Published : Jul 22, 2026, 07:16 AM ISTUpdated : Jul 22, 2026, 11:18 PM IST

India Latest News Live: 'ವಿದ್ಯಾರ್ಥಿಗಳಿಗೆ ಬೆಂಬಲವಿದೆ, ರಾಜಕೀಯವಾಗಿ ಇದನ್ನ ಹೈಜಾಕ್‌ ಮಾಡಬೇಡಿ..' ಜಂತರ್ ಮಂತರ್‌ ಪ್ರತಿಭಟನೆಗೆ ಸಲ್ಮಾನ್‌ ಖಾನ್‌ ಸಪೋರ್ಟ್‌

ಸಾರಾಂಶ

ನವದೆಹಲಿ: ನೀಟ್‌ ಅಕ್ರಮದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಆಗ್ರಹಿಸಿ ಕಾಂಗ್ರೆಸ್‌ ಧರಣಿ ನಡೆಸಿದ ಬೆನ್ನಲ್ಲೇ, ಈ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಮಂಗಳವಾರ ಘೋಷಿಸಿದ್ದಾರೆ.

ಪ್ರಧಾನಿ ನಿವಾಸದ ಮುಂದೆ ಧರಣಿ ಕುಳಿತಿದ್ದ ರಾಹುಲ್‌ ಗಾಂಧಿ ಮನವೊಲಿಕೆ ಯತ್ನ ವಿಫಲವಾದ ಬಳಿಕ ಹೇಳಿಕೆ ಬಿಡುಗಡೆ ಮಾಡಿದ ಅವರು, ‘ನೀಟ್ ಮತ್ತು ಅದಕ್ಕೆ ಸಂಬಂಧಿಸಿದ ಹೋರಾಟಗಳಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಸರ್ಕಾರ ಸಿದ್ಧವಿದೆ. ಆದರೆ ನಿಯಮಗಳ ಪ್ರಕಾರ ಈ ಗಂಭೀರ ವಿಷಯದ ಕುರಿತು ಔಪಚಾರಿಕ ಚರ್ಚೆಗಾಗಿ ಕಾಂಗ್ರೆಸ್ ಇಲ್ಲಿಯವರೆಗೆ ಯಾವುದೇ ಸೂಚನೆ ನೀಡಿಲ್ಲ’ ಎಂದರು.

‘ಧರಣಿ ನಡೆಸಲು ಪ್ರಧಾನಿ ನಿವಾಸ ಸೂಕ್ತ ಜಾಗವಲ್ಲ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ, ಸರ್ಕಾರ ನನ್ನನ್ನು ಕಳಿಸಿತು. ಆದರೆ ರಾಹುಲ್‌ ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಅವರ ನಡವಳಿಕೆ ಪ್ರಜಾಪ್ರಭುತ್ವದ ತತ್ವಗಳೊಂದಿಗೆ ಹೊಂದಿಕೆಯಾಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

11:18 PM (IST) Jul 22

'ವಿದ್ಯಾರ್ಥಿಗಳಿಗೆ ಬೆಂಬಲವಿದೆ, ರಾಜಕೀಯವಾಗಿ ಇದನ್ನ ಹೈಜಾಕ್‌ ಮಾಡಬೇಡಿ..' ಜಂತರ್ ಮಂತರ್‌ ಪ್ರತಿಭಟನೆಗೆ ಸಲ್ಮಾನ್‌ ಖಾನ್‌ ಸಪೋರ್ಟ್‌

ನೀಟ್‌ ಪ್ರಶ್ನೆ ಪತ್ರಿಕೆ ಲೀಕ್‌ ವಿವಾದದ ಹಿನ್ನೆಲೆಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ನಟ ಸಲ್ಮಾನ್ ಖಾನ್ ಬೆಂಬಲ ಸೂಚಿಸಿದ್ದಾರೆ. ವಿದ್ಯಾರ್ಥಿಗಳ ಶಾಂತಿಯುತ ಹೋರಾಟವನ್ನು ಶ್ಲಾಘಿಸಿರುವ ಅವರು, ಈ ಚಳವಳಿಯನ್ನು ರಾಜಕೀಯವಾಗಿ ಹೈಜಾಕ್ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

Read Full Story

10:54 PM (IST) Jul 22

'ಬೆಂಕಿ ಇಲ್ಲದೆ ಹೊಗೆ ಬರಲ್ಲ'; ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಹೊಸ ಬಾಂಬ್ ಸಿಡಿಸಿದ ರವಿಚಂದ್ರನ್ ಅಶ್ವಿನ್

ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ನಿವೃತ್ತಿ ವದಂತಿ ಹಬ್ಬಿತ್ತು. ಆದರೆ, ಶತಕ ಸಿಡಿಸಿ ಉತ್ತರ ನೀಡಿದ್ದ ರೋಹಿತ್ ಕುರಿತ ವದಂತಿಗಳ ಹಿಂದೆ ಸತ್ಯಾಂಶವಿತ್ತು ಎಂದು ರವಿಚಂದ್ರನ್ ಅಶ್ವಿನ್ ಇದೀಗ ಹೇಳಿದ್ದು, ಅವರ ಭವಿಷ್ಯದ ಬಗ್ಗೆಯೂ ಮಾತನಾಡಿದ್ದಾರೆ.
Read Full Story

