LIVE NOW
Published : Feb 02, 2026, 06:54 AM ISTUpdated : Feb 02, 2026, 09:16 AM IST

India Latest News Live: ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಯಾರಿಗೇನು ಲಾಭ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

ಸಾರಾಂಶ

ನವದೆಹಲಿ: ಭಾನುವಾರ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಕೇಂದ್ರ ಬಜೆಟ್‌ ಬಗ್ಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅಸಮಾದಾನ ವ್ಯಕ್ತಪಡಿಸಿದ್ದು, ‘ ಈ ಬಜೆಟ್‌ನಲ್ಲಿ ದೇಶದ ನೈಜ ಬಿಕ್ಕಟ್ಟುಗಳನ್ನು ಮೂಲೆಗುಂಪು ಮಾಡಲಾಗಿದೆ’ ಎಂದು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾಹುಲ್‌ , ‘ ಭಾರತದ ನಿಜವಾದ ಬಿಕ್ಕಟ್ಟುಗಳನ್ನು ಗಮನಿಸಿ ಅದರ ಪರಿಹಾರ ಕಂಡುಕೊಳ್ಳಲು ಸರಿಯಾದ ಮಾರ್ಗವನ್ನು ಕಂಡುಕೊಳ್ಳದೆ ಮೂಲೆಗುಂಪು ಮಾಡಲಾಗಿದೆ. ನಿರುದ್ಯೋಗಿ ಯುವಕರು, ಉತ್ಪಾದನೆ ಕುಸಿತ, ಹೂಡಿಕೆದಾರರಿಂದ ಬಂಡವಾಳ ಹಿಂತೆಗೆತ, ಮನೆಯ ಉಳಿತಾಯ ಕುಸಿತ, ರೈತರು ಸಮಸ್ಯೆ, ಜಾಗತಿಕ ಆಘಾತಗಳು ಎದುರಾಗಿವೆ. ಆದರೆ ಅದೆಲ್ಲವನ್ನೂ ನಿರ್ಲಕ್ಷಿಸಲಾಗಿದೆ’ ಎಂದು ಹರಿಹಾಯ್ದಿದ್ದಾರೆ.

09:16 AM (IST) Feb 02

ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಯಾರಿಗೇನು ಲಾಭ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

ಈ ಲೇಖನವು ಕೃಷಿ, ಶಿಕ್ಷಣ, ಆರೋಗ್ಯ, ಮತ್ತು ಸಾರಿಗೆ ಸೇರಿದಂತೆ 10 ಪ್ರಮುಖ ಕ್ಷೇತ್ರಗಳಲ್ಲಿ ಭಾರತದ ಭವಿಷ್ಯದ ಅಭಿವೃದ್ಧಿ ಯೋಜನೆಗಳನ್ನು ವಿವರಿಸುತ್ತದೆ. ರೈತರಿಗೆ ಬೆಂಬಲ, ಹೊಸ ರೈಲ್ವೆ ಕಾರಿಡಾರ್‌ಗಳು, ಮತ್ತು ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯಂತಹ ಪ್ರಮುಖಾಂಶಗಳನ್ನು ಇದು ಒಳಗೊಂಡಿದೆ.
Read Full Story

08:58 AM (IST) Feb 02

ಇದೇ ಮೊದಲ ಸಲ ₹50 ಲಕ್ಷ ಕೋಟಿ ದಾಟಿದ ಕೇಂದ್ರ ಬಜೆಟ್ ಗಾತ್ರ! ಮೋದಿ ಸರ್ಕಾರ ಈ ವರ್ಷ ಮಾಡುವ ಸಾಲವೆಷ್ಟು?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನ ಒಟ್ಟು ಗಾತ್ರ ₹53.47 ಲಕ್ಷ ಕೋಟಿಯಾಗಿದ್ದು, ಇದೇ ಮೊದಲ ಬಾರಿಗೆ ₹50 ಲಕ್ಷ ಕೋಟಿ ಗಡಿ ದಾಟಿದೆ. 2026-27ನೇ ಸಾಲಿನಲ್ಲಿ ಶೇ.4.3ರಷ್ಟು ವಿತ್ತೀಯ ಕೊರತೆ ನೀಗಿಸಲು ಸರ್ಕಾರವು ಮಾರುಕಟ್ಟೆಯಿಂದ ಸುಮಾರು ₹17 ಲಕ್ಷ ಕೋಟಿ ಸಾಲ ಮಾಡುವ ಗುರಿ ಹೊಂದಿದೆ.

Read Full Story

08:37 AM (IST) Feb 02

ಡೇಟಾ ಸೆಂಟರ್ ತೆರೆದರೆ 21 ವರ್ಷ ತೆರಿಗೆ ರಜೆ! ಏನಿದು ಡೇಟಾ ಸೆಂಟರ್? ಮಂಗಳೂರಿಗೆ ಸಿಗುತ್ತಾ ಚಾನ್ಸ್?

ಭಾರತವನ್ನು ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ಮೂಲಸೌಕರ್ಯದ ಜಾಗತಿಕ ಹಬ್ ಆಗಿಸುವ ಗುರಿಯೊಂದಿಗೆ, ಕೇಂದ್ರ ಸರ್ಕಾರವು ದೇಶದಲ್ಲಿ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸುವ ವಿದೇಶಿ ಕಂಪನಿಗಳಿಗೆ 2047ರವರೆಗೆ ತೆರಿಗೆ ರಜೆ ಘೋಷಿಸಿದೆ.  

