Published : Feb 02, 2026, 06:54 AM ISTUpdated : Feb 02, 2026, 11:33 PM IST

India Latest News Live: 140 ಕೋಟಿ ಭಾರತೀಯರ ಪರವಾಗಿ ಟ್ರಂಪ್‌ಗೆ ಥ್ಯಾಂಕ್ಸ್ ಹೇಳಿದ ಮೋದಿ; ಭಾರತೀಯ ರಫ್ತು ವಲಯಕ್ಕೆ ಇನ್ಮುಂದೆ 'ಅಚ್ಛೇ ದಿನ್'.

ಸಾರಾಂಶ

ನವದೆಹಲಿ: ಭಾನುವಾರ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಕೇಂದ್ರ ಬಜೆಟ್‌ ಬಗ್ಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅಸಮಾದಾನ ವ್ಯಕ್ತಪಡಿಸಿದ್ದು, ‘ ಈ ಬಜೆಟ್‌ನಲ್ಲಿ ದೇಶದ ನೈಜ ಬಿಕ್ಕಟ್ಟುಗಳನ್ನು ಮೂಲೆಗುಂಪು ಮಾಡಲಾಗಿದೆ’ ಎಂದು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾಹುಲ್‌ , ‘ ಭಾರತದ ನಿಜವಾದ ಬಿಕ್ಕಟ್ಟುಗಳನ್ನು ಗಮನಿಸಿ ಅದರ ಪರಿಹಾರ ಕಂಡುಕೊಳ್ಳಲು ಸರಿಯಾದ ಮಾರ್ಗವನ್ನು ಕಂಡುಕೊಳ್ಳದೆ ಮೂಲೆಗುಂಪು ಮಾಡಲಾಗಿದೆ. ನಿರುದ್ಯೋಗಿ ಯುವಕರು, ಉತ್ಪಾದನೆ ಕುಸಿತ, ಹೂಡಿಕೆದಾರರಿಂದ ಬಂಡವಾಳ ಹಿಂತೆಗೆತ, ಮನೆಯ ಉಳಿತಾಯ ಕುಸಿತ, ರೈತರು ಸಮಸ್ಯೆ, ಜಾಗತಿಕ ಆಘಾತಗಳು ಎದುರಾಗಿವೆ. ಆದರೆ ಅದೆಲ್ಲವನ್ನೂ ನಿರ್ಲಕ್ಷಿಸಲಾಗಿದೆ’ ಎಂದು ಹರಿಹಾಯ್ದಿದ್ದಾರೆ.

11:33 PM (IST) Feb 02

140 ಕೋಟಿ ಭಾರತೀಯರ ಪರವಾಗಿ ಟ್ರಂಪ್‌ಗೆ ಥ್ಯಾಂಕ್ಸ್ ಹೇಳಿದ ಮೋದಿ; ಭಾರತೀಯ ರಫ್ತು ವಲಯಕ್ಕೆ ಇನ್ಮುಂದೆ 'ಅಚ್ಛೇ ದಿನ್'.

PM Modi Thanks Donald Trump for 18% Tariff Cut on Indian Exports ಮೇಕ್ ಇನ್ ಇಂಡಿಯಾ ಉತ್ಪನ್ನಗಳು ಸುಂಕವನ್ನು ಶೇ. 18 ಕ್ಕೆ ಇಳಿಸಿವೆ ಎಂದು ತಿಳಿದು ಸಂತೋಷವಾಯಿತು ಎಂದು ವ್ಯಾಪಾರ ಒಪ್ಪಂದಕ್ಕಾಗಿ ಟ್ರಂಪ್‌ಗೆ ಪ್ರಧಾನಿ ಧನ್ಯವಾದ ಸಲ್ಲಿಸಿದ್ದಾರೆ.

 

Read Full Story

11:23 PM (IST) Feb 02

ಬರೀ 45 ರೂಪಾಯಿಗೆ ಈ ದೇಶದಲ್ಲಿ ಸಿಗುತ್ತೆ ಫುಲ್‌ ಬಾಟಲ್‌ ಬ್ರ್ಯಾಂಡೆಡ್‌ ಮದ್ಯ!

ಮದ್ಯದ ಬೆಲೆ ಏರಿಕೆಯು ಅನೇಕರಿಗೆ ತಲೆನೋವಾಗಿದ್ದರೂ, ಜಗತ್ತಿನ ಕೆಲವು ದೇಶಗಳಲ್ಲಿ ಮದ್ಯವು ಅತ್ಯಂತ ಅಗ್ಗವಾಗಿ ಲಭ್ಯವಿದೆ. ವಿಯೆಟ್ನಾಂ, ಜಾಂಬಿಯಾ, ಉಕ್ರೇನ್‌ನಂತಹ ದೇಶಗಳಲ್ಲಿ ಕೇವಲ 45 ರಿಂದ 75 ರೂಪಾಯಿಗಳಿಗೆ ಮದ್ಯದ ಬಾಟಲಿಗಳನ್ನು ಖರೀದಿಸಬಹುದು.
Read Full Story

10:51 PM (IST) Feb 02

Breaking - ಅಮೆರಿಕದ ಜೊತೆಗಿನ ಟ್ರೇಡ್‌ ಡೀಲ್‌ಗೆ ಒಪ್ಪಿದ ಭಾರತ, ಶೇ.25 ರಿಂದ ಶೇ. 18ಕ್ಕೆ ಇಳಿಯಲಿದೆ ತೆರಿಗೆ!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಅಮೆರಿಕ ನಡುವೆ ಐತಿಹಾಸಿಕ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದಾರೆ. ಈ ಒಪ್ಪಂದದ ಅಡಿಯಲ್ಲಿ, ಭಾರತೀಯ ರಫ್ತಿನ ಮೇಲಿನ ಪರಸ್ಪರ ಸುಂಕವನ್ನು 25% ರಿಂದ 18% ಕ್ಕೆ ಇಳಿಸಲಾಗುವುದು.