09:53 PM (IST) Jul 22

'ಅದೆಲ್ಲಾ ಕ್ರಿಕೆಟ್‌ನಲ್ಲಿ ಕಾಮನ್'; ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಅನುಭವಿಸಿದ ಘಟನೆ ಬಿಚ್ಚಿಟ್ಟ ವೈಭವ್ ಸೂರ್ಯವಂಶಿ

ಇಂಗ್ಲೆಂಡ್ ಸರಣಿಯಿಂದ ಕೈಬಿಟ್ಟ ಬಳಿಕ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಮತ್ತೆ ಪುಟಿದೇಳಲು ಸಜ್ಜಾಗಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಗೆ ಆತ್ಮವಿಶ್ವಾಸದಿಂದಿರುವ ಅವರು, ಈ ಹಿಂದೆ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಶತಕ ಸಿಡಿಸಿದ್ದ ಹರಾರೆ ಮೈದಾನದಲ್ಲೇ ಮತ್ತೆ ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದ್ದಾರೆ.
Read Full Story

09:38 PM (IST) Jul 22

'ಇದೇ ಮೈದಾನದಲ್ಲಿ ಇತಿಹಾಸ ಬರೆದಿದ್ದೆವು' - ಹರಾರೆ ತಲುಪುತ್ತಿದ್ದಂತೆ ಭಾವಕರಾದ ವೈಭವ್ ಸೂರ್ಯವಂಶಿ!

ಜಿಂಬಾಬ್ವೆಯ ಹರಾರೆಗೆ ಆಗಮಿಸಿರುವ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ತಮ್ಮ ವೃತ್ತಿಜೀವನದ ಏಳು-ಬೀಳುಗಳ ಬಗ್ಗೆ ಮಾತನಾಡಿದ್ದಾರೆ. ಇದೇ ಮೈದಾನದಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ಕ್ಷಣವನ್ನು ನೆನಪಿಸಿಕೊಂಡ ಅವರು, ಜಿಂಬಾಬ್ವೆ ವಿರುದ್ಧದ ಸರಣಿಗೆ ಆತ್ಮವಿಶ್ವಾಸದಿಂದ ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ.
Read Full Story

09:01 PM (IST) Jul 22

ಟೀಂ ಇಂಡಿಯಾದ ಮೊದಲ ಟಿ20 ಕ್ಯಾಪ್ಟನ್ ಯಾರು ಗೊತ್ತಾ? ಧೋನಿಯಂತೂ ಅಲ್ಲವೇ ಅಲ್ಲ

ಭಾರತ ಪುರುಷರ ಕ್ರಿಕೆಟ್ ತಂಡವು ಟಿ20 ಮಾದರಿಯಲ್ಲಿ ಜಗತ್ತಿನ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಮೂರು ಟಿ20 ವಿಶ್ವಕಪ್ ಗೆದ್ದ ಏಕೈಕ ತಂಡ ಎನ್ನುವ ಹೆಗ್ಗಳಿಕೆ ಭಾರತಕ್ಕಿದೆ. ಅಂದಹಾಗೆ ಮೊದಲ ಬಾರಿಗೆ ಭಾರತ ಟಿ20 ತಂಡವನ್ನು ನಾಯಕನಾಗಿ ಮುನ್ನಡೆಸಿದ್ದು ಯಾರು ಗೊತ್ತಾ?

Read Full Story

08:53 PM (IST) Jul 22

CJP ಪ್ರತಿಭಟನೆ ಬೆನ್ನಲ್ಲಿಯೇ ತನ್ನ ಇನ್ಸ್‌ಟಾಗ್ರಾಮ್‌ ಖಾತೆ ಡಿಆಕ್ಟಿವೇಟ್‌ ಮಾಡಿದ Naimisha Pradhan

'ಕಾಕ್ರೋಚ್ ಜನತಾ ಪಾರ್ಟಿ'ಯ ನೀಟ್ ಪ್ರತಿಭಟನೆ ಮತ್ತು ತೀವ್ರ ಟ್ರೋಲಿಂಗ್‌ನಿಂದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.

Read Full Story

08:36 PM (IST) Jul 22

CJP ಪ್ರತಿಭಟನೆ ಕುರಿತು ನೀಟ್​ ಟಾಪರ್​ ಅಚ್ಚರಿಯ​ ಹೇಳಿಕೆ - ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ

ನೀಟ್​ ಮರುಪರೀಕ್ಷೆ ಕುರಿತ ಪ್ರತಿಭಟನೆಗಳ ನಡುವೆ, ಟಾಪರ್ ಪನ್ಶುಲ್ ಬನ್ಸಲ್ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮರುಪರೀಕ್ಷೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಹೆಚ್ಚು ಅಧ್ಯಯನಕ್ಕೆ ಸಿಕ್ಕ ಅವಕಾಶವೆಂದು ಪರಿಗಣಿಸಿ, ತಮ್ಮ ಅಂಕಗಳನ್ನು 706 ರಿಂದ 715ಕ್ಕೆ ಸುಧಾರಿಸಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಸಮಯ ವ್ಯರ್ಥ ಮಾಡುವ ಬದಲು ಓದುವುದೇ ಲೇಸು ಎಂಬುದು ಅವರ ನಿಲುವಾಗಿದೆ.
Read Full Story

