LIVE NOW
Published : Feb 18, 2026, 06:54 AM ISTUpdated : Feb 18, 2026, 09:48 AM IST

India Latest News Live: ನಿಮಗೂ ಯೂಟ್ಯೂಬ್ ವಿಡಿಯೋ ವೀಕ್ಷಣೆ, ಅಪ್ಲೋಡ್ ಆಗ್ತಿಲ್ಲವೇ? ವಿಶ್ವದೆಲ್ಲೆಡೆ YouTube ಡೌನ್

ಸಾರಾಂಶ

ಹೈದರಾಬಾದ್‌: ರಂಜಾನ್‌ ಉಪವಾಸದ ಸಂದರ್ಭದಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಯಿಂದ ನಿತ್ಯ 1 ಗಂಟೆ ಬೇಗ ತೆರಳುವುದಕ್ಕೆ ತೆಲಂಗಾಣ ಸರ್ಕಾರ ಅನುಮತಿ ನೀಡಿದೆ. ಸೇವೆ ಕಡ್ಡಾಯ ಎನ್ನುವ ಸಂದರ್ಭ ಹೊರತುಪಡಿಸಿ ಇತರ ದಿನಗಳಲ್ಲಿ 5 ಗಂಟೆ ಬದಲು 1 ಗಂಟೆ ಮುಂಚಿತವಾಗಿ ನಿತ್ಯ ಸಂಜೆ 4 ಗಂಟೆಗೆ ತೆರಳಬಹುದು ಎಂದಿದೆ. ಮೂರು ದಿನಗಳ ಹಿಂದಷ್ಟೇ ಶಿಕ್ಷಣ ಇಲಾಖೆಯ ಉರ್ದು ಮಾಧ್ಯಮ ಶಾಲೆಗಳಲ್ಲಿ ಶಾಲಾ ಅವಧಿಯಲ್ಲಿ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.30ರ ತನಕ ಬದಲಿಸಿ ಆದೇಶಿಸಿತ್ತು.

youtube

09:48 AM (IST) Feb 18

ನಿಮಗೂ ಯೂಟ್ಯೂಬ್ ವಿಡಿಯೋ ವೀಕ್ಷಣೆ, ಅಪ್ಲೋಡ್ ಆಗ್ತಿಲ್ಲವೇ? ವಿಶ್ವದೆಲ್ಲೆಡೆ YouTube ಡೌನ್

ನಿಮಗೂ ಯೂಟ್ಯೂಬ್ ವಿಡಿಯೋ ವೀಕ್ಷಣೆ, ಅಪ್ಲೋಡ್ ಆಗ್ತಿಲ್ಲವೇ? ಬಳಕೆದಾರರು ಕ್ರಿಯೇಟರ್ಸ್ ಪರದಾಡಿದ್ದಾರೆ. ಇಂದು ಬೆಳಗ್ಗೆಯಿಂದ ಹಲೆವೆಡೆ ಯೂಟ್ಯೂಬ್ ವಿಡಿಯೋ ವೀಕ್ಷಣೆ, ಅಪ್ಲೋಡ್ ಸಾಧ್ಯಾವಾಗುತ್ತಿಲ್ಲ. ನೀವು ಈ ಸಮಸ್ಯೆ ಎದುರಿಸುತ್ತಿದ್ದೀರಾ? ಏನು ಮಾಡಬೇಕು?

 

Read Full Story

09:15 AM (IST) Feb 18

10ನೇ ಕ್ಲಾಸ್ ಎಕ್ಸಾಂಗೆ ವೈಭವ್ ಸೂರ್ಯವಂಶಿ ಕೊನೆಯ ಕ್ಷಣದಲ್ಲಿ ಚಕ್ಕರ್ ಹಾಕಿದ್ದರ ಬಗ್ಗೆ ಪ್ರಿನ್ಸಿಪಾಲ್ ಹೇಳಿದ್ದೇನು? ಆಗ ವಾರ್ನಿಂಗ್, ಈಗ?

ಭಾರತದ ಪ್ರತಿಭಾನ್ವಿತ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ಮುಂಬರುವ ಕ್ರಿಕೆಟ್ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ 10ನೇ ತರಗತಿ ಸಿಬಿಎಸ್‌ಇ ಪರೀಕ್ಷೆಗೆ ಗೈರಾಗಿದ್ದಾರೆ. ಅಂಡರ್-19 ವಿಶ್ವಕಪ್ ಹೀರೋ ಆಗಿರುವ ವೈಭವ್ ಅವರ ಈ ನಿರ್ಧಾರದ ಬಗ್ಗೆ ಶಾಲೆಯ ಪ್ರಾಂಶುಪಾಲರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
Read Full Story

08:57 AM (IST) Feb 18

Yuvraj Samra - ಟಿ20 ವಿಶ್ವಕಪ್‌ನಲ್ಲಿ ಶತಕ ಚಚ್ಚಿದ 19ರ ಪೋರ, ವಿಶ್ವ ಕ್ರಿಕೆಟ್ ಲೋಕವೇ ಬೆರಗು! ಈತನ ತಂದೆ ಯುವಿ ಅಭಿಮಾನಿ