Read Full Story

09:43 PM (IST) Feb 02

ಎಸ್‌ಬಿಐ ಎಟಿಎಂ ಮುಂದೆಯೇ ಉದ್ಯಮಿಯ ಕಾಲಿಗೆ ಗುಂಡಿಕ್ಕಿ 6 ಲಕ್ಷ ದರೋಡೆ

Hyderabad ATM robbery incident: ಎಸ್‌ಬಿಐ ಎಟಿಎಂ ಮುಂದೆಯೇ ದುಷ್ಕರ್ಮಿಗಳು ಕೇರಳ ಮೂಲದ ಯುವ ಉದ್ಯಮಿಯ ಕಾಲಿಗೆ ಗುಂಡಿಕ್ಕಿ ಆತನ ಬಳಿ ಇದ್ದ 6 ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ನಡೆದಿದೆ.

Read Full Story

09:25 PM (IST) Feb 02

ವಂದೇ ಭಾರತ್‌ನಲ್ಲಿ ಸೀಟ್ ಸಿಗದೆ ಜನ ಪರದಾಡ್ತಿದ್ರೆ, ಇಲ್ಲಿ ಚಪ್ಪಲಿಗೆ ಎಸಿ ಸೀಟು! ಮಹಿಳೆಯ ಕಂಟೆಂಟ್ ನೋಡಿ ಜನ ಆಕ್ರೋಶ!

Viral: Woman Books Rs 1,500 Vande Bharat Seat for Son's Slippers ನಮ್ಮ ಪ್ರಯಾಣ ಏಳರಿಂದ 8 ಗಂಟೆಯದ್ದಾಗಿತ್ತು. ಪ್ರತಿ ವಯಸ್ಕ ಟಿಕೆಟ್‌ಗೆ ಸರಿಸುಮಾರು 1,500-1,700 ರೂ. ವೆಚ್ಚವಾಗಿತ್ತು ಎಂದು ಮಹಿಳೆ ಹೇಳಿದ್ದಾರೆ.

 

Read Full Story

08:51 PM (IST) Feb 02

ನನ್ನ ಅಮ್ಮ ಯಾರು? ಕರುಳಬಳ್ಳಿಯ ಅರಸಿ 7000 ಕಿಲೋ ಮೀಟರ್ ದೂರದಿಂದ ಭಾರತಕ್ಕೆ ಬಂದ ಬಾಲಕ

ಎಷ್ಟೇ ಎತ್ತರಕ್ಕೆ ಬೆಳೆಯಲಿ ಎಷ್ಟೇ ದೂರ ಸಾಗಲಿ ತನ್ನ ಮೂಲದ ಬಗ್ಗೆ ತಿಳಿಯದೇ ಇದ್ದರೆ ಆ ಮಗುವಿಗೆ/ ನೂರೆಂಟು ಪ್ರಶ್ನೆಗಳು ಕಾಡುತ್ತದೆ. ನಾನು ಯಾರು? ಹೇಗೆ ಜನಿಸಿದೆ ಎಂಬ ಪ್ರಶ್ನೆ ಆ ಮಗುವನ್ನು ಕಾಡದೇ ಇರದು, ಹಾಗೆಯೇ ಇಲ್ಲೊಂದು ಮಗು ತನ್ನ ಮೂಲ ಅರಸಿ 7000 ಕಿಲೋ ಮೀಟರ್ ದೂರದಿಂದ ಭಾರತಕ್ಕೆ ಬಂದಿದೆ.

Read Full Story

08:22 PM (IST) Feb 02

ಮಧ್ಯರಾತ್ರಿ ಸ್ಮಶಾನದೊಳಗಿಂದ ಬಿರಿಯಾನಿ ಆರ್ಡರ್ ಮಾಡಿದ ಲೇಡಿ! ಸ್ಮಶಾನದ ಬಳಿ ಡೆಲಿವರಿ ಬಾಯ್ ಬಂದಾಗ, ಆಗಿದ್ದೇನು? ನೀವೇ ನೋಡಿ

ಮಧ್ಯರಾತ್ರಿ ಸ್ಮಶಾನದಿಂದ ಬಂದ ಬಿರಿಯಾನಿ ಆರ್ಡರ್ ಸ್ವೀಕರಿಸಿದ ಡೆಲಿವರಿ ಬಾಯ್‌ಗೆ ವಿಚಿತ್ರ ಅನುಭವವಾಗಿದೆ. ಆರ್ಡರ್ ಮಾಡಿದ ಮಹಿಳೆ ಸ್ಮಶಾನದೊಳಗೆ ಬರುವಂತೆ ಕರೆದಾಗ, ಭಯಗೊಂಡ ಡೆಲಿವರಿ ಪಾರ್ಟ್ನರ್ ಆರ್ಡರ್ ಕ್ಯಾನ್ಸಲ್ ಮಾಡುವಂತೆ ಕೇಳಿಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

08:05 PM (IST) Feb 02

ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಇಬ್ಬರು ಮಕ್ಕಳ ಕರೆತಂದು ಜೊತೆಗೆ ರೈಲಿಗೆ ತಲೆಕೊಟ್ಟ ಸಾಫ್ಟ್‌ವೇರ್ ಇಂಜಿನಿಯರ್ ತಾಯಿ

ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿ ತಾಯಿಯೊಬ್ಬರು ತಮ್ಮ ಇಬ್ಬರು ಹದಿಹರೆಯದ ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಸಾವಿಗೂ ಮೊದಲು ಅವರು ತಮ್ಮ ಸಂಬಂಧಿಕರ ಕ್ಷಮೆ ಕೇಳಿದ್ದಾರೆ.

Read Full Story

08:00 PM (IST) Feb 02

ಇದು ಭಾರತದ ಅತ್ಯಂತ ನಿಧಾನ ರೈಲು; 46 ಕಿ.ಮೀ ಪ್ರಯಾಣಕ್ಕೆ ಬರೋಬ್ಬರಿ 5 ಗಂಟೆ, ಟಿಕೆಟ್‌ ಸಿಗೋದಿಲ್ಲ ಅಷ್ಟು ರಶ್‌!