08:00 PM (IST) Jul 22

ಗಂಡನನ್ನೇ ಎರಡು ಪಾಲು ಮಾಡಿದ ಪಂಚಾಯಿತಿ - ಇಬ್ಬರು ಹೆಂಡ್ತಿಯರಿಗೆ 50 - 50- ದೇಶದ ಗಮನ ಸೆಳೆದ ಕೇಸ್​

ಜಾರ್ಖಂಡ್‌ನ ರಾಂಪುರದಲ್ಲಿ ಪಂಚಾಯಿತಿಯೊಂದು ವಿಚಿತ್ರ ತೀರ್ಪು ನೀಡಿದೆ. ಇಬ್ಬರು ಹೆಂಡತಿಯರನ್ನು ಹೊಂದಿದ್ದ ಪತಿಯನ್ನು ವಾರದಲ್ಲಿ ಮೂರು ದಿನ ಒಬ್ಬರ ಬಳಿ, ಇನ್ನು ಮೂರು ದಿನ ಮತ್ತೊಬ್ಬರ ಬಳಿ ಇರುವಂತೆ ಹಂಚಿಕೆ ಮಾಡಿದ್ದು, ಈ ತೀರ್ಪಿಗೆ ಇಬ್ಬರೂ ಪತ್ನಿಯರು ಒಪ್ಪಿಕೊಂಡಿದ್ದಾರೆ.
Read Full Story

07:18 PM (IST) Jul 22

IND vs ZIM - ಹೊಸ ಚಾನೆಲ್‌ನಲ್ಲಿ ಈ ಸಲ ಭಾರತ-ಜಿಂಬಾಬ್ವೆ ಟಿ20 ಮ್ಯಾಚ್ ನೇರ ಪ್ರಸಾರ; ಆದ್ರೆ ಒಂದು ರುಪಾಯಿ ಖರ್ಚಿಲ್ಲದೇ ಇಲ್ಲಿ ಫ್ರೀ ಆಗಿ ಮ್ಯಾಚ್ ನೋಡಿ

ಹರಾರೆ: ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಸರಣಿಯು ಹೊಸ ಚಾನೆಲ್‌ನಲ್ಲಿ ಭಾರತದಲ್ಲಿ ನೇರ ಪ್ರಸಾರವಾಗಲಿದೆ. ಇದರ ಜತೆಗೆ ಒಂದು ರುಪಾಯಿ ಖರ್ಚಿಲ್ಲದೇ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಈ ಚಾನೆಲ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.

Read Full Story

05:44 PM (IST) Jul 22

ದಿನನಿತ್ಯ ಬಳಸುವ ಈ 5 ಸಾಮಾನ್ಯ ಐಟಂ ನಿಮ್ಮ ಲಿವರ್‌ ಅನ್ನು ಆಲ್ಕೋಹಾಲ್‌ಗಿಂತಲೂ ಹೆಚ್ಚು ಹಾನಿ ಮಾಡ್ತವೆ..! ಜಾಗ್ರತೆಯಿರಲಿ

ಈ ಹೆಡ್‌ಲೈನ್ ನೋಡಿದ ನಿಮಗೂ ಅಚ್ಚರಿಯೆನಿಸಬಹುದು. ಆಲ್ಕೋಹಾಲ್ ವಿಚಾರ ಬಿಡಿ, ಇದರ ಜತೆಗೆ ದಿನನಿತ್ಯ ಬಳಸುವ ಈ ಐದು ಸಾಮಾನ್ಯ ಐಟಂಗಳು ನಿಮ್ಮ ಲಿವರ್ ಹಾಳು ಮಾಡಿಬಿಡಬಹುದು. ಈ ಉತ್ಫನ್ನಗಳು ನಿಮ್ಮ ಲಿವರ್‌ ಅನ್ನು ಆಲ್ಕೋಹಾಲ್‌ಗಿಂತ ಹೆಚ್ಚು ಹಾನಿ ಮಾಡುತ್ತವೆ ಎಂದರೇ ನೀವು ನಂಬಲೇಬೇಕು.

Read Full Story

05:03 PM (IST) Jul 22

ದೇಶದ ಇಡೀ ಶಿಕ್ಷಣ ವ್ಯವಸ್ಥೆ ಅಕ್ರಮದ ಕೂಪ - ಕಳೆದ 10 ವರ್ಷಗಳಲ್ಲಿ 152 ಪೇಪರ್‌ ಲೀಕ್‌, ಒಬ್ಬರಿಗೂ ಶಿಕ್ಷೆಯಾಗಿಲ್ಲ ಎಂದ ರಾಹುಲ್‌ ಗಾಂಧಿ

ಕಳೆದ 10 ವರ್ಷಗಳಲ್ಲಿ 152 ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೂ ಒಬ್ಬರಿಗೂ ಶಿಕ್ಷೆಯಾಗಿಲ್ಲ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದ ಶಿಕ್ಷಣ ವ್ಯವಸ್ಥೆಯು ಅಕ್ರಮಗಳ ಕೂಪವಾಗಿದೆ ಎಂದು ಅರೋಪಿಸಿದ್ದಾರೆ.

