LIVE NOW
Published : Jul 22, 2026, 07:16 AM ISTUpdated : Jul 22, 2026, 01:48 PM IST

India Latest News Live: ಕಾಂಗ್ರೆಸ್‌ನಿಂದ ದೇಶ ಒಡೆಯಲು ಯತ್ನ, ರಾಹುಲ್ ಗಾಂಧಿ ವಿದೇಶಿ ಭೇಟಿ ಬಗ್ಗೆ ತನಿಖೆಯಾಗಲಿ - ಸಂಸದ ನಿಶಿಕಾಂತ್ ದುಬೆ

ಸಾರಾಂಶ

ನವದೆಹಲಿ: ನೀಟ್‌ ಅಕ್ರಮದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಆಗ್ರಹಿಸಿ ಕಾಂಗ್ರೆಸ್‌ ಧರಣಿ ನಡೆಸಿದ ಬೆನ್ನಲ್ಲೇ, ಈ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಮಂಗಳವಾರ ಘೋಷಿಸಿದ್ದಾರೆ.

ಪ್ರಧಾನಿ ನಿವಾಸದ ಮುಂದೆ ಧರಣಿ ಕುಳಿತಿದ್ದ ರಾಹುಲ್‌ ಗಾಂಧಿ ಮನವೊಲಿಕೆ ಯತ್ನ ವಿಫಲವಾದ ಬಳಿಕ ಹೇಳಿಕೆ ಬಿಡುಗಡೆ ಮಾಡಿದ ಅವರು, ‘ನೀಟ್ ಮತ್ತು ಅದಕ್ಕೆ ಸಂಬಂಧಿಸಿದ ಹೋರಾಟಗಳಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಸರ್ಕಾರ ಸಿದ್ಧವಿದೆ. ಆದರೆ ನಿಯಮಗಳ ಪ್ರಕಾರ ಈ ಗಂಭೀರ ವಿಷಯದ ಕುರಿತು ಔಪಚಾರಿಕ ಚರ್ಚೆಗಾಗಿ ಕಾಂಗ್ರೆಸ್ ಇಲ್ಲಿಯವರೆಗೆ ಯಾವುದೇ ಸೂಚನೆ ನೀಡಿಲ್ಲ’ ಎಂದರು.

‘ಧರಣಿ ನಡೆಸಲು ಪ್ರಧಾನಿ ನಿವಾಸ ಸೂಕ್ತ ಜಾಗವಲ್ಲ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ, ಸರ್ಕಾರ ನನ್ನನ್ನು ಕಳಿಸಿತು. ಆದರೆ ರಾಹುಲ್‌ ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಅವರ ನಡವಳಿಕೆ ಪ್ರಜಾಪ್ರಭುತ್ವದ ತತ್ವಗಳೊಂದಿಗೆ ಹೊಂದಿಕೆಯಾಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

01:48 PM (IST) Jul 22

ಕಾಂಗ್ರೆಸ್‌ನಿಂದ ದೇಶ ಒಡೆಯಲು ಯತ್ನ, ರಾಹುಲ್ ಗಾಂಧಿ ವಿದೇಶಿ ಭೇಟಿ ಬಗ್ಗೆ ತನಿಖೆಯಾಗಲಿ - ಸಂಸದ ನಿಶಿಕಾಂತ್ ದುಬೆ

ಕಾಂಗ್ರೆಸ್ 'ದೇಶ ಒಡೆಯಲು' ಯತ್ನಿಸುತ್ತಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿಗೆ ಸೊರೊಸ್ ಫೌಂಡೇಶನ್‌ನಿಂದ ಹಣ ಬರುತ್ತಿದೆ ಎಂಬ ಆರೋಪಿಸಿದರು ಇದೇ ವೇಳೆ ಅವರ ವಿದೇಶಿ ಭೇಟಿಗಳ ಬಗ್ಗೆ ತನಿಖೆಗೆ ಒತ್ತಾಯಿಸಿದರು.