ಭಾರತದ ಅತಿ ನಿಧಾನಗತಿಯ ರೈಲು ಎಂದು ಪ್ರಸಿದ್ಧವಾಗಿರುವ ನೀಲಗಿರಿ ಮೌಂಟೇನ್‌ ರೈಲ್ವೆಯು, ಮೆಟ್ಟುಪಾಳಯಂ ಮತ್ತು ಊಟಿಯ ನಡುವೆ 46 ಕಿಲೋಮೀಟರ್ ದೂರವನ್ನು ಕ್ರಮಿಸಲು 5 ಗಂಟೆ ತೆಗೆದುಕೊಳ್ಳುತ್ತದೆ. 

Read Full Story

07:36 PM (IST) Feb 02

ಬೆಂಗಳೂರಿನ ಏರ್‌ಇಂಡಿಯಾ ವಿಮಾನದಲ್ಲಿ Fuel Switch ಆತಂಕ, ಯಾವುದೇ ಸಮಸ್ಯೆ ಇಲ್ಲ ಎಂದ ಬೋಯಿಂಗ್‌!

ಲಂಡನ್-ಬೆಂಗಳೂರು ಏರ್ ಇಂಡಿಯಾ ಬೋಯಿಂಗ್ 787-8 ವಿಮಾನವನ್ನು ಇಂಧನ ನಿಯಂತ್ರಣ ಸ್ವಿಚ್‌ನಲ್ಲಿನ ಸಂಭವನೀಯ ದೋಷದಿಂದಾಗಿ ಸ್ಥಗಿತಗೊಳಿಸಲಾಗಿದೆ. ಪೈಲಟ್ ವರದಿ ಮಾಡಿದ ನಂತರ, ಏರ್ ಇಂಡಿಯಾ ಈ ವಿಷಯವನ್ನು ಬೋಯಿಂಗ್ ಮತ್ತು ಡಿಜಿಸಿಎಗೆ ತಿಳಿಸಿದೆ.

Read Full Story

07:13 PM (IST) Feb 02

ಡಾನ್ಸ್​ ಮಾಡದೇ ಇದ್ರೂ ಕೆಲವೇ ಗಂಟೆಯಲ್ಲಿ ವಿಡಿಯೋಗೆ 2 ಮಿಲಿಯನ್​ ವ್ಯೂವ್ಸ್​! ಅಂಥದ್ದೇನಿದೆ ನೋಡಿ ಇದರಲ್ಲಿ

ಶಾಲಾ ವಾರ್ಷಿಕೋತ್ಸವದಲ್ಲಿ ಡಾನ್ಸ್ ಮಾಡಲು ವೇದಿಕೆ ಹತ್ತಿದ ಇಬ್ಬರು ಪುಟಾಣಿಗಳು, ಸ್ಟೇಜ್ ಹೊಗೆಯನ್ನು ನೋಡಿ ಹೆದರಿ ಓಡಿಹೋಗುತ್ತಾರೆ. ಒಬ್ಬಳು ಓಡಿಹೋದರೆ, ಇನ್ನೊಬ್ಬಳು ಅಳಲು ಶುರುಮಾಡುತ್ತಾಳೆ, 2 ಮಿಲಿಯನ್ ವ್ಯೂವ್ಸ್​ ಬಂದಿದ್ಯಾಕೆ ನೋಡಿ!

Read Full Story

07:06 PM (IST) Feb 02

ಒಣಭೂಮಿಯಲ್ಲ ಮಂಗಳ, ಒಂದು ಕಾಲದ ಮಳೆನಾಡು; ಸಾಕ್ಷಿ ಕಂಡುಹಿಡಿದ ನಾಸಾ Perseverance ರೋವರ್‌!

NASA Finds Evidence of Ancient Rain on Mars: Perseverance Rover Update ಮಂಗಳ ಗ್ರಹದಲ್ಲಿ ಬಿಳಿ ಕಾಯೋಲಿನೈಟ್ ಬಂಡೆಗಳನ್ನು ನಾಸಾದ ಪರ್ಸಿವೆರೆನ್ಸ್ ಕಂಡುಹಿಡಿದಿದೆ. ಇದು ಲಕ್ಷಾಂತರ ವರ್ಷಗಳ ಹಿಂದೆ ಮಳೆ ಮತ್ತು ಆರ್ದ್ರ ಪರಿಸ್ಥಿತಿಗಳು ಈ ಗ್ರಹದಲ್ಲಿತ್ತು ಅನ್ನೋದನ್ನು ಬಹಿರಂಗಪಡಿಸಿದೆ.

 

Read Full Story

06:36 PM (IST) Feb 02

Baby Bump - ಬಟ್ಟೆ ಇಲ್ಲದ ಹೊಟ್ಟೆ ತೋರಿಸೋ ನಟಿಯರ ಬಗ್ಗೆ ಕೊನೆಗೂ ಸತ್ಯ ಕಂಡುಹಿಡಿದ ನೆಟ್ಟಿಗರು!

ಬಾಲಿವುಡ್ ನಟಿ ಸೋನಂ ಕಪೂರ್ ತಮ್ಮ ಎರಡನೇ ಗರ್ಭಾವಸ್ಥೆಯಲ್ಲಿ ಪದೇ ಪದೇ ಬೇಬಿ ಬಂಪ್ ಪ್ರದರ್ಶಿಸುತ್ತಿದ್ದಾರೆ. ಬಿಳಿ ಉಡುಪಿನಲ್ಲಿ ಹೊಟ್ಟೆ ತೋರಿಸಿಕೊಂಡು ತಿರುಗುತ್ತಿರುವ ಅವರ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು 'ಇಷ್ಟಕ್ಕೆ ಮುಗಿಸು ತಾಯಿ' ಎಂದು ಪ್ರತಿಕ್ರಿಯಿಸುತ್ತಿದ್ದಾರೆ.  