Read Full Story

04:35 PM (IST) Jul 22

ರಾಮಮಂದಿರ ಟ್ರಸ್ಟ್ ಸಿಇಒ ಹುದ್ದೆಗೆ ಭಾರಿ ಪೈಪೋಟಿ - 5,500ಕ್ಕೂ ಹೆಚ್ಚು ಅರ್ಜಿ; ಆಗಸ್ಟ್ 15ರ ವೇಳೆಗೆ ಆಯ್ಕೆ ಪ್ರಕ್ರಿಯೆ ಅಂತ್ಯ!

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸಿಇಒ ಹುದ್ದೆಗೆ 5,500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಮೂವರು ಸದಸ್ಯರ ಸಮಿತಿಯು ಅರ್ಜಿಗಳನ್ನು ಪರಿಶೀಲಿಸುತ್ತಿದ್ದು, ಆಗಸ್ಟ್ 15ರೊಳಗೆ ಅಂತಿಮ ಆಯ್ಕೆ ನಡೆಯಲಿದೆ.

Read Full Story

04:35 PM (IST) Jul 22

6,6,6,6,6 ಪಾಕ್‌ ಬೌಲರ್ ಅಬ್ರಾರ್‌ ಚೆಂಡಾಡಿದ ನೀತಾ ಅಂಬಾನಿ ಮಾಲಿಕತ್ವದ ಮುಂಬೈ ತಂಡದ ವಿಸ್ಪೋಟಕ ಬ್ಯಾಟರ್! ವಿಡಿಯೋ ವೈರಲ್

2026ರ ದಿ ಹಂಡ್ರೆಡ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ, ಎಂಐ ಲಂಡನ್ ತಂಡವು ಸನ್‌ರೈಸರ್ಸ್ ಲೀಡ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ನಿಕೋಲಸ್ ಪೂರನ್ ಅವರ ಸ್ಫೋಟಕ ಅರ್ಧಶತಕ (58*) ಮತ್ತು ನಾಯಕ ಸ್ಯಾಮ್ ಕರ್ರನ್ ಅವರ 60 ರನ್‌ಗಳ ನೆರವಿನಿಂದ ಎಂಐ ಲಂಡನ್ ಸುಲಭವಾಗಿ ಗುರಿ ತಲುಪಿತು. ಈ ಮೂಲಕ ನೀತಾ ಅಂಬಾನಿ ಮಾಲೀಕತ್ವದ ತಂಡವು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
Read Full Story

04:29 PM (IST) Jul 22

ಬ್ರಿಟನ್ ನೂತನ ಪ್ರಧಾನಿಯಾಗಿ ಆ್ಯಂಡಿ ಅಧಿಕಾರಕ್ಕೆ, ಸಚಿವ ಸಂಪುಟದಲ್ಲಿ ಇಬ್ಬರು ಭಾರತೀಯ ಮೂಲದವರಿಗೆ ಪ್ರಮುಖ ಸ್ಥಾನ

ಬ್ರಿಟನ್‌ನ ನೂತನ ಪ್ರಧಾನಿ ಆ್ಯಂಡಿ ಬರ್ನ್‌ಹ್ಯಾಮ್ ಅವರ ಸಂಪುಟದಲ್ಲಿ ಭಾರತೀಯ ಮೂಲದ ಇಬ್ಬರು ಸಂಸದರು ಪ್ರಮುಖ ಸ್ಥಾನ ಪಡೆದಿದ್ದಾರೆ. ಬಿಹಾರ ಮೂಲದ ಕಾನಿಷ್ಕ ನಾರಾಯಣ್ ದೇಶದ ಮೊದಲ 'ಕೃತಕ ಬುದ್ಧಿಮತ್ತೆ' ಸಚಿವರಾದರೆ, ಕೊಲ್ಕತ್ತಾ ಮೂಲದ ಲಿಸಾ ನಂದಿ ಸಾಂಸ್ಕೃತಿಕ ಸಚಿವೆಯಾಗಿ ಮುಂದುವರೆದಿದ್ದಾರೆ.

Read Full Story

04:20 PM (IST) Jul 22

Toxic - ಟಾಕ್ಸಿಕ್- 'ವಯಸ್ಕರಿಗಾಗಿ' ಮಾಡಿರೋ ಸಿನಿಮಾ ಹೌದು, ಏಕೆ? ಯಶ್ ಸಿನಿಮಾದ ಗುಟ್ಟು ಬಿಚ್ಚಿಟ್ಟ ನಿರ್ಮಾಪಕರು!

"ಇದು ಕೇವಲ ಆಕ್ಷನ್ ಸಿನಿಮಾ ಅಲ್ಲ, ಇದರಲ್ಲಿ ಗೀತು ಮೋಹನ್ ದಾಸ್ ಅವರ ವಿಶಿಷ್ಟ ನಿರೂಪಣಾ ಶೈಲಿ ಮತ್ತು ಆಳವಾದ ಭಾವನೆಗಳಿವೆ. ನಾವೇ ಹೇಳಿದಂತೆ, ಇದು ದೊಡ್ಡವರಿಗಾಗಿಯೇ (ವಯಸ್ಕರು) ಮಾಡಿರುವ ಸಿನಿಮಾ.. ಬಹಳಷ್ಟು ಗುಟ್ಟು ಬಿಚ್ಚಿಟ್ಟಿದ್ದಾರೆ ಟಾಕ್ಸಿಕ್ ಸಿನಿಮಾ ನಿರ್ಮಾಪಕರು.

