LIVE NOW
Published : May 16, 2026, 07:05 AM IST

India Latest News Live: ನಾನು ಆಸ್ಪತ್ರೆ ಸೇರಿದ್ರೆ ಮನೆಯಲ್ಲಿ ಮಕ್ಳಿಗೆ ಅಡುಗೆ ಮಾಡೋದ್ಯಾರು? ದೆಹಲಿ ರೇ* ಸಂತ್ರಸ್ತೆ ಕರುಣಾಜನಕ ಕಥೆ

ಸಾರಾಂಶ

 

ನವದೆಹಲಿ: ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ವಿವಾಹಿತ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾ*ಚಾರಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಕಥೆ ಕರುಳು ಹಿಂಡುವಂತಿದೆ. ಘಟನೆಯಲ್ಲಿ ಗಂಬೀರ ಗಾಯಗೊಂಡಿದ್ದರೂ ಮಹಿಳೆ ಮನೆಯಲ್ಲಿ ಮಕ್ಕಳಿಗೆ ಅಡುಗೆ ಮಾಡೋರು ಇಲ್ಲ ಎಂದು ಆಸ್ಪತ್ರೆ ಸೇರಲು ಹಿಂದೇಟು ಹಾಕಿದ್ದಾರೆ.

ಮಹಿಳೆ ದೂರಿನ ಬಳಿಕ ಪೊಲೀಸರು ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆಕೆಗೆ ಗಂಭೀರ ಗಾಯಗಳಾಗಿರುವುದು ಗೊತ್ತಾಗಿದ್ದು, ವೈದ್ಯರು ಆಸ್ಪತ್ರೆಗೆ ದಾಖಲಾಗಲು ಸಲಹೆ ನೀಡಿದ್ದಾರೆ. ಆದರೆ ಮಹಿಳೆ ಅದನ್ನು ನಿರಾಕರಿಸಿದ್ದು, ‘ನಾನು ಆಸ್ಪತ್ರೆ ಸೇರಿದ್ರೆ ಮನೆಯಲ್ಲಿ ಮಕ್ಕಳಿಗೆ ಅಡುಗೆ ಮಾಡೋದ್ಯಾರು?’ ಎಂದು ಅಳಲು ತೋಡಿಕೊಂಡಿದ್ದಾರೆ. ಇದೇ ವೇಳೆ ಆಕೆ ಪತಿ ಕ್ಷಯರೋಗದಿಂದ ಬಳಲುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.


More Trending News