Published : May 16, 2026, 07:05 AM ISTUpdated : May 16, 2026, 10:50 PM IST

India Latest News Live: ಕೇವಲ 2,000 ರೂ. ಬಾಡಿಗೆ ಬಾಕಿಗಾಗಿ ಹೆಂಡತಿ, ಅಪ್ರಾಪ್ತ ಮಗಳನ್ನು ಮಾಲೀಕನ ಮಂಚಕ್ಕೆ ಹತ್ತಿಸಿದ ಪಾಪಿ ಪತಿ!

ಸಾರಾಂಶ

 

ನವದೆಹಲಿ: ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ವಿವಾಹಿತ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾ*ಚಾರಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಕಥೆ ಕರುಳು ಹಿಂಡುವಂತಿದೆ. ಘಟನೆಯಲ್ಲಿ ಗಂಬೀರ ಗಾಯಗೊಂಡಿದ್ದರೂ ಮಹಿಳೆ ಮನೆಯಲ್ಲಿ ಮಕ್ಕಳಿಗೆ ಅಡುಗೆ ಮಾಡೋರು ಇಲ್ಲ ಎಂದು ಆಸ್ಪತ್ರೆ ಸೇರಲು ಹಿಂದೇಟು ಹಾಕಿದ್ದಾರೆ.

ಮಹಿಳೆ ದೂರಿನ ಬಳಿಕ ಪೊಲೀಸರು ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆಕೆಗೆ ಗಂಭೀರ ಗಾಯಗಳಾಗಿರುವುದು ಗೊತ್ತಾಗಿದ್ದು, ವೈದ್ಯರು ಆಸ್ಪತ್ರೆಗೆ ದಾಖಲಾಗಲು ಸಲಹೆ ನೀಡಿದ್ದಾರೆ. ಆದರೆ ಮಹಿಳೆ ಅದನ್ನು ನಿರಾಕರಿಸಿದ್ದು, ‘ನಾನು ಆಸ್ಪತ್ರೆ ಸೇರಿದ್ರೆ ಮನೆಯಲ್ಲಿ ಮಕ್ಕಳಿಗೆ ಅಡುಗೆ ಮಾಡೋದ್ಯಾರು?’ ಎಂದು ಅಳಲು ತೋಡಿಕೊಂಡಿದ್ದಾರೆ. ಇದೇ ವೇಳೆ ಆಕೆ ಪತಿ ಕ್ಷಯರೋಗದಿಂದ ಬಳಲುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.

10:50 PM (IST) May 16

ಕೇವಲ 2,000 ರೂ. ಬಾಡಿಗೆ ಬಾಕಿಗಾಗಿ ಹೆಂಡತಿ, ಅಪ್ರಾಪ್ತ ಮಗಳನ್ನು ಮಾಲೀಕನ ಮಂಚಕ್ಕೆ ಹತ್ತಿಸಿದ ಪಾಪಿ ಪತಿ!

ಗುಜರಾತ್‌ನ ಮೋರ್ಬಿಯಲ್ಲಿ, ಕೇವಲ ₹2,000 ಮನೆ ಬಾಡಿಗೆ ಪಾವತಿಸಲಾಗದ ಪತಿಯೊಬ್ಬನು, ತನ್ನ ಹೆಂಡತಿ ಮತ್ತು ಅಪ್ರಾಪ್ತ ಮಗಳನ್ನು ಮನೆ ಮಾಲೀಕನ ಲೈಂಗಿಕ ದೌರ್ಜನ್ಯಕ್ಕೆ ಒಪ್ಪಿಸಿದ್ದಾನೆ. ಈ ಘೋರ ಕೃತ್ಯವು ಬಾಲಕಿಯ ತಾತ ನೀಡಿದ ದೂರಿನಿಂದ ಬೆಳಕಿಗೆ ಬಂದಿದೆ.

Read Full Story

10:15 PM (IST) May 16

ಬೆಳ್ಳಿ ಆಮದಿಗೆ ಕೇಂದ್ರದ ಬ್ರೇಕ್ - 99.9% ಶುದ್ಧತೆಯ ಬೆಳ್ಳಿ ಬಾರ್‌ ಆಮದಿಗೆ ಇನ್ಮುಂದೆ ಪರ್ಮಿಟ್‌ ಕಡ್ಡಾಯ

ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ನಿರ್ದಿಷ್ಟ ವರ್ಗದ ಬೆಳ್ಳಿ ಬಾರ್‌ಗಳ ಆಮದಿನ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಇದರೊಂದಿಗೆ, 'ಅಡ್ವಾನ್ಸ್ ಅಥರೈಸೇಷನ್' ಯೋಜನೆಯಡಿ ಚಿನ್ನದ ಆಮದಿಗೆ 100 ಕೆಜಿ ಮಿತಿ ನಿಗದಿಪಡಿಸಿದೆ.