ಕೆನಡಾದ ಆರಂಭಿಕ ಆಟಗಾರ ಯುವರಾಜ್ ಸಮ್ರಾ, ಕೇವಲ 19ನೇ ವಯಸ್ಸಿನಲ್ಲಿ ಟಿ20 ವಿಶ್ವಕಪ್‌ನಲ್ಲಿ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಅಹ್ಮದ್ ಶೆಹಜಾದ್ ಅವರ ದಾಖಲೆಯನ್ನು ಮುರಿದು, ಈ ಸಾಧನೆ ಮಾಡಿದ ಅತೀ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Read Full Story

08:42 AM (IST) Feb 18

ಟಿ20 ವಿಶ್ವಕಪ್ 2026 - ಭಾರತಕ್ಕಿಂದು ಡಚ್ಚರ ಸವಾಲು; ಬೌಲಿಂಗ್‌ನಲ್ಲಿ ಮಹತ್ವದ ಬದಲಾವಣೆ?

ಈಗಾಗಲೇ ಸೂಪರ್‌-8 ಪ್ರವೇಶಿಸಿರುವ ಭಾರತ, ಗುಂಪು ಹಂತದ ಕೊನೆಯ ಪಂದ್ಯದಲ್ಲಿ ನೆದರ್‌ಲೆಂಡ್ಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಸೂಪರ್-8ರ ಕಸರತ್ತಾಗಿ ಬಳಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದ್ದು, ಬೌಲಿಂಗ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ.

Read Full Story

07:58 AM (IST) Feb 18

ನಯನತಾರಾ ಮಾಡಿದ ಅದೊಂದು ಸಣ್ಣ ತಪ್ಪು, ಅನುಷ್ಕಾ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿತು!

ಲೇಡಿ ಸೂಪರ್‌ಸ್ಟಾರ್ ನಯನತಾರಾ ಮಾಡಿದ ಒಂದು ಸಣ್ಣ ತಪ್ಪಿನಿಂದ ಅನುಷ್ಕಾ ಶೆಟ್ಟಿ ಪ್ಯಾನ್ ಇಂಡಿಯಾ ಹೀರೋಯಿನ್ ಆದರು. ಆ ಒಂದು ಅವಕಾಶ ಅನುಷ್ಕಾ ಬದುಕನ್ನೇ ಬದಲಾಯಿಸಿತು. ಏನಿದು ಇಂಟ್ರೆಸ್ಟಿಂಗ್ ಕಥೆ? ಇಲ್ಲಿದೆ ನೋಡಿ.
Read Full Story

07:32 AM (IST) Feb 18

ಇಮ್ರಾನ್‌ ಖಾನ್‌ಗೆ ಚಿಕಿತ್ಸೆ ಕೊಡಿಸಿ - ಕಪಿಲ್‌, ಗವಾಸ್ಕರ್‌ ಸೇರಿದಂತೆ 14 ದಿಗ್ಗಜ ಕ್ರಿಕೆಟಿಗರ ಒತ್ತಾಯ

ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಆರೋಗ್ಯ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ, ಭಾರತದ ಕಪಿಲ್‌ ದೇವ್‌, ಸುನೀಲ್‌ ಗವಾಸ್ಕರ್‌ ಸೇರಿದಂತೆ ವಿಶ್ವದ 14 ಕ್ರಿಕೆಟ್‌ ದಿಗ್ಗಜರು ಪಾಕ್‌ ಸರ್ಕಾರಕ್ಕೆ ಪತ್ರ ಬರೆದು, ಅವರಿಗೆ ಸೂಕ್ತ ವೈದ್ಯಕೀಯ ಆರೈಕೆ ನೀಡುವಂತೆ ಒತ್ತಾಯಿಸಿದ್ದಾರೆ.

Read Full Story

07:19 AM (IST) Feb 18

ಪಾಕಿಸ್ತಾನಕ್ಕೆ ಭೀಕರವಾಗಲಿದ ಬೇಸಿಗೆ; ಭಾರತದಿಂದ ಅತಿದೊಡ್ಡ ಏಟು, ಮತ್ತೊಂದು ಆಘಾತಕ್ಕೆ ಪಾಕ್ ವಿಲವಿಲ

ಭಾರತವು ರಾವಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಶಹಪುರ ಕಂಡಿ ಅಣೆಕಟ್ಟಿನ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಇದರಿಂದ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಹೆಚ್ಚುವರಿ ನೀರು ಸ್ಥಗಿತಗೊಳ್ಳಲಿದ್ದು, ಜಮ್ಮು ಮತ್ತು ಕಾಶ್ಮೀರದ ಕಥುವಾ, ಸಾಂಬಾ ಜಿಲ್ಲೆಗಳ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ.
Read Full Story

More Trending News