Read Full Story

06:35 PM (IST) Feb 02

ಲಕ್ಕುಂಡಿಗೂ ಮೊದಲು ನಡೆದಿತ್ತು ಅಚ್ಚರಿ, 17000 ವರ್ಷ ಹಿಂದಿನ ಅಮೂಲ್ಯ ಸಂಪತ್ತು ಪತ್ತೆ ಹಚ್ಚಿದ್ದ ನಾಯಿ

ಲಕ್ಕುಂಡಿಗೂ ಮೊದಲು ನಡೆದಿತ್ತು ಅಚ್ಚರಿ, ಬರೋಬ್ಬರಿ 17,000 ವರ್ಷಗಳ ಹಿಂದಿನ ಅತೀ ಅಮೂಲ್ಯ ಸಂಪತ್ತನ್ನು ನಾಯಿ ಹಾಗೂ 18ರ ಯುವಕ ಪತ್ತೆ ಹಚ್ಚಿದ್ದ ಘಟನೆ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಏನಿದು ಘಟನೆ?

Read Full Story

06:32 PM (IST) Feb 02

ವಿರೋಧದ ನಡುವೆ ತನಗೊಂದು ಸುಂದರ ಬದುಕು ನೀಡಿದ ದತ್ತು ತಂದೆಗೆ ಭಾವುಕವಾಗಿ ಕೃತಜ್ಞತೆ ಸಲ್ಲಿಸಿದ ಮಗಳು

ಕುಟುಂಬದ ವಿರೋಧದ ನಡುವೆಯೂ ಡೇನಿಯಲ್ ಎಂಬುವವರು ಬಾಲಕಿಯೊಬ್ಬಳನ್ನು ದತ್ತು ಪಡೆದು ಪ್ರೀತಿಯಿಂದ ಸಾಕುತ್ತಾರೆ. ವರ್ಷಗಳ ನಂತರ, ತಂದೆ ಡೇನಿಯಲ್ ದುರ್ಬಲರಾದಾಗ, ಮಗಳು ಅಂದು ತನ್ನನ್ನು ಹೊತ್ತ ತಂದೆಯನ್ನು ಈಗ ತಾನು ಹೊತ್ತು ಆರೈಕೆ ಮಾಡುತ್ತಿದ್ದಾಳೆ. ಈ ತಂದೆ-ಮಗಳ ಬಾಂಧವ್ಯದ ಕಥೆ ವೈರಲ್ ಆಗಿದೆ.

Read Full Story

04:56 PM (IST) Feb 02

11 ವರ್ಷಗಳ ನಂತರದ ಚಮತ್ಕಾರ, ಫೆಬ್ರವರಿ 2026 ಅನ್ನು 'ಪರ್ಫೆಕ್ಟ್ ಮಂತ್' ಅಂತಾ ಹೇಳ್ತಿರೋದೇಕೆ?

Perfect February 2026: Why the Viral Calendar is Going Viral 2026ರ ಫೆಬ್ರವರಿ ತಿಂಗಳು ಭಾನುವಾರದಂದು ಪ್ರಾರಂಭವಾಗಿ ಶನಿವಾರದಂದು ಕೊನೆಗೊಳ್ಳುತ್ತದೆ, ಇದು ಕ್ಯಾಲೆಂಡರ್ ವಿನ್ಯಾಸಕ್ಕೆ ಸಂಪೂರ್ಣವಾಗಿ ಹೊಂದಿಕೊಂಡಿದೆ.

Read Full Story

04:53 PM (IST) Feb 02

ಸ್ವಂತ ಮಗಳು, ಅಣ್ಣನ ಮಗಳು ಇಬ್ಬರನ್ನು 7 ವರ್ಷ ನಿರಂತರ ಅತ್ಯಾ**ರ, ಮಕ್ಕಳ ಕಣ್ಣೀರ ಕತೆ

ಸ್ವಂತ ಮಗಳು, ಅಣ್ಣನ ಮಗಳು ಇಬ್ಬರನ್ನು 7 ವರ್ಷ ನಿರಂತರ ಅತ್ಯಾ**ರ, ಇಬ್ಬರು ಮಕ್ಕಳ ಕಣ್ಣೀರ ಕತೆ ಬಯಲಾಗುತ್ತಿದ್ದಂತೆ ತಂದೆ ಅರೆಸ್ಟ್ ಆಗಿದ್ದಾರೆ. ಈ ಘಟನೆ ಬಯಲಾಗಿದ್ದೇ ಮತ್ತೊಂದು ದುರಂತದ ಮೂಲಕ.

 

Read Full Story

04:46 PM (IST) Feb 02

ಹೇಗಿರಲಿದೆ ರಶ್ಮಿಕಾ-ದೇವರಕೊಂಡ ತಾರಾಜೋಡಿ ಕಲ್ಯಾಣ? ಯಾರಿಗೆಲ್ಲ ಆಹ್ವಾನ? ರಹಸ್ಯ ಮದುವೆ ಏಕೆ?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ವದಂತಿಗಳು ಹಬ್ಬಿದ್ದು, ರಾಜಸ್ಥಾನದ ಉದಯಪುರ ಅರಮನೆಯಲ್ಲಿ ಸಿದ್ಧತೆಗಳು ನಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ.  

Read Full Story

04:41 PM (IST) Feb 02

ಬೀಚ್‌ನಲ್ಲಿ ಗಾಂಜಾ ಒಣಗಲು ಹಾಕಿ ಅಲ್ಲೇ ನಿದ್ದೆಗೆ ಜಾರಿದ ಆರೋಪಿಯ ಬಂಧನ

ಕೇರಳದ ಕೋಝಿಕೋಡ್ ಬೀಚ್‌ನಲ್ಲಿ ಗಾಂಜಾ ಒಣಗಿಸಲು ಹಾಕಿ ನಿದ್ರೆಗೆ ಜಾರಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಜಾನೆ ವಾಕಿಂಗ್ ಬಂದವರು ಇದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಯಿಂದ 372 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. 