Read Full Story

01:25 PM (IST) Jul 22

ವರ್ಷವಿಡೀ ಆಹಾರವಿಲ್ಲದೇ ಹೇಗೆ ಬದುಕುತ್ತೆ ಚೇಳು? ಆರು ದಿನ ಉಸಿರಾಟವಿಲ್ಲದೇ ಇರುತ್ತೆ

ಚೇಳುಗಳು ಆಹಾರವಿಲ್ಲದೆ ಒಂದು ವರ್ಷ ಮತ್ತು ಉಸಿರಾಟವಿಲ್ಲದೆ ಆರು ದಿನಗಳವರೆಗೆ ಬದುಕಬಲ್ಲವು. ಅಲ್ಲದೆ, ಈ ಜೀವಿಗಳು ಯುವಿ ಲೈಟ್‌ನಲ್ಲಿ ಹೊಳೆಯುತ್ತವೆ ಮತ್ತು 400 ಮಿಲಿಯನ್ ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿವೆ.

Read Full Story

01:24 PM (IST) Jul 22

ಆಲ್ಕೋಹಾಲ್ ದೇಹದೊಳಗೆ ಇಷ್ಟೊಂದು ಸಮಯ ಇರುತ್ತಾ? ಕೊನೆಗೂ ನಿಜವಾದ ಟೈಮ್‌ಲೈನ್ ಪತ್ತೆಹಚ್ಚಿದ ವೈದ್ಯರು

ಮದ್ಯಪಾನ ಮಾಡಿದ ನಂತರ, ದೇಹದಿಂದ ಆಲ್ಕೋಹಾಲ್ ಸಂಪೂರ್ಣವಾಗಿ ಹೊರಹೋಗಲು ಸುಮಾರು 20 ರಿಂದ 25 ಗಂಟೆಗಳು ಬೇಕಾಗುತ್ತದೆ. ಆಲ್ಕೋಹಾಲ್ ಚಯಾಪಚಯವು ವ್ಯಕ್ತಿಯ ಆರೋಗ್ಯ, ತಳಿಶಾಸ್ತ್ರ ಮತ್ತು ಸೇವನೆಯ ಪ್ರಮಾಣವನ್ನು ಅವಲಂಬಿಸಿರುತ್ತದೆ. ರಕ್ತ, ಮೂತ್ರ, ಮತ್ತು ಕೂದಲಿನಂತಹ ವಿವಿಧ ಪರೀಕ್ಷೆಗಳ ಮೂಲಕ ದೇಹದಲ್ಲಿ ಆಲ್ಕೋಹಾಲ್ ಇರುವಿಕೆಯನ್ನು ಬೇರೆ ಬೇರೆ ಸಮಯದವರೆಗೆ ಪತ್ತೆಹಚ್ಚಬಹುದು.
Read Full Story

12:43 PM (IST) Jul 22

ಎದುರಾಳಿಗೂ ಗೊತ್ತು ತಾಕತ್ತು; ಸೂರ್ಯವಂಶಿ ಬಗ್ಗೆ ಜಿಂಬಾಬ್ವೆ ಟೀಂ ಅಚ್ಚರಿ ಹೇಳಿಕೆ

Zimbabwe Cricket Team Captain Sikandar Raza on Vaibhav Suryavanshi ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೂ ಮುನ್ನ, ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ಎದುರಾಳಿ ತಂಡದ ನಾಯಕ ಸಿಕಂದರ್ ರಾಜಾ ಮಾತನಾಡಿದ್ದಾರೆ.

Read Full Story

12:13 PM (IST) Jul 22

ಜಿಯಾ ಪಾತ್ರದ ಮೂಲಕ ಜಾಗತಿಕ ಮನ್ನಣೆ ಪಡೆದ 18 ವರ್ಷದ ಕಿವುಡಿ ನಟಿ ಭೀಕರ ಕಾರು ಅಪಘಾತದಲ್ಲಿ ಸಾವು!