Read Full Story

09:39 PM (IST) May 16

ಕಚೇರಿಗಾಗಿ ಎಐಎಡಿಎಂಕೆ ಬಣ ಬಡಿದಾಟ, ಬೀದಿಗಿಳಿದ ಕಾರ್ಯಕರ್ತರು, ಆಫೀಸ್‌ಗಾಗಿ ಬೀಗವನ್ನೇ ಮುರಿದ ಬಣಗಳು!

ಎಐಎಡಿಎಂಕೆ ಪಕ್ಷದಲ್ಲಿ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಮತ್ತು ಸಿವಿ ಷಣ್ಮುಗಂ ಬಣಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ವಿಲ್ಲುಪುರಂ, ಕಡಲೂರು ಮುಂತಾದೆಡೆ ಪಕ್ಷದ ಕಚೇರಿಗಳ ನಿಯಂತ್ರಣಕ್ಕಾಗಿ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿವೆ. ಈ ಒಳಜಗಳವು ವಿಧಾನಸಭಾ ಚುನಾವಣೆಯ ನಂತರ ತೀವ್ರಗೊಂಡಿದೆ.

Read Full Story

09:37 PM (IST) May 16

Jayam Ravi Controversy - 'ಕ್ಯಾಮೆರಾ ಜೂಮ್ ಮಾಡಿ' ಅಂತ ಹೇಳಿ 'ಜಯಂ' ರವಿ ತೋರಿಸಿದ್ದೇನು? ಕೆನಿಶಾ ಕಥೆ ಏನಾಯ್ತಂತೆ?

ಒಟ್ಟಿನಲ್ಲಿ, 'ಜಯಂ' ರವಿ ಅವರ ಜೀವನ ಈಗ ದೊಡ್ಡ ಸಂಕಷ್ಟದ ಸುಳಿಯಲ್ಲಿದೆ. ಸಮಾಜದ ಮುಂದೆ ಸದಾ ನಗುತ್ತಾ ಕಾಣಿಸಿಕೊಳ್ಳುವ ನಟನ ಹಿಂದಿರುವ ಈ ಕರಾಳ ನೋವು ಕಂಡು ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಮುಂದೆ ಇದು ಎಲ್ಲಿಗೆ ನಿಲ್ಲುತ್ತೋ ಅಥವಾ ಎಲ್ಲಿಗೆ  ಹೋಗುತ್ತೋ? ಕಾಲವೇ ಹೇಳ್ಬೇಕು.. 

Read Full Story

09:34 PM (IST) May 16

'ಕಾನೂನು ಎಲ್ಲರಿಗೂ ಒಂದೇ..' ಪೊಕ್ಸೋ ಕೇಸ್‌ನಲ್ಲಿ ಸಿಲುಕಿದ್ದ ಮಗನನ್ನು ಪೊಲೀಸರಿಗೆ ಒಪ್ಪಿಸಿದ ಕೇಂದ್ರ ಸಚಿವ!

ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಭಗೀರಥ್, ಅಪ್ರಾಪ್ತೆಯ ಮೇಲಿನ ಪೋಕ್ಸೋ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. ಲುಕ್-ಔಟ್ ಸರ್ಕ್ಯುಲರ್ ಜಾರಿ ಮತ್ತು ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ನಿರಾಕರಣೆಯ ನಂತರ ಈ ಬೆಳವಣಿಗೆ ನಡೆದಿದೆ.

Read Full Story

09:19 PM (IST) May 16

ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಬಿಗ್ ಅಪ್‌ಡೇಟ್ - 9ನೇ ತರಗತಿಯಿಂದ 3 ಭಾಷೆಗಳ ಕಲಿಕೆ ಕಡ್ಡಾಯ!

ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (CBSE) 2026 ರಿಂದ 9ನೇ ತರಗತಿಗೆ ಮೂರು ಭಾಷೆಗಳ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ಈ ನಿಯಮದಂತೆ, ವಿದ್ಯಾರ್ಥಿಗಳು ಕಲಿಯುವ ಮೂರು ಭಾಷೆಗಳಲ್ಲಿ ಎರಡು ಭಾರತೀಯ ಭಾಷೆಗಳಾಗಿರಬೇಕು ಎಂದಿದೆ.

Read Full Story

08:43 PM (IST) May 16

ಆ್ಯಕ್ಷನ್ ಕಟ್ ಹೇಳಲು ಸಜ್ಜಾದ ಸ್ಟಾರ್ ನಟ ರಾಮ್ ಪೋತಿನೇನಿ - ಡಾರ್ಕ್ ಪೋಸ್ಟರ್ ವೈರಲ್!

ನಟ ರಾಮ್ ಪೋತಿನೇನಿ ಇದೀಗ ನಿರ್ದೇಶಕರಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಅವರು ನಾಯಕರಾಗಿ ನಟಿಸಲಿರುವ ತಮ್ಮ 23ನೇ ಚಿತ್ರಕ್ಕೆ ತಾವೇ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ 'ರಾಪೋ23' ಎಂದು ಹೆಸರಿಡಲಾಗಿದೆ. 