Read Full Story

04:21 PM (IST) Feb 02

ಟ್ರಿಲಿಯನ್ ಡಾಲರ್ ಆರ್ಥಿಕತೆ ನಿಭಾಯಿಸೋ ಸಚಿವೆ ಬಳಿ ಕಾರೇ ಇಲ್ಲ! ಮಧ್ಯಮ ವರ್ಗದವರ ಸಿಟ್ಟಲ್ಲಿರುವ ನಿರ್ಮಲಾ ಸೀತಾರಾಮನ್ ಆಸ್ತಿ ಎಷ್ಟು?

ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಮಧ್ಯಮ ವರ್ಗಕ್ಕೆ ನಿರಾಸೆ ಮೂಡಿಸಿದ ನಂತರ, ಅವರ ಆಸ್ತಿ ಮತ್ತು ಸಂಬಳದ ಬಗ್ಗೆ ಚರ್ಚೆ ಶುರುವಾಗಿದೆ. ಅವರ ಒಟ್ಟು ಆಸ್ತಿ 2.75 ಕೋಟಿ ರೂ. ಆಗಿದ್ದು, 1.11 ಕೋಟಿ ರೂ. ಸಾಲವಿದೆ. ಅವರ ಬಳಿ ಕಾರು ಇಲ್ಲ, ಬದಲಾಗಿ ಒಂದು ಬಜಾಜ್ ಚೇತಕ್ ಸ್ಕೂಟರ್ ಮಾತ್ರ ಇದೆ.

Read Full Story

03:51 PM (IST) Feb 02

ಕಾಲೇಜು ದಿನಗಳಿಂದಲೇ ಆರಂಭವಾದ ಪ್ರೀತಿ 9 ವರ್ಷಗಳ ನಂತರ ಮದುವೆ - ಎರಡೇ ತಿಂಗಳಿಗೆ ಗಂಡನ ಕೊಲೆ

ಮದುವೆ ಆದರೆ ಪರಿಚಿತರನ್ನೇ ಮದುವೆ ಆಗಬೇಕು ಅಪರಿಚಿತರನ್ನು ಮದುವೆ ಆಗಬಾರದು ಎಂದು ಅನೇಕರು ಹೇಳುತ್ತಾರೆ. ಆದರೆ ಇಲ್ಲೊಂದು ಕಡೆ ಬರೋಬ್ಬರಿ 9 ವರ್ಷಗಳ ಕಾಲ ಪ್ರೀತಿಸಿ ಇತ್ತೀಚೆಗಷ್ಟೇ ಮದುವೆಯಾಗಿದ್ದ ಜೋಡಿಯ ಜೀವನವೂ ದುರಂತದಲ್ಲಿ ಅಂತ್ಯವಾಗಿದೆ. ಇಲ್ಲಿ ಹೆಂಡತಿಯೇ ಗಂಡನನ್ನು ಕೊಲೆ ಮಾಡಿದ್ದಾಳೆ.

Read Full Story

03:41 PM (IST) Feb 02

ಇದು ಬರೀ ಕ್ರಿಕೆಟ್ ಅಲ್ಲ, 4500 ಕೋಟಿ ರೂ. ಲೆಕ್ಕ! ಇಂಡೋ-ಪಾಕ್ ಪಂದ್ಯ ರದ್ದಾದರೆ ಪಾಕಿಸ್ತಾನಕ್ಕೆ ಕಾದಿದೆ ದೊಡ್ಡ ಹೊಡೆತ!

ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಭಾರತ ವಿರುದ್ದ ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಘೋಷಿಸಿದೆ. ಒಂದು ವೇಳೆ ಈ ಮ್ಯಾಚ್ ರದ್ದಾದರೆ, ಬ್ರಾಡ್‌ಕಾಸ್ಟರ್‌ಗಳು ಮತ್ತು ಐಸಿಸಿಗೆ ಭಾರೀ ಆರ್ಥಿಕ ನಷ್ಟ ಕಟ್ಟಿಟ್ಟ ಬುತ್ತಿ.

Read Full Story

02:58 PM (IST) Feb 02

ತಂಬಾಕು, ಗುಟ್ಕಾ ಹೆಚ್ಚು ತಿಂತೀರಾ? ಬಾಯಿ ಕ್ಯಾನ್ಸರ್ ಬರುತ್ತೆ ಹುಷಾರ್! ಈ ಲಕ್ಷಣಗಳಿದ್ರೆ ನೆಗ್ಲೆಕ್ಟ್ ಮಾಡ್ಬೇಡಿ

ತುಟಿ, ನಾಲಿಗೆ ಮತ್ತು ಬಾಯಿಯ ಒಳಪದರದಲ್ಲಿ (ಸಾಮಾನ್ಯವಾಗಿ ಸ್ಕ್ವಾಮಸ್ ಸೆಲ್ ಕಾರ್ಸಿನೋಮ) ಕಾಣಿಸಿಕೊಳ್ಳುವ ಕ್ಯಾನ್ಸರ್‌ಗೆ ಓರಲ್ ಕ್ಯಾನ್ಸರ್ ಅಥವಾ ಬಾಯಿ ಕ್ಯಾನ್ಸರ್ ಎನ್ನುತ್ತಾರೆ.  ಬಾಯಿ ಕ್ಯಾನ್ಸರ್ ಲಕ್ಷಣಗಳೇನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

Read Full Story

02:43 PM (IST) Feb 02

ಬರೋಬ್ಬರಿ 30 ಸಾವಿರ ಉದ್ಯೋಗಿಗಳ ಕಡಿತಕ್ಕೆ ನಿರ್ಧಾರ! ಅಮೆಜಾನ್ ಸಾಲಿಗೆ ಮತ್ತೊಂದು ಟೆಕ್ ದೈತ್ಯ ಕಂಪನಿ ಸೇರ್ಪಡೆ!