Read Full Story

04:10 PM (IST) Jul 22

ಟಿವಿಎಸ್‌ ಬೈಕ್‌, ಸ್ಕೂಟರ್‌ ಖರೀದಿ ಮಾಡೋ ಪ್ಲ್ಯಾನ್‌ ಇದ್ರೆ ಆದಷ್ಟು ಬೇಗ ಮಾಡಿ, ಇಲ್ಲಿದೆ ಬಿಗ್‌ ರೀಸನ್‌!

ಟಿವಿಎಸ್ ಮೋಟಾರ್ ಕಂಪನಿಯು ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು 2ನೇ ತ್ರೈಮಾಸಿಕದಲ್ಲಿ ಹೆಚ್ಚಿಸಲು ನಿರ್ಧರಿಸಿದೆ. ಇದರ ಜೊತೆಗೆ, ಬ್ರಿಟಿಷ್ ಬ್ರ್ಯಾಂಡ್ 'ನಾರ್ಟನ್' ವಿಸ್ತರಣೆ, ಎಲೆಕ್ಟ್ರಿಕ್ ವಾಹನಗಳು ಮತ್ತು ಒಟ್ಟಾರೆ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕಾಗಿ ಹೂಡಿಕೆ ಮಾಡಲು ಕಂಪನಿ ಮುಂದಾಗಿದೆ.

Read Full Story

03:53 PM (IST) Jul 22

ಗೌತಮ್ ಅದಾನಿಗೆ ಭರ್ಜರಿ ಲಾಭ, ಮೊದಲ ತ್ರೈಮಾಸಿಕದಲ್ಲಿ 4,806 ಕೋಟಿ ರೂಪಾಯಿಗೆ ಜಿಗಿತ

ಗೌತಮ್ ಅದಾನಿ ಮಾಲೀಕತ್ವದ ಅದಾನಿ ಪವರ್ ಲಾಭದಲ್ಲಿ ಭರ್ಜರಿ ಜಿಗಿತ ಕಂಡಿದೆ. ಮೊದಲ ತ್ರೈಮಾಸಿಕದಲ್ಲಿ ಶೇಕಡಾ 42ರಷ್ಟು ಏರಿಕೆ ಕಂಡಿದೆ. ಈ ಮೂಲಕ 4,806 ಕೋಟಿ ರೂಪಾಯಿ ಜೇಬಿಗಿಸಿದ್ದಾರೆ.

Read Full Story

03:35 PM (IST) Jul 22

IND vs ZIM T20 - ಐರ್ಲೆಂಡ್, ಇಂಗ್ಲೆಂಡ್ ಎದುರು ಸೋತು ಬಂದಿರುವ ಭಾರತಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಜಿಂಬಾಬ್ವೆ ಕ್ಯಾಪ್ಟನ್ ಸಿಕಂದರ್ ರಾಜಾ!

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ಬಳಿಕ ಭಾರತ ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಸರಣಿ ಆರಂಭಕ್ಕೂ ಮುನ್ನವೇ ಜಿಂಬಾಬ್ವೆ ನಾಯಕ ಸಿಕಂದರ್ ರಾಜಾ, ತಮ್ಮ ತಂಡವನ್ನು ಹಗುರವಾಗಿ ಪರಿಗಣಿಸದಂತೆ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ಈ ಸರಣಿ ರೋಚಕವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Read Full Story

03:27 PM (IST) Jul 22

ಪೆಹಲ್ಗಾಂ ಬಳಿಕ ಜಮ್ಮು ಕಾಶ್ಮೀರದಲ್ಲಿ ಮೊದಲ ಭಯೋತ್ಪಾದಕ ದಾಳಿ, ಅಮರನಾಥ ಭದ್ರತಾ ಪೊಲೀಸ್ ಸಾವು

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಬಳಿ ಭಯೋತ್ಪಾದಕ ದಾಳಿ ನಡೆದಿದೆ. ಪೊಲೀಸ್ ಪಾರ್ಟಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಓರ್ವ ಪೊಲೀಸ್ ಮೃತಪಟ್ಟಿದ್ದಾರೆ. ದಾಳಿ ಬೆನ್ನಲ್ಲೇ ಅಮರನಾಥ ಯಾತ್ರೆಗೆ ಹೆಚ್ಚಿನ ಸೆಕ್ಯೂರಿಟಿ ನೀಡಲಾಗಿದೆ.