Read Full Story

08:24 PM (IST) May 16

ಉತ್ತರ ಪ್ರದೇಶದಲ್ಲಿ ವೈದ್ಯಕೀಯ ಪವಾಡ, 5 ದಿನದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ, ವೈದ್ಯ ಲೋಕಕ್ಕಿದು ಅಚ್ಚರಿ!

ಉತ್ತರ ಪ್ರದೇಶದ ಸಂಭಲ್‌ನಲ್ಲಿ, ಮಹಿಳೆಯೊಬ್ಬರು ಐದು ದಿನಗಳ ಅಂತರದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ. ಮೊದಲ ಮಗು ಜನಿಸಿದ ಐದು ದಿನಗಳ ನಂತರ ಮತ್ತೆ ಮೂರು ಮಕ್ಕಳು ಜನಿಸಿದ್ದು, ಈ ವೈದ್ಯಕೀಯ ವಿಸ್ಮಯವು ವೈದ್ಯರನ್ನು ಅಚ್ಚರಿಗೊಳಿಸಿದೆ.  

Read Full Story

08:16 PM (IST) May 16

ಕ್ಯಾಮರಾಮ್ಯಾನ್ ಜೊತೆ ಆಗಸ್ಟ್‌ನಲ್ಲಿ ಮದುವೆನಾ? ಗಾಸಿಪ್‌ಗೆ ಕೊನೆಗೂ ಬ್ರೇಕ್ ಹಾಕಿದ ನಟಿ ಅಹಾನಾ!

ನಟ ಕೃಷ್ಣಕುಮಾರ್ ಅವರು ತಮ್ಮ ಮಗಳು ಅಹಾನಾ ಪ್ರೀತಿಯ ಬಗ್ಗೆ ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದರು. ಇದರಿಂದಾಗಿ ಆಗಸ್ಟ್‌ನಲ್ಲೇ ಮದುವೆ ಎಂಬ ಗಾಸಿಪ್ ಹಬ್ಬಿತ್ತು. ಆದರೆ, ಅಪ್ಪ ಹೇಳಿದ್ದು ಭವಿಷ್ಯದ ಬಗ್ಗೆ, ಸದ್ಯಕ್ಕೆ ಮದುವೆ ಇಲ್ಲ ಎಂದು ಅಹಾನಾ ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ.

Read Full Story

08:01 PM (IST) May 16

'ಇಡ್ಲಿ ನಟಿ' ನನ್ನ ಸಂಸಾರ ಹಾಳು ಮಾಡಿದ್ಲು - ನಟ ರವಿ ಮೋಹನ್ ಸ್ಫೋಟಕ ಆರೋಪ ಮಾಡಿದ್ದು ಯಾರ ಮೇಲೆ?

ಪತ್ನಿ ಆರತಿ ಜೊತೆಗಿನ ವೈವಾಹಿಕ ಸಮಸ್ಯೆಯಿಂದಾಗಿ ನಟ ರವಿ ಮೋಹನ್ ಅವರು ಸದ್ಯಕ್ಕೆ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, 'ಇಡ್ಲಿ ನಟಿ' ಎಂದು ಉಲ್ಲೇಖಿಸಿ, ಓರ್ವ ನಟಿ ತನ್ನ ಕುಟುಂಬವನ್ನು ಒಡೆಯಲು ಪ್ರಯತ್ನಿಸಿದಳು ಎಂದು ಭಾವನಾತ್ಮಕವಾಗಿ ಆರೋಪಿಸಿದ್ದಾರೆ.

Read Full Story

07:31 PM (IST) May 16

ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ!

ಉದ್ಯಮಿ ಆನಂದ್ ಮಹೀಂದ್ರಾ ಅವರು ಕೊಡಗಿನಲ್ಲಿರುವ ತಮ್ಮ ಕೌಟುಂಬಿಕ ಕಾಫಿ ಎಸ್ಟೇಟ್‌ಗೆ ಆನೆಗಳ ಹಿಂಡು ಲಗ್ಗೆ ಇಟ್ಟಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ದಶಕಗಳಿಂದ ನಡೆದುಕೊಂಡು ಬಂದಿದ್ದು, ಕಾಡಿನ ಅತಿಕ್ರಮಣದ ಪರಿಣಾಮವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Read Full Story

07:31 PM (IST) May 16

ಅಮೆರಿಕದ ಕಚೇರಿಯಲ್ಲಿ ಬೆಂಗಳೂರು ಮಹಿಳೆಗೆ ಕಾದಿತ್ತು ಅಚ್ಚರಿ!ಭಾರತ ಕೆಲಸದ ಸಂಸ್ಕೃತಿ ಪ್ರಶ್ನಿಸಿದ ವಿಡಿಯೋ ಸಖತ್ ವೈರಲ್

ಬೆಂಗಳೂರಿನ ವೃತ್ತಿಪರ ಮಹಿಳೆಯೊಬ್ಬರು ಅಮೆರಿಕ ಮತ್ತು ಭಾರತದ ಕೆಲಸದ ಸಂಸ್ಕೃತಿಯ ವ್ಯತ್ಯಾಸವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವ ಪದ್ಧತಿ ಮತ್ತು ಭಾರತದಲ್ಲಿನ ದೀರ್ಘಾವಧಿಯ ಕೆಲಸದ ನಡುವಿನ ಅಂತರವನ್ನು ಅವರು ಎತ್ತಿ ತೋರಿಸಿದೆ.