AI ಡೇಟಾ ಸೆಂಟರ್ ವಿಸ್ತರಣೆಗೆ ಬೇಕಾದ ಹಣಕಾಸಿನ ಒತ್ತಡದಿಂದಾಗಿ, ಒರಾಕಲ್ ಸುಮಾರು 20,000 ದಿಂದ 30,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತಿದೆ. ಓಪನ್‌ಎಐ ಜೊತೆಗಿನ ಒಪ್ಪಂದವು ಕಂಪನಿಗೆ ಆರ್ಥಿಕ ಹೊರೆಯಾಗಿದ್ದು, ಬ್ಯಾಂಕುಗಳು ಸಾಲ ನೀಡಲು ಹಿಂಜರಿಯುತ್ತಿರುವುದರಿಂದ ಈ ಪರಿಸ್ಥಿತಿ ಉದ್ಭವಿಸಿದೆ.

Read Full Story

02:27 PM (IST) Feb 02

Mole Astrology - ಮಹಿಳೆಯರ ದೇಹದ ಈ ಭಾಗಗಳಲ್ಲಿ ಮಚ್ಚೆ ಇದ್ರೆ, ಅವರು ಮುಟ್ಟಿದ್ದೆಲ್ಲಾ ಚಿನ್ನ!

ಸಾಮುದ್ರಿಕ ಶಾಸ್ತ್ರದ ಪ್ರಕಾರ, ಮಹಿಳೆಯರ ದೇಹದ ಕೆಲವು ಭಾಗಗಳಲ್ಲಿರುವ ಮಚ್ಚೆಗಳು ಅವರನ್ನು ಅದೃಷ್ಟವಂತರನ್ನಾಗಿ ಮಾಡುತ್ತವೆ. ಹಣಕಾಸಿನ ವಿಚಾರದಲ್ಲಿ ಇವರಿಗೆ ಕೊರತೆಯೇ ಇರುವುದಿಲ್ಲ. ಯಾವ ಜಾಗದಲ್ಲಿ ಮಚ್ಚೆಗಳಿದ್ದರೆ ಅದೃಷ್ಟವಂತರು ಎನಿಸಿಕೊಳ್ಳುತ್ತಾರೆ ಎಂದು ತಿಳಿಯಿರಿ.
Read Full Story

02:17 PM (IST) Feb 02

RSS ನಾಯಕ ಅಂತ ಪರಿಚಯಿಸಿಕೊಳ್ಳುತ್ತಲೇ ಇಟ್ಟಿಗೆಯಿಂದ ದಾಳಿ - ಕಾರ್‌ನಿಂದ ಎಳೆದು ಹಲ್ಲೆ

ಆರ್‌ಎಸ್‌ಎಸ್‌ ಜಿಲ್ಲಾ ಪ್ರಚಾರಕ ಜೈಕಿಶೋರ್ ಅವರ ಮೇಲೆ ಗುಂಪು ಹಲ್ಲೆ ನಡೆದಿದೆ. ಕಿರಿದಾದ ರಸ್ತೆಯಲ್ಲಿ ಕಾರ್ ಮತ್ತು ಬೈಕ್ ನಡುವಿನ ಜಗಳ ತಾರಕಕ್ಕೇರಿ, ದುಷ್ಕರ್ಮಿಗಳು ಇಟ್ಟಿಗೆ ಹಾಗೂ ಮೆಕ್ಯಾನಿಕ್ ಉಪಕರಣಗಳಿಂದ ದಾಳಿ ನಡೆಸಿ, ಅವರನ್ನು ಚರಂಡಿ ಬಳಿ ಎಸೆದು ಪರಾರಿಯಾಗಿದ್ದಾರೆ. 

Read Full Story

01:41 PM (IST) Feb 02

ಭೂಮಿಯಲ್ಲಿ ಪ್ರಾಣಿ ಹುಟ್ಟು ಹೇಗಾಯ್ತು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ 460 ಕೋಟಿ ವರ್ಷ ಹಳೇ ಉಲ್ಕೆ

ಭೂಮಿಯಲ್ಲಿ ಪ್ರಾಣಿ ಹುಟ್ಟು ಹೇಗಾಯ್ತು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ 460 ಕೋಟಿ ವರ್ಷ ಹಳೇ ಉಲ್ಕೆ, ಈ ಉಲ್ಕೆ ಸೌರಮಂಡಲ ಹಲವು ಕುತೂಹಲಕ್ಕೆ ಉತ್ತರ ನೀಡಲಿದೆ. ಇದೀಗ ಈ ಉಲ್ಕೆ ಬರೋಬ್ಬರಿ 460 ಕೋಟಿ ವರ್ಷ ಹಳೇದು ಅನ್ನೋದು ಪತ್ತೆಯಾಗಿದೆ.

Read Full Story

01:38 PM (IST) Feb 02

ಪಕ್ಕದಲ್ಲಿ ಬೋರ್ ಕೊರೆಸುತ್ತಿದ್ದಾಗ ನೆರೆಮನೆಯ ಒಳಗೆ ನೆಲ ಸೀಳಿ ಚಿಮ್ಮಿದ ನೀರು - ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಖಾಸಗಿ ಫ್ಲಾಟ್‌ವೊಂದರಲ್ಲಿ ಬೋರ್‌ವೆಲ್ ಕೊರೆಯುತ್ತಿದ್ದಾಗ, ಒತ್ತಡ ಹೆಚ್ಚಾಗಿ ಪಕ್ಕದ ಮನೆಯ ಟೈಲ್ಸ್ ಹಾಕಿದ್ದ ನೆಲವೇ ಒಡೆದು ನೀರು ಮಹಡಿಯತ್ತರಕ್ಕೆ ಚಿಮ್ಮಿದೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

