿ ಪತ್ನಿಯಿಂದ ಮೋಸ, ಜಿಪಿಎಸ್ ಟ್ರಾಕರ್‌ನಿಂದ ಹೊಟೆಲ್ ಸರಸ ಕಂಡು ಕಣ್ಣೀರಿಟ್ಟ ಪತಿ

ಎರಡನೇ ಭಾರಿ ಪತ್ನಿಯಿಂದ ಮೋಸ, ಜಿಪಿಎಸ್ ಟ್ರಾಕರ್‌ನಿಂದ ಹೊಟೆಲ್ ಸರಸ ಕಂಡು ಕಣ್ಣೀರಿಟ್ಟ ಪತಿ, 15 ವರ್ಷದ ಸಂಸಾರದಲ್ಲಿ ಪತ್ನಿ ಎರಡನೇ ಬಾರಿಗೆ ಈ ರೀತಿ ಮೋಸ ಮಾಡಿದ್ದಾಳೆ ಎಂದು ಪತ್ನಿ ಕಣ್ಣೀರಿಟ್ಟಿದ್ದಾನೆ.

Read Full Story

09:00 AM (IST) Jan 23

ಬೆಂಗಳೂರಲ್ಲಿ ಆಡೋದಾದ್ರೆ ಜ.27ಕ್ಕೆ ಮೊದಲು ಹೇಳಿ - ಆರ್‌ಸಿಬಿಗೆ ಬಿಸಿಸಿಐ ಖಡಕ್ ಡೆಡ್‌ಲೈನ್

ನವದೆಹಲಿ: 19ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಯೋಜನೆಗೆ ಭರದ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಸಿಸಿಐ ಅಂತಿಮ ಡೆಡ್‌ಲೈನ್ ನೀಡಿದೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್ ಇಲ್ಲಿದೆ ನೋಡಿ

Read Full Story

08:19 AM (IST) Jan 23

ಒಂದೇ ಕಾರನ್ನು 8 ಬಾರಿ ಮಾರಿದ ಚಾಲಾಕಿ - 24 ಗಂಟೆಯೊಳಗೆ ಮಾರಿದ ಕಾರನ್ನು ಕದಿಯುತ್ತಿದ್ದ ಕಳ್ಳನ ಬಂಧನ

ವ್ಯಕ್ತಿಯೊಬ್ಬ ಒಂದೇ ಕಾರನ್ನು ನಕಲಿ ದಾಖಲೆ ಬಳಸಿ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ 8 ಬಾರಿ ಮಾರಾಟ ಮಾಡಿದ್ದಾನೆ. ಕಾರು ಮಾರಾಟವಾದ 24 ಗಂಟೆಯೊಳಗೆ ಅದನ್ನು ಮತ್ತೆ ಕದಿಯುತ್ತಿದ್ದ ಈತನನ್ನು ಪೊಲೀಸರು ಬಂಧಿಸಿದ್ದು, ಆತನಿಗೆ 98 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

Read Full Story

07:38 AM (IST) Jan 23

ದೇಶದ ಇತರೆಡೆ ಮೋಡ ಕವಿತ ವಾತಾವರಣ

ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇತ್ತ ಇತರ ರಾಜ್ಯಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇದೇ ವೇಳೆ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣ ಇರಲಿದೆ ಎಂದು ಎಚ್ಚರಿಕೆ ನೀಡಿದೆ


More Trending News