Read Full Story

07:20 PM (IST) May 16

Sai Pallavi Tragedy - ರಾಮಾಯಣದ ಸೀತೆಗೆ ಭಾರೀ ಸಮಸ್ಯೆ.. ನಟಿ ಸಾಯಿ ಪಲ್ಲವಿಗೆ ಅದೊಂದು ಬಾಗಿಲು ಬಂದ್ ಆಗೋಯ್ತು!

ದಕ್ಷಿಣ ಭಾರತದ ‘ನ್ಯಾಚುರಲ್ ಬ್ಯೂಟಿ’ ಸಾಯಿ ಪಲ್ಲವಿ ಬಗ್ಗೆ ಈಗ ಕೇಳಿ ಬರುತ್ತಿರುವ ಹೊಸ ಸುದ್ದಿಯೊಂದು ಅವರ ಅಭಿಮಾನಿಗಳಿಗೆ ತುಸು ನಿರಾಸೆ ಮೂಡಿಸಿದೆ. ಚಿತ್ರತಂಡ ಸಾಯಿ ಪಲ್ಲವಿ ಅವರ ವಿಷಯದಲ್ಲಿ ಒಂದು ಕಠಿಣ ನಿರ್ಧಾರ ತೆಗೆದುಕೊಂಡಿದೆ ಎಂಬ ಮಾತುಗಳು ಬಿ-ಟೌನ್ ಗಲ್ಲಿಗಳಲ್ಲಿ ಹರಿದಾಡುತ್ತಿವೆ. ಏನದು..?

Read Full Story

07:04 PM (IST) May 16

ಇದೇನ್ರೀ ಪ್ರಶ್ನೆ? ಪತ್ರಕರ್ತನ ಆ ಅಸಹ್ಯಕರ ಪ್ರಶ್ನೆಗೆ ಗರಂ ಆದ ನಟಿ ಮಾಳವಿಕಾ - ವಿಡಿಯೋ ವೈರಲ್

ಒಂದು ಕಾರ್ಯಕ್ರಮದಲ್ಲಿ ತಮಿಳು ಪತ್ರಕರ್ತರೊಬ್ಬರು ಕೇಳಿದ ಅಸಹ್ಯಕರ ಪ್ರಶ್ನೆಯಿಂದ ನಟಿ ಮಾಳವಿಕಾ ಮೋಹನನ್ ಗರಂ ಆಗಿದ್ದಾರೆ. ಇದು ತುಂಬಾನೇ ಅಸಹ್ಯವಾದ ಪ್ರಶ್ನೆ, ಮಾಧ್ಯಮದವರು ಸ್ವಲ್ಪವಾದರೂ ಘನತೆ ಕಾಪಾಡಿಕೊಳ್ಳಬೇಕು ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Read Full Story

06:43 PM (IST) May 16

Thala Ajith- CM Vijay Fight - ಸಿಎಂ ವಿಜಯ್ ಜೊತೆ ಫೈಟಿಂಗ್‌ ಮಾಡೋಕೆ ರೆಡಿಯಾದ್ರಾ ಬದ್ಧ ವೈರಿ ತಲಾ ಅಜಿತ್?

ನಟ ಅಜಿತ್ ಸಿನಿಮಾ ಹೀರೋ ಮಾತ್ರವೇ ಅಲ್ಲ, ತಮಿಳರ ಪಾಲಿಗೆ ಅವರು ರಿಯಲ್ ಲೈಫ್ ಹೀರೊ ಕೂಡ. ಯಾಕಂದ್ರೆ ಸಿಂಪ್ಲಿಸಿಟಿಗೆ ಅಜಿತ್ ಬ್ರ್ಯಾಂಡ್ ಅಂಬಾಸೀಡರ್. ಕಾರ್ ರೇಸಿಂಗ್, ಬೈಕ್ ಸವಾರಿ ಎಂದರೆ ಅಜಿತ್‌ಗೆ ಪ್ರಾಣ.. ಸಿಕ್ಕ ಸುದ್ದಿಯ ಪ್ರಕಾರ, ವಿಜಯ್ ವಿರುದ್ಧ ಯುದ್ಧ ಮಾಡ್ತಾರೆ ನಟ ತಲಾ ಅಜಿತ್.. 

Read Full Story

06:41 PM (IST) May 16

ತಮಿಳುನಾಡು ಸರ್ಕಾರದ ನೂತನ ಸಚಿವರ ಖಾತೆ ಹಂಚಿಕೆ ಮಾಡಿದ ಸಿಎಂ ವಿಜಯ್‌, ಬಲಿಷ್ಠ ಖಾತೆ ತನ್ನಲ್ಲೇ ಇರಿಸಿಕೊಂಡ ದಳಪತಿ!

ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' ಸರ್ಕಾರದ ನೂತನ ಸಚಿವ ಸಂಪುಟದ ಖಾತೆ ಹಂಚಿಕೆ ಅಧಿಕೃತವಾಗಿ ಪ್ರಕಟವಾಗಿದೆ. ಮುಖ್ಯಮಂತ್ರಿ ವಿಜಯ್ ಗೃಹ, ಪೊಲೀಸ್ ಸೇರಿದಂತೆ ಪ್ರಮುಖ ಖಾತೆಗಳನ್ನು ಉಳಿಸಿಕೊಂಡಿದ್ದು, ಒಟ್ಟು 10 ಸಚಿವರಿಗೆ ಜವಾಬ್ದಾರಿಗಳನ್ನು ವಹಿಸಲಾಗಿದೆ.
Read Full Story

06:19 PM (IST) May 16

ಫ್ಲಾಪ್ ನಟನ ಮೇಲೆ ಕ್ರಶ್ ಎಂದ ನಟಿ ಅನನ್ಯ - ಆ ಯಂಗ್ ಹೀರೋ ಯಾರು? ಏನಿದು ಸೀಕ್ರೆಟ್!

ಟಾಲಿವುಡ್‌ನ ಯುವ ನಟಿ ಅನನ್ಯ ನಾಗಳ್ಳ ಅವರು ತಮ್ಮ ಮೊದಲ ಕ್ರಶ್ ಯಾರೆಂದು ಬಹಿರಂಗಪಡಿಸಿದ್ದಾರೆ. ಅಲ್ಲು ಅರ್ಜುನ್, ಮಹೇಶ್ ಬಾಬು ಸಿನಿಮಾಗಳೆಂದರೆ ಇಷ್ಟವಂತೆ, ಆದರೆ ತಮ್ಮ ಕ್ರಶ್ ಮಾತ್ರ ಒಬ್ಬ ಫ್ಲಾಪ್ ಹೀರೋ ಮೇಲಂತೆ. ಹಾಗಾದ್ರೆ ಆ ನಟ ಯಾರು?

Read Full Story

06:12 PM (IST) May 16

'3ನೇ ಮಗು ಮಾಡ್ಕೊಂಡ್ರೆ 30 ಸಾವಿರ, 4ನೇ ಮಗುವಿಗೆ 40 ಸಾವಿರ..' ಆರ್ಥಿಕ ಪ್ರೋತ್ಸಾಹ ಧನ ಘೋಷಿಸಿದ ಸಿಎಂ ಚಂದ್ರಬಾಬು ನಾಯ್ಡು!

ಆಂಧ್ರಪ್ರದೇಶದಲ್ಲಿ ಕುಸಿಯುತ್ತಿರುವ ಜನಸಂಖ್ಯೆಯನ್ನು ಹೆಚ್ಚಿಸಲು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ, ಮೂರನೇ ಮಗುವಿಗೆ ₹30,000 ಮತ್ತು ನಾಲ್ಕನೇ ಮಗುವಿಗೆ ₹40,000 ಆರ್ಥಿಕ ಪ್ರೋತ್ಸಾಹ ಧನ ನೀಡಲಾಗುವುದು ಎಂದಿದ್ದಾರೆ.

Read Full Story

05:03 PM (IST) May 16

100 ವರ್ಷಗಳ ಬಳಿಕ ಭಾರತಕ್ಕೆ ಮರಳಿದ 1000 ವರ್ಷ ಹಳೆಯ ಚೋಳರ ಕಾಲದ ‘ಆನೈಮಂಗಲಂ ತಾಮ್ರಶಾಸನಗಳು’!

ಚೋಳರ ಕಾಲದ 'ಆನೈಮಂಗಲಂ ತಾಮ್ರಶಾಸನಗಳು' ಒಂದು ಶತಮಾನದ ನಂತರ ನೆದರ್‌ಲ್ಯಾಂಡ್ಸ್‌ನಿಂದ ಭಾರತಕ್ಕೆ ಅಧಿಕೃತವಾಗಿ ಮರಳಿವೆ. ರಾಜರಾಜ ಚೋಳ I ರ ಕಾಲದ ಈ ಶಾಸನಗಳು, ನಾಗಪಟ್ಟಣಂನ ಬೌದ್ಧ ವಿಹಾರಕ್ಕೆ ನೀಡಿದ ದಾನವನ್ನು ದಾಖಲಿಸಿದೆ.

Read Full Story

04:49 PM (IST) May 16

ಮಗಳ ಡೇಟಿಂಗ್ ಬಗ್ಗೆ ಹೇಳಿಕೆ ನೀಡಿ ಟ್ರೋಲ್ ಆಗ್ತಿರೋ ಟಾಕ್ಸಿಕ್‌ ಬ್ಯೂಟಿ - ಏನೆಲ್ಲಾ ಹೇಳಿದ್ರು ನೋಡಿ!