Read Full Story

03:20 PM (IST) Jul 22

ಸತ್ತ ವಿಷಪೂರಿತ ಹಾವುಗಳು ಜೀವಂತ ಹಾವುಗಳಿಗಿಂತ ಅಪಾಯಕಾರಿ ಯಾಕೆ? ಇದುವೇ ಆ ರಹಸ್ಯ ನೋಡಿ

ಸತ್ತ ವಿಷಪೂರಿತ ಹಾವುಗಳು ಜೀವಂತ ಹಾವುಗಳಷ್ಟೇ ಅಪಾಯಕಾರಿ. ಸಾವಿನ ಹಲವು ಗಂಟೆಗಳ ನಂತರವೂ ಅವುಗಳ ಹಲ್ಲುಗಳಲ್ಲಿನ ಹೆಮೊಟಾಕ್ಸಿನ್ ಎಂಬ ನರವಿಷ ಸಕ್ರಿಯವಾಗಿರುತ್ತದೆ. ಆಕಸ್ಮಿಕವಾಗಿ ಈ ಹಲ್ಲುಗಳು ಚರ್ಮಕ್ಕೆ ತಾಗಿದರೆ, ವಿಷ ದೇಹವನ್ನು ಪ್ರವೇಶಿಸಿ ಸಾವು ಸಂಭವಿಸಬಹುದು.
Read Full Story

03:07 PM (IST) Jul 22

ಲವ್, ಡೇಟಿಂಗ್.. ನಟ ಕರಣ್ ವಾಹಿ ಹೇಳಿಕೆಯಿಂದ ಇಂಟರ್ನೆಟ್‌ಗೆ ಬೆಂಕಿ, ಕಾಮೆಂಟ್ ಸೆಕ್ಷನ್ ರಣರಂಗ!

ಕರಣ್ ವಾಹಿ ವೀಡಿಯೋ ವೈರಲ್ ಆಗ್ತಿದ್ದಂತೆ ಕಾಮೆಂಟ್ ಸೆಕ್ಷನ್ ರಣರಂಗದಂತಾಗಿದೆ. ಕೆಲವರು "ಕರಣ್ ಹೇಳಿರೋದು ಸರಿಯಾಗಿದೆ, ಇಂದಿನ ಸಂಬಂಧಗಳಲ್ಲಿ ಆಳವಿಲ್ಲ" ಎಂದು ಬೆಂಬಲಿಸಿದರೆ, ಇನ್ನು ಕೆಲವರು "ಸ್ವಾತಂತ್ರ್ಯ ಅಂದ್ರೆ ಏನು ಅಂತ ನಿಮಗೆ ಗೊತ್ತಿಲ್ಲ, ಹೆಣ್ಣುಮಕ್ಕಳು ಪ್ರಶ್ನೆ ಮಾಡೋದನ್ನ ಕಲಿತಿದ್ದಾರೆ ಅಷ್ಟೇ" ಎಂದು ಕ್ಲಾಸ್ ತಗೊಂಡಿದ್ದಾರೆ.

Read Full Story

02:25 PM (IST) Jul 22

ಇಂಗ್ಲೆಂಡ್ ಎದುರಿನ ಸರಣಿ ಸೋಲಿನ ಬೆನ್ನಲ್ಲೇ ಗೌತಮ್ ಗಂಭೀರ್ ಇನ್ನೆಷ್ಟು ಸಮಯ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಇರ್ತಾರೆ?

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡವು ಹೀನಾಯ ಸೋಲು ಕಂಡಿದೆ. ಸತತ ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದರೂ, ಈ ಕಳಪೆ ಪ್ರದರ್ಶನವು ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಸ್ಥಾನದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story

01:48 PM (IST) Jul 22

ಕಾಂಗ್ರೆಸ್‌ನಿಂದ ದೇಶ ಒಡೆಯಲು ಯತ್ನ, ರಾಹುಲ್ ಗಾಂಧಿ ವಿದೇಶಿ ಭೇಟಿ ಬಗ್ಗೆ ತನಿಖೆಯಾಗಲಿ - ಸಂಸದ ನಿಶಿಕಾಂತ್ ದುಬೆ

ಕಾಂಗ್ರೆಸ್ 'ದೇಶ ಒಡೆಯಲು' ಯತ್ನಿಸುತ್ತಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿಗೆ ಸೊರೊಸ್ ಫೌಂಡೇಶನ್‌ನಿಂದ ಹಣ ಬರುತ್ತಿದೆ ಎಂಬ ಆರೋಪಿಸಿದರು ಇದೇ ವೇಳೆ ಅವರ ವಿದೇಶಿ ಭೇಟಿಗಳ ಬಗ್ಗೆ ತನಿಖೆಗೆ ಒತ್ತಾಯಿಸಿದರು.

Read Full Story

01:25 PM (IST) Jul 22

ವರ್ಷವಿಡೀ ಆಹಾರವಿಲ್ಲದೇ ಹೇಗೆ ಬದುಕುತ್ತೆ ಚೇಳು? ಆರು ದಿನ ಉಸಿರಾಟವಿಲ್ಲದೇ ಇರುತ್ತೆ

ಚೇಳುಗಳು ಆಹಾರವಿಲ್ಲದೆ ಒಂದು ವರ್ಷ ಮತ್ತು ಉಸಿರಾಟವಿಲ್ಲದೆ ಆರು ದಿನಗಳವರೆಗೆ ಬದುಕಬಲ್ಲವು. ಅಲ್ಲದೆ, ಈ ಜೀವಿಗಳು ಯುವಿ ಲೈಟ್‌ನಲ್ಲಿ ಹೊಳೆಯುತ್ತವೆ ಮತ್ತು 400 ಮಿಲಿಯನ್ ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿವೆ.

