ನವದೆಹಲಿ: ಭಾನುವಾರ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಸಮಾದಾನ ವ್ಯಕ್ತಪಡಿಸಿದ್ದು, ‘ ಈ ಬಜೆಟ್ನಲ್ಲಿ ದೇಶದ ನೈಜ ಬಿಕ್ಕಟ್ಟುಗಳನ್ನು ಮೂಲೆಗುಂಪು ಮಾಡಲಾಗಿದೆ’ ಎಂದು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾಹುಲ್ , ‘ ಭಾರತದ ನಿಜವಾದ ಬಿಕ್ಕಟ್ಟುಗಳನ್ನು ಗಮನಿಸಿ ಅದರ ಪರಿಹಾರ ಕಂಡುಕೊಳ್ಳಲು ಸರಿಯಾದ ಮಾರ್ಗವನ್ನು ಕಂಡುಕೊಳ್ಳದೆ ಮೂಲೆಗುಂಪು ಮಾಡಲಾಗಿದೆ. ನಿರುದ್ಯೋಗಿ ಯುವಕರು, ಉತ್ಪಾದನೆ ಕುಸಿತ, ಹೂಡಿಕೆದಾರರಿಂದ ಬಂಡವಾಳ ಹಿಂತೆಗೆತ, ಮನೆಯ ಉಳಿತಾಯ ಕುಸಿತ, ರೈತರು ಸಮಸ್ಯೆ, ಜಾಗತಿಕ ಆಘಾತಗಳು ಎದುರಾಗಿವೆ. ಆದರೆ ಅದೆಲ್ಲವನ್ನೂ ನಿರ್ಲಕ್ಷಿಸಲಾಗಿದೆ’ ಎಂದು ಹರಿಹಾಯ್ದಿದ್ದಾರೆ.
09:16 AM (IST) Feb 02
08:58 AM (IST) Feb 02
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ನ ಒಟ್ಟು ಗಾತ್ರ ₹53.47 ಲಕ್ಷ ಕೋಟಿಯಾಗಿದ್ದು, ಇದೇ ಮೊದಲ ಬಾರಿಗೆ ₹50 ಲಕ್ಷ ಕೋಟಿ ಗಡಿ ದಾಟಿದೆ. 2026-27ನೇ ಸಾಲಿನಲ್ಲಿ ಶೇ.4.3ರಷ್ಟು ವಿತ್ತೀಯ ಕೊರತೆ ನೀಗಿಸಲು ಸರ್ಕಾರವು ಮಾರುಕಟ್ಟೆಯಿಂದ ಸುಮಾರು ₹17 ಲಕ್ಷ ಕೋಟಿ ಸಾಲ ಮಾಡುವ ಗುರಿ ಹೊಂದಿದೆ.
08:37 AM (IST) Feb 02
ಭಾರತವನ್ನು ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ಮೂಲಸೌಕರ್ಯದ ಜಾಗತಿಕ ಹಬ್ ಆಗಿಸುವ ಗುರಿಯೊಂದಿಗೆ, ಕೇಂದ್ರ ಸರ್ಕಾರವು ದೇಶದಲ್ಲಿ ಡೇಟಾ ಸೆಂಟರ್ಗಳನ್ನು ಸ್ಥಾಪಿಸುವ ವಿದೇಶಿ ಕಂಪನಿಗಳಿಗೆ 2047ರವರೆಗೆ ತೆರಿಗೆ ರಜೆ ಘೋಷಿಸಿದೆ.
08:36 AM (IST) Feb 02
ಲೈವ್ ಕನ್ಸರ್ಟ್ನಲ್ಲಿ, ಮಹಿಳಾ ಅಭಿಮಾನಿಯೊಬ್ಬರು ಅವರ ಖಾಸಗಿ ಭಾಗಕ್ಕೆ ಕೈ ಹಾಕಿ ಅನುಚಿತವಾಗಿ ವರ್ತಿಸಿದ್ದಾರೆ. ಈ ಸಂದರ್ಭದಲ್ಲಿ ವಿಚಲಿತರಾಗದ ಮಾರಿಯೋ ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದು, ಅವರ ಈ ನಡೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
08:16 AM (IST) Feb 02
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫ್ಯೂಚರ್ಸ್ ಮತ್ತು ಆಪ್ಷನ್ಸ್ (F&O) ವಹಿವಾಟಿನ ಮೇಲಿನ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಅನ್ನು ಗಣನೀಯವಾಗಿ ಹೆಚ್ಚಿಸಿದ್ದಾರೆ. ಅಧಿಕ ಲಾಭದಾಸೆಯಿಂದ ಯುವಕರು ಮಾಡುವ ಅಪಾಯಕಾರಿ ಹೂಡಿಕೆಯನ್ನು ತಡೆಯುವುದು ಈ ಕ್ರಮದ ಹಿಂದಿನ ಉದ್ದೇಶವಾಗಿದೆ.
07:50 AM (IST) Feb 02
ಷೇರು ಮರುಖರೀದಿ (ಬೈಬ್ಯಾಕ್) ಮೇಲಿನ ತೆರಿಗೆ ನಿಯಮಗಳನ್ನು ಬದಲಾಯಿಸಲಾಗಿದ್ದು, ಇದನ್ನು ಇನ್ನು ಮುಂದೆ ಕ್ಯಾಪಿಟಲ್ ಗೇನ್ ತೆರಿಗೆಯಾಗಿ ಪರಿಗಣಿಸಲಾಗುತ್ತದೆ. ಈ ಬದಲಾವಣೆಯು ಅಲ್ಪಸಂಖ್ಯಾತ ಷೇರುದಾರರನ್ನು ರಕ್ಷಿಸುವ ಗುರಿ ಹೊಂದಿದೆ.
07:26 AM (IST) Feb 02