ನನ್ನ ಮಗಳಿಗೆ ಮುಕ್ತ ಸ್ವಾತಂತ್ರ್ಯ ಕೊಡುತ್ತೇನೆ. ಅವಳು ಎಷ್ಟು ಜನರ ಜೊತೆಗೆ ಬೇಕಿದ್ದರೂ ಡೇಟಿಂಗ್‌ ಮಾಡಲಿ. ಡೇಟಿಂಗ್‌ ಮಾಡುವಾಗ ಮುಂದೇನಾಗುತ್ತೋ ಎಂಬ ಆತಂಕ ಅವಳಿಗೆ ಇರಬಾರದು ಎಂದರು ನಟಿ ಕಿಯಾರಾ ಅಡ್ವಾಣಿ.

Read Full Story

04:16 PM (IST) May 16

'ಜಿಯಾಗ್ರಫಿಯಲ್ಲಿ ಇರ್ಬೇಕೋ, ಹಿಸ್ಟರಿಯಲ್ಲಿ ಇರ್ಬೇಕೋ? ನೀವೇ ನಿರ್ಧಾರ ಮಾಡಿ..' ಪಾಕ್‌ಗೆ ಸೇನಾ ಮುಖ್ಯಸ್ಥರ ಖಡಕ್‌ ವಾರ್ನಿಂಗ್‌

ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಮುಂದುವರಿಸಿದರೆ, ಪಾಕಿಸ್ತಾನವು ಭೂಪಟದಲ್ಲಿ ಉಳಿಯಬೇಕೇ ಅಥವಾ ಇತಿಹಾಸ ಸೇರಬೇಕೇ ಎಂದು ನಿರ್ಧರಿಸಬೇಕಾಗುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

Read Full Story

03:12 PM (IST) May 16

ಇಲ್ಲಿಗೂ ಬಂತಾ ಜಲ್ಮುರಿ? ನೆದರ್ಲೆಂಡ್‌ನ ಭಾರತೀಯ ಸಮುದಾಯದ ಮುಂದೆ ಮೋದಿ ಹಾಸ್ಯ ಚಟಾಕಿ

ಮಹತ್ವಾಕಾಂಕ್ಷಿ ವಿದೇಶ ಪ್ರವಾಸದಲ್ಲಿ ಪ್ರಧಾನಿ ಮೋದಿ ಇಂದು ನೆದರ್ಲೆಂಡ್‌ನ ಭಾರತೀಯ ಸಮುದಾಯದ ಜೊತೆ ಮಾತನಾಡಿದ್ದಾರೆ. ಈ ವೇಳೆ ಬಂಗಾಳ ಚುನಾವಣೆಯಲ್ಲಿ ಜಲ್ಮುರಿ ನೆದರ್ಲೆಂಡ್‌ನಲ್ಲೂ ಸದ್ದು ಮಾಡಿದೆ.

Read Full Story

03:08 PM (IST) May 16

Shagufta Rafique - ಒಮ್ಮೆ ಕಾಲ್ ಗರ್ಲ್, ಬಳಿಕ ಬಾರ್‌ ಡಾನ್ಸರ್; ಈಗ ಸೂಪರ್‌ ಹಿಟ್ ಸಿನಿಮಾ ಫೇಮಸ್‌ ರೈಟರ್‌!

ಬದುಕಿನ ಕರಾಳ ಪುಟಗಳನ್ನು ಸೀಳಿ ಫೀನಿಕ್ಸ್‌ನಂತೆ ಎದ್ದು ಬಂದ ಶಗುಫ್ತಾ ಅವರ ಕಥೆ ಪ್ರತಿಯೊಬ್ಬರಿಗೂ ಸ್ಫೂರ್ತಿಯ ಸೆಲೆ. ಕಷ್ಟಗಳು ಮನುಷ್ಯನನ್ನು ಕುಗ್ಗಿಸಬಾರದು, ಬದಲಿಗೆ ಕಥೆಯಾಗಿ ಬದಲಾಗಬೇಕು ಎಂಬುದಕ್ಕೆ ಇವರೇ ಸಾಕ್ಷಿ. ಈ ಕಥೆ ಹಲವರಿಗೆ ಸ್ಪೂರ್ತಿಯ ಸೆಲೆ ಆಗಬಹುದು, ನೋಡಿ..

Read Full Story

02:36 PM (IST) May 16

ಐಪಿಎಲ್‌ನಲ್ಲಿ ಟಿಕೆಟ್ ಕಳ್ಳಾಟ, ಡಿಸಿ-ಆರ್‌ಸಿಬಿ ಟಿಕೆಟ್ 80,000 ರೂಗೆ ಮಾರಾಟ, DDCAಗೆ ಪೊಲೀಸ್ ನೋಟಿಸ್

ಐಪಿಎಲ್ ಟೂರ್ನಿಯಲ್ಲಿ ವ್ಯವಸ್ಥಿತವಾಗಿ ಟಿಕೆಟ್ ಕಳ್ಳಾಟ ನಡೆಯುತ್ತಿರುವುದು ಇದೀಗ ಬಯಲಾಗಿದೆ. ಡಿಸಿ ಹಾಗೂ ಆರ್‌ಸಿಬಿ ಪಂದ್ಯದ ಟಿಕೆಟ್‌ನ್ನು ಕ್ರಿಕೆಟ್ ಸಂಸ್ಥೆ ಮುಖ್ಯಸ್ಥರೇ 80 ಸಾವಿರ ರೂಗೆ ಮಾರಾಟ ಮಾಡುತ್ತಿರುವುದು ಬಯಲಾಗಿದೆ.