Read Full Story

01:24 PM (IST) Jul 22

ಆಲ್ಕೋಹಾಲ್ ದೇಹದೊಳಗೆ ಇಷ್ಟೊಂದು ಸಮಯ ಇರುತ್ತಾ? ಕೊನೆಗೂ ನಿಜವಾದ ಟೈಮ್‌ಲೈನ್ ಪತ್ತೆಹಚ್ಚಿದ ವೈದ್ಯರು

ಮದ್ಯಪಾನ ಮಾಡಿದ ನಂತರ, ದೇಹದಿಂದ ಆಲ್ಕೋಹಾಲ್ ಸಂಪೂರ್ಣವಾಗಿ ಹೊರಹೋಗಲು ಸುಮಾರು 20 ರಿಂದ 25 ಗಂಟೆಗಳು ಬೇಕಾಗುತ್ತದೆ. ಆಲ್ಕೋಹಾಲ್ ಚಯಾಪಚಯವು ವ್ಯಕ್ತಿಯ ಆರೋಗ್ಯ, ತಳಿಶಾಸ್ತ್ರ ಮತ್ತು ಸೇವನೆಯ ಪ್ರಮಾಣವನ್ನು ಅವಲಂಬಿಸಿರುತ್ತದೆ. ರಕ್ತ, ಮೂತ್ರ, ಮತ್ತು ಕೂದಲಿನಂತಹ ವಿವಿಧ ಪರೀಕ್ಷೆಗಳ ಮೂಲಕ ದೇಹದಲ್ಲಿ ಆಲ್ಕೋಹಾಲ್ ಇರುವಿಕೆಯನ್ನು ಬೇರೆ ಬೇರೆ ಸಮಯದವರೆಗೆ ಪತ್ತೆಹಚ್ಚಬಹುದು.
Read Full Story

12:43 PM (IST) Jul 22

ಎದುರಾಳಿಗೂ ಗೊತ್ತು ತಾಕತ್ತು; ಸೂರ್ಯವಂಶಿ ಬಗ್ಗೆ ಜಿಂಬಾಬ್ವೆ ಟೀಂ ಅಚ್ಚರಿ ಹೇಳಿಕೆ

Zimbabwe Cricket Team Captain Sikandar Raza on Vaibhav Suryavanshi ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೂ ಮುನ್ನ, ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ಎದುರಾಳಿ ತಂಡದ ನಾಯಕ ಸಿಕಂದರ್ ರಾಜಾ ಮಾತನಾಡಿದ್ದಾರೆ.

Read Full Story

12:13 PM (IST) Jul 22

ಜಿಯಾ ಪಾತ್ರದ ಮೂಲಕ ಜಾಗತಿಕ ಮನ್ನಣೆ ಪಡೆದ 18 ವರ್ಷದ ಕಿವುಡಿ ನಟಿ ಭೀಕರ ಕಾರು ಅಪಘಾತದಲ್ಲಿ ಸಾವು!

'ಗಾಡ್ಜಿಲ್ಲಾ x ಕಾಂಗ್' ಖ್ಯಾತಿಯ ಯುವ ಕಿವುಡಿ ನಟಿ ಕೇಯ್ಲೀ ಹಾಟಲ್ (18) ಮೇರಿಲ್ಯಾಂಡ್‌ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. ಈ ಲೇಖನವು ಅಪಘಾತದ ವಿವರಗಳು, ಅವರ ಸಂಕ್ಷಿಪ್ತ ಆದರೆ ಪ್ರಭಾವಶಾಲಿ ವೃತ್ತಿಜೀವನ, ಮತ್ತು ಹಾಲಿವುಡ್ ಗಣ್ಯರು ಸಲ್ಲಿಸಿದ ಶ್ರದ್ಧಾಂಜಲಿಯ ಕುರಿತು ವರದಿ ಮಾಡುತ್ತದೆ.
Read Full Story

11:40 AM (IST) Jul 22

ಭಾರತಕ್ಕೆ ಬಂತು ಕೇವಲ ₹8.75 ಲಕ್ಷಕ್ಕೆ ಲಕ್ಸುರಿ ಫೀಚರ್ಸ್‌ಗಳ 'ಬಸಾಲ್ಟ್ ಎಕ್ಸ್ ಕಂಫರ್ಟ್ ಎಡಿಷನ್' ಫ್ರೆಂಚ್ ಕಾರು!

ಸಿಟ್ರನ್ ತನ್ನ 108ನೇ ವಾರ್ಷಿಕೋತ್ಸವದ ಅಂಗವಾಗಿ, ಭಾರತದಲ್ಲಿ 'ಬಸಾಲ್ಟ್ ಎಕ್ಸ್ ಕಂಫರ್ಟ್ ಎಡಿಷನ್' ಕಾರನ್ನು ಬಿಡುಗಡೆ ಮಾಡಿದೆ. ಈ ವಿಶೇಷ ಆವೃತ್ತಿಯು ಕೈಗೆಟುಕುವ ದರದಲ್ಲಿ ಪ್ರೀಮಿಯಂ ಲೆದರೆಟ್ ಸೀಟುಗಳು, JBL ಆಡಿಯೋ ಸಿಸ್ಟಮ್ ಮತ್ತು ಡ್ಯಾಶ್ ಕ್ಯಾಮೆರಾದಂತಹ ಸುಧಾರಿತ ಸೌಲಭ್ಯಗಳನ್ನು ನೀಡುತ್ತದೆ.
Read Full Story

11:26 AM (IST) Jul 22

ಪ್ರಧಾನಿ ನಿವಾಸ ಸಂಸತ್ ಭವನದಿಂದ ಎಷ್ಟು ದೂರದಲ್ಲಿದೆ? ಪ್ರತಿಭಟನೆ ನಡೆಸಲು ಯಾರ ಅನುಮತಿ ಬೇಕು?