Read Full Story

01:25 PM (IST) Feb 02

ರಾಮ್ ಚರಣ್ ಮಗ ಎಷ್ಟು ಸಾವಿರ ಕೋಟಿಗೆ ವಾರಸುದಾರ ಗೊತ್ತಾ? ಭಾರತದಲ್ಲೇ ಸ್ಟಾರ್ ರಿಚ್ ಕಿಡ್

ರಾಮ್ ಚರಣ್ ಮತ್ತು ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಚಿರಂಜೀವಿ ಕುಟುಂಬಕ್ಕೆ ಎರಡನೇ ತಲೆಮಾರಿನ ಉತ್ತರಾಧಿಕಾರಿ ಬಂದಿದ್ದಾನೆ. ಆದರೆ ಈ ಮಗು ಈಗ ಭಾರತದ ಅತ್ಯಂತ ಶ್ರೀಮಂತ ಮಗು ಎಂದು ಹೇಳಲಾಗುತ್ತಿದೆ.

 

Read Full Story

01:15 PM (IST) Feb 02

CCL ಪಂದ್ಯದಲ್ಲಿ ಸುದೀಪ್​ ತಂಡ ಚಾಂಪಿಯನ್ - ಕಪ್​ ಪಡೆಯಲು ಬಂದ ಕಿಚ್ಚನ ಭರ್ಜರಿ ಡಾನ್ಸ್​ ವಿಡಿಯೋ ವೈರಲ್

ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡವು ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಫೈನಲ್‌ನಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದೆ. 12 ವರ್ಷಗಳ ನಂತರ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದ ಸಂಭ್ರಮವನ್ನು ಸುದೀಪ್ ಮೈದಾನದಲ್ಲಿ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಆಚರಿಸಿದರು.
Read Full Story

01:10 PM (IST) Feb 02

ಬಾಡಿಗೆ ತಾಯ್ತನದ ಮೂಲಕ ಉಪಾಸನಾ ಮಗು ಪಡೆದಿದ್ದಾ? ರಾಮ್ ಚರಣ್ ರಿಯಾಕ್ಷನ್ ಹೇಗಿತ್ತು ನೋಡಿ

ರಾಮ್ ಚರಣ್ ಮತ್ತು ಉಪಾಸನಾ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುತ್ತಿದ್ದಾರೆ ಎಂಬ ಟೀಕೆಗಳ ಹಿನ್ನೆಲೆಯಲ್ಲಿ, ಚರಣ್ ಅದ್ಭುತವಾದ ತಿರುಗೇಟು ನೀಡಿದ್ದಾರೆ. ಉಪಾಸನಾ ಅವರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

Read Full Story

12:47 PM (IST) Feb 02

ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ ಭಿಕ್ಷುಕ - ಡೆಲಿವರಿ ಬಾಯ್‌ಗೆ 50 ರೂಪಾಯಿ ಟಿಪ್ಸ್‌ - ವಿಡಿಯೋ ವೈರಲ್

ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ ಭಿಕ್ಷುಕನೋರ್ವ, ಆಹಾರ ತಲುಪಿಸಿದ ಡೆಲಿವರಿ ಬಾಯ್‌ಗೆ  50 ರೂಪಾಯಿ ಟಿಪ್ಸ್ ನೀಡಿದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.

Read Full Story

12:45 PM (IST) Feb 02

ಇಂಡೋ-ಪಾಕ್ ಪಂದ್ಯದ ವೇಳೆ ಸಿಕ್ಕಿಬಿದ್ದ ಸರ್ಫರಾಜ್, ನಿಯಮ ಉಲ್ಲಂಘಿಸಿ ಫೋನ್ ಬಳಸಿದ ಮೆಂಟರ್

ಇಂಡೋ-ಪಾಕ್ ಪಂದ್ಯದ ವೇಳೆ ಸಿಕ್ಕಿಬಿದ್ದ ಸರ್ಫರಾಜ್, ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಈ ಘಟನೆ ನಡೆದಿದೆ. ಪಾಕಿಸ್ತಾನ ಟೀಂ ಮೆಂಟರ್ ಫೋನ್ ಬಳಕೆ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.

 

Read Full Story

12:35 PM (IST) Feb 02

ಸಿಗರೇಟ್ ಬೆಲೆ ರಾಕೆಟ್ ವೇಗದಲ್ಲಿ ಗಗನಕ್ಕೆ! ಅಬ್ಬಬ್ಬಾ.. ಒಂದು ಸಿಗರೇಟ್ ಪ್ಯಾಕೆಟ್ ರೇಟ್ ಇಷ್ಟೊಂದಾ?

ಸಿಗರೇಟ್ ಸೇದುವುದು ಕೇವಲ ಸೇದೋರಿಗೆ ಮಾತ್ರವಲ್ಲ, ಅವರ ಸುತ್ತಮುತ್ತ ಇರುವವರಿಗೂ ತುಂಬಾನೇ ಹಾನಿಕಾರಕ. ಹೀಗಾಗಿ, ಸಿಗರೇಟ್ ಬೆಲೆ ಏರಿಕೆಯನ್ನು ಹೆಚ್ಚಿನವರು ಸ್ವಾಗತಿಸಿದ್ದಾರೆ.

Read Full Story

12:26 PM (IST) Feb 02

ಹಳೇ ಲವ್ ದ್ವೇಷ, ಮಾಜಿ ಬಾಯ್‌ಫ್ರೆಂಡ್ ಪತ್ನಿ-ನವಜಾತ ಮಗುವಿಗೆ ಬೆಂಕಿ ಹಚ್ಚಿ ಕೊಂದ ಮಹಿಳೆ

ಹಳೇ ಲವ್ ದ್ವೇಷ, ಮಾಜಿ ಬಾಯ್‌ಫ್ರೆಂಡ್ ಪತ್ನಿ-6 ತಿಂಗಳ ಮಗುವಿಗೆ ಬೆಂಕಿ ಹಚ್ಚಿ ಕೊಂದ ಮಹಿಳೆ, ಪ್ರೀತಿ ಬ್ರೇಕ್ ಅಪ್ ಆಗಿ ಬೇರೆ ಮದುವೆಯಾಗಿದ್ದಾನೆ. ಆದರೆ ಈಕೆಗೆ ಆತನೇ ಬೇಕು. ಇದಕ್ಕಾಗಿ ಮಾಡಿದ ಕೆಲಸಕ್ಕೆ ಎರಡು ಅಮಾಯಕ ಜೀವಗಳು ಬಲಿಯಾಗಿದೆ.