'ಗಾಡ್ಜಿಲ್ಲಾ x ಕಾಂಗ್' ಖ್ಯಾತಿಯ ಯುವ ಕಿವುಡಿ ನಟಿ ಕೇಯ್ಲೀ ಹಾಟಲ್ (18) ಮೇರಿಲ್ಯಾಂಡ್‌ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. ಈ ಲೇಖನವು ಅಪಘಾತದ ವಿವರಗಳು, ಅವರ ಸಂಕ್ಷಿಪ್ತ ಆದರೆ ಪ್ರಭಾವಶಾಲಿ ವೃತ್ತಿಜೀವನ, ಮತ್ತು ಹಾಲಿವುಡ್ ಗಣ್ಯರು ಸಲ್ಲಿಸಿದ ಶ್ರದ್ಧಾಂಜಲಿಯ ಕುರಿತು ವರದಿ ಮಾಡುತ್ತದೆ.
Read Full Story

11:40 AM (IST) Jul 22

ಭಾರತಕ್ಕೆ ಬಂತು ಕೇವಲ ₹8.75 ಲಕ್ಷಕ್ಕೆ ಲಕ್ಸುರಿ ಫೀಚರ್ಸ್‌ಗಳ 'ಬಸಾಲ್ಟ್ ಎಕ್ಸ್ ಕಂಫರ್ಟ್ ಎಡಿಷನ್' ಫ್ರೆಂಚ್ ಕಾರು!

ಸಿಟ್ರನ್ ತನ್ನ 108ನೇ ವಾರ್ಷಿಕೋತ್ಸವದ ಅಂಗವಾಗಿ, ಭಾರತದಲ್ಲಿ 'ಬಸಾಲ್ಟ್ ಎಕ್ಸ್ ಕಂಫರ್ಟ್ ಎಡಿಷನ್' ಕಾರನ್ನು ಬಿಡುಗಡೆ ಮಾಡಿದೆ. ಈ ವಿಶೇಷ ಆವೃತ್ತಿಯು ಕೈಗೆಟುಕುವ ದರದಲ್ಲಿ ಪ್ರೀಮಿಯಂ ಲೆದರೆಟ್ ಸೀಟುಗಳು, JBL ಆಡಿಯೋ ಸಿಸ್ಟಮ್ ಮತ್ತು ಡ್ಯಾಶ್ ಕ್ಯಾಮೆರಾದಂತಹ ಸುಧಾರಿತ ಸೌಲಭ್ಯಗಳನ್ನು ನೀಡುತ್ತದೆ.
Read Full Story

11:26 AM (IST) Jul 22

ಪ್ರಧಾನಿ ನಿವಾಸ ಸಂಸತ್ ಭವನದಿಂದ ಎಷ್ಟು ದೂರದಲ್ಲಿದೆ? ಪ್ರತಿಭಟನೆ ನಡೆಸಲು ಯಾರ ಅನುಮತಿ ಬೇಕು?

ನೀಟ್ ಪೇಪರ್ ಲೀಕ್ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಳೆದೊಂದು ತಿಂಗಳಿಂದ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್ ಕೂಡ ಮಂಗಳವಾರ ಪ್ರಧಾನಿ ನಿವಾಸ ಎದುರು ಪ್ರತಿಭಟನೆ ನಡೆಸಿ ಹೈಡ್ರಾಮಾ ಸೃಷ್ಟಿಸಿತು.  ಸಂಸತ್ತಿನಿಂದ ಪ್ರಧಾನಿ ನಿವಾಸಕ್ಕೆ ಇರುವ ದೂರವೆಷ್ಟು?