ನೀಟ್ ಪೇಪರ್ ಲೀಕ್ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಳೆದೊಂದು ತಿಂಗಳಿಂದ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್ ಕೂಡ ಮಂಗಳವಾರ ಪ್ರಧಾನಿ ನಿವಾಸ ಎದುರು ಪ್ರತಿಭಟನೆ ನಡೆಸಿ ಹೈಡ್ರಾಮಾ ಸೃಷ್ಟಿಸಿತು.  ಸಂಸತ್ತಿನಿಂದ ಪ್ರಧಾನಿ ನಿವಾಸಕ್ಕೆ ಇರುವ ದೂರವೆಷ್ಟು?

Read Full Story

11:04 AM (IST) Jul 22

Aishwarya Rai - 'ನನ್ನನ್ನು ಟೀಕಿಸಿದವರು ಟೀಕಿಸುತ್ತಲೇ ಇರಲಿ, ನಾನು ಮಾತ್ರ ಎಂದೆಂದಿಗೂ ರಾಜಕುಮಾರಿಯೇ'-ಐಶ್ವರ್ಯಾ ರೈ

ಫೋಟೋ ವೈರಲ್ ಆಗುತ್ತಿದ್ದಂತೆಯೇ ಕಾಮೆಂಟ್ ಬಾಕ್ಸ್‌ಗಳು ತುಂಬಿ ತುಳುಕುತ್ತಿವೆ. "ಐಶ್ ಈಸ್ ಬ್ಯಾಕ್!" ಎನ್ನುವವರಿಂದ ಹಿಡಿದು, "ಬಾಲಿವುಡ್‌ನ ನಿಜವಾದ ಕ್ವೀನ್ ಇವರೇ" ಎನ್ನುವವರವರೆಗೆ ಎಲ್ಲರೂ ಫಿದಾ ಆಗಿದ್ದಾರೆ. "ಆತ್ಮವಿಶ್ವಾಸ ಅಂದ್ರೆ ಐಶ್ವರ್ಯಾ, ಸೌಂದರ್ಯ ಅಂದ್ರೆ ಐಶ್ವರ್ಯಾ" ಎನ್ನುತ್ತಿದ್ದಾರೆ.

Read Full Story

10:23 AM (IST) Jul 22

ಕಡಲಲ್ಲಿ ಭಾರತೀಯ ಸೇನೆಯ ಶೌರ್ಯ - ತನ್ನ 12 ಸಿಬ್ಬಂದಿಯ ಜೀವ ಉಳಿಸಿದ್ದಕ್ಕೆ ಭಾರತಕ್ಕೆ ಚೀನಾ ಧನ್ಯವಾದ!

ಕೇರಳ ಕರಾವಳಿಯಲ್ಲಿ ನಡೆದ ಹಡಗು ದುರಂತದಲ್ಲಿ 12 ಚೀನೀ ಸಿಬ್ಬಂದಿಯನ್ನು ರಕ್ಷಿಸಿದ್ದಕ್ಕಾಗಿ ಭಾರತೀಯ ಸಶಸ್ತ್ರ ಪಡೆಗಳನ್ನು ಚೀನಾ ಶ್ಲಾಘಿಸಿದೆ. ಚೀನಾದ ರಕ್ಷಣಾ ಅಟ್ಯಾಚ್, ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸುತ್ತಿರುವುದನ್ನು ಸ್ವಾಗತಿಸಿ, ಭವಿಷ್ಯದಲ್ಲಿ ಹೆಚ್ಚಿನ ಮಿಲಿಟರಿ ಸಹಕಾರಕ್ಕೆ ಆಶಯ ವ್ಯಕ್ತಪಡಿಸಿದ್ದಾರೆ.
Read Full Story

07:43 AM (IST) Jul 22

ಖರ್ಗೆ ಜನ್ಮದಿನದ ಶುಭ ಕೋರುವ ನೆಪದಲ್ಲಿ ಪ್ರಧಾನಿ ನಿವಾಸದ ಎದುರು ಕಾಂಗ್ರೆಸ್ ನಾಯಕರ ಪ್ರತಿಭಟನೆಯ ಪ್ಲಾನ್ ಹೇಗಿತ್ತು?

ಮಲ್ಲಿಕಾರ್ಜುನ ಖರ್ಗೆಯವರ ಜನ್ಮದಿನದಂದು ಶುಭ ಕೋರುವ ನೆಪದಲ್ಲಿ ಅವರ ನಿವಾಸದಲ್ಲಿ ಸೇರಿದ ಕಾಂಗ್ರೆಸ್ ನಾಯಕರು, ಭದ್ರತಾ ಪಡೆಗಳಿಗೂ ಸುಳಿವು ನೀಡದೆ ದಿಢೀರನೆ ಪ್ರಧಾನಿ ನಿವಾಸದತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಗೌಪ್ಯ ನಡೆಯ ಮೂಲಕ, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
Read Full Story

More Trending News