 

Read Full Story

12:08 PM (IST) Feb 02

ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸ್ತಿದೆ ಬ್ರಾಹ್ಮಣರ ಹಪ್ಪಳ - ಏನಪ್ಪಾ ಈ ಪರಿ ಬಿಸಿಬಿಸಿ ಚರ್ಚೆ?

ವಕೀಲರೊಬ್ಬರು ಹಂಚಿಕೊಂಡ 'ಬ್ರಾಹ್ಮಣರು ತಯಾರಿಸಿದ ಹಪ್ಪಳ' ಎಂಬ ಬರಹವಿರುವ ಪ್ಯಾಕೆಟ್‌ನ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಏನಾಗ್ತಿದೆ ನೋಡಿ…

Read Full Story

12:05 PM (IST) Feb 02

ಭಾರತೀಯ ಅಂಚೆ ಇಲಾಖೆಯಿಂದ GDS ಕೆಲಸಕ್ಕೆ 28740 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪರೀಕ್ಷೆ ಇಲ್ಲದೇ ಕೆಲಸ! ಲಾಸ್ಟ್ ಡೇಟ್ ಯಾವಾಗ?

ಇಂಡಿಯಾ ಪೋಸ್ಟ್ GDS ನೇಮಕಾತಿ 2026ರಲ್ಲಿ 28,740 ಹುದ್ದೆಗಳಿಗೆ ಬೃಹತ್ ನೇಮಕಾತಿ ಪ್ರಕಟವಾಗಿದೆ. 10ನೇ ತರಗತಿ ಪಾಸಾದವರು ಪರೀಕ್ಷೆ ಇಲ್ಲದೆ ಅರ್ಜಿ ಸಲ್ಲಿಸಬಹುದು. ನೇಮಕಾತಿ ನಂತರ ಗ್ರಾಮೀಣ ಅಂಚೆ ಸೇವಕರಿಗೆ ಎಷ್ಟು ಸಂಬಳ ಸಿಗುತ್ತದೆ ಎಂದು ತಿಳಿಯಿರಿ.

Read Full Story

11:08 AM (IST) Feb 02

ಡ್ರೈವಿಂಗ್ ಹೇಳಿಕೊಡ್ತಿದ್ದ ಗಂಡ - ಬ್ರೇಕ್ ಬದಲು ಆಕ್ಸಿಲರೇಟ್ ಮೇಲೆ ಕಾಲಿಟ್ಟ ಪತ್ನಿ - ದೇಗುಲದ ಕೆರೆಗೆ ಬಿದ್ದ ಕಾರು

ಗಂಡನೋರ್ವ ಕಾರು ಚಾಲನಾ ತರಬೇತಿ ಹೇಳಿಕೊಡುತ್ತಿದ್ದ ವೇಳೆ ಪತ್ನಿ ಗೊಂದಲಕ್ಕೊಳಗಾಗಿ ಬ್ರೇಕ್ ಒತ್ತುವ ಬದಲು ಆಕ್ಸಲಿರೇಟರ್ ಮೇಲೆ ಕಾಲಿಟ್ಟ ಪರಿಣಾಮ ಕಾರು ಸೀದಾ ಹೋಗಿ ಸಮೀಪದ ಕೆರೆಗೆ ಬಿದ್ದಂತಹ ಘಟನೆ ತಮಿಳುನಾಡಿನ ಕಾರೈಕುಡಿಯಲ್ಲಿ ನಡೆದಿದೆ.

Read Full Story

10:07 AM (IST) Feb 02

ಭಾರತ ಮ್ಯಾಚ್ ಬಹಿಷ್ಕರಿಸಿದರೆ ಪಾಕಿಸ್ತಾನ ಕ್ರಿಕೆಟ್ ಅವನತಿ ಗ್ಯಾರಂಟಿ! ಪಾಕ್‌ಗೆ ಬಿಗ್ ಶಾಕ್ ಕೊಡಲು ರೆಡಿಯಾದ ಐಸಿಸಿ!

ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿರ್ಧಾರದ ವಿರುದ್ಧ ಐಸಿಸಿ ಕಠಿಣ ಕ್ರಮಕ್ಕೆ ಸಿದ್ಧವಾಗಿದೆ. ಭಾರತ-ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯವು ಫೆಬ್ರವರಿ 15ಕ್ಕೆ ನಿಗದಿಯಾಗಿದೆ. 

Read Full Story

09:59 AM (IST) Feb 02

ಮತ್ತೆ ಮತ್ತೆ ಇಳಿಕೆಯಾಗ್ತಿದೆ ಚಿನ್ನ, ಬೆಳ್ಳಿ ಬೆಲೆ - ಇಂದು ಬರೋಬ್ಬರಿ 90 ಸಾವಿರ ಕುಸಿತ

ಕಳೆದ ನಾಲ್ಕು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸತತವಾಗಿ ಕುಸಿತ ಕಂಡುಬಂದಿದೆ. ಇಂದಿನ ವರದಿಯ ಪ್ರಕಾರ, 24 ಕ್ಯಾರಟ್ ಮತ್ತು 22 ಕ್ಯಾರಟ್ ಚಿನ್ನದ ದರಗಳು ಹಾಗೂ ಬೆಳ್ಳಿ ದರದಲ್ಲಿ ಗಣನೀಯ ಇಳಿಕೆಯಾಗಿದೆ. ದೇ

Read Full Story

More Trending News