Read Full Story

01:28 PM (IST) May 16

ನೀಟ್ ಮರುಪರೀಕ್ಷೆ ಘೋಷಣೆಯಾದ ಬೆನ್ನಲ್ಲೇ ವಿದ್ಯಾರ್ಥಿಗಳ ಸರಣಿ ಆತ್ಮ*ಹತ್ಯೆ, ಇದು ವ್ಯವಸ್ಥೆಯ ಕೊಲೆ - ರಾಹುಲ್ ಕಿಡಿ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ನಂತರ ದೇಶದ ಹಲವೆಡೆ ವಿದ್ಯಾರ್ಥಿಗಳು ಆತ್ಮ*ಹತ್ಯೆ ಮಾಡಿಕೊಳ್ಳುತ್ತಿದ್ದು, ಇದನ್ನು 'ವ್ಯವಸ್ಥೆಯ ಕೊಲೆ' ಎಂದು ಕರೆದಿರುವ ರಾಹುಲ್ ಗಾಂಧಿ, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರೀಕ್ಷೆ ರದ್ದು, ಮರುಪರೀಕ್ಷೆ ಘೋಷಣೆ .

Read Full Story

01:03 PM (IST) May 16

70ರ ರಾಜಕಾರಣಿಯ ವರಿಸಿದ 20ರ ಚೆಲುವೆ - ಒಂದು ಡಜನ್​ ಮಕ್ಕಳ ತಂದೆಯ 4ನೇ ಮದ್ವೆ ಸ್ಟೋರಿ ಕೇಳಿ

70 ವರ್ಷದ ಸಮಾಜವಾದಿ ಪಕ್ಷದ ನಾಯಕ ಹಾಜಿ ಖಲೀಲ್, 20 ವರ್ಷದ ಯುವತಿಯನ್ನು ನಾಲ್ಕನೇ ಮದುವೆಯಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಆಸ್ತಿಗಾಗಿ ತನ್ನನ್ನು ಹಾಗೂ ಮಕ್ಕಳನ್ನು ಮನೆಯಿಂದ ಹೊರಹಾಕಿದ್ದಾರೆ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎಂದು ಎರಡನೇ ಪತ್ನಿ ನಜ್ರೀನ್ ಪೊಲೀಸರಿಗೆ ದೂರು ನೀಡಿದ್ದಾರೆ.
Read Full Story

01:02 PM (IST) May 16

ಭೋಜಶಾಲ ಮಸೀದಿ ಅಲ್ಲ ಸರಸ್ವತಿ ದೇವಸ್ಥಾನ, ತೀರ್ಪು ಬೆನ್ನಲ್ಲೇ ಹಿಂದೂಗಳು ಸುಪ್ರೀಂ ಕದ ತಟ್ಟಿದ್ದೇಕೆ?

ವಿವಾಧಿತ ಭೋಜಶಾಲ ಸಂಕೀರ್ಣ ವಾಗ್ದೇವಿ ಸರಸ್ವತಿ ದೇವಸ್ಥಾನ ಎಂದು ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ದ ಮುಸ್ಲಿಮಂ ಮುಖಂಡರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇದಕ್ಕೂ ಮೊದಲೇ ಹಿಂದೂಗಳು ಸುಪ್ರೀಂ ಕದ ತಟ್ಟಿದ್ದೇಕೆ?

Read Full Story

12:38 PM (IST) May 16

ನೀಟ್ ವಿವಾದದ ಬೆನ್ನಲ್ಲೇ ಲಕ್ನೋದಲ್ಲಿ ಮತ್ತೊಂದು ಶಾಕ್, ವಿದ್ಯಾರ್ಥಿನಿಗೆ ಕಿರುಕುಳ, ಪೇಪರ್ ಲೀಕ್, ಪ್ರೊಫೆಸರ್ ಅರೆಸ್ಟ್!

ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ, ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಲೀಕ್ ಮಾಡಿದ ಗಂಭೀರ ಆರೋಪದ ಮೇಲೆ ಲಕ್ನೋ ವಿಶ್ವವಿದ್ಯಾಲಯದ ಪ್ರೊಫೆಸರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ನೀಡಿದ ಆಡಿಯೋ ಸಾಕ್ಷ್ಯದ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
Read Full Story