Read Full Story

11:04 AM (IST) Jul 22

Aishwarya Rai - 'ನನ್ನನ್ನು ಟೀಕಿಸಿದವರು ಟೀಕಿಸುತ್ತಲೇ ಇರಲಿ, ನಾನು ಮಾತ್ರ ಎಂದೆಂದಿಗೂ ರಾಜಕುಮಾರಿಯೇ'-ಐಶ್ವರ್ಯಾ ರೈ

ಫೋಟೋ ವೈರಲ್ ಆಗುತ್ತಿದ್ದಂತೆಯೇ ಕಾಮೆಂಟ್ ಬಾಕ್ಸ್‌ಗಳು ತುಂಬಿ ತುಳುಕುತ್ತಿವೆ. "ಐಶ್ ಈಸ್ ಬ್ಯಾಕ್!" ಎನ್ನುವವರಿಂದ ಹಿಡಿದು, "ಬಾಲಿವುಡ್‌ನ ನಿಜವಾದ ಕ್ವೀನ್ ಇವರೇ" ಎನ್ನುವವರವರೆಗೆ ಎಲ್ಲರೂ ಫಿದಾ ಆಗಿದ್ದಾರೆ. "ಆತ್ಮವಿಶ್ವಾಸ ಅಂದ್ರೆ ಐಶ್ವರ್ಯಾ, ಸೌಂದರ್ಯ ಅಂದ್ರೆ ಐಶ್ವರ್ಯಾ" ಎನ್ನುತ್ತಿದ್ದಾರೆ.

Read Full Story

10:23 AM (IST) Jul 22

ಕಡಲಲ್ಲಿ ಭಾರತೀಯ ಸೇನೆಯ ಶೌರ್ಯ - ತನ್ನ 12 ಸಿಬ್ಬಂದಿಯ ಜೀವ ಉಳಿಸಿದ್ದಕ್ಕೆ ಭಾರತಕ್ಕೆ ಚೀನಾ ಧನ್ಯವಾದ!

ಕೇರಳ ಕರಾವಳಿಯಲ್ಲಿ ನಡೆದ ಹಡಗು ದುರಂತದಲ್ಲಿ 12 ಚೀನೀ ಸಿಬ್ಬಂದಿಯನ್ನು ರಕ್ಷಿಸಿದ್ದಕ್ಕಾಗಿ ಭಾರತೀಯ ಸಶಸ್ತ್ರ ಪಡೆಗಳನ್ನು ಚೀನಾ ಶ್ಲಾಘಿಸಿದೆ. ಚೀನಾದ ರಕ್ಷಣಾ ಅಟ್ಯಾಚ್, ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸುತ್ತಿರುವುದನ್ನು ಸ್ವಾಗತಿಸಿ, ಭವಿಷ್ಯದಲ್ಲಿ ಹೆಚ್ಚಿನ ಮಿಲಿಟರಿ ಸಹಕಾರಕ್ಕೆ ಆಶಯ ವ್ಯಕ್ತಪಡಿಸಿದ್ದಾರೆ.
Read Full Story

07:43 AM (IST) Jul 22

ಖರ್ಗೆ ಜನ್ಮದಿನದ ಶುಭ ಕೋರುವ ನೆಪದಲ್ಲಿ ಪ್ರಧಾನಿ ನಿವಾಸದ ಎದುರು ಕಾಂಗ್ರೆಸ್ ನಾಯಕರ ಪ್ರತಿಭಟನೆಯ ಪ್ಲಾನ್ ಹೇಗಿತ್ತು?

ಮಲ್ಲಿಕಾರ್ಜುನ ಖರ್ಗೆಯವರ ಜನ್ಮದಿನದಂದು ಶುಭ ಕೋರುವ ನೆಪದಲ್ಲಿ ಅವರ ನಿವಾಸದಲ್ಲಿ ಸೇರಿದ ಕಾಂಗ್ರೆಸ್ ನಾಯಕರು, ಭದ್ರತಾ ಪಡೆಗಳಿಗೂ ಸುಳಿವು ನೀಡದೆ ದಿಢೀರನೆ ಪ್ರಧಾನಿ ನಿವಾಸದತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಗೌಪ್ಯ ನಡೆಯ ಮೂಲಕ, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
Read Full Story

More Trending News