Read Full Story

08:36 AM (IST) Feb 02

ಮ್ಯೂಸಿಕ್‌ Live Concertನಲ್ಲಿ ಗಾಯಕನ ಪ್ರೈವೇಟ್ ಪಾರ್ಟ್‌ಗೆ ಕೈ ಹಾಕಿದ ಯುವತಿ - ವಿಡಿಯೋ

ಲೈವ್ ಕನ್ಸರ್ಟ್‌ನಲ್ಲಿ, ಮಹಿಳಾ ಅಭಿಮಾನಿಯೊಬ್ಬರು ಅವರ ಖಾಸಗಿ ಭಾಗಕ್ಕೆ ಕೈ ಹಾಕಿ ಅನುಚಿತವಾಗಿ ವರ್ತಿಸಿದ್ದಾರೆ. ಈ ಸಂದರ್ಭದಲ್ಲಿ ವಿಚಲಿತರಾಗದ ಮಾರಿಯೋ ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದು, ಅವರ ಈ ನಡೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Read Full Story

08:16 AM (IST) Feb 02

ಷೇರುಪೇಟೆಗೆ ನಿರ್ಮಲಾ STT ಹೊಡೆತ! ಫ್ಯೂಚರ್ಸ್‌ & ಆಪ್ಷನ್‌ಗೆ ಸುಂಕದ ಬರೆ; ಮಕಾಡೆ ಮಲಗಿದ ಸೆನ್ಸಕ್ಸ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫ್ಯೂಚರ್ಸ್‌ ಮತ್ತು ಆಪ್ಷನ್ಸ್‌ (F&O) ವಹಿವಾಟಿನ ಮೇಲಿನ ಸೆಕ್ಯುರಿಟೀಸ್‌ ಟ್ರಾನ್ಸಾಕ್ಷನ್‌ ಟ್ಯಾಕ್ಸ್‌ (STT) ಅನ್ನು ಗಣನೀಯವಾಗಿ ಹೆಚ್ಚಿಸಿದ್ದಾರೆ. ಅಧಿಕ ಲಾಭದಾಸೆಯಿಂದ ಯುವಕರು ಮಾಡುವ ಅಪಾಯಕಾರಿ ಹೂಡಿಕೆಯನ್ನು ತಡೆಯುವುದು ಈ ಕ್ರಮದ ಹಿಂದಿನ ಉದ್ದೇಶವಾಗಿದೆ.

Read Full Story

07:50 AM (IST) Feb 02

ಷೇರು ಬೈಬ್ಯಾಕ್‌ ಮೇಲೆ ಕ್ಯಾಪಿಟಲ್‌ ಗೇನ್‌ ತೆರಿಗೆ! ಏನಿದು ಬೈಬ್ಯಾಕ್‌? ಸಣ್ಣ ಹೂಡಿಕೆದಾರರ ಮೇಲೆ ಏನು ಪರಿಣಾಮ?

ಷೇರು ಮರುಖರೀದಿ (ಬೈಬ್ಯಾಕ್‌) ಮೇಲಿನ ತೆರಿಗೆ ನಿಯಮಗಳನ್ನು ಬದಲಾಯಿಸಲಾಗಿದ್ದು, ಇದನ್ನು ಇನ್ನು ಮುಂದೆ ಕ್ಯಾಪಿಟಲ್‌ ಗೇನ್‌ ತೆರಿಗೆಯಾಗಿ ಪರಿಗಣಿಸಲಾಗುತ್ತದೆ. ಈ ಬದಲಾವಣೆಯು ಅಲ್ಪಸಂಖ್ಯಾತ ಷೇರುದಾರರನ್ನು ರಕ್ಷಿಸುವ ಗುರಿ ಹೊಂದಿದೆ.

Read Full Story

07:26 AM (IST) Feb 02

ಆಸ್ಟ್ರೇಲಿಯನ್‌ ಓಪನ್ ಟೆನಿಸ್‌ಗೆ ಆಲ್ಕ‘ರಾಜ’; ನೋವಾಕ್ 25ನೇ ಗ್ರ್ಯಾನ್ ಸ್ಲಾಂ ಕನಸು ಮತ್ತೆ ಭಗ್ನ

ಆಸ್ಟ್ರೇಲಿಯನ್‌ ಓಪನ್ ಫೈನಲ್‌ನಲ್ಲಿ ಕಾರ್ಲೊಸ್‌ ಆಲ್ಕರಜ್, ನೋವಾಕ್ ಜೋಕೋವಿಚ್‌ರನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿದ್ದಾರೆ. ಈ ಸೋಲಿನೊಂದಿಗೆ ಜೋಕೋವಿಚ್‌ರ 25ನೇ ಗ್ರ್ಯಾನ್‌ಸ್ಲಾಂ ಕನಸು ಭಗ್ನಗೊಂಡರೆ, ಆಲ್ಕರಜ್‌ ಕೆರಿಯರ್‌ ಗ್ರ್ಯಾನ್‌ಸ್ಲಾಂ ಪೂರ್ಣಗೊಳಿಸಿದ ಅತಿಕಿರಿಯ ಆಟಗಾರ ಎನಿಸಿಕೊಂಡರು.
Read Full Story

More Trending News