12:20 PM (IST) May 16

ಸತತ 10 ಗಂಟೆ ಕಾರ್ಯಾಚರಣೆಯಲ್ಲಿ 300 ಅಡಿ ಬೋರ್‌ವೆಲ್‌ಗೆ ಬಿದ್ದ ಮಗುವಿನ ರಕ್ಷಣೆ, ವಿಡಿಯೋ

ಪುಟ್ಟ ಮಗು 300 ಅಡಿ ಆಳದ ಬೋರ್‌ವೆಲ್ ಬಿದ್ದ ಪರಿಣಾಮ ರಕ್ಷಣಾ ತಂಡಗಳು ಸತತ 10 ಗಂಟೆ ರಕ್ಷಣಾ ಕಾರ್ಯಾಚರಣೆ ನಡೆಸಿ ಮಗು ರಕ್ಷಿಸಿದೆ. ಮಗುವನ್ನು ಆಸ್ಪತ್ರೆ ದಾಖಲಿಸಲಾಗಿದೆ. ಕಾರ್ಯಾಚರಣೆ ಹಾಗೂ ರಕ್ಷಣೆ ವಿಡಿಯೋ ಇಲ್ಲಿದೆ.

 

Read Full Story

12:03 PM (IST) May 16

ತ್ರಿಶಾ ನಡೆಗೆ ಸಿಎಂ ವಿಜಯ್ ಕಕ್ಕಾಬಿಕ್ಕಿ.. ದಳಪತಿ ಮುಂದಿನ ದಾಳ 'ಇದೇ ಆಗಿರುತ್ತೆ' ಅಂತಿರೋ ಫ್ಯಾನ್ಸ್!

ಈಗ ತ್ರಿಶಾ ಈ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವಿಜಯ್ ಮತ್ತು ಸ್ಟಾಲಿನ್ ನಡುವೆ ರಾಜಕೀಯ ಸಮರ ನಡೆಯುತ್ತಿರುವಾಗ, ತ್ರಿಶಾ ಅವರು ವಿಜಯ್ ವಿರೋಧಿ ಬ್ಯಾನರ್‌ನಲ್ಲಿ ಸಿನಿಮಾ ಮಾಡುತ್ತಿರುವುದು 'ಇದು ಜಸ್ಟ್ ಕೆಲಸೋ ಅಥವಾ ಸ್ನೇಹದಲ್ಲಿ ಬಿರುಕೇ?" ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. 

Read Full Story

11:53 AM (IST) May 16

ಲಿಫ್ಟ್ ಬಳಿ ಡಿಕ್ಕಿ, ಕ್ಷಮೆ ಕೇಳಿದ್ರೂ ಕೆನ್ನೆಗೆ ಬಾರಿಸಿದ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವಕ!

ಪುಣೆಯ ಲಿಫ್ಟ್ ಬಳಿ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದ್ದಕ್ಕೆ ಯುವಕ ಕ್ಷಮೆ ಕೇಳಿದ್ದಾನೆ. ಆದರೆ, ಯುವತಿ ಆತನ ಕೆನ್ನೆಗೆ ಬಾರಿಸಿದ್ದು, ಇದರಿಂದ ಕೋಪಗೊಂಡ ಯುವಕ ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
Read Full Story

10:51 AM (IST) May 16

ಇವತ್ತು ಯಾವುದೇ ಆನ್‌ಲೈನ್ ಡೆಲಿವರಿ ಇಲ್ಲ, ಪೆಟ್ರೋಲ್ ದರ ಏರಿಕೆಯಿಂದ ಗಿಗ್ ಕಾರ್ಮಿಕರ ಮುಷ್ಕರ

ಪೆಟ್ರೋಲ್ ಡೀಸೆಲ್ ದರ ಹೆಚ್ಚಳದ ಬೆನ್ನಲ್ಲೇ ಒಂದೊಂದೆ ವಲಯದ ಕಾರ್ಮಿಕರು ಮುಷ್ಕರ ಆರಂಭಿಸಿದ್ದಾರೆ. ಗಿಗ್ ಕಾರ್ಮಿಕರು ಇಂದು ಮುಷ್ಕರ ಘೋಷಿಸಿದ್ದಾರೆ. ಇಂದು ಎಷ್ಟು ಗಂಟೆಗಳ ಕಾಲ ಆನ್‌ಲೈನ್ ಡೆಲಿವರಿ ಇರುವುದಿಲ್ಲ?

Read Full Story

10:01 AM (IST) May 16

ಮೇ.26ಕ್ಕೆ ನೈಋತ್ಯ ಮುಂಗಾರು ಕೇರಳಕ್ಕೆ ಪ್ರವೇಶ, ಮಳೆ ಜೊತೆ ಎಲ್ ನಿನೊ ಎಚ್ಚರಿಕೆ ನೀಡಿದ IMD

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಹವಾಮಾನ ಇಲಾಖೆ ಮೇ.26ಕ್ಕೆ ನೈಖುತ್ಯ ಮಾನ್ಸೂನ್ ಕೇರಳ ಪ್ರವೇಶಿಸಲಿದೆ ಎಂದಿದೆ. ಇಲ್ಲಿಂದ ಮಳೆಗಾಲ ಆರಂಭಗೊಳ್ಳಲಿದೆ. ಆದರೆ ಎಲ್ ನಿನೋ ಎಚ್ಚರಿಕೆ ನೀಡಲಾಗಿದೆ.

Read Full Story

More Trending News